Author: roovari

ಮೈಸೂರು : ರೋಟರಿ ಮೈಸೂರು ಉತ್ತರ ಹಾಗೂ ಕದಂಬ ರಂಗವೇದಿಕೆ ಇದರ ವತಿಯಿಂದ ‘ರೋಟರಿ- ಕದಂಬ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 17 ಜನವರಿ 2025ರಂದು ಜೆ.ಎಲ್‌.ಬಿ. ರಸ್ತೆಯ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಮಾತನಾಡಿ “ಕನ್ನಡ ರಂಗಭೂಮಿಯು ವಿಶ್ವದಲ್ಲೇ ವಿಶಿಷ್ಟ ಗೌರವಕ್ಕೆ ಪಾತ್ರವಾಗಿದ್ದು, ಅದಕ್ಕೆ ಇಲ್ಲಿನ ಮಣ್ಣಿನ ಗುಣ ಹಾಗೂ ಜಾನಪದ ಕಾರಣ. ಮೈಸೂರಿನಲ್ಲಿ ರಾಜರ ಕಾಲದಿಂದ ನಾಟಕಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಗುಬ್ಬಿ ವೀರಣ್ಣ ಕಂಪನಿಯನ್ನು ಕರೆಸಿ, ಜಗನ್ಮೋಹನ ಅರಮನೆಯಲ್ಲಿ ರಾಜರು ನಾಟಕ ಮಾಡಿಸಿ ಪ್ರೋತ್ಸಾಹಿಸಿದ್ದರು. ಈಗಲೂ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿದರೆ ಜನ ಬೆಂಬಲ ನೀಡುತ್ತಾರೆ. ಉತ್ತಮ ನಾಟಕಕ್ಕೆ ಸೋಲೇ ಇಲ್ಲ. ಜನ ಬರುತ್ತಾರೆ. ಸುಳ್ಳನ್ನು ಹೇಳುತ್ತಲೇ ಸತ್ಯವನ್ನು ಅನಾವರಣ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಆ ಮೂಲಕ ಉತ್ತಮ ಸಂಸ್ಕಾರ ರೂಪಿಸಲು ನೆರವಾಗುತ್ತಿದೆ. ರೋಟರಿ ಸಂಸ್ಥೆಯವರು ಕೇವಲ…

Read More

ಬೆಳಗಾವಿ : ಲಿಂ. ಶ್ರೀ ರಾಮಪ್ಪ ಬಸಪ್ಪ ಅಜೂರ ಮತ್ತು ಲಿಂ. ಶ್ರೀಮತಿ ಗಂಗಮ್ಮ ರಾಮಪ್ಪ ಅಜೂರ ಇವರ ಗಂಗಾರಾಮೋತ್ಸವ 35 ಹಾಗೂ ಅಜೂರ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 26 ಜನವರಿ 2025ರಂದು ಮುಂಜಾನೆ 10-00 ಗಂಟೆಗೆ ಬೆಳಗಾವಿಯ ಅಜೂರ ತೋಟದ ಮಹಾಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮುಗಳಖೋಡ ಜಿಡಗಾ ಶ್ರೀ ಶ್ರೀ ಶ್ರೀ ಷ.ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಇವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಬಾಗ ಹಂದಿಗುಂದ ಆಡಿ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಲಿರುವರು. ಕಾರವಾರದ ಶ್ರೀ ಎ.ಎನ್. ರಮೇಶ ಗುಬ್ಬಿ, ಮಡಿಕೇರಿಯ ಶ್ರೀಮತಿ ಕೃಪಾ ದೇವರಾಜ್, ಬಳ್ಳಾರಿಯ ಶ್ರೀಮತಿ ಎ.ಎಂ. ಜಯಶ್ರೀ, ಹುನಗುಂದದ ಡಾ. ತಿಪ್ಪೆಸ್ವಾಮಿ ಡಿ.ಎಸ್., ಮಹಾಲಿಂಗಪೂರದ ಡಾ. ಅಶೋಕ ನರೋಡೆ, ಇಟಗಿ ಬೆಳಗಾವಿಯ ಶ್ರೀ ವಿಜಯ ಬಡಿಗೇರ, ಗದಗ ಜಂತಲಿ-ಶಿರೂರು ಶ್ರೀಮತಿ ಭಾಗ್ಯಶ್ರೀ ಗವಿಶಿದ್ದಯ್ಯಾ ಹಳ್ಳಿಕೇರಿಮಠ, ಹಿಡಕಲ್ಲ ಶ್ರೀ ಟಿ.ಎಸ್. ವಂಟಗುಡಿ ಮತ್ತು ಜಮಖಂಡಿ ಡಾ. ಮಂಜುನಾಥ ಎಸ್. ಪಾಟೀಲ ಇವರುಗಳಿಗೆ ಅಜೂರ…

