Author: roovari

ಮಂಚಿ : ನೃತ್ಯ ಪರಂಪರೆಯನ್ನು ಶುದ್ಧ ಶಾಸ್ತ್ರಿಯ ಚೌಕಟ್ಟಿನಲ್ಲಿ ಭವಿಷ್ಯದ ಯುವ ಕಲಾವಿದರಿಗೆ ಪರಿಚಯಿಸಬೇಕಾದರೆ ನೃತ್ಯ ಸರಣಿಗಳ ಆಯೋಜನೆ ಬಹು ಮುಖ್ಯ ಎನಿಸುತ್ತದೆ. ಕಲಾವಿದನೊಬ್ಬ ಕಲೆಯ ಆಳ, ಅಗಲ, ಎತ್ತರಗಳನ್ನು ತಿಳಿದುಕೊಂಡು, ತನ್ನುಸಿರಿನಂತೆ ಆರಾಧಿಸಿಕೊಂಡು ನೃತ್ಯ ಕ್ಷೇತ್ರದಲ್ಲಿ ಸಾಧನೆಗೈಯಲು ಸರಣಿ ಕಾರ್ಯಕ್ರಮಗಳು ಒಂದು ಬುನಾದಿಯನ್ನು ಹಾಕಿಕೊಡುತ್ತವೆ. ಆ ನೆಲೆಗಟ್ಟಿನಲ್ಲಿ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಪ್ರೇರಿತಗೊಂಡು, ಅದರ ಅಂಗ ಸಂಸ್ಥೆಯಾದ ವಸುಧಾರಾ ಕಲಾಕೇಂದ್ರ ಬೋಳಂತೂರು ಮಂಚಿ ಇವರು ಆಯೋಜಿಸಿದ ನೃತ್ಯಸರಣಿ ಮಾಲಿಕೆಯೇ ‘ಕಲಾಧಾರಾ’. ಇದರ ಮೊದಲ ಉದ್ಘಾಟನಾ ನೃತ್ಯವು ಕಲಾದೀಪ ನಾಮಧೇಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಪುತ್ತೂರು ಇವರಿಂದ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಲಯನ್ಸ್ ಸೇವಾ ಟ್ರಸ್ಟ್ (ರಿ) ಮಂಚಿ ಇವರ ಸಹಯೋಗದಲ್ಲಿ ಸಂಪನ್ನಗೊಂಡಿತು. ದಿನಾಂಕ 05 ಸೆಪ್ಟೆಂಬರ್ 2025ರ ಶುಕ್ರವಾರ ಮಂಚಿ ಲಯನ್ಸ್ ಕ್ಲಬ್ ಇಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ದೀಪ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಿ.ಎಸ್.ಬಿ. ಮಹಿಳಾ ಮಂಡಳಿ, ಪುತ್ತೂರು ಇವರ ಸಹಯೋಗದಲ್ಲಿ ಆಯೋಜಿಸಿದ ಕೊಂಕಣಿ ರಂಗ ತರಂಗ ಮತ್ತು ಸಾಹಿತ್ಯ ಸಂಭ್ರಮ-3 ಕಾರ್ಯಕ್ರಮ ದಿನಾಂಕ 14 ಸೆಪ್ಟೆಂಬರ್ 2025ರಂದು ಪುತ್ತೂರಿನ ಸುಕ್ರತೀಂದ್ರ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ಮಾತನಾಡಿ ʼಕರ್ನಾಟಕ ಸರಕಾರವು ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದ ಬೆಳವಣಿಗಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಚನೆ ಮಾಡಿದೆ. ಅಕಾಡೆಮಿಯು ಜನರ ಹತ್ತಿರ ಹೋಗಿ, ಜನರಿಗೆ ಅಕಾಡೆಮಿಯ ಬಗ್ಗೆ ಪರಿಚಯಿಸಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದಲ್ಲಿ ದುಡಿದವರನ್ನು ಹತ್ತಿರ ತರಲು ಪ್ರಯತ್ನಿಸುತ್ತಿದೆ” ಎಂದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಲಕ್ಷ್ಮೀ ವೆಂಕಟರಮನ ದೇವಸ್ಥಾನದ ಧರ್ಮದರ್ಶಿ ಹಾಗೂ ವ್ಯವಸ್ಥಾಪಕರಾದ ಡಾ. ಆಶೋಕ್‌ ಪ್ರಭು ಮಾತನಾಡಿ “ಪ್ರಸ್ತುತ ಕಾಲದಲ್ಲಿ ಕೊಂಕಣಿ ಭಾಷೆಯನ್ನು ಬಳಸುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಕೊಂಕಣಿ ಮಾತಾನಾಡುವುದನ್ನು ಮನೆಯಿಂದಲೇ ಪ್ರಾರಂಭಿಸಬೇಕು. ಆಗ ಮಾತ್ರ ಕೊಂಕಣಿ ಭಾಷೆಯನ್ನು…

