Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಗಣೇಶ ನೃತ್ಯಾಲಯದಲ್ಲಿ ‘ನೃತ್ಯೋಲ್ಲಾಸ’ ಮಾಸಿಕ ಭರತನಾಟ್ಯ ಕಾರ್ಯಕ್ರಮ

    August 26, 2025

    ಬಂಟ್ವಾಳದ ಏರ್ಯ ಬೀಡುವಿನಲ್ಲಿ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಸಮಾರಂಭ | ಆಗಸ್ಟ್ 28

    August 26, 2025

    ಕ.ಸಾ.ಪ.ದಿಂದ ಹಿರಿಯ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರಿಗೆ ಸನ್ಮಾನ | ಆಗಸ್ಟ್ 30

    August 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆ ಹಯಗ್ರೀವದಲ್ಲಿ ‘ಅರ್ಥಾಂಕುರ’ ಸರಣಿ ತಾಳಮದ್ದಳೆ ಉದ್ಘಾಟನೆ
    Yakshagana

    ತೆಕ್ಕಟ್ಟೆ ಹಯಗ್ರೀವದಲ್ಲಿ ‘ಅರ್ಥಾಂಕುರ’ ಸರಣಿ ತಾಳಮದ್ದಳೆ ಉದ್ಘಾಟನೆ

    August 24, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

     

    ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ನೇತೃತ್ವದಲ್ಲಿ ‘ಅರ್ಥಾಂಕುರ’ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮವು ದಿನಾಂಕ 20-08-2023ರಂದು ಜರಗಿತು.

    ಈ ಕಾರ್ಯಕ್ರಮವನ್ನು ಉಪನ್ಯಾಸಕ ಸುಜಯೀಂದ್ರ ಹಂದೆಯವರು ಮದ್ದಳೆ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ “ನಾಟ್ಯ ಶಾಸ್ತ್ರದ ಭರತ ಹೇಳಿದ ಚಾಕ್ಷುಸೀ ಯಜ್ಞ ಯಕ್ಷಗಾನಕ್ಕೆ ಬಹಳ ಸೂಕ್ತವಾಗುತ್ತದೆ. ಕಣ್ಣುಗಳಿಗೆ ಯಜ್ಞ, ಕಣ್ಣುಗಳಿಗೆ ಸುಖವನ್ನು ನೀಡುವಂತಹ ಕಲೆ ಯಕ್ಷಗಾನ. ತಾಳಮದ್ದಳೆ ಯಕ್ಷಗಾನದ ಒಂದು ಪ್ರಕಾರ. ತಾಳಮದ್ದಳೆಯಲ್ಲಿ ಸಾಹಿತ್ಯ ಎಂಬ ಲತೆಯಲ್ಲಿ ನವರಸಗಳೆಂಬ ಹೂವರಳಿ ಅರ್ಥಾಂಕುರವೆಂಬ ಚಿಗುರು ಈ ವೇದಿಕೆಯಲ್ಲಿ ಆಗಾಗ ಫಸಲನ್ನು ಕೊಡುತ್ತಿರುವಂತಾಗಬೇಕು. ತಾಳಮದ್ದಳೆಯು ವಾಚಿಕ ಕಲೆ ಎನ್ನುವುದನ್ನು ಯಕ್ಷಗಾನದಲ್ಲಿ ಹಿಂದಿನ ಅನೇಕರು ಪ್ರಬುದ್ಧವಾಗಿಸಿದ್ದಾರೆ. ಇಂತಹ ಪ್ರಕಾರಕ್ಕೆ ಹೊಸ ತಲೆಮಾರಿನ ಅರ್ಥಧಾರಿಗಳು ಈ ವೇದಿಕೆಯಲ್ಲಿ ಬೆಳೆಯಬೇಕು, ಬೆಳಗಬೇಕು” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹಂದಟ್ಟು ಸುದರ್ಶನ ಉರಾಳ, ಡಾ. ಗಣೇಶ್ ಯು, ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಉಪನ್ಯಾಸಕ ರಾಘವೇಂದ್ರ ತುಂಗ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸುಜಯೀಂದ್ರ ಹಂದೆಯವರ ನಿರ್ದೇಶನದಲ್ಲಿ ‘ಅರ್ಥಾಂಕುರ’ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಪ್ರವರ ಥಿಯೇಟರ್ ಇದರ ದಶಕದ ಸಂಭ್ರಮ | ಆಗಸ್ಟ್ 25, 26 ಮತ್ತು 27ರಂದು
    Next Article ಇನ್ನಂಜೆ ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಬೇತಿ ಆರಂಭ.
    roovari

    Add Comment Cancel Reply


    Related Posts

    ವಂಡ್ಸೆಯ ಉಪಾಧ್ಯಾಯರ ಗದ್ದೆಯಲ್ಲಿ ‘ಯಕ್ಷ ಹೆಜ್ಜೆ’ | ಆಗಸ್ಟ್ 24

    August 23, 2025

    ಶ್ರೀ ಭಗವತೀ ಯಕ್ಷಕಲಾ ಬಳಗದಿಂದ ಯಕ್ಷಗಾನಾರ್ಪಣೆ

    August 22, 2025

    ಕೋಟೇಶ್ವರದಲ್ಲಿ ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ

    August 22, 2025

    ಶ್ರೀ ಎಡನೀರು ಮಠದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಪ್ರದರ್ಶನ | ಆಗಸ್ಟ್ 22       

    August 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.