Author: roovari

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಕಾರದೊಂದಿಗೆ ಆಯೋಜಿಸಿದ ಎರಡು ದಿನಗಳ ತೆಂಕುತಿಟ್ಟು ‘ಯಕ್ಷಮಾರ್ಗ ಶಿಬಿರ ಹಾಗೂ ಯಕ್ಷಗಾನ ಪ್ರದರ್ಶನ’ದ ಉದ್ಘಾಟನಾ ಸಮಾರಂಭವು 24 ಆಗಸ್ಟ್ 2024ರ ಶನಿವಾರದಂದು ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಮಾತನಾಡಿ “ಯಕ್ಷಗಾನದಿಂದ ಭಕ್ತಿಯ ಚಿಂತನೆ ಬರುತ್ತದೆ ಮತ್ತು ಅದು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಶತಮಾನಗಳಿಂದ ಆರಾಧನಾ ಕಲೆಯಾಗಿ ಬೆಳೆದು ಬಂದ ಯಕ್ಷಗಾನ ಪ್ರೇಕ್ಷಕರ ಮನ ತಣಿಸುವ ಕಲೆಯಾಗಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸಲು ಯಕ್ಷಗಾನ ಅಕಾಡೆಮಿ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಯಕ್ಷಗಾನ ಕಲೆಯನ್ನು ಹೊಸ ತಲೆಮಾರಿಗೆ ಹಸ್ತಾಂತರಿಸುವ ಉದ್ದೇಶವಿರಿಸಿಕೊಂಡು ಅಕಾಡೆಮಿ ಮಕ್ಕಳ ಯಕ್ಷಗಾನಕ್ಕೆ ಹೆಚ್ಚಿನ ಒತ್ತು ನೀಡಿದೆ.” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರದ ಶಾಸಕ ಎ. ಕೆ.…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯ ಪ್ರಯುಕ್ತ ಧ್ವಜಪುರ ನಾಗಪ್ಪಯ್ಯ ವಿರಚಿತ ‘ಸೌಗಂಧಿಕಾ ಪುಷ್ಪ ಹರಣ’ ಎಂಬ ಯಕ್ಷಗಾನ ತಾಳಮದ್ದಳೆಯ ದಿನಾಂಕ 27 ಆಗಸ್ಟ್ 2024ರಂದು ಬನ್ನೂರು ಭಾರತೀ ನಗರದ ಬಲಮುರಿ ಶ್ರೀವಿದ್ಯಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಆಲಂಕಾರು ಹಾಗೂ ಚೆಂಡೆ, ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ (ಭೀಮ), ಗುಡ್ಡಪ್ಪ ಬಲ್ಯ (ಹನೂಮಂತ), ಭಾಸ್ಕರ ಬಾರ್ಯ (ದ್ರೌಪದಿ), ವಿ.ಕೆ. ಶರ್ಮ (ಧರ್ಮರಾಯ), ದುಗ್ಗಪ್ಪ ನಡುಗಲ್ಲು (ಕುಬೇರ), ಅಚ್ಯುತ ಪಾಂಗಣ್ಣಾಯ (ಮಂತ್ರಿ) ಸಹಕರಿಸಿದರು. ಬಡೆಕ್ಕಿಲ ಚಂದ್ರಶೇಖರ ಭಟ್ ಸ್ವಾಗತಿಸಿ, ವಂದಿಸಿದರು. ಪುಳು ಈಶ್ವರ ಭಟ್ ಸೇವಾಕರ್ತರಾಗಿ ಸಹಕರಿಸಿದರು.

