Author: roovari

ಕೊಪ್ಪಳ : ಹೌದು, ವಿಠ್ಠಪ್ಪ ಗೋರಂಟ್ಲಿಯವರು ಹುಟ್ಟಿನಿಂದ ಬಡತನದ ಬೇಗೆಯಲ್ಲಿ ಬೆಂದು ನೊಂದು ಬೆಳೆದು ಬಂದವರು. ಬಡತನವೇ ಅವರನ್ನು ಗಡಿಗೆರೆ ದಾಟಲು ಕಲಿಸಿದ್ದು.. ಆಶ್ಚರ್ಯದ ಸಂಗತಿ ಎಂದರೆ ಔಪಚಾರಿಕ ಶಿಕ್ಷಣದಲ್ಲಿ ಅವರು ಓದಿದ್ದು ಕೇವಲ ನಾಲ್ಕನೇಯ ತರಗತಿ. ಅಪಾರವಾಗಿ ಓದುವ ಹವ್ಯಾಸ ಅವರನ್ನು ಬಹಳ ಎತ್ತರಕ್ಕೆ ಒಯ್ದು ನಿಲ್ಲಿಸಿತು. ಎಷ್ಟೆಂದರೆ ನಾವೆಲ್ಲ ಅವರನ್ನು ಕೊಪ್ಪಳದ ನಡೆದಾಡುವ ವಿಶ್ವಕೋಶ ಎಂದೇ ಹೇಳುವಂತಾಯಿತು. ಅವರು ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ಜೀವನ ನಿರ್ವಹಣೆಗೆ ಬಟ್ಟೆ ನೇಯಲು ಆರಂಭಿಸಿದರು. ಆದರೂ ಅವರ ಓದುವ ಹವ್ಯಾಸ ಮಾತ್ರ ಕಡಮೆ ಆಗಲಿಲ್ಲ. ದುಡಿತದ ಜೊತೆಗೆ ರೂಢಿಸಿಕೊಂಡಿದ್ದ ನಿರಂತರ ಓದು ಅವರನ್ನು ಚಿಂತನಶೀಲ ಬರಹಗಾರರನ್ನಾಗಿ ರೂಪಿಸಿತು. ಕಪ್ಪೋಡಲ ಕರೆ, ಈ ನೆಲದೊಡಲಲ್ಲಿ, ಶ್ರೀ ಸದಾನಂದ ಸಂದೇಶ, ತನಿಖಾ ವರದಿ, ಯಾರು ಹಾಡದ ಹಾಡು, ನಿನ್ನ ನೀ ತಿಳಿ, ಕಡಲೊಳಗಿನ ನೂರೆಂಟು ಹನಿಗಳು, ತುಂಗಭದ್ರೆಯ ಅಳಲು, ಜಿಲ್ಲಾ ರಂಗ ಮಾಹಿತಿ ಅವರ ಪ್ರಕಟಿತ ಕೃತಿಗಳು. ಮಾತ್ರವಲ್ಲದೆ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕ…

Read More

ಧಾರವಾಡ : ವಿಶ್ವ ಪುಸ್ತಕ ದಿನದ ಅಂಗವಾಗಿ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ್ದ ‘ಉತ್ತಮ ಓದುಗ’ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಶ್ರೀಮತಿ ಶ್ರೀರಂಜನಿ ಅಡಿಗ (ಬೆಂಗಳೂರು), ಶ್ರೀಮತಿ ರಂಜಿತಾ ಮಹಾಜನ (ಬೆಳಗಾವಿ), ಕುಮಾರಿ ನಯನಾ ಜಿ.ಎಸ್. ಕಳಂಜ (ದಕ್ಷಿಣ ಕನ್ನಡ), ಶ್ರೀಮತಿ ಮಾಲಾ ಹೆಗಡೆ ಕೆರೆಕೋಣ (ಉತ್ತರ ಕನ್ನಡ) ಮತ್ತು ಕುಮಾರಿ ವಿಭಾಶ್ರೀ ಭಟ್ (ಮೈಸೂರು) ‘ಉತ್ತಮ ಓದುಗ’ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಕುಮಾರಿ ಭವ್ಯ ಭಟ್ (ಮಡಿಕೇರಿ) ಅವರು ತೀರ್ಪುಗಾರರಾಗಿದ್ದರು. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರು ಬಹುಮಾನವನ್ನು ಪಡೆದ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀಮತಿ ಶ್ರೀರಂಜನಿ ಅಡಿಗ ಶ್ರೀಮತಿ ರಂಜಿತಾ ಮಹಾಜನ ಕುಮಾರಿ ನಯನಾ ಜಿ.ಎಸ್. ಕಳಂಜ ಶ್ರೀಮತಿ ಮಾಲಾ ಹೆಗಡೆ ಕೆರೆಕೋಣ ಕುಮಾರಿ ವಿಭಾಶ್ರೀ ಭಟ್

