Author: roovari

ಧಾರವಾಡ : ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು ಧಾರವಾಡ, ಜನತಾ ಶಿಕ್ಷಣ ಸಮಿತಿ ವಿದ್ಯಾಗಿರಿ ಧಾರವಾಡ ಮತ್ತು ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಧಾರವಾಡ ಇವರುಗಳ ಸಹಯೋಗದಲ್ಲಿ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಮೊದಲ ಮಹಾಧಿವೇಶನ -2024’ವು ದಿನಾಂಕ 29-04-2024 ಮತ್ತು 30-04-2024ರಂದು ಧಾರವಾಡ ವಿದ್ಯಾಗಿರಿ ಇಲ್ಲಿರುವ ಜನತಾ ಶಿಕ್ಷಣ ಸಮಿತಿಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 29-04-2024ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರ ಸರ್ವಾಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ಹಿರಿಯ ವಿದ್ವಾಂಸರಾದ ಡಾ. ಬಿ.ವಿ. ಶಿರೂರ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಮತಿ ಹನುಮಾಕ್ಷಿ ಗೋಗಿ ಇವರ ‘ಕಾಳಗಿ ಇತಿಹಾಸ ಮತ್ತು ಸಂಸ್ಕೃತಿ’ ಮತ್ತು ‘ಮುದನೂರು ಮತ್ತು ಯಡ್ರಾಮಿ ಶಾಸನಗಳು’ ಹಾಗೂ ಪ್ರೊ. ಎಸ್.ಸಿ. ಪಾಟೀಲ ಇವರ ‘ದೃಶ್ಯಕಲಾ ಸಂಚಯ’, ‘ವಚನಕಾರ ಹಂಡೆ ಚಂದಿಮರಸನ ಶಾಸನಗಳು’ ಮತ್ತು ಹಂಡೆ ಅರಸರ ಸಾಂಸ್ಕೃತಿಕ ಚರಿತ್ರೆ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಶ್ರೀಮತಿ ಹನುಮಾಕ್ಷಿ ಗೋಗಿ…

Read More

ಶಿವಮೊಗ್ಗ : ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಸಾಹಿತ್ಯ ಹುಣ್ಣಿಮೆಯ 225ನೇ ಕಾರ್ಯಕ್ರಮ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಕ. ಸಾ. ಪ. ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರೊಂದಿಗೆ ನಡೆದ ಸಮಾಲೋಚನೆಯ ನಂತರ ಪೂಜ್ಯರ ಮಾರ್ಗದರ್ಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ‌ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ನಡೆದಿದೆ. ಅಲ್ಲಿ ಆಯ್ಕೆಯಾದವರು ಸೇರಿದಂತೆ ನಾಡಿನಾದ್ಯಂತ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಪಿ. ಯು. ವರೆಗೆ ಓದುತ್ತಿರುವ ಮಕ್ಕಳು ಭಾಗವಹಿಸಲು ಅವಕಾಶವಿದೆ. ಮಕ್ಕಳು ತಾವು ಬರೆದ ಸ್ವಂತ ಕವನ, ಕಥೆ, ಪ್ರಬಂಧಗಳ ಜೊತೆಗೆ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಶಾಲೆ ಮತ್ತು ತಂದೆ, ತಾಯಿಯ ಒಪ್ಪಿಗೆ ಪಡೆದು ಕಳುಹಿಸಲು ಕೋರಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳು,…

Read More

ಕಪ್ಪು ಮನುಜರು ನಾವು ಕಪ್ಪು ಮನುಜರು ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು… ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ ? ಇಲ್ಲ… ! ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು ಬೆಳೆದು ಬಂದಿದೆ. ದಲಿತ ಸಂಘಟನೆಗಳ ಯಾವುದೇ ಹೋರಾಟ, ಕಾರ್ಯಕ್ರಮಗಳಲ್ಲಿ ಈಗಲೂ ಹೋರಾಟದ ಹಾಡಿನೊಂದಿಗೆ ಶುರುವಾಗುವ ಪ್ರತೀತಿ ಮುಂದುವರಿದಿದೆ. ಇಂಥದ್ದೊಂದು ಪರಂಪರೆಯನ್ನು ಆಧರಿಸಿ ಹಾಡುಗಳೊಂದಿಗೆ ದಲಿತ ಚಳುವಳಿ ಬೆಳೆದು ಬಂದ ಕಥನವನ್ನು ರಂಗಭೂಮಿ ಮೂಲಕ ನಿರೂಪಿಸುವ ಪ್ರಯತ್ನ ನಡೆದಿರುವುದು ವರ್ತಮಾನದ ದೃಷ್ಟಿಯಿಂದ ಮಹತ್ವದ್ದು. ಶಂಕರ್ ನಾಗ್ ಪ್ರಶಸ್ತಿ ಪುರಸ್ಕೃತ ಉದಯೋನ್ಮುಖ ರಂಗಕರ್ಮಿ ಕೆ.ಪಿ. ಲಕ್ಷ್ಮಣ್ ವಿನ್ಯಾಸಗೊಳಿಸಿರುವ ’ಪಂಚಮ ಪದ’ ಎಂಬ ನಾಟಕ, ಚಂದ್ರಶೇಖರ್ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಂಡಿದೆ. ದಲಿತ ಚಳುವಳಿಯ ಚರಿತ್ರೆಗೆ ಮಹತ್ವದ ದಾಖಲೆಯಾಗಿರುವ ಪಂಚಮ ಪತ್ರಿಕೆ ಮತ್ತು ಹಾಡು ಎರಡನ್ನೂ ಒಟ್ಟು ತಂದು ‘ಪಂಚಮ ಪದ’ ಆಗಿದೆ. ರಾಜ್ಯದ ಜನ ಚಳುವಳಿಗಳ ಇತಿಹಾಸದಲ್ಲಿ ಎಪ್ಪತ್ತು ಮತ್ತು ಎಂಬತ್ತರ ದಶಕದ ಅವಧಿ ಗುರುತರವಾದುದು.…

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಅವರ ಸಾರಥ್ಯದ ಸಾಹಿತಿ ಪರ ಅಮೃತಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ 40ನೇ ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ರಾವ್ ವಿಟ್ಲ ಇವರ ‘ತಿರುವು’ ಕಥಾ ಸಂಕಲನದ ಲೋಕಾರ್ಪಣೆಯು ದಿನಾಂಕ 29-04-2024ರಂದು ಬೆಳಗ್ಗೆ ಗಂಟೆ 10.30ಕ್ಕೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿರುವುದು. ಈ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತನ ನಿಕಟಪೂರ್ವ ಅಧ್ಯಕ್ಷರು ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ವಹಿಸಲಿದ್ದು, ನಿವೃತ್ತ ಶಿಕ್ಷಕರು, ಸಾಹಿತಿ, ವಿಮರ್ಶಕರಾದ ಶ್ರೀ ಕೆ. ರವೀಂದ್ರ ರೈ ಇವರು ಕೃತಿ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಸುರತ್ಕಲ್ಲಿನ ಅಗರಿ ಎಂಟರ್ ಪ್ರೈಸೆಸ್ ಇದರ ಮುಖ್ಯಸ್ಥರಾದ ಅಗರಿ ರಾಘವೇಂದ್ರ ರಾವ್ ಇವರು ಭಾಗವಹಿಸಲಿದ್ದು, ಡಾ. ಅರುಣಾ ನಾಗರಾಜ್, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಲೇಖಕಿ ಶ್ರೀಮತಿ ವೀಣಾ ರಾವ್ ವಿಟ್ಲ, ಕವಿಯತ್ರಿ ಮತ್ತು…

