Author: roovari

ಮಂಗಳೂರು : ಇಂಟ್ಯಾಕ್ ಮಂಗಳೂರು ಅಧ್ಯಾಯ ಮತ್ತು ಕಲ್ಲಚ್ಚು ಪ್ರಕಾಶನದ ಸಹಯೋಗದಲ್ಲಿ ವಿಶ್ವ ಕವಿತಾ ದಿನಾಚರಣೆಯ ಪ್ರಯುಕ್ತ ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಗೋವಿಂದ ಪೈ, ಕುವೆಂಪು, ಬೇಂದ್ರೆ, ಕಯ್ಯಾರ, ಅಡಿಗ, ಲಂಕೇಶ್, ನಿಸ್ಸಾರ್ ಅಹ್ಮದ್, ತಿರುಮಲೇಶ್, ಸಿದ್ದಲಿಂಗಯ್ಯ, ವೈದೇಹಿ, ಕಾಯ್ಕಿಣಿ ಮೊದಲಾದವರ ಕಾವ್ಯ ವಾಚನ ಮತ್ತು ವಿಶ್ಲೇಷಣೆ – ಮುಸ್ಸಂಜೆಯ ಕವಿತೆಗಳು ‘ಕವಿ-ಕಾವ್ಯ-ಮಂಥನ’ ಕಾರ್ಯಕ್ರಮವು ಮಂಗಳೂರಿನ ಜಿ.ಜಿ. ರಸ್ತೆ, ಕೊಡಿಯಾಲಗುತ್ತು (ಪಶ್ಚಿಮ), ಕೊಡಿಯಾಲಗುತ್ತು ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ದಿನಾಂಕ 21-03-2024ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ವಿ.ಜಿ.ಎಂ. ರೀಸ್ ಮ್ಯಾಥ್ಯೂಸ್ ಉದ್ಘಾಟನೆ ಮಾಡಲಿದ್ದು, ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಭಾರತೀಯ ಭಾಷಾ ಸಂಸ್ಥಾನ ಇದರ ನಿಕಟಪೂರ್ವ ಯೋಜನಾ ನಿರ್ದೇಶಕರಾದ ಪ್ರೊ ಬಿ. ಶಿವರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಇಂಟ್ಯಾಕ್ ಮಂಗಳೂರು ಅಧ್ಯಾಯದ ಸಂಚಾಲಕರಾದ ಸುಭಾಷ್ ಚಂದ್ರ ಬಸು ಇವರು ಉಪಸ್ಥಿತರಿದ್ದು, ಡಾ. ಮೀನಾಕ್ಷಿ ರಾಮಚಂದ್ರ, ಪ್ರೊ. ಪಿ. ಕೃಷ್ಣಮೂರ್ತಿ, ಡಾ. ಸಾಯಿಗೀತಾ ಹೆಗ್ಡೆ, ವಿಲ್ಸನ್ ಕಟೀಲ್,…