Read More

ಅರಸಿನಮಕ್ಕಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಮಕ್ಕಳಿಗೆ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕದ ರಚನಾ ಪ್ರಕ್ರಿಯೆಗೆ ಚಾಲನೆ ಕಾರ್ಯಕ್ರಮವು 23 ಆಗಸ್ಟ್ 2024ರಂದು ನಡೆಯಿತು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಯದುಪತಿ ಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಹಿರಿಯ ಸಹಕಾರಿಗಳು ಹಾಗೂ ಸಾಹಿತ್ಯ ಸಾಂಸ್ಕೃತಿಕ ಸಂಘಟಕರಾದ ಶ್ರೀಕರ ರಾವ್ ಅಡ್ಕಾರಿ ಇವರು  ದೀಪ ಬೆಳಗಿಸಿ ಚಾಲನೆ ನೀಡಿ “ಅರಸಿನಮಕ್ಕಿಯಂತಹ ಹಳ್ಳಿ ಪ್ರದೇಶದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿ.” ಎಂದು ಶುಭಹಾರೈಸಿದರು. ಮುಖ್ಯ ಅತಿಥಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ದ. ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ  “ಅರಸಿನಮಕ್ಕಿಯಲ್ಲಿ ಈ ದಿನ ಚಾಲನೆ ನೀಡುವ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕವು ಊರಿನ ಮತ್ತು ಶಾಲಾ ಮಕ್ಕಳ ಸಾಹಿತ್ಯ ಪ್ರತಿಭೆಗೆ ವೇದಿಕೆಯಾಗಲಿ. ಸಾಹಿತ್ಯಿಕ…

Read More

ಮಂಗಳೂರು : ಹಿರಿಯ ರಂಗಕರ್ಮಿ, ನಿರೂಪಕ ಮತ್ತು ಚಿತ್ರ ಕಲಾವಿದರಾದ ಎಡ್ಡಿ ಸಿಕ್ವೇರಾ ಇವರ ಸಮಗ್ರ ರಂಗ ಕೃತಿಗಳ ಸಂಗ್ರಹ ‘ನವ್ ರಂಗ್’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 31 ಆಗಸ್ಟ್ 2024ನೇ ಶನಿವಾರದಂದು ಇಳಿಹಗಲು ಘಂಟೆ 6-00ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಕೃತಿ ಲೋಕಾರ್ಪಣೆಗೊಳಿಸಲಿದ್ದು, ಮೈಕಲ್ ಡಿ’ಸೋಜಾ ಟ್ರಸ್ಟ್ ಇದರ ಸಲಹೆಗಾರರಾದ ಸ್ಟೀಫನ್ ಪಿಂಟೊ, ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಎಚ್.ಎಮ್. ಪೆರ್ನಾಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕೃತಿಕಾರ ಎಡ್ಡಿ ಸಿಕ್ವೇರಾ ಮತ್ತು ಖ್ಯಾತ ರಂಗ ಕಲಾವಿದೆ ಜೀನಾ ಡಿ’ಸೋಜಾ ಆಯ್ದ ನಾಟಕ ದೃಶ್ಯಗಳ ವಾಚನಾಭಿನಯ ಪ್ರಸ್ತುತ ಪಡಿಸಲಿರುವರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಂತ ಅಲೋಶಿಯಸ್ ಪ್ರಕಾಶನವು ಪ್ರೊ. ಡಾ. ವಿದ್ಯಾ ವಿನುತ ಡಿ’ಸೋಜಾ ಇವರ ನೇತೃತ್ವದಲ್ಲಿ ’ನವ್ ರಂಗ್’ ಕೃತಿಯನ್ನು ವಿಶ್ವ ಕೊಂಕಣಿ ಕೇಂದ್ರದ ಮೈಕಲ್…