Read More

ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ಸಹಜ ರಂಗ 2025’ ಕಾಲೇಜು ವಿದ್ಯಾರ್ಥಿಗಳಿಗೆ ‘ರಂಗ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 17 ಮತ್ತು 18 ಸೆಪ್ಟೆಂಬರ್ 2025ರಂದು ಮೈಸೂರಿನ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಶಿಬಿರಾರ್ಥಿಗಳು ಸುಗುಣ ಎಂ.ಎಂ. ಇವರ ನಿರ್ದೇಶನದಲ್ಲಿ ‘ಜನಗಣಮನ’ ಸಂವಿಧಾನ ಮತ್ತು ಶಿಕ್ಷಣ ಆಧಾರಿತ ನಾಟಕವನ್ನು ಅಭಿನಯಿಸಲಿದ್ದಾರೆ. ಇಂದು ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣ ಮತ್ತು ಕಾರ್ಪೋರೇಟಿಕರಣದ ಬಲೆಗೆ ಸಿಲುಕಿರುವುದು ದುರಂತವಾದರೂ ನಾವೆಲ್ಲರೂ ಒಪ್ಪಿರುವ ವಾಸ್ತವ. ಮೂಲಭೂತ ಶಿಕ್ಷಣವೇ ಇನ್ನೂ ಲಕ್ಷಾಂತರ ಮಕ್ಕಳಿಗೆ ಅಸಾಧ್ಯ ಕನಸಾಗಿ ಉಳಿದಿರುವ ಸಂದರ್ಭದಲ್ಲಿ, ಶಿಕ್ಷಣವನ್ನು ಹಕ್ಕು ಎಂದು ನೋಡುವ ಬದಲು ಸರಕು-ಸೇವೆಯಂತೆ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಾಗಿ ಪರಿವರ್ತಿಸಲಾಗುತ್ತಿದೆ. ಶಿಕ್ಷಣದ ಹೃದಯದಲ್ಲಿ ಇರಬೇಕಾದ ಮಾನವೀಯತೆ, ಸಮಾನತೆ ಮತ್ತು ಪ್ರಜ್ಞಾವಂತರ ಸಮಾಜ ನಿರ್ಮಾಣದ ತತ್ತ್ವಗಳನ್ನು ಕಡೆಗಣಿಸಿ, ಇಂದು ಅದು ಕಾರ್ಪೊರೇಟ್ ಲಾಭದ ಆಳವಲಯಕ್ಕೆ ತಳ್ಳಲ್ಪಟ್ಟಿದೆ. ಈ ಬದಲಾವಣೆಯ ತೀವ್ರತೆ ಕೇವಲ ಆರ್ಥಿಕ ಅಸಮಾನತೆಯನ್ನು ಮಾತ್ರವಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ…

Read More

ಹಳೆಯಂಗಡಿ : ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಶ್ರೀ ಪಟ್ಲ ಸತೀಶ ಶೆಟ್ಟಿಯವರ ನೇತೃತ್ವದಲ್ಲಿ ಯಕ್ಷಾಂತರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಮೊದಲ ಪ್ರದರ್ಶನ ದಿನಾಂಕ 17 ಸೆಪ್ಟೆಂಬರ್ 2025ರ ಬುಧವಾರದಂದು ನಡೆಯಲಿದೆ. ನಾಗವೃಕ್ಷ ಕ್ಷೇತ್ರ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಕನ್ಯಾ ಸಂಕ್ರಮಣೋತ್ಸವದ ಅಂಗವಾಗಿ ಶಾರಧ್ವತ ಯಜ್ಞಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಿರಾತಾರ್ಜುನ ಹಾಗೂ ಕರ್ಣಾರ್ಜುನ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.

