Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ನಾಟ್ಯ ಸಂಪದ ಕಲಾ ಶಾಲೆಯ ಚತುರ್ಥ ವಾರ್ಷಿಕೋತ್ಸವ ಪ್ರಯುಕ್ತ ನಾಟ್ಯಸಂಪದ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 15 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ರಾಜೇಶ್ವರಿ ವಿದ್ಯಾ ಶಾಲೆಯಲ್ಲಿ ಆಯೋಜಿಸಲಾಗಿದೆ. ಕವಿ ಜಿ.ಎಮ್. ಬರವಣಿ ವಿರಚಿತ ‘ಸುಂದೋಪಸುಂದ ಕಾಳಗ’ ಮತ್ತು ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಿಣಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ನವಗ್ರಹ ಗುಡಿಯಲ್ಲಿ ದಿನಾಂಕ 12 ಆಗಸ್ಟ್ 2025ರಂದು ತಾಳಮದ್ದಳೆ ‘ಕರ್ಣ ಪರ್ವ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಕುಮಾರಿ ಶರಣ್ಯ ನೆತ್ತರಕೆರೆ, ಮಾಸ್ಟರ್ ಸಮರ್ಥ ವಿಷ್ಣು, ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಕರ್ಣ), ಭಾಸ್ಕರ ಬಾರ್ಯ ಮತ್ತು ಮಾಂಬಾಡಿ ವೇಣುಗೋಪಾಲ ಭಟ್ (ಶ್ರೀ ಕೃಷ್ಣ), ಗುಡ್ಡಪ್ಪ ಬಲ್ಯ (ಅರ್ಜುನ), ವಿ.ಕೆ. ಶರ್ಮ ಅಳಿಕೆ (ಶಲ್ಯ), ಗಣರಾಜ ಭಟ್ ಬಡೆಕ್ಕಿಲ (ವೃದ್ಧ ವಿಪ್ರ), ಸುಬ್ಬಯ್ಯ ರೈ ಸುಳ್ಯಪದವು (ಸರ್ಪಾಸ್ತ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ರಾವ್ ಸಹಕರಿಸಿದರು.
ಸುಳ್ಯ : ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದರ ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ಸಪ್ತಾಹವು ದಿನಾಂಕ 05 ಆಗಸ್ಟ್ 2025ರಿಂದ 11 ಆಗಸ್ಟ್ 2025ರವರೆಗೆ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 05 ಆಗಸ್ಟ್ 2025ರಂದು ಕಾಲೇಜಿನ ಪ್ರಾಂಶುಪಾಲಾರಾದ ಡಾ. ಲೀಲಾಧರ್ ಡಿ.ವಿ.ಯವರು ಸಂಸ್ಕೃತ ಪತ್ರದ ಅಂಚೆಪೆಟ್ಟಿಗೆ ಅನಾವರಣಗೊಳಿಸುವ ಮೂಲಕ ನೆರವೇರಿಸಿದರು. ಒಂದು ವಾರಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಸಂಸ್ಕೃತ ಸಮೂಹ ಗಾಯನ, ಸಂಸ್ಕೃತ ಲೇಖನ ಪತ್ರ, ಸಂಸ್ಕೃತ ಪ್ರಬಂಧ ಹಾಗೂ ಸಂಸ್ಕೃತ ವೀಡಿಯೊ ಬ್ಲಾಗಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ವಿಧ್ಯಾರ್ಥಿಗಳು ಸಾರ್ವಜನಿಕರಲ್ಲಿ ಸಂಸ್ಕೃತ ಭಾಷೆಯ ಜಾಗೃತಿ ಮೂಡಿಸುವ ಸಲುವಾಗಿ ಕಾಲೇಜಿನ ವಠಾರದಲ್ಲಿ ಬೀದಿ ನಾಟಕವನ್ನು ನಡೆಸಿದರು. ದಿನಾಂಕ 08 ಆಗಸ್ಟ್ 2025ರಂದು ಸಂಸ್ಕೃತ ಸಪ್ತಾಹದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಸ್ಕೃತ ಜಾಗರಣಾ ಕಾರ್ಯಕ್ರಮವು ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಹಾಗೂ ಸುಳ್ಯ ಮಿತ್ತಡ್ಕದ ರೋಟರಿ ಪ್ರೌಢಶಾಲೆಯಲ್ಲಿ ಬೀದಿ ನಾಟಕದ…
