Subscribe to Updates

    Get the latest creative news from FooBar about art, design and business.

    What's Hot

    ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ

    June 23, 2025

    ಮಂಗಳೂರಿನ ಅಮೃತ ಕಾಲೇಜಿನಲ್ಲಿ ತುಳು ನಾಟಕ ಕಾರ್ಯಾಗಾರ | ಜೂನ್ 24

    June 23, 2025

    ‘ಬನ್ನಂಜೆ 90 – ಉಡುಪಿ ನಮನ’ ಕಾರ್ಯಕ್ರಮದ ಪೂರ್ವಭಾವಿ ಸಭೆ

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಸ್ಕಾರ ಭಾರತೀ ವತಿಯಿಂದ ಹಿರಿಯ ದೈವ ನರ್ತಕ ಕರಿಯ ಅಜಿಲ ಕಡ್ಯ ಇವರಿಗೆ ಸನ್ಮಾನ
    Felicitation

    ಸಂಸ್ಕಾರ ಭಾರತೀ ವತಿಯಿಂದ ಹಿರಿಯ ದೈವ ನರ್ತಕ ಕರಿಯ ಅಜಿಲ ಕಡ್ಯ ಇವರಿಗೆ ಸನ್ಮಾನ

    August 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಸಂಸ್ಕಾರ ಭಾರತೀ ದ.ಕ. ಜಿಲ್ಲೆ, ಪುತ್ತೂರು ತಾಲೂಕು ವಿಭಾಗದ ವತಿಯಿಂದ ದಿನಾಂಕ 29 ಜುಲೈ 2024ರಂದು ಇಡ್ಕಿದು ಗ್ರಾಮದ ಅಳಕೆಮಜಲಿನಲ್ಲಿ ವಾಸಿಸುವ ಹಿರಿಯ ದೈವ ನರ್ತಕ ಶ್ರೀಯುತ ಕರಿಯ ಅಜಿಲ ಕಡ್ಯ ಇವರಿಗೆ ಗುರುಪೂರ್ಣಿಮೆಯ ಅಂಗವಾಗಿ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

    ಹಲವಾರು ವರ್ಷಗಳಿಂದ ತಮ್ಮ ಕಾಯಕವನ್ನು ಶ್ರದ್ಧೆಯಿಂದ ಪಾಲಿಸುತ್ತಾ ಬಂದ ಇವರು; ತಮ್ಮನ್ನು ಗುರುತಿಸಿ, ದಂಪತಿಗೆ ನೀಡಿದ ಅಭಿನಂದನೆಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡುತ್ತಾ “ನಂಬಿದ ದೇವ ದೈವರುಗಳ ದಯೆಯಿಂದ ಅನಕ್ಷರಸ್ಥನಾದ ತನಗೆ ದೈವ ಸೇವೆ ಮಾಡುವ ಭಾಗ್ಯ ಒದಗಿ ಬಂದಿದೆ. ಈ ಮೊದಲೇ ಹಲವಾರು ಪುರಸ್ಕಾರಗಳು ಲಭಿಸಿದ್ದರೂ, ತಮ್ಮ ಮನೆಯಲ್ಲಿಯೇ ಪಡೆದ ಈ ಪುರಸ್ಕಾರವು ಜೀವಮಾನದಲ್ಲಿ ಪ್ರಥಮವಾಗಿದ್ದು, ಅತೀವ ತೃಪ್ತಿ, ಆನಂದವನ್ನು ನೀಡಿದೆ” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಸನ್ಮಾನಿತರ ಪತ್ನಿ ಶ್ರೀಮತಿ ಗಂಗು ಹಾಗೂ ಕುಟುಂಬದ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸನ್ಮಾನಿತ ದಂಪತಿಗಳು ವಿವಿಧ ರೀತಿಯ ಪಾಡ್ದನಗಳನ್ನು ಹಾಡಿ ತುಳುನಾಡಿನ ವಿಶೇಷ ಪರಂಪರೆಯ ಸೊಬಗನ್ನು ಕಾರ್ಯಕ್ರಮಕ್ಕೆ ನೀಡಿದರು.

