Author: roovari

ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿಗಳೆಡೆಗೆ ಪುಸ್ತಕದ ನಡಿಗೆ ಎಂಬ ವರ್ಷದ ಸರಣಿ ಕಾರ್ಯಕ್ರಮ ಕನ್ನಡ ಡಿಂಡಿಮ’ದ ಉದ್ಘಾಟನಾ ಸಮಾರಂಭವು ದಿನಾಂಕ 14 ಜುಲೈ 2025ರಂದು ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ. ಪಿ. ಬಾಲಕೃಷ್ಣ ಅಳ್ವ ಮಾತನಾಡಿ “ಪುಸ್ತಕಗಳನ್ನು ಓದುವ ಹವ್ಯಾಸವೇ ಜ್ಞಾನದ ತಳಹದಿ ಶ್ರದ್ಧೆಯ ಅಧ್ಯಯನವೇ ಅರಿವಿಗೆ ದಾರಿ. ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಓದುವುದರಲ್ಲಿ ನಿರತರಾಗಬೇಕು” ಎಂದರು. ಸಮಾರಂಭದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಕಾರ್ಕಳ ತಾಲೂಕು ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಜಾನಪದ ವಿದ್ವಾಂಸ ಕೊಳಕೆ ಇರ್ವತ್ತೂರು ಗುಣಪಾಲ ಕಡಂಬ ಮಾತನಾಡಿ “ಉತ್ತಮ ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ಹಿತ ಮತ್ತು ಅಹಿತದ ಬಗ್ಗೆ ಅರಿವು ಮೂಡಿ ಬದುಕಿನ ಸನ್ಮಾರ್ಗದ ನಡೆಗೆ ನೆರವಾಗುತ್ತದೆ. ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಭವಿಷ್ಯ ಉಜ್ವಲವಾಗುತ್ತದೆ. ಅದ್ದರಿಂದ ವಿದ್ಯಾರ್ಥಿಗಳು ನಿರಂತರ ಮೌಲ್ಯಯುತ ಪುಸ್ತಕಗಳನ್ನು ಓದುವ ಜ್ಞಾನದಾಹಿಗಳಾಗಬೇಕು”…

Read More

ಮಡಿಕೇರಿ : ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದಿಂದ ‘ಕಥೆ ಹೇಳುವ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ದಿನಾಂಕ 03 ಆಗಸ್ಟ್ 2025ರಂದು ಭಾನುವಾರ ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ಕಾಮಧೇನು ಗೋ ಶಾಲೆಯಲ್ಲಿ ‘ಕಥಾ ಸಮಯ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸ್ವರಚಿತ ಕಥೆ ವಾಚಿಸಲು ಮೂರರಿಂದ ಐದು ನಿಮಿಷ ಸಮಯದ ಅವಕಾಶವಿರುತ್ತದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ತಮ್ಮ ಹೆಸರನ್ನು ದಿನಾಂಕ 25 ಜುಲೈ 2025ರೊಳಗಾಗಿ 9353531976, 91 7760908774 ಸಂಖ್ಯೆಯನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದಾಗಿದೆ.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಮತ್ತು ಸರಕಾರಿ ಪ್ರೌಢ ಶಾಲೆ ಅಂಬ್ಲಮೊಗರು ಮಂಗಳೂರು ದಕ್ಷಿಣ ವಲಯ ಇವರ ಸಹಯೋಗದೊಂದಿಗೆ ‘ಕನ್ನಡ ನವೋದಯ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 17 ಜುಲೈ 2025ರಂದು ಅಪರಾಹ್ನ 2-00 ಗಂಟೆಗೆ ಅಂಬ್ಲಮೊಗರು ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ‘ಕನ್ನಡ ನವೋದಯ ಕವಿಗಳು : ಕುವೆಂಪು, ಬೇಂದ್ರೆ’ ಎಂಬ ವಿಷಯದ ಬಗ್ಗೆ ಕತೆಗಾರರಾದ ಡಾ. ವಿಶ್ವನಾಥ ಎನ್. ನೇರಳೆಕಟ್ಟೆ ಇವರಿಂದ ಉಪನ್ಯಾಸ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಂದ ಭಾವಗೀತೆ, ಜಾನಪದ ಗೀತೆ ಮತ್ತು ಕವನ ವಾಚನ ಪ್ರಸ್ತುತಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.

