Author: roovari

ಮಡಿಕೇರಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆ ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯ ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ‘ಕಲಾ ಪ್ರತಿಭೋತ್ಸವ’ ರೂಪಿಸಿದೆ. ಈ ಉತ್ಸವವನ್ನು ದಿನಾಂಕ 09 ಮತ್ತು 10 ಅಕ್ಟೋಬರ್ 2025ರಂದು ಮಡಿಕೇರಿಯ ಗಾಂಧಿ ಭವನದಲ್ಲಿ ನಡೆಸಲಾಗುವುದು. ಬಾಲಪ್ರತಿಭೆ/ಕಿಶೋರ ಪ್ರತಿಭೆ/ಯುವಪ್ರತಿಭೆ ಎಂಬ ಶೀರ್ಷಿಕೆಯಡಿ ಮೂರು ವಿಭಾಗಗಳಲ್ಲಿ ಸ್ಪರ್ಧಾ ರೂಪದಲ್ಲಿ ಏರ್ಪಡಿಸಲಾಗುವುದು. ಈ ಸ್ಪರ್ಧೆಗಳನ್ನು ದಿನಾಂಕ 09 ಅಕ್ಟೋಬರ್ 2025ರಂದು ಬಾಲಪ್ರತಿಭೆ/ ಕಿಶೋರ ಪ್ರತಿಭೆ ಹಾಗೂ ದಿನಾಂಕ 10 ಅಕ್ಟೋಬರ್ 2025ರಂದು ಯುವ ಪ್ರತಿಭೆ/ ಸಮೂಹ ಸ್ಪರ್ಧೆಗಳಿಗೆ ಸ್ಪರ್ಧಾರೂಪದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದವರಲ್ಲಿ ಪ್ರಥಮ ಸ್ಥಾನ ಪಡೆದವರನ್ನು ವಲಯ ಮಟ್ಟದ ಸ್ಪರ್ಧೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುವುದು. ಅರ್ಹತೆ : ಬಾಲ ಪ್ರತಿಭೆ : ಬಾಲ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 8 ವರ್ಷ ತುಂಬಿರಬೇಕು ಹಾಗೂ 14…

Read More

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ‘ಶ್ರೀ ದುರ್ಗಾಂಬ ವೇದಿಕೆ’ಯಲ್ಲಿ 22 ಸೆಪ್ಟೆಂಬರ್ 2025 ರಿಂದ 01 ಅಕ್ಟೋಬರ್ 2025ರ ತನಕ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಜರುಗಲಿದೆ. ಕನ್ನಡ ಭವನದ ಸಂಸ್ಥಾಪಕ ಶ್ರೀ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕಳೆದ 12 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಸಂಭ್ರಮದ ಈ ಬಾರಿಯ ಉದ್ಘಾಟನೆ ದಿನಾಂಕ 22 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಪಾಂಗೋಡು ಕ್ಷೇತ್ರ ಸಭಾಂಗಣದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿರುವರು. ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಶ್ರೀ ಪ್ರವೀಣ್ ನಾಯಕ ದೀಪ ಪ್ರಜ್ವಲನೆಗೈಯುವರು. ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀ ನಾಗೇಶ್ ಪಿ. ನಾಯಕ, ದ.ಕ. ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್ ಗೌರವ ಉಪಸ್ಥಿತಿಯಲ್ಲಿರುವರು. ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿಯವರು ಅಧ್ಯಕ್ಷತೆ ವಹಿಸುವರು, ಡಾ. ಜಯಪ್ರಕಾಶ್…

Read More

ಬೆಂಗಳೂರು : ಕಲಾ ಕದಂಬ ಆರ್ಟ್ ಸೆಂಟರ್ ಇದರ ವತಿಯಿಂದ ‘ಮಾಸದ ಮೆಲುಕು 153’ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ 20 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರು ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಂಜುಂಡ ಕವಿ ವಿರಚಿತ ‘ವಿರೋಚನ ಕಾಳಗ’ ಯಕ್ಷಗಾನವು ಭರತ್ ಪರ್ಕಳ ಇವರ ನಿರ್ದೇಶನದಲ್ಲಿ ನಡೆಯಲಿದ್ದು, ಹಿಮ್ಮೇಳದಲ್ಲಿ ಸುಬ್ರಾಯ ಹೆಬ್ಬಾರ್, ಅಕ್ಷಯ್ ಆಚಾರ್, ಶ್ರೀನಿವಾಸ್ ಪ್ರಭು ಮತ್ತು ಮುಮ್ಮೇಳದಲ್ಲಿ ಭರತ್ ರಾಜ ಪರ್ಕಳ, ದೇವರಾಜ ಕರಬ, ಪೂಜಾ ಆಚಾರ್ಯ, ಅದಿತಿ ಉರಾಳ, ನಿತ್ಯಾ ಗೌಡ, ಅನೀಶ್ ಸೋಮಯಾಜಿ ಹಾಗೂ ಇತರರು ಸಹಕರಿಸಲಿದ್ದಾರೆ.

