Author: roovari

ಮಂಗಳೂರು : ಎರಡು ವರ್ಷಗಳ ಹಿಂದೆ ಅಗಲಿದ ಯುವ ರಂಗಕರ್ಮಿ ಮತ್ತು ನಂದಗೋಕುಲದ ವ್ಯವಸ್ಥಾಪಕ ಕನಸು ಕಾರ್ತಿಕ್ ನೆನಪಿನಲ್ಲಿ ಅರೆಹೊಳೆ ಪ್ರತಿಷ್ಠಾನ ನೀಡುವ ‘ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ’ಕ್ಕೆ ನಿರ್ದೇಶಕ ಹಾಗೂ ನಟರಾದ ಭುವನ್ ಮಣಿಪಾಲ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ ಐದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಶೀಘ್ರದಲ್ಲೇ ನಡೆಯಲಿರುವ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ. ಭುವನ್ ಮಣಿಪಾಲ್ : ‘ನೀನಾಸಂ’ ಪದವೀಧರರಾದ ಭುವನ್ ಮಣಿಪಾಲ್ ಇವರು ರಂಗ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ರಂಗ ಅಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳಿಗೆ ರಂಗ ನಟನೆಯ ಅಭ್ಯಾಸ ನೀಡಿದ್ದಾರೆ. ಸಂಗಮ ಕಲಾವಿದರು (ರಿ.) ಮಣಿಪಾಲ, ರಥಬೀದಿ ಗೆಳೆಯರು (ರಿ.) ಉಡುಪಿ, ಚಿನ್ನಾರಿ ನಾಟಕ ತಂಡ ಮಣಿಪಾಲ, ಕುಸುಮ ಸಾರಂಗ ಸುಬ್ರಹ್ಮಣ್ಯ, ಸುರಭಿ ಬೈಂದೂರು, ನೃತ್ಯ ನಿಕೇತನ ಕೊಡವೂರು ಉಡುಪಿ ಮುಂತಾದ ಸಂಸ್ಥೆಗಳಲ್ಲಿ ನಟರಾಗಿ, ರಂಗ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದ…

Read More

ಮಂಗಳೂರು : ನೃತ್ಯಗುರು ಕಮಲಾ ಭಟ್ ಇವರ ಶಿಷ್ಯ ವರ್ಗದವರು ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರಂದು ಉರ್ವದ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕಟೀಲಿನ ವೇದಮೂರ್ತಿ ಕಮಲಾದೇವಿ ಪ್ರಸಾದ್ ಆಸ್ರಣ್ಣ “ನಾಲ್ಕು ದಶಕದ ಹಿಂದೆ ನಗರದಲ್ಲಿ ನಾಟ್ಯದ ಮೂಲಕ ಕಲೆಯ ದೀಪ ಬೆಳಗಿಸಿ ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿ, ಕಲಾ ಬದುಕಿನಲ್ಲಿ ಸಾರ್ಥಕ್ಯ ಕಂಡು ಇದೀಗ ದೇವರ ಪಾದ ಸೇರಿದ ಗುರು ಕಮಲ ಭಟ್ ಸದಾ ಸ್ಮರಣೀಯರು. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಇವೆರಡುಗಳ ಮಧ್ಯೆ ಬದುಕನ್ನು ಕಟ್ಟಿಕೊಂಡು ಕಲಾಮಾತೆಯ ಸೇವೆಯನ್ನು ಮಾಡುತ್ತ, ಶ್ರೀ ಕ್ಷೇತ್ರ ಕಟೀಲಿನ ಪರಮ ಭಕ್ತೆ ಕಮಲ ಭಟ್ ಅವರಿಗೆ ಜಗನ್ಮಾತೆಯು ಸದ್ಗತಿ ನೀಡಲಿ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಅವರ ಶಿಷ್ಯರು ಮುನ್ನಡೆಯಲು ದೇವರ ಆಶೀರ್ವಾದ ಸದಾ ಇರಲಿ” ಎಂದು ನುಡಿದರು. ಪ್ರದೀಪ್ ಕುಮಾರ್’ ಕಲ್ಕೂರ ಮಾತನಾಡಿ, “ಕಲಾಸೇವೆ ತನ್ನ…

