Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಕು. ಪ್ರಸನ್ನಾ ಹೆಚ್. ಇವರು 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ವಿದ್ವತ್ ಪೂರ್ವ ರಾಜ್ಯ ಮಟ್ಟದ ಸಂಗೀತ ಹಾಡುಗಾರಿಕೆ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಈಕೆ ಚಿಟ್ಪಾಡಿಯ ಹರಿಕೃಷ್ಣ ಆಚಾರ್ಯ ಮತ್ತು ವಿದ್ಯಾ ದಂಪತಿಗಳ ಸುಪುತ್ರಿ. ಸಂಗೀತ ಶಿಕ್ಷಕಿ ವಿದುಷಿ ವಿನುತಾ ಆಚಾರ್ಯ ಹಾಗೂ ವಿದುಷಿ ಭಾರ್ಗವಿ ಹೆಚ್. ಚೆನ್ನೈ ಇವರ ಶಿಷ್ಯೆಯಾಗಿರುತ್ತಾರೆ.
ನೃತ್ಯರಂಗದಲ್ಲಿ ಸದ್ದಿಲ್ಲದೆ ಸಾಧನಾ ಪಥದಲ್ಲಿ ಸಾಗುತ್ತಿರುವ ನೃತ್ಯಗುರು ಶ್ರೀಮತಿ ಸುನೀತಾ ಅರವಿಂದ್ ನೇತೃತ್ವದ ‘ಕಲಾಂತರಿಕ್ಷಂ ನೃತ್ಯಕ್ಷೇತ್ರ’ ನೃತ್ಯಸಂಸ್ಥೆಯ ಪುಟಾಣಿ ನರ್ತಕಿಯರು ಇತ್ತೀಚೆಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಅತ್ಯಾಕರ್ಷಕ ವೇಷಭೂಷಣಗಳಿಂದ ವೇದಿಕೆಯ ಮೇಲೆ ಬಹು ಸೊಗಸಾಗಿ ನರ್ತಿಸಿದ ದೃಶ್ಯ ಅನನ್ಯವಾಗಿತ್ತು. ಸುಂದರ ವಿನ್ಯಾಸದ ನೃತ್ಯ ಸಂಯೋಜನೆ ಮತ್ತು ಕೃತಿಗಳ ಸಮರ್ಥ ಪ್ರಸ್ತುತಿಯಲ್ಲಿ ನೃತ್ಯಗುರು ಸುನೀತಾ ಅರವಿಂದ್ ಅವರ ಬಹು ಪರಿಶ್ರಮದ ಬದ್ಧತೆಯ ತರಬೇತಿ ಎದ್ದು ಕಾಣುತ್ತಿತ್ತು. ಸುಮಾರು ಮೂರು ಗಂಟೆಗಳ ಕಾಲ 75 ಉದಯೋನ್ಮುಖ ನರ್ತಕಿಯರು ರಂಗದ ಮೇಲೆ ಬಹು ಸಾಮರಸ್ಯದಿಂದ ಹೆಜ್ಜೆಗಳನ್ನು ಹಾಕಿ, ತಮ್ಮ ಅಂಗಶುದ್ಧ ನರ್ತನ ವೈಖರಿಯಿಂದ, ಆಂಗಿಕಾಭಿನಯದ ಸೊಗಸಿನಿಂದ, ಮುದನೀಡುವ ಅಭಿನಯದಿಂದ ಕಲಾರಸಿಕರನ್ನು ಆಕರ್ಷಿಸಿದರು. ವರ್ಣರಂಜಿತ ವಸ್ತ್ರವಿನ್ಯಾಸ, ಬಹು ಆಸ್ಥೆಯಿಂದ ಮಾಡಿದ್ದ ಪ್ರಸಾಧನದ ಕಲಾತ್ಮಕತೆ, ಆಭರಣಗಳ ಆಯ್ಕೆ ಬಹು ವಿಶಿಷ್ಟವೆನಿಸಿತು. ಹಿರಿಯ ಕಲಾವಿದರಷ್ಟೇ ಎಲ್ಲ ಅಂಶಗಳಲ್ಲೂ ಪುಟ್ಟಮಕ್ಕಳಿಗೆ ನೀಡಿದ್ದ ಆದ್ಯತೆ ಗಮನಾರ್ಹವಾಗಿತ್ತು. ಶುಭಾರಂಭಕ್ಕೆ ಅರಳು ಪ್ರತಿಭೆಗಳು ಬಹು ಶ್ರದ್ಧೆಯಿಂದ ಸಾಕಾರಗೊಳಿಸಿದ ‘ಪುಷ್ಪಾಂಜಲಿ’ ಮತ್ತು ವಿಘ್ನ ವಿನಾಯಕನ ಸ್ತುತಿಯ ನರ್ತನಾ ವಿಲಾಸ…
