Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೆಸ್ಕ್ಲಬ್ನಲ್ಲಿ ದಿನಾಂಕ 04 ಎಪ್ರಿಲ್ 2025ರಂದು ಹರಿದಾಸ ‘ದೇವಕಿತನಯ’ ಮಹಾಬಲ ಶೆಟ್ಟಿ ಕೂಡ್ಲು ಇವರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದಲ್ಲಿ ‘ಮಹಾಪರ್ವ’ ಅಭಿನಂದನಾ ಸಂಪುಟವನ್ನು ಲೋಕರ್ಪಣೆಗೊಂಡಿತು. ಈ ಅಭಿನಂದನಾ ಸಂಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ “ಸಾಧಕರ ಬದುಕಿನಲ್ಲಿ ಏಳು ಬೀಳುಗಳು ಸಹಜ. ಅವರ ಸಾಧನೆಯನ್ನು ಕೃತಿ ರೂಪದಲ್ಲಿ ದಾಖಲಿಸಿದರೆ ಅದು ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ. ಹಾಗೆಯೇ ಅಂಥವರ ಬದುಕು ಬವಣೆಗಳಿಂದ ನಾಳಿನ ಜನಾಂಗ ಸಾಕಷ್ಟು ಪಾಠವನ್ನೂ ಕಲಿತಂತಾಗುವುದು. ಹರಿಕಥಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಹಾಬಲ ಶೆಟ್ಟಿಯವರ ಸಾಧನೆಗಳು ‘ಮಹಾಪರ್ವ’ದಲ್ಲಿ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮನೆ ಮನ ತಲುಪಲು ಸಾಧ್ಯವಾಗಲಿದೆ. ಭವಿಷ್ಯದ ಜನಾಂಗದ ಸಾಧನೆಗೆ ಅದುವೇ ಸ್ಫೂರ್ತಿಯಾಗುವುದು” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ…
ಬಾಲ್ಯದಲ್ಲಿ ಅಜ್ಜನ ಒಟ್ಟಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಇವರು ಅಜ್ಜ ತಂದ ಯಕ್ಷಗಾನದ ಸಿಡಿಗಳಲ್ಲಿ ಪ್ರಸಂಗದ ಬಗ್ಗೆ ನೋಡುತ್ತಿದ್ದರು. ಹಾಗೆಯೇ ಯಕ್ಷಗಾನವನ್ನು ನೋಡುತ್ತಾ ಇವರಿಗೆ ಯಕ್ಷಗಾನದ ಮೇಲೆ ಆಸಕ್ತಿಗೊಂಡು ಯಕ್ಷಗಾನ ಕಲಿಯಲು ಆರಂಭಿಸಿ ಇಂದು ಒಬ್ಬ ಒಳ್ಳೆಯ ಕಲಾವಿದನಾಗಿ ರೂಪುಗೊಳ್ಳುತ್ತಿರುವ ಯುವ ಪ್ರತಿಭೆ ಸನತ್ಕುಮಾರ್ ಆಚಾರ್ಯ. 26.10.2004 ರಂದು ಪುರುಷೋತ್ತಮ ಆಚಾರ್ಯ ಹಾಗೂ ಉಮಾವತಿ ಇವರ ಮಗನಾಗಿ ಜನನ. ಪ್ರಸ್ತುತ BSc ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀಮತಿ ವಿ. ಸುಮಂಗಲಾ ರತ್ನಾಕರ್ ರಾವ್ ಇವರ ಯಕ್ಷಗಾನ ಹಾಗೂ ಭರತನಾಟ್ಯ ಗುರುಗಳು. ಹೆಚ್ಚಿನ ಎಲ್ಲಾ ಪ್ರಸಂಗಗಳು ಇಷ್ಟವೇ, ಹೆಚ್ಚಾಗಿ ಇಷ್ಟಪಡುವುದು ಪೌರಾಣಿಕ ಪ್ರಸಂಗಗಳನ್ನು. ನೆಚ್ಚಿನ ವೇಷಗಳು: ಎಲ್ಲಾ ಬಣ್ಣದ ವೇಷಗಳು, ಕೌಂಡ್ಲಿಕ, ಶಿಶುಪಾಲ, ಶತ್ರುಘ್ನ, ಸುದರ್ಶನ, ಬಬ್ರುವಾಹನ, ರಕ್ತಬೀಜ, ಮಾಗಧ, ಚಂಡ ಮುಂಡರು, ಹನುಮಂತ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ: ಮೊದಲು ಗುರುಗಳು ಹೇಳಿಕೊಟ್ಟದನ್ನು ಅಷ್ಟೇ ಕಂಠಪಾಠ ಮಾಡಿ ಹೇಳ್ತಾ ಇದ್ದೆ. ಮತ್ತೆ ಸ್ವಲ್ಪ ಸಮಯದ…
