Author: roovari

‘ನೆನಪು ನೂರೆಂಟು’ ಬೆಂಗಳೂರಿನಲ್ಲಿರುವ ಲಕ್ಷ್ಮಿ ಭಟ್ ಪೂಕಳ ಇವರ ಆತ್ಮಕಥನ. ಚಿಕ್ಕವರಾಗಿದ್ದ ಕಾಲದಲ್ಲಿ ಕತೆ-ಕವಿತೆಗಳನ್ನು ಬರೆಯುವ ಹವ್ಯಾಸವಿದ್ದಿದ್ದರೂ ಮದುವೆಯಾದ ನಂತರ ಪ್ರತಿಕೂಲ ಪರಿಸ್ಥಿತಿಗಳೊಡ್ಡಿದ ಅಡ್ಡಿ-ಆತಂಕಗಳಿಂದಾಗಿ ಏನೂ ಬರೆಯದೆ ಕುಳಿತ ಇವರು ಈಗ ತಮ್ಮ ವೃದ್ಧಾಪ್ಯದಲ್ಲಿ ಬಾಲ್ಯಕಾಲದ ಸವಿ ನೆನಪುಗಳ ಜತೆಗೆ ತಾವು ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಗಳನ್ನೂ ಇಲ್ಲಿ ದಾಖಲಿಸಿದ್ದಾರೆ. ಅಣ್ಣಂದಿರು, ಅಕ್ಕ ತಂಗಿಯರ ಜತೆಗೆ ಕಳೆದ ಬಾಲ್ಯವು ಸಿಹಿಯಾಗಿತ್ತು.‌ ತಾನು ತುಂಬಾ ತಂಟೆ ಮಾಡುವವಳಾಗಿದ್ದೆ. ತುಂಟತನವೂ ಸಾಕಷ್ಟು ಇತ್ತು. ಭೂತ ಪ್ರೇತ ದೆವ್ವಗಳ ಕಥೆಗಳನ್ನು ಓದಿ ಸದಾ ಭಯದಿಂದ ನಡುಗುತ್ತಿದ್ದೆ. ಆಗ ಅಪ್ಪ ದೇವರ ಕೋಣೆಯಿಂದ ವಿಭೂತಿ ತಂದು ಹಣೆಗೆ ಹಚ್ಚುತ್ತಿದ್ದರು. ಯಾವಾಗಲೂ ಬಿಳಿ ಸೀರೆ ಉಡುತ್ತ ಕೆಲಸಗಳಲ್ಲಿ ಮುಳುಗಿರುತ್ತಿದ್ದ ಅಜ್ಜಿಯ ಬಗ್ಗೆ ತನಗೆ ಅಯ್ಯೋ ಎನಿಸುತ್ತಿತ್ತು. ಅಜ್ಜಿ ತುಂಬಾ ಹಾಡುಗಳನ್ನು ಹೇಳಿ ಕೊಡುತ್ತಿದ್ದರು. ಕತೆಗಳನ್ನು ಹೇಳುತ್ತಿದ್ದರು. ಉಚಿತವಾಗಿ ಆಡುವ ಯಕ್ಷಗಾನ ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಕ್ಕ ಮದುವೆಯಾಗಿ ಹೋದ ನಂತರ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡಲು ಯಾರೂ ಇಲ್ಲವೆಂದು ಒಂಬತ್ತನೇ…

