Author: roovari

ಮೂಡುಬಿದಿರೆ : ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಉಷಾ ಆರ್. ರಾವ್ (56) ದಿನಾಂಕ 03 ಫೆಬ್ರವರಿ 2026ರಂದು ನಿಧನ ಹೊಂದಿದರು. ಅವರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ‘ಶರಧಿ’ ಕಾವ್ಯನಾಮದೊಂದಿಗೆ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದು, ‘ಶರದಿ ಕಾದಿದೆ’ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಉಷಾ ರಾವ್ ಅವರು ಕಾಗದದ ದೋಣಿ, ಅವಧಿ ನೀ ನಾದ ನಾ ನಿನಾದ, ಬಿಸಿಲು ಹೊತ್ತ ಬೆಳದಿಂಗಳು, ಕಲಾಕೃತಿಯಾದ ಚಂದನದ ಗೊಂಬೆ, ಉಸಿರು ಉಸಿರ ಸಪ್ತಸ್ವರ ಮೊದಲಾದ ಕೃತಿಗಳನ್ನು ಅವರು ರಚಿಸಿ ಪ್ರಕಟಿಸಿದ್ದು ಪ್ರತಿದಿನ ಬರೆದಿಟ್ಟ ಪುಟಗಳನ್ನು ಆನ್ ಲೈನ್ ಪ್ರತಿಲಿಪಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದವರು. ಅವರ ಪುಸ್ತಕಗಳನ್ನು ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆ ಮಾತ್ರವಲ್ಲ ಬಂಗಾಲದ ಗ್ರಂಥಾಲಯ ಇಲಾಖೆಯ ಕನ್ನಡ ವಿಭಾಗ ಖರೀದಿಸಿರುವುದು ವಿಶೇಷ. ಬೆಂಗಳೂರಿನ ಫೇಸ್ ಫೌಂಡೇಶನ್ ಟ್ರಸ್ಟ್, ವಿಕ್ರಮ ಪ್ರಕಾಶನ ಸಹಿತ ಹೆಸರಾಂತ ಪ್ರಕಾಶನ ಸಂಸ್ಥೆಗಳ ಮೂಲಕ ಇವರ ಕೃತಿಗಳು ಪ್ರಕಟವಾಗಿವೆ. ಸಾಹಿತಿ, ಅಂಕಣಕಾರ ಸಂತೋಷ್ ಕುಮಾರ ಮೆಹೆಂದಳೆ…

Read More

ಕಾಸರಗೋಡು : ತುಲುವೆರೆ ಜಾಲ್ ಕಣ್ವತೀರ್ಥ ಇದರ ಆಶ್ರಯದಲ್ಲಿ ತುಳುನಾಡ ಮಕ್ಕಳ ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವಾ ಕೂಟ ಹಾಗೂ ಶ್ರೀ ಮಾತಾ ಕಲಾ ಮಂದಿರ ವೈಶಾಲಿ ಕುಂಜತ್ತೂರು ತೂಮಿನಾಡು ಇವರ ಸಹಯೋಗದಲ್ಲಿ ದಿನಾಂಕ 22 ಫೆಬ್ರವರಿ 2026ರಂದು ನಡೆಯಲಿರುವ ‘ಮಕ್ಕಳ ಬಹುಭಾಷಾ ಕವಿಗೋಷ್ಠಿ’ಯಲ್ಲಿ ಸ್ವರಚಿತ ಕವನ ವಾಚನ ಮಾಡಲು ಆಸಕ್ತಿ ಇರುವ 16 ವರ್ಷದ ಒಳಗಿನ ಮಕ್ಕಳು ತಮ್ಮ ಹೆಸರನ್ನು ದಿನಾಂಕ 10 ಫೆಬ್ರವರಿ 2026ರ ಒಳಗೆ ನೀಡಬೇಕು. ಆಸಕ್ತರು 9605864329 ಈ ಸಂಖ್ಯೆಗೆ ವಾಟ್ಸಪ್ ಮಾಡಿ. ಸ್ಥಳ : ಶ್ರೀ ಮಾತಾ ಕಲಾಲಯ ವೈಶಾಲಿ ಕುಂಜತ್ತೂರು ತೂಮಿನಾಡ್, ಕ್ರಿಕ್ ಹಾಲ್ ನ ಹತ್ತಿರ, ಕುಂಜತ್ತೂರು ಬಸ್ ಸ್ಟಾಂಡಿನ ಬಳಿ, ಮಂಜೇಶ್ವರ, ಕಾಸರಗೋಡು.

