Author: roovari

ಉದ್ಯಾವರ : 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ ಆಶ್ರಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಉದ್ಯಾವರ ಇವರ ಹನ್ನೆರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವನ್ನು ದಿನಾಂಕ 29 ಆಗಸ್ಟ್ 2024 ಗುರುವಾರ ಸಂಜೆ 5-00 ಗಂಟೆಗೆ ಉದ್ಯಾವರದ ಶ್ರೀ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಬಿ. ಭುಜಂಗ ಶೆಟ್ಟಿ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ನಗರಪಾಲಿಕೆಯ ಸದಸ್ಯರಾದ ಶ್ರೀ ನವೀನ್ ಡಿಸೋಜ, ಉಡುಪಿ ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಶ್ರೀ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಾವರ ಬಿಲ್ಲವ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೋಟ್ಯಾನ್ ಇವರುಗಳು ಭಾಗವಹಿಸದಲಿರುವರು. ಸಭಾ ಕಾರ್ಯಕ್ರಮದ ಬಳಿಕ ಕಲಾಭಿ ಥಿಯೇಟರ್ ಮಂಗಳೂರು ಇವರಿಂದ ಜಪಾನಿನ ಬುನ್ರಾಕು ಬೊಂಬೆಯಾಟ ‘ಪುರ್ಸನ ಪುಗ್ಗೆ’ ಶ್ರವಣ್ ಹೆಗ್ಗೋಡು ಇವರ…

Read More

ಅಂಕೋಲಾ : ಭಾರತದ 78 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ಘಟಕ ಹಾಗೂ ಸಾಹಿತಿಗಳ ಒಕ್ಕೂಟವಾದ ಮಿತ್ರ ಸಂಗಮ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಹಾಗೂ ಅಂಕೋಲದ ಹಿರಿಯ ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ 23 ಆಗಸ್ಟ್ 2024ರಂದು ನಡೆಯಿತು. ಅಂಕೋಲ ಇಲ್ಲಿನ  ಗ್ರಾಮೀಣ ಭಾಗದ ಬೇಳಾಬಂದರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಾಗೂ ಉಪಯುಕ್ತ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಮೋಹನ ಹಬ್ಬು, ರಾಮಕೃಷ್ಣ ಗುಂದಿ, ನಾಗೇಂದ್ರ ತೊರ್ಕೆ, ಗೋಪಾಲಕೃಷ್ಣ ನಾಯಕ ಹಾಗೂ ಮಹಾಂತೇಶ ರೇವಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಕೋಲಾ ಕ. ಸಾ. ಪ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ ಮಾತನಾಡಿ “ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಗೌರವ ಹೊಂದಿರಬೇಕು.…

Read More

ಪುತ್ತೂರು: ಪುತ್ತೂರಿನ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ. ಬಿ. ಎಸ್‌. ಇ. ಸಂಸ್ಥೆಯಲ್ಲಿ ವಿಶ್ವ ಸಂಸ್ಕೃತ ದಿನಾಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮವು 19 ಆಗಸ್ಟ್ 2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಪ್ಪಳಿಗೆ ಅಂಬಿಕಾ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಮಾತನಾಡಿ “ಸಂಸ್ಕೃತ ಕೇವಲ ಭಾಷೆಯಲ್ಲ ಅದು ಭಾರತಾಂಬೆಯ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿ ಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣೀಭೂತವಾಗಿದೆ. ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲಾ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯವಾಕ್ಯಗಳನ್ನು ನಾವು ಕಾಣಬಹುದು.” ಎಂದು ಹೇಳಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ “ರಕ್ಷೆಯಲ್ಲಿನ ಎಲ್ಲಾ ದಾರಗಳ ಒಗ್ಗೂಡುವಿಕೆಯು ಹೇಗೆ ಏಕತೆ ಸೂಚಿಸುತ್ತದೆಯೋ ಅದರಂತೆ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಕ್ಷಣೆ ಮಾಡಬೇಕು.” ಎಂದರು. ಅಂಬಿಕಾ ವಿದ್ಯಾಲಯ ಸಿ. ಬಿ.…

