Author: roovari

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸುವ 8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ 22 ಮತ್ತು 23 ಮಾರ್ಚ್ 205 ರಂದು ನಡೆಯಲಿದ್ದು, ಲೇಖಕಿ ಎಚ್.ಎಸ್. ಶ್ರೀಮತಿ ಇವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ‘ಹಿಂದಣ ಹೆಜ್ಜೆ, ಮುಂದಣ ನೋಟ’ ಎಂಬ ಶೀರ್ಷಿಕೆಯಡಿ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಿ, ಸಮಾರೋಪ ನುಡಿಗಳನ್ನಾಡಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಕವಿಗೋಷ್ಠಿಗಳು ನಡೆಯಲಿದ್ದು, ರಾಜ್ಯದ ವಿವಿಧೆಡೆ ಇರುವ ಲೇಖಕಿಯರು, ಕವಯಿತ್ರಿಯರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.

Read More

ಕನ್ನಡದಲ್ಲಿ ಲಲಿತಪ್ರಬಂಧಗಳು ಮಂಕಾಗಿವೆ ಎನ್ನುವವರು ‘ಮಂದಹಾಸ’ ಕೃತಿಯನ್ನೊಮ್ಮೆ ಓದಬೇಕು. ಇದರಲ್ಲಿ ಇಪ್ಪತ್ತೈದು ಬರಹಗಳಿವೆ. ಲಲಿತ ಪ್ರಬಂಧಗಳನ್ನು ಓದದ, ಗಂಭೀರವಾಗಿ ನೋಡದ ಸಾಹಿತ್ಯಪ್ರಿಯರು ಮತ್ತು ಪ್ರೋತ್ಸಾಹಿಸದ ಪತ್ರಿಕೆಗಳು ಪಶ್ಚಾತ್ತಾಪ ಪಡುವಂತೆ ಪುಸ್ತಕದ ಹಾಸುಬೀಸು ಇದೆ. ವಿಕಾಸ ಹೊಸಮನಿ ಎಂಬ ತರುಣ ಲೇಖಕ ಸಂಪಾದಿಸಿದ ಈ ಕೃತಿ ಮರುಮುದ್ರಣ ಕಾಣುವ ಶಕ್ತಿಯನ್ನು ಹೊಂದಿದೆ. ಬರಹವನ್ನು ಹೇಗೆ ಹೆಣೆಯಬಹುದೆಂದು ಈ ಪುಸ್ತಕದ ಓದಿನ ಮೂಲಕ ಕಲಿಯಬಹುದು. ಇಪ್ಪತ್ತೈದು ಮಂದಿ ಪ್ರಬಂಧಕಾರರನ್ನು ಕುರಿತ ಹೆಚ್ಚಿನ ಮಾಹಿತಿ ಇಲ್ಲವೆಂಬ ಸಣ್ಣ ಲೋಪವನ್ನು ಬಿಟ್ಟರೆ ಈ ಕೃತಿ ಶ್ರೀಮಂತವಾಗಿದೆ. ಕೃತಿಯ ನೋಟ ವಿಠ್ಠಲ ಕಟ್ಟಿ ‘ನಾನೇಕೆ ಬರೆಯುತ್ತಿಲ್ಲ’ ಎಂಬ ಲಲಿತ ಪ್ರಬಂಧದಲ್ಲಿ ಈ ‌ಮಾತಿನ ಮೂಲಕ ಗಮನ ಸೆಳೆಯುತ್ತಾರೆ. “ಮುಖ್ಯ ಕಾರಣ, ನನಗೆ ಓದುಗರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ಕೆಲವರು ಬರೆದರೇ ಕನ್ನಡ ಸಾಹಿತ್ಯಕ್ಕೆ ಉಪಕಾರ ಕೆಲವರು ಬರೆಯದಿದ್ದರೆ ಉಪಕಾರ” ಎನ್ನುತ್ತಾ ಒಳ್ಳೆಯ ಪ್ರಬಂಧವನ್ನು ಹೆಣೆದು ಬಿಡುತ್ತಾರೆ. ಉತ್ತಮ ಕಥೆಗಾರನಾಗಿದ್ದೂ ಲಲಿತ ಪ್ರಬಂಧವನ್ನು ಬರೆಯ ಹೊರಟು, ಕಥೆಯಂತೆ…