Read More

ಕಾರ್ಕಳ : ರಂಗ ಸಂಸ್ಕೃತಿ ಕಾರ್ಕಳ ವತಿಯಿಂದ ದಶರಂಗ ಸಂಭ್ರಮದ ಪ್ರಯುಕ್ತ ‘ಬಿ. ಗಣಪತಿ ಪೈ ರಂಗೋತ್ಸವ’ ರಾಜ್ಯ ಮಟ್ಟದ ನಾಟಕ ಉತ್ಸವವು ದಿನಾಂಕ 21-03-2024ರಿಂದ 24-03-2024ರವರೆಗೆ ಸಂಜೆ ಗಂಟೆ 6.45ರಿಂದ ಕಾರ್ಕಳದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆಯಲಿದೆ. ದಿನಾಂಕ 21-03-2024ರಂದು ಈ ಕಾರ್ಯಕ್ರಮವು ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್ ಇವರಿಂದ ಉದ್ಘಾಟನೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಮೂಡಬಿದಿರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಜೀವನ್ ರಾಂ ಸುಳ್ಯ ಇವರ ನಿರ್ದೇಶನದಲ್ಲಿ ‘ನಾಯಿ ಮರಿ’ ನಾಟಕ ಪ್ರದರ್ಶನ, ದಿನಾಂಕ 22-03-2024ರಂದು ಮೈಸೂರಿನ ನಟನ ಪ್ರಸ್ತುತ ಪಡಿಸುವ ಡಾ. ಶ್ರೀಪಾದ್ ಭಟ್ ನಿರ್ದೇಶನದಲ್ಲಿ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ, ದಿನಾಂಕ 23-03-2024ರಂದು ಬೈಂದೂರಿನ ಸುರಭಿ ಪ್ರಸ್ತುತ ಪಡಿಸುವ ಶ್ರೀ ಗಣೇಶ್ ಮಂದಾರ್ತಿ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಚೋಮನ ದುಡಿ’ ನಾಟಕ ಪ್ರದರ್ಶನ, ದಿನಾಂಕ 24-03-2024ರಂದು ಮಂಗಳೂರಿನ ರಂಗ ಸಂಗಾತಿ ಪ್ರಸ್ತುತ ಪಡಿಸುವ ಶಶಿರಾಜ್ ರಾವ್…

Read More

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚ ‘ಬಸವ ಜಯಂತಿ ಪ್ರಯುಕ್ತ ಸಾದರಪಡಿಸುವ ‘ವಚನ ವೈಭವ’ ರಾಜ್ಯ ಮಟ್ಟದ ವಚನ ಗಾಯನ ಸ್ಪರ್ಧೆ, ಜಿಲ್ಲಾ ಮಟ್ಟದ ವಚನ ‘ವಾಚನ – ವ್ಯಾಖ್ಯಾನ’ ಸ್ಪರ್ಧೆ ಮತ್ತು ಜಿಲ್ಲಾ ಮಟ್ಟದ ವಚನ ‘ಪ್ರಶ್ನೋತ್ತರ’ ಸ್ಪರ್ಧೆಯು ದಿನಾಂಕ 10-05-2024 ಮತ್ತು 11-05-2024ರಂದು ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯ ಮಟ್ಟದ ವಚನ ಗಾಯನ ಸ್ಪರ್ಧೆ – ಶಾಸ್ತ್ರೀಯ ಸಂಗೀತದ ಶೈಲಿಯಲ್ಲಿ ಸ್ಪರ್ಧೆಯ ನಿಯಮಗಳು / ವಿಶೇಷಗಳು : * ಸ್ಪರ್ಧಿಯ ವಯಸ್ಸು 12ರಿಂದ 18 ವರ್ಷದ ಒಳಗಿರಬೇಕು. * ಸ್ಪರ್ಧೆಯ ಯಾವುದೇ ಹಂತದಲ್ಲಿ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ಬರದಿದ್ದಲ್ಲಿ ಅಥವಾ ಅಸಭ್ಯವಾಗಿ ನಡೆದುಕೊಂಡರೆ ಸ್ಪರ್ಧೆಯಿಂದ ಹೊರಗಿಡಲಾಗುವುದು. * ಪ್ರವೇಶ ಪತ್ರವನ್ನು ವಾಟ್ಸ್ ಆ್ಯಪ್ ಮೂಲಕವೇ ಕಳುಹಿಸಬೇಕು. (9110453540 / 8310279953) * ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್ ಅಥವಾ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಕಳುಹಿಸಬೇಕು. * ಪ್ರವೇಶ ಪತ್ರಗಳನ್ನು ದಿನಾಂಕ 01-04-2024ರಿಂದ…