Read More

ಕಟೀಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಇದರ ವತಿಯಿಂದ ‘ಪೇಜಾವರ ಸದಾಶಿವ ರಾವ್ ನೆನಪು’ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಸಂಜೆ 4-00 ಗಂಟೆಗೆ ಪೇಜಾವರ ಸದಾಶಿವ ರಾಯರಿದ್ದ ಕಟೀಲಿನ ಮನೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಬರಹಗಾರರಾದ ಡಾ. ಜನಾರ್ದನ ಭಟ್ ಇವರು ಪೇಜಾವರರ ಕುರಿತು ಮಾತನಾಡಲಿದ್ದಾರೆ. ಶ್ರೀಮತಿ ಶೈಲಜಾ ಇವರಿಂದ ಪೇಜಾವರರ ಕಥೆಯ ಓದು ಮತ್ತು ಶ್ರೀಮತಿ ಜ್ಯೋತಿ ಉಡುಪ ಮತ್ತು ಬಳಗದವರಿಂದ ಪೇಜಾವರರ ಕವಿತೆಗಳ ಗಾಯನ ನಡೆಯಲಿದೆ.

Read More

ಮಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ ನಾ. ಡಿಸೋಜ ಇವರ ಶ್ರದ್ಧಾಂಜಲಿ ಸಭೆಯು ದಿನಾಂಕ 18 ಜನವರಿ 2025ರಂದು ಮಂಗಳೂರಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆಯಿತು. ಮಾತನಾಡಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನಾ. ಡಿ’ಸೋಜರವರ ಪ್ರಕೃತಿ ಜೊತೆ ಸಂಬಂಧ ಮತ್ತು ಬಡವ, ದೀನರನ್ನು ಹಿಂಸಿಸಿದ ಚಿತ್ರವನ್ನು ಅವರ ಕೃತಿಗಳಲ್ಲಿ ವರ್ಣಿಸಿದ ಬಗೆ, ಮಕ್ಕಳ ಸಾಹಿತ್ಯದಲ್ಲಿ ಅವರ ಆಸಕ್ತಿಗಳ ಬಗ್ಗೆ ಮಾತಾನಾಡಿದರು. ಇದೇ ಸಂದರ್ಭದಲ್ಲಿ ದೈವಾಧೀನರಾದ ಕೊಂಕಣಿ ಸಾಹಿತಿಗಳಾದ ಶ್ರೀ ಲುವಿಸ್‌ ಡಿ. ಅಲ್ಮೆಡಾ ಮತ್ತು ಶ್ರೀ ಎಮ್. ಪಿ. ರೊಡ್ರಿಗಸ್‌ ಇವರಿಗೂ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಸರ್ವರೂ ಗೌರವಪೂರ್ವಕವಾಗಿ ನಾ. ಡಿ’ಸೋಜರವರಿಗೆ ಹೂಗಳನ್ನು ಅರ್ಪಿಸಿ ಶೃದ್ದಾಂಜಲಿ ನೀಡಿದರು. ದಿ. ನಾ. ಡಿಸೋಜರವರ ಜೀವನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಗಳ ಬಗ್ಗೆ ಕವಿ, ಸಾಹಿತಿಗಳಾದ ಶ್ರೀ ವಿಕ್ಟರ್‌ ಮಥಾಯಸ್‌(ವಿತೊರಿ ಕಾರ್ಕಳ) ಶ್ರದ್ಧಾಂಜಲಿ ಭಾಷಣವನ್ನು…