Read More

ಸುರತ್ಕಲ್ : ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಮತ್ತು ಸುರತ್ಕಲ್‌ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ, ಪ್ರೊ. ಯಚ್ .ಜಿ. ಕೆ. ರಾವ್ ದತ್ತಿನಿಧಿ, 1982ರ ವಿಜ್ಞಾನ ತಂಡದ ದತ್ತಿನಿಧಿ, ರಕ್ಷಕ ಶಿಕ್ಷಕ ಸಂಘ, ಗೋವಿಂದದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್ ಹಾಗೂ ಬಿ. ಎ. ಎಸ್. ಎಫ್. ಕೈಗಾರಿಕಾ ಸಂಸ್ಥೆ ಬಾಳ ಸುರತ್ಕಲ್ ಇವುಗಳ ಸಹಭಾಗಿತ್ವದಲ್ಲಿ ‘ನೀನಾಸಂ ತಿರುಗಾಟ – 2024’ ನಾಟಕೋತ್ಸವವು ದಿನಾಂಕ 18 ಮತ್ತು 19 ಜನವರಿ 2025ರಂದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನ ಆವರಣದಲ್ಲಿ ನಡೆಯಿತು. ಹಿರಿಯ ರಂಗ ನಿರ್ದೇಶಕ ಮತ್ತು ನಿವೃತ್ತ ಶಿಕ್ಷಕ ಯಚ್.ಯು. ಅನಂತಯ್ಯ ‘ನೀನಾಸಂ ನಾಟಕೋತ್ಸವ’ವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗೋವಿಂದದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಕಾಲೇಜಿನ ಲಲಿತಕಲಾ ಅಧ್ಯಯನ ಕೇಂದ್ರವು ‘ನೀನಾಸಂ ತಿರುಗಾಟ’ದ ನಾಟಕಗಳನ್ನು ನಿರಂತರವಾಗಿ ನಡೆಸುತ್ತಿದ್ದು ಸಾಂಸ್ಕೃತಿಕ ಅಭಿರುಚಿಯ ವರ್ಧನೆಯೊಂದಿಗೆ…

Read More

ಕಾರ್ಕಳ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಘಟಕದ ಮೂಲಕ ಸಂಯೋಜಿಸಿರುವ ‘ತಾಲೂಕು ಮಟ್ಟದ ಗಮಕ ಸಮ್ಮೇಳನ’ವು ದಿನಾಂಕ 25 ಜನವರಿ 2025ರಂದು ಪೂರ್ವಾಹ್ನ 9-00 ಗಂಟೆಗೆ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಶ್ರೀ ವರದೇಂದ್ರ ಸದನ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ವ್ಯಾಸ ರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡ್ (ರಿ.) ಕಾರ್ಕಳ ಇದರ ಅಧ್ಯಕ್ಷರಾದ ಶ್ರೀ ಎ. ಯೋಗೀಶ್ ಹೆಗ್ಡೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವ್ಯಾಖ್ಯಾನಕಾರರಾದ ಶ್ರೀ ಮುನಿರಾಜ ರೆಂಜಾಳ ಇವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿರುವರು. ಕಾರ್ಕಳದ ನಿವೃತ್ತ ಉಪನ್ಯಾಸಕರಾದ ಶ್ರೀ ರಾಮ ಭಟ್ ಎಸ್. ಇವರು ಶಿಖರ ಉಪನ್ಯಾಸ ನೀಡಲಿದ್ದಾರೆ. ಪೂರ್ವಾಹ್ನ ಗಂಟೆ 10-30ಕ್ಕೆ ‘ಸಾವಿತ್ರಿಯ ಬಾಲ್ಯ’ ಗಮಕ ವಾಚನ ವ್ಯಾಖ್ಯಾನದಲ್ಲಿ ಕಾರ್ಕಳ ಹಿರಿಯಂಗಡಿ ಎಸ್.ಎನ್.ವಿ. ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆಶ್ರಿತಾ ಇವರು ವಾಚನ ಹಾಗೂ ಕಾರ್ಕಳ ಭುವನೇಂದ್ರ ಪ್ರಥಮ ದರ್ಜೆ…