Read More

ಮೈಸೂರು : ಮೈಸೂರಿನ ಕೊಡಗು ಗೌಡ ಸಮಾಜ ಆಯೋಜಿಸಿದ ಕೈಲ್ ಮುಹೂರ್ತ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ “ಅರೆಭಾಷೆ ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅವರು ಅವುಗಳನ್ನು ಅನುಸರಿಸಿ ಮುನ್ನಡೆಯುವಂತೆ ಹಿರಿಯರು ಪ್ರೇರಣೆ ನೀಡಬೇಕು. ಯುವ ಪೀಳಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಅರೆಭಾಷೆ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅಕಾಡೆಮಿಯಿಂದ ಸಾಧ್ಯವಾದಷ್ಟು ಅನುದಾನ ಕೂಡಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ ಮಾತನಾಡಿ “ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಕೇವಲ ಸಾಂಕೇತಿಕವಾಗಿ ಮಾತ್ರ ಆಚರಣೆ ಮಾಡದೆ, ಮನೆ ಮನಗಳಲ್ಲೂ ಆಚರಣೆ ಮಾಡಿದಾಗ ಸಂಸ್ಕೃತಿ ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ. ಮೈಸೂರು…

Read More

ಸುರತ್ಕಲ್ : ಸುರತ್ಕಲ್ ಇಲ್ಲಿನ ‘ಅನುಪಲ್ಲವಿ’ಯಲ್ಲಿರುವ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣಾ ಸಮಾರಂಭವು ದಿನಾಂಕ 13 ಸೆಪ್ಟೆಂಬರ್ 2025ರ ಶನಿವಾರದಂದು ನಡೆಯಿತು. ಸಮಾರಂಭದಲ್ಲಿ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ “ಪ್ರತಿಮನೆಗಳೂ ನಮ್ಮ ಕಲೆ, ಸಂಸ್ಕೃತಿಗಳನ್ನು ಬೆಳೆಸುವ ಪುಟ್ಟ ಕೇಂದ್ರಗಳಾಗಬೇಕು” ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನವೀಕರಣ ಕಾರ್ಯಕ್ಕೆ ವಿಶೇಷ ನೆರವು ನೀಡಿದ ಡಿ. ಅಣ್ಣು ದೇವಾಡಿಗ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ ರೆಮೋನಾ ಇವರನ್ನು ಸನ್ಮಾನಿಸಲಾಯಿತು. ಪ್ರದೀಪ ಕುಮಾರ ಕಲ್ಕೂರ, ಎ. ಕೃಷ್ಣಮೂರ್ತಿ ರಾವ್, ಡಾ. ಕೆ. ರಾಜ್ ಮೋಹನ್ ರಾವ್, ಉಮಾ ಉದಯಶಂಕರ್ ಹಾಗೂ ಶ್ರೀಶಕುಮಾರ್ ಎಂ. ಕೆ. ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ದಿವ್ಯಶ್ರೀ ಇವರಿಂದ ಸಂಗೀತ…

