Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸ್ವರ ಸಂಕ್ರಾಂತಿ ಉತ್ಸವದಲ್ಲಿ ‘ಸ್ವರ ರತ್ನ ಪ್ರಶಸ್ತಿ’ ಪ್ರದಾನ ಹಾಗೂ ದ್ವಂದ್ವ ವಯಲಿನ್ ಕಛೇರಿ
    Awards

    ಸ್ವರ ಸಂಕ್ರಾಂತಿ ಉತ್ಸವದಲ್ಲಿ ‘ಸ್ವರ ರತ್ನ ಪ್ರಶಸ್ತಿ’ ಪ್ರದಾನ ಹಾಗೂ ದ್ವಂದ್ವ ವಯಲಿನ್ ಕಛೇರಿ

    January 29, 2024Updated:January 30, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸ್ವರ ಲಯ ಸಾಧನ ಫೌಂಡೇಶನ್, ಕಲಾ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಆಶ್ರಯದಲ್ಲಿ ಆಯೋಜಿಸಿರುವ ‘ಸ್ವರ ಸಂಕ್ರಾಂತಿ ಉತ್ಸವ-24’ ಇದರ ಅಂಗವಾಗಿ ಸಂಗೀತ ಕಛೇರಿಯು ದಿನಾಂಕ 15-01-2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

    ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ನಿಡಸೊಸಿ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನದ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಅವರು, “ಸ್ವರ ಸಂಕ್ರಾಂತಿ ಉತ್ತಮ ಪರಿಕಲ್ಪನೆ ಅದ್ಭುತವಾಗಿ ಮೂಡಿಬಂದಿದೆ. ಈ ಮೂಲಕ ಸಂಸ್ಕೃತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಂಗೀತದ ಮೂಲಕ ಮಕ್ಕಳನ್ನು ಭವಿಷ್ಯಕ್ಕೆ ಅಣಿಯಾಗಿಸುತ್ತಿರುವ ಕಾರ್ಯ ಶ್ಲಾಘನೀಯ” ಎಂದರು.

    ಈ ಸಮಾರಂಭದಲ್ಲಿ ‘ಸ್ವರ ರತ್ನ ಪ್ರಶಸ್ತಿ’ ಸ್ವೀಕರಿಸಿದ ವಿದ್ವಾನ್ ವಿಟ್ಠಲ ರಾಮಮೂರ್ತಿ ಮಾತನಾಡುತ್ತಾ “ಸಂಗೀತ ಎಲ್ಲಾ ಮನಸ್ಸುಗಳಿಗೆ ಮುದ ನೀಡುತ್ತದೆ. ಸಂಗೀತಕ್ಕೆ ಮಕ್ಕಳನ್ನು ಸೆಳೆಯುವಂತೆ ಮಾಡಬೇಕು. ಸಂಗೀತ ಅಭ್ಯಾಸ ಮಾಡುವುದರಲ್ಲಿ ತೃಪ್ತಿ ಇದೆ. ಇಂದಿನ ಪೀಳಿಗೆ ಸಂಗೀತ ಕಲಿಯುವತ್ತ ಹೆಚ್ಚು ಆಕರ್ಷಿತರಾಗಬೇಕು. ಸಂಗೀತ ಪಯಣ ಆನಂದಿಸುವುದರ ಜತೆಗೆ ಹೊಸತನದೊಂದಿಗೆ ಮುಂದುವರೆಯಬೇಕು. ಆಧುನಿಕತೆ ಬೆಳೆಯುತ್ತಿರುವಂತೆ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಅಭ್ಯಾಸವನ್ನು ಕೈಗೊಳ್ಳಬೇಕು. ಸಂಗೀತ ಕೇವಲ ಕಲಿಯುವುದು ಮಾತ್ರವಲ್ಲದೆ, ಆನಂದಿಸುವುದು ಅಗತ್ಯ. ಶ್ರಮವಹಿಸಿ ಒಳ್ಳೆಯ ಗುರುಗಳಲ್ಲಿ ಸಂಗೀತ ಕಲಿತಲ್ಲಿ ಸರ್ವತೋಮುಖ ಪ್ರಗತಿಯಾಗಲಿದೆ. ಮುಂದಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸಂಗೀತಕ್ಕೆ ಸಂಬಂಧಿಸಿ ಉನ್ನತ ಶಿಕ್ಷಣದ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ” ಎಂದು ಹೇಳಿದರು.

    ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, “ಮಂಗಳೂರಿನ ಮಕ್ಕಳಿಗೆ ಸಂಗೀತ ಅಭ್ಯಾಸ ಮಾಡಲು ಅನೇಕ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಂಗೀತದತ್ತ ಸೆಳೆಯಲು ಪ್ರೋತ್ಸಾಹ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳು ಕೂಡ ಸಂಗೀತ ಕಲಿಯಲು ಆಸಕ್ತಿ ತೋರಿಸಬೇಕಾಗಿದೆ. ಸ್ವರ ಸಂಕ್ರಾಂತಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ” ಎಂದರು.

