Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಜಾನಪದ ತಜ್ಞ ನಟ ಗಾಯಕ ಡಾ. ನಲ್ಲೂರು ಪ್ರಸಾದ್ ಆರ್.ಕೆ.

    November 25, 2025

    ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಕವನ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 02

    November 25, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಮಂಗಳೂರು ಸಂಗೀತೋತ್ಸವ’ | ನವೆಂಬರ್ 28, 29 ಮತ್ತು 30

    November 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ | ಭಾವನಾತ್ಮಕ ಸಂಬಂಧ ನಾಟಕ ‘ಗೋಕುಲ ನಿರ್ಗಮನ’
    Article

    ನಾಟಕ ವಿಮರ್ಶೆ | ಭಾವನಾತ್ಮಕ ಸಂಬಂಧ ನಾಟಕ ‘ಗೋಕುಲ ನಿರ್ಗಮನ’

    November 25, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮನುಷ್ಯನ ಸಂಬಂಧಗಳ ಕೊಂಡಿ ಸಡಿಲವಾಗುತ್ತಿರುವ ಪ್ರಸ್ತುತ ಕಾಲಮಾನದಲ್ಲಿ ‘ಗೋಕುಲ ನಿರ್ಗಮನ’ ನಾಟಕ ಮನುಷ್ಯ ಸಂಬಂಧಗಳ ಮಹತ್ವವನ್ನು ತಿಳಿಹೇಳುತ್ತದೆ. ಗೋಕುಲ ನಿರ್ಗಮನವು ಒಂದು ಪೌರಾಣಿಕ ನಾಟಕ. ಇಲ್ಲಿ ಗೋಕುಲದ ಜನರ ಜೀವನದ ಚಿತ್ರಣವು ಅದ್ಭುತವಾಗಿ ಮೂಡಿಬಂದಿದೆ. ಗೋಕುಲದ ಜನರು, ಕೃಷ್ಣ ಹಾಗೂ ಕೊಳಲಿನ ಜೊತೆಗೆ ಹೊಂದಿದ ಭಾವನಾತ್ಮಕ ಸಂಬಂಧ ನಾಟಕದ ಕೇಂದ್ರಬಿಂದುವಾಗಿ ನಿಲ್ಲುತ್ತದೆ.

    ಗೋಪಾಲಕರು-ಗೋಪಿಕೆಯರು, ಕೃಷ್ಣ, ಬಲರಾಮ, ಅಕ್ರೂರ, ಸುದಾಸ, ಸುಬಲ ಎಲ್ಲ ಪಾತ್ರಗಳ ನಟನೆ ಅದರಲ್ಲೂ ಕೃಷ್ಣನೊಂದಿಗಿರುವ ರಾಧೆ, ಬಲರಾಮ, ಶ್ರೀಧಾಮನ ದೃಶ್ಯಗಳು ಮನದೊಳಗುಳಿಯುತ್ತವೆ. ಶ್ರೀಧಾಮನ ಪಾತ್ರ ಪ್ರೇಕ್ಷಕರನ್ನು ಪ್ರತಿಬಾರಿಯೂ ನಗುವಿನ ಅಲೆಯಲ್ಲಿ ತೇಲಿಸುತ್ತದೆ. ಗೋಕುಲದ ಚಿಕ್ಕಮಕ್ಕಳಿಂದ ಹಿಡಿದು ಹಿರಿಜೀವಗಳ ತನಕ ಕೃಷ್ಣನು ಕೊಳಲನೂದುವುದನ್ನು ಆಲಿಸಲು ತೋರುವ ತುಡಿತ ಹಾಗೂ ಕೃಷ್ಣನ ಮೇಲಿನ ಪ್ರೀತಿ ಪ್ರತಿ ಸನ್ನಿವೇಶದಲ್ಲೂ ಕಾಣುತ್ತದೆ. ಕೃಷ್ಣನು ಕೊಳಲನ್ನು ಮತ್ತು ಗೋಕುಲವನ್ನು ಒಲ್ಲದ ಮನಸ್ಸಿನಿಂದ ತೊರೆದು ಬಲರಾಮ ಮತ್ತು ಅಕ್ರೂರನೊಂದಿಗೆ ಮಥುರೆಗೆ ಹೋಗುವ ಆ ದುಃಖದ ಪ್ರಸಂಗ, ಕೃಷ್ಣ ಗೋಕುಲವನ್ನು ಬಿಟ್ಟು ಹೋಗಬಾರದಿತ್ತು ಎನ್ನುವ ಭಾವನೆಯನ್ನು ಮೂಡಿಸುತ್ತದೆ.