Read More

ಉಡುಪಿ : ಕಲೆ, ಸಮಾಜ, ಶಿಕ್ಷಣಕ್ಕಾಗಿ ನಿರಂತರ ಸೇವೆ ಸಲ್ಲಿಸುವ, ಉಡುಪಿ ಜಿಲ್ಲೆಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 50ನೆಯ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ದಿನಾಂಕ 14 ಜುಲೈ 2025ರಂದು ಸಭೆ ನಡೆಸಿ ಎಂ. ಗಂಗಾಧರ ರಾವ್ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. 2025-26ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು : ಉಪಾಧ್ಯಕ್ಷರು : ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ. ಕಾರ್ಯದರ್ಶಿ: ಮುರಲಿ ಕಡೆಕಾರ್, ಜೊತೆಕಾರ್ಯದರ್ಶಿಗಳು : ನಾರಾಯಣ ಎಂ. ಹೆಗಡೆ, ವಿದ್ಯಾ ಪ್ರಸಾದ್. ಕೋಶಾಧಿಕಾರಿ : ಪ್ರೊ. ಕೆ. ಸದಾಶಿವ ರಾವ್. ಸದಸ್ಯರು : ಕೆ. ಗಣೇಶ್ ರಾವ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರೊ. ಎಂ.ಎಲ್. ಸಾಮಗ, ಎಸ್. ಗಣರಾಜ್ ಭಟ್, ಬಿ. ಭುವನಪ್ರಸಾದ್ ಹೆಗ್ಡೆ, ಶ್ರೀಧರ ರಾವ್, ಅನಂತರಾಜ ಉಪಾಧ್ಯ, ಎಚ್.ಎನ್. ವೆಂಕಟೇಶ್, ವಿಜಯ್ ಕುಮಾರ್ ಮುದ್ರಾಡಿ, ಯು.ಎಸ್. ರಾಜಗೋಪಾಲ ಆಚಾರ್ಯ, ಎ. ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಅಶೋಕ್…

Read More

ಉಡುಪಿ : ಲಕ್ಷ್ಮೀ ಗುರುರಾಜ್ ಎನ್.ಎನ್.ಯು. (ರಿ.) ಇದರ ಪಂಚ ತ್ರಿಂಶತ್ ಉತ್ಸವದ ಅಂಗವಾಗಿ ಆಯೋಜಿಸುತ್ತಿರುವ ‘ನೃತ್ಯ ರಂಗದಲ್ಲಿ ಬೆಳಕಿನ ವಿನ್ಯಾಸ’ ನೃತ್ಯ ಗುರುಗಳಿಗೆ ಮತ್ತು ವಿದ್ವತ್ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರವು ದಿನಾಂಕ 20 ಜುಲೈ 2025ರಂದು ಬೆಳಗ್ಗೆ 10-30 ಗಂಟೆಗೆ ಉಡುಪಿಯ ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಒಡಿಸ್ಸಿ ನೃತ್ಯ ಗುರುಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಆಸಕ್ತರು ವಿದುಷಿ ಶ್ರೀವಿದ್ಯಾ ಸಂದೇಶ್ 98445 51114 ಮತ್ತು ಶ್ರೀಮತಿ ಶ್ರೀಲಲಿತಾ ಪ್ರವೀಣ್ 94818 43935 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಜಾಣಗೆರೆ ಪತ್ರಿಕೆ ಪ್ರಕಾಶನ ಇದರ ವತಿಯಿಂದ ಸಾಹಿತಿ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಇವರ ‘ನುಡಿಗೋಲು 3’ ಅಪೂರ್ವ ಸಾಧಕರ ನುಡಿ ಸಂಕಥನ ಕೃತಿ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 19 ಜುಲೈ 2025ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಗಾನ ಪಲ್ಲವಿ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಡ್ಯದ ಕರ್ಣಾಟಕ ಸಂಘ ಇದರ ಅಧ್ಯಕ್ಷರಾದ ಡಾ. ಬಿ. ಜಯಪ್ರಕಾಶ ಗೌಡ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಕವಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಪ್ರಸಿದ್ಧ ವಿಮರ್ಶಕರಾದ ಡಾ. ಎಂ.ಎಸ್. ಆಶಾದೇವಿ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಶ್ರೀಮತಿ ಸುನಂದಾ ಜಯರಾಮ್, ಮಾವಳ್ಳಿ ಶಂಕರ್ ಮತ್ತು ಡಾ. ವಸುಂಧರಾ ಭೂಪತಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಶ್ರೀ ಸಂತವಾಣಿ ಸುಧಾಕರ್ ಮತ್ತು ತಂಡದವರಿಂದ ಸುಗಮ ಗಾಯನ ಪ್ರಸ್ತುತಗೊಳ್ಳಲಿದೆ.