Read More

ಶಿರ್ವ : ಬೆಳ್ಳಿ ಗ್ರಾಮದ ಪಾಂಬೂರು ಪರಿಚಯ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 8 ರಿಂದ 14 ಫೆಬ್ರವರಿ 2026ರವರೆಗೆ 7 ದಿನಗಳ ‘ಪರಿಚಯ ರಂಗೋತ್ಸವ 2026’ ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ. ಪ್ರತೀ ದಿನ ಸಂಜೆ ಗಂಟೆ 6-30ರಿಂದ ಏಳು ದಿನಗಳ ಪರ್ಯಂತ ಕನ್ನಡ, ತುಳು, ಕೊಂಕಣಿ, ಅರೆಭಾಷೆ ಮತ್ತು ಮಲಯಾಳಂ ಭಾಷೆಗಳ ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ ತಿಳಿಸಿದ್ದಾರೆ. ದಿನಾಂಕ 08 ಫೆಬ್ರವರಿ 2026ರಂದು ಹಿರಿಯ ರಂಗಕರ್ಮಿ ಹಾಗೂ ಕಲಾವಿದೆ ಗೀತಾ ಸುರತ್ಕಲ್ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದು, ದಿನಾಂಕ 14 ಫೆಬ್ರವರಿ 2026ರಂದು ಕೊಂಕಣಿಯ ಹಿರಿಯ ಸಾಹಿತಿ, ನಾಟಕಕಾರ ಹಾಗೂ ಶಿಕ್ಷಣ ತಜ್ಞ ಡಾ. ಎವಿನ್ ಡಿಸೋಜಾ ಅವರ ಸಮಾರೋಪ ಸಂದೇಶದೊಂದಿಗೆ ಸಂಪನ್ನಗೊಳ್ಳಲಿದೆ. ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ನಾಟಕಗಳ ಪ್ರಾಯೋಜಕತ್ವ ವಹಿಸಿದ್ದು, ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು ನಿವೃತ್ತ ಕನ್ನಡ ಉಪನ್ಯಾಸಕ ಕೆ.ಎಸ್. ಶ್ರೀಧರಮೂರ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲಾ…

Read More

ಧಾರವಾಡ : ‘ಆರ್ಯ’ ಎಂಬ ಹೆಸರಿನಿಂದ ಸಾಹಿತ್ಯ ಕೃತಿ ರಚಿಸಿದ ಪಿ.ಆರ್‍. ಆಚಾರ್ಯ ಇವರು ಚಿತ್ರಕಲಾವಿದ, ನಾಟಕಕಾರರೂ ಆಗಿದ್ದರು. 1945ರ ಡಿಸೆಂಬರ್‍ 7ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯ ಅವರ ತಂದೆ ವಿಠಲಾಚಾರ್ಯ ಮತ್ತು ತಾಯಿ ರುಕ್ಮಿಣಿ. ಉಡುಪಿಯ ಬೋರ್ಡ್‌ ಹೈಸ್ಕೂಲಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆರ್ಯ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ (ಸಂಸ್ಕೃತ) ಪದವಿ ಪಡೆದಿದ್ದರು. 1963ರಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು. 1973ರಲ್ಲಿ ಸನ್ಯಾಸತ್ವ ಬಿಡುವುದರ ಜೊತೆಗೆ ಮಠದ ವ್ಯವಸ್ಥೆಯಿಂದ ಹೊರಬಂದ ಆರ್ಯ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕೆಲಸ ಆರಂಭಿಸಿದರು. 1976ರಲ್ಲಿ ಗೃಹಸ್ಥಾಶ್ರಮ ಸ್ವೀಕರಿಸಿ ಧಾರವಾಡದಲ್ಲಿಯೇ ನೆಲೆ ನಿಂತರು. ಕೇವಲ ಮೂರು ವರ್ಷದ ನಂತರ ಅವರು ಪತ್ನಿ ವಿಯೋಗ ಅನುಭವಿಸಬೇಕಾಯಿತು. ಚಿತ್ರಕಲೆ-ಸಾಹಿತ್ಯ- ನಾಟಕ ಆರ್ಯ ಅವರ ಪ್ರೀತಿಯ ಕಲಾ ಪ್ರಕಾರಗಳು. ಸ್ವಯಂ ಚಿತ್ರಕಲೆಯನ್ನು ಕಲಿತ ಆರ್ಯ ಅವರು ಧಾರವಾಡದ ಮನೋಹರ ಗ್ರಂಥಮಾಲೆಯ ಹಲವಾರು ಗ್ರಂಥಗಳಿಗೆ ಮುಖಪುಟ ರಚಿಸಿದ್ದಾರೆ.…