Read More

ತೆಕ್ಕಟ್ಟೆ: ಹಲವಾರು ವರ್ಷಗಳ ಹಿಂದೆ ಕಲಾವಿದರು ಮಳೆಗಾಲದಲ್ಲಿ ತಮ್ಮ ಬದುಕಿಗಾಗಿ ಕಟ್ಟಿಕೊಂಡ ಕಾರ್ಯಕ್ರಮ ‘ಹೂವಿನಕೋಲು’ ನಶಿಸಿ ಹೋದ ಕಾಲಘಟ್ಟದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಸ್ಥೆ ಒಂದಷ್ಟು ಮಕ್ಕಳನ್ನು ಒಗ್ಗೂಡಿಕೊಂಡು ಆಯ್ದ ಕೆಲ ಮನೆಗಳಲ್ಲಿ ಮತ್ತೆ ಹಳೆಯ ಪ್ರಕಾರವನ್ನು ನೆನಪಿಸುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ಸು ಕಂಡಿದೆ. ಈ ವರ್ಷವೂ ಎರಡು ತಂಡವಾಗಿ ಮಾಡಿಕೊಂಡು ಕರಾವಳಿಯುದ್ದಕ್ಕೂ ತಿರುಗಾಟ ಮಾಡುವುದಕ್ಕೆ ಸನ್ನದ್ಧವಾಗಿದೆ. ಕಾರ್ಯದರ್ಶಿ ವೆಂಕಟೇಶ ವೈದ್ಯ ಹಾಗೂ ಸದಸ್ಯ ಗಣಪತಿ ಭಟ್ ಯಲ್ಲಾಪುರ ಇವರೀರ್ವರ ತಂಡ ಅಲ್ಲಲ್ಲಿ ಕೆಲ ಮನೆಗಳಲ್ಲಿ ಅಭಿಯಾನವನ್ನು ಕೈಗೊಳ್ಳಲಿದೆ. ಸೆಪ್ಟೆಂಬರ್ 22 ರಂದು ಬೆಳಿಗ್ಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾರ್ಯಕ್ರಮ ಉದ್ಘಾಟಿಸಿಕೊಂಡು ನವೆಂಬರ್ 2ರ ತನಕ ಕುಂದಾಪುರ, ಬ್ರಹ್ಮಾವರ, ಉಡುಪಿ, ಮಂಗಳೂರಿನಾದ್ಯಂತ ಹಲವಾರು ಕಡೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ ನೆರವೇರಿಸಿಕೊಳ್ಳಲಿದೆ. ಪ್ರಾಚಾರ್ಯ ದೇವದಾಸ್ ರಾವ್, ರಾಹುಲ್ ಕುಂದರ್ ಕೋಡಿ, ಪೂಜಾ ಆಚಾರ್, ಪಂಚಮಿ ವೈದ್ಯ, ಹರ್ಷಿತಾ ಅಮೀನ್, ಪವನ್ ಆಚಾರ್, ಕಿಶನ್ ಪೂಜಾರಿ, ಪರಿಣಿತ ವೈದ್ಯ, ಆರಭಿ ಹಗಡೆ, ಪ್ರಣಮ್ಯ…