Read More

ಮಂಗಳೂರು : ಕೇದಿಗೆ ಪ್ರತಿಷ್ಠಾನ ಮಂಗಳೂರು ಹಾಗೂ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಲೀಜನ್ ಸಹಯೋಗದೊಂದಿಗೆ ‘ಲಕ್ಷ್ಮೀ ಭಾಸ್ಕರ ಪ್ರಶಸ್ತಿ’ ಪ್ರದಾನ ಸಮಾರಂಭವು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 17 ಆಗಸ್ಟ್ 2024ರಂದು ನಡೆಯಿತು. ಕೇದಿಗೆ ಪ್ರತಿಷ್ಠಾನ ಮಂಗಳೂರು ವತಿಯಿಂದ ನಿವೃತ್ತ ಸೇನಾನಿ ವಿಕ್ರಂ ದತ್ತಾ ಅವರಿಗೆ ರಾಷ್ಟ್ರ ಸೇವಾ ನಿಷ್ಠ, ಸಂಘಟಕ ಸುಧಾಕರ ರಾವ್ ಪೇಜಾವರ ಅವರಿಗೆ ಸಮಾಜ ಸೇವಾ ನಿಷ್ಠ, ಕಲಾವಿದ ಸೂರ್ಯ ಆಚಾರ್ ವಿಟ್ಲ ಅವರಿಗೆ ಚಿತ್ರಕಲಾ ನಿಷ್ಠ, ಕೃಷಿಕ ದಯಾಪ್ರಸಾದ್ ಚೀಮುಳ್ಳು ಅವರಿಗೆ ಕೃಷಿ ಕ್ಷೇತ್ರ ನಿಷ್ಠ, ಕಲಾವಿದ ಎಲ್ಲೂರು ರಾಮಚಂದ್ರ ಭಟ್ ಅವರಿಗೆ ಯಕ್ಷಗಾನ ಕಲಾನಿಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸೇನಾನಿ ರಾಮ ಶೇಷ ಶೆಟ್ಟಿ, ಚಂದ್ರಹಾಸ ಕೊಂಚಾಡಿ, ದೇವಿಪ್ರಸಾದ್ ಕೊಂಚಾಡಿ, ಸುನಿಲ್ ಕೊಂಚಾಡಿಗೆ ಇವರೆಲ್ಲಾರಿಗೂ ವಿಶೇಷ ಸನ್ಮಾನ ನೀಡಲಾಯಿತು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, “ಡಾ. ಕೇದಿಗೆ ಅರವಿಂದ…

Read More

ಕಾಸರಗೋಡು: ಹಿರಿಯ ಯಕ್ಷಗಾನ ಭಾಗವತ ಹಾಗೂ ಕೃಷಿಕರಾದ ಮಡ್ವ ಶಂಕರನಾರಾಯಣ ಭಟ್ 22 ಆಗಸ್ಟ್ 2024ರ ಗುರುವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಕಳೆದ ಎರಡು ತಿಂಗಳುಗಳಿಂದ ಬಳಲುತ್ತಿದ್ದ ಶ್ರೀಯುತರು, ದೇಲಂಪಾಡಿ ಪರಿಸರದಲ್ಲಿ ಭಾಗವತರೆಂದೇ ಖ್ಯಾತರಾಗಿದ್ದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಇವರ ಶಿಷ್ಯರಾಗಿದ್ದ ಶಂಕರನಾರಾಯಣ ಭಟ್, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಹಿರಿಯ ಸದಸ್ಯರಾಗಿದ್ದದ್ದು ಮಾತ್ರವಲ್ಲದೆ. ಯಕ್ಷಗಾನ ಭಾಗವತಿಕೆಯನ್ನು ಕಲಿಸುವ ಗುರುವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Read More