Read More

ಹೆಬ್ರಿ : ಅಕ್ಷರ ಸಾಹಿತ್ಯ ಸಂಘ ಹೆಬ್ರಿ ಮತ್ತು ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ ವಚನ ಸಾಹಿತ್ಯ ಸಂಭ್ರಮ, ಸಂಸ್ಥಾಪನಾ ದಿನ ಮತ್ತು ವಚನ ಗಾಯನ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿರಂಜನ ಚೋಳಯ್ಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ “ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕನ್ನಡದ ಶ್ರೇಷ್ಠ ಕೊಡುಗೆಯಾಗಿದೆ. ಇಂತಹ ವಿಶಿಷ್ಟ ಸಾಹಿತ್ಯ ಬೇರೆ ಎಲ್ಲೂ ಇಲ್ಲ. ಸರಳ ಕನ್ನಡದಲ್ಲಿ ಜನರಿಗೆ ಮಟ್ಟುವ ರೀತಿಯಲ್ಲಿ ವಚನ ಸಾಹಿತ್ಯ ರಚನೆಯಾಗಿದೆ. ಸಾರ್ವಕಾಲಿಕ ಸತ್ಯವನ್ನು ವಚನ ಸಾಹಿತ್ಯ ಹೇಳುತ್ತದೆ” ಎಂದು ಹೇಳಿದರು. ಉಪಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್. ಮಾತನಾಡಿ, “ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಲ್ಲಿ ವಚನ ಸಾಹಿತ್ಯ ಮತ್ತು ಶರಣರ ಚಳವಳಿಯ ಪಾತ್ರ ಬಹುಮುಖ್ಯವಾದುದು. ಕಾಯಕ ತತ್ವವನ್ನು ಸಾರಿದ ಶರಣ ಸಾಹಿತ್ಯ ಇಂದಿಗೂ…

Read More

ಮಳವಳ್ಳಿ : 21 ಆಗಸ್ಟ್ 2024ರಂದು ಉದ್ಘಾಟನೆಗೊಂಡ ರಂಗಬಂಡಿ ಸಂಸ್ಥೆ ಆಯೋಜಿಸಿದ ‘ಮಳವಳ್ಳಿ ಸುಂದರಮ್ಮ ರಂಗೋತ್ಸವ’ದ ಸಮಾರೋಪ ಸಮಾರಂಭವು 25 ಆಗಸ್ಟ್ 2024ರಂದು ಮಳವಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಕರ್ಮಿ ಹಾಗೂ ಸಿನಿಮಾ ನಟ ಬಿ. ಸುರೇಶ್ ಮಾತನಾಡಿ “ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಟಕಗಳು ಅಭಿವೃದ್ಧಿ ಮತ್ತು ಸೌಹಾರ್ದತೆ ನೆಲೆಸಲು ಕಾರಣವಾಗುತ್ತವೆ. ಮಳವಳ್ಳಿಯ ಜನತೆ ಹಿಂದಿನಿಂದಲೂ ಜನಪದ ಕಲೆಗೆ ಹೆಸರಾಗಿದ್ದು, ಅದನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಸಿನಿಮಾ, ನಾಟಕ, ಜನಪದದಲ್ಲಿ ದೊಡ್ಡ ಹೆಸರು ಮಾಡಿದ ಕಲಾವಿದರಿದ್ದಾರೆ. ಆದರಲ್ಲೂ ಮಳವಳ್ಳಿ ತಾಲೂಕು ಮಂಟೇಸ್ವಾಮಿ, ಮಾದಪ್ಪ ನಡೆದಾಡಿದ ನೆಲೆಯಾಗಿದೆ. ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಪ್ರತಿರೋಧ ಒಡ್ಡಿದ ಜನಪದ ನಾಯಕರು ಇವರಾಗಿದ್ದಾರೆ. ಇವರ ಪ್ರಭಾವ ಈ ಭಾಗದ ಜನರಲ್ಲಿದೆ. ಮಳವಳ್ಳಿ ಸುಂದರಮ್ಮ ಮೊಟ್ಟ ಮೊದಲ ರಂಗನಟಿಯಾಗಿ ಪಾತ್ರಗಳನ್ನು ಮಾಡಿದ್ದಾರೆ. ಸಂಗೀತ ಹಾಗೂ ಹಾಡುಗಾರಿಕೆಯಲ್ಲೂ ಪ್ರತಿಭಾವಂತರಾಗಿ ಅದ್ಭುತ ಸಾಧನೆ ಮಾಡಿದ್ದಾರೆ. ಅದರನ್ನು ಪ್ರತಿವರ್ಷ ಸ್ಮರಿಸಿ ನಾಟಕೋತ್ಸವ ನಡೆಸಬೇಕು.…

