Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ, ಸುಮನಸಾ ಕೊಡವೂರು, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಕೊಡವೂರು ಶಂಕರನಾರಾಯಣ ದೇವಸ್ಥಾನದ ಸಹಯೋಗದೊಂದಿಗೆ ಕೊಡವೂರಿನಲ್ಲಿ ದಿನಾಂಕ 03 ಆಗಸ್ಟ್ 2025ರಂದು ‘ಧೀಂಕಿಟ ಯಕ್ಷಗಾನ ಹೆಜ್ಜೆ’ ತರಬೇತಿ ಶಿಬಿರದ ಉದ್ಘಾಟನೆ ನಡೆಯಿತು. ಕರ್ನಾಟಕ ಸರಕಾರದ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ “ಯಕ್ಷಗಾನ ಕೇವಲ ಕಲೆಯಷ್ಟೇ ಅಲ್ಲಾ, ಅದು ನಮ್ಮ ಸಂಸ್ಕ್ರತಿಯ ಪ್ರತೀಕ, ಈಗಿನ ಒತ್ತಡದ ಬದುಕಿನ ನಡುವೆ ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಆರೋಗ್ಯಕ್ಕೂ ಉತ್ತಮ” ಎಂದು ಹೇಳಿದರು. ವೇದಿಕೆಯಲ್ಲಿ ಬ್ರಹ್ಮಬೈದೇರುಗಳ ಗರಡಿ ಕಲ್ಮಾಡಿ ಇದರ ಅಧ್ಯಕ್ಷರಾದ ಶಶಿಧರ್ ವಡಬಾಂಡೇಶ್ವರ, ಯಕ್ಷ ಸಂಜೀವ ಟ್ರಸ್ಟ್ ಬುಡ್ನಾರು ಇದರ ಪ್ರವರ್ತಕರಾದ ಗುರು ಬನ್ನಂಜೆ ಸಂಜೀವ ಸುವರ್ಣ, ಸುಮನಸಾ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು, ಸುಮನಸಾ ಸಂಚಾಲಕರಾದ ಭಾಸ್ಕರ್ ಪಾಲನ್ ಬಾಚನಬೈಲ್, ಶಂಕರನಾರಾಯಣ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜಾ ಸೇರಿಗಾರ್ ಉಪಸ್ಥಿತರಿದ್ದರು.…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮುಷ್ಟಿ ಪ್ರಜ್ಞೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಹಲವು ಪ್ರಮುಖ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಒಡನಾಟ ಹೊಂದಿದ ಸಿಖ್ ಸಮುದಾಯಕ್ಕೆ ಸೇರಿದ್ದರೂ ಕನ್ನಡ ಸಾಹಿತ್ಯ, ಸಂಸ್ಕೃತಿಯ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ ಸರ್ದಾರ್ ಮನ್ ಪ್ರಿತ್ ಸಿಂಗ್ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9 (3)ರಲ್ಲಿ ಮಾನ್ಯ ಅಧ್ಯಕ್ಷರಿಗೆ ದತ್ತವಾಗಿರುವ ಅಧಿಕಾರದನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ನಾಮ ನಿರ್ದೇಶನ ಮಾಡಿದ್ದಾರೆ. ಸರ್ದಾರ್ ಮನ್ ಪ್ರಿತ್ ಸಿಂಗ್ ಇವರು ಸಿಖ್ ಸಮುದಾಯಕ್ಕೆ ಸೇರಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಪ್ರೀತಿ ಹಾಗೂ ಸಂಘ ಸಂಸ್ಥೆಗಳ ಜೊತೆಗೆ ಒಡನಾಟ ಹೊಂದಿದ್ದಾರೆ. ಅವರ ಕನ್ನಡ ಪ್ರೇಮ ಮತ್ತು ನಾಡಿನ ಕುರಿತು ಅಭಿಮಾನ ಕನ್ನಡ ಸಾಹಿತ್ಯ ಪರಿಷತ್ತಿಗೆ ಇನ್ನಷ್ಟು ಕ್ರಿಯಾತ್ಮಕತೆಯನ್ನು ತರಲಿದೆ ಎಂದು…
ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಸಾಹಿತ್ಯ ಸಂಘದ ವಿವಿಧ ಚಟುವಟಿಕೆಗಳ ಮುನ್ನುಡಿಯಾಗಿ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 05 ಆಗಸ್ಟ್ 2025ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ಭಾಷಾ ವಿಭಾಗದ ಪ್ರಾಧ್ಯಾಪಕರಾದ ಡಾ. ಗೀತಾಕುಮಾರಿ ಟಿ. ಮಾತನಾಡಿ “ಸಾಹಿತ್ಯವು ಜೀವನ ಮೌಲ್ಯವನ್ನು ರೂಪಿಸುವಂತಹ ಒಂದು ಕಲೆ. ಅದು ಬದುಕಿಗೆ ಭರವಸೆಯನ್ನು ನೀಡಿ ಒಂದು ವಿಶಿಷ್ಟ ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಮೂಲಕ ಮಹತ್ತರವಾದ ಸ್ಥಾನವನ್ನು ವಹಿಸುತ್ತದೆ. ಸಾಹಿತ್ಯದ ಓದು ಅರಿವಿನ ವಿಸ್ತಾರದ ಜೊತೆಗೆ ಸಮಾಜವನ್ನು ವೀಕ್ಷಿಸುವ ಹೊಸ ದೃಷ್ಟಿಕೋನವನ್ನು ನೀಡುತ್ತದೆ ” ಎಂದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ. ಎಂ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಾಹಿತ್ಯ ಸಂಘದ ಸಂಯೋಜಕರಾದ ರತ್ನಾವತಿ ಬಿ. ಉಪಸ್ಥಿತರಿದ್ದರು. ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಾಮಾಜಿಕ ವಸ್ತುವನ್ನೊಳಗೊಂಡ ಪ್ರಹಸನವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ…
ಬೊಗಸೆಯಲ್ಲಿ ಸಿಕ್ಕ ಬಾಳು ಚಿಕ್ಕದಿರಬಹುದು. ಆದರೆ ಮನದಾಳದಲ್ಲಿ ತುಂಬಿಕೊಂಡ ಪ್ರೀತಿಯ ನೆನಪು ದೊಡ್ಡದಾಗಿದ್ದರೆ ಬದುಕು ಸುಂದರವಾಗಿರುತ್ತದೆ. ನಮ್ಮ ಸೌಭಾಗ್ಯಕ್ಕೆ ಸಿಕ್ಕಿದ ಪ್ರೀತಿಯನ್ನು ಕೃತಜ್ಞತೆಯೊಂದಿಗೆ ನೆನೆಯುತ್ತಿರಬೇಕು. ಅಂಥ ಸಂದರ್ಭದಲ್ಲಿ ಮುಳ್ಳುಗಳ ನಡುವೆ ನಿಂತು ನಳನಳಿಸುವ ಗುಲಾಬಿಯಂತೆ ಬದುಕಿನ ದುಗುಡಗಳ ನಡುವೆ ನೆನಪಿನಲ್ಲಿ ಬಂದು ನಿಲ್ಲುವ ವ್ಯಕ್ತಿ ಸುನಂದಾ ಬೆಳಗಾಂವಕರ. ತನ್ನ ಏಳು ಜನ ಸೋದರ ಸೋದರಿಯರಲ್ಲಿ ಸುನಂದಾ ತನ್ನ ಬದುಕು ಬರಹಗಳಿಂದ ವಿಶಿಷ್ಟ ವ್ಯಕ್ತಿಯಾಗಿ ನಿಲ್ಲುತ್ತಾಳೆ. ಒಡಹುಟ್ಟುಗಳ ಕರೆಗೆ ಆಕೆ ಸದಾ ಓಗೊಟ್ಟವಳು. ಅವರ ನಡೆನುಡಿಗಳಲ್ಲಿ ಉತ್ತಮಿಕೆಯನ್ನು ಕಂಡಾಗ ಹಿಗ್ಗಿದವಳು. ಬದುಕು ಬರಹಗಳಲ್ಲಿ ತನ್ನ ತಂದೆತಾಯಿಯರನ್ನು ದೇವರ ಸ್ಥಾನದಲ್ಲಿಟ್ಟು ನೆನೆದವಳು. ಜೀವನವಿಡೀ ಅವರನ್ನು ಪೂಜಿಸಿದವಳು. ಪತಿ ಶ್ರೀ ಬಿಂದುಮಾಧವ ಬೆಳಗಾಂವಕರರನ್ನು ಪೊರೆದ ರೀತಿಯೂ ಅನನ್ಯ. ಬಿಂದು ಅವರ ತಾಯಿ ದಿನವೂ ಪಕ್ವಾನ್ನವನ್ನು ಮಾಡಿ ಮಗನಿಗೆ ಉಣಬಡಿಸಿದಂತೆ ಸುನಂದಾಳೂ ಪ್ರತಿದಿನ ಹಲವು ಪದಾರ್ಥಗಳನ್ನು ತಯಾರಿಸಿ ಉಣಬಡಿಸಿದ್ದನ್ನು ಕಂಡು ಹೊಗಳಿದ್ದೇನೆ. ನನಗೆ ತಿಳಿದಂತೆ ಪಾಕಶಾಸ್ತ್ರ ಚಾತುರ್ಯದಲ್ಲಿ ಆಕೆಯನ್ನು ಸರಿಗಟ್ಟುವವರು ಯಾರೂ ಇರಲಿಲ್ಲ. ಆಕೆ ತನ್ನ ಮನೆ…
