Subscribe to Updates

    Get the latest creative news from FooBar about art, design and business.

    What's Hot

    ಉಪನ್ಯಾಸಕ, ಸಾಹಿತಿ ಡಾ. ಜಮೀರ್ ಅಹಮದ್ ಇವರಿಗೆ 2025ನೇ ಸಾಲಿನ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’

    June 27, 2025

    ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾರಂಭ | ಜೂನ್ 28

    June 27, 2025

    ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭ – 2025

    June 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪೇಜಾವರ ಸದಾಶಿವರಾಯರು ವಾಸವಿದ್ದ ಕಟೀಲಿನ ಮನೆಯ ಅಂಗಳದಲ್ಲಿ ‘ನೆನಪು’ ಕಾರ್ಯಕ್ರಮ
    Literature

    ಪೇಜಾವರ ಸದಾಶಿವರಾಯರು ವಾಸವಿದ್ದ ಕಟೀಲಿನ ಮನೆಯ ಅಂಗಳದಲ್ಲಿ ‘ನೆನಪು’ ಕಾರ್ಯಕ್ರಮ

    January 28, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಟೀಲು : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಪೇಜಾವರ ಸದಾಶಿವರಾಯರು ವಾಸವಿದ್ದ ಕಟೀಲಿನ ನೂರ ಇಪ್ಪತ್ತೈದು ವರುಷಗಳ ಹಿಂದಿನ ಮನೆಯ ಅಂಗಳದಲ್ಲಿ ‘ಪೇಜಾವರ ಸದಾಶಿವ ರಾವ್ ನೆನಪು’ ಕಾರ್ಯಕ್ರಮ ದಿನಾಂಕ 26 ಜನವರಿ 2025ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಇವರು ಮಾತನಾಡಿ “ಕನ್ನಡದ ಮೊದಲ ನವ್ಯ ಕವಿ, 27ನೇ ವಯಸ್ಸಿಗೇ ಇಟೆಲಿಯಲ್ಲಿ ನಿಧನರಾದ ಪೇಜಾವರ ಸದಾಶಿವ ರಾಯರು ಕನ್ನಡದ ವಿಶಿಷ್ಟ ಸಾಹಿತಿಯಾಗಿದ್ದಾರೆ. ಅವರನ್ನು ನೆನಪಿಸುವ, ಅವರ ಸಾಹಿತ್ಯವನ್ನು ಇನ್ನಷ್ಟು ಮಂದಿಗೆ ತಲುಪಿಸುವ ಕೆಲಸಗಳು ಆಗಬೇಕಾಗಿದೆ. ಐವತ್ತೆರಡು ಕವಿತೆ, ಮೂರು ನಾಟಕ, ಒಂಭತ್ತು ಸಣ್ಣ ಕಥೆಗಳು, ವಿಮರ್ಶೆ ಬರಹಗಳ ಮೂಲಕ ಶ್ರೇಷ್ಟ ಸಾಧನೆ, ಕೆಲಸ ಮಾಡಿದದವರು ಪೇಜಾವರರು. ಇಟಲಿ ಭಾಷೆಯನ್ನು ಕಲಿತು ಪಿ.ಎಚ್‌.ಡಿ. ಪದವಿಯನ್ನು ಇಟಲಿಯಲ್ಲಿ ಪಡೆದು, ಅಲ್ಲಿ ಅನಾರೋಗ್ಯದಿಂದ ನಿಧನರಾದ ಸದಾಶಿವರ ರಾಯರು, ಇಟೆಲಿ ಭಾಷೆಯಲ್ಲೂ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ ಆಗಿನ ಅನೇಕ ಯುವ ಕವಿಗಳ ಕವನ ಸಂಕಲನವನ್ನು ಪ್ರಕಟಿಸಿದವರು. ವಿದ್ಯಾರ್ಥಿಯಾಗಿದ್ದಾಗಲೇ ಮಂಗಳೂರಿನಲ್ಲಿ ಕಾಶಿ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವಾಗ, ಕನ್ನಡ ಸಂಘಗಳನ್ನು ಕಟ್ಟಿ ಕನ್ನಡ, ಸಾಹಿತ್ಯ ಸೇವೆ ಮಾಡಿದವರು” ಎಂದು ಹೇಳಿದರು.