Read More

ತುಮಕೂರು : ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ‘ಚಿಣ್ಣರ ಬಣ್ಣದ ಶಿಬಿರ’ದ ಸಮಾರೋಪ ಸಮಾರಂಭವು ತುಮಕೂರು ತಾಲೂಕಿನ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ದಿನಾಂಕ 10-05-2024ರಂದು ಸಂಪನ್ನಗೊಂಡಿತು. ಈ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಮಕ್ಕಳ ಹಕ್ಕುಗಳ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡುತ್ತಾ “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಬಹಳ ಮುಖ್ಯ. ಡಮರುಗ ಸಂಸ್ಥೆ ಗ್ರಾಮೀಣ ಮಕ್ಕಳನ್ನು ಗುರಿಯಾಗಿಸಿಕೊಂಡು ಉಚಿತವಾಗಿ ರಂಗಶಿಬಿರ ನಡೆಸಿಕೊಂಡು ಬರುತ್ತಿರುವುದು ಅಭಿನಂದರಾರ್ಹ” ಎಂದು ಅಭಿಪ್ರಾಯಪಟ್ಟರು. ನಂತರ ಮಾತನಾಡಿದ ಸುಧಾ, “ನಾನು 40 ವರ್ಷ ದೆಹಲಿ ಮತ್ತು 10 ವರ್ಷ ಬೆಂಗಳೂರಿನಲ್ಲಿ ಇದ್ದು ರಂಗ ತಂಡಗಳ ನಿರಂತರ ಸಂಪರ್ಕದಲ್ಲಿದ್ದುಕೊಂಡು ಬಂದವಳು. ಆದರೆ ಗ್ರಾಮೀಣ ಮಟ್ಟದಲ್ಲಿ ಒಂದು ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೆ ಪೂರ್ಣಾವಧಿ ರಂಗಶಿಬಿರವನ್ನು ಆಯೋಜಿಸಿರುವುದು ತೀರಾ ಅಪರೂಪ. ಆದ್ದರಿಂದಲೇ ವಿಷಯ ತಿಳಿದು ಒಂದು ದಿನ ಮುಂಚಿತವಾಗಿ ಬಂದು ಶಿಬಿರದಲ್ಲಿ ಭಾಗವಹಿಸಿ ಅಂತರಾಳದಿಂದ ಹೇಳುತ್ತಿದ್ದೇನೆ. ಇದೊಂದು ಅದ್ವಿತೀಯ ರಂಗಕಾರ್ಯ. ಇದರ ರೂವಾರಿ ಮೆಳೇಹಳ್ಳಿ ದೇವರಾಜ್ ಮತ್ತು…

