ಯಲ್ಲಾಪುರ : ತುರುವೆಕೆರೆಯ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವೃತದ ಪ್ರಯುಕ್ತ ಶ್ರೀಗಳ ಸಮ್ಮುಖದಲ್ಲಿ ಕರ್ಣಾಟಕ ಕಲಾ ಸನ್ನಿಧಿ ತೇಲಂಗಾರ ಹಾಗೂ ಅತಿಥಿ ಕಲಾವಿದರಿಂದ ತಾಳಮದ್ದಲೆ ಸೇವೆಯನ್ನು ದಿನಾಂಕ 25 ಜುಲೈ 2025ರಂದು ಸಂಜೆ 4-30 ಗಂಟೆಗೆ ಚಂದಗುಳಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಕವಿ ಅಮೃತ ಸೋಮೇಶ್ವರ ವಿರಚಿತ ‘ಗಂಗಾವತರಣ’ ತಾಳಮದ್ದಲೆಯ ಹಿಮ್ಮೇಳದಲ್ಲಿ ದಿನೇಶ ಭಟ್ಟ ಯಲ್ಲಾಪುರ, ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ, ಸುಬ್ರಹ್ಮಣ್ಯ ಭಟ್ಟ ಚಂದಗುಳಿ ಹಾಗೂ ಮುಮ್ಮೇಳದಲ್ಲಿ ನರಸಿಂಹ ಭಟ್ಟ ಕುಂಕಿಮನೆ, ನಿರಂಜನ ಜಾಗನಳ್ಳಿ, ಶ್ರೀಧರ ಅಣಲಗಾರ ಮತ್ತು ದೀಪಕ ಭಟ್ಟ ಕುಂಕಿ ಇವರುಗಳು ಸಹಕರಿಸಲಿದ್ದಾರೆ.