Subscribe to Updates

    Get the latest creative news from FooBar about art, design and business.

    What's Hot

    ಕಾಸರಗೋಡಿನ ಕನ್ನಡ ಭವನದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ

    June 9, 2025

    ಶಿವಗಂಗೆಯ ಆದಿಮದಲ್ಲಿ ‘ಹುಣ್ಣಿಮೆ ಹಾಡು 218’ | ಜೂನ್ 11

    June 9, 2025

    ತೆಂಕುತಿಟ್ಟಿನ ಪ್ರಸಿದ್ಧ ಹಿರಿಯ ಹಾಸ್ಯಗಾರ ಪದ್ಮನಾಭ ಶೆಟ್ಟಿಗಾರ್‌ ನಿಧನ

    June 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಜನರ ಮನಗೆದ್ದ ” ಅ ಫ್ರೆಂಡ್ ಬಿಯೊಂಡ್ ದಿ ಫೆನ್ಸ್ “
    Drama

    ಮಂಗಳೂರಿನ ಜನರ ಮನಗೆದ್ದ ” ಅ ಫ್ರೆಂಡ್ ಬಿಯೊಂಡ್ ದಿ ಫೆನ್ಸ್ “

    June 12, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಶತಮಾನಗಳ ಹಿಂದೆ ಕನ್ನಡ ರಂಗಭೂಮಿ ಕಂಪನಿ ನಾಟಕಗಳಲ್ಲಿ ನೈಜ ಒಂಟೆ ಮತ್ತು ಆನೆಗಳನ್ನು ಬಳಸಿ ಮನರಂಜನೆ ನೀಡುವಷ್ಟು ಶ್ರೀಮಂತವಾಗಿತ್ತು. ಇಂದು ಸರಳ ತಂತ್ರಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ನಾಟಕಗಳನ್ನು ಹೊಂದಿಸಲಾಗಿದೆ. ಆದರೆ ಈಗ ಕಲಾಭಿ(ರಿ ) ಸಂಸ್ಥೆ ಹಳೆಯ ಸಂಪ್ರದಾಯವನ್ನು ಪ್ರೇಕ್ಷಕರಿಗೆ ನೆನಪಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರಿನಲ್ಲಿ ನಿಜವಾದ ಆನೆಗಳನ್ನು ವೇದಿಕೆಗೆ ತರುವಲ್ಲಿ ಕಲಾಭಿ ತಂಡ ಮತ್ತೆ ಯಶಸ್ಸು ಕಂಡಿದೆ .


    ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ದಿನಾಂಕ 09-06-2024 ರಂದು ನಡೆದ ಕಲಾಭಿ ರಂಗೋತ್ಸವದಲ್ಲಿ ಪ್ರಸಿದ್ಧ ರಂಗ ನಿರ್ದೇಶಕ ಶ್ರವಣ್ ಹೆಗ್ಗೋಡು ನಿರ್ದೇಶನದ “ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್” ಎಂಬ ಅಪೂರ್ವ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಜಪಾನ್‌ನ ಬುರ್ನಾಕು ಬೊಂಬೆ ಪ್ರದರ್ಶನ ತಂತ್ರವನ್ನು ಕಲಿತು ನುರಿತ ಕಲಾವಿದರನ್ನು ಒಳಗೊಂಡಂತೆ ಈ ನಾಟಕವು ತನ್ನ ಅತ್ಯುತ್ತಮ ವೇದಿಕೆ, ಅದ್ಭುತ ಸಂಗೀತ ಮತ್ತು ಅನೇಕ ವಿಶೇಷ ತಂತ್ರಗಳು ಮತ್ತು ವಿಶೇಷ ಬೆಳಕಿನಿಂದ ಅಪಾರ ಪ್ರೇಕ್ಷಕರನ್ನು ಆಕರ್ಷಿಸಿದೆ.


