Author: roovari

‘ಕಜ್ಜಾಯ’ವು ಸುನಂದಾ ಬೆಳಗಾಂಕರರ ಮೊದಲ ಸೃಜನಶೀಲ ಕೃತಿಯಾಗಿದೆ. ಎಪ್ಪತ್ತರ ದಶಕದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಸತತವಾಗಿ ಲಲಿತ ಪ್ರಬಂಧಗಳನ್ನು ಬರೆಯುವ ಮೂಲಕ ಸಾಹಿತ್ಯದ ಪಯಣವನ್ನು ಆರಂಭಿಸಿದ ಅವರಿಗೆ ಓದುಗರ ಅಪಾರ ಮೆಚ್ಚುಗೆಯು ದೊರೆಯಿತು. ‘ಕಜ್ಜಾಯ’ ಲಲಿತ ಪ್ರಬಂಧ ಸಂಕಲನವು ಈಗಾಗಲೇ ಐದು ಮುದ್ರಣಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಜ್ಜಾಯದಲ್ಲಿ ಹತ್ತು ಲಲಿತ ಪ್ರಬಂಧಗಳಿವೆ. ಮೇಲುನೋಟಕ್ಕೆ ಲಲಿತಪ್ರಬಂಧ ಎನಿಸಿಕೊಳ್ಳುವ ‘ಮಣ್ಣು’ ಎಂಬ ರಚನೆಯಲ್ಲಿ ಕತೆಯನ್ನು ಹೇಳುವ ತಂತ್ರವನ್ನು ಬಳಸಲಾಗಿದೆ. ಕತೆಯನ್ನು ಆರಂಭಿಸುವ ಲೇಖಕಿಯು ಅದಕ್ಕೆ ತಕ್ಕ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಬಳಿಕ ಹಿಂದೆ ಸರಿದು ಪಾತ್ರವೊಂದರ ಮೂಲಕ ಕತೆಯನ್ನು ಹೇಳುತ್ತಾರೆ. ಮುಂದೆ ಬರಲಿರುವ ದಾರುಣ ಸನ್ನಿವೇಶದ ಸೂಚನೆಯನ್ನು ಕೊಡದೆ ತಿಳಿ ಹಾಸ್ಯದ ಧಾಟಿಯಲ್ಲಿ ಆರಂಭವಾಗುವ ಪ್ರಬಂಧದಲ್ಲಿ ಬರುವ ಮಣ್ಣಿನ ಪ್ರಸ್ತಾಪದಲ್ಲಿ ಮುಂಬರುವ ಸಾವಿನ ಪೀಠಿಕೆಯಿದೆ. ಮಣ್ಣನ್ನು ನೋಡುವಾಗ ಲೇಖಕಿಗೆ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿದ್ದ ದಾನಪ್ಪ-ಹಾಲವ್ವ ದಂಪತಿಯರ ನೆನಪು, ಹೆತ್ತವರನ್ನು ಬಿಟ್ಟು ಮುಂಬಯಿಗೆ ಉದ್ಯೋಗಕ್ಕೆ ಹೋಗಬಯಸುವ ಮಗ ಶ್ರೀಶೈಲ, ಇದೇ ಕೊರಗನ್ನು ಅನುಭವಿಸುತ್ತಾ ಮಣ್ಣಿನಲ್ಲಿ…

Read More

ಉಪ್ಪಿನಂಗಡಿ : ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ ಉಪ್ಪಿನಂಗಡಿಯ ತಮ್ಮ ಸ್ವ ಗೃಹದಲ್ಲಿ ದಿನಾಂಕ 19 ಜುಲೈ 2025ರ ಶನಿವಾರದಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹಿರಿಯ ಪುತ್ರ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ, ಕಿರಿಯ ಪುತ್ರ ಉಪ್ಪಿನಂಗಡಿ ಪಿ. ಎ. ಬ್ಯಾಂಕ್ ನಿರ್ದೇಶಕ ಶ್ರೀರಾಮ ಭಟ್ ಪಾತಾಳ ಸಹಿತ ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಆಗಲಿದ್ದಾರೆ. ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಮೆರೆದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟರು. ಮೂರನೇ ತರಗತಿ ಪೂರೈಸಿ 1951ರಲ್ಲಿ ಜೀವನೋಪಾಯಕ್ಕಾಗಿ ಕಾಂಚನ ನಾಟಕ ಕಂಪನಿಯಲ್ಲಿ ಅಡುಗೆಯವರಾಗಿ ಸೇರಿ ಸಹಜ ಪ್ರತಿಭೆಯಿಂದ ಪ್ರಧಾನ ಸ್ತ್ರೀ ವೇಷ ಪಾತ್ರಧಾರಿಯಾಗಿ ಅವಕಾಶ ಪಡೆದರು. 1953ರಲ್ಲಿ ವೃತ್ತಿ ಮೇಳಕ್ಕೆ ಸೇರಿ 1981ರಲ್ಲಿ ಯಕ್ಷ ರಂಗದಿಂದ ನಿವೃತ್ತಿ ಗೊಳ್ಳುವ ತನಕ ತೆಂಕು…