Read More

ಗೋಕರ್ಣ : ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ‘ಕೊಡಗಿನ ಗೌರಮ್ಮ’ ಹೆಸರಿನಲ್ಲಿ ಗೋಕರ್ಣದ ಹವ್ಯಕ ಮಹಾಮಂಡಲದಲ್ಲಿ ಸ್ಥಾಪಿಸಲಾಗಿರುವ ಸಣ್ಣ ಕಥೆಗಳ ದತ್ತಿ ಪ್ರಶಸ್ತಿಗೆ ಈ ಬಾರಿ ಕೊಡಗು ಮೂಲದ ಲೇಖಕಿ ಭಾರತಿ ಸೊದ್ರಕೆರೆ ಅವರ ‘ಮುಡಿಗೇರಿದೆ’ ಹಾಗೂ ಕೊಡಗಿನ ವಿರಾಜಬೇಟೆ ಸಮೀಪದ ಕೋಟೆಕೊಪ್ಪಲಿನ ಮೂರೇಡಿ ಆರ್. ಗಂಗಾಧರ ಮತ್ತು ಎಂ. ಜಿ. ಸಾವಿತ್ರಿಯವರ ಪುತ್ರಿ ಕಾಸರಗೋಡಿನ ಕೇಶವ ಪ್ರಸಾದ್ ಅವರ ಪತ್ನಿ ಭಾರತಿ ಕೊಡ್ವಕೆರೆ ಅವರು ಬರೆದಿರುವ ಸಣ್ಣ ಕಥೆ ‘ದಿನಚರಿ ಪುಸ್ತಕ ರಹಸ್ಯ’ ಆಯ್ಕೆಯಾಗಿದೆ. ಹವ್ಯಕ ಮಹಾ ಮಂಡಲದಲ್ಲಿ ಕೊಡಗಿನ ಗೌರಮ್ಮ ಇವದ ದತ್ತಿಯನ್ನು ಯುವ ಬರಹಗಾರರ ಉತ್ತೇಜನಕ್ಕಾಗಿ ನ್ಯಾಪಿಸಾಗಿದೆ. ಈ ದತ್ತಿ ನಿಧಿಯ ಮೂಲಕ ವರ್ಷಂ ಪ್ರತಿ ಹವ್ಯಕ ಮಹಿಳಾ ಬರಹಗಾರರಿಗೆ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿ ಭಾರತಿ ಕೊಡಕೆರೆ ಅವರಿಗೆ ಸಂದಿದೆ. ಎಳವೆಯಲ್ಲಿ ಸಾಹಿತ್ಯದತ್ತ ಅತೀವ ಆಸಕ್ತಿ ಹೊಂದಿದ್ದ ಭಾರತಿ ಕೊಟ್ಟಿಕೆರೆ, ಅಂದಿನ ದಿನಗಳಲ್ಲಿ ಸ್ಥಳೀಯ ಪತ್ರಿಕಗಳಿಗೆ ಕಥೆ, ಲೇಖನಗಳನ್ನು ಬರೆಯುತ್ತಿದ್ದವರು, ಕೇಶವ ಪ್ರಸಾದ್…

Read More

ಬಂಟ್ವಾಳ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇದರ ಮೂವತ್ತೆರಡನೆಯ ವಾರ್ಷಿಕೋತ್ಸವ, ನೂತನ ಗ್ರಂಥ ಅನಾವರಣ, ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕ್ರತ ಪ್ರತಿಭಾ ಪುರಸ್ಕಾರ ಸಮಾರಂಭದ ಅಂಗವಾಗಿ ದಿನಾಂಕ 14 ಸೆಪ್ಟೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ವಿದ್ಯಾ ಕುಟೀರ, ಬೈಪದವು ಕಬಕ ಇಲ್ಲಿ ‘ಭೀಷ್ಮಾರ್ಜುನ’ (ಕರ್ಮಬಂಧ) ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಪಿ.ಟಿ. ಜಯರಾಮ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭೀಷ್ಮ) ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ಕೃಷ್ಣ), ಶುಭಾ ಗಣೇಶ್ (ಅಭಿಮನ್ಯು), ಹರಿಣಾಕ್ಷಿ ಜೆ. ಶೆಟ್ಟಿ(ಅರ್ಜುನ) ಸಹಕರಿಸಿದರು. ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್, ನಾರಾಯಣ ಭಟ್ ಹಾಗೂ ತಿರುಮಲೇಶ್ವರ ಭಟ್ ಕಲಾವಿದರಿಗೆ ಶಾಲು ಹಾಗೂ ಪುಸ್ತಕ ನೀಡಿ ಗೌರವಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.

