Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ದತ್ತಿನಿಧಿ ಸಮಿತಿ ಮಂಗಳೂರು ಇದರ ಸಹಯೋಗದಲ್ಲಿ ಹಾಗೂ 20ನೇ ವರ್ಷದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26-11-2023 ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಶಿವರಾಜ್ ತಂಗಡಗಿ ಇವರು ವಿಶುಕುಮಾರ್ ಅವರ ಹೆಸರಿನಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಪ್ರಾಧ್ಯಾಪಕಿ ಅಕ್ಷಯ ಆರ್. ಶೆಟ್ಟಿ ಅವರಿಗೆ ವಿಶುಕುಮಾರ್ ಸಾಹಿತ್ಯ ಪುರಸ್ಕಾರ, ಪತ್ರಕರ್ತ ಭರತ್ ರಾಜ್ ಸನಿಲ್ ಅವರಿಗೆ ವಿಶುಕುಮಾರ್ ಪತ್ರಿಕೋದ್ಯಮ ಪುರಸ್ಕಾರ, ನಾಟಕ ಕಲಾವಿದ ರಕ್ಷಿತ್ ಗಾಣಿಗ ಅವರಿಗೆ ವಿಶುಕುಮಾರ್ ನಾಟಕ ಪುರಸ್ಕಾರ, ಬಂಟ್ವಾಳ ತುಡರ್ ಸೇವಾ ಟ್ರಸ್ಟ್ ಗೆ ವಿಶುಕುಮಾರ್ ಸಂಘಟನಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಈ ವೇಳೆ ಕನ್ನಡ…
ಮೈಸೂರು : ಅಭ್ಯಾಸಿ ಟ್ರಸ್ಟ್, ಚಾಮರಾಜನಗರ ಪ್ರಸ್ತುತ ಪಡಿಸುವ ಚಾಮರಾಜನಗರ ಗ್ರಾಮೀಣ ಭಾಷೆ ಮತ್ತು ಬದುಕಿನ ರಂಗಪ್ರಸ್ತುತಿ ‘ಕಂಡಾಯದ ಕೋಳಿ’ ದಿನಾಂಕ 26-11-2023ರ ಭಾನುವಾರ ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಶ್ರೀ ಮಂಜು ಕೋಡಿಉಗನೆ ರಚಿಸಿರುವ ಈ ರಂಗ ಪ್ರಸ್ತುತಿಯ ಸಂಗೀತ ಮತ್ತು ನಿರ್ದೇಶನ ಕಿರಣ್ ಗಿರ್ಗಿ ಅವರದ್ದು, ಶಿವಮಲ್ಲು ದೇಶಳ್ಳಿ ಮತ್ತು ಮಧು ಸೋಹನ್ ಸಂಗೀತದಲ್ಲಿ ಸಹಕರಿಸಲಿದ್ದು, ಎಸ್.ಜಿ. ಮಹಾಲಿಂಗ ಗಿರ್ಗಿ ಹಾಗೂ ಕೆ.ಪಿ. ರೇವತಿ ಶರ್ಮ ಗಾಯನದಲ್ಲಿ ಸಹಕರಿಸಲಿದ್ದಾರೆ. ರಂಗ ಪರಿಕರಗಳನ್ನು ಹರೀಶ್ ಸ್ಪಾಟ್ ಡಿಸೈನರ್ ಸಂಯೋಜಿಸಲಿದ್ದು, ಪ್ರಸಾಧನದಲ್ಲಿ ರಂಗನಾಥ ವಿ. ಮತ್ತು ಬೆಳಕಿನಲ್ಲಿ ಶಿವು ಗುಂಡ್ಲುಪೇಟೆ ಸಹಕರಿಸಲಿದ್ದಾರೆ. ರಂಗದ ಮೇಲೆ ಕಾಳೀರನಾಗಿ ಕಿರಣ್ ಗಿರ್ಗಿ, ಕುಂಟಗಿರಿಯಾಗಿ ಮಹೇಶಪ್ಪ ಕಟ್ನವಾಡಿ, ಚಾಮಿಯಾಗಿ ವಿಜಿ, ಕೆಂಪಿಯಾಗಿ ನಂದಿನಿ ರವಿಕುಮಾರ್, ಸುಟ್ಟಣ್ಣ, ತಮಡಿ ಮತ್ತು ಮುರುಗೇಶನಾಗಿ ರಿದಂ ರಾಮಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಲೆ ನಟರಾಜ್, ಪುಟ್ಟಣ್ಣ ಮತ್ತು ಪೊಲೀಸ್ ಪೇದೆ ಪಾತ್ರದಲ್ಲಿ ಸುರೇಶ್…
