Author: roovari

ಮೈಸೂರು : ಭಿನ್ನಷಡ್ಜ ಇದರ ವತಿಯಿಂದ ಹಲವು ಪ್ರಕಾರದ ಸಾಹಿತ್ಯ ಮತ್ತು ಸಂಗೀತದ ಅನುಸಂಧಾನ ‘ರಾಗ – ರಂಗ’ ರಂಗಸಂಗೀತ ತರಗತಿಗಳು ದಿನಾಂಕ 05 ಜುಲೈ 2025ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ. ಕನ್ನಡ ರಂಗಭೂಮಿಯಲ್ಲಿ‌ ವೃತ್ತಿ ರಂಗಭೂಮಿಯಿಂದ ಇಂದಿನವರೆಗೆ ನಡೆದು ಬಂದ ರಂಗಸಂಗೀತವನ್ನು, ಹಲವಾರು ರೀತಿಯ ಸಾಹಿತ್ಯ ‌ಮತ್ತು ಸಂಗೀತ ಪದ್ದತಿಗಳನ್ನು ಉದಾಹರಣೆ ಸಹಿತ ಕಲಿಸುವ ಪ್ರಕ್ರಿಯೆಯನ್ನು ಅರಂಭಿಸುತ್ತಿದ್ದೇವೆ. ರಂಗಭೂಮಿಗೆ ಬೇಕಾದ ಉಸಿರಾಟ, ಧ್ವನಿ‌ ಮತ್ತು‌ ದೇಹದ ನಡುವಿನ‌ ಸಂಬಂಧ ‌ಮತ್ತು‌ ಸಾಮರಸ್ಯವನ್ನು ‌ಅಭ್ಯಾಸಮಾಡುವ ಒಂದು ಅವಕಾಶ. 10 ವಯಸ್ಸಿನ ಮೇಲ್ಪಟ್ಟವರಿಗೆ ಸಂಗೀತದ ಪ್ರಾಥಮಿಕ ಪರಿಚಯವನ್ನು ಸುಲಭವಾಗಿ ಹಾಡುಗಳ ಮೂಲಕ‌ ತಿಳಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9632535749 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಪ್ಪಿನಂಗಡಿ : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಉಪ್ಪಿನಂಗಡಿ ಹೋಬಳಿ ಘಟಕ ಇದರ ವತಿಯಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ‘ಕನ್ನಡ ಕಲರವ -2’ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರ ಶನಿವಾರದಂದು ಮಧ್ಯಾಹ್ನ 2-00 ಗಂಟೆಗೆ ಉಪ್ಪಿನಂಗಡಿಯ ಇಂದ್ರಪ್ರಭ ಸಭಾಂಗಣದಲ್ಲಿ ನಡೆಸಲು ಸಂಕಲ್ಪಿಸಲಾಗಿದೆ. ಇದರ ಸಲುವಾಗಿ ದಿನಾಂಕ 02 ಆಗಸ್ಟ್ 2025ರ ಶನಿವಾರದಂದು ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಸ್ವರಚಿತ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ಹಿರಿಯ ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗದಲ್ಲಿ ನಡೆಯಲಿದೆ. ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು 20 ಜುಲೈ 2025ರ ಒಳಗಾಗಿ ತಮ್ಮ ತಮ್ಮ ಹೆಸರನ್ನು ಶಾಲಾ ಮುಖ್ಯೋಪಾಧ್ಯಾಯರ ದೃಢೀಕರಣದೊಂದಿಗೆ ಸಲ್ಲಿಸಬೇಕು. ಪ್ರಬಂಧ ಸ್ಪರ್ಧೆಯ ವಿಷಯ ‘ನಾ ಕಂಡ ತೆರೆಮರೆಯ ಸ್ವಾತಂತ್ರ್ಯ ಯೋಧ’ (ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಉಳಿದಿರುವ ದೇಶಕ್ಕಾಗಿ ಪ್ರಾಣಾರ್ಪಣೆ ಗೈದಿರುವ ಸ್ವಾತಂತ್ರ್ಯ ಯೋಧರ ಬಗ್ಗೆ ಬೆಳಕು ಚೆಲ್ಲುವ ಬರಹ) ಹಿರಿಯ ಪ್ರಾಥಮಿಕ ವಿಭಾಗ…

