Author: roovari

ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ ‘ನೃತ್ಯ ಭಾನು’ 93ನೇ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ದಿನಾಂಕ 12 ಸೆಪ್ಟೆಂಬರ್ 2025ರಂದು ಸಂಜೆ 06-30 ಗಂಟೆಗೆ ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಇದು ಶಾಂತಲಾ ನಾಟ್ಯ ಸಿರಿ ಪುರಸ್ಕೃತ ಗುರು ಬಿ. ಭಾನುಮತಿ ಇವರಿಗೆ ಸಮರ್ಪಿತ ಉತ್ಸವವಾಗಿದೆ. ಶ್ವೇತಾ ಕೃಷ್ಣ ರಾವ್ ಮತ್ತು ಮೃದುಲಾ ರಾಮಾನುಜನ್ ಇವರಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ.

Read More

ಧಾರವಾಡ : ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೋರಿಯಲ್ ಫೌಂಡೇಷನ್ ಟ್ರಸ್ಟ್ ಬೆಂಗಳೂರು ಮತ್ತು ಭಾರತೀಯ ಸಂಗೀತ್ ವಿದ್ಯಾಲಯ ಧಾರವಾಡ ಇವರು ಪ್ರಸ್ತುತ ಪಡಿಸುವ ‘ಸ್ಮರಣೆ’ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸಂಗೀತೋತ್ಸವ -2025 ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಧಾರವಾಡದ ಸೃಜನ ಅಣ್ಣಾಜಿ ರಾವ್ ಶೀರೂರ್ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ‘ಇನ್ಫೋಸಿಸ್ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮಾರಕ ಪ್ರಶಸ್ತಿ -2025’ ಮತ್ತು ‘ಉಸ್ತಾದ್ ಬಾಲೇಖಾನ್ ಸ್ಮಾರಕ ಪಕ್ಕವಾದ್ಯ ಪ್ರಶಸ್ತಿ -2025’ ಪ್ರದಾನ ಮಾಡಲಾಗುವುದು. ಸಿತಾರ್ ರತ್ನ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಆಯಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

Read More

ಲೇಖಕಿ ಸೃಜನಾ ಸೂರ್ಯ ಇವರ ಮೊದಲ ಕಥಾಸಂಕಲನ ‘ದುಂಡು ಮಲ್ಲಿಗೆಯ ಮುಖದವಳು’. ಇದರಲ್ಲಿ ಹತ್ತೊಂಬತ್ತು ಸುಂದರ ಕಥೆಗಳಿವೆ. ಮನಶ್ಶಾಸ್ತ್ರದಲ್ಲಿ ಎಂ.ಎ. ಮಾಡಿದ ಸೃಜನಾರವರಿಗೆ ಅದೇ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಕುತೂಹಲ ಹುಟ್ಟಿಸುತ್ತಾ ಹೋಗುವ ಕಥೆಗಳನ್ನು ಬರೆಯುವುದು ಕಷ್ಟವೇನಲ್ಲ ಅನ್ನುವುದಕ್ಕೆ ಇಲ್ಲಿನ ಹಲವು ಕಥೆಗಳು ಸಾಕ್ಷಿಯಾಗಿವೆ. ಅಲ್ಲದೆ ಪಾತ್ರಗಳ ಒಳತೋಟಿಯನ್ನು ಗುರುತಿಸುವುದರಲ್ಲೂ ಅದು ಅವರಿಗೆ ಸಹಕಾರಿಯಾಗಿದೆ. ಮೊದಲ ಕಥೆ ‘ಮುಚ್ಚಿದ ಕಿಟಿಕಿ’ಯಲ್ಲಿ ಪೂಜಾ- ಸೀಮಾ ಅನ್ನುವ ಇಬ್ಬರು ಆತ್ಮೀಯ ಗೆಳತಿಯರು. ಇಬ್ಬರ ನಡುವಣ ಪ್ರೀತಿ ಅದೆಷ್ಟು ಗಾಢವಾಗಿದೆಯೆಂದರೆ ಸೀಮಾಗೆ ಪೂಜಾಳ ಜತೆಗೇ ಬದುಕು ಸಾಗಿಸೋಣ ಅನ್ನಿಸುತ್ತದೆ. ಆದರೆ ಹಿರಿಯರ ಮುಂದೆ ಹೇಳಿಕೊಳ್ಳುವ ಧೈರ್ಯವಾಗುವುದಿಲ್ಲ. ಹಾಗೆ ಸೀಮಾಳ ಮದುವೆ ನಿಶ್ಚಯವಾದಾಗ ಕೊನೆಯದಾಗಿ ಅವಳು ಪೂಜಾಳಲ್ಲಿ ಭವಿಷ್ಯದ ಬದುಕಿನ ಭರವಸೆ ಕೊಡಬಹುದೇ ಎಂದು ಕೇಳುತ್ತಾಳೆ. ಆದರೆ ಪೂಜಾ ಬೇಡವೆನ್ನುತ್ತಾಳೆ. ತನ್ನಂಥ ಸಲಿಂಗಿಗೆ ಮದುವೆಯಿಂದ ತೊಂದರೆಯಾದೀತು. ಆದರೆ ಸೀಮಾಳಂಥ ದ್ವಿಲಿಂಗಿಗೆ ಏನೂ ನಷ್ಟವಾಗಲಾರದು ಅನ್ನುತ್ತಾಳೆ. ಮದುವೆಯಾಗಿ ಬೆಂಗಳೂರಿಗೆ ಹೋಗಿ ನೆಲೆಯೂರುವ ಸೀಮಾ, ಕೆಲವು ವರ್ಷಗಳ ನಂತರ ಒಂದು ದಿನ…

