Author: roovari

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಶ್ರಯದಲ್ಲಿ ದಿವಂಗತ ಸುಬ್ರಾಯ ಶಾಸ್ತ್ರಿಗಳ ತಾಯಿ ತಂದೆಯರ ಸ್ಮರಣಾರ್ಥವಾಗಿ ಆಯೋಜಿಸಲಾದ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆ ದಿನಾಂಕ 18-11-2023ರ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪ.ಪೂ ವಿದ್ಯಾಲಯಗಳ ವಿದ್ಯಾರ್ಥಿಳಿಗಾಗಿ ಆಯೋಜಿಸಿದ ಈ ಸ್ಪರ್ಧೆಯಲ್ಲಿ, ಡಾ. ಜನಾರ್ದನ ಹಾವಂಜೆ, ಶ್ರೀ ಪ್ರಸಾದ್ ರಾವ್ ಮತ್ತು ಶ್ರೀ ರಮೇಶ್ ಅಂಬಾಡಿ, ನಿರ್ಣಾಯಕರಾಗಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. ಶ್ರೀಮತಿ ಸುಲೋಚನ ರಾಘವೇಂದ್ರ ವಿಜೇತರ ವಿಜೇತರ ಪಟ್ಟಿ ವಾಚಿಸಿದರು. ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ, ಆರ್.ಜಿ.ಪೈ ಹಾಗೂ ಆರ್.ಆರ್.ಸಿ.ಯ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಪ್ರಶಸ್ತಿ ವಿಜೇತರು ಪೂರ್ವಪ್ರಾಥಮಿಕ: 1 ರಿಂದ…

Read More

ಉಡುಪಿ : ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು(ರಿ.) ಉಡುಪಿ ಇವರು ನೆಹರು ಜಯಂತಿ ಪ್ರಯುಕ್ತ ಆಯೋಜಿಸಿದ ‘ಮಕ್ಕಳ ನಾಟಕ ಹಬ್ಬ’ ಉದ್ಘಾಟನಾ ಸಮಾರಂಭವು ದಿನಾಂಕ 19-11-2023 ರಂದು ಉಡುಪಿಯ ಎಂ. ಜಿ. ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ಹಾಗೂ ಚಿಂತಕ ಡಾ. ಉದಯಕುಮಾರ ಇರ್ವತ್ತೂರು “ಆಧುನಿಕ ಭಾರತವನ್ನು ದೊಡ್ಡ ಕನಸಿನಿಂದ ಕಟ್ಟಿದವರು ನೆಹರು. ಅವರ ಆರ್ಥಿಕನೀತಿ ಹಾಗೂ ವಿದೇಶಿನೀತಿ ಭಾರತವನ್ನು ಬಲಿಷ್ಠಗೊಳಿಸಿದೆ. ಹುಟ್ಟಾ ಶ್ರೀಮಂತಿಕೆ ಇದ್ದರೂ ಪ್ರಜಾಪ್ರಭುತ್ವವಾದಿ ಮತ್ತು ಸಮಾಜವಾದಿ ನಿಲುವನ್ನು ಜೀವಂತ ಇಟ್ಟುಕೊಂಡವರು ನೆಹರು. ಅವರು ಜೈಲಿನಿಂದ ಮಗಳು ಇಂದಿರಾಗೆ ಬರೆದ ಪತ್ರಗಳೇ ಅವರ ವ್ಯಕ್ತಿತ್ವದ ಬಹುಮುಖಿ ಆಯಾಮಗಳನ್ನು ತೆರೆದಿಡುತ್ತದೆ ಎಂದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಶುಭ ಹಾರೈಸಿದರು. ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಸಂಸ್ಥೆಯ ಜೊತೆ ಕಾರ್ಯದರ್ಶಿ ಜಿ. ಪಿ ಪ್ರಭಾಕರ ತುಮರಿ ನಿರೂಪಿಸಿ, ಕಾರ್ಯದರ್ಶಿ ಸುಬ್ರಮಣ್ಯ…