Read More

ಮೈಸೂರು : ಜಿ.ಪಿ.ಐ.ಇ.ಆರ್. ರಂಗ ತಂಡದ ವತಿಯಿಂದ ಮೂರು ದಶಕಗಳ ಯಶಸ್ವಿ ರಂಗ ಪಯಣದ ಸಲುವಾಗಿ ‘ರಾಷ್ಟ್ರೀಯ ರಂಗೋತ್ಸವ’ ನಾಟಕಗಳು, ಸಂಗೀತ, ವಿಚಾರ ಸಂಕಿರಣ, ಜಾನಪದ, ಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನಗಳು ದಿನಾಂಕ 27-03-2024ರಿಂದ 31-03-2024ರವರೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 27-03-2024ರಂದು ಸಂಜೆ ಗಂಟೆ 6-00ಕ್ಕೆ ಈ ರಂಗೋತ್ಸವವು ಉದ್ಘಾಟನೆಗೊಳ್ಳಲಿದ್ದು, ಗಂಟೆ 7-00ರಿಂದ ಕೇರಳದ ‘ಜ್ವಾಲ ಕುರುವಾಕೋಡ್’ ತಂಡ ಪ್ರಸ್ತುತಪಡಿಸುವ ಈ.ವಿ. ಹರಿದಾಸ್ ರಂಗರೂಪ ಮತ್ತು ನಿರ್ದೇಶನದ ‘ಬಾವಲ್’ ಮಲಯಾಳಂ ನಾಟಕ ಪ್ರದರ್ಶನ, ದಿನಾಂಕ 28-03-2024ರಂದು ಸಂಜೆ ಗಂಟೆ 5-30ಕ್ಕೆ ದೇವಾನಂದ ವರಪ್ರಸಾದ್ ಮತ್ತು ತಂಡದವರಿಂದ ‘ಅರಿವು ತೋರಿದ ಗುರು’ ತತ್ವಪದ ಗಾಯನ ಮತ್ತು ಗಂಟೆ 7-00ರಿಂದ ಡಾ. ಹೆಚ್.ಎಸ್. ಶಿವಪ್ರಕಾಶ್ ರಚಿಸಿರುವ ರಂಗಾಯಣದ ಮೈಮ್ ರಮೇಶ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ‘ಜಿ.ಪಿ.ಐ.ಇ.ಆರ್. ರಂಗ ತಂಡ’ದ ಯಶಸ್ವಿ 25ನೇ ಬೆಳ್ಳಿ ಪ್ರದರ್ಶನವಾದ “ಮಂಟೇಸ್ವಾಮಿ ಕಥಾ ಪ್ರಸಂಗ’ ಕನ್ನಡ ಜಾನಪದ ನಾಟಕ…