ಪುತ್ತೂರು : ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ಶಿಕ್ಷಕ ಕವಿಗಳಿಗಾಗಿ ಏರ್ಪಡಿಸಿದ ಅಂತಾರಾಜ್ಯ ಮಟ್ಟದ ಆಚಾರ್ಯ ಕವಿಗೋಷ್ಠಿಯು ದಿನಾಂಕ 03 ಆಗಸ್ಟ್ 2025ರಂದು ನಡೆಯಿತು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾ ಘಟಕ, ಕಥಾ ಬಿಂದು ಪ್ರಕಾಶನ ಮಂಗಳೂರು ಮತ್ತು ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯ ಶತಮಾನೋತ್ಸವ ಸಮಿತಿ ಪುತ್ತೂರು ಇದರ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತರೂ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ “ಶಿಕ್ಷಕರಲ್ಲಿ ಕನ್ನಡ ಸಾಹಿತ್ಯದ ಬಗೆಗಿನ ಓದುವಿಕೆ ನಿರಂತರವಾಗಿರಬೇಕು. ಮಾತನಾಡುವಾಗ ಅರ್ಥ ಸಹಿತ ತಿಳಿದುಕೊಂಡು ಪದ ಬಳಕೆ ಮಾಡಬೇಕು. ರಸಭರಿತ ವಿಚಾರದಿಂದ ಕೂಡಿದ ಮಾತುಗಳನ್ನು ಹಾಸ್ಯಾಸ್ಪದ ಎಂದು ಟೀಕೆ ಮಾಡಬಾರದು. ವಿವಿಧ ಬಗೆಯ ಸಾಹಿತ್ಯ ಓದು ಕಡಿಮೆಯಾಗುತ್ತಿದೆ. ಶಿಕ್ಷಕರು ಸಾಹಿತ್ಯದ ಬಗೆಯ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬರೆವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಸೌಂದರ್ಯವನ್ನು ಉಳಿಸಿಕೊಳ್ಳಬೇಕು” ಎಂದು ಶಿಕ್ಷಕ ಸಾಹಿತಿಗಳಿಗೆ ಕಿವಿಮಾತು ಹೇಳಿದರು. ಪುತ್ತೂರಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಇದರ…
ಮಂಗಳೂರು : ಕಲಾಂಗಣದಲ್ಲಿ ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 284 ನೇ ಕಾರ್ಯಕ್ರಮ ‘ಕವಿತಾ ಫುಲೊತಾ’ ದಿನಾಂಕ 03 ಆಗಸ್ಟ್ 2025ರಂದು ನಡೆಯಿತು. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಗ್ಲೇಡಿಸ್ ರೇಗೊ ಇವರಿಗೆ ಲೇಖಕ ರೊನಿ ಅರುಣ್ ನುಡಿನಮನ ಸಲ್ಲಿಸಿದರು. ಪಶ್ಚಿಮ್ ಟ್ರಸ್ಟ್ ಇದರ ನಿರ್ದೇಶಕರಾದ ರೋಹಿತ್ ಸಾಂಕ್ತುಸ್ ಪುಷ್ಪಾಂಜಲಿ ಅರ್ಪಿಸಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಎಲ್ರೊನ್ ರೊಡ್ರಿಗಸ್, ಕ್ಲಾರಾ ಡಿಕುನ್ಹಾ, ರೈನಾ ಸಿಕ್ವೇರಾ, ಕೇರನ್ ಮಾಡ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಎವರೆಸ್ಟ್ ಕ್ರಾಸ್ತಾ ಇವರು ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಂಕಣಿ ಕವಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ರೊನಿ ಕ್ರಾಸ್ತಾ ಕೆಲರಾಯ್ ಇವರ ಹನ್ನೆರಡು ಕವಿತೆಗಳಿಗೆ ಸ್ವರ ಸಂಯೋಜಿಸಿ, ಸಂಗೀತ ನೀಡಿ ಹಾಡಲಾಯಿತು. ಎರಿಕ್ ಒಝೇರಿಯೊ, ಜೊಯ್ಸ್ ಒಝೇರಿಯೊ, ಶಿಲ್ಪಾ ಕುಟಿನ್ಹಾ, ಸುನಿಲ್ ಮೊಂತೇರೊ, ರೊಬಿನ್ ಸಿಕ್ವೇರಾ, ರೈನಲ್ ಸಿಕ್ವೇರಾ, ಸೋನಲ್ ಮೊಂತೇರೊ, ಜೀವನ್ ಸಿದ್ದಿ, ಪ್ರಿಥುಮಾ ಮೊಂತೇರೊ,…