ಬೆಂಗಳೂರು : ಎ ಬ್ಯಾಂಗ್ಲೂರ್ ಪ್ಲೇಯರ್ಸ್ ಪ್ರಸ್ತುತಪಡಿಸುವ ‘ಅನವರತ’ ಸಂಗೀತ ನೃತ್ಯ ನಾಟಕದ ಪ್ರದರ್ಶನವು 25 ಆಗಸ್ಟ್ 2024ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ. ಚಿದಾನಂದ ಎಸ್. ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ನಟರಾಜ ಶರ್ಮ ಹಾಗೂ ಅರುಣ್ ಸಾಹಿತ್ಯ ರಚಿಸಿದ್ದು, ನಾಗರಾಜ್ ರಾವ್ ಸಂಗೀತ ನೀಡಿದ್ದಾರೆ. ಶ್ರೀಪಾದ ಬೆಳಕಿನ ವಿನ್ಯಾಸ ಮಾಡಲಿದ್ದು, ರಂಗ ಸಜ್ಜಿಕೆ ತೇಜಸ್ ಅವರದ್ದು. ಅನವರತ : ‘ಕಲೆಗಾಗಿ ಕಲೆ’ ಹೊರನೋಟಕ್ಕೆ ಈ ವಾಕ್ಯ ಸಾಮಾನ್ಯವಾಗಿ ಕಂಡರೂ ಇದರ ಆಳಕ್ಕೆ ಇಳಿದಷ್ಟು, ಅರ್ಥ ಸೃಷ್ಟಿಯ ಮೂಲಕ್ಕೆ ಕರೆದೊಯ್ಯುತ್ತದೆ. ಜಗತ್ತಿನ ಸೃಷ್ಟಿಯೇ ಒಂದು ಕಲೆ ಎನ್ನಬಹುದು. ಕಲೆಯನ್ನು ನಾವು ಹೇಗೆ ನೋಡುತ್ತೇವೆ ? ಕೇವಲ ಒಂದು ಮನೋರಂಜನಾ ವಸ್ತುವಾಗಿಯೋ, ಮನಸ್ಸಿಗೆ ಉಲ್ಲಾಸವನ್ನು ನೀಡುವ ಕ್ರಿಯೆಗಿಗೊ, ಜೀವನ ಶೈಲಿಯಾಗಿಯೋ ಅಥವಾ ಆತ್ಮ ಶುದ್ಧಿಗೊಳಿಸುವ ಪ್ರಕ್ರಿಯೆಯಾಗಿಯೊ ? ಆ. ನ. ಕೃ. ಅವರ ದೃಷ್ಟಿಯಲ್ಲಿ ಕಲೆಗಳಲ್ಲಿ ಪರಮಕಲೆ ಜೀವನದ ಲಲಿತಕಲೆ. ಎಲ್ಲವೂ ನಾವು ನೋಡುವ, ಗ್ರಹಿಸುವ ಹಾಗೂ ಅರ್ಥೈಸಿಕೊಳ್ಳುವ…

Read More

ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ ಇದರ ವತಿಯಿಂದ ವಾರ್ಷಿಕ ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯ ಅಂಗವಾಗಿ ದಿನಾಂಕ 3 ಆಗಸ್ಟ್ 2024ರಂದು ಚೆನ್ನೈಯ ಸಿದ್ದಾರ್ಥ ಪ್ರಕಾಶ್ ಇವರ ತಂಡದವರಿಂದ ಸಂಗೀತ ಕಛೇರಿಯು ಉಡುಪಿಯ ಲತಾಂಗಿ ಹಾಲ್‌ನಲ್ಲಿ ನಡೆಯಿತು. ಸಿದ್ದಾರ್ಥ ಪ್ರಕಾಶ್ ಮತ್ತು ತಂಡ ಪ್ರಸ್ತುತ ಪಡಿಸಿದ ಅನುಸರಣಿ -ಜಗನ್ನೋಹಿನಿಯ ಶೋಭಿಲ್ಲು ಕನ್ನಡಗೌಳದ ಓರಜೂಪು, ಹಮೀರ್‌ಕಲ್ಯಾಣಿಯ ವೆಂಕಟಶೈಲ, ಆನಂದ ಭೈರವಿಯ ಮರಿವೇರೆ, ಪೂರ್ಣಚಂದ್ರಿಕದ ತೆಲಿಸಿರಾಮ, ಕೀರವಾಣಿಯ ಕಲಿಗೆಯುಂಟೆ, ರಾಗಮಾಲಿಕೆಯ ಬಳಿಕ ರಾಮ ಮಂತ್ರವ. ಸಿದ್ದಾರ್ಥರಿಗೆ ಟಿ.ಎನ್‌.ಎಸ್. ಮತ್ತು ನೈವೇಲಿ ಗುರುಪರಂಪರೆಯನ್ನು ನೆನಪಿಸುವ, ಅನಾಯಾಸವಾಗಿ ಓಡಿಯಾಡುವ ಆಕಾರಗಳಿವೆ. ಸಂಪ್ರದಾಯಬದ್ಧ ಶೈಲಿಯ ಇವರ ಹಾಡುಗಾರಿಕೆಯು ಸ್ವರ ಸಂಯೋಜನೆಗಳ ಸ್ವರ ಗುಚ್ಛಗಳ ಹೆಣಿಗೆಯಾಗಿರುತ್ತದೆ. ಇವರು ವಾಯ್ಸ್ ಕಲ್ಟರ್‌ನೊಂದಿಗೆ, ಘನ ನಯ ಕ್ರಮ ಅನುಸರಿಸಿ ಕಾರ್ವೆ ಸಹಿತವಾಗಿ ಸ್ವರಗಳನ್ನು ಪ್ರಯೋಗಿಸಿದ್ದಾರೆ. ಜನಮನವನ್ನು ಬಹು ಬೇಗ ಗೆಲ್ಲಬಲ್ಲರು. ವಯಲಿನ್‌ನಲ್ಲಿ ಸಹಕರಿಸಿದ ವೈಭವ್ ರಮಣಿ, ಮೃದಂಗದ ಅಕ್ಷಯ ಆನಂದ್‌ ಹಾಗೂ ಖಂಜಿರದ ಕಾರ್ತಿಕ್ ಇನ್ನಂಜೆ ಅವರ ನುಡಿ ಸಾಣಿಕೆ ಹಿತಮಿತವಾಗಿತ್ತು.