Read More

ಬೈಂದೂರು : ಲಾವಣ್ಯ (ರಿ.) ಬೈಂದೂರು ಹಾಗೂ ಶ್ರೀ ಜಗದೀಶ್ ಮಯ್ಯ ಬಿಜೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷ ಲಾವಣ್ಯ 2024’ವು ಶ್ರೀ ಶಾರದಾ ವೇದಿಕೆಯಲ್ಲಿ ದಿನಾಂಕ 30-03-2024 ಮತ್ತು 31-03-2024ರಂದು ನಡೆಯಲಿದೆ. ದಿನಾಂಕ 30-03-2024ರಂದು ಸಂಜೆ ಗಂಟೆ 5.00ಕ್ಕೆ ಯಕ್ಷ ದಿಗ್ಗಜರಿಂದ ನಡೆಯಲಿರುವ ‘ಭ್ರಗು ಶಾಪ’ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಶಂಕರ ನಾರಾಯಣ, ರಾಘವೇಂದ್ರ ಹೆಗಡೆ ಯಲ್ಲಾಪುರ ಮತ್ತು ಜನಾರ್ದನ ಆಚಾರ್ಯ ಹಳ್ಳಾಡಿ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ್ ಭಟ್, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣಕೆರೆ, ವೈಕುಂಠ ಹೇರ್ಳೆ ಮತ್ತು ಸತೀಶ್ ಶೆಟ್ಟಿ ಮೂಡುಬಗೆ ಇವರುಗಳು ಭಾಗವಹಿಸಲಿರುವರು. ದಿನಾಂಕ 31-03-2024ರಂದು ಸಂಜೆ ಗಂಟೆ 6.00ಕ್ಕೆ ಲಾವಣ್ಯದ ಮಹಿಳಾ ಯಕ್ಷಗಾನ ಬಳಗದವರಿಂದ ಗಣೇಶ ದೇವಾಡಿಗ ಉಪ್ಪುಂದ ಇವರ ಸಂಯೋಜನೆ ಮತ್ತು ನಿರ್ದೇಶನದಲ್ಲಿ ‘ರಾಣಿ ಶಶಿಪ್ರಭೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಪುತ್ತೂರು : ಬಹುವಚನಂ ನಿರತ ನಿರಂತ ಆಯೋಜನೆಯಲ್ಲಿ ‘ಥೇಟರ್ ಮಾರ್ಚ್ 2024’ ವಿಶ್ವ ರಂಗಭೂಮಿ ದಿನದ ಪ್ರಯುಕ್ತ ಪುತ್ತೂರಿನ ದರ್ಬೆಯ ವಿದ್ಯಾನಗರದಲ್ಲಿರುವ ಪದ್ಮಿನೀ ಸಭಾಭವನದಲ್ಲಿ ದಿನಾಂಕ 24-03-2024ರಂದು ಸಂಜೆ ಗಂಟೆ 4.30ಕ್ಕೆ ನಡೆಯಲಿದೆ. ಉಡುಪಿಯ ಭೂಮಿಗೀತ ಪಟ್ಲ ರಂಗನಿರ್ದೇಶಕರಾದ ಸಂತೋಷ ನಾಯಕ್ ಪಟ್ಲ ಇವರಿಂದ ‘ಥೇಟರ್ ಮಾರ್ಚ್ 2024’ ವಿಶ್ವ ರಂಗಭೂಮಿ ದಿನದ ರಂಗ ಸಂದೇಶದ ವಿದ್ಯಮಾನಗಳ ಅನುಸಂದಾನ ಮತ್ತು ಕರಾವಳಿ ರಂಗಭೂಮಿಯ ಮುಖಾಮುಖಿ ‘ವಿಶೇಷ ರಂಗೋಪನ್ಯಾಸ’ ನಡೆಯಲಿದೆ.