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಬನ್ನೂರು ಕರ್ಮಲದ ಭಾರತೀ ನಗರದ‌ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾವರ್ಧಂತಿ ಉತ್ಸವದ ಅಂಗವಾಗಿ ದಿನಾಂಕ 04 ಮಾರ್ಚ್ 2025ರಂದು ‘ದಕ್ಷಯಾಗ‌’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರೀ, ಆನಂದ ಸವಣೂರು, ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಶರಣ್ಯ ನೆತ್ರಕೆರೆ, ಮಾಸ್ಟರ್ ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಈಶ್ವರ (ಶುಭಾ ಅಡಿಗ), ದಾಕ್ಷಾಯಿಣಿ (ಕಿಶೋರಿ ದುಗ್ಗಪ್ಪ ನಡುಗಲ್ಲು), ದಕ್ಷ (ಹರಿಣಾಕ್ಷಿ ಜೆ. ಶೆಟ್ಟಿ‌), ವಿಪ್ರರು‌ (ಗಾಯತ್ರೀ ಹೆಬ್ಬಾರ್), ವೀರಭದ್ರ (ಶಾರದಾ ಅರಸ್), ದೇವೇಂದ್ರ (ಭಾರತೀ ರೈ ಅರಿಯಡ್ಕ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಪುಳು ಈಶ್ವರ ಭಟ್ ವಂದಿಸಿದರು. ಶ್ರೀ ದೇವಳದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಹಾಗು ಬಡೆಕ್ಕಿಲ ಚಂದ್ರಶೇಖರ್ ಭಟ್ ಸಹಕರಿಸಿದರು.

Read More

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಪರಿಷತ್ ಜಂಟಿ ಆಶ್ರಯದಲ್ಲಿ ನಡೆಯುವ ವಿದ್ಯಾರ್ಥಿ ತುಳು ಸಮ್ಮೇಳನದ ಪೂರ್ವಭಾವಿ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ಮಂಗಳೂರಿನ ತುಳು ಭವನದಲ್ಲಿ ಜರಗಿತು. ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಸುರತ್ಕಲ್ ಅವರು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ “ತುಳು ಭಾಷೆ ಹಾಗೂ ತುಳು ಸಂಸ್ಕ್ರತಿಯ ಬಗ್ಗೆ ಎಲ್ಲರೂ ಒಲವು ಬೆಳೆಸಿಕೊಳ್ಳಬೇಕು, ಪದವಿ ಶಿಕ್ಷಣದಲ್ಲಿ ತುಳು ಪಠ್ಯ ಎಲ್ಲಾ ಕಾಲೇಜುಗಳಿಗೆ ವಿಸ್ತರಣೆಯಾಗಲು ಈ ವಿದ್ಯಾರ್ಥಿ ತುಳು ಸಮ್ಮೇಳನ ಸಹಕಾರಿಯಾಗಲಿ” ಎಂದು ಆಶಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ ಮಾತನಾಡಿ “ತುಳು ಭಾಷೆ ನಮ್ಮೆಲ್ಲರ ಮಾತೃ ಭಾಷೆಯಾಗಿದ್ದು, ಭಾಷೆಯ ಬಗ್ಗೆ ಅಭಿಮಾನ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ” ಎಂದು ಹೇಳಿದರು. ತುಳು ಪರಿಷತ್ ಗೌರವ ಅಧ್ಯಕ್ಷ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ “ಪ್ರೌಢ ಶಾಲೆ, ಪದವಿ ಹಾಗೂ ಸ್ನಾತಕೋತ್ತರ…

