Subscribe to Updates

    Get the latest creative news from FooBar about art, design and business.

    What's Hot

    ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ ಹಾಗೂ ‘ವಿಜಯ ವಿಷ್ಣು ಭಟ್ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ

    June 6, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಮಾಗಮ 7’ | ಜೂನ್ 07

    June 6, 2025

    ಮಂಗಳೂರು ಪುರಭವನದಲ್ಲಿ ಕೊಂಕಣಿ ಯಕ್ಷಗಾನ

    June 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವೈವಿಧ್ಯಮಯ ಹಂಸ ಸಾಂಸ್ಕೃತಿಕ ಸೌರಭ ಮತ್ತು ಸಾಧಕೋತ್ತಮರಿಗೆ ಪ್ರತಿಷ್ಠಿತ ‘ಹಂಸ ಸನ್ಮಾನ್ ಪ್ರಶಸ್ತಿ’ ಪ್ರದಾನ
    Awards

    ವೈವಿಧ್ಯಮಯ ಹಂಸ ಸಾಂಸ್ಕೃತಿಕ ಸೌರಭ ಮತ್ತು ಸಾಧಕೋತ್ತಮರಿಗೆ ಪ್ರತಿಷ್ಠಿತ ‘ಹಂಸ ಸನ್ಮಾನ್ ಪ್ರಶಸ್ತಿ’ ಪ್ರದಾನ

    August 2, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ನಾಡಿನ ಸಾಂಸ್ಕೃತಿಕ ಚಳುವಳಿಯ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಯಾದ ಹಂಸಜ್ಯೋತಿ ಟ್ರಸ್ಟಿನ 49ನೇ ವರ್ಷಾಚರಣೆ ಪ್ರಯುಕ್ತ ‘ಹಂಸ ಸಾಂಸ್ಕೃತಿಕ ಸೌರಭ’ ಹಾಗೂ ‘ಹಂಸ ಸನ್ಮಾನ ಪ್ರಶಸ್ತಿ’ ಪ್ರದಾನವನ್ನು 31 ಜುಲೈ 2024ರಂದು ಸಂಜೆ ಬೆಂಗಳೂರು ಮಲ್ಲತ್ತಹಳ್ಳಿ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆಯೋಜಿಸಲಾಗಿತ್ತು.

    ಹಿರಿಯ ರಂಗ ಸಂಘಟಕ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಪಾರಂಪರಿಕ ಶ್ರೀಮಂತಿಕೆಯ ಹಿನ್ನೆಲೆಯ ಸಾಂಸ್ಕೃತಿಕ ಲೋಕದಲ್ಲಿ ನೈತಿಕತೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಭರವಸೆಯ ಆಶಾಕಿರಣವಾಗಿ ಯಾವುದೇ ಸದ್ದುಗದ್ದಲವಿಲ್ಲದೆ ತನ್ನ ಸಾಮಾಜಿಕ- ಕಲಾತ್ಮಕ ಕೈಂಕರ್ಯದಿಂದ ಹಂಸಜ್ಯೋತಿ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ನಿಂತಿರುವುದು ಒಂದು ಮೈಲಿಗಲ್ಲೇ ಸರಿ. ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕೋತ್ತಮರನ್ನು ಗೌರವಿಸುತ್ತಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.

    ಹಂಸ ಜ್ಯೋತಿ ಟ್ರಸ್ಟಿನ ಸಂಸ್ಥಾಪಕ, ವ್ಯವಸ್ಥಾಪಕ ಹಾಗೂ ಟ್ರಸ್ಟಿ ಎಂ. ಮುರುಳೀಧರ ಪ್ರಾಸ್ತಾವಿಕ ನುಡಿಗಳನಾಡುತ್ತಾ “ಕಳೆದ ಐದು ದಶಕದಿಂದ ಕಲಾಪೋಷಕರ ಸಹಕಾರದೊಡನೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರವಾಗಿ ನಾಡು-ನುಡಿಯ ಸೇವೆ ಸಲ್ಲಿಸಿರುವ ಸಂತೃಪ್ತಿ ಇದೆ. ಅಭಿಮಾನಿಗಳ ಪ್ರೋತ್ಸಾಹದ ಶ್ರೀರಕ್ಷೆಯೊಂದಿಗೆ ಮುಂದಿನ ವರ್ಷ ಪೂರ್ತಿ ಅರ್ಥಪೂರ್ಣ ಸುವರ್ಣ ಸಂಭ್ರಮಾಚರಣೆ ನಡೆಸಲು ಕಾರ್ಯಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.

    ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಚಲನಚಿತ್ರ ಕಲಾವಿದ ಡಾ. ಸಂಗಮೇಶ ಉಪಾಸೇ, ಹಿರಿಯ ಸಾಂಸ್ಕೃತಿಕ ಸಂಘಟಕ ಡಿ.ಬಿ. ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಪ್ರಾಂಶುಪಾಲ ಡಾ. ಆರ್.ಎನ್. ಸುಬ್ಬರಾವ್, ಸಮಾಜ ಸೇವಕಿ ಡಾ. ಸುಕನ್ಯಾ ಹಿರೇಮಠ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷ ರೋಶಿನಿ ಗೌಡ, ಉದ್ಯಮಿ ಕೆ. ಶ್ರೀನಿವಾಸಲು ರೆಡ್ಡಿ, ಟಿ.ಎನ್. ಗಂಗಾಧರ್, ಶಿಲ್ಪ ಶ್ರೀ, ಆರ್‌.ಪಿ. ರವಿಶಂಕರ್, ಶಿರಸ್ತೆದಾರ್ ಎಂ. ವಿಜಯಲಕ್ಷ್ಮಿ, ನೃತ್ಯ ಶಿಕ್ಷಕಿ ವಿದುಷಿ ಬಿ.ಎಸ್. ಇಂದು ನಾಡಿಗ್, ಶುಶ್ರೂಷ ಅಧೀಕ್ಷಕಿ ಎನ್. ಸುಮಿತ್ರಾ ದೇವಿ, ಲೆಕ್ಕಪರಿಶೋಧಕ ಕೆ. ಅಂಜನ್ ಕುಮಾರ್, ಮೃದಂಗ ಲಯವಾದ್ಯ ಕಲಾವಿದ ವಿದ್ವಾನ್ ಬೆಟ್ಟ ವೆಂಕಟೇಶ್, ಬ್ಯಾಂಕ್ ಆಫ್ ಬರೋಡಾದ ಸಹಾಯಕ ಕಾರ್ಯನಿರ್ವಾಹಕ ಸದಾನಂದ ಜಿ. ಕುರುಡಿಕೇರಿ ಇವರುಗಳಿಗೆ ಪ್ರತಿಷ್ಠಿತ 2024ನೇ ಸಾಲಿನ ‘ಹಂಸ ಸನ್ಮಾನ ಪ್ರಶಸ್ತಿ’ ಮತ್ತು ಸೋಹಿಲ್ ಷಾ ಅವರಿಗೆ ‘ಹಂಸ ಯುವ ಪುರಸ್ಕಾರ’ವನ್ನು ಶಾಲು, ಹಾರ, ಶಾರದೆಯ ಸ್ಮರಣಿಕೆ ಮತ್ತು ಅಭಿನಂದನಾ ಪತ್ರದೊಂದಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

    ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಿದ್ವಾಯಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ. ರಾಮಚಂದ್ರ ಮಾತನಾಡುತ್ತ “ಆರೋಗ್ಯಕರ ಜೀವನಶೈಲಿಯಿಲ್ಲದೆ ದುಶ್ಚಟಗಳಿಗೆ ದಾಸರಾಗುವ ಬದಲು ಸ್ವಸ್ಥ ಸಮಾಜ ರೂಪುಗೊಳ್ಳಲು ಸಕಾರತ್ಮಾಕ ಆಲೋಚನೆಯ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹಂಸ ಜ್ಯೋತಿ ಟ್ರಸ್ಟಿನ ಕಾರ್ಯ ಪ್ರಶಂಸನೀಯ” ಎಂದು ತಿಳಿಸಿದರು. ಅಬಕಾರಿ ಇಲಾಖೆ ಉಪ ಆಯುಕ್ತ ಡಾ. ಬಿ.ಆರ್. ಹಿರೇಮಠ ಮಾತನಾಡಿ “ಎಂ. ಮುರಳೀಧರ ಇವರ ಶ್ರದ್ಧೆ ಹಾಗೂ ಶ್ರಮದ ರೂಪಕ, ರಾಜ್ಯಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಶ್ರೀಯುತರಿಗೆ ಸೂಕ್ತ ಗೌರವ ಮನ್ನಣೆ ಸಿಗಬೇಕು” ಎಂದು ಆಶಿಸಿದರು.

    ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ಉದ್ಯಮಿ ಜಯರಾಂ ಶೆಟ್ಟಿ, ಸಮಾಜ ಸೇವಕ ಎಂ. ಜಯಕುಮಾರ್, ಎಸ್.ಟಿ. ಉದಯಕುಮಾರ್, ಹಿರಿಯ ಟ್ರಸ್ಟಿ ಎಂ.ಆರ್. ನಾಗರಾಜ ನಾಯ್ಡು ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡ್ಯದ ಉಪನ್ಯಾಸಕಿ ಭವಾನಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.

    ಕಾರ್ಯಕ್ರಮದ ಆರಂಭದಲ್ಲಿ ಹಂಸ ಸಾಂಸ್ಕೃತಿಕ ವೈಭವದ ಅಂಗವಾಗಿ ನಾದತರಂಗಿಣಿ ತಂಡದಿಂದ ವಿದ್ವಾನ್ ಬೆಟ್ಟ ವೆಂಕಟೇಶ್ ನಿರ್ದೇಶನದಲ್ಲಿ ‘ಹಂಸ ನಾದ ವೈಭವ ತಾಳವಾಧ್ಯ ಕಚೇರಿ’ಯಲ್ಲಿ ಖ್ಯಾತ ಕಲಾವಿದರಾದ ವಿದ್ವಾನ್ ಆರ್.ಪಿ .ಪ್ರಶಾಂತ್- ವೀಣೆ, ವಿದ್ವಾನ್ ರಾಹುಲ್ ವೆಂಕಟೇಶ್ – ಕೊಳಲು, ವಿದ್ವಾನ್ ಸುಬ್ರಹ್ಮಣ್ಯ ಮೋಹಿತೇ – ಖಂಜೀರ, ವಿದ್ವಾನ್ ನಟರಾಜ ತಮ್ಮಯ್ಯ – ಘಟಂ, ವಿದ್ವಾನ್ ಕಾರ್ತೀಕ್ ಮೋಹಿತೆ – ಮೋರ್ಚಿಂಗ್, ವಿದ್ವಾನ್ ಪವನ್ ಕುಮಾರ್ – ವಯೋಲಿನ್ ಮತ್ತು ರಿದಂಪಾಡ್ ನಲ್ಲಿ ಸಹಕರಿಸಿದರು. ಗಾಯಕ ಹರೀಶ್ ನರಸಿಂಹರವರ ನಿನಾದ ಸಂಸ್ಕೃತಿ ಕಲಾಕೇಂದ್ರದ ಪ್ರತಿಭಾನ್ವಿತ ಗಾಯಕರಿಂದ ‘ಹಂಸ ಸುಗಮ ಸಂಗೀತ ವೈಭವ’, ಬ್ಯಾಟರಾಯನಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ‘ಹಂಸ ಯಕ್ಷಗಾನ ವೈಭವ’ ಮತ್ತು ವಿದುಷಿ ಬಿ.ಎಸ್. ಇಂದು ನಾಡಿಗ್ ನಿರ್ದೇಶನದಲ್ಲಿ ಶಾರದಾ ನೃತ್ಯಾಲಯ ತಂಡದವರಿಂದ ‘ಹಂಸ ನೃತ್ಯ ವೈಭವ’ ಹಾಗೂ ಸ್ವಪ್ನ, ಮಂಜುನಾಥ್ ಮತ್ತು ಸದಾನಂದ ಕುರುಡಿಕೇರಿಯವರು ನಡೆಸಿಕೊಟ್ಟ ಚಲನಚಿತ್ರ ಗೀತೆಗಳ ಪ್ರಸ್ತುತಿ ಪ್ರೇಕ್ಷಕರ ಮನಸೂರೆಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳ ರಿಯಾಯತಿ ಮಾರಾಟ
    Next Article ಸಂಸ್ಕಾರ ಭಾರತೀ ವತಿಯಿಂದ ಹಿರಿಯ ದೈವ ನರ್ತಕ ಕರಿಯ ಅಜಿಲ ಕಡ್ಯ ಇವರಿಗೆ ಸನ್ಮಾನ
    roovari

    Comments are closed.

    Related Posts

    ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ ಹಾಗೂ ‘ವಿಜಯ ವಿಷ್ಣು ಭಟ್ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ

    June 6, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಮಾಗಮ 7’ | ಜೂನ್ 07

    June 6, 2025

    ಮಂಗಳೂರು ಪುರಭವನದಲ್ಲಿ ಕೊಂಕಣಿ ಯಕ್ಷಗಾನ

    June 5, 2025

    ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ

    June 5, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.