Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ‘ಅಪ್ಪ ನಾನು ಕಂಡಂತೆ’ ಶಾಂತರಸರ ನೆನಪುಗಳು
    Article

    ಪುಸ್ತಕ ವಿಮರ್ಶೆ | ‘ಅಪ್ಪ ನಾನು ಕಂಡಂತೆ’ ಶಾಂತರಸರ ನೆನಪುಗಳು

    April 2, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಾಂತರಸರ ಜನ್ಮ ಶತಾಬ್ದಿ ಆಚರಿಸುವ ಹೊತ್ತಿನಲ್ಲಿಯೇ ‘ಸಂಗಾತ ಪುಸ್ತಕ’ವು ಎಚ್.ಎಸ್. ಮುಕ್ತಾಯಕ್ಕ ಇವರ ‘ಅಪ್ಪ ನಾನು ಕಂಡಂತೆ’ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯನ್ನು ನಾವೆಲ್ಲರೂ ಓದುವಂತಾಗಬೇಕು. ಇದು ಶಾಂತರಸರಿಗೆ ನಾವು ನಿಜವಾಗಿಯೂ ಸಲ್ಲಿಸುವ ಗೌರವದ ಬಗೆಯೂ ಆಗಿದೆ.

    ಈ ಕೃತಿಯಲ್ಲಿ ಮುಕ್ತಾಯಕ್ಕನವರು ಶಾಂತರಸರ ನೆನಪುಗಳನ್ನು ಮೊಗೆ ಮೊಗೆದು ಕೊಟ್ಟಿದ್ದಾರೆ. ನಾವು ಈವರೆಗೂ ಶಾಂತರಸರ ಕವಿತೆ, ಬರಹ, ಭಾಷಣಗಳ ಮೂಲಕ ಅವರ ವ್ಯಕ್ತಿತ್ವವನ್ನು ಗಮನಿಸಿದ್ದೇವೆ. ಆದರೆ ಮುಕ್ತಾಯಕ್ಕನವರು ಮಾತ್ರ ಬರೆಯಬಹುದಾದ, ನಮಗೆ ಅಪರಿಚಿತವಾದ ಅಪರೂಪದ ನೂರಾರು ಖಾಸಗಿ ನೆನಪುಗಳನ್ನು ಇದರಲ್ಲಿ ದಾಖಲಿಸಿದ್ದಾರೆ. ಅವು ಖಾಸಗಿ ನೆನಪುಗಳಾಗಿದ್ದರೂ ಶಾಂತರಸರ ಸಾಹಿತ್ಯಕ ವ್ಯಕ್ತಿತ್ವ ನಿರ್ಮಾಣಗೊಂಡ ಬಗೆ, ಆ ಕಾಲಘಟ್ಟದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಗಳ ಜನ ಜೀವನ, ಕುಟುಂಬ ಸಂರಚನೆ, ಸಾಮಾಜಿಕ ಚಿತ್ರಣಗಳ ಜೊತೆಗೆ ಆ ಕಾಲದ ಒಂದು ಮನೋಭಿತ್ತಿಯನ್ನು ನಮ್ಮ ಗ್ರಹಿಕೆಗೆ ನಿಲುಕುವ ಹಾಗೆ ಮಾಡುತ್ತವೆ.

    ಮುಕ್ತಾಯಕ್ಕನವರು ಗಜಲ್ ಗಳನ್ನು ಆರ್ಧವಾಗಿ, ತೀವ್ರವಾಗಿ ಬರೆಯುವದು ಅದನ್ನು ಓದಿದ ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಗದ್ಯವನ್ನು ಕೂಡ ಅಷ್ಟೇ ಸೊಗಸಾಗಿ ಬರೆಯಬಲ್ಲರು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಅವರ ಇಲ್ಲಿನ ಬರಹಗಳಿಗೆ ಮಾಂತ್ರಿಕ ಗುಣವಿದೆ. ಒಂದು ಲಯವಿದೆ. ರೂಪಕಗಳು ಸಹಜವಾಗಿ ಹೂ ಅರಳಿದಂತಿವೆ. ತಮ್ಮ ಅನುಭವಗಳು ಎಲ್ಲೂ ಮುಕ್ಕಾಗದಂತೆ ಚಿತ್ರಿಸುವ ಕುಶರಿತನವಿದೆ. ಗದ್ಯಕಾವ್ಯದಂತೆ ನಮ್ಮನ್ನು ಓದಿಸಿಕೊಳ್ಳುತ್ತವೆ. ಆವರಿಸಿಕೊಳ್ಳುತ್ತವೆ. ಹನಿಗಣ್ಣಾಗಿಸುತ್ತವೆ. ಏಕಕಾಲದಲ್ಲಿ ವಿಷಾದವನ್ನೂ, ಕಚಗುಳಿಯನ್ನೂ, ಜೀವನದ ಹೊಸದೇ ನೋಟ, ಕಾಣ್ಕೆಯ ದರ್ಶನವನ್ನೂ ಮಾಡಿಸುತ್ತವೆ.

    ಅಪ್ಪ ನಾನು ಕಂಡಂತೆ
    (ಶಾಂತರಸರ ನೆನಪುಗಳು)
    ಲೇಖಕರು : ಎಚ್.ಎಸ್. ಮುಕ್ತಾಯಕ್ಕ
    ಬೆಲೆ : 250 ರೂ.
    ಸಂಪರ್ಕ : 9341757653

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ ಫ್ಲೈ ಓವರ್ ತಳಭಾಗದಲ್ಲಿರುವ ಸಾಂಸ್ಕೃತಿಕ ವೇದಿಕೆಯಲ್ಲಿ ‘ಉದಯರಾಗ – 61’ | ಏಪ್ರಿಲ್ 06
    Next Article ಅಂಬಲಪಾಡಿ ದೇವಾಲಯದ ಸಭಾಂಗಣದಲ್ಲಿ ‘ರಂಗ ತರಬೇತಿ ಶಿಬಿರ 2025’ | ಏಪ್ರಿಲ್ 12ರಿಂದ 20
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.