Subscribe to Updates
Get the latest creative news from FooBar about art, design and business.
Author: roovari
ಬೈಲಹೊಂಗಲ : ಕೇಂದ್ರ ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ಬಸವ ಜಯಂತಿ ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ 04 ಮೇ 2025ರಂದು ರಾಜ್ಯಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಬಸವೇಶ್ವರರು, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ದರಾಮೇಶ್ವರರು, ಚನ್ನಬಸವಣ್ಣ, ಮಡಿವಾಳ ಮಾಚಿದೇವರು, ಹಡಪದ ಅಪ್ಪಣ್ಣ ಇತರ ಶರಣರ ತತ್ವಗಳ ಕುರಿತು ಕವನಗಳನ್ನು ಆಹ್ವಾನಿಸಲಾಗಿದೆ. ಕವನ 30 ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿ.ಟಿ.ಪಿ. ಮಾಡಿಸಿ ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ 15 ಏಪ್ರಿಲ್ 2025ರ ಒಳಗಾಗಿ ಶ್ರೀ ಮೋಹನ ಬಸನಗೌಡ ಪಾಟೀಲ, ಕಾರ್ಯಕಾರಿ ಸಮಿತಿ ಸದಸ್ಯರು, ಕೇಂದ್ರ ಬಸವ ಸಮಿತಿ, ‘ಬಸವ ನಿವಾಸ’, ಚನ್ನಮ್ಮನಗರ ಮೊದಲನೆಯ ಅಡ್ಡರಸ್ತೆ, ಬೈಲಹೊಂಗಲ- 591102, ಬೆಳಗಾವಿ ಜಿಲ್ಲೆ ಈ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9448920888 ಸಂಪರ್ಕಿಸಬೇಕೆಂದು ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ…
ಮಡಿಕೇರಿ: ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿಯ ಮಧುಕೃಪದ ಆವರಣದಲ್ಲಿ ‘ಬಾಲಗೋಕುಲ’ ಮಡಿಕೇರಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ‘ವಸಂತ ಶಿಬಿರ – 2025’ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರವನ್ನು ದಿನಾಂಕ 31 ಮಾರ್ಚ್ 2025 ರಿಂದ 9 ಏಪ್ರಿಲ್ 2025ರ ವರೆಗೆ ವನ್ನು ಆಯೋಜಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದ ಈ ಶಿಬಿರವು ಮಕ್ಕಳಿಗೆ ಬಹಳ ಉಪಯುಕ್ತವಾಗಿದ್ದು, ಮಕ್ಕಳು ತುಂಬಾ ಉತ್ಸಾಹದಿಂದ ಭಾಗವಹಿಸುವಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ನೊಂದಣಿಗಾಗಿ ಬಾಲಗೋಕುಲ ಮಡಿಕೇರಿ: 9448541328 ಸಂಪರ್ಕಿಸ ಬಹುದಾಗಿದೆ.
ಬೈಲೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಇಂಡಿಯಾ ಪೌಂಡೇಷನ್ ಫಾರ್ ಆರ್ಟ್ಸ್ ಬೆಂಗಳೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇವರ ಸಹಯೋಗದಲ್ಲಿ ದ್ವಿತೀಯ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಂಗವಾಗಿ ‘ಬಣ್ಣದ ಗರಿ’ ಕರಾವಳಿಯ ವೀರ ವನಿತೆಯರ ಕಥನದ ‘ಮಕ್ಕಳ ಯಕ್ಷೋತ್ಸವ’ ಕಾರ್ಯಕ್ರಮವು ದಿನಾಂಕ : 08 ಏಪ್ರಿಲ್ 2025ರ ಮಂಗಳವಾರ ಸಂಜೆ ಘಂಟೆ 6.00 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ನಡೆಯಲಿದೆ. ಸ.ಹಿ.ಪ್ರಾ.ಶಾಲೆ ಬೈಲೂರು ಇಲ್ಲಿನ ಸಹಶಿಕ್ಷಕರಾದ ಆನಂದ ಕುಲಾಲ ಇವರ ನಿರ್ದೇಶನದ ಈ ಯೋಜನೆ ಹಾಗೂ ‘ಯಕ್ಷಸಿರಿ ಶಂಕರನಾರಾಯಣ’ ಇದರ ಸಂಚಾಲಕರಾದ ಕಿಶೋರ ಕುಮಾರ ಆರೂರು ಇವರ ನಿರ್ದೇಶನದ ಈ ‘ಮಕ್ಕಳ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧೆಗಳು, ಶಾಲಾ ಮಕ್ಕಳಿಂದ ಹೆಜ್ಜೆ ಗೆಜ್ಜೆ – ನೃತ್ಯೋತ್ಸವ, 4 ನೇ ತರಗತಿ ವಿದ್ಯಾರ್ಥಿಗಳಿಂದ “ನಂಗೇಲಿ ಕಥನ” ಯಕ್ಷ ನೃತ್ಯರೂಪಕ, 5 ನೇ ತರಗತಿ ವಿದ್ಯಾರ್ಥಿಗಳಿಂದ “ಕಮಲಾದೇವಿ ಕಥನ” ಯಕ್ಷಗಾನ…
ಮಂಗಳೂರು : ಕದ್ರಿ ನೃತ್ಯ ವಿದ್ಯಾ ನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಗುರು ಯು.ಕೆ. ಪ್ರವೀಣ್ ಇವರ ಶಿಷ್ಯೆ ಕುಮಾರಿ ಶರಣ್ಯ ಎಸ್. ರಾವ್ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 30 ಮಾರ್ಚ್ 2025ರಂದು ಸಂಜೆ 4-00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಚೈರ್ಮನ್ ಪಿ. ಪ್ರದೀಪ್ ಕುಮಾರ್ ಮತ್ತು ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ಯು.ಕೆ. ಪ್ರವೀಣ್, ಹಾಡುಗಾರಿಕೆಯಲ್ಲಿ ವಿದುಷಿ ಉಷಾ ಪ್ರವೀಣ್, ಮೃದಂಗದಲ್ಲಿ ವಿದ್ವಾನ್ ಗಿತೇಶ್ ಎ.ಜಿ. ನೀಲೇಶ್ವರಂ, ವಯೋಲಿನ್ ವಿದ್ವಾನ್ ಶ್ರೀಧರ್ ಆಚಾರ್ ಪಡಿಗಾರ್ ಉಡುಪಿ, ಕೊಳಲು ವಿದ್ವಾನ್ ರಾಜಗೋಪಾಲ್ ವಿ.ಪಿ. ಇವರುಗಳು ಸಹಕರಿಸಲಿದ್ದಾರೆ.