Read More

ಕರ್ನಾಟಕದಲ್ಲಿ ಪತ್ರಿಕಾ ಮಾಧ್ಯಮಕ್ಕೆ 170 ವರ್ಷಗಳಿಗೂ ಮಿಕ್ಕ ಇತಿಹಾಸವಿದೆ. ಮಾಧ್ಯಮ ಶಿಕ್ಷಣಕ್ಕೆ 60ಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿದೆ. ಆರಂಭದ ಅಸ್ತಿತ್ವದ ಪ್ರಶ್ನೆಗಳಿಂದ ಅದೆಷ್ಟೋ ದೂರ ಸಾಗಿರುವ ಪತ್ರಿಕೋದ್ಯಮವು ಈಗ ಮುಖ್ಯವಾಹಿನಿಯಲ್ಲಿ ಬಂದು ನಿಂತಿದ್ದು ಕಾಲೇಜುಗಳಲ್ಲಿ ಅಧ್ಯಯನದ ಭಾಗವಾಗಿದೆ. ಕನ್ನಡ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡು ಬಂದವರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಪರಾಮರ್ಶನ ಗ್ರಂಥಗಳು ಬೆಳೆಯದಿದ್ದರೂ ಕತ್ತಲಲ್ಲಿ ದಾರಿತೋರುವ ಪಂಜಿನಂತೆ ಅಲ್ಲಲ್ಲಿ ಪ್ರಯತ್ನಗಳು ನಡೆದಿವೆ. ಆಕಾಶವಾಣಿ, ದೂರದರ್ಶನ ಮತ್ತು ಇತರ ಆಧುನಿಕ ಸಂವಹನ ಮಾಧ್ಯಮಗಳ ನಡುವೆ ಜಗತ್ತಿನ ಅತ್ಯಂತ ಸೂಕ್ಷ್ಮವೂ, ಪರಿಣಾಮಕಾರಿಯೂ, ಸಾಂಸ್ಕೃತಿಕವೂ, ಸಾಮಾಜಿಕವೂ ಆದ ಅರಿವನ್ನು ಪ್ರಸಾರ ಮಾಡುವ ಮೂಲಕ ಜ್ಞಾನಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ಪತ್ರಿಕಾ ಬರವಣಿಗೆಯ ಬಗ್ಗೆ ವಿಶೇಷ ಧ್ಯಾನ-ಅಧ್ಯಯನಗಳು ಅಗತ್ಯವಾಗಿವೆ. ಸಂವಹನ ಮಾಧ್ಯಮಗಳು ಉಂಟು ಮಾಡುತ್ತಿರುವ ಮೌಲ್ಯ ಪ್ರಸಾರವು ಪ್ರಪಂಚದ ವಿವಿಧ ಸಮೂಹಗಳ ವಿಕಾಸದಲ್ಲಿ ವಹಿಸುವ ಪಾತ್ರದ ಕುರಿತು ಚಾರಿತ್ರಿಕವಾಗಿ, ಸಾಮಾಜಿಕವಾಗಿ ವಿಶ್ಲೇಷಿಸುವ ತುರ್ತು ಹೆಚ್ಚಾಗಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಪಡೆದು ಅಲ್ಲಿನ ಸಮಗ್ರ ಜ್ಞಾನವನ್ನು…