    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಮೃತ ವಿದ್ಯಾಲಯ ಮಂಗಳೂರು ಇದರ ಕ್ಯಾಂಪಸ್ ನಿರ್ದೇಶಕರಾದ ಶ್ರೀ ಯತೀಶ್ ಬೈಕಂಪಾಡಿ ಮಾತನಾಡಿ “ಇಂದಿನ ಪೀಳಿಗೆಯ ಮಕ್ಕಳಲ್ಲಿ ಕಲ್ಪನಾಶಕ್ತಿ, ಆಸ್ವಾದನಾಪ್ರಜ್ಞೆ ಬೆಳೆಸುವಲ್ಲಿ ಇಂತಹ ನಾಟಕಗಳು ಅತ್ಯಗತ್ಯ ಇಂತಹ ರಂಗೋತ್ಸವವನ್ನು ನಡೆಸಲು ಹೆಜ್ಜೆ ಇಟ್ಟ ‘ಕಲಾಭಿ’ ಸಂಸ್ಥೆಗೆ ಶುಭವಾಗಲಿ.” ಎಂದು ಹಾರೈಸಿದರು.
    ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅರೆಹೊಳೆ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀ ಅರೆಹೊಳೆ ಸದಾಶಿವ ರಾವ್ ಶುಭ ನುಡಿಯನ್ನಿತ್ತರು. ನಟ, ನಿರ್ದೇಶಕ ಹಾಗೂ ಬರಹಗಾರರಾದ ಶ್ರೀ ಜೆ. ಪಿ. ತುಮಿನಾಡ್, ಶ್ರೀ ಕೆ. ತೇಜೋಮಯ, ತುಳು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಂಜೀವ ಶೆಟ್ಟಿ ಸಿಲ್ಕ್ & ಸಾರೀಸ್ ಮಾಲಕರಾದ ಶ್ರೀ ಮುರಳೀಧರ್ ಶೆಟ್ಟಿ, ಕಶಾರ್ಪ್ ದಿ ಫಿಟೈಸ್ ಕಲೆಕ್ಟಿವ್ ಇದರ ನಿರ್ದೇಶಕರಾದ ಶ್ರೀ ಆನಂದ್ ಪ್ರಭು, ರೇಡಿಯೊಥೆರಪಿ ಮತ್ತು ಆಂಕೊಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಡಾ. ಅಭಿಷೇಕ್ ಕೃಷ್ಣ, ಕ್ರೆಡೈ ಮಂಗಳೂರಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಅರ್ಜುನ್ ರಾವ್ , ರಂಗಭೂಮಿ ಮತ್ತು ಚಲನಚಿತ್ರ ನಟ ಶ್ರೀ ಲಕ್ಷ್ಮಣ್ ಕುಮಾರ್ ಮಲ್ಲೂರು, ಸೂರ್ಯ ಕಾಂತಿ ಸೇವಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್, ವಿಜಾರ್ಡ್ ಕೇಬಲ್ ಮತ್ತು ಇಂಟರ್ನೆಟ್ ಸರ್ವಿಸ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಆದಿತ್ಯ ಕರ್ಕೇರ, ರೇಡಿಯೋ ಸಾರಂಗ್ ಇದರ ಮುಖ್ಯ ಕಾರ್ಯಕ್ರಮ ನಿರ್ಮಾಪಕರಾದ ಶ್ರೀ ಆರ್. ಜೆ. ಅಭಿಷೇಕ್ ಶೆಟ್ಟಿ, ಕದಳಿ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀ ನೇಮಿರಾಜ್ ಶೆಟ್ಟಿ, ಶ್ರೀ ಆರ್. ಜೆ. ಕಿರಣ್, ಸೆಲೆಬ್ರೇಷನ್ ಬೈ ರಕ್ಷಾ ಇದರ ಮಾಲೀಕರಾದ ಶ್ರೀಮತಿ ರಕ್ಷಾ ಭಾಗವಹಿಸಿದ್ದರು.