Read More

ಹಾವಂಜೆ : ಭಾವನಾ ಪ್ರತಿಷ್ಠಾನ (ರಿ.) ಹಾವಂಜೆ ಸಂಯೋಜಿಸುವ ಶ್ರೀ ಮಹಾಲಿಂಗೇಶ್ವರ ಯಕ್ಷರಂಗ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 30 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆಯಲಿದೆ. ‘ಶ್ರೀ ಕೃಷ್ಣ ಸಂಧಾನ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸರ್ವಶ್ರೀಗಳಾದ ಕೇಶವ ಆಚಾರ್ಯ ಹೆರಂಜೆ, ದೇವದಾಸ್ ರಾವ್ ಕೂಡ್ಲಿ, ಶಿವಕುಮಾರ್ ಅಳಗೋಡು, ಶಶಾಂಕ್ ಪಟೇಲ್, ರತ್ನಾಕರ ಆಚಾರ್ಯ, ಚರಿತ್ ಪೂಜಾರಿ ಮತ್ತು ಮಂಜುನಾಥ ರಾವ್ ಹಾವಂಜೆ ಇವರುಗಳು ಸಹಕರಿಸಲಿರುವರು.

Read More

ಸುರತ್ಕಲ್ : ಹೊಸಬೆಟ್ಟು ಗ್ರಾಮ ಸಂಘ (ರಿ.) ಕುಳಾಯಿ-ಹೊಸಬೆಟ್ಟು ಇದರ 66ನೇ ವಾರ್ಷಿಕ ಹರಿಕೀರ್ತನಾ ಮಹೋತ್ಸವವು ನವಗಿರಿ ಕಲ್ಯಾಣ ಮಂಟಪ ಹೊಸಬೆಟ್ಟು ಇಲ್ಲಿ ದಿನಾಂಕ 09-08-2024ರಂದು ಆರಂಭಗೊಂಡು 19-08-2024ರಂದು ಸಂಪನ್ನಗೊಂಡಿತು. ಚಿತ್ರಾಪುರದ ಪುರೋಹಿತ ವೇದಮೂರ್ತಿ ಸಿ. ಲಕ್ಷ್ಮೀಶ ಆಚಾರ್ಯ ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶೀರ್ವಾದಗೈದರು. ಸುಮಾರು 12 ಹರಿದಾಸರುಗಳಿಂದ ಸಂತರ ಹರಿಕೀರ್ತನೆಯು ನಡೆಯಿತು. ಮೊದಲನೇ ದಿನದ ಹರಿಕೀರ್ತನೆಯನ್ನು ಶ್ರೀ ಚಂದ್ರಕಾಂತ್ ಭಟ್ ಮೂಡಬಿದಿರೆ ಇವರು ನಡೆಸಿಕೊಟ್ಟಿದ್ದು, ಉಳಿದ ದಿನಗಳ ಹರಿಕೀರ್ತನೆಯನ್ನು ಶ್ರೀ ಅನಂತಪದ್ಮನಾಭ ಭಟ್ ಕಾರ್ಕಳ, ಡಾ. ಎಸ್.ಪಿ. ಗುರುದಾಸ್ ಮಂಗಳೂರು, ಶ್ರೀ ಶೇಣಿ ಮುರಳಿ ಮಂಗಳೂರು, ಶ್ರೀ ಎಚ್. ಯಜ್ಞೇಶ್ ಹೊಸಬೆಟ್ಟು, ಶ್ರೀ ಪೊಳಲಿ ಜಗದೀಶದಾಸ್, ಶ್ರೀ ಶಿವಶಂಕರದಾಸ್ ಬೆಂಗಳೂರು, ಶ್ರೀಮತಿ ಮಂಜಳಾ ಜಿ. ರಾವ್ ಮಂಗಳೂರು, ಕುಮಾರಿ ಶ್ರದ್ದಾ ಗುರುದಾಸ್ ಮಂಗಳೂರು, ಕುಮಾರಿ ವಸುಪ್ರದ ಜಿ. ಭಟ್ ಉಡುಪಿ, ಶ್ರೀ ಮಧುಸೂದನ ದಾಸರು ಮಂಡ್ಯ ಹಾಗೂ ಕೊನೆಯ ದಿನದ ಸಮಾರೋಪ ಸಮಾರಂಭದ ಹರಿಕಥೆಯನ್ನು ಕಲಾರತ್ನ ಶ್ರೀ…

