Author: roovari

ಮಂಗಳೂರು  : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆ ಮತ್ತು ಮಂಗಳೂರಿನ ರಾಮಕೃಷ್ಣ ಮಠದ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ಯು ದಿನಾಂಕ 30-12-2023ರಂದು ಸಂಜೆ ಘಂಟೆ 4-30ಕ್ಕೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಅಡಿಟೋರಿಯಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಇವರು ದೀಪ ಬೆಳಗಿ ಉದ್ಘಾಟಿಸಲಿದ್ದಾರೆ. ಮುಂಬೈಯ ಅದಿತಿ ಸುದರ್ಶನ್ ಇವರ ಕೊಳಲು ವಾದನಕ್ಕೆ ಪುತ್ತೂರಿನ ತನ್ಮಯೀ ಉಪ್ಪಂಗಳ ಇವರು ವಯಲಿನ್ ಮತ್ತು ಮೈಸೂರಿನ ಪ್ರಣವ್ ಸುಬ್ರಹ್ಮಣ್ಯ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಐಯ್ಯರ್ ಸಹೋದರರಾದ ರಾಮನಾಥ್ ಐಯ್ಯರ್ ಮತ್ತು ಗೋಪಿನಾಥ್ ಐಯ್ಯರ್ ಇವರಿಂದ ದ್ವಂದ್ವ ವೀಣಾ ವಾದನ ಕಛೇರಿಗೆ ಬೆಂಗಳೂರಿನ ಅನಿರುದ್ಧ ಭಟ್ ಮೃದಂಗದಲ್ಲಿ ಹಾಗೂ ಸುರತ್ಕಲ್ಲಿನ ಸುಮುಖ ಕಾರಂತ ಖಂಜೀರದಲ್ಲಿ ಸಹಕರಿಸಲಿದ್ದಾರೆ. ಮಂಗಳೂರಿನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಪ್ರಸ್ತುತ ಪಡಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 24ನೇ ‘ಮಂಜುನಾದ ಸಂಗೀತ ಕಛೇರಿ’ಯು ದಿನಾಂಕ 03-01-2024ರಂದು ಸಂಜೆ 4…

Read More

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮೂರು ದಿನಗಳ ‘ಭ್ರಮರ-ಇಂಚರ ನುಡಿಹಬ್ಬ’ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ದಿನಾಂಕ 01-12-2023ರಂದು ಪ್ರಾರಂಭಗೊಂಡಿತು. ಈ ಸಮ್ಮೇಳನದ ಸರ್ವಾಧ್ಯಕ್ಷದಾಗಿದ್ದ ಸಾಹಿತಿ, ಚಿಂತಕ, ಕಂಪ್ಯೂಟರ್ ಕನ್ನಡ ತಂತ್ರಾಂಶದ ರೂವಾರಿ ನಾಡೋಜ ಡಾ. ಕಿನ್ನಿಕಂಬಳ ಪದ್ಮನಾಭ ರಾವ್ “ಕನ್ನಡ ಮತ್ತು ಸ್ಥಳೀಯವಾಗಿ ಸಿಕ್ಕುವ ಎಲ್ಲ ಭಾಷೆಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳು ಸಮಷ್ಠಿಯಾಗಿ ದಾಖಲೀಕರಣಗೊಳ್ಳುವುದು ಭವಿಷ್ಯದ ಹಿತದೃಷ್ಟಿಯಿಂದ ಬಹಳ ಅಗತ್ಯ. ಆ ಸಲುವಾಗಿ ಲಭ್ಯ ತಂತ್ರಜ್ಞಾನ-ತಂತ್ರಾಂಶಗಳ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಈ ದಿಸೆಯಲ್ಲಿ ಪರಿವರ್ತನೆ ಮತ್ತು ಪರಿಷ್ಕರಣೆಯ ಪ್ರಯತ್ನಗಳೂ ಆಗಬೇಕು” ಎಂದು ಹೇಳಿದರು. ನಿಕಟಪೂರ್ವ ನುಡಿಹಬ್ಬ ಸಮ್ಮೇಳನಾಧ್ಯಕ್ಷ ಡಾ. ಪಾದೆಕಲ್ಲು ವಿಷ್ಣು ಭಟ್ ಸಮ್ಮೇಳನ ಉದ್ಘಾಟಿಸಿದರು. ಆನಂದ ಸಿ. ಕುಂದ‌ರ್ ವಸ್ತು ಪ್ರದರ್ಶನ ಉದ್ಘಾಟಿಸಿದರು. ಸಮ್ಮೇಳನಾರಂಭದ ಪೂರ್ವದಲ್ಲಿ ಪದವಿ ಕಾಲೇಜಿನಿಂದ ಪದವಿ ಪೂರ್ವ ಕಾಲೇಜುವರೆಗೂ ನಡೆದ ಸಾಲಂಕೃತ ಮೆರವಣಿಗೆಯನ್ನು ವಿದ್ಯಾರ್ಥಿಗಳೇ ಸಂಯೋಜಿಸಿದ್ದು ಅತ್ಯಾಕರ್ಷಕವಾಗಿತ್ತು. ದೇಗುಲದ ಆನೆ ಮಹಾಲಕ್ಷ್ಮೀ, ಭುವನೇಶ್ವರಿ ತಾಯಿಯ…

