Author: roovari

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಶರಸೇತು ಬಂಧನ’ ಪ್ರಸಂಗದೊಂದಿಗೆ ದಿನಾಂಕ 21 ಅಕ್ಟೋಬರ್ 2025ರ ಮಂಗಳವಾರ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ನಿತೀಶ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಹಂದ್ರಟ್ಟ, ಸಮರ್ಥ ವಿಷ್ಣು ಈಶ್ವರಮಂಗಲ ಭಾಗವಹಿಸಿದರು. ಅರ್ಜುನನಾಗಿ ಭಾಸ್ಕರ ಬಾರ್ಯ ಹಾಗೂ ಮಾಂಬಾಡಿ ವೇಣುಗೋಪಾಲ ಭಟ್, ಹನುಮಂತನಾಗಿ ಗುಡ್ಡಪ್ಪ ಬಲ್ಯ, ವೃದ್ಧ ವಿಪ್ರನಾಗಿ ದುಗ್ಗಪ್ಪ ಯನ್., ಶ್ರೀರಾಮನಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಪಾತ್ರಗಳನ್ನು ಪೋಷಿಸಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿಡುಗಳ ಕೃಷ್ಣ ಭಟ್ ಜೋಡುಕಟ್ಟೆ ಪ್ರಾಯೋಜಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ಅಗಲಿದ ನಾಡಿನ ಹೆಸರಾಂತ ಭಾಗವತ ದಿನೇಶ ಅಮ್ಮಣ್ಣಾಯ ಇವರಿಗೆ ನುಡಿ ನಮನ ಸಲ್ಲಿಸಲಾಯಿತು. ಭಾಸ್ಕರ ಬಾರ್ಯ ಹಾಗೂ ಗುಡ್ಡಪ್ಪ ಬಲ್ಯ…

Read More

ಮಂಗಳೂರು : ಕೊಟ್ಟಾರದ ಭರತಾಂಜಲಿಯ ಕಿಂಕಿಣಿ ತ್ರಿಂಶತ್ ಸಂಭ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆ ‘ನೃತ್ಯ ರತ್ನ ಶೋಧ 2025’ ಕಾರ್ಯಕ್ರಮವು ದಿನಾಂಕ 18 ಅಕ್ಟೋಬರ್ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಈ ಭರತನಾಟ್ಯ ಸ್ಪರ್ಧೆಗೆ ಚಾಲನೆ ನೀಡಿದ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಇವರು ಮಾತನಾಡುತ್ತಾ “ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಆಯೋಜಿಸಿರುವುದರಿಂದ ಭರತನಾಟ್ಯದ ವಿವಿಧ ಬಾಣಿ (ಶೈಲಿ)ಗಳು ಒಂದೇ ವೇದಿಕೆಯಲ್ಲಿ ಅನಾವರಣಗೊಂಡಿದೆ. ದೇಶದ ನಾನಾ ಭಾಗದಲ್ಲಿನ ಗುರುಗಳ ಭರತನಾಟ್ಯ ಶೈಲಿಯು ಒಂದೇ ವೇದಿಕೆಯಲ್ಲಿ ಪ್ರಸ್ತುತವಾಗುವ ಮೂಲಕ ನೃತ್ಯನಂದನವನದ ಅನಾವರಣಗೊಂಡಿತು” ಎಂದು ಹೇಳಿದರು. “ಶಾಸ್ತ್ರೀಯತೆ ಹಾಗೂ ಯುವಪ್ರತಿಭೆಗಳ ಸ್ಪರ್ಧಾತ್ಮಕ ಮತ್ತು ಪ್ರದರ್ಶನಾತ್ಮಕ ವಿಚಾರಗಳಲ್ಲಿ ಒಂದು ಪ್ರಮುಖ ಘಟನೆಯಾಗಿ ಹೊರಹೊಮ್ಮಿದೆ. ರಾಷ್ಟ್ರಮಟ್ಟದ ಸ್ಪರ್ಧೆಯು ಕಲಾವಿದರಿಗೆ ತಮ್ಮ ನೈಪುಣ್ಯವನ್ನು ಪ್ರಸ್ತುತ ಪಡಿಸಲು ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಾಪಾಡಿ ಮುಂದುವರಿಸಲು ಪ್ರೇರಣೆಯಾಗಿದೆ. ಈ ಸ್ಪರ್ಧೆಯು ರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಗಳು ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ನಿರ್ಮಿಸಿದೆ” ಎಂದು ತೀರ್ಪುಗಾರರಾಗಿ ಆಗಮಿಸಿದ ಬೆಂಗಳೂರಿನ ನೃತ್ಯ…

