Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ವಿಕಾಸ ಹೊಸಮನಿಯವರ ವಿಮರ್ಶಾ ಕೃತಿ ‘ಜೀವ ಸಂವಾದ’

    December 3, 2025

    ವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರು ನಮನ – ನೃತ್ಯ ನಮನ

    December 3, 2025

    ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡ ‘ಕಿಶೋರ ಯಕ್ಷಗಾನ ಸಂಭ್ರಮ’

    December 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರು ನಮನ – ನೃತ್ಯ ನಮನ
    Bharathanatya

    ವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರು ನಮನ – ನೃತ್ಯ ನಮನ

    December 3, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್‌ ಇವರಿಗೆ ಗುರುನಮನ ಮಾಡುವ ‘ವಂದೇ ಗುರುಪರಂಪರಾಮ್‌’ ಎಂಬ ಕಾರ್ಯಕ್ರಮವು ದಿನಾಂಕ 29 ನವೆಂಬರ್ 2025ರಂದು ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ “ಭರತನಾಟ್ಯ ಕಲಿಕೆಯು ಮಕ್ಕಳ ವ್ಯಕ್ತಿತ್ವವನ್ನು ತಿದ್ದುವುದಕ್ಕೆ ಸಹಾಯ ಮಾಡುತ್ತದೆ. ಡಿಜಿಟಲ್‌ ಯುಗದಲ್ಲಿ ಇಂತಹ ಕಲಾಪ್ರಕಾರಗಳ ಕಲಿಕೆ ಮಕ್ಕಳಿಗೆ ಅತ್ಯಗತ್ಯವಾಗಿದೆ. ಇದು ಕಲೆಯನ್ನು ಕಲಿಯುವ ಜೊತೆಗೆ ಗುರುಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನೂ ಬೋಧಿಸುತ್ತದೆ” ಎಂದು ಹೇಳಿದರು. ಶಾರದಾಮಣಿ ಶೇಖರ್‌ ಇವರ ಬಳಿ ಶಿಷ್ಯಂದಿರಾಗಿ ನೃತ್ಯ ಕಲಿತು ರಾಜ್ಯದ ಮತ್ತು ದೇಶದ ವಿವಿಧೆಡೆಗಳಲ್ಲಿ ನೃತ್ಯ ತರಗತಿಗಳನ್ನು ನಡೆಸುತ್ತಿರುವ ನೃತ್ಯಗುರುಗಳು ಈ ಸಂದರ್ಭದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದಲ್ಲದೆ, ಗುರುಪರಂಪರೆಯಲ್ಲಿ ಕಲಿತ ಪರಿಣಾಮವಾಗಿ ತಮ್ಮ ವ್ಯಕ್ತಿತ್ವವು ಅರಳಿದ ಬಗೆಯನ್ನು ವಿವರಿಸಿದರು.

    ಕಾರ್ಯಕ್ರಮವನ್ನು ವಿದುಷಿ ಶಾರದಾಮಣಿ ಶೇಖರ್‌ ದೀಪ ಬೆಳಗಿಸಿ ಉದ್ಘಾಟಿಸಿದರು. ನೃತ್ಯ ಗುರುಗಳಾದ ಸುಮಂಗಲಾ ರತ್ನಾಕರ್‌, ಭಾರತೀ ಸುರೇಶ್‌, ಶ್ರೀಲತಾ ನಾಗರಾಜ್‌, ಸುಮನ್‌ರಾಜ್‌ ಬಂಡೇಕರ್‌, ಪ್ರಮೋದ್ ಉಳ್ಳಾಲ್‌, ರೋಹಿಣಿ ಉದಯ್‌, ಉಮಾ ವಿಷ್ಣು ಹೆಬ್ಬಾರ್‌, ರಾಧಿಕಾ ಶೆಟ್ಟಿ, ಸೀಮಾ ಪ್ರಶಾಂತ್, ಮಂಜುಳಾ ಸುಬ್ರಹ್ಮಣ್ಯ, ಪೂಜಾ ಸಚಿನ್‌, ಸುಧೀರ್‌ ಪಿ., ಗೌರಿ ಶೈಲೇಶ್‌, ಸ್ವರ್ಣಗೌರಿ ಜೋಷಿ, ವಾಣಿಶ್ರೀ ವಿ., ಪ್ರತಿಭಾ ಎ. ಕುಮಾರ್‌, ಸ್ವರ್ಣ ಪ್ರತೀಕ, ಶ್ರವಣ ಕುಮಾರಿ, ಅಂಕಿತ ನೃತ್ಯ ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ನಟ್ಟುವಾಂಗದಲ್ಲಿ ಪುತ್ತೂರಿನ ವಿದ್ವಾನ್‌ ಮಂಜುನಾಥ್‌, ಹಾಡುಗಾರಿಕೆಯಲ್ಲಿ ವಿನೀತ್‌ ಪುರವಾಂಕರ, ಮೃದಂಗದಲ್ಲಿ ಗೀತೇಶ್‌ ನೀಲೇಶ್ವರ, ಕೊಳಲಿನಲ್ಲಿ ಮುರಳೀಧರ್ ಕೆ. ಉಡುಪಿ ಸಹಕರಿಸಿದರು.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡ ‘ಕಿಶೋರ ಯಕ್ಷಗಾನ ಸಂಭ್ರಮ’
    Next Article ಪುಸ್ತಕ ವಿಮರ್ಶೆ | ವಿಕಾಸ ಹೊಸಮನಿಯವರ ವಿಮರ್ಶಾ ಕೃತಿ ‘ಜೀವ ಸಂವಾದ’
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ವಿಕಾಸ ಹೊಸಮನಿಯವರ ವಿಮರ್ಶಾ ಕೃತಿ ‘ಜೀವ ಸಂವಾದ’

    December 3, 2025

    ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡ ‘ಕಿಶೋರ ಯಕ್ಷಗಾನ ಸಂಭ್ರಮ’

    December 3, 2025

    ಕಂಕನಾಡಿ ಗರೋಡಿಯಲ್ಲಿ ‘ತುಳು ತಾಳಮದ್ದಲೆ ಸಪ್ತಾಹ’ | ಡಿಸೆಂಬರ್ 7ರಿಂದ 13

    December 2, 2025

    ಬ್ಯಾರಿ ಅಕಾಡೆಮಿಯಿಂದ ಭಾಷಾಂತರ, ಭಾಷಣ ಸ್ಪರ್ಧೆ | ಕೊನೆಯ ದಿನಾಂಕ ಡಿಸೆಂಬರ್ 10

    December 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.