Author: roovari

ಬೆಂಗಳೂರು: ಸಂಜಯನಗರದಲ್ಲಿ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಸಂಸ್ಥೆಯು ಕಳೆದ 15 ವರ್ಷಗಳಿಂದ ಕಲೆಗಾಗಿ ಶ್ರಮಿಸುತ್ತಿರುವ ವಿವಿಧ ವಿಭಾಗಗಳಲ್ಲಿ ಸದ್ದಿಲ್ಲದೇ ಸಾಧನೆಗೈದು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಮಹಿಳೆಯರನ್ನು ಗುರುತಿಸಿ ‘ಲಾಸ್ಯ ಸಾಧಕಿ ಪ್ರಶಸ್ತಿ’ ಮೂಲಕ ಗೌರವಿಸುತ್ತಿದೆ. ಕಲಾವಿದೆಯರು, ಸಮಾಜ ಸುಧಾರಕಿಯರು, ವೈದ್ಯೆಯರು, ಹಸಿರು ಯೋಧೆಯರು, ಯೋಗ ಪಟುಗಳು ಹೀಗೆ ಹತ್ತು ಹಲವಾರು ವಿಭಾಗದಲ್ಲಿ ನುರಿತವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024ರ ಪ್ರತಿಷ್ಠಿತ ಈ ಪ್ರಶಸ್ತಿಗೆ ನಾಲ್ವರು ಸಾಧಕಿಯರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆ ಸ್ಥಾಪಕ, ನಿರ್ದೇಶಕಿ ಡಾ. ಲಕ್ಷ್ಮೀರೇಖಾ ಅರುಣ್ ತಿಳಿಸಿದ್ದಾರೆ. ಸಾಧಕಿಯರಾದ ಖ್ಯಾತ ಭರತನಾಟ್ಯ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಲೇಖಕಿ ಕವಯತ್ರಿ ಹಾಗೂ ನಾಟ್ಯಾರಾಧನಾ ಮತ್ತು ಯಕ್ಷಾರಾಧನಾ ಕಲಾಕೇಂದ್ರ ಸಂಸ್ಥಾಪಕಿ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಅಂತಾರಾಷ್ಟ್ರೀಯ ಒಡಿಸ್ಸಿ ನೃತ್ಯಪಟು, ಲೇಖಕಿ ಮತ್ತು ಒಡಿಸ್ಸಾದ ಬನ್ನಿ ಬಿಲಾನ್ ಸಂಸ್ಥೆ ನಿರ್ದೇಶಕಿ ವಿದುಷಿ ಲೀನಾ ಮೊಹಾಂತಿ, ಖ್ಯಾತ ಮನೋವೈದ್ಯೆ ಹಾಗೂ ಲೇಖಕಿ, ವೈದ್ಯ ಕಲಾರಂಗ ಮತ್ತು ಓಂ ಸಂಸ್ಥೆ ಸ್ಥಾಪಕ ನಿರ್ದೇಶಕಿ…

