Author: roovari

ಮಂಗಳೂರು : ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಿರಿಯ ಲೇಖಕಿ ಲಲಿತಾ ರೈ ಮತ್ತು ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ಶ್ರದ್ದಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ದಿನಾಂಕ 27 ಅಕ್ಟೋಬರ್ 2025ರ ಶನಿವಾರದಂದು ಮಂಗಳೂರಿನ ತುಳುಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಗಲಿದ ದಿವ್ಯ ಚೇತನಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ “ತುಳು ಭಾಷಿಗರು ಕನ್ನಡ ಕೃತಿಗಳನ್ನು ಬರೆದಾಗ ಕೃತಿಯಂತೂ ಕನ್ನಡದ್ದು ಆಗಿದ್ದರೂ ಕೃತಿಯೊಳಗಡೆ ತುಳುವಿನ ಸತ್ವಗಳೇ ತುಂಬಿರುತ್ತದೆ. ಲಲಿತಾ ರೈ ಅವರ ಎಲ್ಲಾ ಕೃತಿಗಳಲ್ಲಿ ತುಳುವಿನ ನೈಜ ಸತ್ವ ಹಾಗೂ ವೈಚಾರಿಕ ನಿಲುವು ಇತ್ತು. ತುಳುವಿನ ಮೇಲಿನ ಪ್ರೀತಿ, ಅಭಿಮಾನ ಹಾಗೂ ತುಳು ಭಾಷೆಯ ಅಭಿವೃದ್ಧಿಯಲ್ಲಿ ಯಕ್ಷಗಾನದ ಮೂಲಕ ದಿನೇಶ್ ಅಮ್ಮಣ್ಣಾಯರ ಕೊಡುಗೆ ಅಪಾರವಿದ್ದು, ಅವರ ತುಳು ಹಾಡುಗಳ ವೈಶಿಷ್ಟ್ಯಗಳು ಕೃತಿಯ ರೂಪದಲ್ಲಿ ಹೊರತರುವ ಕೆಲಸವಾಗಬೇಕು” ಎಂದು ಹೇಳಿದರು. ಹಿರಿಯ ಲೇಖಕಿ ಬಿ. ಎಂ. ರೋಹಿಣಿ ಮಾತನಾಡಿ “ಲಲಿತಾ ರೈ ಅವರು ಬಡ…

Read More

ಸುಳ್ಯ : ಚಂದನ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷರಾದ ಸಂಧ್ಯಾ (ಸಾನು) ಉಬರಡ್ಕ ಇವರ ನೇತೃತ್ವದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ‘ದೀಪಾವಳಿ ಕವಿಗೋಷ್ಠಿ-2025’ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಜರುಗಿತು. ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಗೌರವಾಧ್ಯಕ್ಷರಾದ ಎಚ್. ಭೀಮರಾವ್ ವಾಷ್ಕರ್ ಇವರು ವಹಿಸಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಸಾನು ಉಬರಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ ಮತ್ತು ಮಹಿಳಾ ಸಾಹಿತಿ ರತ್ನಾ ಭಟ್ ಕೆ. ತಳಂಚೇರಿಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಹಿತಿ ಎಚ್. ಭೀಮರಾವ್ ವಾಷ್ಕರ್ ಇವರು ನೂತನ ಅಧ್ಯಕ್ಷರಾದ ಸಂಧ್ಯಾ ಉಬರಡ್ಕರವರನ್ನು ಸಮ್ಮನಿಸಿದರು. ಸಂದೀಪ್ ಸುಳ್ಯ ಇವರು ಭಾವಗೀತೆಗಳನ್ನು ಹಾಡಿದರು. ಪ್ರಾರ್ಥನಾ ಗೀತೆಯನ್ನು ಅಜ್ಜಾವರ ಪ್ರೌಢಶಾಲೆಯ ವಿದ್ಯಾರ್ಥಿ ಶ್ರವಿತ್ ಹಾಡಿದರು. ಸಾಹಿತಿ…