Read More

ಬೆಂಗಳೂರು: ‘ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ’ವು ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗಾಗಿ ಲೇಖಕರು ಮತ್ತು ಪ್ರಕಾಶಕರಿಂದ ಕಾದಂಬರಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ರೂಪಾಯಿ ಇಪ್ಪತೈದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಾದಂಬರಿಯು 2024ರಲ್ಲಿ ಪ್ರಕಟವಾಗಿರಬೇಕು. ಕಾದಂಬರಿಯ ಮೂರು ಪ್ರತಿಗಳನ್ನು ದಿನಾಂಕ 30 ಜನವರಿ 2025ರ ಒಳಗಾಗಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎಂ. ಹನೀಫ್ ತಿಳಿಸಿದ್ದಾರೆ. ಪುಸ್ತಕ ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ, ನಂ. 118, ‘ಹೊಂಬೆಳಕು’, 5ನೇ ಕ್ರಾಸ್, 1ನೇ ಬ್ಲಾಕ್, ಎಚ್.ಎಂ.ಟಿ . ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು 560073. ಹೆಚ್ಚಿನ ಮಾಹಿತಿಗಾಗಿ : 9686073837, 7760350244

Read More

ರಂಗಭೂಮಿಯ ಸೌಂದರ್ಯ ಇರುವುದು ಅದರೊಳಗಿನ ಭಾವಾಭಿವ್ಯಕ್ತಿ ಹಾಗೂ ಆಂಗಿಕ ಅಭಿನಯ ಚತುರತೆಯ ವೈವಿಧ್ಯತೆಗಳಲ್ಲಿ. ಈ ಕಲಾಪ್ರಕಾರದ ಅಂತಃಸತ್ವ ಅಡಗಿರುವುದು ಪ್ರಯೋಗಶೀಲತೆಯಲ್ಲಿ. ಈ ಮೂರೂ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಲೇ ಬೆಳೆಯುವ ರಂಗಭೂಮಿಗೆ ಚಲನಶೀಲತೆಯನ್ನು ಕಾಪಾಡಿಕೊಂಡು ಬರಲು ನೆರವಾಗುವುದು ರಂಗ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಹೊಸ ಹೊಸ ಪ್ರಯತ್ನಗಳು. ಕನ್ನಡ ರಂಗಭೂಮಿ ತನ್ನ ಈ ವೈವಿಧ್ಯತೆಗಳಿಂದಲೇ ಇಂದಿಗೂ ಸಹ ಸಾಂಸ್ಕೃತಿಕ ಜಗತ್ತಿನಲ್ಲಿ ಪ್ರಶಸ್ತ ಸ್ಥಾನವನ್ನು ಉಳಿಸಿಕೊಂಡಿದೆ, ಬೆಳೆಸುತ್ತಲೂ ಇದೆ. ಹವ್ಯಾಸಿ ರಂಗಭೂಮಿ ಉದಯಿಸಿದ ನಂತರದಲ್ಲಿ ರಂಗಕಲೆ ಎನ್ನುವುದು ತನ್ನ ಸಾಂಸ್ಥಿಕ ನೆಲೆಯಿಂದ ಸಾಂಘಿಕ ನೆಲೆಗೆ ರೂಪಾಂತರಗೊಂಡಿರುವುದು ಕಳೆದ ಐದಾರು ದಶಕಗಳಲ್ಲಿ ಅಸಂಖ್ಯಾತ ಕಲಾವಿದರನ್ನು ಹುಟ್ಟುಹಾಕಿದೆ. ಕನ್ನಡದ ಹವ್ಯಾಸಿ ರಂಗಭೂಮಿ ತನ್ನೊಳಗೆ ಸೃಜಿಸಿದ ಕಲಾರಾಧಕರ-ಕಲಾವಿದರ ಒಂದು ತಲೆಮಾರು ಇಂದು ರಂಗಭೂಮಿಯನ್ನು ವಿಭಿನ್ನ ಆಯಾಮಗಳಲ್ಲಿ, ವಿವಿಧ ಮಜಲುಗಳಲ್ಲಿ ಶ್ರೀಸಾಮಾನ್ಯನ ಬಳಿಗೆ ಕೊಂಡೊಯ್ದಿದೆ. ಹೊರ ಸಮಾಜದ ಒಂದು ಪ್ರತಿಬಿಂಬವನ್ನು ರಂಗದ ಮೇಲೆ ಕಾಣುವ ಪ್ರಯತ್ನದಲ್ಲಿ ಹಲವು ರಂಗತಂಡಗಳು ತಮ್ಮದೇ ಆದ ವೈವಿಧ್ಯತೆಗಳೊಂದಿಗೆ ಚಲನಶೀಲವಾಗಿವೆ. ತಾನು ಪ್ರತಿನಿಧಿಸುವ ಸಮಾಜಕ್ಕೆ ಅಗತ್ಯವಾದ…