Read More

ಧಾರವಾಡ : ಬೆಂಗಳೂರಿನ ಪ್ರತಿಷ್ಠಿತ ‘ರಂಗ ಶಂಕರ’ ಸಂಸ್ಥೆಯು ಉದಯೋನ್ಮುಖ ರಂಗ ನಿರ್ದೇಶಕರಿಗಾಗಿ, ರಾಜ್ಯದ ವಿವಿಧ ಪ್ರದೇಶಗಳಲ್ಲಿ ನಾಟಕ ನಿರ್ಮಿಸಿ ನಿರ್ದೇಶನದ ಅವಕಾಶ ಕಲ್ಪಿಸುವ ಪ್ರೋತ್ಸಾಹಕ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಅಂಗವಾಗಿ ಯುವ ನಿರ್ದೇಶಕ ಶ್ರೀ ವಿನಯ್ ಶಾಸ್ತ್ರಿ ಇವರ ಸಾರಥ್ಯದಲ್ಲಿ ಧಾರವಾಡದ ಹಿರಿಯ ರಂಗ ಸಂಸ್ಥೆ, ಅಭಿನಯ ಭಾರತಿಯು ಶ್ರೀರಂಗರ ‘ರಂಗ ಭಾರತ’ ಎಂಬ ಸುಪ್ರಸಿದ್ಧ ನಾಟಕವನ್ನು ನವೆಂಬರ್ ಮೊದಲ ವಾರದಲ್ಲಿ ಪ್ರಥಮ ಪ್ರದರ್ಶನ ಏರ್ಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ನಾಟಕದ ರಿಹರ್ಸಲ್, ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, ಈ ನಾಟಕದಲ್ಲಿ ಭಾಗವಹಿಸುವ ಆಸಕ್ತಿಯುಳ್ಳ ಕಲಾವಿದರಿಂದ ಅರ್ಜಿ ಆಹ್ವಾನಿಸುತ್ತಿದೆ. ಈ ನಾಟಕವು ಪುರುಷ ಪ್ರಧಾನ ನಾಟಕವಾಗಿದ್ದು ಸುಮಾರು ಹತ್ತರಿಂದ ಹದಿನೈದು ಕಲಾವಿದರು ಬೇಕಾಗಬಹುದು. ಒಂದೆರಡು ಸ್ತ್ರೀ ಪಾತ್ರಗಳೂ ಇರಬಹುದು. ಕಾರಣ ಈ ನಾಟಕಕ್ಕೆ 15ರಿಂದ 60 ವಯಸ್ಸಿನೊಳಗೆ ಇರುವ ರಂಗ ಭೂಮಿಯಲ್ಲಿ ಆಸಕ್ತಿ ಹಾಗೂ ಬದ್ಧತೆಯುಳ್ಳ ಕಲಾವಿದರು ಬೇಕಾಗಿದ್ದಾರೆ. ಈ ಯೋಜನೆಯಲ್ಲಿ ಆಯ್ಕೆಯಾದ ಕಲಾವಿದರಿಗೆ ಯಾವ ರೀತಿಯ ಪ್ರವೇಶ…

Read More

ಡಾ. ಪಾರ್ವತಿ ಜಿ. ಐತಾಳ್ ರವರು ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕರು. ಕವನ, ಕತೆ, ವ್ಯಕ್ತಿ ಚಿತ್ರಣ, ಆತ್ಮಕಥೆ, ಕಾದಂಬರಿ, ಮಕ್ಕಳ ನಾಟಕ, ರಂಗ ವಿಮರ್ಶೆ, ಸಂಪಾದನೆ ಎಂದು ವಿವಿಧ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವವರು. ಕನ್ನಡ, ಇಂಗ್ಲೀಷ್, ಮಲೆಯಾಳಂ, ತುಳು, ಹಿಂದಿ ಎಂದು ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿರುವುದೇ ಅಲ್ಲದೆ ಈ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಕೊಡುಗೆ ನೀಡಿರುವವರು. ಶಿವರಾಮ ಕಾರಂತರು, ವಾಸುದೇವನ್ ನಾಯರ್, ನಿಸಾರ್ ಅಹಮದ್, ಕೆ.ವಿ. ತಿರುಮಲೇಶರಂತಹ ಮಹತ್ವಪೂರ್ಣ ಸಾಹಿತಿಗಳ ಕೃತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಯಶಸ್ವಿಯಾಗಿ ಅನುವಾದಿಸಿರುವವರು. ರ್ಪಾರ್ವತಿ ಜಿ. ಐತಾಳರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಇದೇ ವರ್ಷ ಶ್ರೀರಾಮ ಪ್ರಕಾಶನದಿಂದ ಪ್ರಕಟವಾಗಿರುವ 136 ಪುಟಗಳ‌ ಕೃತಿ. ಪ್ರಸ್ತುತದಲ್ಲಿ ಮಲೆಯಾಳಂನಲ್ಲಿ ಬರೆಯುತ್ತಿರುವ 11 ಮಂದಿ ಲೇಖಕರ 17 ಕಥೆಗಳಿವೆ. ಮುಗಿಯದ ಯಾತ್ರೆಗಳಲ್ಲಿ ತಿಳಿಯಾದ ನೀಲಾಕಾಶಕ್ಕಾಗಿ ಹಂಬಲಿಸುವ ಮಹಾದೇವನನ್ನು ಆವರಿಸುವ ನಿಜಾನಂದದ ಲಹರಿಯ ಕಥೆ, ಪಿ. ಸುರೇಂದ್ರರವರ ‘ನೀಲಾಕಾಶ’ವೇ…

