Author: roovari

ಕಾರ್ಕಳ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ಕಾರ್ಕಳದ ಕುಂದಾಪ್ರದವರು ಇವರ ಸಂಯೋಜನೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ದಿನಾಂಕ 24 ಜುಲೈ 2025ರಂದು ಸಂಜೆ ಘಂಟೆ 4.30ರಿಂದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಹಾಲ್‌ನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕರಾದ ಎ. ಎಸ್.ಎನ್. ಹೆಬ್ಬಾರ್ ಕುಂದಾಪುರ ಇವರು ‘ಭಾಷಿ ಅಲ್ಲ ಬದ್ಕ್’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಬಳಿಕ ಕುಂದಾಪುರ ಕನ್ನಡ ಭಾಷೆಯಲ್ಲಿ ಜಾನಪದ ಗೀತಗಾಯನ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಷಾಡ ದಿನಗಳ ವಿಶೇಷ ತಿಂಡಿ ತಿನಿಸುಗಳ ಖಾದ್ಯವಿರುತ್ತದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಲ್ಲಿ ತಿಳಿಸಿದ್ದಾರೆ.

Read More

ಸಂಪ್ರದಾಯದ ಹೆಜ್ಜೆ ಮೀರದ ಗಾಂಭೀರ್ಯದ ಪ್ರವೇಶ. ಏರುಧ್ವನಿಯಲ್ಲಿ ಪುಂಖಾನುಪುಂಖವಾಗಿ ಹೊರಹೊಮ್ಮವ ನುಡಿಲಹರಿ, ಸಾಂದರ್ಭಿಕವಾಗಿ ಬಳಸುವ ಸಂಸ್ಕೃತದ ನುಡಿಗಟ್ಟು, ಇದಿರು ಪಾತ್ರಧಾರಿಯ ನುಡಿಬಾಣವನ್ನು ಕತ್ತರಿಸಬಲ್ಲ ಜಾಣ್ಮಿ ಇದು ನಾಲ್ಕು ದಶಕಗಳ ಕಾಲ ತೆಂಕುತಿಟ್ಟು ರಂಗಭೂಮಿಯಲ್ಲಿ ಮೆರೆದ ಕೀರಿಕ್ಕಾಡು ಗಣೇಶ ಶರ್ಮರ ಪಾತ್ರ ಲಕ್ಷಣ. ಸುಮಾರು ನಾಲ್ಕು ದಶಕಗಳ ಕಾಲ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ವೃತ್ತಿಪರ ಕಲಾವಿದನಾಗಿ, ಯಕ್ಷಗಾನ ಕಲಾಕಾಸಕ್ತರಿಗೆ ಗುರುವಾಗಿ, ಪ್ರಸಂಗಕರ್ತರಾಗಿ, ತಾಳಮದ್ದಳೆಯ ಅರ್ಥಧಾರಿಯಾಗಿ ಯಕ್ಷಗಾನದ ಬಹು ಸಾಧ್ಯತೆಗಳಿಗೆ ತನ್ನನ್ನು ತೆರೆದುಕೊಂಡವರು. ಜನಿಸಿದ್ದು 1965 ರ ಮಾರ್ಚ್ 22ರಂದು ಕಾಸರಗೋಡಿನ ದೇಲಂಪಾಡಿ ಗ್ರಾಮದ ಕಂಬಳಿ ಕೇರಿಯ ಕೀರಿಕ್ಕಾಡಿನಲ್ಲಿ ತಂದೆ ಕೀರಿಕ್ಕಾಡು ಗೋಪಾಲಕೃಷ್ಣ ಭಟ್ಟರು ಶಾಲಾ ಅಧ್ಯಾಪಕರು ಹಾಗೂ ಯಕ್ಷಗಾನದ ಹವ್ಯಾಸಿ ಅರ್ಥಧಾರಿಯೂ ಆಗಿದ್ದರು. ತಾಯಿ ಸರಸ್ವತಿ ಸಂಸ್ಕೃತ ಜ್ಞಾನವುಳ್ಳವರಾಗಿದ್ದರು. ಗಣೇಶ ಶರ್ಮರ ದೊಡ್ಡಪ್ಪ ಕೀರಿಕ್ಕಾಡು ವಿಷ್ಣು ಶರ್ಮರು ತಾಳಮದ್ದಳೆಯ ಅಗ್ರಮಾನ್ಯ ಅರ್ಥಧಾರಿಗಳ ಸಾಲಿನಲ್ಲಿ ಗುರುತಿಸಿಕೊಂಡವರು. ದೇಲಂಪಾಡಿಯಲ್ಲಿ ಪ್ರಾಥಮಿಕ ಶಾಲೆ ಹಾಗೂ ಮುಳ್ಳೇರಿಯದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ ಶರ್ಮರು ಯಕ್ಷಗಾನದ ವಾತಾವರಣದಲ್ಲೆ ಬಾಲ್ಯವನ್ನು ಅನುಭವಿಸಿದರು.…

