Subscribe to Updates

    Get the latest creative news from FooBar about art, design and business.

    What's Hot

    ಅಭಿನಯ ತರಂಗ ರಂಗಶಾಲೆಯಿಂದ ‘ತಾರ’ ಎರಡು ಅಂಕಗಳ ನಾಟಕ ಪ್ರದರ್ಶನ | ಡಿಸೆಂಬರ್ 15

    December 13, 2025

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ಅನುವಾದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ | ಡಿಸೆಂಬರ್ 14

    December 13, 2025

    ಬಹುವಚನಂನ ಪದ್ಮಿನೀ ಸಭಾಭವನದಲ್ಲಿ ‘ಶಾಸ್ತ್ರೀಯ ಸಂಗೀತ ಕಛೇರಿ’ | ಡಿಸೆಂಬರ್ 14

    December 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಧಕರಿಗೆ ‘ಅಜಿತ್ ಕುಮಾರ್ ಸ್ಮಾರಕ ಪ್ರಶಸ್ತಿ’ ಪ್ರದಾನ | ಡಿಸೆಂಬರ್ 14
    Awards

    ಸಾಧಕರಿಗೆ ‘ಅಜಿತ್ ಕುಮಾರ್ ಸ್ಮಾರಕ ಪ್ರಶಸ್ತಿ’ ಪ್ರದಾನ | ಡಿಸೆಂಬರ್ 14

    December 13, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಅಜಿತ್‌ ಕುಮಾರ್ ಸ್ಮಾರಕ – 2025ನೇ ಸಾಲಿನ ಅಜಿತಶ್ರೀ, ನಾಟ್ಯಶ್ರೀ ಮತ್ತು ಯೋಗಶ್ರೀ ಪ್ರಶಸ್ತಿ ಪ್ರಕಟಿಸಲಾಗಿದ್ದು, ಏಳು ಸಾಧಕರು ಭಾಜನರಾಗಿದ್ದಾರೆ. ‘ಅಜಿತಶ್ರೀ ಪ್ರಶಸ್ತಿ’ಗೆ ಹಿರಿಯ ರಂಗಕರ್ಮಿ ಡಾ. ಬಿ. ಜಯಶ್ರೀ, ಭರತನಾಟ್ಯ ಕಲಾವಿದೆ ಪದ್ಮನಿ ರವಿ ಹಾಗೂ ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಪಾತ್ರರಾಗಿದ್ದಾರೆ. ತಲಾ ರೂ.50 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ.

    ‘ನಾಟ್ಯಶ್ರೀ ಪ್ರಶಸ್ತಿ’ಗೆ ಭರತನಾಟ್ಯ ಕಲಾವಿದೆ ಪೂರ್ಣಿಮಾ ಕೆ. ಗುರುರಾಜ್, ಕೊಳಲುವಾದಕ ಎಚ್.ಎಸ್. ವೇಣುಗೋಪಾಲ್ ಹಾಗೂ ರಂಗಭೂಮಿ ಸಂಘಟಕ ಎಂ.ಎಸ್. ಶ್ಯಾಮಸುಂದರ್ (ಅಂಕಲ್ ಶ್ಯಾಮ್) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ರೂ.20 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ.

    ‘ಯೋಗಶ್ರೀ ಪ್ರಶಸ್ತಿ’ಗೆ ಶಿವಮೊಗ್ಗದ ಯೋಗ ಶಿಕ್ಷಕ ಭಾ.ಸು. ಅರವಿಂದ ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ.10 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ದಿನಾಂಕ 14 ಡಿಸೆಂಬರ್ 2025ರಂದು ಬಸವನಗುಡಿಯ ಇಂಡಿಯನ್ ಇನ್‌ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಜಿತ್‌ ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಕೆ.ಆರ್. ಮುರಳೀಧರ ತಿಳಿಸಿದ್ದಾರೆ.

    award baikady bharatanatyam felicitation Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleರಂಗಮನೆಯ ಮನುಜ ನೇಹಿಗ ರಾಜ್ಯಮಟ್ಟಕ್ಕೆ ಆಯ್ಕೆ
    Next Article ಬಹುವಚನಂನ ಪದ್ಮಿನೀ ಸಭಾಭವನದಲ್ಲಿ ‘ಶಾಸ್ತ್ರೀಯ ಸಂಗೀತ ಕಛೇರಿ’ | ಡಿಸೆಂಬರ್ 14
    roovari

    Add Comment Cancel Reply


    Related Posts

    ಅಭಿನಯ ತರಂಗ ರಂಗಶಾಲೆಯಿಂದ ‘ತಾರ’ ಎರಡು ಅಂಕಗಳ ನಾಟಕ ಪ್ರದರ್ಶನ | ಡಿಸೆಂಬರ್ 15

    December 13, 2025

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ಅನುವಾದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ | ಡಿಸೆಂಬರ್ 14

    December 13, 2025

    ಬಹುವಚನಂನ ಪದ್ಮಿನೀ ಸಭಾಭವನದಲ್ಲಿ ‘ಶಾಸ್ತ್ರೀಯ ಸಂಗೀತ ಕಛೇರಿ’ | ಡಿಸೆಂಬರ್ 14

    December 13, 2025

    ರಂಗಮನೆಯ ಮನುಜ ನೇಹಿಗ ರಾಜ್ಯಮಟ್ಟಕ್ಕೆ ಆಯ್ಕೆ

    December 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.