Read More

ಬೆಂಗಳೂರು : ಹಿರಿಯ ಬರಹಗಾರ್ತಿ, ಕನ್ನಡದ ಅತ್ಯತ್ತಮ ಸ್ತ್ರೀ ಚಿಂತಕಿ, ಪತ್ರಕರ್ತೆ, ‘ಎಡಕಲ್ಲು ಗುಡ್ಡದ ಮೇಲೆ’,’ ಹುಲಿಯ ಹಾಲಿನ ಮೇವು’, ‘ಗಿರಿಕನ್ಯೆ’, ‘ಬಯಲುದಾರಿ’ಯಂತಹ ಕಾದಂಬರಿಗಳನ್ನು ನೀಡಿದ ಖ್ಯಾತ ಕಾದಂಬರಿಕಾರ ಭಾರತೀಸುತ ಅವರ ಪುತ್ರಿ ಕುಸುಮಾ ಶಾನಭಾಗ ದಿನಾಂಕ 22 ಜೂನ್ 2025ರಂದು ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು. ಪ್ರಜಾವಾಣಿ ದಿನಪತ್ರಿಕೆ ಉದ್ಯೋಗಿಯಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಲೈಂಗಿಕ ಕಾರ್ಯಕರ್ತರ ಕುರಿತು ಸುಮಾರು ಹತ್ತು ವರ್ಷಗಳಿಗೂ ಹೆಚ್ಚುಕಾಲ ಅಧ್ಯಯನ ನಡೆಸಿದ್ದಾರೆ. ‘ನೆನಪುಗಳ ಬೆನ್ನೇರಿ’ ಎಂಬ ಕಥಾಸಂಕಲನ, ʻಮಣ್ಣಿಂದ ಎದ್ದವರು’ ಎಂಬ ವಿಶಿಷ್ಟ ಕಾದಂಬರಿ, ʻಕಾಯದ ಕಾರ್ಪಣ್ಯ’ ಲೈಂಗಿಕ ಕಾರ್ಯಕರ್ತೆಯರ ಕುರಿತ ಕಥನ ಪ್ರಕಟವಾಗಿದೆ. ಇವರ ಬರಹಗಳು ‘ಕೆಂಡಸಂಪಿಗೆ’ಯಲ್ಲಿ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು.

Read More

ಬೆಂಗಳೂರು : ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜೀ ಅವರ ತತ್ತ್ವಭಾಗವತಮ್ ಪ್ರವಚನಗಳನ್ನಾಧರಿಸಿದ ತತ್ತ್ವ ಭಾಗವತಮ್, ನಲ ದಮಯಂತಿ, ಕಲಿ ಸಂತರಣ ಹಾಗೂ ಅವತಾರಕಥಾ ಪುಸ್ತಕಗಳ ಲೋಕರ್ಪಣಾ ಸಮಾರಂಭವು ದಿನಾಂಕ 22 ಜೂನ್ 2025 ರಂದು ಬೆಂಗಳೂರಿನ ಶ್ರೀ ರಾಮಚಂದ್ರಾಪುರ ಮಠದ ಗಿರಿನಗರ ಶಾಖೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮಿಜೀ ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಿದರು. ಈ ವೇಳೆ ಪುಸ್ತಕಗಳ ಸಂಪಾದಕರಾದ ಡಾ. ಪಾದೇಕಲ್ಲು ವಿಷ್ಣು ಭಟ್, ಅನೂರಾಧಾ ಪಾರ್ವತಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ. ಎಲ್., ಶ್ರೀ ಭಾರತೀ ಪ್ರಕಾಶನದ ಅಧ್ಯಕ್ಷರಾದ ಸಚಿನ್ ಎಲ್.ಎಸ್., ಹಿರಿಯ ಉಪಾಧ್ಯಕ್ಷರಾದ  ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಧರ್ಮಭಾರತೀ ಸಂಪಾದಕರಾದ ಗಣೇಶ್ ಕೃಷ್ಣ ಹೆಗಡೆ ಉಪಸ್ಥಿತರಿದ್ದರು. ಶ್ರೀ ಮದ್ಭಾಗವತದ ಕುರಿತಾದ ಪುಸ್ತಕಗಳನ್ನು ಭಾರತೀ ಪ್ರಕಾಶನದಿಂದ ಪ್ರಕಟ ಮಾಡಿದ್ದು, ಭಾರವಿ, ಮಲ್ಲಿನಾಥ ಸೂರಿ, ವಾಚಸ್ಪತಿ ಮಿಶ್ರ, ಪಾಣಿನಿ, ಮೀರ ಇವರ ಅದ್ಭುತ ಕಥೆಗಳು ‘ಪಿಬತ ಭಾಗವತಮ್’ ಪುಸ್ತಕದಲ್ಲಿದೆ. ಜತೆಗೆ ಹಲವು…