Read More

ಕಾಸರಗೋಡು : ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ 18 ವರ್ಷಗಳಿಂದ ನಾಡು, ನುಡಿ ಹಾಗೂ ಸಂಸ್ಕೃತಿಗಾಗಿ ತನ್ನನ್ನು ತೊಡಗಿಸಿಕೊಂಡಿರುವ ‘ರಂಗ ಚಿನ್ನಾರಿ’ ಸಂಸ್ಥೆಯು ನೂರಾರು ಸಾಂಸ್ಕೃತಿಕ- ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಕೆಲವು ವರ್ಷಗಳಿಂದ ಕಾಸರಗೋಡಿನ ಪ್ರತಿಭೆಗಳಿಗೆ ನಗದು ಬಹುಮಾನದೊಂದಿಗೆ ‘ರಂಗ ಚಿನ್ನಾರಿ ಪ್ರಶಸ್ತಿ’ ಹಾಗೂ ’ರಂಗ ಚಿನ್ನಾರಿ ಯುವ ಪ್ರಶಸ್ತಿ’ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿದೆ. 2023-24ನೇ ಸಾಲಿನಲ್ಲಿ ಈ ಕೆಳಗಿನವರಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆಯೆಂದು ರಂಗ ಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ. ಮತ್ತು ಮನೋಹರ ಶೆಟ್ಟಿ ತಿಳಿಸಿದ್ದಾರೆ. ‘ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’ಗೆ ಶ್ರೀ ರಾಮ ಜೋಗಿ, ‘ರಂಗ ಚಿನ್ನಾರಿ ಪ್ರಶಸ್ತಿ’ಗೆ ಶ್ರೀ ಚಂದ್ರಶೇಖರ ಹಾಗೂ ಶ್ರೀಮತಿ ಶಶಿಕಲಾ ಬಾಯಾರು, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ಗೆ ಶ್ರೀ ಕಾರ್ತಿಕ್ ಪಡ್ರೆ ಹಾಗೂ ಕುಮಾರಿ ಶಿವಾನಿ ಕೆ. ಕೂಡ್ಲು ಆಯ್ಕೆಯಾಗಿದ್ದಾರೆ. ‌ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-03-2024ರ ಶನಿವಾರ ಸಂಜೆ ಘಂಟೆ 4.30ಕ್ಕೆ ಕಾಸರಗೋಡಿನ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಹಿಳಾ ವೇದಿಕೆ, ಮಹಿಳಾ ಘಟಕ, ಸ್ಪರ್ಶ್ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ದಿನಾಂಕ 09-03-2024ರಂದು ನಡೆಯಿತು. ಯೆನೆಪೋಯ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ರೇಖಾ, ಕಾಲೇಜಿನ ಪ್ರಿನ್ಸಿಪಾಲ್ ಡಾ. ಅನಸೂಯ ರೈ, ಮಹಿಳಾ ಘಟಕದ ಸಂಚಾಲಕಿ ಡಾ. ಶೋಭಾ, ಮಹಿಳಾ ವೇದಿಕೆಯ ಸಂಚಾಲಕಿ ಡಾ. ಭಾರತಿ ಪ್ರಕಾಶ್‌ ಉಪಸ್ಥಿತರಿದ್ದರು. ಕಾಲೇಜಿನ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು “ಮಹಿಳೆ ಎಂಬ ಕಾರಣಕ್ಕೆ ದುಃಖಿತಳಾಗದೇ ಬದುಕಿನಲ್ಲಿ ಉನ್ನತ ಗುರಿ ಹೊಂದಿ ಅದನ್ನು ಸಾಧಿಸುವ ಕಡೆಗೆ ಮುಖ ಮಾಡಬೇಕು.” ಎಂದು ಹೇಳಿದರು.

Read More

ಮಂಗಳೂರು : ಮಂಗಳೂರಿನ ಸಂಗೀತ ಪರಿಷತ್‌ ಇದರ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ 10-03-2024ರಂದು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಠದ ಅಧ್ಯಕ್ಷ ರಾಮಕೃಷ್ಣ ಜಿತಕಾಮಾನಂದಜೀ, ಭಾರತೀಯ ವಿದ್ಯಾಭವನದ ಗೌರವ ಜೊತೆ ಕಾರ್ಯದರ್ಶಿ ಪ್ರೊ ಜಿ.ಆರ್. ರೈ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಸಮಕ್ಷಮದಲ್ಲಿ ಮೃದಂಗ ಕಲಾವಿದ ಬಿ. ರಮೇಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಗರು “ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ಮತ್ತು ಬೌದ್ಧಿಕ ಪ್ರಬುದ್ಧತೆ ಬೆಳೆಯುತ್ತದೆ. ಸಂಗೀತ ಆಲಿಸುವವರ ಹೃದಯ ಮೃದುವಾಗುತ್ತದೆ. ಸಂಗೀತದಿಂದ ಸಾಮರಸ್ಯ ಮೂಡುತ್ತದೆ” ಎಂದರು. ಸಂಗೀತ ಪರಿಷತ್ ಉಪಾಧ್ಯಕ್ಷ ಎಚ್‌. ಸುಬ್ರಹ್ಮಣ್ಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ “ಈ ವರ್ಷ 30 ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತ್ರಿಂಶತ್ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಲಾಗಿದೆ.” ಎಂದರು. ಕೃಷ್ಣಮೂರ್ತಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಬೆಂಗಳೂರಿನ ಪಟ್ಟಾಭಿರಾಮ ಪಂಡಿತ್ ಅವರಿಂದ ಹಾಡುಗಾರಿಕೆ ನಡೆಯಿತು. ತಿರುವನಂತಪುರದ ಸಂಪತ್‌ ಪಿಟೀಲಿನಲ್ಲಿ, ಬೆಂಗಳೂರಿನ…