Read More

ಬೆಂಗಳೂರು : ಬೇವಿನಹಳ್ಳಿಯ ‘ಜಿಗುರು’ ತಂಡದ ವತಿಯಿಂದ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 07ರಿಂದ 09 ಮತ್ತು 14ರಿಂದ 16 ಮಾರ್ಚ್ 2025ರವೆರೆಗೆ ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ಕನ್ನಡ ನಾಟಕಗಳ ಪ್ರದರ್ಶನವನ್ನು ಪ್ರತಿದಿನ 3-00 ಮತ್ತು 7-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 07 ಮಾರ್ಚ್ 2025ರಂದು ಪ್ರಕಾಶ್ ಬೆಳವಾಡಿ ಇವರ ನಿರ್ದೇಶನದಲ್ಲಿ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ ತಂಡದವರಿಂದ ‘ಎಡಬಿಡಂಗಿ’, ದಿನಾಂಕ 08 ಮಾರ್ಚ್ 2025ರಂದು ಚಿತ್ರಶೇಕರ್ ಎನ್.ಎಸ್. ಇವರ ನಿರ್ದೇಶನದಲ್ಲಿ ಸಂಚಯ ತಂಡದವರಿಂದ ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ’, ದಿನಾಂಕ 09 ಮಾರ್ಚ್ 2025ರಂದು ಶ್ರದ್ದಾ ರಾಜ್ ಇವರ ನಿರ್ದೇಶನದಲ್ಲಿ ಜಂಗಮ ಕಲೆಕ್ಟಿವ್ ತಂಡದವರಿಂದ ‘ರುಮುರುಮುರುಮು’, ದಿನಾಂಕ 14 ಮಾರ್ಚ್ 2025ರಂದು ಮಂಗಳ ಎನ್. ಇವರ ನಿರ್ದೇಶನದಲ್ಲಿ ಸಂಚಾರಿ ಥಿಯೇಟರ್ ತಂಡದವರಿಂದ ‘ರೊಶೊಮನ್’, ದಿನಾಂಕ 15 ಮಾರ್ಚ್ 2025ರಂದು ವಿನಯ್ ಶಾಸ್ತ್ರಿ ಇವರ ನಿರ್ದೇಶನದಲ್ಲಿ ವಾಸ್ಪ್ ಥಿಯೇಟರ್ ತಂಡದವರಿಂದ ‘ಹೀಗಾದ್ರೆ ಹೇಗೆ ?’…

Read More

ಕಟೀಲು : ಕಲಾ ಸಂಗಮ ಕಲಾವಿದರು ಅಭಿನಯಿಸುವ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕದ ಪ್ರಥಮ ಪ್ರದರ್ಶನವನ್ನು ದಿನಾಂಕ 06 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ನಾಟಕಕ್ಕೆ ಶಶಿರಾಜ್ ಕಾವೂರು ಇವರ ಕಥೆ ಸಂಭಾಷಣೆ, ಎ.ಕೆ. ವಿಜಯ್ ಕೋಕಿಲ ಮತ್ತು ಕದ್ರಿ ಮಣಿಕಾಂತ್ ಇವರ ಸಂಗೀತ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನ ಮಾಡಿರುತ್ತಾರೆ.