Read More

ಮಂಗಳೂರು : ಬ್ಯಾರಿ ಎಲ್ತ್ ಗಾರ್ತಿಮಾರೊ ಕೂಟದ ವತಿಯಿಂದ ಆಯೋಜಿಸಿದ್ದ ‘ಸಾಹಿತ್ಯತ್ತೊ ಒಸರ್ -2024’ (ಸಾಹಿತ್ಯದ ಒರತೆ) ಕಾರ್ಯಕ್ರಮವು ದಿನಾಂಕ 12-05-2024ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಜರಗಿತು. ಈ ಕಾರ್ಯಕ್ರಮದ ನೆಪದಲ್ಲಿ ನಡೆದ ‘ಪಾಟೆಲ್ತ್ ರೊ ಒಸರ್’ ಬಹುಭಾಷಾ ಕವಿಗೋಷ್ಠಿಯಲ್ಲಿ ಮೊದಲು ಕವಿತೆ ಪ್ರಸ್ತುತಪಡಿಸಿದವರು ಆಯೆಷಾ ಯು.ಕೆ. “ಹೌದು, ಅಮ್ಮನೆಂದರೆ ನಾಟಕಕಾರ್ತಿ… ಕುಟುಂಬದ ಒಳಿತಿಗಾಗಿ ದುಃಖ ದುಮ್ಮಾನವನ್ನು ಹುದುಗಿಟ್ಟುಕೊಂಡು ಏನೂ ಆಗಲಿಲ್ಲ ಎಂಬಂತೆ ನಟಿಸುವಾಕೆ…’ ಅವರು ಸ್ವರಚಿತ ಕವನದ ಇಂಥ ಸಾಲುಗಳನ್ನು ಓದುತ್ತಿರುವಾಗ ಸಭಿಕರಲ್ಲಿ ಮೊದಲು ಮೌನ, ನಂತರ ಹೃದಯ ಭಾರ. ಕೆಲವರ ಕಣ್ಣಂಚು ತಮಗರಿವಿಲ್ಲದೇ ಒದ್ದೆ. ವಿಶ್ವ ಅಮ್ಮಂದಿರ ದಿನದ ಅಂಗವಾಗಿ ತಾಯಂದಿರ ಕುರಿತ ಕವಿತೆ ವಾಚಿಸಿದ ಅವರು, ಅಮ್ಮಂದಿರು ತಮ್ಮ ನೋವನ್ನು ನಾಟಕೀಯವಾಗಿ ಅಡಗಿಸಿಡುವುದನ್ನು ಕಾವ್ಯಾತ್ಮಕವಾಗಿ ನಿರೂಪಿಸಿ ಸಭಿಕರ ಹೃದಯವನ್ನು ಆರ್ದ್ರಗೊಳಿಸಿದರು. ನೋವನ್ನು ಕಣ್ಣೀರಿನ ಮೂಲಕ ಪ್ರಕಟಪಡಿಸದೆ ಅಡಗಿಸಿಟ್ಟ ಅಮ್ಮ ಕೊನೆಗೊಂದು ದಿನ ಕಣ್ಣೀರು ಹಾಕಿದಾಗ ಮಕ್ಕಳು ‘ಆಹಾ… ಅಮ್ಮ ನಾಟಕ ಮಾಡುತ್ತಿದ್ದಾಳೆ…’ ಎಂದು ಗೇಲಿ ಮಾಡಿದರು ಎಂಬ…

Read More

ಹೆಗ್ಗೋಡು : ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ ಹೆಗ್ಗೋಡು ಇದರ ವತಿಯಿಂದ ‘ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್’ 2024-25ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆಯ ಬಾಬ್ತು ಭಾಗಶಃ ವಿದ್ಯಾರ್ಥಿವೇತನ ದೊರೆಯುತ್ತದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯ ಶ್ರಾವ್ಯ ಪರಿಕರಗಳ ಅನುಕೂಲತೆಯಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ.