Read More

ಜಾನ್ ಫೋಸ್ಸೇ 2023ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ನಾರ್ವೆಜಿಯನ್ ನಾಟಕಕಾರರು. ನಾರ್ವೆ ದೇಶದ ಜಾನ್ ಫೋಸ್ಸೇ 2024ರ ವಿಶ್ವ ರಂಗಭೂಮಿ ದಿನದ ರಂಗ ಸಂದೇಶವನ್ನು ನೀಡಿದ್ದಾರೆ. ಕಲೆ ಕಲಾವಿದರು ಮತ್ತು ಶಾಂತಿಯ ಕುರಿತಾಗಿ ಜಾನ್ ಫೋಸ್ಸೇ ನೀಡಿರುವ ರಂಗ ಸಂದೇಶದ ಕನ್ನಡಾನುವಾದ ಇಲ್ಲಿದೆ. ರಂಗಭೂಮಿ, ಕಲೆ ಮತ್ತು ಶಾಂತಿ ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯು ಅನನ್ಯ. ಹಾಗಿದ್ದರೂ ಆತ ಅನ್ಯರನ್ನು ಪ್ರೀತಿಸಬಲ್ಲ. ನಮ್ಮ ನಮ್ಮ ಬಾಹ್ಯ ಚಹರೆಗಳು, ಪರಸ್ಪರ ಭಿನ್ನವಾಗಿರುವ ಸಹಜ ಏರು ತಗ್ಗುಗಳು. ಆದರೆ ಅರಿವು ಮೀರಿದ ಒಂದು ವಿಶಿಷ್ಟ ಅನನ್ಯತೆಯು ಪ್ರತಿಯೊಬ್ಬನ ಅಂತರಾಳದಲ್ಲಿ ಅಂತರ್ಗತವಾಗಿರುವುದರಿಂದ ಆ ಅರಿವು ಮಾತ್ರ ಅವನಿಗಷ್ಟೇ ಸೀಮಿತವಾಯಿತು. ಅದನ್ನೇ ನಾವು ಆತನೊಳಗಿನ ಚೈತನ್ಯ ಅಥವಾ ಆತ್ಮ ಎಂದು ಕರೆಯಬಹುದು ಅಥವಾ ಈ ಪರಿಭಾಷೆಯು ಸಮಾಧಾನಕರ ಅಲ್ಲವಾಗುವುದಾದರೆ ಅದನ್ನು ಯಾವುದೇ ಹೆಸರಿನಿಂದ ಗುರುತಿಸದೇ ಆ ಅನನ್ಯತೆಯನ್ನು ಅದರಷ್ಟಕ್ಕೆ ಬಿಟ್ಟುಬಿಡೋಣ. ಆದರೆ ನಾವು ಯಾವಾಗ ಇನ್ನೊಬ್ಬರಂತಿಲ್ಲವೋ ಅದೇ ಭಾವದಲ್ಲಿ ಪರಸ್ಪರ ಸಾದೃಶ್ಯರೂ ಆಗಿರುತ್ತೇವೆ. ಈ…

Read More

“ನೋಡಿ, ನಾಟಕಕ್ಕೆ ಒಪ್ಪಿಕೊಂಡ ಮೇಲೆ ಪ್ರಾಕ್ಟೀಸಿಗೆ ಸರಿಯಾಗಿ ಬರ್ಬೇಕು. ಎಲ್ಲರನ್ನೂ ಕಾಯಿಸುವುದು ಸರಿಯಲ್ಲ. ಇದ್ರ ಪರಿಣಾಮ ಏನು ಗೊತ್ತುಂಟಾ ? ವೇದಿಕೆಗೆ ಹೋದಾಗ ಬಾಯಿಪಾಠ ಇಲ್ಲ, ಸೈಡ್ ವಿಂಗ್ ನಲ್ಲಿ ಪ್ರಾಂಪ್ಟ್ ಗೆ ಕಿವಿ ಕೊಡೋದು, ಅಭಿನಯ ಇಲ್ಲಾ, ಇದರಿಂದಾಗಿ ಉತ್ತಮ ಪ್ರಸ್ತುತಿ ಸಾಧ್ಯವಿಲ್ಲ. ಕಲಾವಿದರಾದ ನಮ್ಮಲ್ಲಿ ಒಂದು ಶಿಸ್ತು ಬೇಕಪ್ಪ.” “ಹೌದಾ ? ಹಾಗಾದ್ರೆ ನೀವು ಶಿಸ್ತು ಹೇಗೆ ಪಾಲಿಸ್ತೀರಿ ?” “ನೀವು ನನ್ನ ಬಗ್ಗೆ ಕೇಳ್ತೀರಾ ? 5 ಗಂಟೆಗೆ ಪ್ರಾಕ್ಟೀಸಿಗೆ ಬರ್ಬೇಕು ಅಂತ ನಿರ್ದೇಶಕರು ಹೇಳಿದ್ರೆ, ಹತ್ತು ನಿಮಿಷಕ್ಕೆ ಮೊದಲು ಅಲ್ಲಿರ್ತೇನೆ. ಅಲ್ಲಿ ಹೋದ ಮೇಲೆ ಅದೇ ನನ್ನ ಪ್ರಪಂಚ. ಇಂದಿಗೂ ಅದನ್ನು ಪಾಲಿಸಿಕೊಂಡು ಬಂದಿದ್ದೇನೆ. ರಂಗಭೂಮಿ ಮತ್ತು ಸಿನೇಮಾ ರಂಗ ಇವೆರಡನ್ನು ತುಲನೆ ಮಾಡಿದ್ರೆ ನನ್ನ ಪ್ರಥಮ ಆದ್ಯತೆ ರಂಗಭೂಮಿಗೆ. ರಂಗಭೂಮಿಯ ಬದುಕಿನಲ್ಲಿ ನೋವು ನಲಿವು ಎರಡೂ ಇದೆ. ‘ರಂಗಭೂಮಿ ನನಗೆ ಬೇಡ’ ಎನ್ನುವ ಮನಸ್ಥಿತಿ ನನಗೆ ಎಂದೂ ಬಂದಿಲ್ಲ. ರಂಗಭೂಮಿ ನನ್ನ ಜೀವನ. ಅದೇ…