Read More

ಉಡುಪಿ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ದಶಮಾನೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ಶ್ರೀ ಗೋವಿಂದ ನಮನ 90’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ. ಶ್ರೀ ಪುತ್ತಿಗೆ ಮಠದ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಲಿದ್ದು, ಶ್ರೀ ಆದಿಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿ ಮತ್ತು ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಆಚಾರ್ಯರ 90ರ ಶ್ರೀ ಗೋವಿಂದ ನಮನದ ನೆನಪಿನ ಕಾಣಿಕೆ ಬೆಳಕಿಗೆ ಮತ್ತು ಆಚಾರ್ಯರ ಕುರಿತ ಒಂದು ಚಿಕ್ಕ ಬನ್ನಂಜೆ ಕೈಪಿಡಿ ಕೃತಿ ಅನಾವರಣಗೊಳ್ಳಲಿದೆ. ಹರಿದಾಸ ಚಂದ್ರಿಕಾ ಮತ್ತು ಓ.ಆರ್.ಪಿ. ಅಮೆರಿಕ ಆಯೋಜಿಸಿರುವ ಉಷಾಹರಣ ಕಾವ್ಯ ವಿಮರ್ಶೆಯ ಪ್ರಶಸ್ತಿ ಪ್ರದಾನ, ಶ್ರೀಮತಿ ಕವಿತಾ…

Read More

ತೆಕ್ಕಟ್ಟೆ: ರಸರಂಗ (ರಿ.) ಕೋಟ ಸಂಸ್ಥೆಯು ಸುಧಾ ಮಣೂರು ಇವರ ನಿರ್ದೇಶನದ ಪ್ರಸ್ತುತಪಡಿಸಿದ ‘ಶಬರಿ’ ನಾಟಕದ ರಂಗ ಪ್ರಸ್ತುತಿಯು ದಿನಾಂಕ 19 ಜುಲೈ 2025 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಪ್ರಾಚಾರ್ಯರಾದ ದೇವದಾಸ್ ರಾವ್ ಕೂಡ್ಲಿ ಮಾತನಾಡಿ “ಅತೀ ಕಡಿಮೆ ಸಮಯದಲ್ಲಿ “ಶಬರಿ” ಯಕ್ಷನಾಟಕ ಪ್ರಸ್ತುತಿ ಮನೋಜ್ಞವಾಗಿತ್ತು. ರಂಗದ ನಡೆಯನ್ನು ಅರಿತು ನಡೆಯಬೇಕಾದದ್ದನ್ನು ಗಮನಿಸಬೇಕಾದದ್ದು ಕಲಾವಿದರ ಕರ್ತವ್ಯ. ಮಕ್ಕಳ ಮೂಲಕ ರಂಗ ಪ್ರಸ್ತುತಿಯ ಕಾರ್ಯ ಸುಲಭವಲ್ಲ. ಇದನ್ನು ರಸರಂಗ ಸಾಧಿಸಿದೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕಿ ಸುಧಾ ಮಣೂರು ಮಾತನಾಡಿ “ರಸರಂಗ ಪ್ರಸ್ತುತಿಯ ಮೂರನೆಯ ಯಕ್ಷನಾಟಕ ಪ್ರಯೋಗವಿದು. ಶೂರ್ಪನಖ, ಅಹಲ್ಯಾ ಅಂತರಂಗ, ಶಬರಿ ಈ ನಾಟಕಗಳು ಇದುವರೆಗೆ ರಂಗ ಪ್ರಯೋಗಗೊಂಡಿದ್ದವು. ಪು.ತಿ. ನರಸಿಂಹ ಆಚಾರ್ಯರ ಹತ್ತನೇಯ ತರಗತಿಯ ಪಠ್ಯದಲ್ಲಿನ ಪದ್ಯವನ್ನಾಧರಿಸಿ ಇನ್ನಷ್ಟು ಪದ್ಯವನ್ನು ಜೊತೆಗೂಡಿಸಿ ತೋರಿಸಿದ ನಾಟಕ ಯಶಸ್ಸು ಕಂಡಿತು” ಎಂದರು. ಕಾರ್ಯದರ್ಶಿ ವೆಂಕಟೇಶ ವೈದ್ಯ, ಶ್ರೀಮತಿ ಪಾರ್ವತಿ, ಶ್ರೀಮತಿ ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.