ಬೆಂಗಳೂರು : ಅಭಿನಯ ತರಬೇತಿ ಕೇಂದ್ರ ‘ರಂಗಶಾಲ’ ಅರ್ಪಿಸುತ್ತಿರುವ ವಿನಯ್ ನೀನಾಸಂ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಒ.ಬಿ.ಇ.’ ಪ್ರಶಸ್ತಿ ಸಿಗೋದು ಬಹಳ ಕಷ್ಟ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 96633 99966 ಮತ್ತು 86600 11960 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಬಿ. ದಾಮೋದರ ನಿಸರ್ಗ ಸಂಸ್ಮರಣ ಸಮಿತಿ ವತಿಯಿಂದ ದಿನಾಂಕ 31 ಆಗಸ್ಟ್ 2025ರಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದ್ವಿತೀಯ ಸಂಸ್ಮರಣ ಸಮಾರಂಭದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ತುಳುನಾಡು, ನುಡಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡಿದ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ನಮ್ಮಲ್ಲಿವೆ. ತುಳು ಚಳುವಳಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಹಿರಿಯರೆಲ್ಲ ಗತಿಸಿ ಹೋಗಿದ್ದಾರೆ. ಯಾವುದಕ್ಕೂ ಒಂದು ತಾರ್ಕಿಕ ಅಂತ್ಯ ಈವರೆಗೆ ಲಭಿಸಿಲ್ಲವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣಕ್ಕೆ ಪ್ರಾಮಾಣಿಕವಾಗಿ ದುಡಿದವರು ಸದಾ ಸ್ಮರಣೀಯರು. ಅಂಥವರಲ್ಲಿ ಮೂರು ದಶಕಗಳಷ್ಟು ಕಾಲ ಕುಡ್ಲ ತುಳು ಕೂಟದ ಚುಕ್ಕಾಣಿ ಹಿಡಿದು ಹಲವು ರಂಗಗಳಲ್ಲಿ ಕೆಲಸ ಮಾಡಿದ ದಾಮೋದರ ನಿಸರ್ಗರು ತುಳು ಭಾಷೆ ಮತ್ತು ಸಂಸ್ಕೃತಿಯ ನೈಜ ಹೋರಾಟಗಾರರು. ಸುದೀರ್ಘಕಾಲ ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷರಾಗಿ, ಮರೋಳಿ…
ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಮತ್ತು ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ವಿರಾಜಪೇಟೆ ಇವರ ಸಹಯೋಗದಲ್ಲಿ ಗಣೇಶೋತ್ಸವ ಕವಿಗೋಷ್ಠಿ, ಕೃತಿ ಲೋಕಾರ್ಪಣೆ ಹಾಗೂ ಗೀತಗಾಯನ ಕಾರ್ಯಕ್ರಮ ದಿನಾಂಕ 31 ಆಗಸ್ಟ್ 2025ರಂದು ವಿರಾಜಪೇಟೆಯ ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ ಹಿರಿಯ ಕವಿ ಡಾ. ಜಯಪ್ಪ ಹೊನ್ನಾಳಿ “ಕವಿಗಳಿಗೆ ಆಕಾಶದಲ್ಲಾಡುವ ಒಂಟಿ ಹಕ್ಕಿಯ ನಿಟ್ಟುಸಿರನ್ನು ಕೇಳಿಸಿಕೊಳ್ಳುವ, ಸಾಗರದಾಳದ ಒಂಟಿ ಮೀನಿನ ಕಣ್ಣೀರನ್ನು