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಾಹೆ ಇದರ ವತಿಯಿಂದ ದಿನಾಂಕ 12 ಆಗಸ್ಟ್ 2025ರಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ರಂಗನಾಥನ್ ಜನ್ಮ ದಿನಾಚರಣೆಯ ಪ್ರಯುಕ್ತ ‘ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂ.ಜಿ.ಎಂ. ಕಾಲೇಜಿನ ಗ್ರಂಥಪಾಲಕರಾದ ಶ್ರೀ ಕಿಶೋರ್ಕುಮಾರ್ ಇವರು ಮಾತನಾಡಿ “ನವ ಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸ ದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ. ಎಸ್.ಆರ್. ರಂಗನಾಥನ್ ಅವರಿಗೆ ಸಲ್ಲುತ್ತದೆ. ಅವರು ಮೂಲತ: ಗಣಿತ ಶಾಸ್ತ್ರದ ಪ್ರಾಧ್ಯಾಪಕರು. ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು (ಭಾರತದ ಗ್ರಂಥಾಲಯ ವಿಜ್ಞಾನ) ಗ್ರಂಥಾಲಯ ವಿಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ. ಅವರು ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ. ಡಾ. ಎಸ್.ಆರ್. ರಂಗನಾಥನ್ ಅವರು 12 ಅಗೋಸ್ಟ್ 1892ರಲ್ಲಿ ಜನಿಸಿದರು. ಅವರ ಕೊಡುಗೆಗಳೆಂದರೆ ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೊಲೊನ್ ವರ್ಗೀಕರಣ. ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ…
ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ವನ್ನು ಘೋಷಿಸಿತ್ತು. ಮಲಯಾಳಂ ಲೇಖಕಿ ಕೆ.ಆರ್. ಮೀರಾ ಇವರಿಗೆ ಈ ಪ್ರಶಸ್ತಿ ಲಭಿಸಿದ್ದು, ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ ದಿನಾಂಕ 10 ಆಗಸ್ಟ್ 2025 ಭಾನುವಾರದಂದು ಪ್ರಶಸ್ತಿಯನ್ನ ಪ್ರದಾನಿಸಲಾಯಿತು. ಪುರಸ್ಕೃತರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಪ್ರಶಸ್ತಿಯನ್ನು ಪ್ರದಾನಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಡೋಜ ಹಂಪ ನಾಗರಾಜಯ್ಯ “ಬುಕ್ ಬ್ರಹ್ಮ ಸಾಹಿತ್ಯ ಉತ್ಸವವು ವಿವಿಧ ಭಾಷಾ ಸಾಹಿತ್ಯದ ಇತಿಹಾಸದಲ್ಲಿ ಒಂದು ಅದ್ಭುತ ಅಧ್ಯಾಯವನ್ನು ತೆರೆಯಿತು. ಮೂರು ದಿನಗಳ ಕಾಲ ನಾಲ್ಕು ಭಾಷೆಗಳ ಒಟ್ಟು 180 ಗೋಷ್ಠಿಗಳು ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ಚರ್ಚೆಗೆ ಸಾಕ್ಷಿಯಾದವು. ಬಿ.ಬಿ.ಎಲ್.ಎಫ್.ನಂತಹ ಅರ್ಥಪೂರ್ಣ ಪರಿಕಲ್ಪನೆಗಿಂತ ನಮ್ಮ ಹೊಸ ಪೀಳಿಗೆಯ ಬರಹಗಾರರಿಗೆ ನಾವು ಬೇರೆ ಯಾವ ಉತ್ತಮ ಪರಂಪರೆಯನ್ನು ಬಿಟ್ಟುಕೊಡಬಹುದು? ಮೆಗಾ ಸಾಹಿತ್ಯ…