Read More

ಮೂಡುಬಿದಿರೆ : ಆಮ್ನಾಯಃ – ಯಕ್ಷಸಂಸ್ಕೃತಿ ಬಳಗ ಗಾಳಿಮನೆ ಇದರ ವತಿಯಿಂದ ಧವಳತ್ರಯಜೈನಕಾಶಿ ಟ್ರಸ್ಟ್ ಜೈನ ಮಠ ಮೂಡುಬಿದಿರೆ ಮತ್ತು ಯಕ್ಷಗಾನ ಅಭಿಮಾನಿ ಬಳಗ ಮೂಡುಬಿದಿರೆ ಇವರ ಸಹಕಾರದೊಂದಿಗೆ ಪಾಕ್ಷಿಕ ತಾಳಮದ್ದಲೆ ಸರಣಿ – ವಿಶ್ವಾವಸು 5127 ದ್ವಿತೀಯ ಪ್ರದರ್ಶನವು ದಿನಾಂಕ 24 ಜುಲೈ 2025ರಂದು ಸಂಜೆ 6-00 ಗಂಟೆಗೆ ಮೂಡುಬಿದಿರೆಯ ಶ್ರೀಜೈನ ಮಠದ ಭಟ್ಟಾರಕ ಸಭಾಂಗಣದಲ್ಲಿ ನಡೆಯಲಿದೆ. ಕವಿ ಪಾರ್ತಿಸುಬ್ಬ ವಿರಚಿತ ‘ಪಾದುಕಾ ಪಟ್ಟಾಭಿಷೇಕ’ ಎಂಬ ಆಖ್ಯಾನದ ತಾಳಮದ್ದಲೆಯು ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷೋತ್ಸವ ಸಮಿತಿ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸಮಿತಿ ವತಿಯಿಂದ ದಿನಾಂಕ 21 ಜುಲೈ 2025ರಂದು ಕಾಲೇಜು ಸಭಾಂಗಣದಲ್ಲಿ ಪಾತಾಳ ವೆಂಕಟರಮಣ ಭಟ್ ಮತ್ತು ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಜ್ಯೋತಿ ಬೆಳಗಿ ನುಡಿ ನಮನ ಸಲ್ಲಿಸಿದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ‌. ಭಾಸ್ಕರ ರೈ ಕುಕ್ಕುವಳ್ಳಿ “ಯಕ್ಷಗಾನ ರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮಾರ್ಗದರ್ಶಕ ಕಲಾವಿದರಿಬ್ಬರನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಕಳೆದುಕೊಂಡಿದ್ದೇವೆ. ಶತಮಾನದ ಹಾದಿಯಲ್ಲಿದ್ದ 92ರ ಹರೆಯದ ಪಾತಾಳ ವೆಂಕಟರಮಣ ಭಟ್ಟರು ಯಕ್ಷಗಾನದ ವೇಷ ಭೂಷಣ, ನೃತ್ಯಾಭಿನಯಗಳಲ್ಲಿ ಹೊಸ ಪ್ರಯೋಗಶೀಲತೆಯ ಮೂಲಕ ಪರಂಪರೆಯನ್ನು ಎತ್ತಿ ಹಿಡಿದವರು; ಹಾಗೆಯೇ ಇನ್ನೂ ಬದುಕಿ ರಂಗದಲ್ಲಿ ಮೆರೆಯಬೇಕಾಗಿದ್ದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಬಣ್ಣದ ವೇಷಗಾರಿಕೆಯಲ್ಲಿ ಸೃಜನಶೀಲತೆಯನ್ನು ತೋರಿದವರು.ಇವರ ಕಣ್ಮರೆ ಯಕ್ಷಗಾನ ವಲಯದಲ್ಲಿ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಹೋಬಳಿ ಘಟಕದ ಶಾಲಾ-ಕಾಲೇಜುಗಳ ಶಿಕ್ಷಕರುಗಳಿಗೆ “ಕನ್ನಡ ಭಾಷೆಯ ಬೆಳವಣಿಗೆಗಾಗಿ ಮಾರ್ಗೋಪಾಯಗಳು” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಪ್ರಬಂಧ ಸ್ಪರ್ಧೆಯ ವಿಜೇತರುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ದಿನ್ನಕ 26 ಜುಲೈ 2025ರಂದು ಬೆಳಗ್ಗೆ 10-30 ಗಂಟೆಗೆ ಮೂರ್ನಾಡುವಿನ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಜೊತೆಗೆ ಮೂರ್ನಾಡು ಹೋಬಳಿ ಘಟಕದಲ್ಲಿ ಪ್ರಪ್ರಥಮ ಬಾರಿಗೆ ದಿ. ಕೊಕ್ಕಲೆರ ಚಂಗಪ್ಪನವರ ಜ್ಞಾಪಕಾರ್ಥವಾಗಿ ಪತ್ನಿ ನಿವೃತ್ತ ಶಿಕ್ಷಕಿ ಕೊಕ್ಕಲೆರ ಬೋಜಮ್ಮ ಮತ್ತು ಮಕ್ಕಳು ಸ್ಥಾಪಿಸಿದ ದತ್ತಿನಿಧಿ ಸ್ವೀಕಾರ ಹಾಗೂ ಹಿರಿಯ ಸಾಹಿತಿಗಳಾದ ಕಿಗ್ಗಾಲು ಎಸ್. ಗಿರೀಶ್ ಇವರ ‘ಕಣ್ಮರೆಯಾದ ಕಾಂತಾಮಣಿ’ ಪತ್ತೆದಾರಿ ಕಾದಂಬರಿ ಬಿಡುಗಡೆ ಕಾರ್ಯಕ್ರಮವಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ವಹಿಸಲಿದ್ದು, ಉದ್ಘಾಟಕರಾಗಿ ನಿವೃತ್ತ ದೈಹಿಕ ಶಿಕ್ಷಕ…