Read More

ಮಂಗಳೂರು : ಸಾಲಿಗ್ರಾಮ ಗುರುನರಸಿಂಹ ದೇವಳದ ವಾರ್ಷಿಕ ರಥೋತ್ಸವ ದೇವರ ಅವಭೃತೋತ್ಸವದ ಅಂಗವಾಗಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಹೆಚ್. ವಿರಚಿತ “ರಾಜಾ ದ್ರುಪದ” ಯಕ್ಷಗಾನದ ಪ್ರದರ್ಶನ ದಿನಾಂಕ 17 ಜನವರಿ 2025 ರಂದು ನಡೆಯಿತು. ಕೋಟ ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಾಲಯದ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ನಡೆದ ಈ ಕಾರ್ಯಕ್ರಮವನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಸಾಹಿತಿ ಹಾಗೂ ಕಲಾಪೋಷಕರಾದ ಹೆಚ್. ಜನಾರ್ದನ ಹಂದೆ ಮಾತನಾಡಿ “ಕಲಾಸೇವೆ ಮಾಡುವ ಕಲಾವಿದರಿಗೆ ಹಾಗೂ ಸಂಘಟಕರಿಗೆ ಪ್ರೋತ್ಸಾಹ ನೀಡಬೇಕಾದುದು ಕಲಾಭಿಮಾನಿಗಳ ಮತ್ತು ದಾನಿಗಳ ಕರ್ತವ್ಯ. ಆಗ ಮಾತ್ರ ನಮ್ಮ ಶ್ರೀಮಂತ ಸಂಸ್ಕೃತಿಯ ಉಳಿವು ಸಾಧ್ಯ. ರಥೋತ್ಸವ ಹಾಗೂ ಅವಭೃತದ ಸಂದರ್ಭದಲ್ಲಿ ಯಕ್ಷಗಾನ ಆಯೋಜಿಸಿರುವುದರಿಂದ ಹಂದೆ ದೇವಳದ ಆಡಳಿತ ಮಂಡಳಿ ಮತ್ತು ಸಂಘಟಕರು ಅಭಿನಂದನಾರ್ಹರು” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರಿನ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಯಕ್ಷ ಚಿಂತಕರಾದ ಡಾ. ಆನಂದ ರಾಮ ಉಪಾಧ್ಯ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ಬನ್ನೂರು ಭಾರತೀ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಆಶ್ರಯದಲ್ಲಿ ದಿನಾಂಕ 21 ಜನವರಿ 2025ರಂದು ‘ಶ್ರೀ ಕೃಷ್ಣ ಸಂಧಾನ’ ಎಂಬ ಅಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ನಿತೀಶ್ ಎಂಕಣ್ಣಮೂಲೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ‌ ಪಾಂಗಣ್ಣಾಯ ‌ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ವಿದುರ (ಮಾಂಬಾಡಿ ವೇಣುಗೋಪಾಲ ಭಟ್), ದ್ರೌಪದಿ (ಅಚ್ಯುತ ಪಾಂಗಣ್ಣಾಯ), ಕೌರವ (ಶ್ರುತಿ ವಿಸ್ಮಿತ್ ಬಲ್ನಾಡು) ಸಹಕರಿಸಿದರು. ಇಂಜಿನಿಯರ್ ಶಂಕರ್ ಭಟ್ ಕಾರ್ಯಕ್ರಮ ಪ್ರಾಯೋಜಿಸಿದರು.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗ 119ನೇ ಸರಣಿಯಲ್ಲಿ ಸಂಸ್ಥೆಯ ಕಲಾವಿದರಾದ ಅಕ್ಷತಾ ಕೆ., ಅಪೂರ್ವ ಗೌರಿ ದೇವಸ್ಯ, ಶಮಾ ಚಂದುಕೂಡ್ಲು, ವಿಭಾಶ್ರೀ ವಿ. ಗೌಡ, ಪ್ರಣಮ್ಯ ಪಾಲೆಚ್ಚಾರು ಮತ್ತು ವಿಷ್ಣುಪ್ರಿಯ ಇವರಿಂದ ಭರತನಾಟ್ಯ ಕಾರ್ಯಕ್ರಮವು ದಿನಾಂಕ 04 ಜನವರಿ 2025ರಂದು ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಅಭ್ಯಾಗತರಾದ ವಿಭಾ ಫ್ಯಾಷನ್ ನ ಮಾಲಕರಾದ ಹಾಗೂ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸಮಿತಿಯ ನಿಕಟಪೂರ್ವ ಸದಸ್ಯರಾದ ಶ್ರೀಮತಿ ವೀಣಾ ಬಿ.ಕೆ. ಇವರು ಮೆಚ್ಚುಗೆ ವ್ಯಕ್ತಪಡಿಸಿದರು. ಭರತನಾಟ್ಯ ಕಲಾವಿದರೆಲ್ಲ ವಿದ್ವಾನ್ ದೀಪಕ್ ಕುಮಾರರಲ್ಲಿ ತರಬೇತು ಪಡೆಯುತ್ತಿದ್ದಾರೆ. ಸಭಾಕಲಾಪದಲ್ಲಿ ಕು. ಆದ್ಯ ಕೆ. ನಿರೂಪಣೆಯಲ್ಲಿ, ನಿಶಿ ವಿಷಯ ಮಂಡನೆಯಲ್ಲಿ, ಅಕ್ಷರಿ ಪಂಚಾಂಗ ವಾಚನದಲ್ಲಿ, ಭಾರ್ಗವಿ ಶೆಣೈ ಅಭ್ಯಾಗತರ ಪರಿಚಯ, ಕು. ಅದಿತ್ಯ, ಅಭಿನವ್ ರಾಜ್, ಅಭಿನವ್, ಹೃಷಿಕೇಶ್, ಪ್ರಚೇತ್ – ಪ್ರಾರ್ಥನೆ ಹಾಡಿದರೆ, ಪ್ರೀತಿಕಲಾ ಮತ್ತು ಗಿರೀಶ್ ಕುಮಾರ್ ಓಂಕಾರ ನಾದ ಹಾಗೂ ಶಂಖನಾದಗೈದರು.