Read More

ಮೈಸೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸ್ವರ್ಣಭೂಮಿ ಫೌಂಡೇಷನ್ ಕರ್ನಾಟಕ ಇವರ ಸಹಕಾರದೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ, ವಿಶೇಷ ಉಪನ್ಯಾಸ, ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ 31-12-2023ರಂದು ಮೈಸೂರಿನ ವಿಜಯನಗರ ಮೊದಲನೇ ಹಂತ, ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ದೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿದಾನಂದ ಗೌಡ ಇವರು ಉದ್ಘಾಟಿಸಲಿದ್ದಾರೆ. ಖ್ಯಾತ ವಿದ್ವಾಂಸರಾದ ಡಾ. ಸಿ.ಪಿ. ಕೃಷ್ಣ ಕುಮಾರ್ ಇವರು ಶ್ರೀ ಲಿಖಿತ್ ಹೊನ್ನಾವರ ಇವರ ಕೃತಿ ‘ಭಾವಭಂಗ ಕಲ್ಪನಾತರಂಗ’ದ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಖ್ಯಾತ ಸಾಹಿತಿ ಶ್ರೀ ಬಿ. ಸತೀಶ್…

Read More

ಕುಂದಾಪುರ: ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ಬಳಗ ನೇತೃತ್ವದಲ್ಲಿ ಆಯೋಜನೆಗೊಂಡ 10ನೇ ವರ್ಷದ ‘ಕಾರ್ಟೂನ್ ಹಬ್ಬ’ ಕಾರ್ಯಕ್ರಮವು ದಿನಾಂಕ 09-12-2023 ರಂದು ಕುಂದಾಪುರದ ಕಲಾಮಂದಿರದಲ್ಲಿ ಉದ್ಘಾಟಣೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ, ಕವಿ ಹಾಗೂ ಲೇಖಕರಾದ ಡಾ. ಕುಂ. ವೀರಭದ್ರಪ್ಪ (ಕುಂವೀ) “ಚಲನಶೀಲ ಸಮಾಜದ ಮುಖ್ಯ ಜೀವಾಳ ಉಪದ್ರವಿತನ. ಲೇಖಕ, ಚಿತ್ರಕಾರ ಎಲ್ಲಿಯವರೆಗೆ ಉಪದವಿಯಾಗಿರುತ್ತಾನೋ ಅಲ್ಲಿಯವರೆಗೆ ಸಮಾಜ ಚೆನ್ನಾಗಿರುತ್ತೆ. ನಿರುಪದ್ರವಿಯಾಗಿ, ವ್ಯವಸ್ಥೆ ಜತೆ ರಾಜಿ ಮಾಡಿಕೊಂಡಾಗ ಸಮಾಜ ಅಸ್ತವ್ಯಸ್ತವಾಗಿರುತ್ತದೆ. ಮನಸ್ಸನ್ನು ಕಲಕುವಂತಹ, ಹೊಸ – ಹೊಸ ಆಲೋಚನಾ ಕ್ರಮಗಳನ್ನು ಸೃಷ್ಟಿಸುವ, ಚಿಂತನಾ ಕ್ರಮಗಳನ್ನು ಬದಲಿಸುವ ಶಕ್ತಿ ವ್ಯಂಗ್ಯಚಿತ್ರಗಳಿಗಿದೆ. ಮಕ್ಕಳಲ್ಲಿ ಇಂತಹ ಕಲೆಯನ್ನು ಬೆಳೆಸಬೇಕು. ಪ್ರತಿ ಶಾಲೆಗಳಲ್ಲಿ ಚಿತ್ರಕಲಾ, ಸಂಗೀತ, ನಾಟಕ ಶಿಕ್ಷಕರಿರಬೇಕು. ಆಟದ ಮೈದಾನ ಇರಬೇಕು. ಆಗ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಸಾಧ್ಯ. ಆ ಕೆಲಸವನ್ನು ಸರಕಾರ ಮಾಡಬೇಕು. ಇಲ್ಲದಿದ್ದರೆ ಭಾರತೀಯ ರೂಪಾಯಿ ಎಣಿಸುವ ಬದಲು, ಡಾಲರ್, ಪೌಂಡ್ಗಳನ್ನು ಎಣಿಸುವ ಪ್ರವೃತ್ತಿ ಹೆಚ್ಚಾಗುತ್ತದೆ.…