ಕಳೆದ ತೊಂಭತ್ತರ ದಶಕದ ಕೊನೆಯ ಕಾಲ. ನಾನು ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ‘ತುಂಬಾಡಿ ರಾಮಯ್ಯ’ ಅವರ ಹೆಸರು ಕೇಳಿದ್ದೆ. ಮೇಷ್ಟ್ರು ಎಸ್.ಜಿ. ಸಿದ್ದರಾಮಯ್ಯ ಮತ್ತು ಡಾ. ರಾಜಪ್ಪ ದಳವಾಯಿಯವರು ಪಾಠ ಮಾಡುತ್ತಿದ್ದಾಗ ಆಗ ತಾನೇ ಬಿಡುಗಡೆಯಾಗಿದ್ದ ‘ಮಣೆಗಾರ’ ಆತ್ಮಕತೆಯ ಬಗೆಗೆ ಕ್ಲಾಸಿನಲ್ಲಿ ಹೇಳುತ್ತಿದ್ದರು. ‘ಯಾರಿವರು ತಮ್ಮ ಕೃತಿಗೆ ಸಮುದಾಯ ಸೂಚಕವಾದ ಹೆಸರಿಟ್ಟಿದ್ದಾರಲ್ಲ’ ಎಂದು ಆಶ್ಚರ್ಯನಾಗಿದ್ದೆ. ಆ ಕೃತಿ ನನ್ನ ಕೈಗೆ ಸಿಕ್ಕಿ ಓದಿದಾಗ ನನ್ನೂರ ಹತ್ತಿರದ ತುಂಬಾಡಿ ಗೊಲ್ಲಹಳ್ಳಿಯ ಹೆಸರು, ಅದರೊಳಗಿನ ಅನುಭವಗಳು ನನ್ನನ್ನು ತಲ್ಲಣಗೊಳಿಸಿದ್ದವು. ‘ಮಣೆಗಾರ’ ತುಮಕೂರಿನ ಮೊದಲ ‘ದಲಿತ ಆತ್ಮಕಥೆ’. ದಲಿತ ಅನುಭವವನ್ನು ವಿಭಿನ್ನವಾಗಿ ಕಟ್ಟಿದ ಕೃತಿ. ‘ಮುಟ್ಟಿದರೆ ಮಿಡಿವ ಮಣೆಗಾರ’ (ರಹಮತ್ ತರೀಕೆರೆ) ಎಂದೆಲ್ಲಾ ಕನ್ನಡದ ಚಿಂತನಾವಲಯದಲ್ಲಿ ದೊಡ್ಡ ಚರ್ಚೆಯನ್ನೇ ಈ ಕೃತಿ ಹುಟ್ಟಿಹಾಕಿತ್ತು. ಇಪ್ಪತೈದು ವರ್ಷಗಳ ಹಿಂದೆ ಬೆರಗಿನಿಂದ ನೋಡುತ್ತಿದ್ದ ಹಿರಿಯರಾದ ತುಂಬಾಡಿ ರಾಮಯ್ಯನವರ ಬರಹಕ್ಕೆ ಕಡನುಡಿಗಳನ್ನು ಬರೆಯುವ ಅವಕಾಶ ಒದಗಿಬಂದಿದೆ. ನನ್ನಂತಹ ಕಿರಿಯನಿಂದ ಬರೆಸಬೇಕೆಂಬ ಅವರ ನಿಲುವು ನನ್ನಲ್ಲಿ ಮುಜುಗರವನ್ನು ಮತ್ತು ಅವರ…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ನಡೆಯುವ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವನ್ನು ದಿನಾಂಕ 16 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಪರಿವರ್ತನ ರಂಗ ಸಮಾಜದ ಕಲಾವಿದರು ಅಭಿನಯಿಸುವ ರವೀಂದ್ರ ಭಟ್ ಇವರ ಕೃತಿಯಾಧಾರಿತ ನಾಟಕ ‘ಮೂರನೇ ಕಿವಿ’ ಪ್ರದರ್ಶನಗೊಳ್ಳಲಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕದ ಬಗ್ಗೆ : ಮಾತು ಬಾರದಿರುವ ಪ್ರಪಂಚದಲ್ಲಿ ಶಬ್ದ ಮತ್ತು ಮಾತಿಗೆ ಅಗಾಧವಾದ ಪ್ರಾಮುಖ್ಯತೆ ಇದೆ. ಹುಟ್ಟಿನಿಂದಲೇ ಕಿವುಡರಾದವರಿಗೆ ಮಾತನಾಡುವುದನ್ನು ಕಲಿಸಲು ನಡೆಸುವ ದೀರ್ಘ ಪ್ರಯತ್ನವೇ ಮೂರನೇ ಕಿವಿ ಕೃತಿಯ ಪ್ರಮುಖ ಉದ್ದೇಶ. ಮಾತು ಕಲಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ವಿಜ್ಞಾನವಿದೆ.…
ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯ ವತಿಯಿಂದ ಆ. 8, 9, 10 ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2025ʼರ ಎರಡನೇಯ ದಿನದ ಕಾರ್ಯಕ್ರಮಗಳು ದಿನಾಂಕ 9 ಆಗಸ್ಟ್ 2025ರ ಶನಿವಾರದಂದು ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ನಡೆದಿದ್ದು, ಹಲವು ವಿಚಾರಗೋಷ್ಠಿಗಳಿಗೆ ಸಾಹಿತ್ಯ ಉತ್ಸವದ 8 ವೇದಿಕೆಗಳು ಸಾಕ್ಷಿಯಾದವು. ಉತ್ಸವದ ಮುಖ್ಯ ವೇದಿಕೆ ಮಂಟಪ ಸಭಾಂಗಣದಲ್ಲಿ ನಡೆದ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರ ʻಮಾರ್ನಿಂಗ್ ಮೆಲೋಡಿʼ ಕಾರ್ಯಕ್ರಮವು ಎರಡನೇಯ ದಿನದ ಕಾರ್ಯಕ್ರಮಕ್ಕೆ ಮುನ್ನುಡಿ ನೀಡಿತು. ನಂತರದಲ್ಲಿ ಇದೇ ವೇದಿಕೆಯಲ್ಲಿ ಪೌಲ್ ಜಚಾರೀಯ, ಎಚ್.