ತಲಕಾಡು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಲಕಾಡು ಇದರ ಆಂತರಿಕ ಗುಣಮಟ್ಟ ಭರವಸಾ ಕೋಶ ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ವಿಭಾಗ ಆಯೋಜಿಸಿರುವ ಮೈಸೂರಿನ ನಿರಂತರ ರಂಗ ತಂಡ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನವನ್ನು ದಿನಾಂಕ 07 ಆಗಸ್ಟ್ 2025ರಂದು ಬೆಳಗ್ಗೆ 11-30 ಗಂಟೆಗೆ ತಲಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀಯುತ ಸಾಧಿಕ್ ಪಾಷಾ ಇವರು ನಾಟಕಕ್ಕೆ ಚಾಲನೆ ನೀಡಲಿದ್ದು, ಜೀವನ್ ಕುಮಾರ್ ಬಿ. ಹೆಗ್ಗೋಡು ಇವರು ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಮಂಗಳೂರು : ನೃತ್ಯ ಗುರುಗಳ ಸಂಘಟನೆಯಾದ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಆಯೋಜಿಸಿದ ನೃತ್ಯ ಕ್ಷೇತ್ರದಲ್ಲಿ ಸತತ 170 ಗಂಟೆಗಳ ಕಾಲ ಭರತನಾಟ್ಯ ಮ್ಯಾರಥಾನ್ ಮಾಡಿ ಗೋಲ್ಡನ್ ಬುಕ್ ರೆಕಾರ್ಡ್ ಮಾಡಿದ ಸೌರಭ ನೃತ್ಯಕಲಾ ಪರಿಷತ್ ಸಂಸ್ಥೆಯ ಡಾ .ಶ್ರೀವಿದ್ಯಾ ರವರ ಶಿಷ್ಯೆ ರೆಮೋನಾ ಎವೆಟ್ ಪಿರೇರಾ ಇವರಿಗೆ ಅಭಿನಂದನಾ ಸಮಾರಂಭ ದಿನಾಂಕ 03 ಆಗಸ್ಟ್ 2025ರ ಭಾನುವಾರದಂದು ಮಂಗಳೂರಿನ ಶರವು ದೇವಳದ ದ್ಯಾನ ಮಂದಿರದಲ್ಲಿ ನಡೆಯಿತು. ಸಮಾರಂಭದಲ್ಲಿ ರೆಮೋನಾ ಎವೆಟ್ ಪಿರೇರಾ ಇವರನ್ನು ಅಭಿನಂದಿಸಿದ ಶರವು ಕ್ಷೇತ್ರದ ಶಿಲೆ ಶಿಲೆ ಮೊಕ್ತೇಸರರಾದ ರಾಘವೇಂದ್ರ ಶಾಸ್ತ್ರಿಯವರು ಮಾತನಾಡಿ “ಸಾಧನೆಯಿಂದ ಯಶಸ್ಸು ಖಂಡಿತಾ ದೊರೆಯುತ್ತದೆ. ಮನುಷ್ಯ ಸಾಧನೆಯಿಂದ ಏನನ್ನೂ ಸಾಧಿಸಬಹುದು. ಸಾಧನೆ ಎಂದರೆ ಒಬ್ಬ ವ್ಯಕ್ತಿ ತನಗೆ ತಾನೇ ಹಾಕಿಕೊಂಡ ಗುರಿಯನ್ನು ತಲಪುವುದು ಅಥವಾ ಒಂದು ನಿರ್ದಿಷ್ಟ ಕೆಲಸವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಅದರಲ್ಲಿ ತೃಪ್ತಿ ಹೊಂದುವುದು. ಇಂದು ರೆಮೋನಾ ಊಟ ತಿಂಡಿ ನಿದ್ರೆ ದೈನಂದಿನ ನಿತ್ಯ ಕಾರ್ಯಗಳನ್ನು ಹತೋಟಿಯಲ್ಲಿಟ್ಟುಕೊಂಡು ನೃತ್ಯ ಕ್ಷೇತ್ರದಲ್ಲಿ…