ಕಾಣುವ ಸೂಕ್ಷ್ಮತೆ ಇರಬೇಕು, ಕವಿಗೆ ವ್ಯವಹಾರಿಕವಾದ ಬದುಕನ್ನು ನೋಡುವ ಹೊರಗಣ್ಣುಗಳಿಗಿಂತ, ಬಾಳಿನೊಳಗಿನೊಳಗನ್ನು ಕಾಣುವ ವಿಸ್ಮಯದಿಂದ ತೆರೆದ ಒಳಗಣ್ಣು ಬಹುಮುಖ್ಯ, ಅಂತರಂಗದ ಅಚ್ಚರಿಯ ಕಣ್ಣು ತೆರೆದಾಗ ಮಾತ್ರ ಅವನಿಗೆ ಜೀವನದ ಸಮಗ್ರ ದರ್ಶನ ಸಾಧ್ಯವಾಗುತ್ತದೆ, ಕವಿತೆಯೆಂದರೆ ಅದೊಂದು ಕವಿಯ ಧ್ಯಾನಸ್ಥ ಮನೋಸ್ಥಿತಿಯಲ್ಲಿ ಅರಳುವ ಮಂದಾರ ಪುಷ್ಪ, ಅದರಲ್ಲಿ ಅರ್ಥದ ಮಕರಂದ, ಚೆಲುವಿನ ಪ್ರಾಸದ ದಳದಳಗಳ ಚೆಲುವು, ಪರಿಮಳಪೂರ್ಣವಾದ ಸೆಳೆತದ ಜೀವಭಾವದೊಲವಿನ ನಿಲುವುಗಳು ಸಂಗಮಿಸಿರಬೇಕು, ಹಾಗಾದಾಗ ಮಾತ್ರ…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟವಾಗಿವೆ. ನಿರ್ಮಲಾ ಶೆಟ್ಟರ್ ಇವರಿಗೆ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ, ಪ್ರೇಮಾ ಭಟ್ ಮತ್ತು ಎ.ಎಸ್. ಭಟ್ ಪ್ರಕಾಶಕಿ ಪ್ರಶಸ್ತಿಗೆ ಸುಧಾ ಚಿದಾನಂದ ಗೌಡ ಅವರು ಆಯ್ಕೆಯಾಗಿದ್ದಾರೆ. ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಕೆ.ಎಸ್. ಚೈತ್ರಾ ಅವರ ‘ದಂತ ಕಥೆಗಳು’, ಜಿ.ವಿ. ನಿರ್ಮಲ ಅನುವಾದ ಸಾಹಿತ್ಯ ಪ್ರಶಸ್ತಿಗೆ ವಿಜಯಾ ಶಂಕರ್ ಅವರ ‘ಮನೋಜ್ಞ’ ಕಾದಂಬರಿ, ಉಷಾ ಪಿ. ರೈ ಆತ್ಮಕಥನ ಪ್ರಶಸ್ತಿಗೆ ಎಚ್.ಆರ್ಿ. ಲೀಲಾವತಿ ಅವರ ‘ಹಾಡಾಗಿ ಹರಿದಾಳೆ’, ನಾಗರತ್ನ ಚಂದ್ರಶೇಖರ್ ಲಲಿತ ಪ್ರಬಂಧ ಪ್ರಶಸ್ತಿಗೆ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ ಅವರ ‘ನೀರ್ ದೋಸೆ’ ಕೃತಿಗಳು ಆಯ್ಕೆಯಾಗಿವೆ. ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿಗೆ ಪಿ. ಭಾರತಿದೇವಿ ಅವರ ‘ಚಲಿಸುತ್ತಿವೆ ಚುಕ್ಕಿಗಳು’, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿಗೆ ಗೀತಾ ವಸಂತ ಅವರ ‘ಪ್ರಾಣಪಕ್ಷಿಯ ರೆಕ್ಕೆ’, ಶ್ರೀಜಯ ಕಲಕೋಟಿ ಪ್ರಶಸ್ತಿಗೆ ಮೀನಾಕ್ಷಿ ಬಾಳಿ ಅವರ ‘ವಚನ ನಿಜದರ್ಶನ’,…