Read More

ಮಂಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಎಂ. ಸಿ. ಸಿ. ಬ್ಯಾಂಕ್‌ ಲಿ., ಹಂಪನ್‌ಕಟ್ಟ ಇದರ ಸಭಾಂಗಣದಲ್ಲಿ ದಿನಾಂಕ 19 ಅಕ್ಟೋಬರ್ 2025ರಂದು ಸಾಹಿತ್ಯ ಭಂಡಾರ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಲು, ಸರಕಾರವು ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. ಕೊಂಕಣಿಯಲ್ಲಿ ವಿವಿಧತೆಯನ್ನು ಕಾಪಾಡಲು ಹಾಗೂ ಕೊಂಕಣಿಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಅಕಾಡೆಮಿಯು ನಿರಂತರವಾಗಿ ಕೆಲಸ ಮಾಡುತ್ತಿದೆ. ಅಕಾಡೆಮಿಯು ಸಾಹಿತಿಗಳಿಂದ ಪುಸ್ತಕಗಳನ್ನು ಪಡೆದು, ಪರಿಶೀಲಿಸಿ, ಸೂಕ್ತ ಪುಸ್ತಕಗಳನ್ನು ಆಯ್ದು, ಪ್ರಕಟಿಸಿ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅಕಾಡೆಮಿಯು ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ, ಅವರನ್ನು ಗೌರವಿಸುತ್ತಾ ಬಂದಿದೆ. ಯಾರಾದರೂ ಹಿರಿಯ ಸಾಹಿತಿಗಳಿದ್ದಲ್ಲಿ ನಮಗೆ ತಿಳಿಸಿ, ಅವರನ್ನು ಖಂಡಿತ ಭೇಟಿ ಮಾಡುತ್ತೇವೆʼ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಜವಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯ ನ್ಯೂಡೆಲ್ಲಿ…

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 26 ಅಕ್ಟೋಬರ್ 2025ರ ಆದಿತ್ಯವಾರದಂದು ಮಧ್ಯಾಹ್ನ 1-00ಗೆ ಶ್ರೀ ಜಯರಾಮ ದೇವಸ್ಯ ಬಳಗದಿಂದ ಯಕ್ಷಗಾನ ತಾಳಮದ್ದಳೆ, ತದನಂತರ ಸದಸ್ಯ ಸಮಾವೇಶ ಜರಗಲಿದೆ. ಸಂಜೆ 4-00 ಗಂಟೆಗೆ ನಡೆಯುವ ಸಮಾವೇಶದ ಆಶೀರ್ವಚನ ಮತ್ತು ದೀಪ ಪ್ರಜ್ವಲನೆಯನ್ನು ಒಡಿಯೂರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣಯ್ಯ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯರ ರಂಗಭೂಮಿ ತಜ್ಞರಾದ ಶ್ರೀ ಮೂರ್ತಿ ದೇರಾಜೆ, ವಿದ್ವಾಂಸರು- ತಾಳಮದ್ದಲೆ ಅರ್ಥದಾರಿ-ಪ್ರವಚನಕಾರರದ ಶ್ರೀ ಉಜಿರೆ ಅಶೋಕ ಭಟ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸತೀಶ ಅಡಪ ಸಂಕಬೈಲು, ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶೀನ ಶೆಟ್ಟಿ ಕಜೆ ಪ್ರತಿಷ್ಠಾನದ ಪ್ರೋತ್ಸಾಹಕರಾದ ಕಾಸರಗೋಡಿನ ಹಿರಿಯ ಕವಿ ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ ಹಾಗೂ ಶ್ರೀ ವಾಸುದೇವ ಕಾರಂತ ಉಜಿರೆಕೆರೆ ಭಾಗವಹಿಸಲಿದ್ದಾರೆ. ಸಂಜೆ ಗಂಟೆ…