Read More

ಮಂಗಳೂರು : ಕರ್ನಾಟಕ ಕರಾವಳಿ ನೃತ್ಯ ಕಲಾಪರಿಷತ್, ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಡನೆ ಆಯೋಜಿಸುವ ಈ ಆರ್ಥಿಕ ವರುಷದ 8ನೇ ಕಾರ್ಯಕ್ರಮ “ಯುವ ನೃತ್ಯ ಪ್ರತಿಭೋತ್ಸವ 2023” ದಿನಾಂಕ 19-11-2023ರ ಆದಿತ್ಯವಾರದಂದು ಸಾಯಂಕಾಲ ಘಂಟೆ 4.00ಕ್ಕೆ ಮಂಗಳೂರಿನ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾ ಶ್ರೀ ಬಿರುದಾಂಕಿತ, ನಾಟ್ಯಾಚಾರ್ಯ ಕಮಲಾಕ್ಷ ಆಚಾರ್ ಉದ್ಘಾಟಿಸಿ, ನೃತ್ಯ ಪ್ರದರ್ಶನ ನೀಡಲಿರುವ ಯುವ ಕಲಾವಿದೆಯರಿಗೆ ಶುಭ ಹಾರೈಸಿದರು. ಕರ್ನಾಟಕ ಕಲಾ ನೃತ್ಯ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಯು.ಕೆ. ಪ್ರವೀಣ್, ನೃತ್ಯ ಗುರುಗಳಾದ ವಿದ್ವಾನ್ ಸುದರ್ಶನ್, ವಿದುಷಿ ಭಾರತಿ ಸುರೇಶ್, ವಿದುಷಿ ಡಾ. ವಿದ್ಯಾಶ್ರೀ ಮುರಳಿಧರ್, ವಿದುಷಿ ಸೌಮ್ಯ ಸುಧೀಂದ್ರ, ಅಲ್ಲದೆ ಅನೇಕ ನೃತ್ಯ ಗುರುಗಳು ಉಪಸ್ಥಿತರಿದ್ದರು. ಮಂಗಳೂರಿನ ನೃತ್ಯ ಗುರುಗಳ ಹತ್ತು ಮಂದಿ ಯುವ ನೃತ್ಯ ಕಲಾವಿದೆಯರು ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ವಿದುಷಿ…

Read More

ಲಕ್ಷ್ಮೇಶ್ವರ : ಕಲಾ ವೈಭವ ಸಾಂಸ್ಕೃತಿಕ ವಿವಿದೋದ್ದೇಶ ಸಂಸ್ಥೆಯ ನೂತನ ಶಾಖೆಯ ಉದ್ಘಾಟನಾ ಸಮಾರಂಭವು ದಿನಾಂಕ 18-11-2023ರ ಶನಿವಾರದಂದು ಈಶ್ವರೀಯ ವಿದ್ಯಾಲಯ, ದೇಸಾಯಿವಾಡೆ, ಲಕ್ಷ್ಮೇಶ್ವರದಲ್ಲಿ ನಡೆಯಿತು. ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಈಶ್ವರ ಎಸ್ ಮೆಡ್ಲೇರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಗದಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ವೀರಯ್ಯ ಸ್ವಾಮಿ ಹಿರೇಮಠ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯುವ ಭರತನಾಟ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು, ಸೋಮೇಶ್ವರ ದೇಗುಲದ ಟ್ರಸ್ಟಿ ಮತ್ತು ಸಮಿತಿಯ ಅಧ್ಯಕ್ಷರಾದ ಶ್ರೀ ಚಂಬಣ್ಣ ಬಾಳಿಕಾಯಿ, ಶ್ರೀಮತಿ ರತ್ನ ಎಸ್ ಕರ್ಕಿ, ಶ್ರೀಮತಿ ಪ್ರತಿಮಾ ಮಹಜನ ಶೆಟ್ಟರ್, ದೇಗುಲದ ಕಾರ್ಯದರ್ಶಿಗಳಾದ ಶ್ರೀ ಸುರೇಶ ರಾಚನಾಯಕ ಮತ್ತು ಈಶ್ವರೀಯ ವಿದ್ಯಾಲಯದ ನಾಗಲಾಂಬಿಕ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ನಿರ್ದೇಶಕಿಯಾಗಿರುವ ಯುವ ಭರತನಾಟ್ಯ ಕಲಾವಿದೆ ಕು.ಭವ್ಯ.ಎಸ್ ಕತ್ತಿ, ಸಂಸ್ಥೆಯ ಕಾರ್ಯದರ್ಶಿ ಶ್ರೀ ಪ್ರವೀಣ್ ಎಸ್ ಕತ್ತಿ ಮುಂತಾದವರು ಉಪಸ್ಥಿತರಿದ್ದರು. ಉದ್ಘಾಟನಾ…

