Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ ಬರಹಗಾರ ಎಂ. ಎಸ್. ಕೆ. ಪ್ರಭು

    July 15, 2025

    ಪುಸ್ತಕ ವಿಮರ್ಶೆ – ಪೀಳಿಗೆಯ ಯೋಚನೆಗಳನ್ನು ಬದಲು ಮಾಡಬಲ್ಲ ಕೃತಿ – ‘ಮಾತು ಎಂಬ ವಿಸ್ಮಯ’

    July 15, 2025

    ನಟನದಲ್ಲಿ ‘ಸುಬ್ಬಣ್ಣ ಸ್ಮರಣೆ 2025’ | ಜುಲೈ 16

    July 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರೊ. ಪಿ. ಕೆ. ಮೊಯ್ಲಿಯವರಿಗೆ ಅಭಿನಂದನೆ ಹಾಗೂ ‘ಗುರುಭ್ಯೋ ನಮಃ’ ಕೃತಿ ಲೋಕಾರ್ಪಣೆ | ಏಪ್ರಿಲ್ 06 
    Book Release

    ಪ್ರೊ. ಪಿ. ಕೆ. ಮೊಯ್ಲಿಯವರಿಗೆ ಅಭಿನಂದನೆ ಹಾಗೂ ‘ಗುರುಭ್ಯೋ ನಮಃ’ ಕೃತಿ ಲೋಕಾರ್ಪಣೆ | ಏಪ್ರಿಲ್ 06 

    April 3, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಸುರತ್ಕಲ್ : ಪ್ರೊ. ಪಿ. ಕೆ. ಮೊಯ್ಲಿ ಅಭಿನಂದನಾ ಸಮಿತಿ ಸುರತ್ಕಲ್ ಮತ್ತು ಗೋವಿಂದ ದಾಸ ಕಾಲೇಜಿನ ಡಾ. ಸೀ. ಹೊಸಬೆಟ್ಟು ಅಧ್ಯಯನ ಕೇಂದ್ರ ಮತ್ತು ಮಾನವಿಕ ಸಂಘದ ಸಹಭಾಗಿತ್ವದಲ್ಲಿ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಹಿರಿಯ ಲೇಖಕ, ಶಿಕ್ಷಣ ತಜ್ಞ ಹಾಗೂ ಪತ್ರಕರ್ತರಾಗಿ ಜನಪ್ರಿಯರಾಗಿರುವ ಪ್ರೊ. ಪಿ.ಕೆ. ಮೊಯ್ಲಿ ಅವರ ಅಭಿನಂದನಾ ಸಮಾರಂಭವು ದಿನಾಂಕ 06-04-2024ರಂದು ಗೋವಿಂದ ದಾಸ ಕಾಲೇಜಿನ ದೃಶ್ಯಶ್ರಾವ್ಯ ಮಂದಿರದಲ್ಲಿ ಸಂಜೆ3.30ರಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರೊ. ಪಿ. ಕೆ. . ಮೊಯ್ಲಿಯವರ ಅಭಿನಂದನಾ ಕೃತಿ ‘ಗುರುಭ್ಯೋ ನಮಃ’ ಲೋಕಾರ್ಪಣೆಗೊಳ್ಳಲಿದೆ.
    ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನೀ  ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ವಹಿಸಲಿದ್ದು ಕೃತಿ ಬಿಡುಗಡೆಯನ್ನು ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಷಿ ನಡೆಸಿಕೊಡಲಿದ್ದಾರೆ.
    ಪ್ರೊ. ಪಿ. ಕೆ. ಮೊಯ್ಲಿಯವರು ದಕ್ಷಿಣ ಕನ್ನಡ ಜಿಲ್ಲಾ ಬೋರ್ಡಿನ ಆಡಳಿತಕ್ಕೊಳಪಟ್ಟ ವಿವಿಧ ಪ್ರೌಢಶಾಲೆಗಳಲ್ಲಿ ಪದವೀಧರ ಶಿಕ್ಷಕರಾಗಿ, ಹಿಂದಿ ಪಂಡಿತರಾಗಿ ಬೈಂದೂರಿನಿಂದ ತೊಡಗಿ ಪಂಜ, ಬೆಳ್ಳಾರೆ, ಹಿರಿಯಡ್ಕ, ಕಾರ್ಕಳದವರೆಗೆ ವಿವಿಧ ಕಡೆ ಸೇವೆ ಸಲ್ಲಿಸಿದ್ದಾರೆ.
    ಗೋವಿಂದ ದಾಸ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರ್ಪಡೆಗೊಂಡು ಇತಿಹಾಸ ವಿಭಾಗದ ಮುಖ್ಯಸ್ಥರಾಗಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿ ಹಾಗೂ ಕಾಲೇಜಿನ ಪ್ರಾಚಾರ್ಯರಾಗಿ ದುಡಿದಿದ್ದಾರೆ.  ನಿವೃತ್ತಿ ನಂತರ ಸುರತ್ಕಲ್ ಶ್ರೀ ಮಹಾಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆ, ಕಾಟಿಪಳ್ಳ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಹಾಗೂ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.  ಕಲಾವಿದರಾಗಿ, ಭಾಗವತರಾಗಿ, ಕಲಾಪ್ರೇಮಿಯಾಗಿ, ಕಲಾ ವಿಮರ್ಶಕರಾಗಿ ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ಲಿನಲ್ಲಿ ಸಂಪನ್ನಗೊಂಡ ‘ಉದಯರಾಗ-51’ 
    Next Article ಕವಿ ಕುಮಾರ ವ್ಯಾಸ ಜಯಂತಿ ಆಚರಣೆ 
    roovari

    Add Comment Cancel Reply


    Related Posts

    ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ‘ಬೆಳ್ಳಿಗೆಜ್ಜೆ’ ಕೃತಿ ಬಿಡುಗಡೆ | ಜುಲೈ 15

    July 14, 2025

    ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ‘ಕನ್ನಡ ಸಾಹಿತ್ಯ ಸಂಭ್ರಮ 2025’ | ಜುಲೈ 13

    July 12, 2025

    ಶ್ರೀನಾಥ್ ಬಸ್ರೂರು ಇವರ ‘ಒಮ್ಮೊಮ್ಮೆ ಅನಿಸಿದ್ದು’ ಅಂಕಣ ಬರಹಗಳ ಪುಸ್ತಕ ಬಿಡುಗಡೆ

    July 11, 2025

    ಸ್ವಪ್ನ ಬುಕ್ ಹೌಸ್ ವತಿಯಿಂದ ಪುಸ್ತಕಗಳ ಬಿಡುಗಡೆ ಸಮಾರಂಭ | ಜುಲೈ 12

    July 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.