Subscribe to Updates

    Get the latest creative news from FooBar about art, design and business.

    What's Hot

    ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ‘ಡೆನ್ನ ಡೆನ್ನಾನ – ಪದ ಪನ್ಕನ’ | ಆಗಸ್ಟ್ 22

    August 21, 2025

    ಮೂಡುಬಿದಿರೆಯಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ

    August 21, 2025

    ಕುವೆಂಪು ಸಭಾಂಗಣದಲ್ಲಿ ‘ಜಾನಪದ ಕಲೆಗಳ ಕಲಾ ಪ್ರದರ್ಶನ ಮತ್ತು ಉಪನ್ಯಾಸ’ | ಆಗಸ್ಟ್ 22

    August 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಂದಾಪುರದ ಕಲಾಕ್ಷೇತ್ರದಲ್ಲಿ ‘ಕೃಷ್ಣಾರ್ಜುನರ ಕಾಳಗ’ ಚಿಣ್ಣರ ತಾಳಮದ್ದಳೆ
    Yakshagana

    ಕುಂದಾಪುರದ ಕಲಾಕ್ಷೇತ್ರದಲ್ಲಿ ‘ಕೃಷ್ಣಾರ್ಜುನರ ಕಾಳಗ’ ಚಿಣ್ಣರ ತಾಳಮದ್ದಳೆ

    August 19, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ: ಕುಂದಾಪುರ ಕಲಾಕ್ಷೇತ್ರದ ಆಶ್ರಯದಲ್ಲಿ ‘ಸಿನ್ಸ್ 1999  ಶ್ವೇತಯಾನ-52’ ಕಾರ್ಯಕ್ರಮದ ಅಂಗವಾಗಿ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದ ಚಿಣ್ಣರ ತಾಳಮದ್ದಳೆ ಕಾರ್ಯಕ್ರಮವು 18 ಆಗಸ್ಟ್ 2024ರಂದು ಕುಂದಾಪುರದ ಕಲಾಕ್ಷೇತ್ರದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಮಾನ್ಯ ಎ. ಎಸ್. ಎನ್. ಹೆಬ್ಬಾರ್‌ ಇವರನ್ನು ಅಭಿನಂದಿಸಿ ಮಾತನ್ನಾಡಿದ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ “ಕಲೆಯಲ್ಲಿ ಸಾತ್ವಿಕವಾದ ಹುಚ್ಚು ಇದ್ದರೆ ಸಂಸ್ಕಾರಯುತ ಸಮಾಜವಾಗಿ ಬೆಳೆಯುವುದಕ್ಕೆ ಸಾಧ್ಯ. ಕಲೆಯನ್ನು ನಾವು ನಮ್ಮೊಳಗೆ ರೂಢಿಸಿಕೊಳ್ಳಬೇಕು. ಮಕ್ಕಳು ಕಲೆಯಲ್ಲಿ ಆಸಕ್ತಿಯನ್ನು ಹೊಂದಲೇ ಬೇಕು. ಆಗ ಮಾತ್ರ ಮಕ್ಕಳು ನಮ್ಮೊಂದಿಗೆ ಸಂಸ್ಕಾರವಂತರಾಗಿ ಉಳಿಯುವುದಕ್ಕೆ ಸಾಧ್ಯ. ಮಾತೇ ಆಡದ ಮಕ್ಕಳೂ ಕಲೆಯಲ್ಲಿ ತೊಡಗಿಸಿಕೊಂಡರೆ ರಂಗವೇರಿ ನಿರರ್ಗಳವಾಗಿ ಮಾತಾಡುವುದು ಸಾಧ್ಯವಾಗುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡಬೇಕು. ಆಗ ಸುಂದರವಾದ ಸಮಾಜ ನಿರ್ಮಾಣವಾಗುವುದಕ್ಕೆ ಸಾಧ್ಯ.” ಎಂದರು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ. ಎಸ್. ಎನ್ ಹೆಬ್ಬಾರ್ “ಯಶಸ್ವೀ ಕಲಾವೃಂದದ ಬೆಳ್ಳಿ ಹಬ್ಬದಲ್ಲಿ 84ರ ಪ್ರಾಯದಲ್ಲಿ ವೇಷ ತೊಟ್ಟು ರಂಗವೇರಿ ಕುಣಿಯುವ ಅವಕಾಶ ಲಭ್ಯವಾದದ್ದು ಅವಿಸ್ಮರಣೀಯ. ಯಕ್ಷಗಾನ ಕಲೆ ರಾಷ್ಟ್ರೀಯ ಕಲೆಯಾಗಿ ಬಿಂಬಿತವಾಗಬೇಕು. ಅತ್ಯದ್ಭುತ ಕಲೆಯಾದ ಯಕ್ಷಗಾನವು ವಿಶ್ವ ಮಾನ್ಯ. ಸರಕಾರದಲ್ಲಿನ ಅಧಿಕಾರಿಗಳಿಗೆ ಯಕ್ಷಗಾನ ಕಲೆಯ ಬಗೆಗಿನ ವಿಶೇಷತೆ ಅರ್ಥವಾಗಬೇಕು. ಯಕ್ಷಗಾನ ಕಲೆಯು ಭಾಷಾ ಶುದ್ಧಿಯೊಂದಿಗೆ ಬದುಕಿನ ಮೌಲ್ಯವನ್ನು ತಿಳಿಸುವ ಅದ್ಭುತ ಕಲೆ. ಅದು ಚಿಣ್ಣರ ಮೂಲಕ ಮುಂದೆ ಸಾಗಬೇಕು.” ಎಂದರು.

    ಉದ್ಯಮಿಗಳಾದ ರಾಜೇಶ್ ಕಾವೇರಿ, ಸನತ್ ರೈ, ದಾಮೋದರ ಪೈ ಉಪಸ್ಥಿತರಿದ್ದರು. ಬಳಿಕ ‘ಕೃಷ್ಣಾರ್ಜುನರ ಕಾಳಗ’ ಚಿಣ್ಣರ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Article‘ಕೊಡವ ಕಥೆ ಜೊಪ್ಪೆ’ಗೆ ಕಥೆಗಳ ಆಹ್ವಾನ | 20 ಸೆಪ್ಟೆಂಬರ್
    Next Article ಬೆಂಗಳೂರಿನ ಸಮುಚ್ಚಯ ಭವನದಲ್ಲಿ ‘ತಿಂಗಳ ನಾಟಕ ಸಂಭ್ರಮ’ | ಆಗಸ್ಟ್ 22
    roovari

    Comments are closed.

    Related Posts

    ಎಡನೀರಿನಲ್ಲಿ ಗಿರಿಜಾಕಲ್ಯಾಣ ಯಕ್ಷಗಾನ ಪ್ರದರ್ಶನ

    August 20, 2025

    ಎಡನೀರು ಶ್ರೀಮಠದಲ್ಲಿ ಯಕ್ಷಗಾನ ತಾಳಮದ್ದಲೆ

    August 20, 2025

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಪೂತನಿ’ ಏಕವ್ಯಕ್ತಿ ನಾಟಕ ಪ್ರದರ್ಶನ | ಆಗಸ್ಟ್ 22

    August 20, 2025

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಮೂರು ದಿನಗಳ ಭಜನೆ, ಹರಿಸಂಕೀರ್ತನೆ, ಗಮಕ ಮತ್ತು ಹವ್ಯಾಸಿ ತಂಡಗಳ ತಾಳಮದ್ದಳೆ

    August 20, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.