Author: roovari

ಬೆಂಗಳೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸುವ ‘ಗೀತ ಗೌರವ’ ಮತ್ತು ‘ಭಾವಾಭಿನಂದನೆ’ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮರೆಯಲಾಗದ ಮಹನೀಯರಾದ ಕಾವ್ಯ ಗಾಯನ ಪಿತಾಮಹ ಪಿ. ಕಾಳಿಂಗರಾವ್ ಮತ್ತು ಸಾವಿರ ಪದಗಳ ಸರದಾರ ಬಾಳಪ್ಪಾ ಹುಕ್ಕೇರಿ ಇವರುಗಳಿಗೆ ‘ಗೀತ ಗೌರವ’ ಮತ್ತು ಪ್ರಸಿದ್ಧ ಕವಿಗಳು ಹಾಗೂ ಸಾಹಿತಿಗಳಾದ ಡಾ. ನಾ. ದಾಮೋದರ ಶೆಟ್ಟಿ, ಖ್ಯಾತ ಗಾಯಕರಾದ ನಗರ ಶ್ರೀನಿವಾಸ ಉಡುಪ ಮತ್ತು ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಇವರಿಗೆ ಜನ್ಮದಿನ ಶುಭಾಶಯದ ‘ಭಾವಾಭಿನಂದನೆ’. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಧರಣಿದೇವಿ ಮಾಲಗತ್ತಿ ಇವರು ಉದ್ಘಾಟಿಸಲಿದ್ದು, ಖ್ಯಾತ ಕವಿಗಳು ಮತ್ತು ಸಾಹಿತಿಗಳಾದ ಡಾ. ಹೆಚ್.ಎಸ್. ವೆಂಕಟೇಶಮೂರ್ತಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ,…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸೆಪ್ಟೆಂಬರ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 02-09-2024, 09-09-2024, 16-09-2024, 23-09-2024 ಮತ್ತು 30-09-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 02-09-2024ರಂದು ನಡೆಯಲಿರುವು ಸರಣಿ 61ರಲ್ಲಿ ಕುಮಾರಿ ಪ್ರಜ್ಞಾ, ದಿನಾಂಕ 09-09-2024ರಂದು ನಡೆಯಲಿರುವು ಸರಣಿ 62ರಲ್ಲಿ ನೃತ್ಯನಿಕೇತನ ಕೊಡವೂರಿನ 90 ಕಾಲವಿದೆಯರು, ದಿನಾಂಕ 16-09-2024ರಂದು ನಡೆಯಲಿರುವು ಸರಣಿ 63ರಲ್ಲಿ ಕುಮಾರಿ ಅನಘ ಹೆಗ್ಡೆ, ದಿನಾಂಕ 23-09-2024ರಂದು ನಡೆಯಲಿರುವು ಸರಣಿ 64ರಲ್ಲಿ ಕುಮಾರಿ ಸಾನ್ವಿ ರಾಜೇಶ್ ಮತ್ತು ದಿನಾಂಕ 30-09-2024ರಂದು ನಡೆಯಲಿರುವು ಸರಣಿ 65ರಲ್ಲಿ ಕುಮಾರಿ ಶ್ರೇಯಾ ಶ್ಯಾನುಭಾಗ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ಕಲಬುರ್ಗಿ : ವಿಶ್ವ ವಿದ್ಯಾಲಯ ಮತ್ತು ಗಜಲ್ ಎಕಾಡೆಮಿಗಳ ಸಹಯೋಗದಲ್ಲಿ ಪ್ರಥಮ ಅಂತರಾಷ್ಟ್ರೀಯ ಗಜಲ್ ಸಮ್ಮೇಳನವು ದಿನಾಂಕ 25 ಆಗಸ್ಟ್ 2024ರಂದು ಕಲಬುರ್ಗಿಯಲ್ಲಿ ನಡೆಯಿತು. ಖ್ಯಾತ ಗಜಲ್ ಸಾಹಿತಿ ಪ್ರಭಾವತಿ ದೇಸಾಯಿ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಗಜಲ್ ನಡೆದು ಬಂದ ಹಾದಿ’ ಎಂಬ ಗೋಷ್ಠಿಗೆ ಚಾಲನೆ ನೀಡದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ಮಾತನಾಡಿ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣ ಪರ್ಷ್ಯಾದ ಗಜಲ್ ಇತ್ತಣ ಕರ್ನಾಟಕಕ್ಕೂ…… ಎಂಬ ಹಾಗೆ ಪರ್ಷಿಯಾದಿಂದ ಕರ್ನಾಟಕಕ್ಕೆ ಗಜಲ್ ನಡೆದು ಬಂದ ದಾರಿಯಾಯಿತು. ಹೊಸತನ್ನು ಹೊಸೆವ ಆಸಕ್ತಿ ಗಜಲ್ ಬೆಳವಣಿಗೆಗೆ ಕಾರಣ. ಭಾರತದ ಹೆಸರಾಂತ ಗಜಲ್ಕಾರರ ಬಗೆಗೆ ಹೇಳುತ್ತಾ ಕರ್ನಾಟಕ ಇಂದು ಅತಿ ಹೆಚ್ವು ಗಜಲ್ ಬರಹಗಾರರನ್ನು ಹೊಂದಿದೆ. ಭಾವನೆಗೆ ನಿಯಮಾವಳಿಗಳ ಮೂಲಕ ಕೊಡುವ ಚೌಕಟ್ಟು ಗಜಲ್ ಗೆ ಮೂಲ ಸ್ತಂಭ” ಎಂದು ಹೇಳಿದರು. ಖ್ಯಾತ ಕವಿ ಅಲ್ಲಾಗಿರಿ ರಾಜರ ಅಧ್ಯಕ್ಷತೆಯಲ್ಲಿ ನಡೆದ…