Read More

ದೇಲಂಪಾಡಿ : ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 21 ಜೂನ್ 2025ರಂದು ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಅಭಿಯಾನಕ್ಕೆ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಘಟಕದ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಇವರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿ ಚಾಲನೆ ನೀಡಲಾಯಿತು. ಕನ್ನಡ ಧ್ವಜ ಹಸ್ತಾಂತರ ಮಾಡಿದ ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮಾತನಾಡಿ “ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಆರಂಭವಾದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯ ತರಬೇತಿ ಅಭಿಯಾನವು ಸಮಯೋಚಿತ. ಈ ಕನ್ನಡ ಪರವಾದ ಅಭಿಯಾನವು ಎಲ್ಲಾ ಶಾಲೆಗಳಿಗೂ ವಿಸ್ತರಿಸಿ, ಕನ್ನಡ ಭಾಷಾ ಜಾಗೃತಿಯನ್ನು ಬಲ ಪಡಿಸಲಿ. ಗದ್ಯ, ಪದ್ಯ ಮೊದಲಾದ ಸಾಹಿತ್ಯ ಪ್ರಕಾರಗಳ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವು ವಿದ್ಯಾರ್ಥಿಗಳಿಗೆ ಈ ಮೂಲಕ ದೊರಕಿದೆ” ಎಂದು ಹೇಳಿದರು. ಹಿರಿಯ ಯಕ್ಷಗಾನ ಗುರುಗಳಾದ ವಿಶ್ವ ವಿನೋದ ಬನಾರಿ…

Read More

ಬೆಂಗಳೂರು : ಸಪ್ತಕ್ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಸ್ಮರಣೆ ಸ್ವರಾಂಜಲಿ’ ಕಾರ್ಯಕ್ರಮವನ್ನು ದಿನಾಂಕ 28 ಜೂನ್ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ಬಸವನಗುಡಿ, ಶ್ರೀ ಬಿ.ಪಿ. ವಾಡಿಯ ರೋಡಿನಲ್ಲಿರುವ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ನಲ್ಲಿ ಆಯೋಜಿಸಲಾಗಿದೆ. ಹಿಂದೂಸ್ತಾನಿ ಸಂಗೀತದ ಮಹಾನ್ ಪೋಷಕ ಮತ್ತು ಸಮಾಜ ಸೇವಕ ದಿವಂಗತ ಅನಿಲ್ ಕುಲಕರ್ಣಿ ಇವರ ಸ್ಮರಣೆಯಲ್ಲಿ ಶ್ರಾವ್ಯ ಸುದರ್ಶನ್ ಐಯರ್ ಇವರ ಹಾಡುಗಾರಿಕೆಗೆ ಪೂರ್ಣಿಮಾ ಸಾಮಂತ್ ಇವರು ತಬಲಾ ಹಾಗೂ ಡಾ. ಗಜಾನನ್ ಸಭಾಹಿತ್ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಉಸ್ತಾದ್ ರಶೀದ್ ಖಾನ್ ಇವರ ಹಿರಿಯ ಶಿಷ್ಯರಿಂದ ಸಂಗೀತ ಗೌರವದಲ್ಲಿ ಪಂಡಿತ್ ಪ್ರಸಾದ್ ಖಾಪರ್ಡೆ ಇವರ ಹಾಡುಗಾರಿಕೆಗೆ ಗುರುಮೂರ್ತಿ ವೈದ್ಯ ಇವರು ತಬಲಾ ಹಾಗೂ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.