Read More

ಮನಮೋಹಕ ಅಭಿನಯ ಮತ್ತು ನೃತ್ಯ-ನಟುವಾಂಗಗಳಿಗೆ ಹೆಸರಾದ ನೃತ್ಯಗುರು ಡಾ. ಶ್ರುತಿ ಎನ್. ಮೂರ್ತಿ – ‘ನಾಟ್ಯಭೈರವಿ ನೃತ್ಯ ಶಾಲೆ’ಯ ಹೆಸರಾಂತ ಗುರು. ಇತ್ತೀಚೆಗೆ ಇವರ ನುರಿತ ಗರಡಿಯಲ್ಲಿ ರೂಹು ತಳೆದ ನೃತ್ಯಶಿಲ್ಪ ಕುಮಾರಿ ಸುಪ್ರೀತಾ, ಬೆಂಗಳೂರಿನ ವಿವೇಕ ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ನೆರವೇರಿಸಿಕೊಂಡು ಅತ್ಯಂತ ಮೋಹಕ ಕೃತಿಗಳನ್ನು ವರ್ಣರಂಜಿತವಾಗಿ ಪ್ರದರ್ಶಿಸಿದಳು. ಸುಂದರ ಅಭಿನಯ, ಸೊಗಸಾದ ನೃತ್ತ ಸೌಂದರ್ಯದಿಂದ ಕೂಡಿದ ನಾಟ್ಯ ಮಯೂರಿ ಸುಪ್ರೀತಳ ನೃತ್ಯವೈವಿಧ್ಯ ಕಲಾರಸಿಕರನ್ನು ರಂಜಿಸಿತು. ಕಲಾತ್ಮಕ ‘ಪುಷ್ಪಾಂಜಲಿ’ಯಿಂದ ನೃತ್ಯದ ಶುಭಾರಂಭ ಮಾಡಿ ‘ಗಣೇಶವಂದನೆ’ಯನ್ನು ವಿಶಿಷ್ಟವಾಗಿ ಕಣ್ಮನ ಸೆಳೆದ ಭಾವ-ಭಂಗಿಗಳಿಂದ ನಿರೂಪಿಸಿದಳು. ಆಕೆಯ ಅಂಗಶುದ್ಧ ನರ್ತನವು ‘ಅಲರಿಪು’ವಿನ ಆಂಗಿಕಾಭಿನಯಕ್ಕೆ ಕಳೆಗೊಟ್ಟಿತು. ಗುರು ಶ್ರುತಿ ಅವರ ಲಯಾತ್ಮಕ ನಟುವಾಂಗದ ಬನಿ ಅವಳ ಪಾದಚಲನೆಗೆ, ನೃತ್ತಗಳ ನಿರೂಪಣೆಗೆ ಅಮಿತ ಸ್ಫೂರ್ತಿ ನೀಡಿತು. ಮುಂದೆ ಸಾದರಪಡಿಸಿದ ‘ಕಾಲಭೈರವಾಷ್ಟಕಂ’ ಪರಿಣಾಮಕಾರಿಯಾಗಿ ಝೇಂಕರಿಸಿ, ವಿವಿಧ ಭಾವಗಳ ಸಾಂದ್ರತೆ ಮಡುಗಟ್ಟಿತ್ತು. ಕಲಾವಿದೆಯ ಪ್ರಖರ ಅಭಿನಯ ಶಕ್ತಿಗೆ ಕನ್ನಡಿ ಹಿಡಿಯಿತು. ಪ್ರಸ್ತುತಿಯ ಕೇಂದ್ರಭಾಗ- ‘ಸ್ವಾಮಿಯೇ ವರ ಸೊಲ್ಲಡಿ’ ಎಂಬ ಶೃಂಗಾರ…