Read More

ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಇದರ ವತಿಯಿಂದ ‘ರಂಗ ಸಂಕ್ರಮಣ ನಾಟಕೋತ್ಸವ’ವನ್ನು ದಿನಾಂಕ 11 ಜನವರಿ 2025ರಿಂದ 14 ಜನವರಿ 2025ರವರೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ದಿನಾಂಕ 11 ಜನವರಿ 2025ರಂದು ಧಾರವಾಡದ ‘ಅಭಿನಯ ಭಾರತಿ’ ತಂಡದ ಏಕವ್ಯಕ್ತಿ ಪ್ರದರ್ಶನ ಶ್ರೀಪತಿ ಮಂಜನಬೈಲು ನಿರ್ದೇಶನದಲ್ಲಿ ‘ಉರಿಯ ಉಯ್ಯಾಲೆ’ ನಾಟಕವನ್ನು ಜ್ಯೋತಿ ದೀಕ್ಷಿತ ಪುರಾಣಿಕ ಇವರು ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ 12 ಜನವರಿ 2025ರಂದು ಬೆಳಗಾವಿಯ ‘ರಂಗಸಂಪದ’ ತಂಡದಿಂದ ವೈಭವ ಲೋಕೂರ ಇವರ ನಿರ್ದೇಶನದಲ್ಲಿ ‘ಡಿಯರ್ ಅಜ್ಜೋ’ ಎಂಬ ನಾಟಕವನ್ನು ಅರವಿಂದ ಕುಲಕರ್ಣಿ ಮತ್ತು ಸ್ನೇಹ ಕುಲಕರ್ಣಿ ಇವರುಗಳು ಅಭಿನಯಿಸಲಿದ್ದಾರೆ. ದಿನಾಂಕ 13 ಜನವರಿ 2025ರಂದು ಮಳವಳ್ಳಿಯ ‘ರಂಗಬಂಡಿ’ ತಂಡದ ಏಕವ್ಯಕ್ತಿ ಪ್ರದರ್ಶನ ಮಧು ಮಳವಳ್ಳಿ ಇವರ ನಿರ್ದೇಶನದಲ್ಲಿ ‘ಮಧುರ ಮಂಡೋಡರಿ’ ನಾಟಕವನ್ನು ವನೀತಾ ರಾಜೇಶ ಇವರು ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ 14 ಜನವರಿ 2025ರಂದು ಧಾರವಾಡದ ಆಟಮಾಟ ತಂಡದವರು ಮಹಾದೇವ ಹಡಪದ ಇವರ ನಿರ್ದೇಶನದಲ್ಲಿ ಬಸವರಾಜ…

Read More

ಉಡುಪಿ : ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ಮನ್ವಿತಾ ಎಸ್. ಇವರು ಈ ಬಾರಿಯ ಉಡುಪಿ ಜಿಲ್ಲಾ 10ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಸೂರ್ಯಕಾಂತ ಬಿ. ಬಸ್ರೂರು ಹಾಗೂ ಶ್ರೀಮತಿ ಲತಾ ದಂಪತಿಗಳ ಹೆಮ್ಮೆಯ ಪುತ್ರಿಯಾದ ಮನ್ವಿತಾ ಎಸ್. ಚಿಕ್ಕ ವಯಸ್ಸಿನಲ್ಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದು, ತನ್ನ 4ನೇ ವಯಸ್ಸಿಗೆ ಯಕ್ಷಗಾನ ಗೆಜ್ಜೆ ಕಟ್ಟಿ ವೇದಿಕೆ ಏರಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಭರತನಾಟ್ಯದಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸೀನಿಯರ್ ವಿಭಾಗದಲ್ಲಿ ತರಬೇತಿ ಮುಂದುವರಿಸಿದ್ದಾರೆ. ಭಾಷಣ ಮತ್ತು ಕಾರ್ಯಕ್ರಮ ನಿರೂಪಣೆ ಈಕೆಯ ಪ್ರೀತಿಯ ಕ್ಷೇತ್ರವಾಗಿದ್ದು, ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡು ಜಿಲ್ಲಾ ಮಟ್ಟಕ್ಕೂ ಆಯ್ಕೆಯಾಗಿತ್ತಾರೆ. ಅಲ್ಲದೇ 2023-24ನೇ ಸಾಲಿನ ಮಕ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ನಿರೂಪಣೆಗೆ ಆಯ್ಕೆಯಾಗಿ ಉತ್ತಮ ನಿರೂಪಣೆಯಿಂದ ಜನಮನ ಗೆದ್ದಿರುವ ಇವರು ಕುಂದಾಪುರ ತಾಲೂಕು 9ನೇ ಕನ್ನಡ…