Read More

ಬೆಂಗಳೂರು : ಆಜೀವಿಕ ಅರ್ಪಿಸುವ ರಂಗ ನಟನಾ ಶಿಬಿರ ಮತ್ತು ಸಂಸ್ಕೃತಿ ನೆಲೆಯ ಕಾರ್ಯಾಗಾರವನ್ನು ದಿನಾಂಕ 01 ಜುಲೈ 2025ರಿಂದ 17 ಜುಲೈ 2025ರವರೆಗೆ ಬೆಂಗಳೂರಿನ ಪ್ರಶಾಂತ ನಗರದಲ್ಲಿರುವ ಆಜೀವಿಕದಲ್ಲಿ ಹಮ್ಮಿಕೊಳ್ಳಲಾಗಿದೆ. ನಟ ನಿರ್ದೇಶಕ ರಂಗ ಶಿಕ್ಷಕ ಹಾಗೂ ಸಂಶೋಧಕರಾದ ಡಾ. ಉದಯ್ ಸೋಸಲೆ ಇವರು 10 ದಿನಗಳ ರಂಗ ನಟನಾ ಶಿಬಿರವನ್ನು ಹಾಗೂ ಪ್ರಖ್ಯಾತ ನಾಟಕಕಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಸಿನಿಮಾ ಸಂಭಾಷಣಾಕಾರ ಹಾಗೂ ಸಂಸ್ಕೃತಿ ಚಿಂತಕರಾದ ಲಕ್ಷ್ಮೀಪತಿ ಕೋಲಾರ ಇವರು 3 ದಿನಗಳ ಸಂಸ್ಕೃತಿ ನೆಲೆಯ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರವು ನಮ್ಮ ಮುಂದಿನ ನಾಟಕ ಪ್ರಕ್ರಿಯೆಗೆ ಪೂರಕವಾಗಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9901290575 ಮತ್ತು 7353712715 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮೂಡುಬಿದಿರೆ : ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಸಾಲಿನ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷ ಪ್ರಯೋಗಗಳು ಮತ್ತು ಯಕ್ಷಗಾನ ಪ್ರದರ್ಶನಗಳಲ್ಲಿ ಅಭಿನಯಿಸಲು ಕಲಾವಿದರು ಬೇಕಾಗಿರುತ್ತಾರೆ. ತೆಂಕು ಬಡಗು ಯಕ್ಷಗಾನ ನಾಟ್ಯ ತಾಳಗಳ ಅನುಭವ ಹೊಂದಿರುವ 18ರಿಂದ 28 ವರ್ಷಗಳ ವಯೋಮಿತಿಯ ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ಯಕ್ಷಗಾನ ಪ್ರದರ್ಶನದ ಫೋಟೋ, ತಮ್ಮ ಯಕ್ಷಗಾನ ಅನುಭವದ ಸ್ವವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ. ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡು ಬಿದಿರೆ -574227. ಅರ್ಜಿ ತಲುಪಲು ಕೊನೆಯ ದಿನಾಂಕ 25 ಜೂನ್ 2025 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9480529236 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಉಭಯ ತಿಟ್ಟುಗಳ ಖ್ಯಾತ ಹಾಸ್ಯಗಾರರಾದ ಕಿನ್ನಿಗೋಳಿ ಮುಖ್ಯಪ್ರಾಣ (84) ದಿನಾಂಕ 21 ಜೂನ್ 2025ರಂದು ನಿಧನರಾದರು. ಕಟೀಲು, ಮಂದಾರ್ತಿ, ಸಾಲಿಗ್ರಾಮ, ಪೆರ್ಡೂರು, ಕುಮಟಾ, ಇರಾ, ಕದ್ರಿ, ಸುಬ್ರಹ್ಮಣ್ಯ, ಮಂತ್ರಾಲಯ ಹೀಗೆ ವಿವಿಧ ಮೇಳಗಳಲ್ಲಿ 58 ವರ್ಷಗಳ ಕಾಲ ನಿರಂತರವಾಗಿ ಕಲಾಸೇವೆಗೈದ ಅಪೂರ್ವ, ಪ್ರತಿಭಾವಂತ ಹಾಸ್ಯ ಕಲಾವಿದರಾಗಿದ್ದರು. ರುಕ್ಮಯ್ಯ ಶೆಟ್ಟಿಗಾರ್ ಮತ್ತು ಸೇಸಿ ಶೆಟ್ಟಿಗಾರ್ ಇವರ ಪುತ್ರರಾದ ಮುಖ್ಯಪ್ರಾಣ 1941ರಲ್ಲಿ ಜನಿಸಿದ್ದರು. ಶೀಮಂತೂರಿನಲ್ಲಿ ವಾಸವಾಗಿದ್ದ ಇವರು ಕಿನ್ನಿಗೋಳಿಯ ಗೋಳಜೋರದ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘದಲ್ಲಿ ಹವ್ಯಾಸಿ ವೇಷಧಾರಿಯಾಗಿ ಸೇವೆ ಆರಂಭಿಸಿದ್ದರು.  ಶೀಮಂತೂರು ನಾರಾಯಣ ಶೆಟ್ಟಿ ಇವರ ಗುರುಗಳು. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪ ಇವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡಿದ್ದರು. ‘ಚೆಲುವೆ ಚಿತ್ರಾವತಿ’ಯ ಅಡುಗೂಲಜ್ಜಿ, ‘ಶೂದ್ರ ತಪಸ್ವಿನಿ’ಯ ರಂಗಾಚಾರಿ, ‘ಕಾಂಚನಶ್ರೀ’ಯ ಪ್ರೇತ, ‘ಸ್ವಪ್ನ ಸಾಮ್ರಾಜ್ಯ’ದ ಶೂರಸೇನ, ‘ಕಲಿ ಕ್ರೋಧನ’ದ ಮಡಿವಾಳ ಮೊದಲಾದ ವೇಷಗಳು ಇವರಿಗೆ ಖ್ಯಾತಿ ತಂದುಕೊಟ್ಟ ಪಾತ್ರಗಳು. ರಾಜ್ಯೋತ್ಸವ ಸಹಿತ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರಿಗೆ ಯಕ್ಷಗಾನ…