Read More

ಉಡುಪಿ : ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರಿಂದ ರಥಬೀದಿ ಗೆಳೆಯರು (ರಿ.) ಉಡುಪಿ ಇವರ ಸಹಯೋಗದಲ್ಲಿ ‘ಅರವಿನ ಬೆಳಕು ಉಪನ್ಯಾಸ ಮಾಲೆ -7’ ಕಾರ್ಯಕ್ರಮವನ್ನು ದಿನಾಂಕ 22 ಜುಲೈ 2025ರಂದು ಸಂಜೆ 4-00 ಗಂಟೆಗೆ ಉಡುಪಿಯ ಹೆನ್ರಿ ಡುನ್ಯಾಂಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ. ಇವರು ಉದ್ಘಾಟನೆ ಮಾಡಲಿದ್ದಾರೆ. ‘ಡಾ. ಶಿವರಾಮ ಕಾರಂತರ ಬದುಕು ಮತ್ತು ಬರಹಗಳ ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉಪನ್ಯಾಸ ನೀಡಲಿದ್ದಾರೆ.

Read More

ಪಡುಕುತ್ಯಾರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವಿಶ್ವಾವಸು ಸಂವತ್ಸರದ ಚಾತುರ್ಮಾಸ್ಯ ವೃತಚಾರಣೆಯಲ್ಲಿ ‘ಹರಿಕಥಾ ಸತ್ಸಂಗ’ವನ್ನು ದಿನಾಂಕ 20 ಜುಲೈ 2025ರಂದು ಅಪರಾಹ್ನ 1-30 ಗಂಟೆಗೆ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠದಲ್ಲಿ ಆಯೋಜಿಸಲಾಗಿದೆ. ಮಂಗಳೂರಿನ ಕುಮಾರಿ ಶ್ರದ್ಧಾ ಗುರುದಾಸ್ ಇವರಿಂದ ನಡೆಯಲಿರುವ ‘ಗುರುಭಕ್ತ ಏಕಲವ್ಯ’ ಹರಿಕಥಾ ಸತ್ಸಂಗಕ್ಕೆ ತಬ್ಲಾದಲ್ಲಿ ಪ್ರಥಮ್ ಆಚಾರ್ಯ, ಹಾರ್ಮೋನಿಯಂನಲ್ಲಿ ಡಾ. ಎಸ್.ಪಿ. ಗುರುದಾಸ್ ಮತ್ತು ಮೋರ್ಸಿಂಗ್ ನಲ್ಲಿ ಸುಧಾಮ ಆಚಾರ್ಯ ಸಹಕರಿಸಲಿದ್ದಾರೆ.