ಮಂಗಳೂರು : ಲಲಿತ ಕಲೆಗಳ ಸಂವರ್ಧನೆಗಾಗಿ ಸಮರ್ಪಿತವಾದ ಅಖಿಲ ಭಾರತಿಯ ಸಂಘಟನೆಯಾದ ಸಂಸ್ಕಾರ ಭಾರತೀ ವತಿಯಿಂದ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮವು ದಿನಾಂಕ 25-11-2023 ಶನಿವಾರದಂದು ಸಂಜೆ ಗಂಟೆ 4ಕ್ಕೆ ಶರವು ದೇವಸ್ಥಾನದ ಬಳಿಯಿರುವ ಬಾಳಂಭಟ್ ಹಾಲ್ ಇಲ್ಲಿ ನಡೆಯಲಿದೆ. ಸಂಜೆ ಗಂಟೆ 4ರಿಂದ ಸರಯೂ ಯಕ್ಷ ಬಳಗ, ಕೋಡಿಕಲ್ ಇವರಿಂದ ವರ್ಕಾಡಿ ರವಿ ಅಲೆವೂರಾಯ ಇವರ ನಿರ್ದೇಶನದಲ್ಲಿ ‘ಮಹರ್ಷಿ ವಾಲ್ಮೀಕಿ’ ಯಕ್ಷಗಾನ ಬಯಲಾಟ ಮತ್ತು ಶ್ರೀ ಬಾಲಕೃಷ್ಣ ಕತ್ತಲ್ಸಾರ್ ಮತ್ತು ಬಳಗದವರಿಂದ ‘ತುಳುನಾಡ ಬಲೀಂದ್ರ ಲೆಪ್ಪುದ ಪೊರ್ಲು’ ಪ್ರದರ್ಶನ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್ ಇವರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಆರ್.ಕೆ. ಟ್ರಾವೆಲ್ಸ್ ಇದರ ಮಾಲಕರಾದ ಅಡ್ಯಾರ್ ಮಾಧವ ನಾಯ್ಕ್ ಭಾಗವಹಿಸಲಿರುವರು. ಬಾಳಂಭಟ್ ಮನೆತನದ ವೇದ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ಇವರು ಮುಖ್ಯ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಸಂಸ್ಕಾರ ಭಾರತೀ…
ಅರಿಜೋನಾ : ಅಮೆರಿಕದ ಟೆಂಪಿ ಅರಿಜೋನಾ ನಗರದಲ್ಲಿ ನವೆಂಬರ್ 5ನ್ನು ವಿಠ್ಠಲ ರಾಮಮೂರ್ತಿ ದಿನ’ ಎಂದು ಘೋಷಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಕಲಾವಿದರಾಗಿ ಹಾಗೂ ಗುರುವಾಗಿ ವಿಠ್ಠಲ ರಾಮಮೂರ್ತಿ ಅವರು ನೀಡಿರುವ ಜೀವಮಾನದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಟೆಂಪಿ ಅರಿಜೋನಾ ನಗರದ ಮೇಯರ್ ಕೋರಿ ವುಡ್ಸ್ ಅವರು ಈ ಗೌರವವನ್ನು ನೀಡಿ ಅಭಿನಂದಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕನ್ನಡಿಗ, ಅಂತರರಾಷ್ಟ್ರೀಯ ಖ್ಯಾತಿಯ ಈ ವಯಲಿನ್ ಸಾಧಕ ಮೂಲತಃ ಧರ್ಮಸ್ಥಳ ಸಮೀಪದ ನಿಡ್ಲೆಯವರು. ಚೆನ್ನೈಯ ನಿವಾಸಿಯಾಗಿರುವ ಅವರು ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರು. ವಯಲಿನ್ ಮಾಂತ್ರಿಕ ಲಾಲ್ಗುಡಿ ಜಯರಾಮನ್ ಅವರ ಪಟ್ಟ ಶಿಷ್ಯ. ಭಾರತ ಹಾಗೂ ವಿದೇಶಗಳಲ್ಲಿ 6,000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿರುವ ವಿಠ್ಠಲ ರಾಮಮೂರ್ತಿ ಶ್ರೇಷ್ಠ ಸಂಗೀತ ಗುರುಗಳೂ ಹೌದು. ಅವರ ಗರಡಿಯಲ್ಲಿ ಪಳಗಿದ ಅನೇಕ ಶಿಷ್ಯರು ವಿಶ್ವದಾದ್ಯಂತ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಪಸರಿಸುತ್ತಿದ್ದಾರೆ. ನಿಡ್ಲೆಯಲ್ಲಿರುವ ಅವರ ಮೂಲ ಮನೆಯಲ್ಲಿ ‘ಕರುಂಬಿತ್ತಿಲ್ ಶಿಬಿರ’…
ಬೆಳಗಾವಿ : ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಐಕ್ಯೂಎಸಿ ಕನ್ನಡ ವಿಭಾಗ ಮತ್ತು ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಸಹಯೋಗದೊಂದಿಗೆ ಡಾ. ಡಿ.ಎಸ್. ಕರ್ಕಿ ಅವರ 116ನೇ ಜಯಂತ್ಯುತ್ಸವ ಪ್ರಯುಕ್ತ ‘ಕನ್ನಡದ ದೀಪ ಡಾ. ಡಿ.ಎಸ್. ಕರ್ಕಿ’ ಎಂಬ ವಿಷಯದ ಕುರಿತು ದಿನಾಂಕ 22-11-2023ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿ.ವಿ. ಮಾಲ್ಯಮಾಪನ ಕುಲಸಚಿವೆ ಹಾಗೂ ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮೀ ತಿರ್ಲಾಪೂರ ಅವರು “ವಿದ್ಯಾ ಸಂಪತ್ತಿನಿಂದ ದೊಡ್ಡ ಹುದ್ದೆಗೆ ಏರಿದರೂ ಸಾಹಿತಿ ಡಾ. ಡಿ.ಎಸ್. ಕರ್ಕಿ ಅವರಿಗೆ ಹಮ್ಮು ಬಿಮ್ಮು ಇದ್ದಿರಲಿಲ್ಲ. ಪ್ರಾಚಾರ್ಯರು, ಉಪನ್ಯಾಸಕರಾದವರು ಹೇಗಿರಬೇಕು ಎನ್ನುವುದನ್ನು ಸರಳತೆಯಿಂದ ತೋರಿಸಿಕೊಟ್ಟಿದ್ದರು. ಅಂತಹ ಮಹಾನ್ ವ್ಯಕ್ತಿಗಳ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಿ ಎತ್ತರಕ್ಕೆ ಬೆಳೆಯಬೇಕು” ಎಂದು ಡಾ. ಡಿ.ಎಸ್. ಕರ್ಕಿ ಅವರ ಜೀವನ ಮೌಲ್ಯಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ…
ನಾಟಕದ ಶೀರ್ಷಿಕೆಯೇ ಅತ್ಯಂತ ಮನಮೋಹಕ. ಮನಸೂರೆಗೊಂಡ ಕಾವ್ಯಾತ್ಮಕ ಪ್ರಸ್ತುತಿ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಹು ಲವಲವಿಕೆಯಿಂದ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ ಸುಮನೋಹರ ರಂಗಪ್ರಸ್ತುತಿ ನೋಡುಗರನ್ನು ಬಹು ಆಸಕ್ತಿಯಿಂದ ಸೆಳೆದೊಯ್ದ ಕುತೂಹಲಭರಿತ ನಾಟಕ. ನಾಡೋಜ ಡಾ. ಹಂಪನಾ ವಿರಚಿತ ಈಗಾಗಲೇ 16 ಭಾಷೆಗಳಿಗೆ ಅನುವಾದಗೊಂಡಿರುವ ‘ಚಾರುವಸಂತ’ ವಿಶಿಷ್ಟ ದೇಸೀಕಾವ್ಯವನ್ನು ಆಧರಿಸಿದ ರಂಗರೂಪವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದವರು ಡಾ.