ಕಾಸರಗೋಡು : “ಸಂಗೀತವು ಬದುಕಿನ ಆತ್ಮ. ಇದು ಕೇವಲ ಮನೋರಂಜನೆಗೆ ಮಾತ್ರವಲ್ಲ ; ಆಧ್ಯಾತ್ಮಿಕ ಮತ್ತು ಮನಸ್ಸಿಗಾದ ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈಗಿನ ಯಾಂತ್ರಿಕ ಯುಗದಲ್ಲಿ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ ತಾಕತ್ತು ಸಂಗೀತಕ್ಕಿದೆ. ಒಳ್ಳೆಯ ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲಾ) ಹೇಳಿದರು. ಅವರು ದಿನಾಂಕ 24 ಆಗಸ್ಟ್ 2025 ರಂದು ಭಾನುವಾರ ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ಕಾಸರಗೋಡಿನ ಸಾಹಿತ್ಯಿಕ -ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಜರಗಿದ ‘ಅಂತರ್ಧ್ವನಿ -7’ ಕರೋಕೆ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ವ್ಯಾಪಾರಿ ಮನೋಭಾವ ಇಟ್ಟುಕೊಂಡು ನಗರಗಳಲ್ಲಿ ಹಲವಾರು ಕರೋಕೆ ಸಂಸ್ಥೆಗಳು ಹುಟ್ಟಿಕೊಂಡರೂ ಯಾವುದೇ ಫಲಪೇಕ್ಷೆ ಇಲ್ಲದೆ ಕಾಸರಗೋಡಿನ ಗಾಯಕ-ಗಾಯಕಿಯರಿಗಾಗಿ ವೇದಿಕೆ ನಿರ್ಮಾಣ ಮಾಡಿಕೊಟ್ಟ ರಂಗಚಿನ್ನಾರಿಯ ಕೆಲಸವನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ನಾರಿಚಿನ್ನಾರಿಯ ಅಧ್ಯಕ್ಷೆ, ನಗರ ಸಭಾ ಸದಸ್ಯೆ ಶ್ರೀಮತಿ ಸವಿತಾ ಟೀಚರ್ ಮಾತನಾಡಿ “ಗ್ರಾಮೀಣ…
ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಪ್ರತಿ ವರ್ಷವೂ ಹಮ್ಮಿಕೊಳ್ಳುವ ವಾರ್ಷಿಕ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವದ ಕಾರ್ಯಕ್ರಮವು ದಿನಾಂಕ 05 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಂಗಳೂರು ಕೋಡಿಯಾಲ್ ಬೈಲ್ ಇಲ್ಲಿರುವ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಧ್ಯಾನ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು 2-00 ಗಂಟೆಗೆ ಪ್ರಾರಂಭವಾಗಲಿದ್ದು, ವಿಶ್ವಜೀತ್ ಕಿಣಿ ಉಪ್ಪುಂದ, ಸುರೇಶ್ ಪೈ, ಸಂದೀಪ್ ಪೂಜಾರಿ ಮತ್ತು ಕುಮಾರಿ ದಿವ್ಯ ನಿಧಿ ರೈ ಹಾರ್ಮೋನಿಯಂನಲ್ಲಿ ಹಾಗೂ ಸುಮನ್ ದೇವಾಡಿಗ, ಸಂತೋಷ್ ಸಾಲ್ಯಾನ್, ದರ್ಶನ್ ದೇವಾಡಿಗ ಮತ್ತು ಸ್ಮರಾಜ್ ಎಂ.ಎಸ್. ತಬಲಾದಲ್ಲಿ ಸಹಕರಿಸಲಿದ್ದಾರೆ. 3-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಖ್ಯಾತ ಗಾಯಕರಾದ ಡಾ. ಕೃಷ್ಣಮೂರ್ತಿ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಕೃಷ್ಣಮೂರ್ತಿ ಭಟ್ ಇವರ ಹಿಂದೂಸ್ತಾನಿ ಸಂಗೀತ ಗಾಯನ ಕಛೇರಿಗೆ ತಬಲಾದಲ್ಲಿ ಉಡುಪಿಯ ಟಿ. ರಂಗ ಪೈ…