Read More

ಮಣಿಪಾಲ : ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಮಣಿಪಾಲ ಮತ್ತು ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಾಡಹಬ್ಬ ಪ್ರಯುಕ್ತ ‘ನವರಸಗಳಲ್ಲಿ ನವರಾತ್ರಿ’ ವೈಶಿಷ್ಟಪೂರ್ಣ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 22 ಸೆಪ್ಟೆಂಬರ್ 2025ರಂದು ಸಂಜೆ 3-30 ಗಂಟೆಗೆ ಮಣಿಪಾಲ ಸರಳೇಬೆಟ್ಟು ರತ್ನ ಸಂಜೀವ ಕಲಾ ಮಂಡಲ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮಹೇಶ್ ಠಾಕೂರ್ ಇವರು ಉದ್ಘಾಟನೆ ಮಾಡಲಿದ್ದು, ನಿತ್ಯಾನಂದ ಪಡ್ರೆ ಮಣಿಪಾಲ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸುಕನ್ಯಾ ಕಳಸ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಗೈದಿರುವ ಸಾಧಕರಿಗೆ ಅಭಿನಂದನ ಸನ್ಮಾನ ನಡೆಯಲಿದೆ.

Read More

ಇವತ್ತು ಸೆಪ್ಟೆಂಬರ್ 19, ಬಿ.ವಿ. ಕಾರಂತರ ಜನುಮದಿನ. ಈ ನೆನಪಿನಲ್ಲಿ ಬಿ.ವಿ. ಕಾರಂತರು (ಬಾಬುಕೋಡಿ ವೆಂಕಟರಮಣ ಕಾರಂತ) ಹೇಳಿರುವ ‘ಮಕ್ಕಳ ರಂಗಭೂಮಿ’ ಕುರಿತ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ. 1998ರ ಅಕ್ಟೋಬರ್ 10ರಿಂದ 17ರ ತನಕ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೇತೃತ್ವದಲ್ಲಿ ಬಿ.ವಿ. ಕಾರಂತರು ನಿರ್ದೇಶಕರಾಗಿ ಭಾಗವಹಿಸಿದ ತುಳುರಂಗ ಶಿಬಿರದಲ್ಲಿ ಕಾರಂತರು ಹೇಳಿದ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊಫೆಸರ್ ಬಿ.ಎ. ವಿವೇಕ ರೈಗಳ ಆಸಕ್ತಿಯಿಂದ ಕಾರಂತರನ್ನು ಮಂಗಳೂರಿಗೆ ಬರಮಾಡಿಸಿಕೊಂಡು 1998ರ ಅಕ್ಟೋಬರ್ ತಿಂಗಳಲ್ಲಿ ಮೊದಲ ಬಾರಿಗೆ ಎನ್ನುವ ಹಾಗೆ ಎಂಟು ದಿನಗಳ ಅವಧಿಯ ರಂಗ ಶಿಕ್ಷಣ ಕಮ್ಮಟವನ್ನು ಏರ್ಪಡಿಸಲಾಯಿತು. ರಂಗ ಕಮ್ಮಟದ ನಿರ್ದೇಶಕರಾಗಿ ಬಿ.ವಿ. ಕಾರಂತರ ನೇತೃತ್ವ ಇದ್ದರೆ ನಾನು [ಐ.ಕೆ. ಬೊಳುವಾರು] ಮತ್ತು ಸುರೇಶ ಹಂದಾಡಿಯವರು ಸಹಾಯಕರಾಗಿ ಸೇರಿಕೊಂಡಿದ್ದೆವು. 42 ಮಕ್ಕಳು ಭಾಗವಹಿಸಿದ ಈ ಕಮ್ಮಟದ ಅವಧಿಯಲ್ಲಿ ತುಳು ಭಾಷಾ ಕಲಿಕೆಯ ನಾನಾ ಚಟುವಟಿಕೆಗಳೊಂದಿಗೆ ಹಿಂದಿಯ ಖ್ಯಾತ ಲೇಖಕ ಮುನ್ಶಿ ಪ್ರೇಮಚಂದ್ರರ ಈದ್ಗಾ ಕಥೆಯನ್ನಾದರಿಸಿ…