ಕೊಪ್ಪಳ : ಮುಜುಮದಾರ ಫೌಂಡೇಶನ್ ಮತ್ತು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಪಂಚಾಕ್ಷರಿ ಹಿರೇಮಠ ಇವರ ‘ನುಡಿ ನಮನ’ ಕಾರ್ಯಕ್ರಮವು ದಿನಾಂಕ 25 ಮಾರ್ಚ್ 2025ರ ಮಂಗಳವಾರದಂದು ಕೊಪ್ಪಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕೊಪ್ಪಳದ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್ ಮಾತನಾಡಿ “ನಮ್ಮ ಭಾಗದ ಸಾಹಿತಿಗಳ ಪುಸ್ತಕಗಳನ್ನು ಓದಿ ಅವರನ್ನು ನಾವು ಗೌರವಿಸಬೇಕು. ನಮ್ಮ ದೇಶದಲ್ಲಿ ಬದುಕಿದ್ದಾಗ ಅವರ ಬಗ್ಗೆ ಆಲೋಚನೆ ಮಾಡುವುದಿಲ್ಲ, ಅವರು ಮರಣ ಹೊಂದಿದ ನಂತರ ಅವರ ಕುರಿತು ಹೆಚ್ಚು ಚರ್ಚೆ ಮಾಡುತ್ತೇವೆ. ಈ ರೀತಿ ಪದ್ಧತಿ ಹೋಗಬೇಕು. ಪಂಚಾಕ್ಷರಿ ಹಿರೇಮಠ ಅವರು 1947 ಆಗಸ್ಟ್ 15 ರಂದು ಕೊಪ್ಪಳ ಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ್ದರು. ಆಗ ಅವರು 7 ನೇ ತರಗತಿ ಓದುತ್ತಿದ್ದರು. ಇವರು ಧಾರವಾಡದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಇವರು ಕಥೆ, ಕಾದಂಬರಿ, ಕಥಾ ಸಂಕಲನ, ಅನುವಾದ ಹೀಗೆ 250ಕ್ಕೂ ಮಿಕ್ಕಿ…
ಬೆಂಗಳೂರು : ವಿಜಯನಗರ ಬಿಂಬ ಕಳೆದ 29 ವರ್ಷಗಳಿಂದ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ಇದೀಗ ಬರ್ಟೋಲ್ಟ್ ಬ್ರೆಕ್ಟ್ ನ ಮಹತ್ವದ ನಾಟಕ ‘ಮದರ್ ಕರೇಜ್’ ಇದರ ಪ್ರದರ್ಶನವನ್ನು ದಿನಾಂಕ 28 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಏರ್ಪಡಿಸಿದೆ. 20ನೇ ಶತಮಾನದ ಅತ್ಯುತ್ಕೃಷ್ಟ ನಾಟಕ ಎಂದೇ ಹೆಸರಾಗಿರುವ ‘ಮದರ್ ಕರೇಜ್’ – ಯುದ್ಧ ಮತ್ತು ಮನುಷ್ಯ ಸಂಬಂಧಗಳ ಮೇಲೆ ಅದರ ಪರಿಣಾಮವನ್ನು ಹೇಳುವ ಕಥೆ. ಯುದ್ಧ ಪ್ರೀತಿ ಇದ್ದ ಹಾಗೆ ಅದು ಮುಂದುವರೆಯಲು ತನ್ನದೇ ಆದ ಮಾರ್ಗವನ್ನು ಹುಡುಕುತ್ತದೆ ಎಂದು ಹೇಳುತ್ತಲೇ ಬ್ರೆಕ್ಟ್ ನಮ್ಮನ್ನು ಆ ನಿಟ್ಟಿನಲ್ಲಿ ಯೋಚಿಸುವ ಹಾಗೆ ಮಾಡುತ್ತಾನೆ. ಇದು ಯುದ್ಧ ವಿರೋಧಿ ನಾಟಕವಾದರೂ ಇದರಲ್ಲಿ ಬರುವ ಬಹುಪಾಲು ಪಾತ್ರಗಳು ಯುದ್ಧ ನಡೆಯಬೇಕು ಎಂದೇ ಹೇಳುತ್ತಾರೆ. 1630ರ ಸುಮಾರಿಗೆ ಯುರೋಪ್ನಲ್ಲಿ ನಡೆದ 30 ವರ್ಷಗಳ ಧಾರ್ಮಿಕ ಯುದ್ಧ ನಾಟಕದ ಹಿನ್ನೆಲೆಯಾಗಿದೆ. ಪ್ರೊಟೆಸ್ಟೆಂಟ್ ಮತ್ತು ಕ್ಯಾಥಲಿಕ್ ಗಳ ನಡುವೆ ನಡೆಯುವ ಈ ಯುದ್ಧದಿಂದ ಕಂಗಾಲಾಗಿರುವ…