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ವಿಂಶತಿ ಸಂಭ್ರಮದ ಅಂಗವಾಗಿ ತಾಳಮದ್ದಳೆ ಸರಣಿಯ 5ನೇ ಕಾರ್ಯಕ್ರಮವು ದಿನಾಂಕ 26 ಆಗಸ್ಟ್ 2024ರಂದು ಅಷ್ಟಮಿ ಸಂಭ್ರಮದ ಪ್ರಯುಕ್ತ ಕೌಡಿಚ್ಚಾರು, ಅರಿಯಡ್ಕದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಆಲಂಕಾರು ಹಾಗೂ ಚೆಂಡೆ, ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಮೋಹನ್ ಶರವೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ), ಭಾರತಿ ರೈ ಅರಿಯಡ್ಕ (ನಾರದ) ಸಹಕರಿಸಿದರು. ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಹಾಗೂ ಸದಸ್ಯರು ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು. ಸಂಘದ ನಿರ್ದೇಶಕರ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಸದಸ್ಯೆ ಭಾರತಿ ರೈ ಅರಿಯಡ್ಕ ಪ್ರಾಯೋಜಿಸಿದರು.

Read More

ಧಾರವಾಡ : ಉತ್ತರ ಕರ್ನಾಟಕದ ಜನಪ್ರಿಯ ರಂಗ ಸಂಸ್ಥೆಯಾದ ಅಭಿನಯ ಭಾರತಿ (ರಿ.) ಇದರ ವತಿಯಿಂದ ‘ವಜ್ರ ಸಿರಿ ರಂಗೋತ್ಸವ 2024’ ಕಾರ್ಯಕ್ರಮವನ್ನು ಧಾರವಾಡ ಕರ್ನಾಟಕ ಕಾಲೇಜಿನ ಆವರಣದ ಸೃಜನಾ ರಂಗಮಂದಿರದಲ್ಲಿ ದಿನಾಂಕ 31-08-2024ರಿಂದ 02-09-2024ರವರೆಗೆ ಸಂಜೆ 6-00 ಗಂಟೆಗೆ ಹಮ್ಮಿಕೊಂಡಿದೆ. ದಿನಾಂಕ 31 ಆಗಸ್ಟ್ 2024ರಂದು ಧಾರವಾಡದ ಅಭಿನಯ ಭಾರತಿ ತಂಡದವರು ಎನ್. ಸುರೇಂದ್ರನಾಥ್ ರಚಿಸಿರುವ ಶ್ರೀಪತಿ ಮಂಜನಬೈಲು ನಿರ್ದೇಶನದಲ್ಲಿ ‘ನಾ. ತುಕಾರಾಂ ಅಲ್ಲಾ’ ಎಂಬ ಹಾಸ್ಯರಸ ಪ್ರಧಾನ ನಾಟಕವನ್ನು ಪ್ರಸ್ತುತ ಪಡಿಸಲಿರುವರು. ಈ ದಿನದ ಕಾರ್ಯಕ್ರಮಕ್ಕೆ ಜೆ.ಎಸ್.ಎಸ್. ಇದರ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಇವರು ಚಾಲನೆ ನೀಡಲಿದ್ದಾರೆ. ದಿನಾಂಕ 01 ಸೆಪ್ಟೆಂಬರ್ 2024ರಂದು ನಟನ ಪಯಣ ರೆಪರ್ಟರಿಯವರು ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕಣಿವೆ ಹಾಡು’ ಎಂಬ ನಾಟಕವನ್ನು ಅಭಿನಯಿಸಲಿದ್ದು, ರಂಗ ಕರ್ಮಿಗಳು ಚಲನಚಿತ್ರ ಹಾಗೂ ಧಾರಾವಾಹಿ ನಟರಾದ ಮಂಡ್ಯ ರಮೇಶ ಇವರು ಈ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ದಿನಾಂಕ 02…

Read More

ಮಂಗಳೂರು : ಎಸ್. ಆ‌ರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಸುರತ್ಕಲ್ ಇವರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಚೇಳಾಯ್ರು ಇದರ ಸಹಯೋಗದಲ್ಲಿ ಆಯೋಜಿಸುವ ಎಸ್. ಆರ್. ಹೆಗ್ಡೆ ನೆಂಪು ಮತ್ತು ಎಸ್. ಆರ್. ಹೆಗ್ಡೆ -ವ್ಯಕ್ತಿ ಚಿತ್ರ ಹಾಗೂ ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಕೃತಿಗಳ ಅವಲೋಕನ, ಓದು-ಬರಹ-ಬಹುಮಾನ ವಿತರಣಾ ಸಮಾರಂಭವು 30 ಆಗಸ್ಟ್ 2024ರಂದು ಚೇಳಾಯ್ರು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ. ಸರಕಾರಿ ಪದವಿಪೂರ್ವ ಕಾಲೇಜು ಚೇಳಾಯ್ರು ಇಲ್ಲಿನ ಪ್ರಾಂಶುಪಾಲರಾದ ಡಾ. ಜ್ಯೋತಿ ಚೇಳಾಯ್ರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಂ. ಆರ್. ಪಿ. ಎಲ್. ಇದರ ವಿಶ್ರಾಂತ ಅಧಿಕಾರಿಯಾದ ಶ್ರೀಮತಿ ವೀಣಾ ಟಿ. ಶೆಟ್ಟಿ ಇವರು ಎಸ್. ಆರ್. ಹೆಗ್ಡೆ ನೆಂಪು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಮತಿ ಉದಯ ಪ್ರಭಾ ಶೆಟ್ಟಿ ಚೇಳಾಯ್ರು ಗುತ್ತು ವಿಜೇತರಿಗೆ ಬಹುಮಾನ ವಿತರಿಸಲಿರುವರು.