Read More

ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಮಂಜೇಶ್ವರ ಇವರು ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಈ ಕಾರ್ಯಕ್ರಮದ ಹನ್ನೊಂದನೆಯ ಕವಿಗೋಷ್ಠಿಯನ್ನು ದಿನಾಂಕ 27 ಜುಲೈ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡು ಮಂಜೇಶ್ವರದ ಗಿಳಿವಿಂಡುವಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಕಾಸರಗೋಡು ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಕವಯತ್ರಿ ಡಾ. ಕೆ.ವಿ. ಸಿಂಧು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ಕವಿಗೋಷ್ಠಿ – 01 ಕೃಷ್ಣನ್ ನಡುವಲತ್ತ್ ಹಾಗೂ ಮಧ್ಯಾಹ್ನ ಗಂಟೆ 2-30ಕ್ಕೆ ಕವಿಗೋಷ್ಠಿ – 02 ಡಾ. ಮೀನಾಕ್ಷಿ ರಾಮಚಂದ್ರ ಮಂಗಳೂರು ಇವರುಗಳ ಅಧ್ಯಕ್ಷತೆಯಲ್ಲಿ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ ಗಂಟೆ 1-30ಕ್ಕೆ ಸರ್ವಾಧ್ಯಕ್ಷರೊಂದಿಗೆ ‘ಕನ್ನಡ ಮತ್ತು ಮಲಯಾಳದ ನಡುವಿನ ಸೇತುವೆ ಯಾವುದು ?’ ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದ್ದು, ಸಂಜೆ…