Read More

ಮಂಗಳೂರು : ಕಥಾಬಿಂದು ಪ್ರಕಾಶನ ಮತ್ತು ಯುಗಪುರುಷ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಸಾಹಿತ್ಯಾವಲೋಕನ’ ಕಾರ್ಯಕ್ರಮವನ್ನು ದಿನಾಂಕ 08 ಫೆಬ್ರವರಿ 2026ರಂದು ಸಂಜೆ 4-00 ಗಂಟೆಗೆ ಮಂಗಳೂರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಡಾ. ಪ್ರೇಮ ಪಿ.ವೈ.ಕೆ. ಇವರ ‘ನೀಲಿರಾಗ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ.

Read More

ಪುತ್ತೂರು : ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ (ರಿ.) ಇದರ ವತಿಯಿಂದ ಜಾತ್ರೋತ್ಸವದ ಅಂಗವಾಗಿ ತಾಳಮದ್ದಳೆ ಕೂಟವು ದಿನಾಂಕ 07 ಫೆಬ್ರವರಿ 2026ರಂದು ಪೂರ್ವಾಹ್ನ 10-00 ಗಂಟೆಗೆ ಶ್ರೀ ಕ್ಷೇತ್ರ ಬಾರ್ಯದಲ್ಲಿ ನಡೆಯಲಿದೆ. ‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದ ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ, ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಜಯರಾಮ ಭಟ್ ಮತ್ತು ಮುರಳೀಧರ ಕಲ್ಲೂರಾಯ ಹಾಗೂ ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ, ಡಾ. ಶ್ರೀಪತಿ ಕಲ್ಲೂರಾಯ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಶ್ರೀಮತಿ ರಾಜಶ್ರೀ ಶಬರಾಯ ಸಹಕರಿಸಲಿದ್ದಾರೆ.

