Author: roovari

ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಇವರು ಶೈಕ್ಷಣಿಕ ಹಾಗೂ ಸಾಮಾಜಿಕ ವಲಯದಲ್ಲಿ ಜಿ. ಆರ್. ಎಂದೇ ಪ್ರಸಿದ್ದರು. ವಂಶದಿಂದ ಇವರ ಮೂಲ ಹೆಸರು ಗಂಪಲಹಳ್ಳಿ ರಾಮಕೃಷ್ಣ. ಸುಬ್ರಹ್ಮಣ್ಯಂ ಮತ್ತು ನರಸಮ್ಮ ದಂಪತಿಗಳ ಪುತ್ರನಾಗಿ 17 ಜೂನ್ 1939 ರಂದು ಮಾಗಡಿಯ ಸಮೀಪವಿರುವ ಕೆಂಪಸಾಗರದಲ್ಲಿ ಜನಿಸಿದರು. ಇವರು ತಮ್ಮಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಕೆಂಪ ಸಾಗರ ಮತ್ತು ಮಾಗಡಿಯಲ್ಲಿ ಮುಗಿಸಿದರು. ಸಂಸಾರದಲ್ಲಿ ಆರ್ಥಿಕ ಮಿತಿ ಇದ್ದ ಕಾರಣ ಮೈಸೂರಿಗೆ ಹೋಗಿ ವಾರಾನ್ನ ಮಾಡಿಕೊಂಡು   ಕಷ್ಟಪಟ್ಟು ಓದಿ, ಸಂಸ್ಕೃತ, ವೇದ, ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿ ಪಾಂಡಿತ್ಯವನ್ನು ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಸಂಸ್ಕೃತದಲ್ಲಿ ಎಂ. ಎ., ಪುಣೆ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಎಂ. ಎ. ಪದವಿಯನ್ನು ಪಡೆದುಕೊಂಡ ನಂತರ ಮೈಸೂರು ವಿಶ್ವ ವಿದ್ಯಾಲಯದಿಂದ “Origin and growth of rhuta in vedic literature”  ಮಹಾಪ್ರಬಂಧಕ್ಕೆ ಪಿ. ಎಚ್. ಡಿ. ಪದವಿ ಮತ್ತು ವೇಲ್ಸ್  ವಿಶ್ವವಿದ್ಯಾಲಯದಿಂದ…

Read More

‘ಪೆನ್ ಟು ಪ್ರೀಮಿಯರ್’ ಇವರು ಮಹಿಳಾ ದಿನಾಚರಣೆ -2026ರ ಪ್ರಯುಕ್ತ ಮಹಿಳೆಯರಿಗಾಗಿ ‘ಪುಟದಿಂದ ಪರದೆಗೆ’ ಶೀರ್ಷಿಕೆಯಲ್ಲಿ ಸಣ್ಣ ಕಥೆಗಳ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆಯನ್ನು ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಯಲ್ಲಿ ಬರೆಯಲು ಅವಕಾಶವಿದ್ದು, ಕಥೆಯು 5,000 ಪದಸಂಖ್ಯೆಯ ಮಿತಿಯೊಳಗಿರಬೇಕು. ಆಯ್ಕೆಯಾದ ಉತ್ತಮ 9 ಕಥೆಗಳನ್ನು ಮೂರು ಕಿರುಚಿತ್ರಗಳಾಗಿ, ಮೂರು ಅಡಿಯೋ ಕಥೆಗಳಾಗಿ ಹಾಗೂ ಮೂರು ಪುರವಣಿಗಳಲ್ಲಿ ಪ್ರಕಟವಾಗಲಿವೆ. ಕಥೆಗಳನ್ನು ಕಳುಹಿಸಲು 31 ಆಗಸ್ಟ್ 2025 ಅಂತಿಮ ದಿನವಾಗಿದ್ದು. ಸ್ಪರ್ಧೆಗೆ ರೂಪಾಯಿ 200ರ ಪ್ರವೇಶ ಶುಲ್ಕವಿದೆ. ಹೆಚ್ಚಿನ ಮಾಹಿತಿಗಾಗಿ : 88926 62603/99005 65740 pentopremieregmail.com https://www.facebook.com/Pento Premier https://www.instagram.com/pentopremier