Read More

ಬೆಂಗಳೂರು : ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲದ ಯಕ್ಷ ತರಬೇತಿ ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನ ‘ಯಕ್ಷ ಪಯಣ’ದ ಉದ್ಘಾಟನೆಯು ದಿನನಕ 02 ಮಾರ್ಚ್ 2025ರಂದು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಯಕ್ಷದೇಗುಲದಲ್ಲಿ ಅನಾವರಣಗೊಂಡಿತು. ಪ್ರತಿ ತಿಂಗಳು ‘ಯಕ್ಷದೇಗುಲ’ ಅಂಗಳದಲ್ಲಿ ಕಲಿತ ಪಾಠದ ಪ್ರದರ್ಶನ ನೀಡುವುದು ಈ ಯಕ್ಷ ಪಯಣದ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆ. ಮೋಹನ್‌ ಮಾತನಾಡಿ “ಇದೊಂದು ಒಳ್ಳೆಯ ಕಾರ್ಯಕ್ರಮ. ಮೊದಲಾಗಿ ಸಭಾಕಂಪನ ಹಾಗೆ ಪೌರಾಣಿಕ ಕಥಾನಕಗಳ ಅನುಭವ, ಕನ್ನಡ ಭಾಷೆಯ ಮೇಲೆ ಪ್ರಭುತ್ವ, ಸ್ವರ ಸಾಮರ್ಥ್ಯ, ಅಭಿನಯ, ಕುಣಿತ, ಪ್ರತಿಭೆ ಹೀಗೇ ಎಲ್ಲಾ ವಿಚಾರದ ಬಗ್ಗೆ ಪ್ರದರ್ಶನದ ಮೂಲಕ ಸರಿಪಡಿಸಿಕೊಳ್ಳಬಹುದು” ಎಂದರು. ಹಿರಿಯ ಯಕ್ಷಗಾನ ನೇಪಥ್ಯ ಕಲಾವಿದರಾದ ಕೆ. ಸುಶೀಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್, ಡಾ. ಪ್ರೀತಿ ವೈದ್ಯ, ವೀಣಾ ಮೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಕ್ಷ ಗುರುಗಳಾದ ಪ್ರಿಯಾಂಕ ಕೆ. ಮೋಹನ್‌ರವರು ಕಾರ್ಯಕ್ರಮ ನಿರ್ವಹಿಸಿದರು.…

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರ್ ಸಾರಥ್ಯದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ 42ನೆಯ ಸರಣಿ ಕೃತಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಮತ್ತು ಲೇಖಕ ದುಬಾಯಿಯ ಬಗ್ಗೆ ಪ್ರಕಟಿತ ಲೇಖನಗಳ ಸಂಕಲನ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿ ಮಂಗಳೂರು ಪತ್ರಿಕಾ ಭವನದಲ್ಲಿ ದಿನಾಂಕ 04 ಮಾರ್ಚ್ 2025ರಂದು ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಪ್ರಾರಂಭದಲ್ಲಿ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸರ್ವರನ್ನು ಸ್ವಾಗತಿಸಿ, ಪ್ರಸ್ತಾವಿಕ ಭಾಷಣದಲ್ಲಿ ಕೃತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕೃತಿ ಲೋಕಾರ್ಪಣೆ ಮಾಡಿದ ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿಯವರು “ದುಬಾಯಿಯಲ್ಲಿ ಕನ್ನಡ ಪುಸ್ತಕವನ್ನು ತನ್ನದೇ ಆದ ಶೈಲಿಯಲ್ಲಿ ರಚಿಸಿ ದುಬಾಯಿಯಲ್ಲಿರುವ ವಾಸ್ತು ಶಿಲ್ಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಅತ್ಯಂತ ಸುಂದರವಾದ ವರ್ಣಚಿತ್ರದೊಂದಿಗೆ ಓದುಗರಿಗೆ ಮುಟ್ಟಿಸುವಲ್ಲಿ ಕೃತಿ ಯಶಸ್ವಿಯಾಗಿದೆ” ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಚಿತ್ರಶಿಲ್ಪ ಕಲಾವಿದ, ಕ್ರಿಯಾತ್ಮಕ ಕಲಾನಿರ್ದೇಶಕರು ಹಾಗೂ ಲೇಖಕರಾಗಿರುವ…

