Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ರಂಗಯಾನ ಟ್ರಸ್ಟ್ ಸಂಸ್ಥೆಯಿಂದ ರಂಗಭೂಮಿ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ

    June 7, 2025

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025

    Article | The End of an Era in the Malayalam Literary World

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕವಿ ಕುಮಾರ ವ್ಯಾಸ ಜಯಂತಿ ಆಚರಣೆ 
    Literature

    ಕವಿ ಕುಮಾರ ವ್ಯಾಸ ಜಯಂತಿ ಆಚರಣೆ 

    April 3, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಬೆಂಗಳೂರು : ಶ್ರೀ ವಾಲ್ಮೀಕಿ ಗಮಕ ಪಾಠ ಶಾಲೆಯ ವತಿಯಿಂದ ಗಮಕಿ ಶ್ರೀಮತಿ ಪದ್ಮಿನಿ ರಾಮಮೂರ್ತಿ ಅವರ ಮನೆಯ ಆತ್ಮೀಯ ವಾತಾವರಣದಲ್ಲಿ ಕವಿ ಕುಮಾರ ವ್ಯಾಸ ಜಯಂತಿಯನ್ನು ದಿನಾಂಕ 24-03-2024ರ ಭಾನುವಾರ ಸಂಜೆ ಆಚರಿಸಲಾಯಿತು. ಗಮಕ ಭೀಷ್ಮ ದಿ. ಬಿ.ಎಸ್.ಎಸ್. ಕೌಶಿಕರ ಮಕ್ಕಳಾದ ಪದ್ಮಿನಿ ರಾಮಮೂರ್ತಿ ಮತ್ತು ಸತ್ಯವತಿ ಕೇಶವ ಮೂರ್ತಿಯವರ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಮೊದಲು ಕುಮಾರ ಚಿರಾಗ್ ಕೌಶಿಕನ ಪ್ರಾರ್ಥನೆ, ಶ್ಯಾಮಲಾ ಅವಧಾನಿ ಮತ್ತು ಅವರ ಶಿಷ್ಯರಿಂದ ಸೌಂದರ್ಯ ಲಹರಿಯ ಕೆಲವು ಸೋತ್ರಗಳ ಗಾಯನ ನಡೆಯಿತು.
    ಕುಮಾರ ವ್ಯಾಸ ಭಾರತದ ಹನುಮ-ಭೀಮ ಸಮಾಗಮನದ ಭಾಗವನ್ನು ಶ್ರೀಮತಿಯರಾದ ಮಯೂರಿ ವಾಚನದಲ್ಲಿ ಮಾಧುರಿ ವ್ಯಾಖ್ಯಾನದಲ್ಲಿ ಹಿತಮಿತವಾಗಿಯೂ ಮಧುರವಾಗಿಯೂ ಎಲ್ಲರನ್ನೂ ಬೆರಗುಗೊಳಿಸಿದರು. ಸಹೋದರಿಯರಿಬ್ಬರೂ ಭವಿಷ್ಯದ ಉತ್ತಮ ಕಲಾವಿದರಾಗುವಲ್ಲಿ ಸಂದೇಹವಿಲ್ಲ. ಆನಂತರ ಹಿರಿಯರಾದ ಶ್ರೀಮತಿ ಜಯಲಕ್ಷ್ಮೀ ಗೋಪಿನಾಥ್, ಗೀತಾ ಪ್ರಭಾಕರ್, ವಿಶ್ವರೂಪ ದರ್ಶನವನ್ನು ಕೆಲವೇ ಪದ್ಯಗಳ ವಾಚನ, ವ್ಯಾಖ್ಯಾನಗಳ ಮೂಲಕ ಶ್ರೋತೃಗಳಿಗೆ ತಲುಪಿಸಿ ಭಾವಪರವಶರನ್ನಾಗಿಸಿದರು.
    ಮುಂದೆ ಹೊಸಹಳ್ಳಿಯ ವಿದ್ವಾನ್ ಶ್ರೀ ವೆಂಕಟರಮಣ ಅವರ ವಯೊಲಿನ್ ವಾದನವೂ ರಂಜನೀಯವಾಗಿತ್ತು. ಶ್ರೀಮತಿ ಗಂಗಮ್ಮ ಕೇಶವ ಮೂರ್ತಿಗಳು ಎಂದಿನ ತಮ್ಮ ರಾಜಠೀವಿಯಿಂದ ಎರಡು ಪದ್ಯಗಳ ವಾಚನದ ಮೂಲಕ ಕವಿ ನಮನ ಮಾಡಿದರು. ವಿಶೇಷವಾಗಿ ವಿ. ವೆಂಕಟರಮಣ, ಜಯಲಕ್ಷ್ಮೀ ಗೋಪಿನಾಥ್, ಗೀತಾ ಪ್ರಭಾಕರ್, ಮಯೂರಿ, ಮಾಧವಿಯವರೊಡನೆ ಗಮಕ ಕಲಾ ಪೋಷಕರೂ, ಸಹೃದಯರೂ ಆದ ಶ್ರೀಮತಿ ಸರಸ್ವತೀ ಸಿದ್ದಪ್ಪ ಅವರನ್ನೂ ಅಭಿಮಾನ ಪೂರಕವಾಗಿ ಆದರದಿಂದ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 70ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಪ್ರೊ. ಪಿ. ಕೆ. ಮೊಯ್ಲಿಯವರಿಗೆ ಅಭಿನಂದನೆ ಹಾಗೂ ‘ಗುರುಭ್ಯೋ ನಮಃ’ ಕೃತಿ ಲೋಕಾರ್ಪಣೆ | ಏಪ್ರಿಲ್ 06 
    Next Article ತೆಕ್ಕಟ್ಟೆಯ ಹಯಗೀವದಲ್ಲಿ ಶ್ವೇತಯಾನದ  ‘ಶ್ವೇತ ಸಂಜೆ-13’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025

    Article | The End of an Era in the Malayalam Literary World

    June 7, 2025

    ಪ್ರೊ. ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿ ಹಾಗೂ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರಕಟ

    June 7, 2025

    ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 105ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಜೂನ್ 10

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.