Read More

ಪುತ್ತೂರು : ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಕಲಾವಿದ ದಂಪತಿಗಳಾದ ವಿದುಷಿ ಸ್ನೇಹಾ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾ‌ರ್ ಪ್ರಸ್ತುತಿಯ ಒಂದು ದಿನದ ‘ನೃತ್ಯ ಕಾರ್ಯಾಗಾರ’ವು ದಿನಾಂಕ 21-04-2024ರಂದು ಪುತ್ತೂರಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ. ಸಾ. ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ನಾಯಕ್ “ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶಾಸ್ತ್ರೀಯ ನೃತ್ಯಗಳ ಕೊಡುಗೆ ಅಪಾರ. ಶಾಸ್ತ್ರೀಯ ಪ್ರಾಕಾರಗಳಲ್ಲಿ ಭರತನಾಟ್ಯಕ್ಕೆ ತನ್ನದೇ ವಿಶಿಷ್ಟ ಸ್ಥಾನ ಇದೆ. ಅಂತಹ ಭರತನಾಟ್ಯವನ್ನು ಯುವ ಪೀಳಿಗೆ ಮುಂದುವರಿಸಬೇಕು. ಶಾಸ್ತ್ರೀಯ ನೃತ್ಯಗಳ ಉಳಿವಿಗೆ ಗುರುಗಳ ಶ್ರಮದಷ್ಟೇ ಶಿಷ್ಯರೂ ಕೂಡ ಅದನ್ನು ಅನುಸರಿಸುವುದರತ್ತ ಗಮನ ಹರಿಸಬೇಕು. ಸಿನಿಮಾ ಮತ್ತಿತರ ಮಾಧ್ಯಮಗಳಿಂದ ಸಿಗುವ ಕ್ಷಣಿಕ ಆನಂದದತ್ತ ವಾಲದೆ, ಕಲೆಯನ್ನು ಬೆಳೆಸಲು ಕಟಿಬದ್ದರಾಗಬೇಕು. ಅದಕ್ಕಾಗಿ ಇಂತಹ ಕಾರ್ಯಾಗಾರ ನಡೆಯುತ್ತಲೇ ಇರಲಿ.” ಎಂದು ಹಾರೈಸಿದರು. ವಿದುಷಿ ಸ್ನೇಹಾ…

Read More

ಉಡುಪಿ : ಉಡುಪಿ ಜಿಲ್ಲಾ ಹೊಟೇಲ್ ಮಾಲಕಾರ ಸಹಕಾರ ಸಂಘ, ರಂಗಭೂಮಿ ಉಡುಪಿ ಹಾಗೂ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಕರ್ನಾಟಕ ಯಕ್ಷಗಾನ ಅಕಾಡಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕಲೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಇವರು ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿದ್ದ ದಿನಗಳಲ್ಲಿ ತಲ್ಲೂರು ಶಿವರಾಮ ಶೆಟ್ಟರು “ಯಕ್ಷಗಾನ ಕಲಾವಿದರಲ್ಲ”ಎನ್ನುವ ಕೊಂಕು ಮಾತು ಕೇಳಿ ಬಂದಾಗ, ಅದನ್ನು ಸವಾಲಾಗಿ ಸ್ವೀಕರಿಸಿ, ತನ್ನ 60ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಖ್ಯಾತ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಅಭ್ಯಾಸ ಮಾಡಿ ಕಲಿಯುವಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಮತ್ತು ಈವರೆಗೆ 400 ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಭಿಮಾನಿಗಳ ಅತೀವ ಮೆಚ್ಚುಗೆಗೆ ಪಾತ್ರರಾದದ್ದು ಇವರ ಮಹತ್ತರ ಸಾಧನೆ ಎಂದರೆ ತಪ್ಪಾಗಲಾರದು. ಕಳೆದ 16 ವರ್ಷಗಳಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಚಿಟ್ಟಾಣಿ ರಾಮಚಂದ್ರ ಹೆಗೆಡೆ ಯಕ್ಷಗಾನ ಸಪ್ತಾಹ, ಕೆ.ಗೋವಿಂದ ಭಟ್ಟ ಯಕ್ಷಗಾನ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ,…