Read More

ಕಾಸರಗೋಡು : ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ನೂತನ ಗೌರವ ಸಲಹೆಗಾರರಾಗಿ ಮಂಗಳೂರಿನ ಕಲಾ, ಸಾಹಿತ್ಯ, ಸಾಂಸ್ಕೃತಿಕ ಸಂಘಟಕ ದೀಪಕ್ ಪೆರ್ಮುದೆ, ಮಂಗಳೂರು ಇವರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆಗೊಳಿಸಿದೆ. ಮಂಗಳೂರು ಪರಿಸರದ ವಿವಿಧ ಸಂಘ -ಸಂಸ್ಥೆ, ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಗ್ರಾಮ ಪಂಚಾಯತ್ ಪೆರ್ಮುದೆ ಇದರ ಮಾಜಿ ಸದಸ್ಯರು. ಪೆರ್ಮುದೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರೂ ಆಗಿರುವ ಶ್ರೀಯುತರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಚೇಳ್ಯಾರು- ಮದ್ಯ – ಕೊಡಿಪಾಡಿ, ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಕಾಟಿಪಳ್ಳ – ಕೃಷ್ಣಪುರ ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇದರ ಸದಸ್ಯರೂ ಆಗಿದ್ದಾರೆ. ಶ್ರೀ ಶಾರದಾ ಕಲಾ ಪ್ರಕಾಶನ(ರಿ.)ದ ಅದ್ಯಕ್ಷರು ಸಂಸ್ಥಾಪಕರಾಗಿರುವ ಇವರು ಶ್ರೀ ಶಾರದಾ ಯಕ್ಷಗಾನ ಮಂಡಳಿ, ಪೆರ್ಮುದೆ ಇದರ ಉಪಾಧ್ಯಕ್ಷರಾಗಿ ಅತ್ಯುತ್ತಮ ಕಾರ್ಯ…

Read More

ಮಲೆನಾಡಿನ ಭೂರಮೆ ಶೃಂಗಾರ ಉಳುವಾ ರೈತನ ಕನಸಿನ ಮಂದಾರ ಕಾಣಲು ಎಂಥಾ ಸುಂದರ ತೋಟ ನಯನ ಮನೋಹರ ನೋಟ ಎಲ್ಲಿ ನೋಡಿದರಲ್ಲಿ ಹಸಿರಿನ ವನಸಿರಿ ಬಾನೆತ್ತರ ಬೆಳೆದು ನಿಂತ ಉನ್ನತ ಗಿರಿ ವೈವಿದ್ಯಮಯ ಗಿಡ ಮರದ ಸೊಬಗು ಅಲ್ಲಲ್ಲಿ ರವಿಯ ಕಿರಣದ ಮಿನುಗು ಜುಳು ಜುಳು ಹರಿಯುವ ನೀರಿನ ಝರಿ ಧವಳ ಸೀರೆಯುಟ್ಟ ಬಳುಕುವ ನಾರಿ ಹಸಿರು ಮಾನವಗೆ ಕೊಡುವುದು ಉಸಿರು ಪರಿಸರ ವೈಭವ ಮೆರೆಯುವ ಹಸಿರು ಜೀವದಾತೆ ಜನ್ಮದಾತೆ ನಮ್ಮ ದೇವತೆ ಮನುಜ ಕುಲದ ದೈವ ಶಕ್ತಿ ಶಾಂತಿದಾತೆ ಪಶು ಪಕ್ಷಿ ಖಗ ಮೃಗಗಳ ಸಂಕುಲ ಬೀಡು ಔಷದ ಗಿಡ ಮೂಲಿಕೆಗಳ ಆಗರ ನಾಡು ಜೀವಿಸಲು ಬೇಕಾದ ಚಿರ ಸಂಪದ ಶುಕ ಪಿಕಗಳ ಉಲಿತದ ಉನ್ಮಾದ ಪ್ರಕೃತಿಯ ಮಡಿಲಲ್ಲಿ ಶಿಶುವು ನಾನು ಜೋಗುಳ ಹಾಡಿ ಮಲಗಿಸೊ ತಾಯಿ ನೀನು ಮನೆಗೊಂದು ಗಿಡ ಇರಲು ಜೀವನ ಸುಗಮ ಆರೋಗ್ಯ ರಕ್ಷಣೆಗೆ ಇದು ಸಾಧನ ತಪ್ಪದೇ ಗಿಡನೆಡಿ ವಿಮಲಾ ಭಾಗ್ವತ್, ಸಿರ್ಸಿ ಉತ್ತರ…

Read More

ಬೆಂಗಳೂರು : ರಂಗಾಸ್ಥೆ ಅಭಿನಯಿಸುವ ಜನಪದ ಹಾಗೂ ಕುಮಾರವ್ಯಾಸ ಭಾರತದ ಸಂಗಮ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನವನ್ನು ದಿನಾಂಕ 19 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಗಣೇಶ ಮಂದಾರ್ತಿ ಇವರು ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 88674 19347, 97422 42313 ಮತ್ತು 81477 93773 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಡುಪಿ : ಮಾಹೆಯ ಎಂ.ಐ.ಸಿ.ಯಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರದ ಯಕ್ಷರಂಗದ ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಕಾರ್ಯಕ್ರಮವು ದಿನಾಂಕ 14 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಎಂ.ಐ.ಸಿ. ನಿರ್ದೇಶಕರು, ಮಲ್ಟಿಮೀಡಿಯ ಸಂಪನ್ಮೂಲ ಕೇಂದ್ರದ ಸಂಯೋಜಕಿ ಡಾ. ಶುಭಾ ಎಚ್.ಎಸ್. ಇವರುಗಳು ಉಪಸ್ಥಿತರಿದ್ದರು.