ಎಸ್. ಶಿವಪ್ರಕಾಶ್, ಅಜಿತನ್, ವೋಲ್ಗಾ, ಅನುಜ ಚಂದ್ರಮೌಲಿ, ಟಿ. ಎಂ. ಕೃಷ್ಣ, ಸುಮಂಗಲಾ, ಶೈಲಜಾ, ಸಿ. ಮೃಣಾಲಿನಿ, ಕಿರುಂಗೈ ಸೇತುಪತಿ, ಕೆ. ಶ್ರೀನಿವಾಸ್, ರಶ್ಮೀ ವಾಸುದೇವ, ಸುಧೀಶ್ ವೆಂಕಟೇಶ್, ಮಯೂರ ಶೇಯಾಂಶ್ ಕುಮಾರ್, ವಿ. ಐಶ್ವರ್ಯ, ಮನು ಪಿಲ್ಲೈ, ವಿ.ಎಸ್. ಕೈಕಸಿ, ಆಡೂರು ಗೋಪಾಲಕೃಷ್ಣನ್, ಗಿರೀಶ್…
ಬೆಂಗಳೂರು : ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳೂ ಆದ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಇವರು ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿ ಇರುವ ಪ್ರತಿಷ್ಠಿತ ಬಿ. ಎಂ. ಶ್ರೀ. ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಆಯ್ಕೆ ಆಗಿರುತ್ತಾರೆ ಎಂದು ಬಿ. ಎಂ. ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಹಾಗೂ ಕಾರ್ಯದರ್ಶಿ ಡಾ. ಶಾಂತರಾಜು ಈ ವಿಷಯವನ್ನು ತಿಳಿಸಿದ್ದಾರೆ. ಸಾಹಿತಿಗಳಾಗಿ, ಸಾಂಸ್ಕೃತಿಕ ಚಿಂತಕರಾಗಿ, ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿರುವ ಸಿಸಿರಾ ಇವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿಕೊಂಡು 1998 ರಿಂದಲೂ ಕನ್ನಡಪರವಾದ ಹಾಗೂ ಮಹಾತ್ಮ ಗಾಂಧೀಜಿ, ವಿವೇಕಾನಂದರ ವಿಚಾರಧಾರೆಗಳ ಪ್ರಸಾರ ಕಾರ್ಯದಲ್ಲಿ ತಮ್ಮನ್ನು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿರುತ್ತಾರೆ.
ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ʻಸ್ವಾತಂತ್ರ್ಯೋತ್ಸವ ಕಥಾʼ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯ ಪ್ರಶಸ್ತಿಯನ್ನು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ ದಿನಾಂಕ 9 ಆಗಸ್ಟ್ 2025ರ ಶನಿವಾರದಂದು ಪ್ರದಾನಿಸಲಾಯಿತು. ಈ ಬಾರಿಯ ಬುಕ್ ಬ್ರಹ್ಮ ಕಥಾ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಸುಲ್ತಾನ್ ಮನ್ಸೂರ್ ಅವರ ʻಪೆರೇಡ್ ಪೊಡಿಮೋನುʼ ಕತೆ ಪಡೆದುಕೊಂಡಿತು. ಈ ಪ್ರಶಸ್ತಿಯು ರೂಪಾಯಿ 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ದ್ವಿತೀಯ ಬಹುಮಾನವು ಸದಾಶಿವ ಸೊರಟೂರು ಅವರ ʻಬೆಳಕು ಕುಡಿದ ಸಂಜೆʼ ಕತೆಗೆ ಲಭಿಸಿದ್ದು, ಪ್ರಶಸ್ತಿಯು ರೂಪಾಯಿ 25,000 ನಗದು ಹಾಗೂ ಪ್ರಶಸ್ತಿ ಫಲಕ, ತೃತೀಯ ಬಹುಮಾನವು ದಾದಾಪೀರ್ ಜೈಮನ್ ಅವರ ʻದಿಗಿಲುʼ ಕಥೆಗೆ ಲಭಿಸಿದ್ದು, ಪ್ರಶಸ್ತಿಯು ರೂಪಾಯಿ 15,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು. ಸಮಾಧಾನಕರ ಪ್ರಶಸ್ತಿಗಳನ್ನು ಅಕ್ಷತಾ ಕೃಷ್ಣಮೂರ್ತಿ ಅವರ…