Read More

ಕಾಸರಗೋಡಿನ ಹಿರಿಯ ತಲೆಮಾರಿನ ಕವಿಗಳಲ್ಲಿ ಒಬ್ಬರಾದ ಕೃಷ್ಣ ಭಟ್ಟ ಪಟ್ಟಾಜೆಯವರ ‘ಭಾವಾಂಜಲಿ’ಯು ಉತ್ತಮ ಕವಿತೆಗಳ ಸುಂದರ ಗುಚ್ಛ. ಇಲ್ಲಿ ಕೆಲವನ್ನು ರಾಗಬದ್ಧವಾಗಿ ಹಾಡಬಹುದಾದರೆ ಮತ್ತೆ ಕೆಲವನ್ನು ಭಾವಬದ್ಧವಾಗಿ ಓದಬಹುದು. ಇವುಗಳ ಹೃದ್ಯವಾದ ಭಾವ ಸಾಮರಸ್ಯದಲ್ಲಿ ನವ್ಯ-ನವೋದಯಗಳ ಕಲ್ಪನೆಯೇ ಒಮ್ಮೆ ಮರೆತುಹೋಗುತ್ತದೆ. ‘ಒಂದು ರಾತ್ರೆ’, ‘ಹಾಡು ಕೋಗಿಲೆ’, ‘ಹೇಮಂತ’, ‘ನಲಿದಾಡು ಕಂದ’, ‘ಬಾ ಕಾಡಿಗೆ’ ಮೊದಲಾದ ಕವಿತೆಗಳು ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತವೆ. ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಪ್ರತಿಮೆ-ಸಂಕೇತಗಳ ಹಂಗುತೊರೆದ ಸರಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ವೈಶಿಷ್ಟ್ಯ. ಹೊಗೆಯಾಡುತಿಹುದೊಂದು ಕಿಡಿಸಿಡಿಸಿದರದೆ ಸಾಕು ಆಗ ನೋಡಲ್ಲೆಲ್ಲು ಅಗ್ನಿ ವರ್ಷ ಆಸನ್ನವೈ ದೇವದಾನವರ ಯುದ್ಧವಿದು ಯುದ್ಧ ಯಜ್ಞದ ಫಲವೇ ಲೋಕನಾಶ (ಶಾಂತಿ) ಜಗತ್ತು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸುವ ಈ ಸಾಲುಗಳು ಮನುಷ್ಯರ ನಡುವಿನ ಸ್ನೇಹದ ಬೆಸುಗೆಯನ್ನು ಇಲ್ಲವಾಗಿಸುತ್ತಿರುವ ಯುದ್ಧ ಮತ್ತು ಭಯೋತ್ಪಾದನೆಗಳನ್ನು ನೆನೆದು ತಲ್ಲಣಿಸುತ್ತವೆ. ಹೊತ್ತಿ ಉರಿಯುತ್ತಿರುವ ಯುದ್ಧಜ್ವಾಲೆಯ ಪರಿಣಾಮಗಳನ್ನು ಸೆರೆಹಿಡಿಯುತ್ತವೆ. ಪೂರ್ವಜರ ವಿಮಲ ಸಚ್ಚಾರಿತ್ರ್ಯ ಮುಕುರಕ್ಕೆ ಕರೆಗೊಡಲಾವ್…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ ‘ರಾವಣ ವಧೆ’ ಎಂಬ ತಾಳಮದ್ದಳೆಯು ಓ೦ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 11-05-2024ರಂದು ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಮತ್ತು ಅಚ್ಯುತ ಪಾಂಗಣ್ಣಾಯ ಹಾಗೂ ಮುಮ್ಮೇಳದಲ್ಲಿ ‌ಪೂಕಳ ಲಕ್ಷ್ಮೀನಾರಾಯಣ ಭಟ್ (ರಾವಣ‌), ಗುಡ್ಡಪ್ಪ ಬಲ್ಯ‌ (ಶ್ರೀ ರಾಮ‌), ಭಾಸ್ಕರ್ ಬಾರ್ಯ (ಮಂಡೋದರಿ), ಮಾಂಬಾಡಿ ವೇಣುಗೋಪಾಲ ಭಟ್‌ (ಮಾತಲಿ), ಚಂದ್ರಶೇಖರ್ ಭಟ್ ಬಡೆಕ್ಕಲ (ದೂತ), ಪ್ರೇಮಲತಾ ಟಿ. ರಾವ್ (ವಿಭೀಷಣ) ಸಹಕರಿಸಿದರು. ಟಿ. ರಂಗನಾಥ ರಾವ್ ಹಾಗೂ ದುಗ್ಗಪ್ಪ ಎನ್. ಸಹಕರಿಸಿದರು.

Read More

ಉಡುಪಿ : ಗಾಂಧಿ ಆಸ್ಪತ್ರೆ ಉಡುಪಿ ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂ ಮತ್ತು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂ ಅವರ ಆಶೀರ್ವಾದದೊಂದಿಗೆ ‘ವಯೋಲಿನ್ ಕಛೇರಿ’ಯನ್ನು ದಿನಾಂಕ 15-05-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಛೇರಿಯನ್ನು ಖ್ಯಾತ ಬಾಲ ಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಮತ್ತು ಅವರ ಮಾರ್ಗದರ್ಶಕ ಶ್ರೀ ಸಿ.ಎಸ್. ಅನುರೂಪ್ ಅವರು ನಡೆಸಿಕೊಡಲಿದ್ದಾರೆ.