    ಆಳ್ವಾಸ್ ಶಿಕ್ಷಣ ಪತ್ರಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಮಾತನಾಡಿ, “ಶಾಸ್ತ್ರೀಯ ಸಂಗೀತ ಸಹಿತ ಇತರ ಸಂಗೀತ ದೇಶದ ಸಂಪತ್ತು. ದೇಶದಲ್ಲಿ ವಿದ್ಯಾರ್ಥಿಗಳೇ ಅತ್ಯಧಿಕ ಸಂಖ್ಯೆಯಲ್ಲಿದ್ದು, ಸಂಗೀತ ಕಲಿಯುವತ್ತ ಒಲವು ಹೊಂದಬೇಕು. ಪೋಷಕರು ಇವರಿಗೆ ಸೂಕ್ತ ಸಲಹೆಯೊಂದಿಗೆ ಪ್ರೋತ್ಸಾಹ ನೀಡಬೇಕು. ಮೌಲ್ಯಗಳೊಂದಿಗೆ ಸಂಗೀತವನ್ನು ಮೈಗೂಡಿಸಿಕೊಳ್ಳುವುದರಿಂದ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ” ಎಂದರು.

    ಈ ಸಮಾರಂಭದಲ್ಲಿ ಜಿಲ್ಲೆಯ ಹೆಮ್ಮೆಯ ವಯಲಿನ್ ಕಲಾವಿದ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಸಾಧಕ ವಿದ್ವಾನ್ ವಿಟ್ಠಲ ರಾಮಮೂರ್ತಿಯವರಿಗೆ ಅವರ ಜೀವಮಾನದ ಸಂಗೀತ ಸೇವೆಯನ್ನು ಪರಿಗಣಿಸಿ ಈ ಬಾರಿಯ ‘ಸ್ವರ ರತ್ನ ಪ್ರಶಸ್ತಿ’ ಮತ್ತು ಕರಾವಳಿ ಕರ್ನಾಟಕದ ಮೂವರು ಹಿರಿಯ ಸಂಗೀತ ಗುರುಗಳಾದ ವಿದ್ವಾನ್ ನಾಗೇಶ್ ಎ. ಬಪ್ಪನಾಡು, ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಹಾಗೂ ವಿದ್ವಾನ್ ಯು.ಜಿ. ನಾರಾಯಣ ಶರ್ಮ ಕುಂಬ್ಳೆ ಇವರುಗಳಿಗೆ ‘ಸ್ವರ ಸಾಧನ ಪ್ರಶಸ್ತಿ-24’ ನೀಡಿ ಗೌರವಿಸಲಾಯಿತು. ‘ಸ್ವರ ರತ್ನ’ ಪುರಸ್ಕೃತ ವಿದ್ವಾನ್ ವಿಟ್ಠಲ ರಾಮಮೂರ್ತಿಯವರನ್ನು ಶ್ರೀಕೃಷ್ಣ ನೀರಮೂಲೆ ಸಭೆಗೆ ಪರಿಚಯಿಸಿದರು.

    ಮಧ್ಯಾಹ್ನ ಗಂಟೆ 2ರಿಂದ ಸ್ವರಾಲಯ ಬಳಗದ ವಿದ್ಯಾರ್ಥಿಗಳಿಂದ ಅತ್ಯಪೂರ್ವವಾದ ವಯಲಿನ್ ಕಛೇರಿ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಚೆನೈಯ ವಿಶ್ವ ವಿಖ್ಯಾತ ವಯಲಿನ್ ಕಲಾವಿದ ಸಹೋದರರಾದ ವಿದ್ವಾನ್ ಗಣೇಶ್ ರಾಜಗೋಪಾಲನ್ ಮತ್ತು ವಿದ್ವಾನ್ ಕುಮಾರೇಶ್ ರಾಜಗೋಪಾಲನ್ ಇವರಿಂದ ನಡೆದ ದ್ವಂದ್ವ ವಯಲಿನ್ ಕಛೇರಿಗೆ ವಿದ್ವಾನ್ ಅನಂತ ಆರ್. ಕೃಷ್ಣನ್ ಮೃದಂಗದಲ್ಲಿ ಹಾಗೂ ವಿದ್ವಾನ್ ಸುಂದರ ಕುಮಾರ್ ಖಂಜೀರದಲ್ಲಿ ಸಾಥ್ ನೀಡಿದರು.

    ಟ್ರಸ್ಟಿ ಶ್ರೇಷ್ಠಲಕ್ಷ್ಮೀ, ವಿ. ಪನ್ನಗ ಶರ್ಮಾ, ಸುಹಾಸ್, ರಜಾಕ್ ಪೈಯನ್ನೂರು, ವಿದುಷಿ ವಾಣಿ ಪ್ರಮೋದ್, ವಿದುಷಿ ರಶ್ಮಿ ಶ್ರೀನಿವಾಸ್ ಉಪಸ್ಥಿತರಿದ್ದರು. ಪ್ರೊ. ರಮೇಶ್ ಕೆ.ಜಿ. ಸ್ವಾಗತಿಸಿ, ಸ್ವರಾಲಯದ ಸಂಸ್ಥಾಪಕ ವಿಶ್ವಾಸ್ ಕೃಷ್ಣ ವಂದಿಸಿ, ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕೊಡವ ಮಕ್ಕಡ ಕೂಟದ 81ನೇ ಪುಸ್ತಕ ‘ಪೂ ಬಳ್ಳಿ’ಯ ಬಿಡುಗಡೆ ಕಾರ್ಯಕ್ರಮ
    Next Article ಉಡುಪಿಯಲ್ಲಿ ಕಾತ್ಯಾಯಿನಿ ಕುಂಜಿಬೆಟ್ಟು ಇವರ ಎರಡು ಪುಸ್ತಕಗಳ ಬಿಡುಗಡೆ
    roovari

    Add Comment Cancel Reply


    Related Posts

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.