ನಾ. ದಾಮೋದರ ಶೆಟ್ಟಿ. ಕುತೂಹಲ ಕೆರಳಿಸುವ ಆಸಕ್ತಿಕರ ಘಟನೆಗಳಿಂದ ಕೂಡಿದ ನಾಟಕದ ದೃಶ್ಯಗಳಿಗೆ ಜೀವಸ್ಪರ್ಶ ನೀಡಿ ರಮ್ಯ ವಿನ್ಯಾಸದೊಂದಿಗೆ ಹರಿತವಾಗಿ ನಿರ್ದೇಶಿಸಿದವರು ಡಾ. ಜೀವನ್ ರಾಮ್ ಸುಳ್ಯ. ತಮ್ಮ ಕಾರ್ಯಕ್ಷಮತೆಗಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಇವರು ತಮ್ಮ ಸಿರಿಕಂಠದ ಇಂಪಾದ ಗಾಯನದಿಂದ ನಾಟಕದ ನಡೆಯನ್ನು ಮಧುರವಾಗಿಸಿದರು. ಇಂದಿನ ಸಮಾಜಕ್ಕೂ ಪ್ರಸ್ತುತವಾದ ಹಲವಾರು ಸಮಸ್ಯೆಗಳಿಗೆ ದನಿಯಾದ ನಾಟಕದಲ್ಲಿ ಗೌರವಸ್ಥ ಸಿರಿವಂತ ವೈಶ್ಯ ಮನೆತನದ ಚಾರುದತ್ತ, ಸುರಸುಂದರಿ ವೇಶ್ಯೆ ವಸಂತ ತಿಲಕೆಯಲ್ಲಿ ಅನುರಕ್ತನಾಗಿ ತಂದೆ-ತಾಯಿ, ಹೆಂಡತಿಯನ್ನು ಮರೆತು ಮನೆತನದ ಕೀರ್ತಿಯನ್ನು ಹಾಳುಮಾಡಿದ್ದಲ್ಲದೆ ನಿರ್ಗತಿಕನಾಗುತ್ತಾನೆ. ಸಾಧ್ವಿ ಪತ್ನಿಯ…
ನಾಟಕ: ಹೂವು ಅಭಿನಯ: ಚಂದ್ರಶೇಖರ ಶಾಸ್ತ್ರಿ ನಿರ್ದೇಶನ: ಸಾಸ್ವೆಹಳ್ಳಿ ಸತೀಶ್ ತಂಡ: ಹೊಂಗಿರಣ, ಶಿವಮೊಗ್ಗ ಪ್ರದರ್ಶನ: ಹತ್ತನೆಯ ಪ್ರದರ್ಶನ, ಸಮುದಾಯ ಬೆಂಗಳೂರು ʼ ಕಾರ್ನಾಡ್ ನೆನಪುʼ. ಕಾರ್ಯಕ್ರಮದಲ್ಲಿ ಹೂವುʼ ಗಿರೀಶ್ ಕಾರ್ನಾಡ್ ರ ಏಕವ್ಯಕ್ತಿ ನಾಟ್ಕ. ಅವರು ಮೊದಲು ಇಂಗ್ಲಿಷ್ ನಲ್ಲಿ ಬರೆದು ಮತ್ತೆ ಕನ್ನಡಕ್ಕೆ ತಂದ ಮೊದಲ ನಾಟ್ಕ ಕೂಡ. ಇಂಥದೊಂದು ಕೃತಿಯನ್ನು ಶಿವಮೊಗ್ಗದ ʼಹೊಂಗಿರಣʼ ತಂಡದವರು ರಂಗಕ್ಕೆ ತಂದಿದ್ದಾರೆ. ನಾಟ್ಕದ ನಿರ್ದೇಶಕರು ಸಾಸ್ವೆಹಳ್ಳಿ ಸತೀಶ್. ಅಭಿನಯ: ಚಂದ್ರಶೇಖರ ಶಾಸ್ತ್ರಿ. ಚಿತ್ರದುರ್ಗದ ಗ್ರಾಮೀಣ ಭಾಗದ ಕಥೆಯನ್ನೆತ್ತಿಕೊಂಡು ಕಾರ್ನಾಡ್ ಈ ನಾಟ್ಕ ರಚಿಸಿದ್ದಾರೆ. ಇದು, ದೈವ ಭಕ್ತಿ ಮತ್ತು ವೇಶ್ಯೆಯೊಬ್ಬಳ ಪ್ರೀತಿಯ ನಡುವೆ ಸಿಕ್ಕುಹಾಕಿಕೊಂಡ ಪೂಜಾರಿಯೊಬ್ಬನ ಕಥೆ. ಆತ ಹಳ್ಳಿಯ ಶಿವದೇವಾಲಯದ ಪೂಜಾರಿ. ಊರ ಗುಡಿಯಲ್ಲಿ ನಿಂತ ಲಿಂಗವನ್ನ ಪ್ರತಿದಿನವೂ ವಿಶಿಷ್ಟ ವಿನ್ಯಾಸಗಳಲ್ಲಿ ಹೂಗಳಿಂದ ಸಿಂಗರಿಸೋದ್ರಲ್ಲಿ ನಿಷ್ಣಾತ. ಪಾಳೇಗಾರರಿಂದಲೂ ಊರ ಜನರಿಂದಲೂ ತನ್ನ ಕಲಾವಂತಿಕೆಗಾಗಿ ಹೊಗಳಿಸಿಕೊಳ್ತಿದ್ದ ಈ ಪೂಜಾರಿ, ಒಂದು ಸಂಜೆ ಪ್ರಸಾದ ವಿತರಿಸೋ ಹೊತ್ತಿಗೆ ಅಚಾನಕ್ಕಾಗಿ ಚಂದ್ರಾವತಿಯೆಂಬ ವೇಶ್ಯೆಯೊಬ್ಬಳ ಎದೆಯ…