Read More

ಕುಳಾಯಿ : ಕರ್ನಾಟಕ ಯಕ್ಷಗಾನ ಅಕಾಡೆಮಿ, ಸರಯೂ ಬಾಲ ಯಕ್ಷವೃಂದ ಕೋಡಿಕಲ್, ಮಕ್ಕಳ ಮೇಳ ಮಂಗಳೂರು ಇದರ ವತಿಯಿಂದ ಯಕ್ಷಗಾನ ಬಯಲಾಟ ಹಾಗೂ ಸಭಾ ಕಾರ್ಯಕ್ರಮವು ಕುಳಾಯಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ 26 ಆಗಸ್ಟ್ 2024ರ ಸೋಮವಾರದಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತಸರ ಕೆ. ಕೃಷ್ಣಹೆಬ್ಬಾರ್ ಮಾತನಾಡಿ “ಯಕ್ಷಗಾನ ಕಲೆಯನ್ನು ಮಕ್ಕಳಿಗೆ ಯಕ್ಷ ಶಿಕ್ಷಣದ ಮೂಲಕ ನೀಡಿ ಬೆಳೆಸುವಲ್ಲಿ ಸರಯೂ ಬಾಲ ಯಕ್ಷವೃಂದದ ರವಿ ಅಲೆವೂರಾಯ ಕೊಡುಗೆ ಅನನ್ಯ.” ಎಂದರು. ಯಕ್ಷಗಾನ ಸಂಘಟಕ ಹಾಗೂ ಕಲಾವಿದರಾದ ಮಧುಕರ ಭಾಗವತ್ ಮಾತನಾಡಿ “ಯಕ್ಷಗಾನ ಕಲೆ ನಿಧಾನವಾಗಿ ನಶಿಸುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಸರಯೂ, ಪಟ್ಲ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳು ಯಕ್ಷಗಾನ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಭಾವಂತರು ಈ ಕಲೆಗೆ ಆಕರ್ಷಿತರಾಗುತ್ತಿದ್ದಾರೆ.ಈ ಕಲೆ ಬೆಳೆಯುತ್ತಲೇ ಹೋಗುತ್ತದೆ.” ಎಂದರು. ಕುಳಾಯಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಸದಾಶಿವ ಎಂ. ಮಾತನಾಡಿ “ಯಕ್ಷಗಾನವು ನೃತ್ಯ, ಸಂಭಾಷಣೆ,…

Read More

ವಿಜಯಪುರ : ಶ್ರಾವಣ ಮಾಸದಲ್ಲಿ ವಿಜಯಪುರ ನಗರದ ಅನೇಕ ಕಡೆಗಳಲ್ಲಿ ಗಮಕ ಕಾರ್ಯಕ್ರಮವು ಅವ್ಯಾಹತವಾಗಿ ನಡೆಯುತ್ತಿದೆ.  ಇದರ ಅಂಗವಾಗಿ ಗಮಕ ವಿದೂಷಿ ಶ್ರೀಮತಿ ಶಾಂತಾ ಕೌತಾಳ್ ಇವರುಗಳು 25 ಆಗಸ್ಟ್ 2024ರಶ್ರಾವಣ ಮಾಸದ ಕೃಷ್ಣಪಕ್ಷ ಸಪ್ತಮಿ ತಿಥಿಯಂದು ನಗರದ ದಿವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಿಯಲ್ಲಿ ಭಕ್ತಮಂಡಳಿಯವರಿಗಾಗಿ ಗಮಕ ಕಾರ್ಯಕ್ರಮ ಏರ್ಪಡಿಸಿದ್ದರು.  ಕಾರ್ಯಕ್ರಮದಲ್ಲಿ ಗದುಗಿನ ಭಾರತದ ಉದ್ಯೋಗ ಪರ್ವದ `ವಿದುರನೀತಿ’ ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಜರುಗಿತು.  ಗಮಕ ವಿದೂಷಿ ಶ್ರೀಮತಿ ಶಾಂತಾ ಕೌತಾಳ್, ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಶ್ರೀಮತಿ ಭೂದೇವಿ ಕುಲಕರ್ಣಿ ಇವರುಗಳು ಕಾವ್ಯದ ವಾಚನವನ್ನು ಸುಶ್ರಾವ್ಯವಾಗಿ ಮಾಡಿದರು.  ಶ್ರೀ ಕಲ್ಯಾಣರಾವ್ ದೇಶಪಾಂಡೆಯವರು ಇದರ ವ್ಯಾಖ್ಯಾನ ಮಾಡುತ್ತ ಧೃತರಾಷ್ಟ್ರನಿಗೆ ವಿದುರನು ಮನಸಿನ ಸಮಾಧಾನಕ್ಕಾಗಿ ಇಡೀ ರಾತ್ರಿ ಉಪದೇಶಿಸಿದ ವಿದುರ ನೀತಿಯ ಕೆಲಪದ್ಯಗಳ ಅರ್ಥವನ್ನು ವಿವರಿಸಿದರು. “ಧೃತರಾಷ್ಟ್ರ, ನೀನು ಹಾವು ಹಡೆದಂತೆ ನೂರು ಮಕ್ಕಳನ್ನು ಹಡೆದು ಲೋಕಕ್ಕೆ ಕಂಟಕನಾದೆ.  ಇದರ ಬದಲು ಅರ್ಜುನನಂತಹ ಒಬ್ಬ ಮಗನನ್ನು…