Read More

ಕೋಟೇಶ್ವರ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ಕೋಟೇಶ್ವರ ಮಂಜರ ಮನೆಯ ಗೃಹಪ್ರವೇಶದ ಸಂದರ್ಭ ‘ಶ್ವೇತಯಾನ’ ಸರಣಿ ಕಾರ್ಯಕ್ರಮದ ಅಂಗವಾಗಿ 9ನೇ ಕಾರ್ಯಕ್ರಮ ‘ಭಕ್ತಿ ಭಾವಾಮೃತ- ಯಕ್ಷಗಾನಾಮೃತ’ ಜುಗಲ್‌ಬಂದಿ ಕಾರ್ಯಕ್ರಮವು ದಿನಾಂಕ 15-03-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಸತ್ಯನಾರಾಯಣ ಮಂಜ ಮಾತನಾಡಿ “ಸಂಸ್ಥೆಯು ವಿಭಿನ್ನವಾದ ಕಾರ್ಯಕ್ರಮದಲ್ಲಿ ತೊಡಗಿದಾಗ ಉತ್ತುಂಗಕ್ಕೇರುವಲ್ಲಿ ಹೆಚ್ಚು ಫಲಕಾರಿಯಾಗುತ್ತದೆ. ಹಿಂದೂಸ್ಥಾನಿ ಸಂಗೀತದೊಂದಿಗೆ ಯಕ್ಷ ಸಾಹಿತ್ಯದ ಗಾನ ಲಹರಿ ಬೆರತಾಗ ಔನತ್ಯವನ್ನು ಸಾಧಿಸುವುದಕ್ಕಾಗುತ್ತದೆ. ಪ್ರಸಿದ್ಧರಾದ ಪಂಡಿತ್ ನಾಗಭೂಷಣ ಹೆಗಡೆಯವರ ಸಂಗೀತ, ಯಕ್ಷ ಗಾಯನದೊಂದಿಗೆ ಬೆರೆತು ಹೊಸ ಹುಡುಕಾಟ ಮತ್ತು ಹೆಚ್ಚು ಹೆಚ್ಚು ಯೋಚಿಸುವುದಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ‘ಶ್ವೇತಯಾನ’ ಕಾರ್ಯಕ್ರಮದುದ್ದಕ್ಕೂ ಹೊಸ ಹೊಸ ಸಾಧ್ಯತೆಯನ್ನು ಶೋಧಿಸಲಿ.” ಎಂದು ಶುಭಹಾರೈಸಿದರು. ಕೋಟೇಶ್ವರ ಮಂಜರ ಮನೆಯ ಗೃಹಪ್ರವೇಶದ ಸಂದರ್ಭ ‘ಜುಗಲ್‌ಬಂದಿ’ ಕಾರ್ಯಕ್ರಮ ನಡೆಸಲು ಅನುವುಮಾಡಿಕೊಟ್ಟ ರಮೇಶ್ ಮಂಜ ಹಾಗೂ ಸರೋಜ ದಂಪತಿಗಳನ್ನು ಆರ್.ಎಸ್.ಎಸ್. ಮುಖಂಡ ಸುಬ್ರಹ್ಮಣ್ಯ ಹೊಳ್ಳ ಗೌರವಿಸಿದರು. ಕಾರ್ಯದರ್ಶಿ ವೆಂಕಟೇಶ ವೈದ್ಯ,…

Read More