ಹೊನ್ನಾವರ : ‘ಪ್ರತಿಮಾ ಕೊಂಕಣಿ ಸಾಂಸ್ಕೃತಿಕ್ ಕಲಾ ವೇದಿ’ ಸಂಸ್ಥೆಯ ವತಿಯಿಂದ ಪ್ರತಿಭೋದಯದ ಶರಾವತಿ ಕಲಾ ಮಂದಿರದಲ್ಲಿ ದಿನಾಂಕ 19-11-2023 ರವಿವಾರದಂದು ಹೊನ್ನಾವರ, ಭಟ್ಕಳ ಕುಮಟಾ ಡಿನರಿ ಮಟ್ಟದಲ್ಲಿ ಕೊಂಕಣಿ ನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಹೊನ್ನಾವರ ಚರ್ಚಿನ ಮುಖ್ಯ ಗುರುಗಳಾದ ವಂದನೀಯ ಪಾದರ್ ಸಾಲ್ವಾದೋರ್ ಗೊನ್ಸಾಲ್ವಿಸ್ ಹಾಗೂ ಸಭಾಧ್ಯಕ್ಷರಾಗಿ ಹೊನ್ನಾವರ ಡಿನರಿಯ ಡೀನ್ ವಂದನೀಯ ಪಾಧರ್ ಥೊಮಸ್ ಫರ್ನಾಂಡಿಸ್ ಹಾಗೂ ಮುಖ್ಯ ಅತಿಥಿಗಳಾಗಿ ನಾಗರಿಕ ವಾರ ಪತ್ರಿಕೆಯ ಸಂಪಾದಕರಾದ ಶ್ರೀಯುತ ಕೃಷ್ಣಮೂರ್ತಿ ಹೆಬ್ಬಾರ ಹಾಗೂ ಅತಿಥಿಗಳಾಗಿ ಸಾನಾಮೋಟಾ ಚರ್ಚಿನ ವಂದನೀಯ ಫಾದರ್ ಜೊನ್ಸನ್ ಫರ್ನಾಂಡಿಸ್, ರೊಜ್ಮೇರಿ ಕ್ರೆಡಿಟ್ ಸೌಹಾರ್ದದ ಕಾರ್ಯನಿರ್ವಾಹಕರಾದ ಶ್ರೀಮತಿ ಸವಿತಾ ರೇಷ್ಮಾ ಫರ್ನಾಂಡಿಸ್, ಹೊನ್ನಾವರ ಪ್ರತಿಷ್ಠಿತ ಹೋಟೇಲ್ ಗ್ರೀನ್ ಪಾರ್ಕಿನ ಮಾಲೀಕರಾದ ಶ್ರೀ ಗಣೇಶ ಅರವಾರೆ ಹಾಗೂ ಸನ್ಮಾನಿತರಾದ ಶ್ರೀ ಸ್ಯಾಮ್ಸನ್ ಡಿಸೋಜಾ ಸಮಾಜ ಸೇವಕ ಕಾರವಾರ, ಶ್ರೀ ನಿತ್ಯಾನಂದ ನಾಯಕ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾನಾಮೋಟಾ, ಶ್ರೀಮತಿ ಗ್ಲೋರಿಯಾ…
ಮೈಸೂರು : ಅದಮ್ಯ ರಂಗಶಾಲೆಯ ವತಿಯಿಂದ ನಗರದ ಜಯಲಕ್ಷ್ಮೀಪರಂನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ನಾಟಕ ಪ್ರದರ್ಶನ’ ದಿನಾಂಕ 18-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಪಂಪ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಇವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಬಳಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ, “ಶಿಕ್ಷಣ ಉತ್ಪತ್ತಿಶೀಲ ಮತ್ತು ಸಂಗ್ರಹಶೀಲವಾಗಿರಬಾರದು. ಬದಲಿಗೆ ಸೃಜನಶೀಲವಾಗಿರಬೇಕು. ಆದ್ದರಿಂದ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಜೊತೆಗೆ ವಿಶ್ವಪ್ರಜ್ಞೆಯನ್ನೂ ಬೆಳೆಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಅಧ್ಯಾಪಕನೂ ಗೌರವ ತಪಸ್ವಿ ಆಗಬೇಕು. ಅದರಲ್ಲೂ ಅಧ್ಯಾಪಕ ಕಡೆಯವರೆಗೂ ವಿದ್ಯಾರ್ಥಿಯೇ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಬೋಧಿಸುವ ಎಲ್ಲಾ ವಿಚಾರಗಳನ್ನು ಸ್ವತಃ ತಮಗೆ ಅನ್ವಯಿಸಿಕೊಳ್ಳಬೇಕು. ಆತ್ಮಶ್ರೀಯನ್ನು ಉದ್ದೀಪನಗೊಳಿಸುವ, ವೃದ್ಧಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು. ಕುವೆಂಪು ಅವರು ಮಹಾಕವಿ, ವಿಶ್ವಕವಿ ಮಾತ್ರವಲ್ಲ. ಮೂಲತಃ ಶ್ರೇಷ್ಠ ಪ್ರಾಧ್ಯಾಪಕರು ಮತ್ತು ಶಿಕ್ಷಣ ತಜ್ಞರಾಗಿದ್ದರು. ಅವರ ಶೈಕ್ಷಣಿಕ ವಿಚಾರಗಳು ಸದಾಕಾಲಕ್ಕೂ…
ಉಡುಪಿ: ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿಗೆ ಈ ಬಾರಿ ಕನ್ನಡದ ಶ್ರೇಷ್ಠ ಹಿರಿಯ ಕಲಾವಿದ, ನಿರ್ದೇಶಕ, ಸಂಘಟಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪತ್ರ, ಫಲಕ ಹಾಗೂ ನಗದು ರೂ.25,000/- ದೊಂದಿಗೆ ಗೌರವಿಸಿ, ಇದೇ ಬರುವ ಜನವರಿ ತಿಂಗಳಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಾಸರಗೋಡು ಚಿನ್ನಾ : ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಮಾತು ಸಾಮಾನ್ಯವಾದುದು. ಹಸಿರು ಸಸ್ಯರಾಶಿಗೆ ಮಾರುಹೋದ ಆಡು, ಬಾಯನ್ನು ಸೋಕಿಸಿದ್ದೇ ತಡ, ಕ್ಷಣಾರ್ಧದಲ್ಲಿ ಏನು ನಡೆಯುತ್ತಿದೆ ಎಂಬುದು ಅರಿವಿಗೆ ಬರುವ ಮೊದಲೇ ಸಸ್ಯಸಂಪತ್ತು ಅದಕ್ಕೆ ಆಹಾರವಾಗಿರುತ್ತದೆ. ಅದೇ ರೀತಿ ಕಾಸರಗೋಡು ಚಿನ್ನ ಕೈಯಾಡಿಸದ ಕ್ಷೇತ್ರಗಳಿಲ್ಲ. ಶ್ರದ್ಧೆ ಮತ್ತು ಪ್ರಮಾಣಿಕತನದಿಂದ ಯಾವುದೇ ಭಾಷೆಯ ನಾಟಕವಿರಲಿ, ಸಿನೆಮಾದ ಪಾತ್ರಗಳಿರಲಿ, ಆಕಾಶವಾಣಿ, ಧಾರವಾಹಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಲಾವಂತಿಕೆಯಿಂದ ಕೂಡಿದ ಸೃಜನಶೀಲ ಮನೋಭೂಮಿಕೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವರು. ‘ಹಿಡಿದ ಕೆಲಸ ಪೂರ್ಣವಾಗುವವರೆಗೆ…