Read More

ಮಂಗಳೂರು : ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಇತರ ಸಂಘಟನೆಗಳ ಸಹಯೋಗದೊಂದಿಗೆ ‘ಸುವರ್ಣ ಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಮಂಗಳೂರು ಉರ್ವಸ್ಟೋರಿನ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸಿನೆಮಾಟೋಗ್ರಾಫರ್ ಶ್ರೀ ಜಿ. ಎಸ್. ಭಾಸ್ಕರ್, ಕಲಾ ಸಂಗಮ ಕುಡ್ಲ ಇದರ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಉದ್ಘಾಟನೆ ಮಾಡಲಿರುವರು. ‘ಸದಾನಂದ ಸುವರ್ಣರು ಮತ್ತು ಸಿನೆಮಾ’ ಎಂಬ ವಿಷಯದ ಬಗ್ಗೆ ಸಿನೆಮಾ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ, ‘ನಿರ್ದೇಶಕ ಸದಾನಂದ ಸುವರ್ಣರೊಂದಿಗಿನ ಸಮಯ’ ಎಂಬ ವಿಷಯದ ಬಗ್ಗೆ ರಂಗ ಭೂಮಿ ಕಲಾವಿದೆ ಶ್ರೀಮತಿ ಗೀತಾ ಸುರತ್ಕಲ್ ಮತ್ತು ಸಂಕಲನಕಾರರಾದ ಎಂ.ಎನ್. ಸ್ವಾಮಿ, ‘ನಾನು ಕಂಡಂತೆ ಶ್ರೀ ಸದಾನಂದ ಸುವರ್ಣರು’ ಎಂಬ ವಿಷಯದ ಬಗ್ಗೆ ಸಿನೆಮಾಟೋಗ್ರಾಫರ್ ಶ್ರೀ ಜಿ.…

Read More

ಮಂಗಳೂರು : ಮುಸ್ಲಿಂ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಪ್ರತೀ ವರ್ಷ ಮುಸ್ಲಿಂ ಬರಹಗಾರರ ಅತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಿದ್ದು, 2023ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಮುಸ್ಲಿಂ ಬರಹಗಾರರು ಕನ್ನಡದಲ್ಲಿ ಪ್ರಕಟವಾದ 2023ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು 10 ಸೆಪ್ಟೆಂಬರ್ 2024ರ  ಒಳಗಾಗಿ ಸಂಚಾಲಕರು, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಮುಸ್ಲಿಂ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು-575001 ವಿಳಾಸಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ. ಅನುವಾದಿತ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಹಾಗೂ ಪ್ರಶಸ್ತಿಗಾಗಿ ಕಳುಹಿಸುವ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಉಮರ್ ಯು. ಎಚ್. ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ – 9845054191 ಅಥವಾ 0824-2410358 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Read More