Read More

ಸೃಷ್ಟಿಯ ಅನಾದಿ ಕಾಲದಿಂದಲೂ ಬದುಕು ಜೀವನ ಕಾವ್ಯ ಸಂಸ್ಕೃತಿಗಳು ನಿರಂತರ ಪ್ರಯಾಣ ಮಾಡುತ್ತಿರುತ್ತವೆ, ಸಂಚಾರ ಮಾಡುತ್ತಿರುತ್ತವೆ. ಅವು ಕಾಲ ಕಾಲಕ್ಕೆ ಬೇರೆ ಬೇರೆ ಹೆಸರು, ಭಾಷೆ, ಕ್ಷೇತ್ರಗಳನ್ನು ಪಡೆದುಕೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ತಜ್ಞರು, ವಿದ್ವಾಂಸರು ತಮ್ಮ ಸಮಕಾಲೀನ ಸಮಾಜದ ಸಾಮಾನ್ಯರಿಗೆ ಅವುಗಳ ತಿಳಿವಳಿಕೆ ನೀಡುತ್ತಾರೆ. ಕಾವ್ಯ ಸಂಸ್ಕೃತಿಯ ಯಾನದ ಅಂಥ ಪಯಣ ಈ ಸಲ ಒಂದು ವಿಶಿಷ್ಟ ಉದ್ದೇಶ, ಗುರಿಗಳನ್ನು ಹೊಂದಿಕೊಂಡು ನಾಡಿನ ತುಂಬ ಪಸರಿಸಲಿದೆ. ನಾಡು ನುಡಿಯ ಅಭಿಮಾನದ ಪರಿಮಳವನ್ನು ಬೀರುತ್ತ, ಹೊರನಾಡ ಕನ್ನಡಿಗರು, ಗಡಿನಾಡು ಮತ್ತು ಒಳಭಾಗದ ಎಲ್ಲಾ ಕಾವ್ಯಪ್ರೇಮಿಗಳ ಪರಿಚಯವನ್ನು ನವೀಕರಿಸಲಿದೆ. ಕಾವ್ಯಕ್ಕೆ ಹೊಸತು ಹಳತು ಎಂಬುದಿಲ್ಲ. ಅದು ನಿತ್ಯ ನವೀನವಾದುದು. ಓದುವ ಮನಸ್ಸು ಪ್ರತಿದಿನವೂ ಹೊಸದನ್ನು ಸ್ವೀಕರಿಸುತ್ತದೆ. ಆ ಮೂಲಕ ಮನುಕುಲದ ನೋವಿಗೆ ಮತ್ತೆ ಮತ್ತೆ ಮುಲಾಮು ಲೇಪಿಸಬೇಕಾಗುತ್ತದೆ. ಕಾವ್ಯದ ಓದು ಮತ್ತು ಪ್ರಚಾರ ಇಂದಿನ ದಿನಮಾನದಲ್ಲಿ ಸ್ವಲ್ಪ ಮಸುಕಾದಂತೆ ಕಂಡಿರಬಹುದಾದರೂ, ಸಂಗೀತ ಸಾಹಿತ್ಯ ರಂಗಭೂಮಿ ಮುಂತಾದವುಗಳ ಮೂಲಕ ವಿವಿಧ ಕಲಾಪ್ರೇಮಿಗಳ ಮನಸ್ಸನ್ನು ಮುದಗೊಳಿಸಿ ಹದಗೊಳಿಸಿ…