    ಪೇಜಾವರರ ಕಥೆಯನ್ನು ಶ್ರೀಮತಿ ಶೈಲಜಾ ಓದಿದರೆ, ಕವನಗಳನ್ನು ಜ್ಯೋತಿ ಉಡುಪ ಕಟೀಲು, ಉಷಾ ಪ್ರಸಾದ್, ದಿನೇಶ್ ಕೊಡೆತ್ತೂರು ಹಾಡಿದರು. ಪೇಜಾವರ ಸದಾಶಿವರ ರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು “ಹಿಂದೆ ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು. ಆದರೆ ಸಾಹಿತ್ಯದ ಚಟುವಟಿಕೆಗಳು ಹೆಚ್ಚು ನಡೆಯುತ್ತಿದ್ದವು. ಈಗ ವಿದ್ಯಾವಂತರು ಜಾಸ್ತಿ ಇದ್ದಾರೆ. ಆದರೆ ಕನ್ನಡ ಭಾಷೆಗೆ, ಸಾಹಿತ್ಯ ಓದುವುದಕ್ಕೆ, ಕನ್ನಡ ಶಾಲೆಗಳಿಗೆ ಸಿಗುವ ಪ್ರೋತ್ಸಾಹ ಸಾಕಾಗುತ್ತಿಲ್ಲ. ಸರಕಾರವೂ ಈ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಹಿರಿಯ ಸಾಹಿತಿಗಳನ್ನು ಅವರ ಸಾಹಿತ್ಯವನ್ನು ಇವತ್ತಿನ ಮಂದಿಗೆ ಪರಿಚಯಿಸುವ ಕೆಲಸ ಹೆಚ್ಚಾಗಬೇಕಾಗಿದೆ” ಎಂದರು.

    ದ.ಕ. ಜಿಲ್ಲಾ ಕ.ಸಾ.ಪ. ಕಾರ್ಯದರ್ಶಿ ವಿನಯಾಚಾರ್ ಮಾತನಾಡಿ “ಸಣ್ಣ ವಯಸ್ಸಿಗೇ ಕನ್ನಡ ಸಾಹಿತ್ಯ ಕ್ಷೇತ್ರ ಗುರುತಿಸುವಂತಹ ಕೆಲಸ ಮಾಡಿದ ಪೇಜಾವರರನ್ನು ಅವರಿದ್ದ ಮನೆಯಲ್ಲೇ ಸ್ಮರಿಸಿ ಸಾಹಿತ್ಯ ಪರಿಷತ್ತು ಕೂಡ ಧನ್ಯತೆಯನ್ನು ಪಡೆದಿದೆ” ಎಂದರು. ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕ.ಸಾ.ಪ. ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಹೆರಿಕ್ ಪಾಯಸ್, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಹೋಬಳಿ ಘಟಕಾಧ್ಯಕ್ಷ ಜೊಸ್ಸಿ ಪಿಂಟೋ, ಡಾ. ಪುರುಷೋತ್ತಮ ಕೆ.ವಿ, ದೇವು ಹನೆಹಳ್ಳಿ, ಸದಾಶಿವರಾಯರ ಕುಟುಂಬಿಕರಾದ ಪ್ರಭಾಕರ ರಾವ್ ಮತ್ತಿತರರಿದ್ದರು. ರಾಜಶೇಖರ್ ಎಸ್. ನಿರೂಪಿಸಿದರು. ಹಳೆಯ ಮನೆಯಲ್ಲಿ ಕಾಪಿಡಲಾದ ಸಾಹಿತಿ ಪೇಜಾವರರು ಬಳಸುತ್ತಿದ್ದ ಕೊಠಡಿ, ಆಸನಗಳು, ಕಪಾಟುಗಳನ್ನು ಸಾಹಿತ್ಯಾಸಕ್ತರು ವೀಕ್ಷಿಸಿದರು.

    Literature
    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರಮುಖ ವಕ್ತಾರ – ಎಂ. ಎನ್. ವ್ಯಾಸರಾವ್
    Next Article ಕಾಸರಗೋಡಿನಲ್ಲಿ ಪುಸ್ತಕಗಳ ಕೊಡುಗೆಗಳಿಗೆ ಆಹ್ವಾನ
    roovari

    Add Comment Cancel Reply


    Related Posts

    ಉಪನ್ಯಾಸಕ, ಸಾಹಿತಿ ಡಾ. ಜಮೀರ್ ಅಹಮದ್ ಇವರಿಗೆ 2025ನೇ ಸಾಲಿನ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’

    June 27, 2025

    ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾರಂಭ | ಜೂನ್ 28

    June 27, 2025

    ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭ – 2025

    June 27, 2025

    ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 5ನೇ ಸಮ್ಮೇಳನ | ಜೂನ್ 29

    June 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.