Read More

ಪುತ್ತೂರು : ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ದಿನಾಂಕ 15 ಜುಲೈ 2025ರಂದು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಈಶ್ವರ ಭಟ್ ಪುಳು ಪ್ರಾಯೋಜಕತ್ವದಲ್ಲಿ ‘ಸುಭದ್ರಾ ಕಲ್ಯಾಣ’ ತಾಳಮದ್ದಳೆ ನಡೆಯಿತು. ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಆನಂದ ಸವಣೂರು, ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಜಯಪ್ರಕಾಶ್ ನಾಕೂರು, ಟಿ.ಡಿ. ಗೋಪಾಲಕೃಷ್ಣ ಭಟ್, ಬಲರಾಮನಾಗಿ ಗುಂಡ್ಯಡ್ಕ ಈಶ್ವರ ಭಟ್, ಶ್ರೀಕೃಷ್ಣನಾಗಿ ವಿ.ಕೆ. ಶರ್ಮ ಅಳಿಕೆ, ಅರ್ಜುನನಾಗಿ ಗುಡ್ಡಪ್ಪ ಬಲ್ಯ, ಸುಭದ್ರೆಯಾಗಿ ಭಾಸ್ಕರ ಬಾರ್ಯ, ಸತ್ಯಭಾಮೆಯಾಗಿ ಮಾಂಬಾಡಿ ವೇಣುಗೋಪಾಲ ಭಟ್, ವನಪಾಲಕನಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಉಭಯ ಯಕ್ಷಗಾನ ಸಂಘಗಳಿಂದ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದಿನಾಂಕ 25 ಜುಲೈ 2025ರಿಂದ ಜರಗಲಿರುವ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಪುಳು ಈಶ್ವರ ಭಟ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಉಭಯ ಸಂಘಗಳ ಅಧ್ಯಕ್ಷರಾದ ಭಾಸ್ಕರ ಬಾರ್ಯ, ಪ್ರೇಮಲತಾ…

