Subscribe to Updates

    Get the latest creative news from FooBar about art, design and business.

    What's Hot

    ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2025 ಪ್ರಶಸ್ತಿ’ಗೆ ಎಚ್. ಶಕುಂತಳಾ ಭಟ್ ಆಯ್ಕೆ

    September 17, 2025

    ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ‘ಸುವರ್ಣ ಪರ್ವ -13’ | ಸೆಪ್ಟೆಂಬರ್ 21

    September 17, 2025

    ಕಥೆಗಳು ಮನಸ್ಸಿನಲ್ಲಿ ಅನುರಣಿಸುವಂತೆ ಇರಬೇಕು – ಕಾಸರಗೋಡು ಚಿನ್ನ

    September 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಖಿಲ್ರಿಯಾ ಜುಮ್ಮಾ ಮಸೀದಿಯ ಸುವರ್ಣ ಮಹೋತ್ಸವದ ಅಂಗವಾಗಿ ‘ಕವಿಗೋಷ್ಠಿ’ ಮತ್ತು ಪ್ರತಿಭಾ ಸ್ಪರ್ಧೆ
    Literature

    ಖಿಲ್ರಿಯಾ ಜುಮ್ಮಾ ಮಸೀದಿಯ ಸುವರ್ಣ ಮಹೋತ್ಸವದ ಅಂಗವಾಗಿ ‘ಕವಿಗೋಷ್ಠಿ’ ಮತ್ತು ಪ್ರತಿಭಾ ಸ್ಪರ್ಧೆ

    February 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಿನ್ನಿಗೋಳಿ : ಖಿಲ್ರಿಯಾ ಜುಮ್ಮಾ ಮಸೀದಿಯ ಸುವರ್ಣ ಮಹೋತ್ಸವದ ಅಂಗವಾಗಿ ಖಿಲ್ರಿಯಾ ಜುಮ್ಮಾ ಮಸೀದಿ ಮತ್ತು ಕಿನ್ನಿಗೋಳಿ ತಾಳಿಪ್ಪಾಡಿಯ ಶಾಂತಿನಗರದ ಕೆ.ಜೆ.ಎಂ. ಸುವರ್ಣ ಮಹೋತ್ಸವ ಸಮಿತಿ ಇದರ ವತಿಯಿಂದ ಮಸೀದಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬ್ಯಾರಿ ಮತ್ತು ಕನ್ನಡ ಭಾಷಾ ‘ಕವಿಗೋಷ್ಠಿ’ ಮತ್ತು ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಯು ದಿನಾಂಕ 26-11-2023ರಂದು ನಡೆಯಿತು.

    ಈ ಕಾರ್ಯಕ್ರಮವನ್ನು ಮುಸ್ಲಿಂ ಲೇಖಕರ ಸಂಘ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ಎ. ಮಹಮ್ಮದಾಲಿ ಉದ್ಘಾಟಿಸಿ ಮಾತನಾಡಿ “ಸಮುದಾಯದಲ್ಲಿ ಹಲವು ಬರಹಗಾರರು, ಕವಿಗಳು ಇದ್ದು ಅವರಿಗೆ ಪ್ರೋತ್ಸಾಹದ ಅಗತ್ಯವಿದೆ. ಮಸೀದಿಗಳು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು” ಎಂದು ಹೇಳಿದರು.

    ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಕಾಟಿಪಳ್ಳ, ಶರೀಫ್ ನಿರ್ಮುಂಜೆ, ಮೊಹಮ್ಮದ್ ಮನ್ಸೂರ್ ಮೂಲ್ಕಿ, ಮುಆದ್ ಜಿ.ಎಂ. ಇವರುಗಳು ಬ್ಯಾರಿ ಹಾಗೂ ಕನ್ನಡ ಭಾಷೆಯಲ್ಲಿ ಕವಿತೆ ವಾಚಿಸಿದರು.

    ಕೆ.ಜೆ.ಎಂ. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಟಿ.ಎಚ್‌. ಮಯ್ಯದ್ದಿ, ಕೆ.ಜೆ.ಎಂ. ಅಧ್ಯಕ್ಷ ಜೆ.ಎಚ್. ಅಬ್ದುಲ್ ಜಲೀಲ್, ಅಸ್ಗರ್ ಅಲಿ, ಮೊಯ್ದಿನ್ ಚೋಟರಿಕೆ, ಟಿ.ಎ. ಹನೀಫ್, ನೂರುಲ್ ಹುದಾ ಅಧ್ಯಕ್ಷ ಎಂ. ಖಾದರ್, ಟಿ.ಕೆ. ಅಬ್ದುಲ್ ಖಾದರ್, ಸುಹೈಲ್ ಸಖಾಫಿ ಸದರ್‌ ಮುಅಲ್ಲಿಂ, ನೌಫಲ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು. ಸಮದ್‌ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಹೆಬ್ಬಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ಬಾಲೆ ಘಟಕದ ವತಿಯಿಂದ ‘ಕವಿಗೋಷ್ಠಿ’
    Next Article ತೆಂಕುತಿಟ್ಟಿನ ಮೇರು ಕಲಾವಿದ ಕೆ.ಗೋವಿಂದ ಭಟ್ ಅವರಿಗೆ ‘ಕುಂಬ್ಳೆ ಸುಂದರರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ
    roovari

    Add Comment Cancel Reply


    Related Posts

    ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2025 ಪ್ರಶಸ್ತಿ’ಗೆ ಎಚ್. ಶಕುಂತಳಾ ಭಟ್ ಆಯ್ಕೆ

    September 17, 2025

    ಎ.ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುದವಟ್ಟು ದತ್ತಿ ಪುರಸ್ಕಾರಕ್ಕೆ ಡಾ. ಎಚ್.ಎಸ್. ಸುರೇಶ್ ಆಯ್ಕೆ

    September 17, 2025

    ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿಗೆ ಕ.ಸಾ.ಪ. ವತಿಯಿಂದ ಪುಸ್ತಕಗಳ ಕೊಡುಗೆ

    September 17, 2025

    ಮೂಡುಬಿದಿರೆಯಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಸೆಪ್ಟೆಂಬರ್ 20

    September 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.