Read More

ಮಂಗಳೂರು : ಸೂರ್ಯಾದಿ ನವಗ್ರಹಗಳ ಸ್ತುತಿ ಶ್ಲೋಕಗಳ ಮಾಲಿಕೆಯ ‘ನವಗ್ರಹ ನೃತ್ಯ ನಮನ’ ಕಾರ್ಯಕ್ರಮವು ದಿನಾಂಕ 26-03-2024ರಂದು ಮಂಗಳೂರಿನ ಹಿಂದಿಪ್ರಚಾರ ಸಮಿತಿಯಲ್ಲಿ ಸಂಜೆ ಘಂಟೆ 5.30ರಿಂದ ನಡೆಯಲಿದೆ. ವ್ಯಾಸ ಮುನಿಗಳಿಂದ ರಚಿಸಲ್ಪಟ್ಟು ಕೀರ್ತಿಶೇಷ ವಿದ್ವಾನ್ ಪಿಟೀಲು ವಾಸುದೇವರಾಯರು ಸಂಯೋಜಿಸಿದ ಸಂಗೀತವಿರುವ ನವಗ್ರಹಗಳ ಸ್ತೋತ್ರ ಮಾಲಿಕೆಯನ್ನು ಡಾ. ಭ್ರಮರಿಯವರು ‘ನಾದನೃತ್ಯ ತಿಂಗಳ ಸರಣಿ’ ಕಾರ್ಯಕ್ರಮದ ಅಂಗವಾಗಿ ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಶಾರದಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಲೀಲಾ ಉಪಾಧ್ಯ ಹಾಗೂ ವೇದಮೂರ್ತಿ ಪುರೋಹಿತ ಪ್ರಶಾಂತ ಆಚಾರ್ಯರು ಉದ್ಘಾಟಿಸಿ ಆಶೀರ್ವದಿಸಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಶ್ರೀ ಸನ್ನಿಧಿ, ವಿದ್ವಾನ್ವಿ ಕೆ.ಎಚ್.  ರವಿಕುಮಾರ್ ಹಾಗೂ ವಿದ್ವಾನ್ ಕೃಷ್ಣಪವನ್ ಕುಮಾರ್ ಇವರುಗಳ ಹಿಮ್ಮೇಳ ಸಹಕಾರದೊಂದಿಗೆ ನಡೆಯಲಿದೆ. ಆಸಕ್ತರಿಗೆ ಮುಕ್ತಪ್ರವೇಶ.