Read More

ಶಿರಸಿ : ಬೆಂಗಳೂರಿನ ಆನಂದ ರಾವ್ ವೃತ್ತದ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ವಿಶ್ವಾಭಿಗಮನಮ್ ಯಕ್ಷನೃತ್ಯ, ಸಾಹಿತಿ ಪ್ರಸಂಗಕರ್ತ ದಿನೇಶ ಉಪ್ಪೂರ ಇವರಿಗೆ ಸನ್ಮಾನ ಮತ್ತು ‘ಯಕ್ಷಗಾನ ಶಾಸ್ತ್ರೀಯವೇ’ ಕುರಿತ ಸಂವಾದ ಕಾರ್ಯಕ್ರಮವು ದಿನಾಂಕ 12 ಜುಲೈ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಅಂಕಣಕಾರ ರಾಜು ಅಡಕಳ್ಳಿ “ದಶರೂಪಗಳ ದಶಾವತಾರ ಕೃತಿಯನ್ನು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಇವರು ಹತ್ತು ವರ್ಷಗಳ ಸತತ ಅಧ್ಯಯನ, ಪರಿಕ್ರಮದಿಂದ ರಚಿಸಿದ್ದಾರೆ: ಯಕ್ಷಗಾನಕ್ಕೆ ಇದೊಂದು ಆಕರ ಗ್ರಂಥ. ಈ ಕೃತಿ ಡಾಕ್ಟರೇಟ್ ಪಡೆಯಲು ಅರ್ಹವಾದ ಕೃತಿ. ಅಶೋಕ ಹಾಸ್ಯಗಾರ ಇವರು ಸ್ವಚ್ಛ, ಪ್ರಾಮಾಣಿಕ, ಬದ್ದತೆಯುಳ್ಳ, ಸಂಪಾದಕರಾಗಿದ್ದರು. ಅವರ ಈ ಕೃತಿಗೆ ಸಮ್ಮಾನ ಕೂಡ ದೊರೆತಿರುವುದು ಸಂತಸದ ವಿಷಯ. ಇಂತಹ ಸಂವಾದ ಕಾರ್ಯಕ್ರಮ ಏರ್ಪಡಿಸುವುದು ಸ್ತುತ್ಯಾರ್ಹ” ಎಂದು ಅಭಿಪ್ರಾಯಪಟ್ಟರು. ದಿನೇಶ ಉಪ್ಪೂರ ಇವರನ್ನು ಸನ್ಮಾನಿಸಿದ ಗಿಂಡಿಮನೆ ಮೃತ್ಯುಂಜಯ ಇವರು ಮಾತನಾಡಿ ದಿನೇಶ ಉಪ್ಪೂರ ಇವರ ಪ್ರಸಂಗ ಸಾಹಿತ್ಯದಲ್ಲಿಯ ಭಂದಸ್ಸು,…

Read More

ಪ್ರಾಣೇಶಾಚಾರ್ಯ ತನ್ನ ಹೆಂಡ್ತಿ ಕಮಲಮ್ಮ, ಮಕ್ಕಳು ಪರಿಮಳ ಮತ್ತು ವಸುಧೇಂದ್ರ ಆಚಾರ್ಯರ ಜೊತೆ ನೆಮಲಿಗುಂಡ್ಲ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಮಲಗಿ, ಭಾನುವಾರ ಬೆಳಿಗ್ಗೆ ಏಳು ಗಂಟೆಗೆ ಕಾರ್‌ನಲ್ಲಿ ಕರ್ನೂಲಿಗೆ ಹೊರಟ್ರು. ಗ್ರೂಪ್-2 ಪರೀಕ್ಷೆ ಮೂಲಕ ಡೆಪ್ಯೂಟಿ ತಹಶೀಲ್ದಾರ್ ಆಗಿ ಆಯ್ಕೆಯಾದ ಅವರು, ಈಗ ಕರ್ನೂಲಿನ ಹಂದ್ರೀನೀವಾ ಆಫೀಸಿನಲ್ಲಿ ಭೂಸ್ವಾಧೀನ ವಿಭಾಗದಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. ಪ್ರತಿ ವರ್ಷ ಕುಟುಂಬ ಸಮೇತ ಪ್ರಕಾಶಂ ಜಿಲ್ಲೆಯ ರಾಚೆರ್ಲಾ ಹತ್ತಿರದ ನೆಮಲಿಗುಂಡ್ಲ ರಂಗನಾಯಕ ಸ್ವಾಮಿ ದೇವಸ್ಥಾನಕ್ಕೆ ಹೋಗೋದು ಅವರ ಸಂಪ್ರದಾಯ. ಉಪ್ಪಲಪಾಡು ಹಳ್ಳಿಗೆ ಹತ್ತಿರವಾಗ್ತಿದ್ದಂತೆ, ಪ್ರಾಣೇಶಾಚಾರ್ಯ ಡ್ರೈವರ್‌ಗೆ ರಸ್ತೆ ಬದಿಯಲ್ಲಿದ್ದ ಢಾಬಾ ತರಹದ ಹೋಟೆಲ್‌ನಲ್ಲಿ ಟಿಫನ್‌ಗೆ ಕಾರ್ ನಿಲ್ಲಿಸೋಕೆ ಹೇಳಿದ್ರು. ಎಲ್ಲರೂ ಕಾರ್‌ನಿಂದ ಇಳಿದ್ರು. ಡ್ರೈವರ್ ಕಾರ್‌ನ್ನ ಮರದ ನೆರಳಲ್ಲಿ ನಿಲ್ಲಿಸೋಕೆ ಹೋದ. ಕಮಲಮ್ಮ ಅನುಮಾನದಿಂದ, “ಇಲ್ಲಿ ಟಿಫನ್ ಚೆನ್ನಾಗಿರುತ್ತಾ?” ಅಂತ ಕೇಳಿದ್ಲು. “ನಾನು ಶುಗರ್ ಮಾತ್ರೆ ತಗೋಳೋ ಸಮಯ ಆಗಿದೆ. ಏನಾದ್ರೂ ತಿನ್ನೋಣ. ಒಂದು ಹೊತ್ತು ಅಷ್ಟೇ ಅಲ್ವಾ!”…