Read More

ಬೆಂಗಳೂರು : ನಿರುದ್ಯೋಗಿ ಯುವಕ-ಯುವತಿಯರಿಗೆ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ರಾಮನಗರ ಜಿಲ್ಲೆಯ ಬಿಡದಿಯ ಜೋಗರದೊಡ್ಡಿಯಲ್ಲಿ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಗೆ ದಿನಾಂಕ 25 ಜೂನ್ 2025ರಿಂದ ಪ್ರವೇಶಾತಿ ಆರಂಭವಾಗಲಿದೆ. ಸಂಸ್ಥೆಯು 1991ರಿಂದ ನಿರುದ್ಯೋಗ ಯುವಕ-ಯುವತಿಯರಿಗೆ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭ ಕಲೆ ವಿಭಾಗಗಳಲ್ಲಿ ಉಚಿತವಾಗಿ ತರಬೇತಿ ನೀಡುತ್ತಿದೆ. ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರುವ 18ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ – ಯುವತಿಯವರು ಪ್ರವೇಶ ಪಡೆಯಬಹುದಾಗಿದೆ. ಇದುವರೆಗೂ 1300 ಹೆಚ್ಚು ವಿದ್ಯಾರ್ಥಿಗಳು ಶಿಲ್ಪಕಲಾ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ ಶೇ.92ರಷ್ಟು ವಿದ್ಯಾರ್ಥಿಗಳು ಲಾಭದಾಯಕ ಹುದ್ದೆಗಳಲ್ಲಿದ್ದು, ಹಲವರು ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಮರ, ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ ತರಬೇತಿ ಅವ 18 ಮತ್ತು ಕುಂಭ ಕಲೆ (ಟೆರಕೋಟ) ವಿಭಾಗದ ತರಬೇತಿಯ ಅವ 6 ತಿಂಗಳಾಗಿದೆ. ತರಬೇತಿ ಅವಯಲ್ಲಿ ಊಟ, ವಸತಿ, ಸಮವಸ್ತ್ರ, ಉಪಕರಣಗಳು/ ಕಚ್ಚಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು…

Read More

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವು ದಿನಾಂಕ 15 ಜೂನ್ 2025ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ “ಕಲೆ ಯಾವತ್ತೂ ಒಂದೇ ಭಾಷೆಗೆ ಸೀಮಿತವಾಗಿರಬಾರದು. ಅದು ಸೀಮಾತೀತವಾಗಿರಬೇಕು. ಯಕ್ಷಗಾನ ಕೂಡ ಇಂದು ಜಾಗತಿಕ ಕಲೆಯಾಗಿದೆ. ಯಕ್ಷಗಾನ ಇಂದು ಜಾಗತೀಕ ಕಲೆಯಾಗಿ ಪ್ರಸಿದ್ಧಿಯಾಗಲು ಇಂಗ್ಲೀಷ್ ಮೂಲಕ ಯಕ್ಷಗಾನ ನಡೆಸಿಕೊಟ್ಟ ಪಣಂಬೂರು ವೆಂಕಟ್ರಾಯ ಐತಾಳರ ಪ್ರಯತ್ನವೇ ಕಾರಣ. ಸಾಧಿಸಿದ ಕಲೆಯ ಮೂಲಕವೇ ಆ ವ್ಯಕ್ತಿಯನ್ನು ಗುರುತಿಸುವುದೇ ಆ ವ್ಯಕ್ತಿಯ ಸಾಧನೆಯಾಗುತ್ತದೆ. ಅಂತಹ ಗೌರವಕ್ಕೆ ವೆಂಕಟ್ರಾಯ ಐತಾಳರು ಭಾಜನರಾಗಿದ್ದಾರೆ. ನಾವು ಚಿಕ್ಕವರಿರುವಾಗ ಇಂಗ್ಲೀಷ್‌ ನಲ್ಲಿ ಹೇಗೆ ಯಕ್ಷಗಾನ ಮಾಡಬಹುದು ಎಂಬ ಕುತೂಹಲವಿತ್ತು. ಅದನ್ನು ಐತಾಳರು ತೋರಿಸಿಕೊಟ್ಟಿದ್ದಾರೆ.…