ಹಾಸನ : 2007 ಜೂಲೈ 18 ರಂದು, ರತ್ನಕಲಾ ಪದ್ಮ ಕುಟೀರ ಟ್ರಸ್ಟ್ (ರ್) ನ ಭಾಗವಾಗಿ, ಸತತವಾಗಿ 18 ವರ್ಷಗಳಿಂದ ಹಾಸನದ ನಾಟ್ಯಕಲಾ ನಿವಾಸ್ ಸಂಸ್ಥೆಯು ಹಲವಾರು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ವಿಶೇಷ ಸಂಸ್ಥೆಯಾಗಿ ಇಂದು ಹಾಸನದ ಹೆಸರನ್ನ ಭೂಪಟದಲ್ಲಿ ದಾಖಲಿಸಿದೆ. ಭಾರತೀಯ ನೃತ್ಯ ಪರಂಪರೆಯ ವಿಭಿನ್ನ ಶೈಲಿಗಳ ಜೊತೆಯಲ್ಲಿ, ವಿದೇಶಿಯ ನೃತ್ಯ ಪರಂಪರೆಯನ್ನ ಹಾಸನದ ಜನಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಸೇರುತ್ತದೆ. 02 ಆಗಸ್ಟ್ 2025 ರಂದು ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ತನ್ನ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ‘ ಹರಿಹರ ಸುತ’ – ಅಯ್ಯಪ ಸ್ವಾಮಿಯ ಚರಿತ್ರೆ ಆಧಾರಿತ ನೃತ್ಯ ನಾಟಕವನ್ನು ಸುಮಾರು 100 ಸಂಸ್ಥೆಯ ಮಕ್ಕಳೊಂದಿಗೆ ಪ್ರಸ್ತುತಪಡೆಸಿತು. ಮೈಸೂರಿನ ಖ್ಯಾತ ವಾದ್ಯ ಕಲಾವಿದರುಗಳಾದ ಶ್ರೀಯುತ ವಿಕ್ರಂ ಭರದ್ವಾಜ, ಶ್ರೀ ಸಮೃದ್ದ್ ಶ್ರೀನಿವಾಸ್ , ಶ್ರೀ ಸುಜೇಯೇಂದ್ರ, ಶ್ರೀ ವಿನಯ್ ರಂಗದೊಳ್ ಹಾಗು ಕೇರಳದ ಶ್ರೀ ಹರಿದಾಸ್ ಸೇರಿದಂತೆ ಶ್ರೀ ಸುಬ್ಬ್ರಮಣ್ಯ ರಾವ್ ಹಾಗು ಶ್ರೀ…
ಬೆಂಗಳೂರು : ಉತ್ಥಾನ ಮಾಸಪತ್ರಿಕೆಯು ಕಳೆದ ಐದು ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸುತ್ತಿದ್ದು, ಈ ಬಾರಿ 2025ನೇ ಸಾಲಿನ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಕಥೆಯು 3000 ಪದಗಳ ಮಿತಿಯಲ್ಲಿರಬೇಕು. ಕಥೆಗಳು ಸ್ವತಂತ್ರವಾಗಿರಬೇಕು ಮತ್ತು ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಕಥೆಯನ್ನು ಅಂಚೆ ಮೂಲಕ ಅಥವಾ ನುಡಿ ಇಲ್ಲವೇ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ದಪಡಿಸಿ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ. ಕಥೆಗಳು ತಲುಪಲು ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ಲೇಖಕರು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜೊತೆಗೆ ಲೇಖಕರ ಭಾವಚಿತ್ರವೂ ಇರಬೇಕು. ಕಥೆಗಳನ್ನು ಇ-ಮೇಲ್ : [email protected] ಅಥವಾ ಸಂಪಾದಕರು, ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ -2025, ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು -04 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 7795441894 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.