    ಗೋಕುಲ ನಿರ್ಗಮನ ಒಂದು ಗೀತ-ನಾಟಕವಾಗಿದ್ದರಿಂದ ಇಲ್ಲಿ ಸಂಗೀತ ನಾಟಕದ ಬೆನ್ನೆಲುಬು. ನಟರು ತಮ್ಮ ನಟನೆಯ ಮೂಲಕ ಪಾತ್ರಕ್ಕೆ ಜೀವ ತುಂಬಿದರೆ ಸಂಗೀತ ಆ ನಾಟಕಕ್ಕೆ ಜೀವ ತುಂಬಿದೆ. ಪು.ತಿ.ನ.ರವರ ಕಾವ್ಯಾತ್ಮಕ ಬರವಣಿಗೆ ನಾಟಕವನ್ನು ಉಸಿರಾಗಿ ಹಿಡಿದಿದೆ. ಹಳೆಗನ್ನಡದಲ್ಲಿರುವುದರಿಂದ ಸಾಹಿತ್ಯದ ಅಭಿರುಚಿಯಿರದ ಇಂದಿನ ಜೆನ್-ಜಿಗೆ ಈ ನಾಟಕ ಸಾಹಿತ್ಯಕವಾಗಿ ಅರ್ಥವಾಗುವುದು ಸ್ವಲ್ಪ ಕಷ್ಟವೆನ್ನಬಹುದು.

    – ರಾಮಸುತ

    ನಾಟಕದ ಹೆಸರು – ಗೋಕುಲ ನಿರ್ಗಮನ
    ಲೇಖಕರು – ಪು.ತಿ.ನ.
    ಸಂಗೀತ ಮತ್ತು ನಿರ್ದೇಶನ : ಬಿ.ವಿ. ಕಾರಂತ
    ಮರು ವಿನ್ಯಾಸ : ಟಿ.ಎಸ್. ನಾಗಾಭರಣ
    ಪ್ರಸ್ತುತಿ : ಬೆನಕ
    ನಾಟಕದ ಪ್ರಕಾರ : ಪೌರಾಣಿಕ

    article baikady drama review roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ‘ಕಪ್ಪು ಹಲ್ಲಿನ ಕಥೆ’ ಎರಡನೇ ಆವೃತ್ತಿ ಬಿಡುಗಡೆ
    Next Article ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಮಂಗಳೂರು ಸಂಗೀತೋತ್ಸವ’ | ನವೆಂಬರ್ 28, 29 ಮತ್ತು 30
    roovari

    Add Comment Cancel Reply


    Related Posts

    ವಿಶೇಷ ಲೇಖನ | ಜಾನಪದ ತಜ್ಞ ನಟ ಗಾಯಕ ಡಾ. ನಲ್ಲೂರು ಪ್ರಸಾದ್ ಆರ್.ಕೆ.

    November 25, 2025

    ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಕವನ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 02

    November 25, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಮಂಗಳೂರು ಸಂಗೀತೋತ್ಸವ’ | ನವೆಂಬರ್ 28, 29 ಮತ್ತು 30

    November 25, 2025

    ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ‘ಕಪ್ಪು ಹಲ್ಲಿನ ಕಥೆ’ ಎರಡನೇ ಆವೃತ್ತಿ ಬಿಡುಗಡೆ

    November 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.