Read More

ದಾವಣಗೆರೆ : ‘ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರ’ ಹಾಗೂ ‘ಕರ್ನಾಟಕ ನಾಟಕ ಅಕಾಡೆಮಿ’ಯ ಸಹಯೋಗದೊಂದಿಗೆ ಐದು ದಿನಗಳ ವೃತ್ತಿ ನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಶಿಬಿರದ ನಂತರ ತಿಂಗಳಲ್ಲಿ ಶಿಬಿರಾರ್ಥಿಗಳು ರಚಿಸಿದ ಆಯ್ಕೆಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಸ್ಪಷ್ಟವಾಗಿ ಕನ್ನಡ ಓದಲು, ಬರೆಯಲು ಬರುವ ಮತ್ತು ರಂಗಸಾಹಿತ್ಯ ಕುರಿತು ಪ್ರಾಥಮಿಕ ಜ್ಞಾನವುಳ್ಳ 18 ವರ್ಷ ಮೇಲ್ಪಟ್ಟವರು ಸ್ವ-ಪರಿಚಯದೊಂದಿಗೆ ದಿನಾಂಕ 20 ಜನವರಿ 2025ರೊಳಗೆ ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಮೊದಲನೇ ಮಹಡಿ, ಕೊಠಡಿ ಸಂಖ್ಯೆ 38ಎ, ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ, ದಾವಣಗೆರೆ ದೂರವಾಣಿ ಸಂಖ್ಯೆ :08192- 200635, 9341010712 ಸಂಪರ್ಕಿಸಲು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.

Read More

ಮುಡಿಪು: ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 19 ಡಿಸೆಂಬರ್ 2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿ. ವಿ. ಕುಲಸಚಿವ ರಾಜು ಮೊಗವೀರ ಮಾತನಾಡಿ “ಹಿಂದೆ ಪುರಾಣ ಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಯಕ್ಷಗಾನವು ಮಹತ್ತರವಾದ ಪಾತ್ರ ವಹಿಸಿತ್ತು. ಯಕ್ಷಗಾನವು ಕುಣಿತ, ಸಂಗೀತ, ಬಣ್ಣಗಾರಿಕೆ, ವೇಷಭೂಷಣ, ಅಭಿನಯ ಸೇರಿದಂತೆ ಎಲ್ಲವನ್ನೂ ಹೊಂದಿರುವ ಪರಿಪೂರ್ಣ ಕಲೆಯಾಗಿ ರೂಪುಗೊಂಡಿದೆ. ಅನೇಕ ಹಿರಿಯ ಕಲಾವಿದರು ತಮ್ಮ ಅನುಭವಗಳ ಮೂಲಕ ಯಕ್ಷಗಾನವನ್ನು ಬೆಳೆಸಿದ್ದಾರೆ. ಯುವ ಕಲಾವಿದರು ಅಂತಹ ಅನುಭವಿ ಕಲಾವಿದರ ಜೊತೆಗೆ ಒಡನಾಟ ಬೆಳೆಸಿಕೊಂಡಾಗ, ಪರಂಪರೆ ಮತ್ತು ವರ್ತಮಾನದ ಅನುಸಂಧಾನ ಸಾಧ್ಯ. ಯಕ್ಷಗಾನದಲ್ಲಿ ಸುಂದರ ಕನ್ನಡ ಇದೆ. ಕನ್ನಡ ಭಾಷೆಯ ಬೆಳವಣಿಗೆಗೂ ಯಕ್ಷಗಾನದ ಪ್ರಭಾವ ಮಹತ್ತರವಾದುದು. ಇಂದಿನ ಆಧುನಿಕತೆಯಲ್ಲಿ ಯಕ್ಷಗಾನದ ಪರಂಪರೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮಬದ್ಧವಾಗಿ ಮುಂದುವರಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಂಗಳೂರು…