Read More

ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ‘ಯಕ್ಷ ಸಂಭ್ರಮ-2023’ ಕಾರ್ಯಕ್ರಮವು ದಿನಾಂಕ 02-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ “ಜ್ಞಾನದ ಭಂಡಾರವಾದ ವೇದ, ಉಪನಿಷತ್ತು, ಪುರಾಣ ಕಥೆಗಳು ಯಕ್ಷಗಾನದ ಮೂಲಕ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ. ನಮ್ಮ ದೇಶದ ಸಂಸ್ಕೃತಿ, ಧರ್ಮ ರಕ್ಷಣೆಯಲ್ಲಿ ಯಕ್ಷಗಾನದ ಪಾತ್ರವು ಅನನ್ಯವಾದದು” ಎಂದು ಹೇಳಿದರು. ಜಮ್ಮು ಕಾಶ್ಮೀರದ ಪವರ್ ಡಿಪಾರ್ಟ್ಮೆಂಟ್ ಇದರ ಪ್ರಿನ್ಸಿಪಾಲ್ ಸೆಕ್ರೆಟರಿ ಹಿರಿಯಡ್ಕ ರಾಜೇಶ್‌ ಪ್ರಸಾದ್ ಮಾತನಾಡಿ, “ಕರಾವಳಿಯ ವಿಶಿಷ್ಟ ಕಲೆ ಯಕ್ಷಗಾನದ ಮೇಲೆ ಜನರ ಪ್ರೀತಿ, ವಿಶ್ವಾಸ ನಿರಂತರ ಇರಬೇಕು. ಇಂದಿನ ಜೀವನ ಶೈಲಿಯಲ್ಲಿ ಜನರಲ್ಲಿ ದೇವ-ದಾನವ ಎರಡು ಗುಣಗಳು ಸೇರಿವೆ. ದಾನವ ಗುಣಕ್ಕೆ ಎಂದು ಜಯವಿಲ್ಲ ಎಂಬುದನ್ನು ಯಕ್ಷಗಾನ ತಿಳಿಸಿಕೊಡುತ್ತದೆ. ಅಂತರಾತ್ಮದಲ್ಲಿರುವ ಕೆಟ್ಟ ಗುಣ ತೊಡೆದು ಹಾಕಿ ಮುನ್ನಡೆದರೆ ಜೀವನ ಸಾರ್ಥಕತೆ ಪಡೆಯುತ್ತದೆ” ಎಂದರು. ಯಕ್ಷಧ್ರುವ…

Read More

ಕಾಸರಗೋಡು : ಕಾಸರಗೋಡು ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ರಂಗಚಿನ್ನಾರಿ ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ ‘ಸಾಹಿತ್ಯ ವಲ್ಲರಿ’ಯು ದಿನಾಂಕ 31-12- 2023 ರವಿವಾರ ಬೆಳಗ್ಗೆ ಗಂಟೆ 10ರಿಂದ ಕಾಸರಗೋಡು ಕರಂದಕ್ಕಾಡು ಇಲ್ಲಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಕುಂತಲಾ ಆರ್. ಕಿಣಿ ಇವರು ಉದ್ಘಾಟಿಸಲಿದ್ದು, ನಾರಿ ಚಿನ್ನಾರಿಯ ಉಪಾಧ್ಯಕ್ಷೆ ಸಾಹಿತಿ ಡಾ. ಯು. ಮಹೇಶ್ವರಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ಪ್ರಸನ್ನಾ ವಿ. ಚೆಕ್ಕೆಮನೆ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಡಾ. ಅಂಕಿತಾ ಕಿಣಿಯವರಿಂದ ‘ಯೋಗ ಮತ್ತು ನ್ಯಾಚುರೋಪತಿ’ ಇವರಿಂದ ವಿಚಾರ ಸಂಕಿರಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಹುಭಾಷಾ ಕವಿಗೋಷ್ಠಿ, ಅಜ್ಜಿ ಕತೆ ಮತ್ತು ಕಾವ್ಯ ಗಾಯನ ಕಾರ್ಯಕ್ರಮಗಳು ನಡೆಯಲಿರುವುದು. ನಾರಿ ಚಿನ್ನಾರಿಯ ಅಧ್ಯಕ್ಷರಾದ ಸವಿತಾ ಟೀಚರ್,…

