Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಅನುದಾನಿತ ಭೋವಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಸೋಮೇಶ್ವರ ಇವರ ಆಶ್ರಯದಲ್ಲಿ ‘ಭಾವೈಕ್ಯ ಸಂಗೀತ ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ದಿನಾಂಕ 22-02-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮೇಶ್ವರ ಉಚ್ಚಿಲ ಮೂರೂರ ಭೋವಿ ಮಹಾಸಭಾ ಅಧ್ಯಕ್ಷ ಹರೀಶ್ ಉಚ್ಚಿಲ “ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುವ ಹೊತ್ತಿನಲ್ಲಿ ಭಾವೈಕ್ಯ ಸಂಗೀತದಂತಹ ಕಲಾ ಪ್ರಕಾರಗಳು ನಡೆದರೆ ಮಕ್ಕಳ ಮನೋವಿಕಾಸಕ್ಕೆ ಉತ್ತಮ ಪರಿಣಾಮ ಬೀರುತ್ತವೆ” ಎಂದು ಅಭಿಪ್ರಾಯಪಟ್ಟರು. ಭೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ರೋಹಿತಾಶ್ವ ಉಚ್ಚಿಲ, ಮುಂಬಯಿ ಸಮಿತಿ ಸಂಚಾಲಕ ಚಂದ್ರಕಾಂತ್ ಉಚ್ಚಿಲ, ನಿರಂಜನ ಸ್ವಾಮಿ ಎಜುಕೇಶನ್ ಟ್ರಸ್ಟಿ ದೀಪಕ್ ಕೋಟ್ಯಾನ್ ಗುರುಪುರ, ಸೋಮೇಶ್ವರ ಪುರಸಭೆ ಸದಸ್ಯ ರವಿಶಂಕರ್, ರಂಗೋಲಿ ಕ್ಯಾಟರರ್ಸ್ ಮಾಲಕ ಹರೀಶ್ ಕುಮಾರ್, ಎಸ್.ಆರ್. ಕ್ಯಾಟರಿಂಗ್ ಮಾಲಕ ವಿಜಯ್, ಶಾಲಾ ಮುಖ್ಯ ಶಿಕ್ಷಕಿ ಮೇಘಲತಾ ಶುಭ ಕೋರಿದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸ್ಥಾಪಕ ಅಧ್ಯಕ್ಷ…
ಕಾಸರಗೋಡು : ಶ್ರೀ ಪುರಂದರ ದಾಸ ಸಂಗೀತ ಕಲಾ ಮಂದಿರ ಕಾಸರಗೋಡು ಇದರ ಆಶ್ರಯದಲ್ಲಿ ದ್ವಿಂಶತಿ ಸಂಗೀತ ಆರಾಧನೋತ್ಸವವು ದಿನಾಂಕ 10-02-2024 ಮತ್ತು 11-02-2024ರಂದು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ವಿಜ್ಬ್ರಂಬಣೆಯಿಂದ ಜರಗಿತು. ಆರಾಧನೆಯಲ್ಲಿ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ, ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಮತ್ತು ಗಾಯಕ ಶಿಖಾಮಣಿ ಹರಿಕೇಶ ನಲ್ಲೂರು ಮುತ್ತಯ್ಯ ಭಾಗವತರ ಕೀರ್ತನೆಗಳನ್ನು ಆಲಾಪಿಸಲಾಯಿತು. ದಿನಾಂಕ 10-02-2024ರಂದು ಬೆಳಗ್ಗೆ 9 ಗಂಟೆಗೆ ಮೃದಂಗ ವಿದ್ವಾನ್ ಡಾ. ಶಂಕರ್ ರಾಜ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜತೆಯಲ್ಲಿ ಕಲ್ಮಾಡಿ ಸದಾಶಿವ ಆಚಾರ್ಯ, ಪ್ರಭಾಕರ್ ಕುಂಜಾರ್, ಟಿ.ಕೆ. ವಾಸುದೇವ ಕಾಞಂಗಾಡ್, ಶ್ರೀಜಿತ್ ಕಾಞಂಗಾಡ್, ಕೆರೆಮನೆ ಮನಮೋಹನ, ಶ್ರೀಮತಿ ಸರಸ್ವತಿ ಕೃಷ್ಣ, ಶ್ರೀಪತಿ ರಂಗಾ ಭಟ್, ಕಲ್ಮಾಡಿ ಪೂರ್ಣಪ್ರಜ್ಞ ಕೆ.ಎಸ್. ಮತ್ತಿತರರು ಪಾಲ್ಗೊಂಡರು. ಕೀರ್ತನಾರಾಧನೆಯ ಉದ್ಘಾಟನಾ ಸಂಗೀತ ಸೇವೆಯು ಶ್ರೀಮತಿ ಸರಸ್ವತಿ ಕೃಷ್ಣನ್ ಮತ್ತು ಬಳಗದವರಿಂದ ಪ್ರಾರಂಭಗೊಂಡು ಕೆರೆಮನೆ ಶ್ರೀ ಮನಮೋಹನ ಮತ್ತು ಬಳಗದವರಿಂದ ಕೊಳಲು ವಾದನ,…