Read More

ಪೊನ್ನಂಪೇಟೆ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧೀನದಲ್ಲಿ ‘ಕೆ.ಎಂ.ಎ. ದಫ್ ಮುಟ್ಟ್ (ರಾತೀಬ್)’ ತಂಡವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ದಿನಾಂಕ 13 ಜೂನ್ 2025ರಂದು ದಫ್ ಮುಟ್ಟ್ ಪ್ರದರ್ಶನವನ್ನು ಪ್ರಸ್ತುತಪಡಿಸಿದೆ. ಈ ಮೂಲಕ ಕೊಡವ ಮುಸ್ಲಿಮರ ಸಾಂಪ್ರದಾಯಿಕ ಧಾರ್ಮಿಕ ಕಲೆಯನ್ನು ಬೆಂಗಳೂರು ದೂರದರ್ಶನ ಚಂದನ ವಾಹಿನಿ ದಾಖಲೀಕರಣಗೊಳಿಸಿತು. ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಧಾರ್ಮಿಕ ಕಲೆಯಾದ ‘ದಫ್ ಮುಟ್ಟ್ ‘ ಅನ್ನು ಮತ್ತಷ್ಟು ಪ್ರೋತ್ಸಾಹಿಸಿ ಅದರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ಈ ತಂಡವನ್ನು ರಚಿಸಲಾಗಿದ್ದು, ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ದೂರದರ್ಶನದ ಅತ್ಯಾಧುನಿಕ ಸ್ಟುಡಿಯೋದಲ್ಲಿ ಈ ಕಲೆಯನ್ನು ಎರಡು ಗಂಟೆಗಳ ಕಾಲ ಪ್ರದರ್ಶಿಸಿತು. ಈ ಸಂದರ್ಭ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ, “ಧೀರತ್ವ ತೋರಿದ ಹುತಾತ್ಮ ಸೂಫಿವರ್ಯರನ್ನು ಸ್ತುತಿಗೀತೆಗಳ ಮೂಲಕ ಸ್ಮರಿಸುವ ಸೂಫಿ ಸಾಹಿತ್ಯದ ಪ್ರಮುಖ ಭಾಗವಾಗಿರುವ…

Read More

ಕಾಸರಗೋಡು: ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಸಂಸ್ಥೆಯಿಂದ ನಾಡೋಜ ಡಾ. ಕಯ್ಯಾರ ಕಿಞ್ಣಣ್ಣ ರೈ ಇವರ ಜನ್ಮದಿನೋತ್ಸವದ ಪ್ರಯುಕ್ತ ನೀಡಲಾಗುವ 2025ನೆಯ ಸಾಲಿನ ನಾಡೋಜ ಡಾ. ಕಯ್ಯಾರ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16 ಜೂನ್ 2025ರ ಸೋಮವಾರದಂದು ನಡೆಯಿತು. ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡಿ “ನಾಡೋಜ ಡಾ. ಕಯ್ಯಾರ ಪ್ರಶಸ್ತಿಗೆ ಸಾಹಿತ್ಯ ಹಾಗೂ ಮಾಧ್ಯಮ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿ ಜನಪ್ರಿಯರಾದ ಡಾ. ಸದಾನಂದ ಪೆರ್ಲರಿಗೆ ಕಯ್ಯಾರರ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ನೀಡಿರುವುದರಿಂದ ಅರ್ಹ ವ್ಯಕ್ತಿಗೆ ಶ್ರೇಷ್ಠ ವ್ಯಕ್ತಿಯ ಹೆಸರಿನ ಪ್ರಶಸ್ತಿ ನೀಡಿರುವ ಕೀರ್ತಿಗೆ ಸಂಸ್ಥೆಯು ಭಾಜನವಾಗಿದೆ. ಸಾಹಿತ್ಯ ರಂಗ ಹಾಗೂ ಮಾಧ್ಯಮ ರಂಗದಲ್ಲಿ ತಮ್ಮ ಅವಿರತ ದುಡಿಮೆಯಿಂದ ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಸಿದ ಪೆರ್ಲ ಅವರು ಕಯ್ಯಾರರನ್ನು ಪ್ರಾತಿನಿಧಿಕ ಕವಿಯಾಗಿ ಇಟ್ಟುಕೊಂಡು ಕಾಸರಗೋಡಿನ ಹೋರಾಟವನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಮಹತ್ವಪೂರ್ಣವಾದ ಮಹಾಪ್ರಬಂಧವನ್ನು ಮಂಡಿಸಿ…

Read More