Read More

ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಗೋವಾ ಘಟಕದ ದ್ವಿತೀಯ ವಾರ್ಷಿಕೋತ್ಸವವು ಗೋವಾ ಪಣಜಿಯಲ್ಲಿರುವ ಇನ್ಸ್ಟಿಟ್ಯೂಟ್ ಮೆನೇಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ದಿನಾಂಕ 22 ಜೂನ್ 2025ರಂದು ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ಇವರ ಅಧ್ಯಕ್ಷತೆಯಲ್ಲಿ, ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಿತು. ಭಾರತದ ಪ್ರವಾಸೋದ್ಯಮ ಬಂದರುಗಳ, ಹಡಗು ಹಾಗೂ ಜಲಮಾರ್ಗಗಳ ರಾಜ್ಯ ಸಚಿವರಾದ ಶ್ರೀಪಾದ ನಾಯಕ್ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋವಾ ಸರಕಾರದ ಮಾಜಿ ಕಾರ್ಯದರ್ಶಿ ಟಿ.ಎನ್. ಧ್ರುವ ಕುಮಾರ್, ಪಟ್ಲ ಫೌಂಡೇಶನ್ ಗೋವಾ ಘಟಕದ ಗೌರವಾಧ್ಯಕ್ಷರಾದ ವಿಜಯೇಂದ್ರ ಶೆಟ್ಟಿ ಮತ್ತಿತರ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿ ದಕ್ಷ್ ಶೆಟ್ಟಿ ಇವರಿಗೆ ವಿದ್ಯಾನಿಧಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು. ನಿತೇಶ್ ಶೆಟ್ಟಿ ಎಕ್ಕಾರು ಇವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More