Read More

ಕುಂದಾಪುರ : ಹಿರಿಯ ಪತ್ರಕರ್ತ, ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ಕುಂದಾಪುರದ ‘ಕುಂದಪ್ರಭ’ ಸಂಸ್ಥೆಯಿಂದ ನೀಡಲಾಗುತ್ತಿರುವ ‘ಕೋ. ಮ. ಕಾರಂತ ಪ್ರಶಸ್ತಿ’ಗೆ ಈ ವರ್ಷ ಪ್ರತಿಭಾವಂತ ಕುಂಚ ಕಲಾವಿದ, ಪ್ರಗತಿಪರ ಉದ್ಯಮಿ, ಇಂಜಿನಿಯರ್ ಬಳ್ಕೂರು ಜಯರಾಮ ಉಡುಪ ಇವರನ್ನು ಆಯ್ಕೆ ಮಾಡಲಾಗಿದೆ. ಬಳ್ಕೂರಿನ ನಿವೃತ್ತ ಮುಖ್ಯ ಶಿಕ್ಷಕ, ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿಗಳಾಗಿದ್ದ ದಿ. ಬಿ. ಸುಬ್ರಾಯ ಉಡುಪ ಮತ್ತು ದಿ. ಭಾಗೀರಥಿ ಉಡುಪ ಅವರ ಪುತ್ರರಾಗಿರುವ ಇವರು ರೇಖಾ ಚಿತ್ರ, ಚುಕ್ಕಿ ಚಿತ್ರ, ವ್ಯಂಗ್ಯ ಚಿತ್ರಕಾರರಾಗಿದ್ದು, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯ ಚಿತ್ರ, ರೇಖಾ ಚಿತ್ರ, ವ್ಯಕ್ತಿ ಚಿತ್ರ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ವೃತ್ತಿಯಲ್ಲಿ ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನ ಹೊಂದಿದವರಾಗಿದ್ದು, ದೇಶಕ್ಕಾಗಿ ವಿವಿಧ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ದೇಶದ ಹೆಲಿಕಾಪ್ಟರ್, ವಿಮಾನ, ಕ್ಷಿಪಣಿ ಯೋಜನೆಗಳಿಗೆ ತಾಂತ್ರಿಕ ವಿನ್ಯಾಸ ನೀಡಿದವರು. ತೇಜಸ್ ಯುದ್ಧ ವಿಮಾನಕ್ಕಾಗಿ ಬ್ಯಾಕಪ್ ಡಿಸ್‌ಪ್ಲೇ ಯುನಿಟ್ ವಿನ್ಯಾಸ ಅಭಿವೃದ್ಧಿ ಪ್ರಮಾಣಿಕರಣ ಇವರ ಸಾಧನೆ, ಬೆಂಗಳೂರಿನ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2024ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. ಆ ಪೈಕಿ ವಸುದೇವ ಭೂಪಾಲಂ ದತ್ತಿಯಲ್ಲಿ ನಾಲ್ಕು ಪುಸ್ತಕಗಳಿಗೂ ಮತ್ತು ರತ್ನಾಕರವರ್ಣಿ-ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗುತ್ತದೆ ಎಂದು ಕ.ಸಾ.ಪ. ಆಡಳಿತಾಧಿಕಾರಿ ತಿಳಿಸಿದ್ದಾರೆ. ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು 900 ಕೃತಿಗಳು ಬಂದಿದ್ದು, ಡಾ. ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರುಗಳ 5 ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಯಿತು. ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಮತ್ತು ಡಾ. ಮದನಕೇಸರಿ ಜೈನ ದತ್ತಿಗೆ ಡಾ. ಹೆಚ್.ಡಿ. ಜಯಪದ್ಮಕುಮಾರ್ ಅವರ ಆರಾಧ್ಯಪುಣ್ಯಸೂತ್ರ. ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿಗೆ ಡಾ. ಪದ್ಮರಾಜ ದಂಡಾವತಿ ಇವರ ಜೈನ ಧರ್ಮ, ಡಾ. ಹೆಚ್.ಎಸ್. ಮದನಕೇಸರಿ ಮತ್ತು ಎಂ.ಪಿ. ಗುಣಮಾಲ ದತ್ತಿಗೆ ರವಿ ಸೋಮಣ್ಣ…

Read More

ಕುಂಭಾಶಿ : ಶ್ರೀ ಕ್ಷೇತ್ರ ಆನೆಗುಡ್ಡೆ ಕುಂಭಾಶಿ ಸಹಕಾರದೊಂದಿಗೆ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರ ಸಹಯೋಗದೊಂದಿಗೆ ಸಂಕಷ್ಟಹರ ಚತುರ್ಥಿ ಶುಭ ದಿನದಂದು ‘ಅರ್ಥಾಂಕುರ’ ತಾಳಮದ್ದಳೆ’ ಕಾರ್ಯಕ್ರಮ ದಿನಾಂಕ 05 ಫೆಬ್ರವರಿ 2026ರಂದು ಆನೆಗುಡ್ಡೆ ದೇಗುಲದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಸಿದ್ಧ ಅರ್ಥದಾರಿ ವಾಸುದೇವ ರಂಗ ಭಟ್ ಇವರು ಮಾತನಾಡಿ “ಅರ್ಥಾಂಕುರದ ದೀಪ ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ ಸೇವಾರೂಪದಲ್ಲಿ ಬೆಳಗಿದೆ. ಬಹಳ ಅರ್ಥಪೂರ್ಣ ಭಾವ ನಮ್ಮದು. ನಮ್ಮೂರಿನ ಕ್ಷೇತ್ರಗಳು ಆ ಕ್ಷೇತ್ರದ ಆಶ್ರಯಗಳಲ್ಲಿ ಬೆಳೆಯಬೇಕಾದ ಕಲೆಗಳ ಕುರಿತಾಗಿ, ಒಂದು ಸ್ಪಷ್ಟತೆ, ಒಂದು ನಿರ್ದಿಷ್ಟತೆ ಇದ್ದು ಆರಂಭಿಸಿದ ಉಪಕ್ರಮ ಇದು. ಕಲೆಯ ಹೆಸರಲ್ಲಿ ಭಾರತೀಯವಾದಂತಹ ಯಾವುದೂ ಪೋಷಿತವಾಗಬಹುದು. ಯಾಕೆಂದರೆ ಭಾರತೀಯ ಕಲೆಗಳ ಸತ್ವವಾಗಿರುವುದು ಧಾರ್ಮಿಕತೆ, ಭಕ್ತಿ, ಶೃದ್ಧೆಗಳು. ಹಾಗೆಯೇ ಯಕ್ಷಗಾನ ತಾಳಮದ್ದಳೆಗೆ ಧಾರ್ಮಿಕ ಕೇಂದ್ರಗಳಲ್ಲಲ್ಲದೇ ಬೇರೆ ಕಡೆಗಳಲ್ಲಿ ಪೋಷಣೆ ಸಿಗುವಂತಿಲ್ಲ. ಕಲೆಗಳು ನಮ್ಮ ಅನನ್ಯತೆಯೂ ಹೌದು, ವೈಶಿಷ್ಟ್ಯವೂ ಹೌದು. ಈ ಕಲೆಗಳಿಗೆ…