Read More

ಕೋಟ : ಕೋಟ ವೈಕುಂಠರ ಕುಟುಂಬದ ಸದಸ್ಯರು ಕೋಟ ಸ್ವಗೃಹದಲ್ಲಿ ಆಯೋಜಿಸಿದ ಅಮೃತೇಶ್ವರಿ ಮೇಳದ ಬಯಲಾಟ ಕಾರ್ಯಕ್ರಮವು ದಿನಾಂಕ 18-03-2024ರಂದು ನಡೆಯಿತು.ಇದೇ ಸಂದರ್ಭದಲ್ಲಿ ಮೇಳದ ಕಲಾವಿದರಾದ ಮೊಳಹಳ್ಳಿ ಕೃಷ್ಣ ನಾಯಕ್ ಹಾಗೂ ಸೀತಾರಾಮ ಹೆಗಡೆಯವರನ್ನು ಕುಟುಂಬದ ಪರವಾಗಿ ‘ಕೋಟ ವೈಕುಂಠ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದರನ್ನು ಅಭಿನಂದಿಸಿ ಮಾತನಾಡಿದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ “ಕೋಟ ವೈಕುಂಠ ಅವರು ಒಬ್ಬ ಶ್ರೇಷ್ಠ ಕಲಾವಿದ. ಗರತಿ, ರಾಣಿ, ವಯ್ಯಾರಿ, ವೀರ ನಾರಿ ಯಾವುದೇ ಪಾತ್ರವಿರಲಿ ಎಲ್ಲದಕ್ಕೂ ಸೈ ಎನಿಸಿಕೊಂಡವರು. ಖ್ಯಾತ ಸ್ತ್ರೀ ವೇಷಧಾರಿಗಳಾದ ಕೊಕ್ಕರ್ಣೆ ನರಸಿಂಹ ಕಾಮತ್, ಹಾರಾಡಿ ನಾರಾಯಣ ಗಾಣಿಗರ ಬಳಿಕ ಆ ಸಾಲಿನಲ್ಲಿ ಗುರುತಿಸಿಕೊಂಡ ಅಪ್ರತಿಮ ಕಲಾವಿದ. ಅವರ ಮೈಯ್ಯ ಬಾಗು ಬಳುಕು, ಅಂಗ ಆಕಾರವೇ ಅವರಿಗೆ ವರಪ್ರದವಾದುದು. ಅವರ ಹೆಸರಿನಲ್ಲಿ ಕೊಡ ಮಾಡುವ ಪುರಸ್ಕಾರವನ್ನು ಪಡೆಯುವುದೆ ಕಲಾವಿದನೊಬ್ಬನ ಪುಣ್ಯ” ಎಂದು ಹೇಳಿದರು. ಕೋಟ ಗೀತಾನಂದ ಫೌಂಡೇಶನಿನ ಪ್ರವರ್ತಕರಾದ ಆನಂದ ಸಿ. ಕುಂದರ್…

Read More

ಮಂಗಳೂರು :  ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಸ್ತ್ರೀ ಶಕ್ತಿ’ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ದಿನಾಂಕ 24-03-2024ರ ಸಂಜೆ 5.30ರಿಂದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿ. ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ವಿಭಾಗದ ಎ. ಸಿ. ಪಿ. ಗೀತಾ ಡಿ. ಕುಲಕರ್ಣಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಉದ್ಯಮಿಗಳಾದ ಸುಬ್ರಮಣ್ಯ ಪ್ರಸಾದ್, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಖ್ ಖಾನ್, ಸಂಚಾಲಕರಾದ ಉಷಾಪ್ರಭಾ ನಾಯಕ್ ಹಾಗೂ ಖಜಾಂಜಿಯಾದ ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು. ಪೂರ್ವಾರ್ಧದಲ್ಲಿ ಬೆಂಗಳೂರಿನ ಶ್ರೀಲಕ್ಷ್ಮಿ ಬೆಳ್ಮಣ್ಣು ಅವರ ಶಾಸ್ತ್ರೀಯ ಗಾಯನ ಸಭಿಕರನ್ನು ರಂಜಿಸಿತು. ಇವರಿಗೆ ಹಾರ್ಮೋನಿಯಂನಲ್ಲಿ ಬೆಂಗಳೂರಿನ ನೀತಾ ಬೆಳೆಯೂರ್ ಮತ್ತು ತಬ್ಲಾದಲ್ಲಿ ಕುಂದಾಪುರದ ವಿಶ್ವೇಶ್ ಕಾಮತ್ ಸಾಥ್ ನೀಡಿದರು. ಉತ್ತಾರಾರ್ಧದಲ್ಲಿ ಉಜ್ಜಯನಿಯ ಸಹೋದರಿಯರಾದ ಸುಕೃತಿ ವಹಾನೆ ಮತ್ತು ಪ್ರಕೃತಿ ವಹಾನೆ ಇವರಿಂದ ‘ಸಿತಾರ್- ಸಂತೂರ್’ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ಇವರಿಗೆ  ತಬ್ಲಾದಲ್ಲಿ ಹುಬ್ಬಳ್ಳಿಯ ಹೇಮಂತ್ ಜೋಶಿ ಸಾಥ್…