Read More

ಮಂಗಳೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷೋತ್ಸವ ಸಮಿತಿ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾಗವತ ದಿನೇಶ ಅಮ್ಮಣ್ಣಾಯ ಇವರಿಗೆ ‘ನುಡಿ ನಮನ’ ಕಾರ್ಯಕ್ರಮವು ದಿನಾಂಕ 18 ಅಕ್ಟೋಬರ್ 2025ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಯಕ್ಷಾಂಗಣದ ಕಾರ್ಯಾಧ್ಯಕ್ಷ, ಹಿರಿಯ ಅರ್ಥಧಾರಿ ಪ್ರೊ‌. ಭಾಸ್ಕರ ರೈ ಕುಕ್ಕುವಳ್ಳಿ “ಯಕ್ಷಗಾನ ರಂಗದ ಬೆರಳೆಣಿಕೆಯ ಮಹಾನ್ ಭಾಗವತರಲ್ಲಿ ದಿನೇಶ ಅಮ್ಮಣ್ಣಾಯರು ಪ್ರಮುಖರು. ಅವರದು ಶತಮಾನದ ಗಾನ. ಸಂಗೀತ ವಿದ್ವಾನ್ ಬಿ. ದಾಮೋದರ ಮಂಡೆಚ್ಚರ ಸಮರ್ಥ ಉತ್ತರಾಧಿಕಾರಿಯಾಗಿ ಯಕ್ಷ ಸಂಗೀತದ ಶ್ರೇಷ್ಠ ಮಾದರಿಯನ್ನು ನೀಡಿದ ಅವರು ನಿಜಾರ್ಥದಲ್ಲಿ ರಸರಾಗ ಚಕ್ರವರ್ತಿ’ ಎಂದು ಹೇಳಿ ‘ಅಮ್ಮಣ್ಣಾಯರ ನಿರ್ಗಮನ ಕೇವಲ ಅವರ ಕುಟುಂಬಕ್ಕೆ ಆದ ನಷ್ಟವಲ್ಲ; ಅದು ಕರಾವಳಿ ಕರ್ನಾಟಕದ ಸಮಗ್ರ ಕಲಾ ರಂಗಕ್ಕಾದ ದೊಡ್ಡ ನಷ್ಟ” ಎಂದು ಖೇದ ವ್ಯಕ್ತಪಡಿಸಿದರು. ಕರ್ನಾಟಕ ಮೇಳದಲ್ಲಿ ಅಮ್ಮಣ್ಣಾಯರ ಒಡನಾಡಿ ಕಲಾವಿದರಾದ ಖ್ಯಾತ ಸ್ತ್ರೀ ವೇಷಧಾರಿ ಸಂಜಯ ಕುಮಾರ್ ಶೆಟ್ಟಿ…

Read More

ಬೆಂಗಳೂರು : ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್, ಬೇವಿನಹಳ್ಳಿಯ ‘ಜಿಗುರು’ ತಂಡ ಮತ್ತು ‘ಜಂಗಮ ಕಲೆಕ್ಟಿವ್’ ಇವರ ಸಹಯೋಗದಲ್ಲಿ ‘ರುಮುರುಮುರುಮು’ ಪೂರ್ವಿಕರ ನಾದ ದಿನಾಂಕ 24 ಅಕ್ಟೋಬರ್ 2025ರಂದು ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ಇಲ್ಲಿ ಪ್ರದರ್ಶನ ನೀಡುತ್ತಿದೆ. ಶಿರಾ ಸೀಮೆಯ ‘ಬೇವಿನಹಳ್ಳಿ’ಯ ಅಪ್ರತಿಮ ಅರೆ ಮತ್ತು ನಾದಸ್ವರದ ಕಲಾವಿದರು ತಮ್ಮ ಕಲೆ ಮತ್ತು ಬದುಕಿನ ಅನುಭವಗಳನ್ನು ಬೆಸೆದುಕೊಂಡು ಕಟ್ಟಿರುವ ವಿಶೇಷ ಪ್ಯೋಗ. ಹೊಸ ತಲೆಮಾರಿನ ಅನನ್ಯ ನಟಿ, ಬರಹಗಾರ್ತಿ, ಸಿನಿಮಾ ನಿರ್ದೇಶಕಿ ‘ಶ್ರದ್ದಾ ರಾಜ್’ ಇವರು ತಿಂಗಳ ಕಾಲ ಬೇವಿನಹಳ್ಳಿಯಲ್ಲಿ ಇದ್ದು ವಿಭಿನ್ನ ಪ್ರಕ್ರಿಯೆಯಲ್ಲಿ ಈ ನಾಟಕವನ್ನು ಕಟ್ಟಿದ್ದಾರೆ. ತಳ ಸಮುದಾಯಗಳ ಕಲೆ ಮತ್ತು ಕಲಾವಿದರ ಜೊತೆಗಿನ ಒಡನಾಟವನ್ನು ಒಂದು ಸಾಂಸ್ಕೃತಿಕ ಚಳುವಳಿಯೆಂದು ಭಾವಿಸಿ ಜಂಗಮ ತಂಡ ಹಿಂದೆ ‘ಕೇರಿ-ಹಾಡು’ ಪ್ರಯೋಗವನ್ನು ಮಾಡಿತ್ತು. ಚಂದ್ರಶೇಕರ್ ಇವರು ದಿಂಡಗೂರಿನ ‘ಸಾವಿತ್ರಿ ಬಾಫುಲೆ ಮಹಿಳಾ ಸ್ವಸಹಾಯ ತಂಡ’ಕ್ಕೆ ಅದನ್ನು ನಿರ್ದೇಶಿಸಿದ್ದರು. ಪ್ರಸ್ತುತ ಅರೆಯ ನಾದ ಮತ್ತು ಬದುಕಿನ ‘ರುಮುರುಮುರುಮು’ ಜಂಗಮ ಭಾವಿಸುವ ಸಾಂಸ್ಕೃತಿಕ ಚಳುವಳಿಯ ಮುಂದುವರಿಕೆ.