Read More

ಯಕ್ಷಗಾನ ಕರ್ನಾಟಕದ ಕರಾವಳಿ ತೀರದ ವಿಶಿಷ್ಟ ಶಾಸ್ತ್ರೀಯ ಸಾಂಪ್ರದಾಯಿಕ ಕಲೆ. ಇಂದಿನ ಡಿಜಿಟಲ್ ಯುಗದಲ್ಲೂ ಈ ಗಂಡುಕಲೆ ಯಕ್ಷಗಾನ ಮನೆ ಮನಗಳಲ್ಲಿ ಗಟ್ಟಿಯಾಗಿ ಬೇರೂರಿದೆ. ಇಂತಹ ಶಾಸ್ತ್ರೀಯ ಹಾಗೂ ಶ್ರೀಮಂತ ಕಲೆಯಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಿರುವ ಯುವ ಕಲಾವಿದ ಮುಖೇಶ್ ದೇವಧರ್ ನಿಡ್ಲೆ. 20.02.2000 ರಂದು ಮುಕುಂದ ದೇವಧರ್ ಹಾಗೂ ಶುಭಾ ದೇವಧರ್ ಇವರ ಮಗನಾಗಿ ಮುಖೇಶ್ ಅವರ ಜನನ. ಎಂ.ಎ (ಕನ್ನಡ) ಇವರ ವಿದ್ಯಾಭ್ಯಾಸ. ಅಜ್ಜ ಗಣಪತಿ ದೇವಧರ್ ಹವ್ಯಾಸಿ ತಾಳಮದ್ದಳೆ ಅರ್ಥಧಾರಿಗಳಾಗಿದ್ದರು ಹಾಗೂ ಊರಿನ ಯಕ್ಷಗಾನೀಯ ಪರಿಸರ ಯಕ್ಷಗಾನವನ್ನು ಕಲಿಯಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಮುಖೇಶ್. ಯಕ್ಷಗಾನ ಗುರುಗಳು: ಡಾ.ಕೋಳ್ಯೂರು ರಾಮಚಂದ್ರ ರಾವ್. ಶ್ರೀ ಉಮೇಶ್ ಹೆಬ್ಬಾರ್. ಶ್ರೀ ವಿಠ್ಠಲ ಹೆಬ್ಬಾರ್. ಶ್ರೀ ಅರುಣ್ ಕುಮಾರ್ ಧರ್ಮಸ್ಥಳ. ನೆಚ್ಚಿನ ಪ್ರಸಂಗಗಳು: ಎಲ್ಲಾ ಪೌರಾಣಿಕ ಪ್ರಸಂಗಗಳು ಅಚ್ಚುಮೆಚ್ಚಿನ ಪ್ರಸಂಗಗಳಾಗಿದ್ದು, ಪ್ರಮುಖವಾಗಿ ಮಹಿರಾವಣ ಕಾಳಗ, ರಾವಣ ವಧೆ, ಕುರುಕ್ಷೇತ್ರ, ಕನ್ಯಾಂತರಂಗ, ಚೂಡಾಮಣಿ, ಕುಮಾರವಿಜಯ, ಅತಿಕಾಯ ಮೋಕ್ಷ ನೆಚ್ಚಿನವು. ನೆಚ್ಚಿನ ವೇಷಗಳು: ರಾವಣ,…

Read More

ಬೆಂಗಳೂರು : ವೈಟ್‌ಫೀಲ್ಡ್ ನ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟಿನಲ್ಲಿ ‘ತೊದಲ್ನುಡಿ’ ಮಕ್ಕಳ ಸಾಹಿತ್ಯ ಮಾಸಪತ್ರಿಕೆ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ-ಗ್ರಂಥಾಲಯ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಇವುಗಳು ಸಂಯುಕ್ತವಾಗಿ ‘ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ’ವನ್ನು ದಿನಾಂಕ 20 ಜುಲೈ 2025ರಂದು ಆಚರಿಸಿದರು. ಈ ಸಂಭ್ರಮದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಚುಟುಕು ಕವಿ-ಕಾವ್ಯ ಸಂಗಮ ನಡೆಯಿತು. ಭಾಷೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದವರಿಗೆ, ಕಾಸರಗೋಡು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ-ಗ್ರಂಥಾಲಯವು 2025ನೇ ಸಾಲಿನ ರಾಷ್ಟ್ರಕವಿ ಗೋವಿಂದಪೈ ರಾಷ್ಟ್ರ ಪ್ರಶಸ್ತಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣರಾಯ ರಾಷ್ಟ್ರ ಪ್ರಶಸ್ತಿ ಮತ್ತು ಕನ್ನಡ ಪಯಸ್ವಿನಿ ಪ್ರಶಸ್ತಿಗಳನ್ನು ಪ್ರದಾನ ಮಾಡಿತು. ಡಾ. ಸುಷ್ಮಾ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕರಾದ ಡಾ. ವಾಮನ್‌ರಾವ್ –…

Read More