ಮಂಗಳೂರು : ಕಲಾಶಾಲೆ ಸಂಸ್ಥೆ ಮತ್ತು ಸ್ವರಾಲಯ ಸಾಧನಾ ಫೌಂಡೇಶನ್ ಜಂಟಿಯಾಗಿ ಮರೋಳಿಯ ಶ್ರೀ ಸೂರ್ಯ ನಾರಾಯಣ ದೇವಾಲಯದಲ್ಲಿ ಆಯೋಜಿಸಿದ್ದ ‘ದೇವಾಲಯದಲ್ಲಿ ಸ್ವರ ಲಯ’ ಕಾರ್ಯಕ್ರಮವು ದಿನಾಂಕ 25-02-2024ರಂದು ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ವೈದ್ಯ ಡಾ. ಎಂ. ಚಕ್ರಪಾಣಿ ಇವರು ಮಾತನಾಡಿ “ಹಿಂದಿನ ಕಾಲದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ರಾಜಾಶ್ರಯಗಳಿದ್ದವು. ಆದರೆ ಕಾಲ ಬದಲಾಗಿದೆ. ಇಂದು ನಮ್ಮ ದೇವಾಲಯಗಳು ಶಾಸ್ತ್ರೀಯ ಸಂಗೀತಕ್ಕೆ ಆಶ್ರಯ ನೀಡಿ ಪೋಷಿಸುವ ಅಗತ್ಯವಿದೆ. ‘ದೇವಾಲಯದಲ್ಲಿ ಸ್ವರ ಲಯ ಎಂಬುದು ಬಹಳ ಸುಂದರವಾದ ಕಲ್ಪನೆ’ ಎಂದು ಶ್ಲಾಘಿಸಿದ ಅವರು, ಕರ್ನಾಟಕ ಸಂಗೀತ ಭಕ್ತಿ ಪ್ರಧಾನವಾಗಿದೆ. ದೇವರಿಗೂ ಸಂಗೀತವೆಂದರೆ ಪ್ರಿಯ. ಇಲ್ಲಿ ಕೀರ್ತನೆ ಎಂದರೆ ದೇವರನ್ನು ಪೂಜಿಸುವ ಒಂದು ದಾರಿಯೇ ಆಗಿದೆ. ಸಂಗೀತದ ಮೂಲಕ ದೇವರನ್ನು ಪೂಜಿಸಿ ಅನುಗ್ರಹ ಪಡೆಯಬಹುದು. ಈ ನಿಟ್ಟಿನಲ್ಲಿ ದೇವಾಲಯದಲ್ಲಿ ಸ್ವರ ಲಯ ಕಾರ್ಯಕ್ರಮ ಬಹಳ ಪ್ರಸ್ತುತವಾಗಿದೆ. ಸಂಗೀತ ಎಂದರೆ ಎಲ್ಲರೂ ಆನಂದ ಪಡೆಯುವ ಒಂದು ಸುಲಭದ ದಾರಿ. ಆದರೆ ಶಾಸ್ತ್ರೀಯ ಸಂಗೀತ ಎಂದರೆ ಬಹಳ…
ಪುತ್ತೂರು : ತುಳುಕೂಟೊ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ‘ತುಳುವೆರೆ ಮೇಳೊ – 2024’ ಹಾಗೂ ‘ತೆನೆಸ್ ಮೇಳೊ’ ದಿನಾಂಕ 02-03-2024 ಮತ್ತು 03-03-2024ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 02-03-2024ರಂದು ಅಪರಾಹ್ನ 2 ಗಂಟೆಗೆ ‘ತೆನೆಸ್ ಮೇಳೊ’ದಲ್ಲಿ ಬೇರೊದ ಕಲ ಉದಿಪನವನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ, ಮೂಡಾಯಿ ತೆನೆಸ್ದ ಕಲವನ್ನು ವೈದ್ಯ ಡಾ. ಸುರೇಶ್ ಪುತ್ತೂರಾಯ ಹಾಗೂ ಪಡ್ಡಾಯಿ ತೆನೆಸ್ದ ಕಲವನ್ನು ಉದ್ಯಮಿ ಅಭಿಜಿತ್ ಶೆಟ್ಟಿ ಉದಿಪನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಜನ್ಮ ಫೌಂಡೇಶನ್ನ ಡಾ. ಹರ್ಷ ಕುಮಾರ್ ರೈ ಮಾಡಾವು ಭಾಗವಹಿಸಲಿದ್ದಾರೆ. ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಪರಾಹ್ನ 3.30ರಿಂದ ‘ತುಳು ಪದ ನಲಿಕೆ’, 5.30ರಿಂದ ಪುರುಷರಕಟ್ಟೆ ಗುರುಕುಲ ಕಲಾ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ಪಾರ್ತಿಸುಬ್ಬ ವಿರಚಿತ ರಾಮಾಯಣದ ‘ಉಂಗುರ ಸಂಧಿ’ ತಾಳಮದ್ದಳೆಯು ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನ, ಭಾರತಿ ನಗರ ಬನ್ನೂರು ಇಲ್ಲಿ ದಿನಾಂಕ 27-02-2024ರಂದು ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಮತ್ತು ಮಾ. ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಭಾಸ್ಕರ್ ಬಾರ್ಯ), ಲಕ್ಷ್ಮಣ (ಚಂದ್ರಶೇಖರ್ ಭಟ್ ಬಡೆಕ್ಕಿಲ), ಸುಗ್ರೀವ (ದಿವಾಕರ ಆಚಾರ್ಯ ಗೇರುಕಟ್ಟೆ), ತಾರೆ (ಕು೦ಬ್ಳೆ ಶ್ರೀಧರ್ ರಾವ್), ಜಾಂಬವ (ಗುಡ್ಡಪ್ಪ ಬಲ್ಯ), ಸಂಪಾತಿ (ಶುಭಾ ಅಡಿಗ), ಸುಷೇಣ (ಹರಿಣಾಕ್ಷಿ ಜೆ. ಶೆಟ್ಟಿ), ಶಿವ (ಪ್ರೇಮಲತಾ ರಾವ್), ಕಣ್ವಮಹರ್ಷಿ (ಭಾರತಿ ಜಯರಾಮ್), ಹನೂಮಂತ (ಮನೋರಮಾ ಜಿ. ಭಟ್), ಅಂಗದ (ಲಕ್ಷ್ಮಿ ವಿ.ಜಿ. ಭಟ್) ಮತ್ತು ಸ್ವಯಂಪ್ರಭೆ (ಭಾರತಿ ರೈ ಅರಿಯಡ್ಕ) ಸಹಕರಿಸಿದರು. ಟಿ. ರಂಗನಾಥ ಸ್ವಾಗತಿಸಿ, ರಾಜ್ ಗೋಪಾಲ್ ಭಟ್…
ಮಂಗಳೂರು : ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಲಾದ 32ನೇ ವರ್ಷದ ‘ಯಕ್ಷೋತ್ಸವ’ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭವು ದಿನಾಂಕ 25-02-2024ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಯಕ್ಷಗಾನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಆಡಳಿತಾತ್ಮಕ ಸದಸ್ಯ ಶ್ಯಾಮ್ ಭಟ್ ಇವರು ಮಾತನಾಡುತ್ತಾ “ವಿದ್ಯಾವಂತ ಸಮಾಜ ಯಕ್ಷಗಾನ ಕ್ಷೇತ್ರದತ್ತ ಒಲವು ಹೊಂದಿರುವುದು ಉತ್ತಮ ವಿಚಾರ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲೆ ಉಳಿಸಲು ಮುಂದಾಗಿರುವುದು ಅವುಗಳ ಶ್ರೀಮಂತಿಕೆಯನ್ನು ವಿವರಿಸುತ್ತಿದ್ದು. ವಿದ್ಯಾರ್ಥಿಗಳ ಕಲಾ ಜೀವನ ಯಶಸ್ವಿಯಾಗಲಿ. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮುಂದುವರಿಸಲಾಗದವರು ಯಕ್ಷಗಾನ ಕ್ಷೇತ್ರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಇಂದು ಚಿತ್ರಣವೇ ಬದಲಾಗಿದ್ದು, ವಿದ್ಯಾವಂತರು ಯಕ್ಷಗಾನದಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಕಲೆಯ ಬೆಳವಣಿಗೆಗೆ ಪೂರಕ. ಮೂವತ್ತೆರಡು ವರ್ಷಗಳ ಹಿಂದೆಯೇ ಯಕ್ಷಗಾನ ಸ್ಪರ್ಧೆಯನ್ನು ಆರಂಭಿಸಿರುವುದು ಸಂಸ್ಥೆಗೆ ಹಿರಿಮೆ ತಂದಿದೆ. ಎಲ್ಲಾ ತಂಡಗಳು ಒಂದೇ ಪ್ರಸಂಗವನ್ನು ಪ್ರದರ್ಶಿಸಿರುವ…
ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ‘ಕನ್ನಡ ಸಾಹಿತ್ಯೋತ್ಸವ’ ಮತ್ತು ನೂತನ ಕೃತಿಗಳ ಬಿಡುಗಡೆ ಸಮಾರಂಭವು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ದಿನಾಂಕ 25-02-2024ರಂದು ಯಶಸ್ವಿಯಾಗಿ, ಅವಿಸ್ಮರಣೀಯ ರೀತಿಯಲ್ಲಿ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉದ್ಘಾಟಿಸಿ ಶುಭ ಹಾರೈಸಿದರು. ರತ್ನಾ ಟಿ.ಕೆ. ಭಟ್ ಅವರ ರಾಘವೇಂದ್ರ ಚರಿತ್ರೆ (ಮೊದಲ ಕೃತಿ), ಹೊನ್ನ ರಶ್ಮಿ (ಕವನಗಳು), ಹನಿ ಹನಿಗಳ ನಡುವೆ (ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ ಮತ್ತು ಮಿನಿ ಕವನಗಳು), ಮುಂಜಾವಿನ ಧ್ವನಿ (ಗಝಲ್ ಗಳು), ವಚನ ಬಿಂದು (ಆಧುನಿಕ ವಚನಗಳು) ಎಂಬ ಐದು ಕೃತಿಗಳು ಮತ್ತು ಹಾ.ಮ. ಸತೀಶರ ಕೊನೆಯ ನಿಲ್ದಾಣ (ಕವನಗಳು), ಪ್ರಕೃತಿ ಪ್ರೀತಿ ಬದುಕು (ಗಝಲ್ ಗಳು) ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಕೃತಿಗಳು. ‘ಕೊನೆಯ ನಿಲ್ದಾಣ’ ಹಾ.ಮ. ಸತೀಶರ ಹತ್ತನೇ ಕೃತಿಯಾಗಿರುವುದು ಒಂದು ವಿಶೇಷ. ‘ಪ್ರಕೃತಿ ಪ್ರೀತಿ ಬದುಕು’ ಹನ್ನೊಂದನೇ ಕೃತಿ. ಮೂಡಬಿದ್ರೆಯ ಹಿರಿಯ ಉದ್ಯಮಿ ಶ್ರೀಪತಿ…
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 25-02-2024ರಂದು ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಯುವ ಕವಯತ್ರಿ ಪ್ರಿಯಾ ಸುಳ್ಯರವರ ‘ಬಾಳಿಗೆ ಬೆಳಕು’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದ ನ್ಯಾಯವಾದಿಗಳಾದ ಶ್ರೀ ಭಾಸ್ಕರ್ ಕೋಡಿಂಬಾಳ ಅವರು “ಸಾಹಿತ್ಯ ಎನ್ನುವುದು ನಮ್ಮನ್ನ ಬೆಸೆಯುವಂತದ್ದು, ಸಾಹಿತಿಗಳು ಬರೆದಂತೆ ನಡೆಯುವ ಗುಣ ಹೊಂದಿರುವವರಾಗಿದ್ದಲ್ಲಿ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ” ಎಂದು ಕೃತಿಕಾರರನ್ನು ಅಭಿನಂದಿಸಿದರು. ವಿಶೇಷ ಆಹ್ವಾನಿತರಾದ ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ವಸಂತಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ “ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಿರಿಯ ಕಿರಿಯ ಸಾಹಿತಿಗಳನ್ನು ಒಗ್ಗೂಡಿಸಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನೀಯ” ಎನ್ನುತ್ತಾ ಕೃತಿಕಾರರಾದ ಪ್ರಿಯಾ ಸುಳ್ಯ ಅವರನ್ನು ಅಭಿನಂದಿಸಿದರು. ರಾಜಧಾನಿ ದೆಹಲಿಯಲ್ಲಿ ಕನ್ನಡ ಡಿಂಡಿಮವನ್ನು ಮೊಳಗಿಸಿದ ಹಾಗೂ ಕನ್ನಡ ಪರ ಸೇವೆಗಾಗಿ…
