Subscribe to Updates

    Get the latest creative news from FooBar about art, design and business.

    What's Hot

    ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ -2025 | ನವೆಂಬರ್ 15

    November 12, 2025

    ಮೂಡುಬಿದಿರೆಯಲ್ಲಿ ಕ.ಸಾ.ಪ.ದಿಂದ ‘ಸಂಸ್ಕೃತಿ ಚಿಂತನ ಸಮಾರಂಭ’ | ನವೆಂಬರ್ 16

    November 12, 2025

    ಮಲೆನಾಡ ಬರಹಗಾರರ ವೇದಿಕೆಯಿಂದ ‘ಕಾಡಸುರಗಿ’ ಕೃತಿ ಬಿಡುಗಡೆ | ನವಂಬರ್‌ 15

    November 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಬೆಳ್ಳಂಬೆಳಗೆ ಕವಿಗೋಷ್ಠಿ’
    Literature

    ಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಬೆಳ್ಳಂಬೆಳಗೆ ಕವಿಗೋಷ್ಠಿ’

    November 12, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಉಸಿರು ಕೋಟ ಸಹಕಾರದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ರಾಜ್ಯೋತ್ಸವದ ಅಂಗವಾಗಿ ದಿನಾಂಕ 02 ನವೆಂಬರ್ 2025ರಂದು ಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಬೆಳ್ಳಂಬೆಳಗೆ ಕವಿಗೋಷ್ಠಿ’ ನಡೆಯಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಂಸ್ಕೃತಿಕ ಚಿಂತಕ ಡಾ. ಬಾಲಕೃಷ್ಣ ಶೆಟ್ಟಿ ಇವರು ಮಾತನಾಡಿ “ಒಬ್ಬ ಕವಿಯಾದವನು ಗುಣಗ್ರಾಹಿಯಾಗಿರಬೇಕು ತನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿರಬೇಕು. ಜೊತೆಗೆ ಇತರ ಕವಿಗಳ ಕವಿತೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಒಂದು ಪರಿಪಕ್ವವಾದಂತಹ ಕೃತಿ ಮೂಡಬಲ್ಲದು. ಆ ದಿಸೆ ಯಲ್ಲಿ ಎಲ್ಲ ಕವಿಗಳು ಜಾಗೃತ ರಾಗಬೇಕು” ಎಂದು ಕರೆ ನೀಡಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ ಕುಂದರ್ ಬಾರಿಕೆರೆಯವರು “ಇದೊಂದು ಅಪೂರ್ವವಾದ ಕಾರ್ಯಕ್ರಮ ಬೆಳಿಗ್ಗೆ 6-00 ಗಂಟೆಗೆ ಕವಿಗೋಷ್ಠಿ ನಡೆಯುತ್ತಿರುವುದು ಇದೇ ಮೊದಲ ಬಾರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮವನ್ನು ನಿರೂಪಿಸಿದರು. ಚೇಂಪಿ ದಿನೇಶ್ ಆಚಾರ್ಯ, ರವೀಂದ್ರ ಶೆಟ್ಟಿ ಕಾರ್ಯಕ್ರಮವನ್ನು ಸಂಘಟಿಸಿದರು.

    ಬಳಿಕ ಕವಿಗಳಾದ ಅಲ್ತಾರು ನಾಗರಾಜ್‌, ಅಶೋಕ್ ತೆಕ್ಕಟ್ಟೆ, ಲಿಖಿತ ಶೆಟ್ಟಿ ಬೂದಾಡಿ, ಮಂಜುನಾಥ ಗುಂಡ್ಮಿ, ಮಂಜುನಾಥ ಮರವಂತೆ, ಮಂಜುನಾಥ ಕಾರ್ತಟ್ಟು ವಾಣಿಶ್ರೀ ಅಶೋಕ ಐತಾಳ್, ನಾಗೇಂದ್ರ ಆಚಾರ್ ಚಿತ್ರಪಾಡಿ, ರವಿಕಿರಣ್ ಕೋಟ, ಆಶಾ ನೇರಳಕಟ್ಟೆ, ಕೆ.ಜಿ. ಸೂರ್ಯನಾರಾಯಣ ಚಿತ್ರಪಾಡಿ, ಕುಸುಮಾವತಿ ಸಿ. ಶೆಟ್ಟಿ ನೇರಳಕಟ್ಟೆ, ಸುಪ್ರೀತಾ ಪುರಾಣಿಕ್, ತನುಜಾ ಎನ್. ಕೋಟೇಶ್ವರ, ಕಾ. ಶ್ರೀ ಶಾಂಭವಿ ರಂಜಿತ್ ಕಮಲಶಿಲೆ ಮೊದಲಾದವರು ಕವನವನ್ನು ವಾಚಿಸಿದರು. ಕಾರ್ಯಕ್ರಮಕ್ಕೆ ರವೀಂದ್ರ ಶೆಟ್ಟಿ ಮತ್ತು ಅನಂತಕೃಷ್ಣ ಐತಾಳ್ ಸಹಕರಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Article‘ವಿಶುಕುಮಾರ್ ತುಳು ಸಾಹಿತ್ಯೋತ್ಸವ’ದಲ್ಲಿ ಕುಣಿತ ಭಜನಾ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ
    Next Article ಯಕ್ಷಾಂಗಣ ತಾಳಮದ್ದಳೆ ಸಪ್ತಾಹದ ಪೋಸ್ಟರ್ ಬಿಡುಗಡೆ
    roovari

    Add Comment Cancel Reply


    Related Posts

    ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ -2025 | ನವೆಂಬರ್ 15

    November 12, 2025

    ಮೂಡುಬಿದಿರೆಯಲ್ಲಿ ಕ.ಸಾ.ಪ.ದಿಂದ ‘ಸಂಸ್ಕೃತಿ ಚಿಂತನ ಸಮಾರಂಭ’ | ನವೆಂಬರ್ 16

    November 12, 2025

    ಮಲೆನಾಡ ಬರಹಗಾರರ ವೇದಿಕೆಯಿಂದ ‘ಕಾಡಸುರಗಿ’ ಕೃತಿ ಬಿಡುಗಡೆ | ನವಂಬರ್‌ 15

    November 12, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಅಲೀಬಾಬಾ ಮತ್ತು 40 ಕಳ್ಳರು’ ನಾಟಕ ಪ್ರದರ್ಶನ | ನವೆಂಬರ್ 15 ಮತ್ತು 16

    November 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.