Subscribe to Updates

    Get the latest creative news from FooBar about art, design and business.

    What's Hot

    ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 | ಸೆಪ್ಟೆಂಬರ್ 22ರಿಂದ ಅಕ್ಟೋಬರ್ 01

    September 19, 2025

    ಯಶಸ್ವಿ ಕಲಾವೃಂದದ ಹೂವಿನಕೋಲು ಅಭಿಯಾನ | 22 ಸೆಪ್ಟೆಂಬರ್

    September 19, 2025

    ಅಭಿನಯ ಭಾರತಿಯಿಂದ ನಾಟಕ ಪ್ರದರ್ಶನಕ್ಕೆ ಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 30

    September 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಪಾರ್ವತಿ ಜಿ. ಐತಾಳರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’
    Article

    ಪುಸ್ತಕ ವಿಮರ್ಶೆ | ಪಾರ್ವತಿ ಜಿ. ಐತಾಳರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’

    September 19, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಡಾ. ಪಾರ್ವತಿ ಜಿ. ಐತಾಳ್ ರವರು ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕರು. ಕವನ, ಕತೆ, ವ್ಯಕ್ತಿ ಚಿತ್ರಣ, ಆತ್ಮಕಥೆ, ಕಾದಂಬರಿ, ಮಕ್ಕಳ ನಾಟಕ, ರಂಗ ವಿಮರ್ಶೆ, ಸಂಪಾದನೆ ಎಂದು ವಿವಿಧ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವವರು. ಕನ್ನಡ, ಇಂಗ್ಲೀಷ್, ಮಲೆಯಾಳಂ, ತುಳು, ಹಿಂದಿ ಎಂದು ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿರುವುದೇ ಅಲ್ಲದೆ ಈ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಕೊಡುಗೆ ನೀಡಿರುವವರು. ಶಿವರಾಮ ಕಾರಂತರು, ವಾಸುದೇವನ್ ನಾಯರ್, ನಿಸಾರ್ ಅಹಮದ್, ಕೆ.ವಿ. ತಿರುಮಲೇಶರಂತಹ ಮಹತ್ವಪೂರ್ಣ ಸಾಹಿತಿಗಳ ಕೃತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಯಶಸ್ವಿಯಾಗಿ ಅನುವಾದಿಸಿರುವವರು.

    ರ್ಪಾರ್ವತಿ ಜಿ. ಐತಾಳರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಇದೇ ವರ್ಷ ಶ್ರೀರಾಮ ಪ್ರಕಾಶನದಿಂದ ಪ್ರಕಟವಾಗಿರುವ 136 ಪುಟಗಳ‌ ಕೃತಿ. ಪ್ರಸ್ತುತದಲ್ಲಿ ಮಲೆಯಾಳಂನಲ್ಲಿ ಬರೆಯುತ್ತಿರುವ 11 ಮಂದಿ ಲೇಖಕರ 17 ಕಥೆಗಳಿವೆ. ಮುಗಿಯದ ಯಾತ್ರೆಗಳಲ್ಲಿ ತಿಳಿಯಾದ ನೀಲಾಕಾಶಕ್ಕಾಗಿ ಹಂಬಲಿಸುವ ಮಹಾದೇವನನ್ನು ಆವರಿಸುವ ನಿಜಾನಂದದ ಲಹರಿಯ ಕಥೆ, ಪಿ. ಸುರೇಂದ್ರರವರ ‘ನೀಲಾಕಾಶ’ವೇ ಮೊದಲ ಕಥೆ. ಸುಷ್ಮೇಶ್ ಚಂದ್ರೋತ್ ರವರ ‘ಇನ್ನೊಂದು ವ್ಯಕ್ತಿ ಬರುವುದನ್ನು ಮರೆಯಿಂದ ನೋಡಿದಾಗ’ ನಿಗೂಢತೆಯ ದಟ್ಟ ಛಾಯೆಯ ಕಥೆ. ಕೆ.ಎಸ್.ಎನ್. ಕಳರಿಕ್ಕಲ್ ರ ಕಥೆ ‘ತಡವಾಗಿ ಓಡುವ ರೈಲು ಗಾಡಿಗಳು’ ಅನಾವರಣಗೊಳಿಸುವುದು ಓದಿ ಪ್ರತಿಭಾವಂತರಾಗಿ ವಿದೇಶಗಳಲ್ಲಿರುವ ಮಕ್ಕಳ ತಾಯ್ತಂದೆಯರು ಅನುಭವಿಸುವ ಒಂಟಿತನದ ಯಾತನೆಯನ್ನು. ದೀನ ಅಸಹಾಯಕ ಹೆಣ್ಣು ಹೊಟ್ಟೆಪಾಡಿಗಾಗಿ ಮಾಡುವ ವೇಶ್ಯಾವೃತ್ತಿಯಲ್ಲಿನ ದಯನೀಯತೆಯ ಅಭಿವ್ಯಕ್ತಿ ನಕುಲನ್ ರವರ ‘ಸುಖ ಒಂದು ಮಿಥ್ಯೆ’ ಕಥೆಯಲ್ಲಿದೆ. ಶಾಹಿನಾ ಇ.ಕೆ.ಯವರ ಪುಟ್ಟ ಕಥೆ ‘ಗಾತ್ರದಲ್ಲಿ ಚಿಕ್ಕದಾದರೂ ಪರಿಣಾಮದಲ್ಲಿ ದೊಡ್ಡದು’ ಎಂಬಂತೆ ಸಂದೇಶವನ್ನು  ನೇರವಾಗಿ ಗುರಿ ಮುಟ್ಟಿಸಿದೆ.

    – ಉಮಾದೇವಿ ಉರಾಳ್ ತೀರ್ಥಹಳ್ಳಿ

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Article‘ನವರಸಗಳಲ್ಲಿ ನವರಾತ್ರಿ’ ವೈಶಿಷ್ಟಪೂರ್ಣ ದಸರಾ ಕವಿಗೋಷ್ಠಿ ಕಾರ್ಯಕ್ರಮ | ಸೆಪ್ಟೆಂಬರ್ 22
    Next Article ಅಭಿನಯ ಭಾರತಿಯಿಂದ ನಾಟಕ ಪ್ರದರ್ಶನಕ್ಕೆ ಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 30
    roovari

    Add Comment Cancel Reply


    Related Posts

    ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 | ಸೆಪ್ಟೆಂಬರ್ 22ರಿಂದ ಅಕ್ಟೋಬರ್ 01

    September 19, 2025

    ಯಶಸ್ವಿ ಕಲಾವೃಂದದ ಹೂವಿನಕೋಲು ಅಭಿಯಾನ | 22 ಸೆಪ್ಟೆಂಬರ್

    September 19, 2025

    ಅಭಿನಯ ಭಾರತಿಯಿಂದ ನಾಟಕ ಪ್ರದರ್ಶನಕ್ಕೆ ಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 30

    September 19, 2025

    ‘ನವರಸಗಳಲ್ಲಿ ನವರಾತ್ರಿ’ ವೈಶಿಷ್ಟಪೂರ್ಣ ದಸರಾ ಕವಿಗೋಷ್ಠಿ ಕಾರ್ಯಕ್ರಮ | ಸೆಪ್ಟೆಂಬರ್ 22

    September 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.