Read More

ಮಂಗಳೂರು : ಮಂಗಳೂರು ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ 75 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಆವರಣದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾಲ್ಕನೇ ದಿನವಾದ ದಿನಾಂಕ 15 ಸೆಪ್ಟೆಂಬರ್ 2025ರಂದು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಇದರ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಮಾತನಾಡಿ “ರಾಮಕೃಷ್ಣ ಪರಮಹಂಸರಾಗಲೀ, ಶ್ರೀಮಾತೆ ಶಾರದಾದೇವಿಯವರಾಗಲಿ ಅಥವಾ ಸ್ವಾಮಿ ವಿವೇಕಾನಂದರಾಗಲೀ ಸಮಾಜದಲ್ಲಿ ಕಷ್ಟದಲ್ಲಿರುವ ಅಥವಾ ಬಡತನದಲ್ಲಿರುವವರಿಗೆ ಕರುಣೆ ತೋರಿ ಅವರ ಅಭ್ಯುದಯಕ್ಕಾಗಿ ಕೆಲಸ ಮಾಡಿದವರು ಈ ಚಿಂತನೆಗಳೊಂದಿಗೆ ಒಟ್ಟುಗೂಡಿ ಇಂದು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಕೆಲಸ ಮಾಡುತ್ತಿದೆ. ಹಲವಾರು ಜನ ಸನ್ಯಾಸಿಗಳಾಗಿ ಅಥವಾ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ತನು, ಮನ, ಧನಪೂರ್ವಕವಾಗಿ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳೋಣ ಈ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ” ಎಂದು ಹೇಳಿದರು.…

Read More

‘ಈ ಪಯಣ ನೂತನ’ ರೇಡಿಯೋ ಜಾಕಿ ನಯನಾ ಶೆಟ್ಟಿಯವರ ಮೊದಲ ಕೃತಿ.‌ ಹೆಸರಿಗೆ ತಕ್ಕಂತೆ ಹೊಸ ದಾರಿಯನ್ನು ಹುಡುಕುವ ಪ್ರಯತ್ನವಿರುವ 21 ಲಲಿತ ಪ್ರಬಂಧಗಳು ಇಲ್ಲಿವೆ. ಪರಂಪರೆಯ ಮತ್ತು ಆಧುನಿಕ ಶೈಲಿಯ ಜೀವನ ಕ್ರಮಗಳ ನಡುವೆ ಮಾಡುವ ಒಂದು ತೌಲನಿಕ ಚಿಂತನೆ ಸಂಕಲನದಲ್ಲಿರುವ ಎಲ್ಲ ಲೇಖನಗಳ ಮೂಲ ಸ್ರೋತ. ಸಹಜವಾಗಿಯೇ ತಮ್ಮ ಬಾಲ್ಯದಲ್ಲಿ ತಾವು ಕಂಡು ಅನುಭವಿಸಿದ ಜೀವನದ ಒಂದೊಂದು ಹೆಜ್ಜೆಗಳು ಅವರಿಗೆ ಧನಾತ್ಮಕವಾಗಿಯೂ ಅಧುನಿಕ, ನಾಗರಿಕವೆಂದು ಹೇಳಿಕೊಳ್ಳುವ ಬದುಕಿನಲ್ಲಿ ಕಾಣುವ ದೋಷ – ವಿಪರ್ಯಾಸಗಳು ಋಣಾತ್ಮಕವಾಗಿಯೂ ಅವರಿಗೆ ಕಾಣುತ್ತವೆ. ಕಳೆದುಕೊಂಡ ಹೆಜ್ಜೆಗಳನ್ನು ಮತ್ತೆ ಪಡೆದುಕೊಂಡರೆ ಎಷ್ಟು ಚೆನ್ನ ಎಂದು ಅವರಿಗೆ ಅನ್ನಿಸುತ್ತದೆ. ಹಾಗೆಂದು ಆಧುನಿಕ ಜಗತ್ತಿನಲ್ಲಿ ಸಾಗುತ್ತಿರುವ ಎಲ್ಲರಲ್ಲೂ ಆ ದೋಷಗಳಿವೆ ಎಂದು ಅವರು ಹೇಳುತ್ತಿಲ್ಲ. ಫಿನ್ ಲ್ಯಾಂಡ್, ಜಪಾನ್, ಸಿಂಗಾಪುರಗಳಂತಹ ದೇಶಗಳಲ್ಲಿ ಎಳೆಯ ಮಕ್ಕಳಿಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಿರುವ ರೀತಿಯ ಬಗ್ಗೆ ಅವರ ಶ್ಲಾಘನೆಯಿದೆ. ಮನುಷ್ಯನ ಖುಷಿಯ ಬಗೆಗಿನ ಮೊದಲ ಲೇಖನದಲ್ಲೇ ಇದು ಅರಂಭವಾಗುತ್ತದೆ. ಜಗತ್ತಿನ ಅತ್ಯಂತ ಹೆಚ್ಚು…

Read More