Read More

ಧಾರವಾಡ : ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬಣ್ಣದ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಯುವಕಲಾವಿದರ ಚಿತ್ರಕಲಾ ಶಿಬಿರವನ್ನು ದಿನಾಂಕ 29 ಅಕ್ಟೋಬರ್ 2025ರಿಂದ 31 ಅಕ್ಟೋಬರ್ 2025ರವರೆಗೆ ಧಾರವಾಡದ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ಚಿತ್ರಕಲಾ ಶಿಬಿರವನ್ನು ಏರ್ಪಡಿಸಲಾಗಿದೆ. ದಿನಾಂಕ 29 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರುವುದು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಹಾಗೂ ಧಾರವಾಡ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಶಶಿಧರ ತೋಡಕರ ಭಾಗವಹಿಸುತ್ತಾರೆ. ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಚಿತ್ರಕಲಾ ಶಿಲ್ಪಿ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ.)…

Read More

ನೀಲ್ಕೋಡ್ : ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ.) ನೀಲ್ಕೋಡ್ ಅರ್ಪಿಸುವ ‘ಅಭಿನೇತ್ರಿ ಯಕ್ಷೋತ್ಸವ 2025’ ದಿ. ಎಮ್. ಜಿ. ಹೆಗಡೆ ಇಡಗುಂಜಿ ವೇದಿಕೆಯಲ್ಲಿ ದಿನಾಂಕ 01 ಮತ್ತು 02 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಗೋಗ್ರೀನ್ ಇಲ್ಲಿ ಆಯೋಜಿಸಲಾಗಿದೆ. ದಿನಾಂಕ 01 ನವೆಂಬರ್ 2025ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಕೃಷ್ಣ ಯಾಜಿ ಬಳ್ಕೂರು ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಅಭಿನೇತ್ರಿ ವಿದ್ಯಾರ್ಥಿಗಳಿಂದ ‘ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತಿ ಕಲ್ಯಾಣ’ ಮತ್ತು ಪ್ರಸಿದ್ಧ ಕಲಾವಿದರಿಂದ ಗುಂಡು ಸೀತಾರಾಮ ರಾವ್ ವಿರಚಿತ ‘ಯಕ್ಷಲೋಕ ವಿಜಯ’ ಯಕ್ಷಗಾನ ನಡೆಯಲಿದೆ. ಹಿರಿಯ ಸ್ತ್ರೀವೇಷಧಾರಿಯಾದ ಮಾಧವ ಪಟಗಾರ ಹೆಗಡೆ ಇವರಿಗೆ ‘ಅಭಿನೇತ್ರಿ ಪ್ರಶಸ್ತಿ’, ಯಕ್ಷಗಾನದ ಹಿರಿಯ ವೇಷಧಾರಿಯಾದ ಭಾಸ್ಕರ ಬಿಲ್ಲವ ತುಂಬ್ರಿ ಇವರಿಗೆ ‘ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ’ ಮತ್ತು ವಿದ್ಯಾಧರ ರಾವ್ ಜಲವಳ್ಳಿ ಇವರಿಗೆ ‘ಕಣ್ಣಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದಿನಾಂಕ 02 ನವೆಂಬರ್ 2025ರಂದು…

Read More

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ ಇದರ ವತಿಯಿಂದ ನೂತನ ಮನೆಯ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 29 ಅಕ್ಟೋಬರ್ 2025ರಂದು ಸಂಜೆ 5-30 ಗಂಟೆಗೆ ಸಿದ್ಧಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಮಲೆಶಿಲೆ ಮೇಳದ ಕಲಾವಿದರೂ ಹಾಗೂ ಯಕ್ಷಶಿಕ್ಷಣದ ಗುರುಗಳೂ ಆದ ವಿಘ್ನೇಶ್ ಪೈ ಇವರಿಗೆ ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರರಾಗಿದ್ದ ಪುತ್ರಾಯ ಕೃಷ್ಣ ಭಟ್ ಮತ್ತು ಅವರ ಧರ್ಮಪತ್ನಿ ಗಂಗಮ್ಮ ಇವರ ಸ್ಮರಣೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಪ್ರಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ‘ಗಂಗಾಕೃಷ್ಣ’ ಉದ್ಘಾಟನೆಗೊಳ್ಳಲಿದ್ದು, ಇದು ದಾನಿಗಳ ನೆರವಿನಿಂದ ನಿರ್ಮಿಸಿದ 80ನೆಯ ಮನೆಯಾಗಿದೆ. ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರರಾದ ಸಚ್ಚಿದಾನಂದ ಛಾತ್ರಾ ಇವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಪಿ. ದಾಮೋದರ್ ಭಟ್ ಇವರು ಉದ್ಘಾಟನೆಮಾಡಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈ ಇವರು ಶುಭಾಶಂಸನೆ ಮಾಡಲಿದ್ದಾರೆ.