Read More

ಆರ್. ಎಸ್. ಕೇಶವಮೂರ್ತಿ ಎಂದೇ ಪ್ರಸಿದ್ಧರಾದ ರುದ್ರಪಟ್ಣ ಸುಬ್ಬರಾಯ ಕೇಶವಮೂರ್ತಿಗಳು, ಪ್ರಸಿದ್ಧ ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. 1903 ಮಾರ್ಚ್ 4 ರಂದು ಬೇಲೂರಿನ ರುದ್ರಪಟ್ಣ ಸುಬ್ಬರಾಯರು ಮತ್ತು ಪುಟ್ಟಕ್ಕಯ್ಯನವರಿಗೆ ಜನಿಸಿದ ಸುಪುತ್ರ. ರುದ್ರಪಟ್ಣ ಸುಬ್ಬರಾಯರು 24 ತಲೆಮಾರುಗಳ ವೈಣಿಕ ವಂಶಜರಾದ ರುದ್ರಪಟ್ಣ ಸುಬ್ಬರಾಯರು ವೃತ್ತಿಯಲ್ಲಿ ಶಾಲೆಯ ಸಂಗೀತ ಅಧ್ಯಾಪಕರಾಗಿದ್ದರು. ಈ ಸಂಗೀತದ ಅಭಿರುಚಿ ತಲೆಮಾರುಗಳಿಂದ ಮುಂದುವರಿದುಕೊಂಡು ಕೇಶವಮೂರ್ತಿಗಳಲ್ಲೂ ಮನೆ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚು ಒಲವು ಇದ್ದ ಇವರು, ತಂದೆಯವರ ಬಳಿಯೇ ವೀಣೆಯ ಆರಂಭದ ಪಾಠ ಕಲಿತರು. ಮುಂದೆ ಮೈಸೂರಿನಲ್ಲಿ ಅವರ ಬಂಧುಗಳಾದ ರಾಯಪ್ಪನವರ ಮನೆಯಲ್ಲಿ ಉಳಕೊಳ್ಳುವ ಅನಿವಾರ್ಯತೆ ಒದಗಿ ಬಂದಾಗ ಪಕ್ಕದ ಮನೆಗೆ ವೀಣೆ ಪಾಠಕ್ಕೆ ಬರುತ್ತಿದ್ದ ವೀಣೆ ಸುಬ್ಬಣ್ಣನವರ ಕಲಾ ಪಾಂಡಿತ್ಯ ತಿಳಿದ ಕೇಶವಮೂರ್ತಿಗಳು ಒಂದು ದಿನ ಅವರ ಪಾದಗಳಿಗೆ ನಮಸ್ಕರಿಸಿ, ತಮ್ಮ ಮನಸ್ಸಿನ ಅದಮ್ಯ ಬಯಕೆಯನ್ನು ಅರಿಕೆ ಮಾಡಿಕೊಂಡರು. ಸುಬ್ಬಣ್ಣನವರು ಎಲ್ಲವನ್ನು ಕೇಳಿಸಿಕೊಂಡ ನಂತರ ಮೌನದಿಂದಲೇ ನಗುತ್ತಾ ಆಶೀರ್ವಾದ…

Read More

ಬೆಂಗಳೂರು : ಬೆಂಗಳೂರಿನ ರಂಗಮಂಡಲ ಸಿವಗಂಗ ಟ್ರಸ್ಟ್ ಇವರು ಮಲ್ಲಕಾರ್ಜನಸ್ವಾಮಿ ಮಹಾಮನೆ ಇವರ ನಿರ್ದೇಶನದಲ್ಲಿ ಆಯೋಜಿಸುವ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರವು ದಿನಾಂಕ 06 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ಬೆಳಿಗ್ಗೆ ಘಂಟೆ 9.30 ರಿಂದ ಮಧ್ಯಾಹ್ನ 1.00ರ ತನಕ ಬೆಂಗಳೂರಿನ ಕೆಂಗೇರಿ ಉಪನಗರ 1ನೇ ವಿಭಾಗದಲ್ಲಿರುವ # 3386 ಸರ್. ಎಂ. ವಿ. ಬಡಾವಣೆಯಲ್ಲಿರುವ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನಟನೆ, ನೃತ್ಯ, ಸಂಗೀತ, ಚಿತ್ರಕಲೆ, ಬೊಂಬೆಯಾಟ, ಕಥಾಪ್ರಸ್ತುತಿ, ಮೂಕಾಭಿನಯ, ಮಕ್ಕಳ ಕವಿತಾವಾಚನ, ಕ್ಲ-ಮಾಡೆಲಿಂಗ್, ಒರಿಗಾಮಿ, ಗಾಳಿಪಟ, ಯೋಗ-ಧ್ಯಾನ, ನಿರೂಪಣಾ ಕಲಿಕೆ, ನಾಟಕ ಕಲಿಕೆ ಮತ್ತು ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ – 9448970731, 9035093955

Read More