Read More

ಕುಂದಾಪುರ : ಮಗುವಿನ ನಾಮಕರಣದ ಪ್ರಯುಕ್ತ ಕುಂದಾಪುರ ತಾಲೂಕಿನ ಹಾಲಾಡಿಯ ಜಿ. ಶಂಕರ್ ಶಾಲಿನಿ ಸಭಾಂಗಣದಲ್ಲಿ ದಿನಾಂಕ 16 ಜುಲೈ 2025ರಂದು ಯಕ್ಷಗಾನ ಗಾನವೈಭವ ಕಾರ್ಯಕ್ರಮ ಆಯೋಜಿಸಿದ್ದರು. ಪ್ರಸಿದ್ಧ ಕಾಷ್ಠಶಿಲ್ಪಿ ನರಸಿಂಹ ಆಚಾರ್ಯರು ತಮ್ಮ ಪುಟ್ಟ ಮೊಮ್ಮಗಳ ನಾಮಕರಣಕ್ಕಾಗಿ‌ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸಾರಥ್ಯದಲ್ಲಿ ಗಾನವೈಭವ ಸಂಯೋಜಿಸಿದ್ದರು. ಯಕ್ಷಗಾನಲೋಕದ ಕುಚ್ಚಿಕೂ ಗೆಳೆಯರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಪ್ರಸಾದ್ ಕುಮಾರ್ ‌ಮೊಗೆಬೆಟ್ಟು ಭಾಗವತಿಕೆಯಲ್ಲಿದ್ದರೆ, ಮದ್ದಳೆಯಲ್ಲಿ ಶಶಾಂಕ ಆಚಾರ್ಯ, ಚಂಡೆಯಲ್ಲಿ ಪ್ರಜ್ವಲ್‌ ಮುಂಡಾಡಿ ಸಹಕರಿಸಿದ್ದರು. ಯುವ ಅರ್ಥಧಾರಿ, ಕಲಾವಿದ ಸುನಿಲ್ ಹೊಲಾಡು ನಿರೂಪಣೆಯಲ್ಲಿದ್ದರು. ಗಣಪತಿ ಸ್ತುತಿಯೊಂದಿಗೆ ಆರಂಭವಾದ ಗಾನವೈಭವದಲ್ಲಿ ಪೌರಾಣಿಕ ಹಾಗೂ ನೂತನ ಪ್ರಸಂಗಗಳ ಪದ್ಯಗಳು ಉಭಯಭಾಗವತರ ಕಂಠದಲ್ಲಿ ಕರ್ಣಾನಂದಕರವಾಗಿ ಮೊಳಗಿದವು. ಗಾನಕ್ಕೆ ತಕ್ಕಂತೆ ವಾದನಾ ಸಹಕಾರವಿತ್ತು. ಹೊಲಾಡು ಅವರ ನಿರೂಪಣೆಯೂ ಹೃದ್ಯವೆನಿಸಿತ್ತು. ಮಗುವಿನ ಹೆಸರು ಸೂಚಿಸುವ ಮುಹೂರ್ತ ಒದಗಿದಾಗ ಮೊಗೆಬೆಟ್ಟು ಅವರು ತಕ್ಷಣವೇ ಒಂದು ಗೀತೆ ಬರೆದು ಗೆಳೆಯ ಜನ್ಸಾಲೆಯವರ ಕೈಗಿತ್ತರು. ಜನ್ಸಾಲೆ ಭಾಗವತರು ಹಾಡಿಯೇ ಬಿಟ್ಟರು. ಆ ಹಾಡಿನಲ್ಲಿ ಮಗುವಿನ‌…

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಹಾಗೂ ಅತ್ತಾವರ ಸರಕಾರಿ ಹಿರಿಯ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ 109ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಚೇತರವರ ಅಧ್ಯಕ್ಷತೆಯಲ್ಲಿ ದಿನಾಂಕ 18 ಜುಲೈ 2025ರಂದು ಅತ್ತಾವರ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಹಿರಿಯ ಬರಹಗಾರರು ಎನ್. ಸುಬ್ರಾಯ ಭಟ್ ಹಾಗೂ ಶಿಕ್ಷಕಿ ಲೇಖಕಿ ನಿರ್ಮಲ ಉದಯಕುಮಾರ್ ಮುಖ್ಯ ಸಂಪನ್ಮೂಲ ಅತಿಥಿಯಾಗಿ ಮಾತಾಡಿದರು. ಗೌರವ ಅತಿಥಿಗಳಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟ, ಹಿರಿಯ ಯೋಗ ಶಿಕ್ಷಕಿ ದೇವಿಕಾ ಪುರುಷೋತ್ತಮ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪಕೀರರವರು ಹಾಗೂ ಅಮೃತ ಪ್ರಕಾಶ ಪತ್ರಿಕೆ ಸಂಪಾದಕ ಮಂಡಳಿ ಸದಸ್ಯರಾದ ಉಮೇಶ್ ರಾವ್ ಕುಂಬಳೆ, ಅಮೃತ ಪ್ರಕಾಶ ಪತ್ರಿಕೆಯ ಡಾ. ಮಾಲತಿ ಶೆಟ್ಟಿ ಮಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಅರುಣ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಮತ್ತು ಥಿಯೊಸೊಫಿಕಲ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ ಗುರು ಪೂಣಿ೯ಮಾ (ವ್ಯಾಸ ಜಯಂತಿ) ಕಾಯ೯ಕ್ರಮವು ದಿನಾಂಕ 14 ಜುಲೈ 2025ರಂದು ಮಂಗಳೂರಿನ ಬೆಸೆಂಟ್ ಮಂದಿರ(ಥಿಯೊಸೊಫಿಕಲ್ ಸೊಸೈಟಿ) ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡಿ ವ್ಯಾಸ ಭಾರತ ಗ್ರಂಥಕ್ಕೆ ಆರತಿ ಬೆಳಗಿದ ಅ. ಭಾ. ಸಾ. ಪ. ಮಂಗಳೂರು ತಾಲೂಕು ಉಪಾಧ್ಯಕ್ಷ ಹಾಗೂ ಥಿಯೊಸೊಫಿಕಲ್ ಸೊಸೈಟಿ ಅಧ್ಯಕ್ಷರಾದ ವಿದ್ವಾನ್ ಶ್ರೀ ತುಪ್ಪೇಕಲ್ಲು ನರಸಿಂಹ ಶೆಟ್ಟಿ ಮಾತನಾಡಿ “ಗುರು ಎಂಬ ಶಬ್ದವೇ ಅಂಧಕಾರವನ್ನು ಹೊಡೆದೋಡಿಸಿ, ಸುಜ್ಞಾನದ ಸುಗಂಧವನ್ನು ಎಲ್ಲೆಡೆ ಪಸರಿಸುವುದು ಎಂದಥ೯. ವೇದವ್ಯಾಸರು 4 ವೇದಗಳನ್ನು ವಿಂಗಡಿಸಿ ತಮ್ಮ ಶಿಷ್ಯರ ಕೈಯಲಿಟ್ಟು ಜ್ಞಾನವನ್ನು ಎಲ್ಲರಿಗೂ ಉಣಬಡಿಸಿದ ಮಹಾನ್ ಮುನಿಗಳು”. ಎಂದು ವೇದವ್ಯಾಸರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟರು. ಅ. ಭಾ. ಸಾ. ಪ ದ. ಕ ಜಿಲ್ಲೆಯ ಅದ್ಯಕ್ಷರಾದ ಶ್ರೀ ಹರೀಶ್ ಪಿ. ಬಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವಾನ್…