Read More

ಬೆಂಗಳೂರು: ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 19 ಜನವರಿ 2025ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಮರಾಠಿ ಅನುವಾದಕಿ ಹಾಗೂ ಲೇಖಕಿಯಾದ ಉಮಾ ಕುಲಕರ್ಣಿ ಮಾತನಾಡಿ “ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಬರಹದ ಶೈಲಿ ಭಿನ್ನವಾಗಿದೆ. ಇದರಿಂದಾಗಿಯೇ ಅವರಿಗೆ ಮರಾಠಿಯಲ್ಲಿ ದೊಡ್ಡ ಓದುಗರ ವಲಯವಿದೆಯೇ ಹೊರತು, ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪ್ರಬಲವಾಗಿರುವುದು ಕಾರಣವಲ್ಲ. ಮಹಾರಾಷ್ಟ್ರದಲ್ಲಿ ಆರೆಸ್ಸೆಸ್‌ ಪ್ರಬಲವಾಗಿರುವುದರಿಂದ ಅಲ್ಲಿ ಭೈರಪ್ಪ ಅವರ ಕೃತಿಗಳಿಗೆ ಹೆಚ್ಚು ಬೇಡಿಕೆಯಿದೆಯೆಂದು ಕನ್ನಡದ ಕೆಲ ಸಾಹಿತಿಗಳು ಅಭಿಪ್ರಾಯಪಟ್ಟಿದ್ದರು. ಆದರೆ ವಾಸ್ತವ ಬೇರೆಯಾಗಿದ್ದು, ಓದುಗ ಬಳಗ ಹೆಚ್ಚಲು ಅವರ ಶೈಲಿಯೇ ಮುಖ್ಯ ಕಾರಣ. ಪುಣೆಗೆ ಅವರು ಬರುತ್ತಾರೆಂದು ತಿಳಿದರೆ ದೊಡ್ಡ ಸಂಖ್ಯೆಯಲ್ಲಿ ಜನರು ಅವರನ್ನು ನೋಡಲು ಕಾದು ಕುಳಿತಿರುತ್ತಾರೆ” ಎಂದರು. ಲೇಖಕಿ ಸಹನಾ ವಿಜಯಕುಮಾರ್ ಮಾತನಾಡಿ “ಭೈರಪ್ಪ ಅವರನ್ನು ಮರಾಠಿ ಓದುಗರಿಗೆ…

