Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಹಸ್ತಪ್ರತಿ ಶಾಸ್ತ್ರದ ಭೀಷ್ಮ – ಬಿ. ಎಸ್. ಸಣ್ಣಯ್ಯ

    June 18, 2025

    ಮುಂಡಾಜೆಯಲ್ಲಿ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣೆ | ಜೂನ್ 19

    June 18, 2025

    ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 21

    June 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆ ಹಯಗ್ರೀವದಲ್ಲಿ ‘ಅರ್ಥಾಂಕುರ-4’ 
    Yakshagana

    ತೆಕ್ಕಟ್ಟೆ ಹಯಗ್ರೀವದಲ್ಲಿ ‘ಅರ್ಥಾಂಕುರ-4’ 

    October 12, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯುವ ಅರ್ಥಧಾರಿಗಳ ವೇದಿಕೆಯಾದ ‘ಅರ್ಥಾಂಕುರ-4’ ಕಾರ್ಯಕ್ರಮವು ದಿನಾಂಕ 08-10-2023 ರಂದು ನಡೆಯಿತು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅರ್ಥಧಾರಿ ಹಾಗೂ ನಿರ್ದೇಶಕರಾದ ಡಾ.ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ “ಅರ್ಥಾಂಕುರ-4, ನಾಲ್ಕುನೂರು- ನಾಲ್ಕು ಸಾವಿರ, ನಾಲ್ಕು ಲಕ್ಷವಾಗಲಿ. ತನ್ಮೂಲಕ ಈ ಭಾಗದಲ್ಲಿ ಅನೇಕ ಕಲಾವಿದರು ಪ್ರಬುದ್ಧರಾಗಿ ಕಾರ್ಯಕ್ರಮ ನೀಡಲು ಸಿದ್ಧರಾಗಲಿ. ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಸಂಸ್ಥೆ ಸಿದ್ಧಗೊಳಿಸಿದೆ. ಪ್ರಬುದ್ಧ ಕಲಾವಿದರಾಗುವ ಆಸೆಯುಳ್ಳ ಕಲಾವಿದರು ತಮ್ಮ ಹೆಸರನ್ನು ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಅರ್ಥಾಂಕುರದಲ್ಲಿ ತಾಳಮದ್ದಳೆಯ ತಯಾರಿ ನಡೆಸಲು ಸಿದ್ಧರಾಗಲಿ. ಈ ಸುವರ್ಣ ಅವಕಾಶದಿಂದ ಯಾರೂ ವಂಚಿತರಾಗದಿರಿ” ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಕೊಮೆ-ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ಗೋಪಾಲ ಪೂಜಾರಿ ರಾಜು ತೋಟದಬೆಟ್ಟು ಅವರನ್ನು ಸಮ್ಮಾನಿಸಿ ಮಾತನ್ನಾಡುತ್ತಾ “ಸಾಮಾಜಿಕ ಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ, ಸಾರ್ವಜನಿಕ ಕಳಕಳಿಗೆ ಸ್ಪಂದಿಸಿ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದವರು ಶ್ರೀಯುತ ರಾಜು ತೋಟದಬೆಟ್ಟು. ಸದಾ ಸಾರ್ವಜನಿಕರ ಸೇವೆಗಳಲ್ಲಿ ನಿರತನಾಗುತ್ತಾ ಸೇವಾ ಮನೋಭಾವವನ್ನು ಹೊಂದಿದ ಇವರು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇದೀಗ ಬೀಜಾಡಿ ಮೀನುಗಾರಿಕಾ ಸಹಕಾರಿ ಸಂಘದಲ್ಲಿ ಉಪಾಧ್ಯಕ್ಷರಾಗಿ ಉತ್ತುಂಗಕ್ಕೇರಿರುವುದು ಸಾಮಾಜಿಕ ಬದ್ಧತೆಗೆ ಸಿಕ್ಕಿದ ಗೌರವ. ಇಂತಹ ಗೌರವಾನ್ವಿತರನ್ನು ಸಂಸ್ಥೆ ಗುರುತಿಸಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.

    ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕಾಂಚನ್, ಕೃಷಿಕರಾದ ಕೃಷ್ಣ ಪೂಜಾರಿ ಕೊರವಡಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು. ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಸ್ವಾಗತಿಸಿ, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಧನ್ಯವಾದಗೈದು, ಹೆರಿಯ ಮಾಸ್ಟರ್ ಕಾರ್ಯಕ್ರಮವನ್ನು ನಿರ್ವಹಿಸಿದರು.

    ಬಳಿಕ ಅರ್ಥಾಂಕುರ-4 ಅಂಗವಾಗಿ  “ಪಾರ್ಥ ಸಾರಥ್ಯ” ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ರಂಗ ನಮನ’ | ಅಕ್ಟೋಬರ್ 13ರಿಂದ 15ರವರೆಗೆ
    Next Article ಯಕ್ಷಗಾನವನ್ನು ಉಳಿಸಿ ಬೆಳೆಸುವ ಸ್ವಸ್ತಿಕ್ ಕಲಾಕೇಂದ್ರದಿಂದ ವೇಣೂರು ಸದಾಶಿವ ಕುಲಾಲ್‌ ಇವರಿಗೆ ‘ದಿ.ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ 
    roovari

    Add Comment Cancel Reply


    Related Posts

    ಕೊಯ್ಯೂರು ಪಂಚದುರ್ಗಾಪರಮೇಶ್ವರಿ ದೇವಾಲಯದಲ್ಲಿ ಯಕ್ಷಗಾನ ತಾಳಮದ್ದಳೆ

    June 18, 2025

    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ಯಕ್ಷ ಸಿಂಧೂರ’ | ಜೂನ್ 21 

    June 18, 2025

    ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ‘ಲಂಕಾ ದಹನ’ ಯಕ್ಷಗಾನ | ಜೂನ್ 21

    June 18, 2025

    ಬಲಮುರಿ ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಳೆ

    June 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.