Read More

ನೀವು ವರ್ಷಕ್ಕೊಮ್ಮೆ ಹಣತೆ ಹಚ್ಚಿ ಸಂಭ್ರಮಿಸುತ್ತೀರಿ ನಮ್ಮತ್ತ ನೋಡುವುದೂ ಇಲ್ಲ ಏಕೆಂದು ಹೇಳುವಿರಾ ? ನಮಗೆ ಹಣತೆ ಹಚ್ಚುವುದು ಮುಸ್ಸಂಜೆ ಮೋಂಬತ್ತಿ ಹಿಡಿಯುವುದು ನಿತ್ಯ ಕಾಯಕವಾಗಿದೆ ಏಕೆಂದು ಅರ್ಥವಾಗಿದೆಯೇ ? ನಮ್ಮ ಪ್ರಣತಿಯ ಬೆಳಕಿನಲಿ ಮಡುಗಟ್ಟಿದ ವೇದನೆಗಳಡಗಿವೆ ಬಲಿಪೀಠಗಳ ಛಾಯೆಯಿದೆ ಏಕಿರಬಹುದು ತಿಳಿಸುವಿರಾ ? ನಮ್ಮ ಹಣತೆಗಳು ಸಾಲುಗಟ್ಟುವುದಿಲ್ಲ ನೊಂದ ಹೃದಯಗಳು ಮೌನ ಸರಪಳಿಗಳಾಗುತ್ತವೆ ಏಕೆಂದು ಊಹಿಸಬಲ್ಲಿರಾ ? ದಮನಿತರ ಯಾತನೆಗಳ ಕೊಳ ನಮ್ಮ ಹಣತೆಗಳ ತೈಲ ಮನುಜ ಸೂಕ್ಷ್ಮತೆಯೇ ಬತ್ತಿಗಳು ಏಕಿರಬಹುದು ಯೋಚಿಸಬಲ್ಲಿರಾ ? ನಿಮ್ಮ ಹಣತೆಗಳಿಗೆ ಕಥನಗಳಿವೆ ನಮ್ಮ ದೀಪಗಳ ಅವಳಿಗೆ ವರ್ತಮಾನದ ದುರಂತಗಳಿವೆ ಕಾರಣ ಹೇಳಬಲ್ಲಿರಾ ? ಉರಿದ ಜೀವಗಳೇ ನಮ್ಮ ಹಣತೆ ಹರಿದ ನೆತ್ತರೇ ತೈಲ ನಿಮ್ಮ ಅಂಧಕಾರವ ನೀಗಿಸಲು ನಮ್ಮ ಬತ್ತಿಯ ಬೆಳಕು ಬೆಂದ ಹೆಣ್ಕುಲದ ಭಾವನೆಗಳು ಸರಪಳಿಯ ಕೊಂಡಿಗಳು ಸಂಕೋಲೆಗಳ ಕಿತ್ತೊಗೆಯಲು ಸಂವೇದನೆಯ ಹೆಗಲುಗಳು ಈಗಲಾದರೂ ಅರ್ಥವಾಯಿತೇ ? ಆಗದು ಬಿಡಿ,,, ನೀವು,,, ಅಂಧ ಯುಗದ ಸರದಾರರು ದೌರ್ಜನ್ಯಗಳ ಸೂತ್ರಧಾರರು ಸುಡುವ ಸಂಸ್ಕೃತಿಯ…

Read More

ಬೆಂಗಳೂರು : ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ನಾಲ್ಕುದಶಕಗಳಿಂದ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಎರಡನೆಯ ಪರಂಪರೆಗೆ ಸೇರಿದವರು. ಖ್ಯಾತ ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ, ಸಂಯೋಜಕಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಇವರು, ‘ಕೂಚಿಪುಡಿ ಪರಂಪರ ಫೌಂಡೇಷನ್ ಟ್ರಸ್ಟ್’ನ ಲೈಫ್ ಟ್ರಸ್ಟಿಯಾಗಿ ವರ್ಷಪೂರ್ತಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ಕಾರ್ಯನಿರತರು. ಇವರ ಇತ್ತೀಚಿನ ಅದ್ಭುತ ನೃತ್ಯರೂಪಕ ಪ್ರಯೋಗ ‘ನಂದನಾರ್’ ದೇಶ-ವಿದೇಶಗಳಲ್ಲಿ ಹಲವಾರು ಬಾರಿ ಪ್ರದರ್ಶಿತವಾಗಿ ಮನೆಮಾತಾಗಿದೆ. ತಮ್ಮ ಅಸಂಖ್ಯ ನೃತ್ಯ ಪ್ರದರ್ಶನಗಳಿಂದ ಖ್ಯಾತರಾದ ದೀಪಾ, ತಮ್ಮ ‘ಕೂಚಿಪುಡಿ ಪರಂಪರಾ ಫೌಂಡೇಷನ್’ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾಗಿ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ ಮೂವತ್ತು ವರುಷಗಳು ನಾಟ್ಯಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಇವರದು. ಭಾರತ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯು ದಿನಾಂಕ 25 ಅಕ್ಟೋಬರ್ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಶ್ರೀ ರಾಮ ಪಟ್ಟಾಭಿಷೇಕ’ ತಾಳಮದ್ದಳೆಯೊಂದಿಗೆ ಪ್ರಾರಂಭವಾಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಸತೀಶ್ ಇರ್ದೆ, ಆನಂದ ಸವಣೂರು, ಪದ್ಯಾಣ ಜಯರಾಂ ಭಟ್, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ, ಪರೀಕ್ಷಿತ್ ಹಂದ್ರಟ್ಟ, ಅದ್ವೈತ ಕೃಷ್ಣ ಮುಡೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ದಶರಥ (ಭಾಸ್ಕರ್ ಬಾರ್ಯ), ಶ್ರೀ ರಾಮ (ಗುಡ್ಡಪ್ಪ ಬಲ್ಯ), ಕೈಕೇಯೀ (ವಿ.ಕೆ. ಶರ್ಮ ಅಳಿಕೆ), ಮಂಥರೆ (ಮಾಂಬಾಡಿ ವೇಣುಗೋಪಾಲ ಭಟ್‌), ಲಕ್ಷ್ಮಣ (ಪ್ರೇಮಲತಾ ಟಿ. ರಾವ್‌) ಸಹಕರಿಸಿದರು. ಸಹಕಾರ್ಯದರ್ಶಿ ಅಚ್ಯುತ ಪಾಂಗಾಣ್ಣಾಯ ಸ್ವಾಗತಿಸಿ, ವಂದಿಸಿದರು.

Read More

ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ದಿನಾಂಕ 24 ಅಕ್ಟೋಬರ್ 2025ರಂದು ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಐದನೇಯ ದೀಪಾವಳಿ ಸಂಗೀತೋತ್ಸವದ ಐದನೇ ದಿನ ಮಾತಂಗಿ ಸತ್ಯಮೂರ್ತಿ ಹಾಗೂ ಡಾ. ಎನ್.ಜೆ. ನಂದಿನಿ ಇವರ ಸಂಗೀತ ಕಛೇರಿ ಕರ್ನಾಟಕ ಸಂಗೀತದ ಸಕಲ ಸೊಬಗನ್ನು ವಿವರಿಸುವಂತಿತ್ತು. ವಸಂತ ರಾಗದಲ್ಲಿ ವರ್ಣದಿಂದ ಪ್ರಾರಂಭವಾಯಿತು ಮತ್ತು ಮಾತಂಗಿ ಸತ್ಯಮೂರ್ತಿಯವರು ಜ್ಞಾನಪ್ಪನವರ ಕೆಲವು ಪ್ರಸಿದ್ಧ ಸಾಲುಗಳನ್ನು ಷಣ್ಮುಗ ಪ್ರಿಯಾ ಶ್ರೀರಂಜಿನಿ, ಹಿಂದೋಳಂ, ಮೋಹನಂ ಮತ್ತು ಕಾನದ ರಾಗಗಳಲ್ಲಿ ಹಾಡುವ ಮೂಲಕ ಹಾಡನ್ನು ಪ್ರಸ್ತುತಪಡಿಸಿದರು. ನಂದಿನಿಯ ಸಂಗೀತ ಕಛೇರಿ ಮತಗೌಳದಿಂದ ಪ್ರಾರಂಭವಾಗಿ ಹಮೀರ್ ಕಲ್ಯಾಣಿ, ಮೋಹನಂ, ಕಾಮವರ್ಧಿನಿ, ಕೇದಾರಗೌಳ, ಮಂದ್, ಕಪಿ ಮತ್ತು ರಾಗಗಳಲ್ಲಿ ಕೀರ್ತನೆಗಳೊಂದಿಗೆ ಕೊನೆಗೊಂಡಿತು ಮತ್ತು ಲಾಲ್ಗುಡಿಯ ತಿಲ್ಲಾನದೊಂದಿಗೆ ಅವರ ಸಂಗೀತ ಕಛೇರಿ ಮುಕ್ತಾಯವಾಯಿತು. ಡಾ. ಸುರೇಶ್ ವೈದ್ಯನಾಥನ್ ಇವರ ಮೃತ್ತಿಕಾ ವೈಭವಂ ವಿಭಿನ್ನವಾಗಿತ್ತು ಮತ್ತು ವೈವಿಧ್ಯಮಯವಾಗಿತ್ತು. ಆರನೇ ದಿನ ಮೇಘಾ ಕೃಷ್ಣ ಅವರ ಸಂಗೀತ ಕಛೇರಿಯೊಂದಿಗೆ ಆರಂಭವಾಯಿತು. ಸಹನಾ ಮೈಸೂರಿನ ವೀಣಾ ಕಛೇರಿ, ಅಜಿತ್…