ಮಂಗಳೂರು : ಭಿನ್ನ ಸಾಮರ್ಥ್ಯದ ಮಕ್ಕಳ ಸಂಸ್ಥೆಯಾದ ‘ಸಾನಿಧ್ಯ’ ಆಯೋಜಿಸುತ್ತಿರುವ ಎರಡು ದಿನಗಳ ‘ವಿಷನ್ -2024’ ಹಾಗೂ ‘ಸಾನಿಧ್ಯ ಉತ್ಸವ’ ಕಾರ್ಯಕ್ರಮವು ದಿನಾಂಕ 09-03-2024 ಮತ್ತು 10-03-2024 ರಂದು ಮಂಗಳೂರಿನ ಕದ್ರಿ ಉದ್ಯಾನದ ವೇದಿಕೆಯಲ್ಲಿ ನಡೆಯಲಿದೆ. ದಿನಾಂಕ 09-03-2024ರ ಶನಿವಾರದಂದು ಸಂಜೆ ಘಂಟೆ 05.30ಕ್ಕೆ ಸರಿಯಾಗಿ ಸಾನಿಧ್ಯ ವಿಶೇಷ ಮಕ್ಕಳು ತರಬೇತಿದಾರರ ನೆರವಿನಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ‘ವಿಷನ್ -2024’ ಉದ್ಘಾಟನೆಗೊಳ್ಳಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕರಾಗಿರುವ ಶ್ರೀಯುತ ಎ. ಉಸ್ಮಾನ್ ಹಾಗೂ ಸಮಾಜ ಸೇವಕಿ ಶ್ರೀಮತಿ ರೂಪಕಲಾ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಿನಾಂಕ 10-03-2024ರ ಆದಿತ್ಯವಾರದಂದು ನಡೆಯಲಿರುವ ‘ಸಾನಿಧ್ಯ ಉತ್ಸವ’ವನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾಗಿರುವ ವೇದಮೂರ್ತಿ ಶ್ರೀ ಕೆ. ಕಮಲಾದೇವಿ ಪ್ರಸಾದ ಅಸ್ರಣ್ಣನವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಎಸ್. ಶೆಟ್ಟಿ ಆಂಡ್ ಕಂ. ಮುಂಬೈ ಇದರ ಆಡಳಿತ ನಿರ್ದೇಶಕ ಹಾಗೂ ಲೆಕ್ಕ ಪರಿಶೋಧಕರಾಗಿರುವ…
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ ‘ಮಲಬಾರ್ ವಿಶ್ವರಂಗ ಪುರಸ್ಕಾರ 2024ಕ್ಕೆ ‘ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ. ನಾಟಕ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಆರ್. ಎಲ್. ಭಟ್ ಉಡುಪಿ ಇವರಿಗೆ, ರಂಗ ನಿರ್ದೇಶಕರಾದ ಕೆ. ವಿ. ರಾಘವೇಂದ್ರ ಐತಾಳ್ ಮುಂಬೈ, ರಂಗ ಸಂಘಟಕರಾದ ಕಜೆ ರಾಮಚಂದ್ರ ಭಟ್, ರಂಗ ಸಂಘಟಕರು ಹಾಗೂ ನಿರ್ದೇಶಕರಾದ ಎಸ್. ವಿ. ರಮೇಶ್ ಬೇಗಾರ್ ಹಾಗೂ ರಂಗ ನಟಿಯಾದ ಸುಜಾತ ಶೆಟ್ಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಗೆ ದಿನಾಂಕ 26-03-2024 ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ-2024’ ಪ್ರಧಾನ ಮಾಡಲಾಗುವುದು ಎಂದು ಮಲಬಾರ್ ವಿಶ್ವರಂಗ ಪುರಸ್ಕಾರ ಸಮಿತಿಯ ಸಂಚಾಲಕರಾದ ರಾಜೇಶ್ ಭಟ್ ಪಣಿಯಾಡಿ ತಿಳಿಸಿರುತ್ತಾರೆ.…