Read More

ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿಯ ತಾಳೇನಹಳ್ಳಿಯಲ್ಲಿ ಜನ್ಮ ತಾಳಿದ ಅಪರೂಪದ ಸಾಹಿತಿ ಕೆ. ಎಸ್. ಧರಾಣೇಂದ್ರಯ್ಯ. 1903 ನೇ ಇಸವಿ ಡಿಸೆಂಬರ್ 31ರಂದು ಇವರ ಜನನವಾಯಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದ ಇವರು ಪಂಪ, ರನ್ನ ಮತ್ತು ಜನ್ನರ ಕೃತಿಗಳ ಪದ್ಯಗಳನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಇವರ ವೃತ್ತಿಜೀವನ ಆರಂಭವಾದದ್ದು ಶಿಕ್ಷಣ ಇಲಾಖೆಯಿಂದ. ಕರ್ನಾಟಕ ಸರಕಾರದ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದು. ಆಗಲೇ ಸಾಹಿತ್ಯ ಕೃಷಿಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇಧಾವಿ ಇವರು. ಪಂಪ ಆದಿಪುರಾಣ, ಭಾರತ ವಸ್ತು ಪ್ರದರ್ಶನ, ಪದ್ಮಾವತಿ ಮಹಾತ್ಮೆ, ಆಡಳಿತ ಶಬ್ದಗಳ ಕನ್ನಡ ಕೋಶ, ಭಗವಾನ್ ಮಹಾವೀರ, ಭಕ್ತಿ ಕುಸುಮಾಂಜಲಿ, ಇತ್ಯಾದಿ ಅನರ್ಘ್ಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು. ಕನ್ನಡ – ಕನ್ನಡ ಕೋಶ, ಕನ್ನಡ ವಿಶ್ವಕೋಶ, ಕುಮಾರವ್ಯಾಸ ಭಾರತ ಮುಂತಾದ ಸಾಹಿತ್ಯ ಯೋಜನೆಗಳನ್ನು ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದವರು. “ಜೈನ ಶಾಸ್ತ್ರ…

Read More

ಉಡುಪಿ ಜಿಲ್ಲೆಯ ಕಡೆಕಾರಿನ ವಿಜಯ ಶೆಟ್ಟಿ ಹಾಗೂ ಜಯಂತಿ ಶೆಟ್ಟಿ ದಂಪತಿಯರ ಮಗಳಾಗಿ 12.12.1994 ರಂದು ಚೈತ್ರ ಅವರ ಜನನ. ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸ್ ಪ್ರಾಕ್ಟಿಶನರ್ ಕ್ರಿಟಿಕಲ್ ಕೇರ್ MAHE, ಮಣಿಪಾಲದಲ್ಲಿ ಕಲಿತು ಪ್ರಸ್ತುತ ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲದಲ್ಲಿ ನರ್ಸ್ ಪ್ರಾಕ್ಟಿಶನರ್ ಇನ್ ಕ್ರಿಟಿಕಲ್ ಕೇರ್ ನಲ್ಲಿ ವೃತ್ತಿಯನ್ನು ಮಾಡುತ್ತಿದ್ದಾರೆ. ಯಕ್ಷಗಾನ ಗುರುಗಳು:-  ಶ್ರೀ ರಾಜೀವ್ ತೋನ್ಸೆ (ಮಟ್ಟು)  ಶ್ರೀ ಕೆ. ಜೆ. ಗಣೇಶ್. ಯಕ್ಷಗಾನಕ್ಕೆ ಕ್ಷೇತ್ರಕ್ಕೆ ಬರಲು ಪ್ರೇರಣೆ:- ಅಷ್ಟಮಿಯಂದು ಬರುವ ರಕ್ಕಸ ವೇಷ, ಯಕ್ಷಗಾನದ ವೇಷ ಭೂಷಣ ನೋಡಿ ಹೆದರಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಆದರೆ ನೃತ್ಯ, ನಾಟಕ ರಂಗದಲ್ಲಿ ಬಹು ಆಸಕ್ತಿ ಇತ್ತು. ಅದರಲ್ಲಿ ಮುಂದುವರಿಯಬೇಕು ಎಂಬ ಕನಸೂ ಇತ್ತು. ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ನಾನು ಕಲಿಯುತ್ತಿದ್ದ ಸರಕಾರಿ ಪ್ರಾಥಮಿಕ ಶಾಲೆ ಕಡೆಕಾರ್ ನ ಹೆಣ್ಣು ಮಕ್ಕಳಿಗೆ, ಪಡುಕೆರೆಯಿಂದ ವರ್ಗಾವಣೆಯಾಗಿ ಕಡೆಕಾರಿಗೆ ಬಂದ ಗಂಗಾಧರ್ ಜಿ. ಅವರ ಸಾರಥ್ಯದಲ್ಲಿ ಗುರುಗಳಾದಂತಹ ಶ್ರೀಯುತ ರಾಜೀವ್ ತೋನ್ಸೆಯವರ ಶಿಕ್ಷಣದೊಂದಿಗೆ ದುರ್ಗಾಂಬಿಕಾ…

Read More