Read More

ಕೋಟ : ಪ್ರಪ್ರಥಮ ಯಕ್ಷಗಾನವನ್ನು ವಿದೇಶಕ್ಕೊಯ್ದ ಶ್ರೇಯಸ್ಸಿನ ಕೋಟದ ಸಾಲಿಗ್ರಾಮ ಮಕ್ಕಳ ಮೇಳ (ರಿ.) ಇದರ ವತಿಯಿಂದ ಸುವರ್ಣ ಪರ್ವ -6ರ ಸರಣಿಯಲ್ಲಿ ಎರಡು ದಿನಗಳ ‘ಕಲೋತ್ಸವ 2025’ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಹಂದೆ ಉಡುಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 31 ಜನವರಿ 2025 ಮತ್ತು 01 ಫೆಬ್ರವರಿ 2025ರಂದು ಕೋಟ ಪಟೇಲರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 31 ಜನವರಿ 2025ರಂದು ಸಂಜೆ 4-00 ಗಂಟೆಗೆ ‘ಯಕ್ಷ ಕಿಶೋರ-ಗಾನ ಮಧುರ’ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇವರಿಂದ ಪ್ರಸ್ತುತಗೊಳ್ಳಲಿದೆ. 5-00 ಗಂಟೆಗೆ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿ ಇವರು ಈ ಕಲೋತ್ಸವ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ರಾಷ್ಟ್ರೀಯ ರಂಗ ನಿರ್ದೇಶಕರಾದ ಡಾ. ಶ್ರೀಪಾದ ಭಟ್ ಇವರಿಗೆ ‘ಹಂದೆ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಹಂದೆ ಕುಟುಂಬದ ಕಲಾವಿದ ಬಂಧುಗಳಿಂದ ಸಂಗೀತ ನೃತ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ. ದಿನಾಂಕ 01 ಫೆಬ್ರವರಿ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಡಾ. ಇರುವೈಲು ರಘುರಾಮ ಅಸ್ರಣ್ಣ ಮತ್ತು ಶ್ರೀಮತಿ ಲೀಲಾ ಅಸ್ರಣ್ಣ ನೆನಪಿನ ದತ್ತಿನಿಧಿ ಉಪನ್ಯಾಸದಲ್ಲಿ ‘ಕೊಡಗಿನ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ’ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 20 ಜನವರಿ 2025ರಂದು ಭಾಗಮಂಡಲ ಹೋಬಳಿಯ ಕೋರಂಗಲದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸವನ್ನು ನೀಡಿದ ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ದಿವಾಕರ್ “ಕೊಡಗು ಜಿಲ್ಲೆಯ ಜನ ಅತ್ಯಂತ ಸಾಮರಸ್ಯದಿಂದ ಬದುಕು ಸಾಧಿಸುವವರು. ಎಲ್ಲೋ ಕೆಲವೆಡೆ ಅಪವಾದವಿರಬಹುದು, ಆದರೆ ನಮ್ಮಲ್ಲಿ ಜಾತಿ ಕೇಳಿ ಮನೆಗೆ ಸೇರಿಸುವ ಪದ್ಧತಿ ಇಲ್ಲ. ಅತ್ಯಂತ ಪ್ರಬುದ್ಧ ಸಾಮರಸ್ಯದ ಬದುಕು ಕೊಡಗಿನಲ್ಲಿದೆ. ಇಂದು ಕೊಡಗಿನಲ್ಲಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಬೇಕಾದಷ್ಟು ಅವಕಾಶಗಳಿದ್ದು, ನಮ್ಮ…