Read More

ಮೈಸೂರು : ರಂಗಾಯಣ ಮೈಸೂರು ಇದರ ಭಾರತೀಯ ರಂಗಶಿಕ್ಷಣ ಕೇಂದ್ರದ 2025-26ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಕುಮಾರವ್ಯಾಸ ಭಾರತದ ರಂಗ ವಾಚಿಕ ಪ್ರಯೋಗ ‘ಹಡೆದ ಕೊಡಲಿಗಳು’ ನಾಟಕ ಕೆ.ಜಿ. ಮಹಾಬಲೇಶ್ವರ ಇವರ ರಂಗ ಪಠ್ಯ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

Read More

ಕಾರ್ಕಳ : ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ. ಇ. ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಕಲ್ಲು ,ಮರ ಹಾಗೂ ಲೋಹ ಶಿಕ್ಷಣ ವಿಭಾಗಗಳಲ್ಲಿ 18 ತಿಂಗಳ ಅವಧಿಯ ಉಚಿತ ತರಬೇತಿಯ ಹೊಸ ಬ್ಯಾಚ್ ದಿನಾಂಕ 15 ಸೆಪ್ಟೆಂಬರ್ 2025ರಂದು ಪ್ರಾರಂಭವಾಗಲಿದ್ದು, ಈ ತರಗತಿಗೆ ಸೇರಲಿಚ್ಛಿಸುವ 18 ರಿಂದ 35 ವರ್ಷದೊಳಗಿನ 7ನೇ ತರಗತಿ ಕಲಿತ ಆಸಕ್ತ ಯುವಜನರು ಕೂಡಲೇ ಸಂಸ್ಥೆಯ ಆವರಣದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಬೆಳಿಗ್ಗೆ 10.30 ರಿಂದ ಸಂಜೆ 4.00 ಗಂಟೆಯ ಒಳಗೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಯು ತಂದೆ ಅಥವಾ ತಾಯಿಯ ಜೊತೆಗೆ ಬರಬೇಕು ಹಾಗೂ ಈ ಕೆಳಗೆ ನಮೂದಿಸಿದ ದಾಖಲೆ ಪ್ರತಿಗಳನ್ನು ತರಬೇಕು. 1. ಅಭ್ಯರ್ಥಿಯ ಆಧಾರ್ ಕಾರ್ಡ್ 2. ಪೋಷಕರ ಆಧಾರ್ ಕಾರ್ಡ್ 3. ರೇಷನ್ ಕಾರ್ಡ್ 4. Marks ಕಾರ್ಡ್ 5. ವರ್ಗಾವಣೆ ಪ್ರಮಾಣ ಪತ್ರ (ಟಿ. ಸಿ.) 6. ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ 7. ಪಾಸ್ ಪೋರ್ಟ್…

Read More

ಪುತ್ತೂರು : ‘ಬಹುವಚನಂ’ ಪುತ್ತೂರು ಆಯೋಜಿಸುವ ‘ಭೂತಾರಾಧನೆ’ ಪ್ರಸ್ತುತ ಪರಿಸ್ಥಿತಿ ಯಲ್ಲಿನ ವರ್ತಮಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 14 ಸೆಪ್ಟೆಂಬರ್ 2025ರ ರವಿವಾರದಂದು ಪುತ್ತೂರು ದರ್ಬೆಯ ವಿದ್ಯಾನಗರದಲ್ಲಿರುವ ಪದ್ಮನೀ ಸಭಾಭವನದಲ್ಲಿ ನಡೆಯಲಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ಉಜಿರೆ ಇಲ್ಲಿನ ಉಪನ್ಯಾಸಕರು ಹಾಗೂ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಇವರು ಭೂತಾರಾಧನೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.

