Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಭವನದಲ್ಲಿ ‘ಚಿಣ್ಣರ ಮೇಳ’ ಬೇಸಿಗೆ ಶಿಬಿರದ ಉದ್ಘಾಟನೆ
    Camp

    ಕನ್ನಡ ಭವನದಲ್ಲಿ ‘ಚಿಣ್ಣರ ಮೇಳ’ ಬೇಸಿಗೆ ಶಿಬಿರದ ಉದ್ಘಾಟನೆ

    April 27, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಲಬುರಗಿ : ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ (ರಿ) ಕಲಬುರಗಿ ರಂಗಸಂಸ್ಥೆಯು 25 ದಿನಗಳ ಕಾಲ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದು, ದಿನಾಂಕ 14-04-2024ರಂದು ‘ಚಿಣ್ಣರ ಮೇಳ -2024’ರ ಉದ್ಘಾಟನಾ ಸಮಾರಂಭ ನೆರವೇರಿತು.

    ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನಾಡಿದ ಶಿಬಿರದ ನಿರ್ದೇಶಕ ಡಾ. ವಿಶ್ವರಾಜ್ ಪಾಟೀಲ್ “ವಿಶ್ವರಂಗದ 15 ವರ್ಷಗಳ ಪಯಣದಲ್ಲಿ ಏಳುಬೀಳುಗಳನ್ನಾಡುತ್ತಾ, ರಂಗಭೂಮಿಯ ಮೂಲಕ ಶಿಕ್ಷಣ ಇಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ರಂಗಭೂಮಿ ಬಹಳ ಪ್ರಭಾವಿ ಮಾಧ್ಯಮ. ಇಲ್ಲಿ ಮಕ್ಕಳು ಧೈರ್ಯವಾಗಿ ವೇದಿಕೆ ಮೇಲೆ ಮಾತನಾಡಲು ಕಲಿಯುತ್ತಾರೆ, ಭಾಷೆ, ಉಚ್ಛಾರಣೆ ಸ್ಪಷ್ಟತೆ ಬರುತ್ತದೆ. ರಂಗಭೂಮಿಯ ಮೂಲಕ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ” ಎಂದು ಶಿಬಿರದ ಉದ್ದೇಶವನ್ನು ವಿವರಿಸಿ ಎಲ್ಲಾ ಅಥಿತಿ ಗಣ್ಯರನ್ನು ಸ್ವಾಗತಿಸಿದರು.

    ಚಲನಚಿತ್ರ ನಟರಾದ ಶ್ರೀ ಶರಣರಾಜ್ ಅವರು ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, “ಇಂದಿನ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ರಂಗ ಶಿಬಿರಗಳು ಬಹಳ ಮಹತ್ವದ ಕೆಲಸವಾಗಿದೆ. ಯಾಕೆಂದರೆ ಶಾಲೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ, ಶಿಸ್ತು, ನಿಯಮಪಾಲನೆಗಳಲ್ಲಿ ಕಲಿಯುತ್ತಾರೆ. ಇಲ್ಲಿ ರಂಗಭೂಮಿಯ ಮೂಲಕ ಆಟ, ಪಾಠಗಳನ್ನು ಸ್ವತಂತ್ರವಾಗಿ ಯಾವುದೇ ಇತಿಮಿತಿಗಳಿಲ್ಲದೇ ಕಲಿಯಬಹುದು. ಇಂಥಹ ಶಿಬಿರಗಳು ಹೆಚ್ಚಿನ ರೀತಿಯಲ್ಲಿ ಆಯೋಜನೆಗೊಳ್ಳಲಿ, ನಮ್ಮ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ” ಎಂದು ಹೇಳಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸುರೇಶ ಕುಮಾರ ಬಡಿಗೇರ ಅವರು ವಿಶ್ವರಂಗ ತಂಡದ ಕಾರ್ಯವನ್ನು ಶ್ಲಾಘಿಸಿದರು. ಮುಂದಿನ ಕಾರ್ಯಕ್ರಮಗಳಿಗೆ ವಿಶ್ವರಂಗ ತಂಡಕ್ಕೆ ಬೇಕಾದಂತಹ ಸಹಾಕಾರ ಖಂಡಿತ ಕೊಡುತ್ತೇನೆ ಎನ್ನುತ್ತಾ, ಕಲೆ ಸಾಹಿತ್ಯ, ಸಂಗೀತ, ನೃತ್ಯದಂತಹ ಪ್ರಕಾರಗಳು ಒಂದೇ ಸೂರಿನಡಿಯಲ್ಲಿ ಕಲ್ಪಿಸಿಕೊಟ್ಟದ್ದು ಒಂದು ಮಹತ್ವದ ಹೆಜ್ಜೆಯೇ ಸರಿ ಎಂದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ವಿಶ್ವರಂಗ ತಂಡದ ಅಧ್ಯಕ್ಷರಾದ ಶ್ರೀಮತಿ ನೀತಾ ಪಾಟೀಲ್ ಅವರು ಮಾಡಿದರು. ವೇದಿಕೆ ಮೇಲೆ ವಿಶ್ವರಂಗ ತಂಡದ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ತಳವಾರ, ನಂದಕುಮಾರ ಮಾಲಿ ಪಾಟೀಲ್, ನಾಗರಾಜ್ ಪಾಟೀಲ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರದ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ಏಕಪಾತ್ರಾಭಿನಯ ಪ್ರದರ್ಶನಗೊಂಡವು. ಅಂಬಿಕಾ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸೈಮನ್, ಶ್ರೀಧರ, ಶ್ರೀಮತಿ ಶಶಿಕಲಾ ಗುತ್ತೇದಾರ್, ಯೋಗಿತಾ ಹಿರೇಮಠ, ಭಾಗ್ಯಶ್ರೀ, ಅಭಿಷೇಕ ಕಾಮಬಳೆ, ಮುರುಳಿ ಪಾಟೀಲ್, ಉದಯಕುಮಾರ್, ಬಾಲಕೃಷ್ಣ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಶ್ರದ್ಧಾಂಜಲಿ
    Next Article ಮಂಗಳೂರಿನ ಶ್ರೀರಾಮಕೃಷ್ಣ ಮಠದಲ್ಲಿ ‘ಹರಿದಾಸ ನಮನ’ ಕಾರ್ಯಕ್ರಮ | ಮೇ 2
    roovari

    Add Comment Cancel Reply


    Related Posts

    ಸಮಾರೋಪಗೊಂಡ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 22, 2025

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025

    ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ‘ಕರುಂಬಿತ್ತಿಲ್ ಶಿಬಿರ 2025’ | ಮೇ 20ರಿಂದ 25

    May 19, 2025

    ಹಾಸನದಲ್ಲಿ ಉದ್ಘಾಟನೆಗೊಂಡ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.