Read More

ಇವರು ಕೃಪಾ ದೇವರಾಜ್, ಕೊಡಗಿನ ತಿತಿಮತಿಯ ಮೂಡಗದ್ದೆ ಶ್ರೀ ಈರಪ್ಪ ಹಾಗೂ ಶ್ರೀಮತಿ ಅನಸೂಯಾ ದಂಪತಿಗಳ ಪುತ್ರಿಯಾಗಿದ್ದಾರೆ. ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ತಿತಿಮತಿಯಲ್ಲಿ ಮುಗಿಸಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನೂ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಕಾಂ. ಪದವಿಯನ್ನು ಪಡೆದಿರುತ್ತಾರೆ. ಮುಂದೆ ಪೋಸ್ಟ್ ಗ್ರಾಜ್ಯುಯೇಶನ್ ಡಿಪ್ಲೋಮಾ ಇನ್ ಹ್ಯೂಮನ್ ರಿಸೋರ್ಸ್ ಹಾಗೂ ಮ್ಯಾನೇಜ್ಮೆಂಟ್ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್ಟೆನ್‌ಷನ್ ಸರ್ವೀಸಸ್ ಫಾರ್ ಇನ್ಪುಟ್ ಡೀಲರ್ಸ್‌ನಲ್ಲಿ ಕೊಡಗಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಪ್ರಸ್ತುತ ಟಾಟಾ ಕಾಫಿ ಕಂಪನಿ ಮಡಿಕೇರಿಯ ತೋಟಗಾರಿಕಾ ವಿತರಣಾ ವಿಭಾಗದಲ್ಲಿ ಬ್ರಾಂಚ್ ಇನ್ ಚಾರ್ಜ್ ಆಗಿರುವ ಇವರು ನಿರೂಪಣೆ, ಚಾರಣ, ಫೋಟೋಗ್ರಫಿ, ಪ್ರಕೃತಿ ನಡಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಇವರು ತಮ್ಮ 9ನೆಯ ತರಗತಿಯಲ್ಲಿ ಓದುತ್ತಿದ್ದಾಗ ಶಕ್ತಿ ದಿನಪತ್ರಿಕೆಯಲ್ಲಿ ಇವರ ಮಕ್ಕಳ ಕಥೆ ಪ್ರಕಟವಾಗಿತ್ತು. ಬಳಿಕ ಸುಧಾ, ಮಂಗಳ, ವಿಜಯ ಕರ್ನಾಟಕ ಇನ್ನಿತರ ಪತ್ರಿಕೆಗಳಲ್ಲಿ ಕಥೆ ಕವನ ಪ್ರಕಟವಾಗಿವೆ. ದ್ವಿತೀಯ ಬಿ.ಕಾಂ.ನಲ್ಲಿ ಓದುತ್ತಿದ್ದಾಗ, ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡಿದ್ದಾರೆ. ರಾಜ್ಯ…

Read More

ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುತ್ತಿರುವ ಜನಪದ ಕಲೆಗಳ ಸರಣಿಯ ಹದಿನಾರು ಮತ್ತು ಹದಿನೇಳನೆಯ ಕಾರ್ಯಕ್ರಮದಲ್ಲಿ ‘ಸಾಂಝಿ ಕಲೆ’ಯ ಕಾರ್ಯಾಗಾರವನ್ನು ದಿನಾಂಕ 25 ಮತ್ತು 26 ಜನವರಿ 2025ರಂದು ಉಡುಪಿಯ ಬಡಗುಪೇಟೆಯಲ್ಲಿ ಆಯೋಜಿಸಲಾಗುತ್ತಿದೆ. ದಿನಾಂಕ 25 ಜನವರಿ 2025ರಂದು ‘ಸಾಂಝಿ’ ಮತ್ತು ದಿನಾಂಕ 26 ಜನವರಿ 2025ರಂದು ‘ಜಲ್ ಸಾಂಝಿ’ ಕಲೆಯ ಬಗ್ಗೆ ಬೆಳಗ್ಗೆ 9-30 ಗಂಟೆಯಿಂದ ಸಂಜೆ 4-00 ಗಂಟೆ ತನಕ ನಡೆಯಲಿದ್ದು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಶ್ರೀ ರಾಮ್ ಸೋನಿ ಇವರು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.