Read More

ಸಾಗರ: ಸಾಗರದ ಎನ್.ಎಸ್ ಬಡಾವಣೆಯ ಭೂಮಿ ರಂಗಮನೆಯಲ್ಲಿ ‘ಸ್ಪಂದನ’ ರಂಗ ತಂಡ ರಂಗಕರ್ಮಿ ಎಸ್. ಮಾಲತಿ ಇವರ ಸ್ಮರಣಾರ್ಥ ಆಯೋಜಿಸಿರುವ ‘ಪಯಣ’ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 18-11-2023ರಂದು ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಪ್ರಸಾದನ ಕಲಾವಿದ ಪುರುಷೋತ್ತಮ ತಲವಾಟಿ ಮಾತನಾಡಿ “ರಂಗಭೂಮಿ, ಸಿನಿಮಾ, ಧಾರವಾಹಿ ಹಾಗೂ ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಎಸ್. ಮಾಲತಿ ಅವರು ಮಹಿಳೆಯರು ಸಂಸ್ಕೃತಿಕವಾಗಿ ಕ್ರಿಯಾಶೀಲರಾಗಿರಬೇಕು ಎಂದು ಬಯಸಿದ್ದರು. ಇಂತಹ ಶಿಬಿರಗಳ ಮೂಲಕ ಅವರ ಆಶಯ ಈಡೇರಲಿದೆ.” ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕ ಬಿ.ಆರ್.ವಿಜಯವಾಮನ್ ಶಿವಿರವನ್ನು ಉದ್ದೇಶಿಸಿ “ರಂಗ ಭೂಮಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಈ ಮಾಧ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂಬ ನಂಬಿಕೆ ಇರಬೇಕಾದದ್ದು ಮುಖ್ಯವಾದ ಸಂಗತಿಯಾಗಿದೆ. ರಂಗಭೂಮಿ ಎಂಬುದು ಕೇವಲ ಮನೋರಂಜನೆಗೆ ಸೀಮಿತವಾದ ಮಾಧ್ಯಮವಲ್ಲ, ರಂಜನೆಯ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ವ್ಯಕ್ತಿತ್ವ ವಿಕಸನದ ಮೂಲಕ ಸಮುದಾಯದ ಬೆಳವಣಿಗೆಯನ್ನು ಬಯಸುವುದು ಈ ಮಾಧ್ಯಮದ ಉದ್ದೇಶವಾಗಿದೆ. ಹೆಣ್ಣು…

Read More

ಸಾಗರ : ‘ನಾ ಧಿನ್ ಧಿನ್ ನಾ ಹಿಂದೂಸ್ಥಾನೀ ತಬಲಾ ವಿದ್ಯಾಲಯ’ದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ‘ಲಯವತ್ಸರ -2’ ದಿನಾಂಕ 03-12-2023ರಂದು ಸಾಗರದ ಸೇವಾ ಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ನಡೆಯಲಿದೆ. ಮುಂಜಾನೆ ಗಂಟೆ 9ರಿಂದ ಕುಮಾರಿ ನಂದಾ ಭಟ್ ಭೀಮನಕೋಣೆ ಇವರಿಂದ ಗಾಯನ. ಕುಮಾರ ಶ್ರೀಷ ದತ್ತಾತ್ರೇಯ ಮತ್ತು ಸುದೀಪ್ ಕೆ.ಎಂ. ಕಿಬ್ಬಚ್ಚಲು ತಬಲಾದಲ್ಲಿ ಹಾಗೂ ಕುಮಾರ ಸಂವತ್ಸರ ಸಾಗರ ಇವರು ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ. ಗಂಟೆ 10ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ ಕಾರ್ಯಕ್ರಮ, ಅಪರಾಹ್ನ 12ರಿಂದ ಸಂತೂರ್-ಬಾನ್ಸುರಿ-ವಯೋಲಿನ್ ‘ತ್ರಿಗಲ್ ಬಂದಿ’ಯಲ್ಲಿ ಶ್ರೀಮತಿ ಸುಮಾ ಹೆಗಡೆ – ಸಂತೂರ್, ಶ್ರೀ ಸಮರ್ಥ ಹೆಗಡೆ – ಬಾನ್ಸುರಿ ಮತ್ತು ಶ್ರೀ ರಂಜನ್ ಕುಮಾರ್ ಬೇವುರ – ವಯೋಲಿನ್ ನುಡಿಸಲಿದ್ದಾರೆ. ವಿ. ಸಂತೋಷ್ ಆರ್. ಹೆಗಡೆ ಮತ್ತು ವಿ. ಶೌರಿ ಶಾನಭೋಗ್ ತಬಲಾ ಮತ್ತು ಪಖವಾಜ್ ಸಾಥ್ ನೀಡಲಿದ್ದಾರೆ. ಗಂಟೆ 2.30ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ ಕಾರ್ಯಕ್ರಮ, ಸಂಜೆ ಗಂಟೆ…