ಯಕ್ಷಗಾನ ಕಲಾವಿದೆ, ನೃತ್ಯಗಾತಿ, ಶಿಕ್ಷಕಿ, ಕವಯಿತ್ರಿ, ಲೇಖಕಿ… ಹೀಗೆ ಬಹುಮುಖ ಪ್ರತಿಭೆಯ ಶ್ರೀಮತಿ ಡಿ. ಸುಕನ್ಯ ಟೀಚರ್ (65 ವ) ದಿನಾಂಕ 30 ಆಗಸ್ಟ್ 2025 ಶನಿವಾರದಂದು ನಮ್ಮನ್ನು ಅಗಲಿದ್ದಾರೆ. ಇವರು 60ರ ದಶಕದಲ್ಲಿ ನಮ್ಮ ಪರಿಸರದ ಹೆಸರುವಾಸಿ ಆಧುನಿಕ ಶೈಲಿಯ ನೃತ್ಯ ಗುರುಗಳೂ, ಯಕ್ಷಗಾನ ಕಲಾವಿದರೂ ಆಗಿದ್ದ ಗಾಣದಕೊಟ್ಯ ಕೇಶವ ‘ಮಾಸ್ಟರ್’ ಪಾಟಾಳಿ (ಮಾಸ್ಟರ್ ಕೇಶವ ಕನ್ಯಾನ) ಅವರ ಮಗಳು. ಇವರು ಪುತ್ತೂರು ತಾಲೂಕಿನ ಪೆರ್ನಾಜೆ ಪ್ರೌಢಶಾಲೆಯ ಶಿಕ್ಷಕಿಯಾಗಿ ಎರಡು ವರ್ಷಗಳ ಹಿಂದೆ ನಿವೃತ್ತರಾದವರು. ತನ್ನ ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸದಾ ಪ್ರೇರೇಪಿಸಿ ತಂದೆಯವರ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದರು. ಒಳ್ಳೆಯ ನೃತ್ಯಗಾತಿಯೂ ಆದ ಅವರು, 70 – 80ರ ದಶಕಗಳಲ್ಲಿ ಹಲವಾರು ಕಡೆ ಯಕ್ಷಗಾನಗಳಲ್ಲೂ ಪಾತ್ರವಹಿಸಿ ಮಿಂಚಿದ್ದರು. ಚಂದದ ಹೆಜ್ಜೆಗಾರಿಕೆ ಅವರದು. ದೇಲಂತಬೆಟ್ಟಿನ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಮಾತೃಮಂಡಳಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದು ಇತ್ತೀಚಿಗೆ ಆರಂಭಗೊಂಡ ನೃತ್ಯಭಜನಾ ಮಂಡಳಿಯ ಉಗಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದವರು. ದಶಕಗಳ ಕಾಲ ನಡೆದ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯ ಪ್ರಯುಕ್ತ ದಿನಾಂಕ 01 ಸೆಪ್ಟೆಂಬರ್ 2025ರಂದು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ‘ಮಾಗಧ ವಧೆ’ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಮಾಗಧ (ಗುಡ್ಡಪ್ಪ ಬಲ್ಯ), ಮಾಂಬಾಡಿ ವೇಣುಗೋಪಾಲ ಭಟ್ (ಭೀಮ), ಅಚ್ಯುತ ಪಾಂಗಣ್ಣಾಯ (ಅರ್ಜುನ) ಸಹಕರಿಸಿದರು. ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.