Read More

ಮುಂಬೈ : ಮೈಸೂರು ಅಸೋಸಿಯೇಷನ್ ಮುಂಬಯಿಯ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ ‘ನೇಸರು ಜಾಗತಿಕ ಶಿಶು ಕವನ ರಚನಾ ಸ್ಪರ್ಧೆ -2025’, ‘ನೇಸರು ಜಾಗತಿಕ ಸಣ್ಣ ಕತೆ ಸ್ಪರ್ಧೆ 2025’ ಮತ್ತು ‘ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ -2025’ಯ ಫಲಿತಾಂಶ ಪ್ರಕಟವಾಗಿದೆ. ‘ನೇಸರು ಜಾಗತಿಕ ಶಿಶು ಕವನ ರಚನಾ ಸ್ಪರ್ಧೆ -2025’ಯ ಪ್ರಥಮ ಬಹುಮಾನಕ್ಕೆ ಗುರುರಾಜ್ ಇವರ ‘ನನಗೂ ಒಂದು ರೋಬೋ ಸಿಕ್ಕರೆ’, ದ್ವಿತೀಯ ಬಹುಮಾನಕ್ಕೆ ಡಾ. ಟಿ.ಎಚ್. ಲವಕುಮಾರ ಇವರ ‘ಅಮ್ಮನ ಡಬ್ಬಿ’, ತೃತೀಯ ಬಹುಮಾನಕ್ಕೆ ರಮ್ಯ ಕೆ.ಜಿ. ಇವರ ‘ಪುಟ್ಟಿಯ ಮಳೆ ರಜೆ’ ಹಾಗೂ ಮೆಚ್ಚುಗೆಯ ಬಹುಮಾನಕ್ಕೆ ಮೀನಾಕ್ಷಿ ಸುರೇಶ್ ಭಾಂಗಿ ಇವರ ‘ಬಾರೋ ಭೂಮಿಯ ಕಂದ’ ಮತ್ತು ಸತ್ಯವತಿ ಭಟ್ ಕೊಳ ಚಪ್ಪು ಇವರ ‘ಬಸವಣ್ಣ’ ಕವನ ಆಯ್ಕೆಯಾಗಿದೆ. ‘ನೇಸರು ಜಾಗತಿಕ ಸಣ್ಣ ಕತೆ ಸ್ಪರ್ಧೆ 2025’ಯ ಪ್ರಥಮ ಬಹುಮಾನಕ್ಕೆ ವಿವೇಕ ಬೆಟ್ಕುಳಿ ಇವರ ‘ಹರಕೆ ಹುಂಜ’, ದ್ವಿತೀಯ ಬಹುಮಾನಕ್ಕೆ ಜಯರಾಮಚಾರಿ ಇವರ ‘ನೆಲದ ಗಾಯ’,…

Read More