Read More

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವಕ್ಕೆ ದಿನಾಂಕ 18-11-2023ರಂದು ಪುತ್ತೂರಿನ ನಾಟ್ಯರಂಗದ ನೃತ್ಯಗುರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ “ಕಲೆಯನ್ನು ನಮ್ಮ ಬದುಕಿನ ಭಾಗವಾಗಿ ಇರಿಸಿಕೊಳ್ಳುವುದು ಅತ್ಯಗತ್ಯ. ಕಲೆಯು ಜೀವನಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೋಧಿಸುತ್ತದೆ. ಕೇವಲ ನೃತ್ಯ ಸಂಗೀತ ಮಾತ್ರ ಕಲೆಯಲ್ಲ ಬದಲಾಗಿ ಬದುಕುವುದು ಕೂಡಾ ಒಂದು ವಿಶಿಷ್ಠವಾದ ಕಲೆ. ಸಾಂಸ್ಕೃತಿಕವಾಗಿ ತೊಡಗಿಸಿಕೊಂಡರೆ ನಮಗೆ ಬದುಕುವ ಕಲೆ ಕರಗತವಾಗುತ್ತದೆ. ಎಳವೆಯಲ್ಲಿಯೇ ಕಲೆಯನ್ನು ಬೆಳೆಸಿಕೊಂಡರೆ ಶಿಸ್ತುಬದ್ದ ಜೀವನ ನಡೆಸಲು ಪೂರಕವಾಗುತ್ತದೆ. ಕಲೆಯು ಆತ್ಮವಿಶ್ವಾಸ ಮತ್ತು ಶಿಸ್ತಿನಿಂದ ಕೂಡಿದ ಅತ್ಯುತ್ತಮ ಜೀವನ ನಡೆಸಲು ಪ್ರೇರಣೆ ನೀಡುತ್ತದೆ. ನಮ್ಮೊಳಗೆ ಆಂತರಿಕ ಸೌಂದರ್ಯದ ವೃದ್ಧಿಗೆ ಕಲೆ ಪ್ರೇರಕವಾಗುತ್ತದೆ. ಜೀವನಾನಂದ ಪಡೆಯಲು ಕಲೆ ಮತ್ತು ಸಂಸ್ಕೃತಿಯು ಅಗತ್ಯವಾಗುತ್ತದೆ. ಕಲೆಯು ನೈಜ ಸತ್ಯವಾಗಿದೆ ಮತ್ತು ಸರ್ವರ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಕವಿ ಹೃದಯದ ಹಿರಿಯ ಖ್ಯಾತ ವೈದ್ಯ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ಮಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್ ನಲ್ಲಿ ದಿನಾಂಕ 20-11-2023ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಾಡಿಸಲಾಗಿತ್ತು. ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣಕರ್ ರವರು ಅಧ್ಯಕ್ಷತೆ ವಹಿಸಿದ್ದರು. ನುಡಿನಮನ ಸಲ್ಲಿಸಿ ಮಾತನಾಡಿದ ಶ್ರೀಮತಿ ಭುವನೇಶ್ವರಿ ಹೆಗ್ಗಡೆಯವರು ಡಾ. ಜಿ.ಜಿ. ಲಕ್ಷ್ಮಣ ಪ್ರಭುಗಳ ವ್ಯಕ್ತಿತ್ವ, ಹಾಸ್ಯಪ್ರಿಯತೆ ಮತ್ತು ಕರ್ತವ್ಯ ಬದ್ಧತೆಯನ್ನು ಸಭೆಗೆ ಪರಿಚಯಿಸಿ, ಒಬ್ಬ ಆದರ್ಶ ವೈದ್ಯನಲ್ಲಿ ಇರಬೇಕಾದ ಎಲ್ಲ ಗುಣವೂ ಅವರಲ್ಲಿ ಇತ್ತು. ಕೆಲವು ವ್ಯಕ್ತಿಗಳಿಗೆ ಪರ್ಯಾಯವೇ ಇರುವುದಿಲ್ಲ. ಅಂಥಹ ವ್ಯಕ್ತಿಗಳಲ್ಲಿ ಡಾ.ಜಿ.ಜಿ. ಲಕ್ಷ್ಮಣ ಪ್ರಭುಗಳು ಒಬ್ಬರು. ಅವರ ಅಗಲಿಕೆಯಿಂದ ಉಂಟಾದ ಶೂನ್ಯತೇ ಹಾಗೆಯೇ ಉಳಿಯುತ್ತದೆ. ಅವರು ವೈದ್ಯರಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ಆದರ್ಶಪ್ರಾಯರು ಎಂದು ನುಡಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀಯವರು ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳ…