Read More

ಮಂಗಳೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ದಿನಾಂಕ 19-03-2024 ಮತ್ತು 20-03-2024ರಂದು ಮಂಗಳೂರು ಮಿನಿ ವಿಧಾನಸೌಧದ ಬಳಿ ಇರುವ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಿರು ನಾಟಕ ಸ್ಪರ್ಧೆಯ ವಿಭಾಗದಲ್ಲಿ ಶ್ರೀ ಗಿರೀಶ್ ಕಾರ್ನಾಡರ ‘ನಾಗ ಮಂಡಲ’ (ಸ್ವತಂತ್ರ ರಂಗಾವಿಷ್ಕಾರ) ನಾಟಕವು ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿತು. ವಿನೂತನ ರಂಗ ಕಲ್ಪನೆಯೊಂದಿಗೆ ನಾಗಮಂಡಲ ನಾಟಕವನ್ನು ಮಂಗಳೂರು ವಿಭಾಗದ ಸರಕಾರಿ ನೌಕರರ ಸಂಘದ ಸದಸ್ಯರು ಮನೋಜ್ಞವಾಗಿ ಅಭಿನಯಿಸಿದ್ದರು. ಹಣ, ಮಧ್ಯ, ಮಾದಕತೆ ಅಧಿಕಾರಗಳ ಹಿಂದೆ ಓಡುವ ಯುವ ಸಮಾಜ, ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಜೀವನದ ಕೈ ಕನ್ನಡಿಯಾಗಿ ನಾಗಮಂಡಲ ನಾಟಕವನ್ನು ಕಾಸರಗೋಡಿನ ಯುವ ರಂಗ ನಿರ್ದೇಶಕ ಶ್ರೀ ಸದಾಶಿವ ಬಾಲಮಿತ್ರ ಇವರು ವಿಭಿನ್ನವಾಗಿ ನಿರ್ದೇಶಿಸಿದ್ದು, ಹರೀಶ್ ಕುಮಾರ್ ತಲಪಾಡಿಯವರ ನೇತೃತ್ವದ ಅಭಿನಯ ತಂಡದಲ್ಲಿ ವಸಂತ ರೈ ಬಿ.ಕೆ., ಪ್ರತಿಮ ಹೆಬ್ಬಾರ್, ಯಶೋದಾ ಸಿ. ಮಹಾಲಕ್ಮಿ, ಇಂದಿರಾ…

Read More

ಮಂಗಳೂರು : ಕರ್ನಾಟಕ ಸರಕಾರದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಇಲಾಖೆ ನೀಡುವ 2023 – 24ರ ‘ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08-03-2024ರಂದು ಮಂಗಳೂರಿನ ದ. ಕ. ಜಿಲ್ಲಾ ಪಂಚಾಯತ್ ಸಂಕೀರ್ಣದ ನೇತ್ರಾವತಿ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಡೆಯಿತು. ಕಲೆ ಸಾಂಸ್ಕೃತಿಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಶ್ರೀ ಆಶಿಶ್ ಎಂ. ರಾವ್ ಅವರಿಗೆ ಈ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯ ಮಂಗಳೂರಿನ ಶಾಖೆಯಲ್ಲಿ ಉದ್ಯೋಗಿಯಾಗಿರುವ ಮಧುಸೂದನ ಹಾಗೂ ರಾಜಶ್ರೀ ದಂಪತಿಯ ಸುಪುತ್ರನಾಗಿರುವ ಶ್ರೀ ಆಶಿಶ್ ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ. ಚಿತ್ರಕಲೆ, ಸಂಗೀತ, ಗ್ಲಾಸ್ ಪೇಂಟಿಂಗ್, ರಂಗೋಲಿ, ಲೀಫ್ ಕಾರ್ವಿಂಗ್, ಕಸದಿಂದ ರಸ, ಕ್ಲೇ ಮಾಡಲಿಂಗ್, ಕ್ಯಾನ್ವಾಸ್ ಪೈಂಟಿಂಗ್, ಸ್ಟೋನ್…