Read More

‘ನದಿ ದಾಟಿ ಬಂದವರು’ ಖ್ಯಾತ ಲೇಖಕ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ. ಇದನ್ನು ಅವರು ಪೂರ್ತಿಯಾಗಿ ಗ್ರಾಮಭಾರತದ ಚಿತ್ರಣಕ್ಕೆ ಮೀಸಲಾಗಿಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಳ್ಳಿಗಳಲ್ಲಿ ಕೃಷಿ-ಬೇಸಾಯ ಹಾಗೂ ಜನಜೀವನದ ಸ್ವರೂಪಗಳು ಹೇಗಿದ್ದವು ಅನ್ನುವುದನ್ನು ಇತಿಹಾಸದಲ್ಲಿ ನಡೆದ ನಿಜ ಘಟನೆಗಳಿಗೆ ಕಲ್ಪನೆಯ ಕಥೆಗಳನ್ನು ಹೆಣೆದು ಪ್ರಸ್ತುತ ಪಡಿಸುವುದು ಅವರ ಕಾದಂಬರಿಯ ಉದ್ದೇಶ. ಅದನ್ನು ಅವರು ಯಶಸ್ವಿಯಾಗಿ ಪೂರೈಸಿದ್ದಾರೆ. ಕಥಾಹಂದರ ಆರಂಭವಾಗುವುದೇ ಕರುಳು ಚುರಕ್ಕೆನ್ನಿಸುವ ಒಂದು ಸನ್ನಿವೇಶದ ಮೂಲಕ. ಕರ್ಜೆ ಎಂಬ ಹಳ್ಳಿಯಲ್ಲಿ ನಿಷ್ಕರುಣಿ ನಾರಾಯಣ ಭಂಡಾರರ ಒಕ್ಕಲಾಗಿ ಪರಿಶ್ರಮಪಟ್ಟು ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಕುರಿಯ ನಾಯಕ, ಅವನ ಹೆಂಡತಿ ಶೇಷಿಬಾಯಿ, ಮಗ ಸಿದ್ದನಾಯಕ ಮತ್ತು ಇತರ ಮಕ್ಕಳೊಂದಿಗಿನ ಸಂಸಾರವು ಧನಿಯು ಕೊಡುವ ಕಾಟವನ್ನು ತಡೆಯಲಾರದೆ, ಅವನು ಸುಳ್ಳುಸುಳ್ಳಾಗಿ ಹೊರಿಸಿದ ಸಾಲದ ಹೊರೆಯನ್ನು ತೀರಿಸಲಾಗದೆ ರಾತ್ರೋರಾತ್ರಿ ತಮ್ಮ ಗುಡಿಸಲ ಮುಂದಿನ ಅಂಗಳದಲ್ಲಿ ಖಾಲಿ ಮಡಿಕೆ ಕವುಚಿಟ್ಟು (ನಾವು ಸಾಲ ತೀರಿಸಲಾರೆವು ಎಂಬುದರ ಸೂಚನೆಯಾಗಿ) ಓಡಿ ಹೋಗುತ್ತಾರೆ.‌ ಊರಿನ ಗಡಿಯಾದ ಸೀತಾನದಿಯನ್ನು ದಾಟಿ…

Read More