Read More

ಬೆಳ್ತಂಗಡಿ : ಕನ್ನಡ ಕಾವ್ಯ ಪರಂಪರೆಯ ಪರಿಚಯ ಮತ್ತು ಸಂಸ್ಕೃತಿಯನ್ನು ಉಳಿಸುವ ಹೊಸ ಆಂದೋಲನವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಆರಂಭಿಸಿದೆ. ಮನೆ ಮನೆಗಳಲ್ಲಿ ಗಮಕ ಕಾರ್ಯಕ್ರಮವನ್ನು ನಡೆಸುವ ಅಭಿಯಾನಕ್ಕೆ ಧರ್ಮಸ್ಥಳ ಗ್ರಾಮದ ನಾರ್ಯದ ಜಯರಾಮ ಕುದ್ರೆತ್ತಾಯರ ಮನೆಯಲ್ಲಿ ದಿನಾಂಕ 07-05-2024ರಂದು ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು. ಬೆಳ್ತಂಗಡಿ ತಾಲೂಕು ಘಟಕದ ಗಮಕ ಪರಿಷತ್ತಿನ ಪೂರ್ವಾಧ್ಯಕ್ಷರು ಮತ್ತು ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಜಯರಾಮ ಕುದ್ರೆತ್ತಾಯರ ಮನೆಯಲ್ಲಿ ಮನೆಮನೆ ಗಮಕದ ಕಾರ್ಯಕ್ರಮವನ್ನು ಕಲಾಪೋಷಕರಾದ ಶ್ರೀ ಭುಜಬಲಿಯವರು ಉದ್ಘಾಟಿಸಿದರು. ನಂತರ ಶುಭಾಶಯಗಳನ್ನು ಕೋರಿದ ಅವರು “ಎಲ್ಲಾ ಕಲೆಗಳಿಗೂ ಸಂಗೀತವು ಮೂಲವಾಗಿದ್ದು, ವಾಚನ ಪ್ರಧಾನವಾದ ಗಮಕ ಕಲೆಯು ನಮ್ಮ ಸಂಸ್ಕೃತಿಯನ್ನು ಉಳಿಸಲು ಬಲು ಮುಖ್ಯ ಕಾರಣವಾಗಿದೆ. ಇಂತಹ ಗಮಕ ಕಲೆಯ ಮೂಲಕ ಕನ್ನಡದ ಕಾವ್ಯ ಸಂಪತ್ತನ್ನು ಮನೆ ಮನೆಗೆ ತಲುಪಿಸುವ ಕಾರ್ಯವು ಸ್ತುತ್ಯರ್ಹವಾಗಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು. ನಂತರ ಕುಮಾರವ್ಯಾಸ ವಿರಚಿತ ಕರ್ಣಾಟಕ ಕಥಾಮಂಜರಿಯ ಉದ್ಯೋಗ…

Read More

ಕೋಟ: ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದ ಅಂಗವಾದ ‘ಶ್ವೇತಸಂಜೆ-27’ ಕಾರ್ಯಕ್ರಮವು ದಿನಾಂಕ 10-05-2024 ರಂದು ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ಸ್ ಇದರ ಸಹಯೋಗದೊಂದಿಗೆ ಕೋಟದ ಹರ್ತಟ್ಟು ಎಂಬಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಲಾವಿದ ಹಾಗೂ ಕಲಾ ಪ್ರೋತ್ಸಾಹಕ ಗೋಪಾಲ ಮೈಯ್ಯ ಹರ್ತಟ್ಟು ಮಾತನಾಡಿ “ಕಲಾ ಪ್ರತಿಭೆಗಳ ಜನ್ಮದಾತವಾಗಿರುವ ಸಂಸ್ಥೆ ಯಶಸ್ವೀ ಕಲಾವೃಂದ. ನಿರಂತರ ಸಾಂಸ್ಕೃತಿಕ ತರಗತಿಗಳನ್ನು ನಡೆಸುತ್ತಾ ವಿವಿಧ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ಪಳಗಿಸಿ, ಅವರಿಗೆ ಅವಕಾಶ ನೀಡುತ್ತಾ ಪ್ರತಿಭೆಗಳನ್ನು ಬೆಳೆಸುತ್ತಾ ಸಾಧನೆ ಗೈಯುತ್ತಿರುವುದು ಶ್ಲಾಘನೀಯ ಕಾರ್ಯ. ಭವಿಷ್ಯದ ಕಲಾ ಪ್ರತಿಭೆಗಳಿಗೆ ನಿರಂತರ ವೇದಿಕೆ ಒದಗುತ್ತಿರಬೇಕು. ಈ ನಿಟ್ಟಿನಲ್ಲಿ 25ನೇ ವರ್ಷಾಚರಣೆಯ ಸಂದರ್ಭ ಸಮಾಜದ ಸನ್ಮಿತ್ರರು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ.” ಎಂದರು. ಮತ್ತೋರ್ವ ಅತಿಥಿ ಗುರು ಲಂಬೋದರ ಹೆಗಡೆ ಮಾತನಾಡಿ “ರಂಗ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡುವಲ್ಲಿ ಸಮಾಜದ ಗಣ್ಯರು ಮನಸ್ಸು ಮಾಡಬೇಕು. ಕಲಿಯುವ ಮನಸ್ಸುಗಳಿಗೆ ಅವಕಾಶದ ಪ್ರೋತ್ಸಾಹ ದೊರೆತರೆ ನೂರಾರು ಕಲಾವಿದರು…

Read More