Read More

ಮಂಗಳೂರು : ವಿಶ್ವಹಿಂದೂ ಪರಿಷತ್ ಆಶ್ರಯದ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಬೃಹತ್ ಜನಾಗ್ರಹ ಸಭೆಯು ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಗೋರಕ್ಷ ಜ್ಞಾನ ಮಂದಿರದಲ್ಲಿ ದಿನಾಂಕ 09 ಸೆಪ್ಟೆಂಬರ್ 2025ರ ಮಂಗಳವಾರದಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ, ನಾಟಕ, ದೈವಕೋಲ, ನೇಮ, ಭರತನಾಟ್ಯ ಸಹಿತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುವ ತೊಂದರೆಗಳನ್ನು ನಿವಾರಿಸಿ ಈ ಹಿಂದಿನಂತೆಯೇ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕು. ಮುಂದೆ ಬರುವ ನಾಡಹಬ್ಬ ದಸರಾ ಸಂದರ್ಭದಲ್ಲಿ ನಿಯಮಾವಳಿ ಪ್ರಕಾರ 12 ದಿನಗಳ ಕಾಲ ರಿಯಾಯಿತಿ ಕೊಟ್ಟು ಸರಕಾರ ಆದೇಶಿಸಬೇಕು ಎಂದು ಸಮಿತಿ ವತಿಯಿಂದ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಶಾಸಕರ ಮುಖೇನ ಮನವಿ ಸಲ್ಲಿಸಲಾಯಿತು. ಯಕ್ಷಗಾನದ ಹಿಮ್ಮೇಳ, ಮುಮ್ಮೇಳದವರು, ವಿವಿಧ ನಾಟಕ ತಂಡದ ಕಲಾವಿದರು, ತಂತ್ರಜ್ಞರು, ದೈವ ನರ್ತಕರು, ಕಾರ್ಮಿಕರು, ಸೌಂಡ್ಸ್ ಆ್ಯಂಡ್ ಲೈಟ್ಸ್‌ನವರು, ಶಾಮಿಯಾನ, ಫ್ಲವರ್ ಡೆಕೊರೇಟರ್ ಗಳು, ಕ್ಯಾಟರಿಂಗ್,…

Read More

ಮಡಿಕೇರಿ : ಚೆಂಬು ಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ 7ನೇ ವರ್ಷದ ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶವು ಪ್ರಕಟಗೊಂಡಿದ್ದು, ಸ್ಪರ್ಧೆಗೆ ಬಂದಂತಹ 35 ಕವಿತೆಗಳಲ್ಲಿ 3 ಕವಿತೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಸ್ಪರ್ಧೆಗೆ ಬಂದಂತಹ ಉಳಿದೆಲ್ಲಾ ಕವಿತೆಗಳನ್ನು ಬರೆದವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ. ಕವಿತೆಗಳ ಮೌಲ್ಯಮಾಪಕರಾಗಿ ಕವಯಿತ್ರಿ ಶ್ರೀಮತಿ ಸ್ಮಿತಾ ಅಮೃತರಾಜ್ ಉಪಸ್ಥಿತರಿದ್ದರು. ಬಹುಮಾನಗಳ ಪ್ರಾಯೋಜಕರಾಗಿ ಬಾರಿಯಂಡ ಜೋಯಪ್ಪ ಹಾಗೂ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ತಲಾ 1 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಪ್ರಥಮ ಬಹುಮಾನ ಜೀವನ್ ಪುರ ಇವರು ಬರೆದಂತಹ “ಬೊದ್ದು ಬಾಳಲಿನಂಗೆ” ಕವಿತೆಗೆ, ದ್ವಿತೀಯ ಬಹುಮಾನ ವಿಮಲಾರುಣ ಪಡ್ಡಂಬೈಲು ಇವರು ಬರೆದಂತಹ “ಆಟಿ” ಕವಿತೆಗೆ ಹಾಗೂ ತೃತೀಯ ಬಹುಮಾನ ಬಿಟ್ಟರ ಚೋಂದಮ್ಮ ಬೆಂಗಳೂರು ಇವರು ಬರೆದಂತಹ “ನೆಂದೇ ಬಾತ್” ಕವಿತೆಗೆ ಲಬಿಸಿದೆ.