Read More

ಕನ್ನಡ ಸಾಹಿತ್ಯ ಲೋಕದಲ್ಲಿ ಎಂ. ಎಸ್. ಕೆ. ಪ್ರಭು ಎಂದು ಚಿರಪರಿಚಿತರಾದವರು ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು. ತಂದೆ ಸೀತಾರಾಮಯ್ಯ ಹಾಗೂ ತಾಯಿ ಸೀತಮ್ಮ. ಸ್ವತಃ ತಾವೇ  ಹಾಡುಗಳನ್ನು ರಚಸುತ್ತಿದ್ದ ತಾತ, ಕುಮಾರವ್ಯಾಸ ಭಾರತದ ಪದ್ಯಗಳನ್ನು ರಾಗಬದ್ಧವಾಗಿ ಹಾಡುತ್ತಿದ್ದ ತಂದೆ ಇವರೆಲ್ಲ ಬಾಲ್ಯದಲ್ಲಿಯೇ ಎಂ. ಎಸ್. ಕೆ. ಯವರಿಗೆ ಸ್ಪೂರ್ತಿಯಾಗಿದ್ದರು. ಎಂ. ಎಸ್. ಕೆ.ಯವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆಯ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಥಮವಾಗಿ ಬೆಂಗಳೂರಿನ ಅಕೌಂಟೆಂಟ್ ಜನರಲ್ ರವರ ಕಛೇರಿಯ ಉದ್ಯೋಗದ ಮೂಲಕ  ವೃತ್ತಿ ಜೀವನಕ್ಕೆ ಪಾದರ್ಪಣೆ ಮಾಡಿದ ಇವರು 1961 ರಿಂದ 1977ರವರೆಗೆ ಕಾರ್ಯನಿರ್ವಹಿಸಿ, ಮುಂದೆ ಯು. ಪಿ. ಎಸ್. ಸಿ. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳಾಗಿ ಆಯ್ಕೆಯಾದರು. ಬೆಂಗಳೂರು, ಧಾರವಾಡ, ಭದ್ರಾವತಿ ಇತ್ಯಾದಿ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತಿ ಹೊಂದಿದರು. ತಮ್ಮ ಅಗಾಧ ಸ್ಮರಣಾ ಶಕ್ತಿಯಿಂದಾಗಿ ನೋಡಿದ್ದನ್ನು, ಕೇಳಿದ್ದನ್ನು ಮನಸ್ಸಿನಾಳಕ್ಕೆ…

Read More