Read More

ಕೋಟ : ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇದರ ವತಿಯಿಂದ ದಶಮಾನ ಪೂರ್ವ ಕಾರ್ಯಕ್ರಮ ಶ್ರಾವಣ ಸಂಭ್ರಮದಲ್ಲಿ ‘ಸೌರಭ ಸಪ್ತಮಿ’ ಯಕ್ಷಗಾನ ಸಪ್ತಾಹವು ದಿನಾಂಕ 25-08-2024ರಿಂದ 31-08-2024ರವರೆಗೆ ಸಂಜೆ 6-00 ಗಂಟೆಗೆ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದಲ್ಲಿ ನಡೆಯಲಿದೆ. ದಿನಾಂಕ 25 ಆಗಸ್ಟ್ 2024ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಇದರ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕರ್ಕೇರ ಕೋಡಿ ಇವರು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾಲ್ಲೂರು ಶಿವರಾಮ ಶೆಟ್ಟಿಯವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೀರ್ತಿಶೇಷ ಹಂದಾಡಿ ಬಾಲಕೃಷ್ಣ ನಾಯಕ್ ಸಂಸ್ಮರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕವಿ ದೇವಿದಾಸ ವಿರಚಿತ ‘ಚಿತ್ರಸೇನ ಕಾಳಗ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಿನಾಂಕ 26 ಆಗಸ್ಟ್ 2024ರಂದು ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಮೈಂದ ದ್ವಿವಿಧ ಕಾಳಗ’, ದಿನಾಂಕ 27 ಆಗಸ್ಟ್ 2024ರಂದು…

Read More

ಧಾರವಾಡ : ಆಲೂರು ವೆಂಕಟರಾವ್ ಸಭಾಭವನದಲ್ಲಿ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ‘ಅನಂತ ಸ್ವರ ನಮನ’ ಮೂರು ದಿನಗಳ ಸಂಗೀತೋತ್ಸವವು ದಿನಾಂಕ 23 ಆಗಸ್ಟ್ 2024ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಇವರು ಮಾತನಾಡಿ “ಸಂಗೀತ ಹಾಗೂ ಸಾಹಿತ್ಯಕ್ಕೆ ಧಾರವಾಡ ಪ್ರಸಿದ್ಧವಾಗಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅನಂತ ಹರಿಹರ ನೀಡಿದ ಕೊಡುಗೆ ಅಪಾರವಾಗಿದೆ. ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರ ಮಾರ್ಗದರ್ಶನಲ್ಲಿ ಸಾಕಷ್ಟು ಕಲಾವಿದರಿಗೆ ಉತ್ತಮ ವೇದಿಕೆ ದೊರೆಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶವಾಯಿತು. ಅವರು ಯಾವುದೇ ಅಪೇಕ್ಷೆ ಇಲ್ಲದೆ ಸಂಗೀತಕ್ಕೆ ಸೇವೆ ಸಲ್ಲಿಸಿದ್ದಾರೆ. ಅದೇ ಮಾರ್ಗದಲ್ಲಿ ಯುವ ಕಲಾವಿದರು ಸಾಗಬೇಕು. ಅನಂತ ಹರಿಹರ ಅವರು ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರ ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು. ಯಶಸ್ವಿ ಸಂಘಟಕ, ಸಂಸ್ಕೃತಿಯ ರಾಯಭಾರಿಯಾಗಿ ಎಲ್ಲರ ಮನದಲ್ಲಿ…

Read More