Read More

ಬಂಟ್ವಾಳ : ಬಂಟ್ವಾಳ ದರ್ಬೆ ಯಕ್ಷಕಾವ್ಯ ತರಂಗಿಣಿ ಮತ್ತು ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ ‘ಬಣ್ಣಗಾರಿಕೆ ಶಿಬಿರ’ವು ದಿನಾಂಕ 19-11-2023ರಂದು ನೇರಂಬೋಳು ಸಭಾಭವನದಲ್ಲಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಸಂಘಟಕ ಮತ್ತು ಕಲಾವಿದರಾದ ಶ್ರೀ ಅಶೋಕ ಶೆಟ್ಟಿ ಸರಪಾಡಿ ಇವರು ಶಿಬಿರವನ್ನು ಉದ್ಘಾಟಿಸಿ, ಯಕ್ಷಕಾವ್ಯ ತರಂಗಿಣಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಯಕ್ಷಗಾನದ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರಸಾಧನ ಕಲಾವಿದ ಶ್ರೀ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಇವರನ್ನು ಸನ್ಮಾನಿಸಲಾಯಿತು. ಇವರು ಬಣ್ಣಗಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ಬಣ್ಣ ಹೇಗೆ ಹಚ್ಚುವುದು ಮತ್ತು ಯಕ್ಷಗಾನದಲ್ಲಿ ಬಣ್ಣದ ಪಾತ್ರ ಹೇಗೆ ಎಂಬ ಬಗ್ಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮವು ಶ್ರೀ ಸಂಜೀವ ಕಜೆಪದವು ಇವರ ಮಾರ್ಗದರ್ಶನದಲ್ಲಿ ನಡೆದು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ರವಿ ನೇರಂಬೋಳು ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ಬಣ್ಣಗಾರಿಕೆ ಯಕ್ಷಗಾನ ಶಿಬಿರದಲ್ಲಿ ಯಕ್ಷಕಾವ್ಯ ತರಂಗಿಣಿ ದರ್ಬೆ ಮತ್ತು…

Read More

ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಎಂಟನೇ ತರಗತಿಯಿಂದ ಪಿಯುಸಿ ಎರಡನೇ ವರ್ಷದವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ‘ಹರಿಕಥಾ ಸ್ಪರ್ಧೆ 2023’ ಪ್ರಾಥಮಿಕ ಹಂತದ ಸ್ಪರ್ಧೆಗೆ ಹದಿನೈದು ನಿಮಿಷಗಳಿಗೆ ಮೀರದ ಹರಿಕಥಾ ಪ್ರಸ್ತುತಿಯ ತಮ್ಮ ವಿಡಿಯೋವನ್ನು ಈ ಕೆಳಗೆ ನೀಡಿರುವ ಈ ಮೇಲ್ ಅಥವಾ ವಾಟ್ಸಪ್ ಸಂಖ್ಯೆಗೆ ದಿನಾಂಕ 15-12-2023ರ ಒಳಗಾಗಿ ಹೆಸರು, ವಿದ್ಯಾಸಂಸ್ಥೆ, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ಕಳುಹಿಸಬೇಕು. ಇದರಲ್ಲಿ ಆಯ್ಕೆಯಾದ ಹನ್ನೆರಡು ಮಂದಿ ಸ್ಪರ್ಧಿಗಳಿಗೆ ದಿನಾಂಕ 31-12-2023ರಂದು ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ಅಂತಿಮ ಸುತ್ತಿನಲ್ಲಿ 25 ನಿಮಿಷಗಳ ಸರ್ವಾಂಗೀಣ ಹರಿಕಥಾ ಪ್ರದರ್ಶನವನ್ನು ವೇದಿಕೆಯಲ್ಲಿ, ಪಕ್ಕವಾದ್ಯಗಳೊಂದಿಗೆ ಸ್ಪರ್ಧಿಯು ನೀಡಬೇಕಾಗುವುದು. ನಿರ್ಣಾಯಕರ ತೀರ್ಮಾನ ಅಂತಿಮವಾಗಿರುತ್ತದೆ. ವಿಡಿಯೋ ಕಳುಹಿಸಬೇಕಾದ ವಾಟ್ಸಪ್‌ ಸಂಖ್ಯೆ : 9945370655 ಮತ್ತು ಇಮೇಲ್ ವಿಳಾಸ : [email protected] ಈ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ರೂ.10,000/- ದ್ವಿತೀಯ ಬಹುಮಾನ…

Read More