Read More

ಬಜಪೆ: ತುಳುನಾಡಿನ ಜನಪದ ಸಾಹಿತ್ಯ ಪ್ರಕಾರವಾದ ಸಾಕಷ್ಟು ಅಜ್ಜಿ ಕತೆಗಳನ್ನು ಸಂಗ್ರಹಿಸಿ, ಆಯ್ದ 40 ಕತೆಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿ ತುಳು ಕನ್ನಡ ಎರಡೂ ಭಾಷೆಗಳಲ್ಲಿ ಪ್ರಕಟಿಸಿದ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ.ವಿ.ಕೆ.ಯಾದವ್ ಸಸಿಹಿತ್ತು ಅವರ ಐನ್ ಕೈ ಅಜ್ಜಿ ಕತೆ ಕೃತಿಯ ಬಿಡುಗಡೆ ಕಾರ್ಯಕ್ರಮ ಸೆ.20ರಂದು ಬೆಳಗ್ಗೆ ಕಟೀಲು ದೇವಳ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯ ಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಕಲಿಯುವ ವಿದಾರ್ಥಿ `ಗಳಿಂದ ಏನ್ ಕೈ ಅಜ್ಜಿಕತೆ ಬಿಡುಗಡೆಗೊಳ್ಳಲಿದೆ. ಮೂಲ್ಕಿ- ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸಂಯೋಜನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತುಳು- ಕನ್ನಡ ಸಾಹಿತಿ ಡಾ.ಪದ್ಮನಾಭ ಭಟ್ ಎಕ್ಕಾರು, ಜಾನಪದ ವಿದ್ಯಾರ್ಥಿ ಎಸ್.ಆರ್.ಪ್ರದೀಪ್, ಕೃತಿಕಾರ ಡಾ.ವಿ.ಕೆ.ಯಾದವ್ ಸಸಿಹಿತ್ತು ಕಟೀಲು ಪ್ರೌಢಶಾಲಾ ವೈಸ್ ಬನ್ನಿಪಾಲ್ రాజా లేటుగా ಪಾಲ್ಗೊಳ್ಳಲಿದ್ದಾರೆ ಎಂದು ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ ಉಡುಪ ಕೊಡೆತ್ತೂರು ತಿಳಿಸಿದ್ದಾರೆ.

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ಆಯೋಜಿಸುವ ಐದನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯು ದಿನಾಂಕ 20 ಸೆಪ್ಟೆಂಬರ್ 2025 ರಂದು ಮಧ್ಯಾಹ್ನ ಘಂಟೆ 2.30ಕ್ಕೆ ಮಂಗಳೂರಿನ ಉರ್ವಾಸ್ಟೋರ್‌ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದಲ್ಲಿ ನಡೆಯಲಿದೆ. ಹಿರಿಯ ಪತ್ರ ಕರ್ತ, ಸಾಹಿತಿ ಮಲಾರ್ ಜಯರಾಮ್ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕವಿ ಗೋಷ್ಠಿಯನ್ನು ಬಹು ಭಾಷಾ ಕವಿ ವಿಲ್ಸನ್ ಕಟೀಲು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ವ್ಯಾಪ್ತಿಯ 13 ಭಾಷೆಗಳ ಕವಿಗಳು ಕವಿತೆ ವಾಚಿಸಲಿದ್ದಾರೆ. ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬಯಿ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷ ಚಂಚಲ ತೇಜೋಮಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೋಷ್ಠಿಯಲ್ಲಿ ಚೆನ್ನಪ್ಪ ಅಳಿಕೆ(ತುಳು), ಮಂಜುಳಾ ಶೆಟ್ಟಿ (ತುಳು), ಸತೀಶ್ ಪಡುಬಿದ್ರಿ (ಕೊರಗ ಭಾಷೆ), ಸದಾನಂದ ನಾರಾವಿ (ಕನ್ನಡ),…

Read More