Read More

ಉಡುಪಿ : ಮುದ್ದಣ 155ನೇ ಜನ್ಮದಿನ ಸಂಭ್ರಮದ ಪ್ರಯುಕ್ತವಾಗಿ ದಿನಾಂಕ 24 ಜನವರಿ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಣಿಪಾಲ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಮತ್ತು ಮುದ್ದಣ ಪ್ರಕಾಶನ ನಂದಳಿಕೆ ಇವರ ಜಂಟಿ ಆಶ್ರಯದಲ್ಲಿ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಮುದ್ದಣ ಕವಿ ರಚಿತಂ (ಪರಿಷ್ಕೃತ ತೃತೀಯ ಮುದ್ರಣ-ಟಿಪ್ಪಣಿ ಸಾರ ಸಮೇತ) ಡಾ. ಪಾದೇಕಲ್ಲು ವಿಷ್ಣು ಭಟ್ಟರ ಸಂಪಾದಕತ್ವದಲ್ಲಿ ‘ಶ್ರೀರಾಮಾಶ್ವಮೇಧಂ’ ಹಾಗೂ ಕೆ.ಎಲ್. ಕುಂಡಂತಾಯ ಮತ್ತು ನಂದಳಿಕೆ ಬಾಲಚಂದ್ರ ರಾವ್ ಇವರ ಸಂಪಾದಕತ್ವದಲ್ಲಿ ‘ನಂದಳಿಕೆ ಐಸಿರಿ ದರ್ಶನ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ವಹಿಸಲಿದ್ದು, ಖ್ಯಾತ ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ ಇವರು ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ. ಬಹುಭಾಷಾ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಕೃತಿ…

Read More

ಬಿ.ಸಿ. ರೋಡು : ಮಂಗಳೂರು ಆಕಾಶವಾಣಿ ಕಲಾವಿದರಾದ ಮೌನೇಶ್ ಕುಮಾರ್ ಛಾವಣಿ ಇವರಿಂದ ‘ಉದಯ ಗಾನ’ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಬೆಳಿಗ್ಗೆ 6-00 ಗಂಟೆಗೆ ಬಿ.ಸಿ. ರೋಡಿನಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಗೌತಮ್ ಜಪ್ಪಿನಮೊಗರು ತಬಲಾ ಮತ್ತು ಲೋಕೇಶ್ ಸಂಪಿಗೆ ಕೊಳಲು ಸಾಥ್ ನೀಡಲಿದ್ದಾರೆ. ಡಾ. ವಿಜಯ ನಾರಾಯಣ ತೋಳ್ಪಾಡಿ ಮತ್ತು ಡಾ. ವೀಣಾ ತೋಳ್ಪಾಡಿ ಇವರು ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More