Read More

ಕಟೀಲು : ಶ್ರೀ ಕಟೀಲು ಪ್ರತಿಷ್ಠಾನದ ಆಶ್ರಯದಲ್ಲಿ ‘ಭರತನಾಟ್ಯ, ಸಂಗೀತ, ನಾಟಕ ಸಂಭ್ರಮೋತ್ಸವ, ಸನ್ಮಾನ ಕಾರ್ಯಕ್ರಮವು ದಿನಾಂಕ 30-12-2023ರಂದು ಸಂಜೆ 5 ಗಂಟೆಗೆ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಜರಗಲಿದೆ. ಉದ್ಯಮಿ ಬರೋಡದ ಶ್ರೀ ಶಶಿಧರ ಶೆಟ್ಟಿ, ಸಂಗೀತ ಕೃತಿಕಾರರಾದ ವಿದ್ವಾನ್ ಎಂ. ನಾರಾಯಣ, ಸಂಗೀತ ಭಜನಾ ಶಿಕ್ಷಕಿ ಅರುಣಾ ರಾವ್ ಕಟೀಲು ಹಾಗೂ ಭರತನಾಟ್ಯ ಶಿಕ್ಷಕಿ ವಿದುಷಿ ಶ್ರಾವ್ಯ ಕಿಶೋರ್ ಇವರುಗಳಿಗೆ ಸನ್ಮಾನ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್‌, ಶಾಸಕ ಉಮಾನಾಥ ಕೋಟ್ಯಾನ್, ಮುಂಬೈನ ಉದ್ಯಮಿ ಶ್ರೀ ಕರುಣಾಕರ ಎಂ. ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ, ಉದ್ಯಮಿಗಳಾದ ಅಶೋಕ್ ಶೆಟ್ಟಿ ಮುಂಬೈ, ವೇಣುಗೋಪಾಲ ಶೆಟ್ಟಿ ಮುಂಬೈ, ಐಕಳ ಆನಂದ ಶೆಟ್ಟಿ ಮುಂಬೈ, ಉದಯಕುಮಾರ್ ಮಡಂತ್ಯಾರ್, ಶಿವರಾಮ ಸಾಲ್ಯಾನ್ ಪೂನಾ, ನಿಶಾನ್ ಉಳ್ಳಾಲ್, ಸಂತೋಷ್ ಶೆಟ್ಟಿ, ಜಗದೀಪ್ ಡಿ. ಸುವರ್ಣ, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಮಂಗಲ್ಪಾಡಿ…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಉಡುಪಿ ತಾಲೂಕು 14ನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಹಾಸಂ’ ಸಾಹಿತ್ಯ ಸಂಗೀತ ಸುಧೆಯು ದಿನಾಂಕ 30-12-2023ರಂದು ಮಣಿಪಾಲದ ಶ್ರೀ ಕ್ಷೇತ್ರ ಶಿವಪ್ಪಾಡಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಶ್ರೀ ರಮಾನಂದ ಸ್ಮೃತಿ ಮಂಟಪದಲ್ಲಿ ನಡೆಯಲಿದೆ. ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಮಮತಾ ದೇವಿ ಜಿ.ಎಸ್. ಇವರು ಧ್ವಜಾರೋಹಣ ಮತ್ತು ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಇವರು ಪರಿಷತ್ ಧ್ವಜಾರೋಹಣ ನಡೆಸಿಕೊಡಲಿರುವರು. ಗಂಟೆ 9.30ಕ್ಕೆ ಹರ್ಷಿತಾ ಉಡುಪ ಮತ್ತು ಪ್ರಣಮ್ಯ ತಂತ್ರಿ ಇವರಿಂದ ‘ಯಕ್ಷ ನಾಟ್ಯ ವೈಭವ’. ಗಂಟೆ 9.50ಕ್ಕೆ ಹಿರಿಯ ಸಾಹಿತಿಗಳಾದ ನೆಂಪು ನರಸಿಂಹ ಭಟ್ ಇವರು ಸಾಹಿತಿ ದಿ. ತಾರಾ ಭಟ್ ನೆನಪಿನ ಪುಸ್ತಕ ಮಳಿಗೆಯ ಉದ್ಘಾಟನೆ ಮಾಡಲಿದ್ದಾರೆ. ಪೂರ್ವಾಹ್ನ 10 ಗಂಟೆಗೆ ವಿದ್ಯಾರ್ಥಿಗಳಿಂದ ನಾಡೆಗೀತೆ ಮತ್ತು ರೈತ ಗೀತೆಯೊಂದಿಗೆ ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ. ಸಾಹಿತಿಗಳಾದ ಎಚ್. ಶಾಂತರಾಜ ಐತಾಳ ಇವರು…