    ತಾಲೂಕು ಸಂಯೋಜಕರಾದ ವಿದ್ವಾನ್ ದೀಪಕ್ ಕುಮಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಸನ್ಮಾನಿತರಿಗೆ ಹೂವು, ಹಣ್ಣು, ಹಾರ, ಶಾಲು, ಪಂಚೆ, ನಗದು ಇತ್ಯಾದಿಗಳನ್ನು ನೀಡಿ ಗೌರವಿಸಲಾಯಿತು. ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ರೂಪಲೇಖ ಅವರು ಅಭಿನಂದನಾ ಪತ್ರವನ್ನು ವಾಚಿಸಿದರು. ಸದಸ್ಯರಾದ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಇವರು ಎಲ್ಲರನ್ನೂ ಸ್ವಾಗತಿಸಿ, ಸನ್ಮಾನಿತರನ್ನು ಪರಿಚಯಿಸಿದರು. ವಿದುಷಿ ಪ್ರೀತಿಕಲಾ ಅವರ ನೇತೃತ್ವದಲ್ಲಿ ಒಟ್ಟಾಗಿ ಧ್ಯೇಯಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಅಭಿನಂದಿತರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಸದಸ್ಯೆಯರಾದ ಪದ್ಮಾ ಆಚಾರ್ಯ, ಜಯಲಕ್ಷ್ಮಿ ವಿ. ಭಟ್, ವೀಣಾ ಕೊಳತ್ತಾಯ, ಶಂಕರಿ ಶರ್ಮ, ಆಶಾ ರಾವ್, ಕರ್ನಾಟಕ ಜಾನಪದ ಕಲಾಪರಿಷತ್ತು ಪುತ್ತೂರು ವಿಭಾಗದ ಉಪಾಧ್ಯಕ್ಷರಾದ ಶ್ರೀಯುತ ಸುಧಾಕರ ಕುಲಾಲ್ ಹಾಗೂ ಸನ್ಮಾನಿತರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದುಷಿ ನಯನ ವಿ. ರೈಯವರ ಧನ್ಯವಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleವೈವಿಧ್ಯಮಯ ಹಂಸ ಸಾಂಸ್ಕೃತಿಕ ಸೌರಭ ಮತ್ತು ಸಾಧಕೋತ್ತಮರಿಗೆ ಪ್ರತಿಷ್ಠಿತ ‘ಹಂಸ ಸನ್ಮಾನ್ ಪ್ರಶಸ್ತಿ’ ಪ್ರದಾನ
    Next Article ಕಿನ್ನಿಗೋಳಿಯಲ್ಲಿ ‘ವರಾಹ ಅವತಾರ’ ಯಕ್ಷಗಾನ ತಾಳಮದ್ದಳೆ
    roovari

    Comments are closed.

    Related Posts

    ವಿಜಯಶ್ರೀ ಸಬರದ ಹಾಗೂ ಡಿ. ಕೆ. ರಾಜೇಂದ್ರ ಇವರಿಗೆ ಪ್ರೊ. ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ

    June 23, 2025

    ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಕನ್ನಡ ಸಾಹಿತ್ಯ ಅಭಿಯಾನ

    June 23, 2025

    ಪುತ್ತೂರಿನಲ್ಲಿ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹ | ಜೂನ್ 30ರಿಂದ ಜುಲೈ 06

    June 21, 2025

    ಮೈಸೂರಿನಲ್ಲಿ ‘ಡಿ.ವಿ.ಜಿ. ಪ್ರಶಸ್ತಿ 2025’ ಪ್ರದಾನ ಸಮಾರಂಭ | ಜೂನ್ 22

    June 21, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.