Subscribe to Updates

    Get the latest creative news from FooBar about art, design and business.

    What's Hot

     ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ವಾರ್ಷಿಕೋತ್ಸವ

    October 23, 2025

    ಮಕ್ಕಳ ಮೇಳದ 50ರ ಸಂಭ್ರಮದ ‘ಸುವರ್ಣ ಪರ್ವ’ ಸಮಾರೋಪ ಸಮಾರಂಭ

    October 23, 2025

    ವೈವಿಧ್ಯಮಯ ಸಂಗೀತ ಶೈಲಿಗಳಿಂದ ಪ್ರೇಕ್ಷಕರ ಮನ ಸೆಳೆದ ಕಾಂಚನಾ ಸಹೋದರಿಯರು

    October 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಾಸನದ ಸಂಸ್ಕೃತ ಭವನದಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಹಾಗೂ ಅಂತರಾಜ್ಯಮಟ್ಟದ ಕವಿಗೋಷ್ಠಿ
    Book Release

    ಹಾಸನದ ಸಂಸ್ಕೃತ ಭವನದಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಹಾಗೂ ಅಂತರಾಜ್ಯಮಟ್ಟದ ಕವಿಗೋಷ್ಠಿ

    October 23, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಾಸನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ವತಿಯಿಂದ ದಿನಾಂಕ 02 ನವೆಂಬರ್ 2025 ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳುವ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಬಾ.ನಂ. ಲೋಕೇಶ್ ವಹಿಸಲಿದ್ದು, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ಸಾಹಿತಿ ಗೊರೂರು ಅನಂತರಾಜುರವರು ಸಾಹಿತಿ ಎಚ್.ಎಸ್. ಬಸವರಾಜುರವರ ಬಿಡಿ ಲೇಖನಗಳ ‘ಗುಚ್ಛ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಸಾಹಿತಿ ಬಿ.ಎಂ. ಭಾರತಿ ಹಾದಿಗೆಯವರು ಯುವ ಸಾಹಿತಿ ವಾಸು ಸಮುದ್ರವಳ್ಳಿಯವರ ವಿಮರ್ಶಾ ಲೇಖನಗಳ ‘ಒಳಗಣ್ಣು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಕವಯಿತ್ರಿ ವಾಣಿ ಮಹೇಶ್‌ರವರು ಸಾಹಿತಿ ಹೊ.ರಾ. ಪರಮೇಶ್‌ರವರ ‘ಸಜ್ಜನ ಕನ್ನಡ ಕವಿಗಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಕವಯಿತ್ರಿ ಕೆ.ಸಿ. ಗೀತಾರವರು ಚಿಕ್ಕಮಗಳೂರಿನ ಸಾಹಿತಿ ದೀಪಕ್ ನಿಡಘಟ್ಟರವರ ಪತ್ತೆದಾರಿ ಕಾದಂಬರಿ ‘ಮಾಯಾಗಿರಿಯ ನೆರಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ.

    ನಂತರ ನಡೆಯುವ ಅಂತರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ರುಮಾನ ಜಬೀರ್, ಎಚ್.ಬಿ. ಚೂಡಾಮಣಿ, ಚಂದನ ಚನ್ನರಾಯಪಟ್ಟಣ, ಪರಮಾನಂದ ದಳಪತಿ ಮುಂಬಯಿ, ವೆಂಕಮ್ಮ ಡಿ. ಗಾಂವ್ಕರ್ ದಾಂಡೇಲಿ, ಚಂದ್ರಕಲಾ ಎಂ. ಆಲೂರು, ಲಲಿತ ಎಸ್. ಸಕಲೇಶಪುರ, ರೂಪೇಶ್ ಸಾಗರ ಶಿವಮೊಗ್ಗ, ಮಲ್ಲೇಶ್ ಜಿ. ಹಾಸನ, ಚಂದ್ರು ಪಿ. ಗೌಡ ಆಲೂರು, ಯು.ಎಸ್. ಅಯ್ಯಪ್ಪ ಮಂತ್ರಾಲಯ, ತಾಸೀನಾ ರಝಾಕ್ ಬೇಲೂರು, ಲತಾ ಎ. ಆರ್. ಬಾಳೆಹೊನ್ನೂರು, ವೀರೇಶ್ ಎಸ್. ಕುಬಸದ್ ಅಣ್ಣಿಗೇರಿ, ಮಂಜುನಾಥ್ ಎಚ್. ಚಿರಕನಹಳ್ಳಿ, ಗೀತಾ ವಿ. ಹಸ್ಮಕಲ್ ತರೀಕೆರೆ, ನವ್ಯ ಯಶವಂತ ಚಿಕ್ಕೋಟೆ, ಜಯಶಂಕರ್ ಬೆಳಗುಂಬ, ಸಿಲ್ವೆಸ್ಟರ್ ಕ್ರಾಸ್ತ ಬಿಳಗವಳ್ಳಿ, ರಾಣಿ ರವೀಂದ್ರ ಕೊಡಗು, ಪೂಜಾ ಬಿ. ಕೊಂಡಿಕೊಪ್ಪ ಧಾರವಾಡ, ಭಾರತಿ ಎಚ್.ಎನ್. ಹಾಸನ, ಪಾತರಾಜು ಎಸ್.ಡಿ. ಹಾಸನ, ಡಾ. ರಕ್ಷಾ ಸೇರಿದಂತೆ ಹಲವು ಕವಿಗಳು ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಧಾರವಾಡದ ಸಾಹಿತ್ಯ ಭವನದಲ್ಲಿ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ | ಅಕ್ಟೋಬರ್ 26
    Next Article ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸಿದ್ಧತಾ ಸಭೆ
    roovari

    Add Comment Cancel Reply


    Related Posts

     ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ವಾರ್ಷಿಕೋತ್ಸವ

    October 23, 2025

    ಮಕ್ಕಳ ಮೇಳದ 50ರ ಸಂಭ್ರಮದ ‘ಸುವರ್ಣ ಪರ್ವ’ ಸಮಾರೋಪ ಸಮಾರಂಭ

    October 23, 2025

    ವೈವಿಧ್ಯಮಯ ಸಂಗೀತ ಶೈಲಿಗಳಿಂದ ಪ್ರೇಕ್ಷಕರ ಮನ ಸೆಳೆದ ಕಾಂಚನಾ ಸಹೋದರಿಯರು

    October 23, 2025

    ಮಂಗಳೂರಿನ ಶ್ರೀರಾಮಕೃಷ್ಣ ಮಠದಲ್ಲಿ ‘ದಾಸಸುಧಾ’ | ಅಕ್ಟೋಬರ್ 25

    October 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.