Read More

ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಅಮರಸುಳ್ಯ ಅಧ್ಯಯನ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ‘ಸಾಹಿತ್ಯ ಸಂಭ್ರಮ’ ಡಾ. ಶಂಕರ ಪಾಟಾಳಿ ಬದಿಯಡ್ಕ ವಿರಚಿತ ಆಕೃತಿ ಆಶಯ ಮಂಗಳೂರು ಇವರ ಪ್ರಕಟಣೆ ‘ಶಿಶಿಲ ಚಿಂತನೆ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 29-03-2024ರಂದು ಸುಳ್ಯ ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಇವರು ವಹಿಸಲಿದ್ದು, ಹಿರಿಯ ಯಕ್ಷಗಾನ ಅರ್ಧದಾರಿಗಳಾದ ಶ್ರೀ ಜಬ್ಬಾರ್ ಸಮೊ ಕೃತಿ ಬಿಡುಗಡೆ ಮಾಡಲಿದ್ದಾರೆ. ಮಾಜಿ ರಾಜ್ಯಪಾಲರಾದ ಲಯನ್ ಎಂ.ಬಿ. ಸದಾಶಿವ ಇವರು ಕೃತಿ ಪರಿಚಯ ಮಾಡಲಿದ್ದಾರೆ.

Read More

ಬದಿಯಡ್ಕ : ಬದಿಯಡ್ಕದ ಇಕ್ಕೇರಿ ಶ್ರೀ ಶಂಕರನಾರಾಯಣ ದೇವರ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆ(ರಿ) ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 18-03-2024ರಂದು ನಡೆಯಿತು.‌ ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಹಾಗೂ ‘ತರಣಿಸೇನ ಕಾಳಗ’ ಪ್ರಸಂಗಗಳ ಪ್ರದರ್ಶನ ನಡೆಯಿತು. ಸುದರ್ಶನ ವಿಜಯ ಪ್ರಸಂಗದಲ್ಲಿ ದೇವೇಂದ್ರನಾಗಿ ಶಶಿಧರ ಕುದಿಂಗಿಲ, ದೇವೇಂದ್ರ ಬಲಗಳಾಗಿ ಶ್ರೇಯಾ ಹಾಗೂ ಸುಕೃತಾ, ಶತ್ರುಪ್ರಸೂದನನಾಗಿ ಶರತ್, ರಾಕ್ಷಸ ಬಲಗಳಾಗಿ ಮೋಕ್ಷಾ ಹಾಗೂ ವಿಷ್ಣು, ಈಶ್ವರನಾಗಿ ಶ್ರಾವ್ಯಾ, ವಿಷ್ಣುವಾಗಿ ಮೇಘನಾ ಕುಡಾಣ, ಲಕ್ಷ್ಮೀಯಾಗಿ ಶರಣ್ಯಾ, ಸುದರ್ಶನನಾಗಿ ಅಭಿಜ್ಞಾ ಭಟ್ ಬೊಳುಂಬು ಪಾತ್ರಗಳಿಗೆ ಜೀವ ತುಂಬಿದರು. ತರಣಿಸೇನ ಕಾಳಗದಲ್ಲಿ ತರಣಿ ಸೇನನಾಗಿ ವಿದ್ಯಾ ಆನಂದ್ ಕೆಕ್ಕಾರು, ಶ್ರೀರಾಮನಾಗಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ವಿಭೀಷಣನಾಗಿ ಶಶಿಧರ ಕುದಿಂಗಿಲ ಹಾಗೂ ಸರಮೆಯಾಗಿ ಸುಧಾ ಇವರುಗಳು ಪಾತ್ರಗಳಲ್ಲಿ ಪ್ರಬುದ್ಧತೆ ಮೆರೆದರು. ಭಾಗವತರಾಗಿ ದಯಾನಂದ ಕೋಡಿಕಲ್, ಚೆಂಡೆ ಮದ್ದಳೆಗಳಲ್ಲಿ ಸುದರ್ಶನ ಕಲ್ಲೂರಾಯ, ಕೃಷ್ಣಮೂರ್ತಿ ಎಡನಾಡು…

Read More