ಕೊಪ್ಪ : ಶ್ರೀ ಆದಿ ಶಂಕರಾಚಾರ್ಯ ಶಾರದಾ ಶ್ರೀಲಕ್ಷ್ಮೀನೃಸಿಂಹ ಪೀಠಮ್ ಹರಿಹರಪುರ ಕೊಪ್ಪ ಇದರ ವತಿಯಿಂದ ಹೊಸೂರು ಸಾಗರದ ಶ್ರೀ ಭಾರತೀ ಕಲಾ ಪ್ರತಿಷ್ಠಾನ (ರಿ.) ಇದರ ಶ್ರೀ ವರದಾಂಬ ಕಲಾ ತಂಡ ಇವರಿಂದ ಆಲೆಟ್ಟಿ ರಾಮಣ್ಣ ಶಗ್ರಿತ್ತಾಯ ವಿರಚಿತ ‘ತರಣಿಸೇನ ಕಾಳಗ’ ಎಂಬ ಪ್ರಸಂಗದ ತಾಳಮದ್ದಲೆಯನ್ನು ದಿನಾಂಕ 29 ಮಾರ್ಚ್ 2025ರಂದು ಸಂಜೆ 4-30 ಗಂಟೆಗೆ ಕೊಪ್ಪ ತಾಲೂಕು ಹರಿಹರಪುರದ ಶ್ರೀ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಶಿವಶಂಕರ ಭಟ್ ಮತ್ವಾನೆ ಭಾಗವತರಾಗಿ, ಗಣೇಶ ಭಟ್ ಹೊನ್ನೇಕುಡಿಗೆ ಮದ್ದಲೆಯಲ್ಲಿ ಮತ್ತು ಜನಾರ್ದನ ಮಂಡಗಾರು ಚಂಡೆಯಲ್ಲಿ ಹಾಗೂ ಮುಮ್ಮೇಳದಲ್ಲಿ ಶಾರದಾ ಅರುಣ ಇವರು ಶ್ರೀರಾಮನಾಗಿ, ವರದಾ ಮಧುಸೂದನ ಐತಾಳ್ ಇವರು ವಿಭೀಷಣ, ಸ್ಮಿತಾ ಗಿರೀಶ್ ಇವರು ರಾವಣ ಮತ್ತು ಸಾಧ್ವಿ ಗಣೇಶ್ ಇವರು ತರಣಿಸೇನನಾಗಿ ಸಹಕರಿಸಲಿದ್ದಾರೆ.
ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಹಮ್ಮಿಕೊಂಡಿರುವ ‘ಸಮರ್ಪಣಂ ಕಲೋತ್ಸವ 2025’ವನ್ನು ದಿನಾಂಕ 03 ಏಪ್ರಿಲ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 10-00 ಗಂಟೆಗೆ ವಿಶ್ವಕರ್ಮ ಕಲಾ ಪರಿಷತ್ ಸದಸ್ಯರಿಂದ ಸಾಂಸ್ಕೃತಿಕ ಸೌರಭ ಪ್ರಸ್ತುತಗೊಳ್ಳಲಿದೆ. ‘ಸಮರ್ಪಣಂ ಕಲೋತ್ಸವ’ದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನೆ ಮಾಡಿ ನೆರವೇರಿಸಲಿರುವರು. ಇದೇ ಸಂದರ್ಭದಲ್ಲಿ ಪ್ರಾಚೀನ ವಿಶ್ವಬ್ರಾಹ್ಮಣ ಪರಂಪರೆಯ ಸಮರ್ಥ ರಾಯಭಾರಿ ಸಂಶೋಧಕ ಲೇಖಕ ಮೇರು ವಿದ್ವಾಂಸ ಡಾ. ಜಿ. ಜ್ಞಾನಾನಂದ ಇವರಿಗೆ ‘ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ’ ಪ್ರದಾನ ಹಾಗೂ ಗೌರವಾಭಿನಂದನೆ ನಡೆಯಲಿದೆ. ಬೆಂಗಳೂರಿನ ಶ್ರೀ ಭ್ರಮರಿ ಕ್ರಿಯೇಷನ್ಸ್ ಪ್ರೈವೇಟ್ ಲಿ. ಇದರ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ಚಂದ್ರ ಎನ್. ಆಚಾರ್ಯ ಇವರು ಕಲೋತ್ಸವಕ್ಕೆ ಚಾಲನೆ ನೀಡಲಿದ್ದು, ಮಂಗಳೂರಿನ…
ಹೊಸದುರ್ಗ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಆಯೋಜಿಸುವ ಹೊಸದುರ್ಗ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ ದತ್ತಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರ ಆದಿತ್ಯವಾರ ಅಪರಾಹ್ನ ಘಂಟೆ 2.30ಕ್ಕೆ ಹೊಸದುರ್ಗದ ‘ಧ್ವನಿ’ ಸಾರ್ವಜನಿಕ ಗ್ರಂಥಾಲಯ ಕೀಕಾನ ಇಲ್ಲಿ ನಡೆಯಲಿದೆ. ಕ. ಸಾ. ಪ. ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕನ್ನಡಕ್ಕೆ ಹೊಸಮರ್ಗದ ಕೊಡುಗೆ’ ಎಂಬ ವಿಷಯದಲ್ಲಿ ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಶ್ರೀ ನಂದಿಕೇಶನ್ ಎನ್. ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸಿ. ಸುಬ್ರಾಯ, ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಅರವಿಂದ ಕೆ., ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜಗೋಪಾಲ ಕೆ. ಹಾಗೂ ಕನ್ನಡ ಸಂಘ ಹೊಸದುರ್ಗ ಇದರ ಅಧ್ಯಕ್ಷರಾದ ಶ್ರೀ ಹೆಚ್. ಎಸ್. ಭಟ್ ಭಾಗವಹಿಸಲಿದ್ದಾರೆ. ಕ.ಸಾ.ಪ. ಕೇರಳ…
ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯ 60 ವರ್ಷದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಚಿತ್ರ ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಮುಖಾಂತರ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕದ ಕಲಾ ಶಾಲೆಗಳಲ್ಲಿ ಯಾವುದೇ ಹಂತದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪೂರ್ವ ಸಿದ್ಧತೆಗಾಗಿ ತಮಗೆ ದಿನಾಂಕ 30 ಏಪ್ರಿಲ್ 2025ರವರೆಗೆ ಕಾಲಾವಕಾಶವನ್ನು ನೀಡಲಾಗುವುದು. ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ತಾವು ರಚಿಸಿರುವ ಕಲಾಕೃತಿಗಳ 2 ಛಾಯಾಚಿತ್ರಗಳನ್ನು ಹಾಗೂ ತಾವು ಅಭ್ಯಾಸ ಮಾಡುತ್ತಿರುವ ಚಿತ್ರ ಕಲಾ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರದೊಂದಿಗೆ ಅರ್ಜಿ ಕಳುಹಿಸಿ ಕೊಡಲು ಕೋರಿದೆ. ಅರ್ಜಿಗಳನ್ನು ಗೂಗಲ್ ಭಾರ್ಮ್ ನಲ್ಲಿ ಭರ್ತಿಮಾಡಿ ಅಕಾಡೆಮಿ ಕೋರಿರುವ ಅಗತ್ಯ ದಾಖಲೆಗಳನ್ನು ಅನ್ಲೈನ್ ಮುಖಾಂತರ ಗೂಗಲ್ನಲ್ಲಿ ಲಗತ್ತಿಸುವುದು. (ವೆಬ್ಸೈಟ್: www.lalitkala.karnataka.gov.in) ಹೆಚ್ಚಿನ ವಿವರಗಳಿಗಾಗಿ ದೂ: 08022480297 ಆಯ್ಕೆಯ ಪ್ರಕ್ತಿಯೆ ಹೀಗಿರುತ್ತದೆ. ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸುಂದರ ಪ್ರಕೃತಿಯು ಮಡಿಲಲ್ಲಿ ಚಿತ್ರ ಕಲಾ ಶಿಬಿರವನ್ನು ಏರ್ಪಡಿಸಲಾಗುವುದು. ಶಿಬಿರದಲ್ಲಿ ಅತ್ಯುತ್ತಮ ಚಿತ್ರ…