Subscribe to Updates
Get the latest creative news from FooBar about art, design and business.
Author: roovari
ಉಳ್ಳಾಲ: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ ಆಯೋಜಿಸಿದ 28ನೇ ವರ್ಷದ ‘ವೀರರಾಣಿ ಅಬ್ಬಕ್ಕ ಉತ್ಸವ’ ದಿನಾಂಕ 22 ಫೆಬ್ರವರಿ 2025ರ ಶನಿವಾರದಂದು ಉಳ್ಳಾಲ ನಗರಸಭೆಯ ಆವರಣದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದಿರೆಯ ಚೌಟರ ಅರಮನೆಯ ಮಮತಾ ಬಳ್ಳಾಲ್ ಮಾತನಾಡಿ “ಅಬ್ಬಕ್ಕಳ ಹೆಸರನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕು. ಕೆಚ್ಚೆದೆಯ ರಾಣಿ ಅಬ್ಬಕ್ಕಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಚಾರ, ಸ್ಥಾನ ಸಿಗದಿರುವುದು ಖೇದಕರ. ಹಾಗಿದ್ದರೂ ಎರಡು ದಶಕಗಳಿಂದ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಪುಸ್ತಕ, ಯಕ್ಷಗಾನ, ನಾಟಕ, ಸಿ.ಡಿ, ಕಾರ್ಯಾಗಾರ, ಅಧ್ಯಯನ ಪೀಠ, ನೌಕೆಯೊಂದಕ್ಕೆ ರಾಣಿ ಅಬ್ಬಕ್ಕಳ ಹೆಸರಿಡುವ ಮೂಲಕ ಹೆಚ್ಚಿನ ಪ್ರಚಾರ ನೀಡುವ ಪ್ರಯತ್ನ ನಡೆದಿದೆ” ಎಂದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮಾತನಾಡಿ “ಅಬ್ಬಕ್ಕ ಉತ್ಸವ ಆಚರಣೆಗೆ ಮುಂದಿನ ವರ್ಷದಿಂದ ರೂಪಾಯಿ…
ಉಪ್ಪಿನಕುದ್ರು : ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 104ನೇ ತಿಂಗಳ ಕಾರ್ಯಕ್ರಮ ದಿನಾಂಕ 23 ಫೆಬ್ರವರಿ 2025ರಂದು ಶ್ರೀಮತಿ ದೇವಕಿ ಸುರೇಶ್ ಪ್ರಭು ತಲ್ಲೂರು ಇವರ ಪ್ರಾರ್ಥನೆಯೊಂದೆಗೆ ಪ್ರಾರಂಭವಾಯಿತು. ವೇದಿಕೆಯಲ್ಲಿ ಹಿರಿಯ ಗೊಂಬೆಯಾಟ ಕಲಾವಿದ ವೆಂಕಟರಮಣ ಬಿಡುವಾಳ್, ಪ್ರಶಾಂತ್ ನಾಯಕ್, ಅನಿತಾ ಪಿ. ನಾಯಕ್, ಎಮ್. ರತ್ನಾಕರ್ ಪೈ, ಎಮ್. ರಾಜಶ್ರೀ ಆರ್. ಪೈ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಇವರು ಉಪಸ್ಥಿತರಿದ್ದರು. ಭರತನಾಟ್ಯ ಯುವ ಕಲಾವಿದೆ ಕುಮಾರಿ ಪ್ರಣೀತಾ ಪ್ರಶಾಂತ್ ನಾಯಕ್ ಕೋಟ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಕೊನೆಯಲ್ಲಿ ಕುಮಾರಿ ಪ್ರಣೀತಾ ಪ್ರಶಾಂತ್ ನಾಯಕ್ ಕೋಟ ಇವರ ಭರತನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್, ಬಂಟ್ವಾಡಿಯವರು ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು: ಎಂ. ಚಂದ್ರಶೇಖರ್ ಪ್ರತಿಷ್ಠಾನದ ಸಹಯೋಗದಲ್ಲಿ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗುಜರಾತಿ ಲೇಖಕಿ ಹಿಮಾಂಶಿ ಇಂದೂಲಾಲ್ ಶೆಲತ್ ಅವರಿಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 22 ಫೆಬ್ರವರಿ 2025ರ ಶನಿವಾರದಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು. ಈ ಪುರಸ್ಕಾರವು ರೂಪಾಯಿ 5 ಲಕ್ಷ ನಗದು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಕಾನೂನು ಸಚಿವ ಎಚ್. ಕೆ. ಪಾಟೀಲ ಮಾತನಾಡಿ “ಬಸವಣ್ಣ, ಕುವೆಂಪು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬದಲು, ಅವರನ್ನು ಭಾಷಣದ ಸರಕುಗಳನ್ನಾಗಿ ಬಳಸಲಾಗುತ್ತಿದೆ. ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಕುವೆಂಪು ಅವರ ಸಂದೇಶಗಳು ಪರಿಹಾರೋಪಾಯಗಳಾಗಿವೆ. ಆದರೆ, ಅವರು ಹೇಳಿದ್ದನ್ನು ಯಾರೂ ಪಾಲನೆ ಮಾಡುತ್ತಿಲ್ಲ. ‘ಮನುಜಮತ ವಿಶ್ವಪಥ’ ಎಂಬ ಸಂದೇಶ ನೀಡಿದ್ದರು. ಈ ಸಂದರ್ಭದಲ್ಲಿ ವಿಶ್ವಮಾನವ ಆಗುತ್ತೇನೆ ಎನ್ನುವವರು ಯಾರು ಇದ್ದಾರೆ? ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ, ಭ್ರಾತೃತ್ವ ಹಾಗೂ ಗಾಂಧೀಜಿ ಅವರು ಅಪೇಕ್ಷೆ ಮಾಡಿದ ಸಮಾಜ ನಿರ್ಮಾಣ ಸಾಧ್ಯ” ಎಂದರು. ಕನ್ನಡ…
ಮಡಿಕೇರಿ : ಕರ್ನಾಟಕ ಜಾನಪದ ಅಕಾಡೆಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ‘ಕೊಡಗು ಜಾನಪದ ಬೆಡಗು – ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮವು ದಿನಾಂಕ 24 ಫೆಬ್ರವರಿ 2025ರಂದು ಕಾಲೇಜು ಸಭಾಂಗಣದಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮವನ್ನು ದುಡಿಯನ್ನು ನುಡಿಸಿ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರನಾದ್ ಇವರು ಮಾತನಾಡಿ “ನಾಡಿನ ಮೂಲ ಜನಪದ ಸಂಸ್ಕೃತಿ, ಆಚಾರ ವಿಚಾರ, ಪರಂಪರೆಗಳು ಸಮಾಜವನ್ನು ಕಟ್ಟುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇಂತಹ ಜಾನಪದ ಕಲೆಯ ಸತ್ಯವನ್ನು ಯುವ ಪೀಳಿಗೆ ಒಳಗಣ್ಣಿನ ಮೂಲಕ ಅರಿತುಕೊಂಡು ಮುಂದಿನ ಭವಿಷ್ಯವನ್ನು ರೂಪಿಸಬೇಕು. ದಕ್ಷತೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವಗಳಿಂದ ಪುಟ್ಟ ‘ಕೊಡಗು’ ಅತ್ಯಂತ ವಿಶೇಷವಾಗಿ ಕಾಣುತ್ತದೆ. ಅನುಮಾನಗಳೇ ತುಂಬಿರುವ ಸಮಾಜದಲ್ಲಿ ನೆಲ, ಜಲ, ಗಾಳಿ ವಿಷಯುಕ್ತವಾಗುತ್ತಿದೆ. ಅಭಿವೃದ್ಧಿ ಎನ್ನುವುದು ಎಂದಿಗೂ ಅವಸಾನಕ್ಕೆ ಕಾರಣವಾಗಬಾರದು. ಕಟ್ಟಲು ಸಾವಿರ ಕೈ…ಮುರಿಯಲು ಒಂದು ಕೈ ಸಾಕು’ ಎನ್ನುವ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಸಮಾಜವನ್ನು…
ಮಂಗಳೂರು : ಮಾಂಡ್ ಸೊಭಾಣ್ ಸಂಸ್ಥೆಯು ಸಾಹಿತ್ಯಿಕ ಚಟುವಟಿಕೆಗಳಿಗಾಗಿ ಮಿಟಾಕಣ್ (ಉಪ್ಪಿನ ಕಣ) ಅಂಗಸಂಸ್ಥೆಯನ್ನು ರಚಿಸಿದ್ದು ಇದರ ಉದ್ಘಾಟನೆಯು 23 ಫೆಬ್ರವರಿ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಮಕ್ಕಳ ಸಾಹಿತಿ ಜೆ.ಎಫ್. ಡಿಸೋಜ ಅತ್ತಾವರ್ ಇವರು ಕಡೆದ ಮಜ್ಜಿಗೆಗೆ ಉಪ್ಪು ಬೆರೆಸುವ ಮುಖಾಂತರ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಚಾಲಕ ಕವಿ ರೊನಿ ಕ್ರಾಸ್ತಾ ಪ್ರಸ್ತಾವಿಕ ಮಾತುಗಳಾನ್ನಾಡಿ “1998ರಲ್ಲಿ ಮಾಂಡ್ ಸೊಭಾಣ್ ‘ಮಿಟಾಕಣ್ ಅಕಾಡೆಮಿ’ ರಚಿಸಿ ಕವಿಗೋಷ್ಟಿ, ಪುಸ್ತಕ ಪ್ರಕಟಣೆ, ಸಾಹಿತ್ಯಿಕ ಚಿಂತನೆ ಇತ್ಯಾದಿ ಕೆಲಸಗಳನ್ನು ಮಾಡುತ್ತಾ ಬಂದಿತ್ತು. ಇತರೆ ಸಾಂಸ್ಕೃತಿಕ ಕೆಲಸಗಳ ಒತ್ತಡದಲ್ಲಿ ಸ್ಥಗಿತಗೊಂಡ ಮಿಟಾಕಣ್ ಅನ್ನು ಪುನರುಜ್ಜೀವಗೊಳಿಸುತ್ತಿದ್ದೇವೆ. ಈ ಸಾಲಿನಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಗಮನ ಹರಿಸಲಿದ್ದೇವೆ. ಬೇರೆ ಭಾಷೆಗಳಿಂದ ಕೊಂಕಣಿಗೆ ಮಕ್ಕಳ ಸಾಹಿತ್ಯ ಅನುವಾದ ಮಾಡಲಿದ್ದೇವೆ. ವರ್ಷದಲ್ಲಿ ಹೊಸ ಕವಿತೆಗಳ ಒಂದೆರಡು ಕವಿಗೋಷ್ಟಿಗಳು ಹಾಗೂ ನವೆಂಬರದಲ್ಲಿ ಮಕ್ಕಳ ಸಾಹಿತ್ಯೋತ್ಸವ ಆಚರಿಸಲಿದ್ದೇವೆ” ಎಂದು ತಿಳಿಸಿದರು. ಮಕ್ಕಳ ಸಾಹಿತ್ಯದ ಬಗ್ಗೆ ಮಾರ್ಗದರ್ಶಿ ಭಾಷಣ ಮಾಡಿದ ಭಾಷಾ ತಜ್ಞ ವಂದನೀಯ…
ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆ, ಕಾವ್ಯ, ನಾಟಕ ಹೀಗೆ ಹಲವು ಸಾಹಿತ್ಯ ಪ್ರಕಾರಗಳು ಬೆಳೆದು ಬಂದಿರುವುದನ್ನು ನಾವು ಗಮನಿಸಿದ್ದೇವೆ. ಅವುಗಳ ಸಾಲಿನಲ್ಲಿಯೇ ವಿಶಿಷ್ಟವಾದ ಒಂದು ಸಾಹಿತ್ಯ ಪ್ರಕಾರವೆಂದು ಗುರುತಿಸಿಕೊಳ್ಳುವ ಸಾಹಿತ್ಯ ವಿಭಾಗವೇ ಲಲಿತ ಪ್ರಬಂಧ ಪ್ರಕಾರವಾಗಿದೆ. ಇದು ಆಧುನಿಕ ಕನ್ನಡ ಸಾಹಿತ್ಯಲೋಕದಲ್ಲಿ ಹೊಸಪ್ರಕಾರವೆಂದು ಗುರುತಿಸಿಕೊಳ್ಳಬಹುದಾಗಿದೆ. ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾದ ಸಾಹಿತ್ಯ ಪ್ರಕಾರವಾಗಿದೆ. ಲಲಿತ ಪ್ರಬಂಧಗಳು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದ್ದು ತನ್ನ ವ್ಯಾಪ್ತಿ, ಪರಿಧಿಯನ್ನುಯೊಳಗೊಂಡಿದೆ. ಇಲ್ಲಿ ಕವಿಯ ಕವಿತ್ವ ಗುಣ ಮತ್ತು ವಸ್ತುವನ್ನು ನೋಡಿದ ಬಗೆಯಲ್ಲಿ ಅದನ್ನು ನಿರೂಪಿಸುವ ನಿರೂಪಣೆಯೇ ಮುಖ್ಯವಾಗುತ್ತದೆ. ಅಪಾರವಾದ ಲೋಕಾನುಭವ ಮತ್ತು ಅದನ್ನು ಕಾಣುವ, ವ್ಯಕ್ತಪಡಿಸುವ ರೀತಿ, ಬಗೆ ತಿಳಿಯಾದ ಹಾಸ್ಯದ ಮೂಲಕ ನಿರೂಪಿಸುವುದು. ಓದುಗನಿಗೆ ಅದು ಕಚಗುಳಿಯನ್ನು ನೀಡುತ್ತದೆ. ದಿನನಿತ್ಯದ ಘಟನೆಗಳು, ಸನ್ನಿವೇಶಗಳೇ ಇಲ್ಲಿ ಮುಖ್ಯ ವಸ್ತುಗಳನ್ನಾಗಿಟ್ಟುಕೊಂಡು ವಿಡಂಬನೆಯ ಮೂಲಕ ಹಾಸ್ಯಮಿಶ್ರಿತವಾಗಿ ಸಾಹಿತ್ಯಾತ್ಮಕವಾಗಿ ಅಕ್ಷರ ರೂಪದಲ್ಲಿ ವಿಷಯವನ್ನು ಮಂಡಿಸುವುದನ್ನು ಕಾಣಬಹುದಾಗಿದೆ. ವಾಸ್ತವಕ್ಕೆ ಸನಿಹವಿರುವ ಅಥವಾ ಕಲ್ಪನೆಯ ವಿಚಾರಗಳನ್ನು ಇಲ್ಲಿ ಅನಾವರಣಗೊಳಿಸಲಾಗುತ್ತದೆ. ಭಾವಲೋಕದ ಮನಸ್ಸಿನ ಭಾವನೆಗಳನ್ನು…
ಮಂಗಳೂರು : ಮಂಗಳೂರಿನ ಸಮತಾ ಮಹಿಳಾ ಬಳಗದ ‘ಶ್ರೀ ದೇವಿ ಮಹಿಷ ಮರ್ದಿನಿ’ ಮಹಿಳಾ ಯಕ್ಷಗಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 18 ಫೆಬ್ರವರಿ 2025 ರಂದು ಮಂಗಳೂರಿನ ಜೈಲ್ ರಸ್ತೆ ಯಲ್ಲಿರುವ ‘ಸುಬ್ರಮಣ್ಯ ಸಭಾ’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಕರಾವಳಿಯ ಮಣ್ಣಿನ ಕಲೆ. ಇದರ ಬಗ್ಗೆ ಕೀಳರಿಮೆ ಬಿಟ್ಟು ಆಬಾಲ ವೃದ್ಧರಾಗಿ ಯಕ್ಷಗಾನವನ್ನು ಆರಾಧಿಸುವ ಅನೇಕ ಮಂದಿ ಯಕ್ಷಗಾನ ಪ್ರೇಮಿಗಳಿದ್ದಾರೆ. ಅದರಲ್ಲೂ ಮಹಿಳಾ ತಂಡಗಳು ಪ್ರಾರಂಭಗೊಳ್ಳುವುದರಿಂದ ಈ ಕಲೆಗೆ ಹೆಚ್ಚಿನ ಶಕ್ತಿ ತುಂಬಿದೆ” ಎಂದು ನುಡಿದರು. ‘ಸಮತಾ’ ಇದರ ಗೌರವ ಅಧ್ಯಕ್ಷೆಯಾದ ಶ್ರೀಮತಿ ವಿಜಯಲಕ್ಷ್ಮಿ ಎ. ರಾವ್, ಮಾಜಿ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಆಚಾರ್, ಮಾಜಿ ಅಧ್ಯಕ್ಷೆ ,ಯಕ್ಷ ಮಂಜುಳಾ ಕದ್ರಿ ಮತ್ತು ಮಹಿಳಾ ತಾಳಮದ್ದಳೆ ಬಳಗದ ಅಧ್ಯಕ್ಷೆಯಾದ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಯಕ್ಷಗಾನ ಅಕಾಡೆಮಿಯ ಸದಸ್ಯ ಶ್ರೀ ರಾಜೇಶ್…
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಕತ್ವದಲ್ಲಿ ನೀಡಲಾಗುವ ‘ವಿಶ್ವಪ್ರಭಾ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 23 ಫೆಬ್ರವರಿ 2025ರ ಭಾನುವಾರದಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ತುಳು ನಾಟಕ, ತುಳು ಮತ್ತು ಚಲನಚಿತ್ರ, ಕಿರುತೆರೆ ಕಲಾವಿದ ‘ಕುಸಲ್ ದ ಅರಸೆ’ ಖ್ಯಾತಿಯ ನವೀನ್ ಡಿ. ಪಡೀಲ್ ಅವರಿಗೆ 2025ನೇ ಸಾಲಿನ ರೂಪಾಯಿ 1 ಲಕ್ಷ ಮೊತ್ತದ ಪ್ರತಿಷ್ಠಿತ ‘ವಿಶ್ವಪ್ರಭಾ ಪುರಸ್ಕಾರ ನೀಡಿ’ ಗೌರವಿಸಲಾಯಿತು. ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ “ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ ಅನುಸರಿಸುತ್ತಾರೆ. ಹಲವರು ಬಾರ್ಗೆ ಹೋಗುತ್ತಾರೆ. ಅದರಿಂದ ಹಣ ವ್ಯರ್ಥವಾಗುತ್ತದೆಯೇ ಹೊರತು ಬೇರೇನೂ ಸಿಗದು. ಆದರೆ, ನಾಟಕಗಳ ವೀಕ್ಷಣೆಯಿಂದ, ಅಲ್ಲಿನ ಧನಾತ್ಮಕ ಹಾಗೂ ಹಾಸ್ಯ ದೃಶ್ಯಗಳಿಂದ ಮನಸ್ಸಿಗೆ ಅಂಟಿಕೊಂಡ ಒತ್ತಡ…
ಮಂಗಳೂರು: . ಎಸ್. ವಿ. ಪರಮೇಶ್ವರ ಭಟ್ಟ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21 ಫೆಬ್ರವರಿ 2025ರ ಶುಕ್ರವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಸಾಹಿತಿ ಚಂದ್ರಕಲಾ ನಂದಾವರ ಹಾಗೂ ನಿವೃತ್ತ ಪ್ರಾಧ್ಯಾಪಕ ಕಾಸರಗೋಡಿನ ಪಿ. ಕೃಷ್ಣ ಭಟ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಎಸ್. ವಿ. ಪಿ. ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎ. ವಿವೇಕ ರೈ ಮಾತನಾಡಿ “ಕನ್ನಡ ಭಾಷಾ ಲೋಕಕ್ಕೆ ಎಸ್. ವಿ. ಪಿ. ಅವರ ಕೊಡುಗೆ ಮಹತ್ತರವಾದುದು. ಜಿಲ್ಲೆಯಲ್ಲಿ ಇಂದಿಗೂ ಕನ್ನಡದ ವಾತಾವರಣ ಉಳಿಯಲು ಪರಮೇಶ್ವರ ಭಟ್ಟರ ಕೊಡುಗೆ ಬಹಳಷ್ಟಿದೆ. 1968ರಲ್ಲಿ ಮೈಸೂರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆ ಆದಾಗ ಮಂಗಳೂರು ಬಂದವರು ಪ್ರೊ. ಪರಮೇಶ್ವರ ಭಟ್ಟರು. ಮಂಗಳೂರಿನ ಎಲ್ಲಾ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ಬರಬೇಕೆಂದು ಪ್ರಾಯತ್ನಿಸಿದವರು ಎಸ್. ವಿ. ಪಿ.…
ಮಂಗಳೂರು : ಅಲೆವೂರಾಯ ಪ್ರತಿಷ್ಠಾನದ ಎಂಟನೇ ವರ್ಷದ ‘ಯಕ್ಷ ತ್ರಿವೇಣಿ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 22 ಫೆಬ್ರವರಿ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ದೇಶದ ಹಲವಾರು ಕಲೆಗಳಲ್ಲಿ ಯಕ್ಷಗಾನವು ಅಗ್ರಸ್ಥಾನವನ್ನು ಪಡೆದಿದೆ. ನೃತ್ಯ, ಸಾಹಿತ್ಯ ಹಾಗೂ ಹಿಮ್ಮೇಳಗಳಿಂದ ಶ್ರೀಮಂತವಾಗಿರುವ ಈ ಕಲೆಯು ವಿಶ್ವದಲ್ಲಿಯೇ ಸಶಕ್ತ – ಸಧೃಡ ಕಲೆಯಾಗಿದೆ. ಬೇರೆ ರಾಜ್ಯಗಳಲ್ಲಿರುವ ಕಲೆಗಳೂ ಹೆಚ್ಚು ಹೆಚ್ಚಾಗಿ ಯಕ್ಷಗಾನಕ್ಕೆ ಸಮೀಪವೇ ಇವೆ. ರಾಜಕಲೆಯಾದ ಇದನ್ನು ರಾಜಾಶ್ರಯದಿಂದ ಬೆಳೆಸೋಣ” ಎಂದು ಹೇಳಿದರು. ಮಂಗಳಾದೇವಿ ದೇವಳದ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ನಮ್ಮಂತಹಾ ದೇವಸ್ಥಾನಗಳಲ್ಲಿ ಇಂತಹಾ ಕಲಾಪ್ರಕಾರಗಳ ಪ್ರದರ್ಶನಕ್ಕೆ ಖಂಡಿತಾ ಅವಕಾಶವಿದೆ. ಅಲೆವೂರಾಯ ಸಹೋದರರ ಈ ಪ್ರಯತ್ನಕ್ಕೆ ಶುಭವಾಗಲಿ” ಎಂದು ಶುಭಾಸಂಶನೆಗೈದರು. ಅಲೆವೂರಾಯ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸದ ಉಪನ್ಯಾಸಕ, ಹಾಗೂ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀ ಸುಜಯೀಂದ್ರ ಹಂದೆ ಮಾತನಾಡಿ ’ನಮ್ಮ ಮಕ್ಕಳ ಮೇಳದಂತೆಯೇ ಇಲ್ಲಿಯೂ ಇದೆ. ಇದನ್ನು ನಾವು ದೇವರ ಕಲೆ ಎಂದು…