Read More

ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ.) ದೇಲಂಪಾಡಿ ಇದರ ವತಿಯಿಂದ 81ನೆಯ ವಾರ್ಷಿಕೋತ್ಸವವನ್ನು ದಿನಾಂಕ 25 ಅಕ್ಟೋಬರ್ 2025ರಂದು ಬೆಳಗ್ಗೆ 8-00 ಗಂಟೆಗೆ ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ‘ಕನ್ನಡಿಯಲ್ಲಿ ಕನ್ನಡಿಗ’ ಐದನೇ ಸಂಚಿಕೆ ಬಿಡುಗಡೆ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ಬೆಳಗ್ಗೆ 9-30 ಗಂಟೆಗೆ ಸಂಘದ ಸದಸ್ಯರು ಮತ್ತು ಸ್ಥಳೀಯ ಪ್ರತಿಭೆಗಳಿಂದ ಶ್ರೀಮದ್ಭಗವದ್ಗೀತಾ ಪಾರಾಯಣ, ಕುಣಿತ ಭಜನೆ, ಯಕ್ಷಗಾನಾರ್ಚನೆ ಮತ್ತು ನೃತ್ಯಾರ್ಚನೆ ಪ್ರಸ್ತುತಗೊಳ್ಳಲಿದೆ. ಡಾ. ಪ್ರಮೀಳಾ ಮಾಧವ್ ಸಂಪಾದಿಸಿದ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿಯನ್ನು ಹಿರಿಯ ವಿದ್ವಾಂಸ ಪ್ರೊ. ವಿ.ಬಿ. ಅರ್ತಿಕಜೆ ಇವರು ಬಿಡುಗಡೆ ಮಾಡಲಿದ್ದಾರೆ. ಅಪರಾಹ್ನ 2-15 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಂಜೆ 4-30 ಗಂಟೆಗೆ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಶ್ರೀ ಕೃಷ್ಣಾನುಗ್ರಹ’ ಮತ್ತು…