Read More

ಕೊಡಗು : ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಕೊಡವ ಸಮಾಜದಲ್ಲಿ ದಿನಾಂಕ 19 ಜನವರಿ 2025ರಂದು ಚೆಕ್ಕೇರ ಕುಟುಂಬದ ಆತಿಥ್ಯದ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಂಚಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಇವರು ಕೊಡವ ಭಾಷೆಯಲ್ಲಿ ರಚಿಸಿರುವ ಹನ್ನೊಂದು ಪ್ರಕಾರದ ಕವನವನ್ನು ಒಳಗೊಂಡಿರುವ ‘ಪಾನೆಲ್ಚಿಲ್ ಪೊನ್ನೆಳ್ತ್’ ಎಂಬ ಕವನ ಸಂಕಲನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರು ಲೋಕಾರ್ಪಣೆ ಮಾಡಿದರು. ಚೆಕ್ಕೇರ ಕಪ್ಪ್ ಪಂದ್ಯಾವಳಿ ಅಧ್ಯಕ್ಷರಾದ ಚಂದ್ರಪ್ರಕಾಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು, ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಕೀರ್ತಿಯಂಡ ಕಾರ್ಸನ್ ಕಾರ್ಯಪ್ಪ, ಅಂಜಿಗೇರಿ ನಾಡ್ ತಕ್ಕರಾದ ಚೆಕ್ಕೇರ ರಾಜೇಶ್, ಚೆಕ್ಕೇರ ಕುಟುಂಬದ ಅಧ್ಯಕ್ಷರಾದ ಕಾಶಿ ಕಾಳಯ್ಯ ಮತ್ತು ಪುಸ್ತಕ ದಾನಿ ಉಳುವಂಗಡ ಕಮಲಾಕ್ಷಿ ತರುಂಬಯ್ಯ ಉಪಸ್ಥಿತರಿದ್ದರು. ಲೇಖಕಿ ಉಳುವಂಗಡ ಕಾವೇರಿ…

Read More

ಪೆರ್ಮುದೆ : ಶ್ರೀ ಮಹಾದೇವಿ ಯಕ್ಷ ನಾಟ್ಯಾಲಯ ಬಜ್ಪೆ ಪೆರ್ಮುದೆ ಇದರ ತೃತೀಯ ವರ್ಷದ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಗೌರವಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 25 ಜನವರಿ 2025ರಂದು ಸಂಜೆ 4-00 ಗಂಟೆಗೆ ಪೆರ್ಮುದೆ ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಉಲ್ಲಾಸ್ ಆರ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಪರ್ವದಲ್ಲಿ ಖ್ಯಾತ ಹಿರಿಯ ಮದ್ದಳೆ ಗಾರರಾದ ಶ್ರೀ ಮಣಿ ಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಗುರುಗಳಾದ ಶ್ರೀ ರಾಜೇಶ್ ಕಟೀಲು ಇವರಿಗೆ ಗುರುವಂದನೆ ಮಾಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾದೇವಿ ಯಕ್ಷ ನಾಟ್ಯಾಲಯದ ಸದಸ್ಯರಿಂದ ‘ಶ್ರೀ ದೇವಿ ಮಹಿಷ ಮರ್ದಿನಿ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಕನ್ನಡ ಮತ್ತು ಮಲೆಯಾಳಂ ನಡುವೆ ಸೇತುವೆಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕೆ.ಕೆ. ಗಂಗಾಧರನ್‌ ಇವರು ದಿನಾಂಕ 19 ಜನವರಿ 2025ರಂದು ಈ ಲೋಕವನ್ನಗಲಿದರು. ಇವರ ನಿಧನದಿಂದ ಅನುವಾದ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. 1949ರ ಮಾರ್ಚ್ 10ರಂದು ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದ್ದ ಗಂಗಾಧರನ್‌ ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆ ಎಂಬಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿ.ಎಸ್‌.ಸಿ. ಪದವಿ ಪಡೆದರು. 1970ರಲ್ಲಿ ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್‌ ವರ್ಕ್ಸ್ ನಲ್ಲಿ ವೃತ್ತಿಯನ್ನು ಆರಂಭಿಸಿದ ಗಂಗಾಧರನ್ 1974ರಲ್ಲಿ ಅಂಚೆ ಇಲಾಖೆಯ ರೈಲ್ವೆ ಮೇಲ್‌ ಸರ್ವಿಸ್‌ ವಿಭಾಗದಲ್ಲಿ ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿ, 2009ರಲ್ಲಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ರ, ಮನೆ ಮಾತು ಮಲಯಾಳಂ. ಅಂಚೆ ವಿಭಾಗದ ಬಿಡುವಿಲ್ಲದ ಕೆಲಸಗಳ ನಡುವೆ…

Read More