Read More

ಹಾಸನ : ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿ ದಿನಾಂಕ 08 ಸೆಪ್ಟೆಂಬರ್ 2025 ರಂದು ಆಚಾರ್ಯ ವಾಣಿಜ್ಯ ಪಿ. ಯು. ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ “ಕಾವ್ಯ ಸಮಾಜದ ಎಲ್ಲಾ ಸ್ಥರದ ಅದರಲ್ಲೂ ತಳ ಸಮುದಾಯದ ತಲ್ಲಣಗಳಿಗೆ ಧ್ವನಿಯಾಗಬೇಕೆಂದರೆ ಕವಿಗೂ ಆ ಸಾಮಾಜಿಕ ಬದ್ಧತೆ, ಹೃದಯ ವೈಶಾಲ್ಯತೆ ಅತ್ಯಗತ್ಯ. ಇತಿಹಾಸವನ್ನು ಅರಿಯದವ ಇತಿಹಾಸವನ್ನು ಹೇಗೆ ಸೃಷ್ಠಿಸಲಾರನೋ.. ಹಾಗೆಯೇ ಕಾವ್ಯೇತಿಹಾಸದ ಪರಿವಿಲ್ಲದವ ಸೃಜನಾತ್ಮಕ ಕಾವ್ಯ ಸೃಷ್ಠಿಸಲಾರ. ಪ್ರತಿಯೊಬ್ಬ ಕವಿಗೂ ನಮ್ಮ ಪರಂಪರೆಯ ಅರಿವಿರಬೇಕು. ಕಾವ್ಯವೆಂಬುದು ಪರಂಪರೆಗಳನ್ನು ಬೆಸೆಯುವ ಕೊಂಡಿ. ಕವಿಗಳು ಪರಂಪರೆಯ ಇತಿಹಾಸಕಾರರು. ಕಾವ್ಯವೆಂಬುದು ಕೇವಲ ಕಲ್ಪನಾತೀತವಾಗದೆ ವಾಸ್ತವ ಬದುಕಿನ ಮೇಲೆ ಬೆಳಕು ಚೆಲ್ಲಬೇಕು. ವೈಚಾರಿಕ, ವೈಜ್ಞಾನಿಕ ದೃಷ್ಠಿಕೋನಗಳನ್ನು ಒಳಗೊಂಡಿದ್ದರೆ ಮಾತ್ರ ಅಂತಹ ಕಾವ್ಯ ಕಾಲಗರ್ಭದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಬರೆದದ್ದೆಲ್ಲಾ ಕಾವ್ಯವಾಗುವುದಿಲ್ಲ. ಗದ್ಯಕ್ಕೂ-ಪದ್ಯಕ್ಕೂ ವ್ಯಾತ್ಯಾಸವಿದೆ. ಕಾವ್ಯಕ್ಕೆ ನಿರ್ದಿಷ್ಟ ವ್ಯಾಖ್ಯಾನವಿಲ್ಲದಿದ್ದರೂ…

Read More

ಸಾಲಿಗ್ರಾಮ : ಸಂಗೀತ ಅವಿನಾಶಿ ಪ್ರತಿಷ್ಠಾನ ಮತ್ತು ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಸಮರ್ಪಿಸುವ ‘ಅವಿನಾಶ್ ಹೆಬ್ಬಾರ್ ದಶಮ ಸಂಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಮುಂಜಾನೆ 10-00 ಗಂಟೆಗೆ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಗಾಯನ, ಸಂತೂರ್ ವಾದನ ಮತ್ತು ಕೊಳಲು ವಾದನ ಪ್ರಸ್ತುತಗೊಳ್ಳಲಿದೆ. ಮುಂಜಾನೆ 10-00 ಗಂಟೆಗೆ ಚೈತನ್ಯ ಭಟ್ಟ ಇವರಿಂದ ಸಂತೂರ್ ವಾದನ, ಶ್ರೀಧರ ಹೆಗಡೆ ಕಲಭಾಗ ಮತ್ತು ವಿನಾಯಕ ಹೆಗಡೆ ಮುತಮರಡು ಇವರಿಂದ ಗಾಯನ, ನಾಗರಾಜ ಹೆಗಡೆ ಶಿರನಾಳ ಇವರಿಂದ ಕೊಳಲು ವಾದನಕ್ಕೆ ಗುರುರಾಜ ಹೆಗಡೆ ಮತ್ತು ಅಕ್ಷಯ ಭಟ್ಟ ತಬಲಾ ಹಾಗೂ ಶಂಭು ಭಟ್ಟ ಕೋಟ ಮತ್ತು ಶಶಿಕಿರಣ ಮಣಿಪಾಲ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More