Read More

ಯಕ್ಷಗಾನ ರಂಗಭೂಮಿಯು ಹಿಂದೆ ಕಂಡಿರದ-ಮುಂದೆ ಕಂಡೀತೆಂಬ ಭರವಸೆಯನ್ನು ತಳೆಯಲಾಗದ ಪ್ರತಿಭೆ, ಪ್ರಯತ್ನ ಹಾಗೂ ಪ್ರಯೋಗಗಳ ಮುಪ್ಪರಿಕೆಯಿಂದಾಗಿ ಸ್ವಂತಿಕೆಯ ಅನನ್ಯತೆಯಿಂದಾಗಿ ಇತಿಹಾಸವಾದ ವಿರಳಾತಿ ವಿರಳರಲ್ಲಿ ಸುಬ್ರಹ್ಮಣ್ಯ ಧಾರೇಶ್ವರರನ್ನು ಹೆಸರಿಸದಿದ್ದಲ್ಲಿ ನಿಜಕ್ಕೂ ಅದು ಸಾಂಸ್ಕೃತಿಕವಾದ ಅಪಚಾರವೇ ಹೌದು. ಯಕ್ಷಗಾನದಲ್ಲಿ ಸರ್ವಕಾಲೀನವಾಗಿ ಭಾಗವತನೇ ಪ್ರಧಾನವೆಂಬುದು ಸತ್ಯವೇ ಆಗಿದ್ದರೂ, ಅದನ್ನು ಶತಸತ್ಯವನ್ನಾಗಿಸಿದವರು ರಸರಾಗ ಚಕ್ರವರ್ತಿ ಎನಿಸಿದ್ದ ಕೀರ್ತಿಶೇಷ ಜಿ.ಆರ್. ಕಾಳಿಂಗ ನಾವುಡರು. ಅವರ ಸಮಕಾಲೀನರಾದ ಧಾರೇಶ್ವರರು ಸಹ ತಮ್ಮ ವೈಖರಿಯಿಂದ ಭಾಗವತನ ಸ್ಥಾನಮಾನದ ಘನತೆಯನ್ನು ಎತ್ತರಿಸಿದವರು. ಭಾಗವತನೇ ಅಕ್ಷರಶ: ಮೊದಲನೇ ವೇಷದಾರಿ ಎಂಬ ಶಾಸ್ತ್ರೀಯವಾದ ಪರಿಕಲ್ಪನೆಯೊಂದಿಗೆ ರಂಗದಲ್ಲಿ ಹಾಸ್ಯಗಾರಿಕೆಗೆ ಜೀವವನ್ನು ತುಂಬುವಲ್ಲಿ ಸಹ ವಿದೂಷಕರಾಗಿಯೂ ಇದ್ದವರು. ಧಾರೇಶ್ವರರ ಯಕ್ಷಯಾನದಲ್ಲಿ ಅವರಿಗೆ ಕೌಟುಂಬಿಕವಾದ ಯಕ್ಷಗಾನದ ಪರಂಪರೆಯೇನೂ ಇದ್ದಂತಿಲ್ಲ. ಅವರು ಮೂಲತಃ ನಾಟಕ ರಂಗಭೂಮಿಯ ನಂಟಿನೊಂದಿಗೆ ಯಕ್ಷಗಾನಕ್ಕೆ ಆಕಸ್ಮಿಕವಾಗಿ ಬಂದವರು. “ನನ್ನ ಬದುಕೇ ಉಪ್ಪೂರರು” ಎಂದು ಎದೆದುಂಬಿ ಉದ್ಗರಿಸುವ ಅವರಿಗೆ ಮಹಾನ್ ಗುರುವಿನ ಪಾಠ, ಮದ್ದಳೆಯ ಮಾಂತ್ರಿಕ ದುರ್ಗಪ್ಪ ಗುಡಿಗಾರರ ಒಡನಾಟ ಹಾಗೂ ಸಹಪಾಠಿಯಾಗಿದ್ದ ನಾವುಡರ ಪ್ರಭಾವದೊಂದಿಗೆಯೇ ನಟ ಸಾಮ್ರಾಟ…