    ಕಾರ್ಯಕ್ರಮದಲ್ಲಿ ಕಲಾಭಿ (ರಿ. ) ಸಂಸ್ಥೆ ಹಾಗೂ ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ ಇದರ ಎಲ್ಲಾ ಸದಸ್ಯರು ಹಾಗೂ ಹೆತ್ತವರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಮೀನಾಕ್ಷಿ ರಾಮಚಂದ್ರ ಅತಿಥಿಗಳನ್ನು ಸ್ವಾಗತಿಸಿ, ಗೌರವಾಧ್ಯಕ್ಷರಾದ ಸುರೇಶ್ ವರ್ಕಾಡಿ ಅತಿಥಿಗಳನ್ನು ಗೌರವಿಸಿ, ಸಂಸ್ಥೆಯ ಸದಸ್ಯೆಯಾದ ಶ್ರೀನಿಧಿ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.


    ನಿರ್ದಿಗಂತ ಏರ್ಪಡಿಸಿದ ‘ನೇಹದ ನಡಿಗೆ’ ಪ್ರಾಜೆಕ್ಟ್ ಭಾಗವಾಗಿ ಸಿದ್ಧಗೊಂಡ ಈ ಪ್ರಸ್ತುತಿ ಈಗಾಗಲೇ ಹಲವಾರು ರಂಗಮಂದಿರದಲ್ಲಿ ಪ್ರದರ್ಶನಗೊಂಡು ಜನಮನ ಗೆದ್ದಿದೆ. ಅಂತಾರಾಷ್ಟ್ರೀಯ ಮಟ್ಟದ ಪಪ್ಪೆಟ್ ರಂಗ ಕಾರ್ಯಾಗಾರದಲ್ಲಿ ಭಾಗವಹಿಸಿದ ಶ್ರವಣ್ ಹೆಗ್ಗೋಡು ‘ರೆಕ್ಸ್‌ ಅವರ್ಸ್’, ‘ಹಕ್ಕಿ ಕತೆ’ ಮುಂತಾದ ಹಲವು ಅದ್ಭುತ ಪಪ್ಪೆಟ್ ರಂಗ ಪ್ರಯೋಗಗಳ ಮೂಲಕ ಜನಪ್ರಿಯತೆ ಹೊಂದಿರುವ ಇವರು ಇದೀಗ ‘ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್’ ಮೂಲಕ ಹೃದಯ ಸ್ಪರ್ಶಿ ಕಥಾ ಹಂದರದೊಂದಿಗೆ ದೈತ್ಯ ಪಪ್ಪೆಟ್ ಆನೆಯನ್ನು ರಂಗದ ಮೇಲೆ ತಂದಿದ್ದಾರೆ . ಕಲಾಭಿ ತಂಡದ ಕಲಾವಿದರ ಮನಸ್ಪೂರ್ತಿಯ ಅಭಿನಯ ಮತ್ತೊಂದು ವಿಶೇಷವಾಗಿದೆ. ಮಂಗಳೂರು ರಂಗಭೂಮಿಯಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ಕಲಾಭಿಮಾನಿಗಳನ್ನು ಸೆಳೆಯುತ್ತಿರುವ ‘ಕಲಾಭಿ’ ತಂಡದ ಈ ವಿನೂತನ ಪ್ರಯೋಗಕ್ಕೆ ಮಂಗಳೂರಿನ ಜನತೆ, ಹಾಗೂ ಕರಾವಳಿಯ ಗಣ್ಯ ಹಾಗೂ ದಿಗ್ಗಜ ಕಲಾವಿದರು ಸಾಕ್ಷಿಯಾಗಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕೇರಳದ ಕಲ್ಪೆಟ್ಟದಲ್ಲಿ ಜನಮನ ಸೆಳೆದ “ಶ್ರೀರಾಮ ಕಥಾಮೃತ”
    Next Article ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’
    roovari

    Add Comment Cancel Reply


    Related Posts

    ಶಿವಗಂಗೆಯ ಆದಿಮದಲ್ಲಿ ‘ಹುಣ್ಣಿಮೆ ಹಾಡು 218’ | ಜೂನ್ 11

    June 9, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025

    ಪುಸ್ತಕ ವಿಮರ್ಶೆ – ‘ಹೌಸ್ ಫುಲ್’

    June 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.