Read More

ಬೆಂಗಳೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸುವ ‘ಗೀತ ಗೌರವ’ ಮತ್ತು ‘ಭಾವಾಭಿನಂದನೆ’ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮರೆಯಲಾಗದ ಮಹನೀಯರಾದ ಕಾವ್ಯ ಗಾಯನ ಪಿತಾಮಹ ಪಿ. ಕಾಳಿಂಗರಾವ್ ಮತ್ತು ಸಾವಿರ ಪದಗಳ ಸರದಾರ ಬಾಳಪ್ಪಾ ಹುಕ್ಕೇರಿ ಇವರುಗಳಿಗೆ ‘ಗೀತ ಗೌರವ’ ಮತ್ತು ಪ್ರಸಿದ್ಧ ಕವಿಗಳು ಹಾಗೂ ಸಾಹಿತಿಗಳಾದ ಡಾ. ನಾ. ದಾಮೋದರ ಶೆಟ್ಟಿ, ಖ್ಯಾತ ಗಾಯಕರಾದ ನಗರ ಶ್ರೀನಿವಾಸ ಉಡುಪ ಮತ್ತು ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಇವರಿಗೆ ಜನ್ಮದಿನ ಶುಭಾಶಯದ ‘ಭಾವಾಭಿನಂದನೆ’. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಧರಣಿದೇವಿ ಮಾಲಗತ್ತಿ ಇವರು ಉದ್ಘಾಟಿಸಲಿದ್ದು, ಖ್ಯಾತ ಕವಿಗಳು ಮತ್ತು ಸಾಹಿತಿಗಳಾದ ಡಾ. ಹೆಚ್.ಎಸ್. ವೆಂಕಟೇಶಮೂರ್ತಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ,…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸೆಪ್ಟೆಂಬರ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 02-09-2024, 09-09-2024, 16-09-2024, 23-09-2024 ಮತ್ತು 30-09-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 02-09-2024ರಂದು ನಡೆಯಲಿರುವು ಸರಣಿ 61ರಲ್ಲಿ ಕುಮಾರಿ ಪ್ರಜ್ಞಾ, ದಿನಾಂಕ 09-09-2024ರಂದು ನಡೆಯಲಿರುವು ಸರಣಿ 62ರಲ್ಲಿ ನೃತ್ಯನಿಕೇತನ ಕೊಡವೂರಿನ 90 ಕಾಲವಿದೆಯರು, ದಿನಾಂಕ 16-09-2024ರಂದು ನಡೆಯಲಿರುವು ಸರಣಿ 63ರಲ್ಲಿ ಕುಮಾರಿ ಅನಘ ಹೆಗ್ಡೆ, ದಿನಾಂಕ 23-09-2024ರಂದು ನಡೆಯಲಿರುವು ಸರಣಿ 64ರಲ್ಲಿ ಕುಮಾರಿ ಸಾನ್ವಿ ರಾಜೇಶ್ ಮತ್ತು ದಿನಾಂಕ 30-09-2024ರಂದು ನಡೆಯಲಿರುವು ಸರಣಿ 65ರಲ್ಲಿ ಕುಮಾರಿ ಶ್ರೇಯಾ ಶ್ಯಾನುಭಾಗ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More