Read More

ಕೊಪ್ಪಳ : 10ನೇ ಮೇ ಸಾಹಿತ್ಯ ಮೇಳವು ದಿನಾಂಕ 25-05-2024 ಮತ್ತು 26-05-2024ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಪಾಲ್ಗೊಳ್ಳುವವರು ಮುಂಚೆಯೇ ನೋಂದಾಯಿಸಿಕೊಳ್ಳಿ. ಮುಂಚೆ ನೋಂದಣಿ ಮಾಡಿಕೊಂಡವರಿಗೆ ಸರಳ ವಸತಿ ಕಲ್ಪಿಸಲಾಗುವುದು. ಬರುವುದು ಖಚಿತವಿದ್ದವರು ಮಾತ್ರ ನೋಂದಾಯಿಸಿಕೊಳ್ಳಿ. ಸಂಪರ್ಕಕ್ಕಾಗಿ : ಅಲ್ಲಮ ಪ್ರಭು ಬೆಟದ್ದೂರ : ಮೊ +919844049205 ಸುರೇಂದ್ರ ಕಾಂಬಳೆ : ಮೊ.9036037888 ಶಿರಾಜ್ ಬಿಸರಳ್ಳಿ : ಮೊ.9880257488 ರಾಜಾಭಕ್ಷಿ : ಮೊ.9448183708 ಕಾಶಪ್ಪ ಚಲವಾದಿ : ಮೊ.8867108437 ಡಿ. ಎಂ. ಬಡಿಗೇರ : ಮೊ.8073045972 ಜೀವನಸಾಬ ವಾಲಿಕಾರ : ಮೊ.8105052820 ಶೀಲಾ ಹಲಕುರ್ಕಿ : ಮೊ.9844904434 ಮಹೇಶ ಬಳ್ಳಾರಿ : ಮೊ.9008996624 ಶರಣಪ್ಪ ಬಾಚಲಾಪುರ : ಮೊ.9448025074 ಮಹಾಂತೇಶ ಮಲ್ಲನಗೌಡರ : ಮೊ.94486 34014 ಟಿ ರತ್ನಾಕರ : ಮೊ.9482238199 ಶರಣು ಶೆಟ್ಟರ : ಮೊ.81978 08300 ಲಕ್ಷ್ಮಣ ಪಿರಗಾರ : ಮೊ.9663974163 ಮಹಾಂತೇಶ ಕೊತಬಾಳ : ಮೊ.8762700200 ಮುತ್ತು ಬಿಳೆಯಲಿ : ಮೊ.9980428441 ಬಿ. ಶ್ರೀನಿವಾಸ : ಮೊ.9916332273 ಡಾ.…

Read More

ಕೊಪ್ಪಳ : ಮೇ ಸಾಹಿತ್ಯ ಮೇಳ ಈ ವರ್ಷ ದಿನಾಂಕ 25-05 -2024 ಮತ್ತು 26-05-2024ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಅದಕ್ಕೆ ಪೂರಕವಾಗಿ ‘ಕಲಾ ಶಿಬಿರ’ವು ಎರಡು ದಿನಗಳ ಕಾಲ ನಡೆಯಲಿದ್ದು, ಶಿಬಿರದಲ್ಲಿ ಭಾಗವಹಿಸಲು 20 ಜನ ಪ್ರಬುದ್ಧ ಕಲಾವಿದರಿಗೆ ಅವಕಾಶವಿದೆ. ಪ್ರಸಿದ್ಧ ಚಿತ್ರ ಕಲಾವಿದರಾದ ಬಿ. ಮಾರುತಿ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಕೊಪ್ಪಳ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಅಥವಾ ರಾಜ್ಯದ ಆಸಕ್ತ ಚಿತ್ರ ಕಲಾವಿದರು ತಮ್ಮ ಫೋನ್ ನಂಬರ್ ಹಾಗೂ ವಿಳಾಸವನ್ನು ತಿಳಿಸಿ ಭಾಗವಹಿಸಬಹುದು. ಮಹಿಳಾ ಚಿತ್ರಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಗೆ ಅವಕಾಶವಿದೆ. ಭಾಗವಹಿಸುವ ಕಲಾವಿದರಿಗೆ ಎರಡು ದಿನಗಳ ಕಾಲ ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿ. ಬಿ. ರೆಡ್ಡರ್ 94807 80174, ಲಕ್ಷ್ಮಣ ಪೀರಗಾರ 9663974163 ಇವರನ್ನು ಸಂಪರ್ಕಿಸಬಹುದು.

Read More