Read More

ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ.) ಮಂಗಳೂರು ಇದರ 9ನೇ ವಚನ ಸಂಭ್ರಮದ ಪ್ರಯುಕ್ತ ಪ್ರೌಡ ಶಾಲಾ ಮಕ್ಕಳಿಗೆ ‘ವಚನಕಾರರು ಸಮಾಜಕ್ಕೆ ನೀಡಿದ ಕೊಡುಗೆ’ ಎಂಬ ವಿಷಯದಲ್ಲಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯು ದಿನಾಂಕ 30-12-2023 ಮಧ್ಯಾಹ್ನ ಗಂಟೆ 2.00ಕ್ಕೆ ಮಂಗಳೂರು ಕೋಡಿಯಾಲ್ ಬೈಲ್ ಶಾರದ ವಿದ್ಯಾಲಯದಲ್ಲಿ ನಡೆಯಲಿದೆ. ನಿಯಮಗಳು : 1. ಕಾಲಾವಕಾಶ – 30 ನಿಮಿಷ. 2. ಕನ್ನಡದಲ್ಲಿ ಬರೆಯಬೇಕು. 3. ಶಾಲೆಯ ಗುರುತಿನ ಚೀಟಿ ಕಡ್ಡಾಯ. 4. ತೀರ್ಪುಗಾರರ ತೀರ್ಮಾನವೇ ಅಂತಿಮ. 5. ಅರ್ಧಗಂಟೆ ಮುಂಚೆ ಸ್ಥಳದಲ್ಲಿ ಇರಬೇಕು. 6. ಲೇಖನ 2 ಪುಟಕ್ಕೆ ಮೀರದಂತೆ ಇರಬೇಕು. ವಿಜೇತರಿಗೆ ಪ್ರಮಾಣ ಪತ್ರ ಮತ್ತು ಫಲಕ ನೀಡಲಾಗುವುದು. ಪ್ರಥಮ ಬಹುಮಾನ : ರೂ.1000/- ನಗದು ದ್ವಿತೀಯ ಬಹುಮಾನ : ರೂ.500/- ನಗದು ತೃತೀಯ ಬಹುಮಾನ : ರೂ.250/- ನಗದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 8073102903, 9481162594, 8618794902

Read More

ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿಸಲಾಗುತ್ತಿರುವ ಹಿಂಗಾರ ತ್ರೈಮಾಸಿಕಕ್ಕೆ ಅರೆಭಾಷೆಯಲ್ಲಿ ಕಥೆ, ಕವನ, ಲೇಖನ, ಜಾನಪದ, ಸಂಸ್ಕೃತಿ, ಕಲೆ, ಸಾಹಿತ್ಯ, ವ್ಯಕ್ತಿಚಿತ್ರ, ಹನಿಗವನ ಮತ್ತಿತರ ವಿಷಯಗಳ ಕುರಿತ ಬರಹ, ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಜನವರಿ 5ರೊಳಗೆ ಅರೆಭಾಷೆಯಲ್ಲಿ ಬರಹಗಳನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿ, ಕಾಫಿ ಕೃಪಾ ಕಟ್ಟಡ, 1ನೇ ಮಹಡಿ, ರಾಜಾಸೀಟು ರಸ್ತೆ, ಮಡಿಕೇರಿ 571 201 ಇಲ್ಲಿಗೆ ವಿಷಯ ಆಧಾರಿತ ಚಿತ್ರಸಹಿತ ಬರಹಗಳನ್ನು ಲಿಖಿತವಾಗಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ, ಕೊಡಗು ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ 6362588677 ಸಂಪರ್ಕಿಸಬಹುದು.

Read More