Read More

ಕಾರ್ಕಳ: ಯಕ್ಷದೇಗುಲ ಕಾಂತಾವರದ 23ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಹನ್ನೆರಡು ತಾಸಿನ ಆಟ, ಕೂಟ, ಬಯಲಾಟ “ಯಕ್ಷೋಲ್ಲಾಸ 2025” ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ಕಾಂತಾವರ ಕ್ಷೇತ್ರದಲ್ಲಿ ಬೆಳಿಗ್ಗೆ ಘಂಟೆ 10.00ರಿಂದ ನಡೆಯಲಿದೆ. ಗ್ರಾಮ ಪಂ. ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಬಾರಾಡಿಬೀಡು ಸುಮತಿ ಆರ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಕಾಂತಾವರ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಜೀವಂಧರ್ ಬಲ್ಲಾಳರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಕ್ಷೇತ್ರದ ಬಹು ಸಾಧನೆಯ ನಿವೃತ್ತ ಕಲಾವಿದರಾದ ಬಿ.ಸಿ.ರೋಡು ಶಿವರಾಮ ಜೋಗಿಯವರಿಗೆ ಯಕ್ಷಗಾನದ ಸವ್ಯಸಾಚಿ ‘ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ’ ಹಾಗೂ ಕಟೀಲು ಮೇಳದ ನಿವೃತ್ತ ಕಲಾವಿದ ಗುಂಡಿಮಜಲು ಗೋಪಾಲ ಭಟ್ ಇವರಿಗೆ ‘ಪುತ್ತೂರು ದಿ.ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

Read More

ಕಾಸರಗೋಡು: ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡಮಿ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷಗಾನ ತರಬೇತಿಯ ಸಮಾರೋಪ ಸಮಾರಂಭವು ದಿನಾಂಕ 12 ಜುಲೈ 2025ರಂದು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಭಾಂಗಣದಲ್ಲಿ ನಡೆಯಿತು. ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ವ್ಯವಸ್ಥಾಪಕರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಯಕ್ಷಗಾನ ಕಲಾವಿದ ಸತೀಶ ಅಡಪ ಸಂಕಬೈಲು ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದರು. ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಹಾಗೂ ಯಕ್ಷಗಾನ ಕಲಾವಿದ ವೇಣುಗೋಪಾಲ ಶೇಣಿ ಅಭ್ಯಾಗತರಾಗಿದ್ದರು. ಅಭ್ಯರ್ಥಿಗಳಿಗೆ ಸತೀಶ ಅಡಪ ಸಂಕಬೈಲು ಪ್ರಮಾಣಪತ್ರ ವಿತರಿಸಿದರು. ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕೆ. ಜಗದೀಶ್ ಕೂಡ್ಲು ನಿರೂಪಿಸಿ, ಪ್ರಮಿಳಾ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಗಜೇಂದ್ರ ಮೋಕ್ಷ ಯಕ್ಷಗಾನ ಬಯಲಾಟ ನಡೆಯಿತು.

Read More