Read More

ಹೊನ್ನಾವರ : ಶ್ರೀ ಮಹಾಗಣಪತಿ ಟ್ರಸ್ಟ್ (ರಿ.) ಕೈಕಟ್ಗೇರಿ ಸಂಯೋಜನೆಯಲ್ಲಿ ‘ಯಕ್ಷಶ್ರಾವ್ಯ’ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ 25 ಅಕ್ಟೋಬರ್ 2025ರಂದು ಸಂಜೆ 4-30 ಗಂಟೆಗೆ ಹೊನ್ನಾವರ ಸಾಲ್ಕೊಡ್ ಶ್ರೀ ಬೆಣ್ಣೆಗಣಪತಿ ಸಭಾಭವನ ಕೊಡಾರಿಯಲ್ಲಿ ಆಯೋಜಿಸಲಾಗಿದೆ. ‘ಪಟ್ಟಾಭಿಷೇಕ’ ಎಂಬ ಪ್ರಸಂಗದ ಹಿಮ್ಮೇಳದಲ್ಲಿ ಸುಧೀರ್ ಭಟ್ಟ ಪೆರ್ಡೂರು ಭಾಗವತರು, ನಾಗರಾಜ ಭಂಡಾರಿ ಹಿರೇಬೈಲ್ ಮದ್ದಲೆ ಮತ್ತು ನಯನ ಕುಮಾರ ನಿಟ್ಟೂರು ಚಂಡೆಯಲ್ಲಿ ಹಾಗೂ ಮುಮ್ಮೇಳದಲ್ಲಿ ವಿಶ್ವೇಶ್ವರ ಭಟ್ಟ ಸುಣ್ಣಂಬಳ, ವಿದ್ವಾನ್ ಶ್ರೀ ಗಣಪತಿ ಭಟ್ಟ ಸಂಕದಗುಂಡಿ, ಪವನ ಕಿರಣ್ಕೆರೆ ಮತ್ತು ಪ್ರಸಾದ ಭಟ್ಕಳ ಇವರುಗಳು ಸಹಕರಿಸಲಿದ್ದಾರೆ.

Read More

ಸುಬ್ರಹ್ಮಣ್ಯ: ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ 16 ನವೆಂಬರ್ 2025ರಂದು ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಈ ಸಂಬಂಧ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಪಂಜ ಹೋಬಳಿಯ ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಕೂತ್ಕುಂಜ, ಮುರುಳ್ಯ, ಐವತೊಡ್ಲು, ಪಂಬೆತ್ತಾಡಿ ಹಾಗೂ ಸುಳ್ಯ ಹೋಬಳಿಯ ಕಲ್ಮಡ್ಕ, ಕಳಂಜ, ಬಾಳಿಲ, ಅಮರ ಮುನ್ನೂರು, ಅಮರ ಪಡೂರು, ನೆಲ್ಲೂರು ಕೆಮ್ರಾಜೆ ಮತ್ತು ಮಡಪ್ಪಾಡಿ ಗ್ರಾಮಗಳ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಹಾಗೂ ಭಾಷೆಗೆ ಸಂಬಂಧಿಸಿದ ಕವನಗಳ ಜೊತೆಗೆ ತಮ್ಮ ಸ್ವ-ಪರಿಚಯವನ್ನು ಕಳುಹಿಸಬಹುದು. ಕವನ ಕಳುಹಿಸಲು ಅಕ್ಟೋಬರ್ 23ಕೊನೆಯ ದಿನ. ಆಯ್ಕೆಯಾದ ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಇದೆ. ಕವನಗಳನ್ನು ಕಳುಹಿಸುವವರು ಯೋಗೀಶ್ ಹೊಸೊಳಿಕೆ ಅವರ ಮೊಬೈಲ್ ಸಂಖ್ಯೆ 9449576632ಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಬೇಕೆಂದು ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪಂಜ ಹೋಬಳಿ…

Read More

ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತ್ರೈ ಮಾಸಿಕ ‘ಕೊಡವೋಲೆ’ ಸಂಚಿಕೆ ಪ್ರಕಟಿಸಲಾಗುತ್ತಿದ್ದು ಸ್ವ-ರಚಿತ ಬರಹಗಳನ್ನು ಆಹ್ವಾನಿಸಲಾಗಿದೆ. ಆ ದಿಸೆಯಲ್ಲಿ ಈವರೆಗೆ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕ, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ, ಸಂಶೋಧನಾ ಲೇಖನಗಳನ್ನು ಕಚೇರಿ ಮೊಬೈಲ್ ಸಂಖ್ಯೆ – 8762942976 ಅಥವಾ ಇ-ಮೇಲ್ [email protected] ಗೆ ನುಡಿ ಫಾಂಟ್ ಅಲ್ಲಿ ಟೈಪ್ ಮಾಡಿ ಇಲ್ಲವೆ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು 10 ನವೆಂಬ‌ರ್ 2025 ರೊಳಗೆ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿ ಮಡಿಕೇರಿ-571201 ಈ ಕಚೇರಿಗೆ ತಲುಪಿಸಬಹುದು . ಅರ್ಹವಾದುದ್ದನ್ನು ‘ಕೊಡವೋಲೆ’ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬರಹಗಾರರು ಬರೆದು ಕಳುಹಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್‌ಬುಕ್ ಪ್ರತಿಯನ್ನು ನೀಡಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ…

Read More