ಧಾರವಾಡ : ಪ್ರತಿಷ್ಠಿತ ಪ್ರತಿಷ್ಠಾನಗಳಲ್ಲಿ ಪ್ರಮುಖವಾದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ), ಧಾರವಾಡ ತನ್ನ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಲಲಿತಕಲಾ ಚಟುವಟಿಕೆಗಳ ಮೂಲಕ ಕಲಾ ಪ್ರೇಮಿಗಳ ಮನಸ್ಸಿಗೆ ಮುದ ನೀಡುತ್ತಾ ಬಂದಿದೆ. ಇದೇ ದಿನಾಂಕ 09 ಏಪ್ರಿಲ್ 2025, ಬುಧವಾರದಂದು ಸಂಜೆ 5-30 ಗಂಟೆಗೆ ಧಾರವಾಡದ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ‘ನೃತ್ಯ ಸಂಭ್ರಮ’ ಎಂಬ ಭರತನಾಟ್ಯ ಪ್ರದರ್ಶನ ಹಮ್ಮಿಕೊಂಡಿದೆ. ಈ ‘ನೃತ್ಯ ಸಂಭ್ರಮ’ ಕಾರ್ಯಕ್ರಮವನ್ನು ಬೆಂಗಳೂರಿನ ಸಂಸ್ಕೃತಿ ನೃತ್ಯ ಅಕಾಡೆಮಿ (ರಿ.) ಇದರ ನೃತ್ಯ ಗುರುಗಳಾದ ವಿದುಷಿ ಶೃತಿ ನಾಯಕ್ ಹಾಗೂ ವಿದುಷಿ ಅಪರ್ಣ ದೀಕ್ಷಿತ ಇವರ ಶಿಷ್ಯ ವೃಂದದವರು ಪ್ರಸ್ತುತ ಪಡಿಸಲಿದ್ದಾರೆ. ಸುಮಾರು 25 ಮಂದಿ ನೃತ್ಯ ಕಲಾವಿದೆಯರು ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲರಿಪು, ಶಬ್ದಂ, ದೇವರನಾಮ, ರಾಗ ಮಾಲಿಕೆ ಮುಂತಾದವುಗಳನ್ನು ಪ್ರಸ್ತುತಪಡಿಸಿ, ತಮ್ಮ ಕೌಶಲ್ಯ ಪೂರ್ಣವಾದ ನೃತ್ಯಗಳಿಂದ ಮನರಂಜಿಸುವ ಜೊತೆಗೆ ಅಪರೂಪದ ರಸಾನುಭೂತಿಯನ್ನುಂಟು ಮಾಡುವವರಿದ್ದಾರೆ. ಈ ಕಾರ್ಯಕ್ರಮವನ್ನು ರತಿಕಾ ನೃತ್ಯ…
ರಾಯಚೂರು : ಸಂಸ ಥಿಯೇಟರ್ ಬೆಂಗಳೂರು ಮತ್ತು ಗುರುಪುಟ್ಟ ಕಲಾ ಬಳಗ (ರಿ.) ಆಸ್ಕಿಹಾಳ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ‘ಶಾಂತರಸ 100’ ಶಾಂತರಸ ಶತಮಾನೋತ್ಸವ ಆಚರಣೆಯನ್ನು ದಿನಾಂಕ 07 ಏಪ್ರಿಲ್ 2025ರಂದು ಬೆಳಿಗ್ಗೆ 10-30 ಗಂಟೆಗೆ ರಾಯಚೂರು ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್. ಮುಕ್ತಾಯಕ್ಕ ಅವರ ‘ಅಪ್ಪ ನಾನು ಕಂಡಂತೆ’ ಶಾಂತರಸರ ನೆನಪುಗಳ ಓದು ಪ್ರಸ್ತುತಿ ರಂಗ ನಿರ್ದೇಶಕ ಪ್ರವೀಣ್ ಗುಂಜಳ್ಳಿ ಮತ್ತು ಸ್ಥಳೀಯ ಕಲಾವಿದರಿಂದ ವಚನ ಸಂಗೀತ ಪ್ರಸ್ತುತಗೊಳ್ಳಲಿದೆ. ಬಂಡುರಾವ್ ಚಾಗಿ ಇವರ ಅಧ್ಯಕ್ಷತೆಯಲ್ಲಿ ಸಿದ್ಧನಗೌಡ ಪಾಟೀಲ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ಇವರು ಅನ್ವೇಷಣೆ ಸಾಹಿತ್ಯ ಪತ್ರಿಕೆಯ ಶಾಂತರಸರ ಕುರಿತ ವಿಶೇಷಾಂಕ ಮತ್ತು ಆರ್.ಜಿ. ಹಳ್ಳಿ ನಾಗರಾಜ್ ಇವರು ಉಷಾ ಜ್ಯೋತಿಯವರ ‘ಇರುವಿಕೆಯ ಹಾದಿಯಲ್ಲಿ’ ಗಜಲ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಚಾರಗೋಷ್ಠಿ 01ರಲ್ಲಿ ‘ಶಾಂತರಸರ ಸಾಹಿತ್ಯ’ ಇದರ ಬಗ್ಗೆ ಪ್ರಾಧ್ಯಾಪಕರಾದ ಡಾ. ಅಪ್ಪಗೆರೆ ಸೋಮಶೇಖರ್, ‘ಶಾಂತರಸರ ಬದುಕು’ ಇದರ ಬಗ್ಗೆ…
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಯಕ್ಷಗಾನ ಹಿಮ್ಮೇಳ ತಜ್ಞ, ಯಕ್ಷಗಾನಶಾಸ್ತ್ರ ಪಠ್ಯಗಳ ಕೃತಿಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಗುರು ದಿ. ಬಿ. ಗೋಪಾಲಕೃಷ್ಣ ಕುರುಪ್ ಇವರಿಗೆ ‘ನುಡಿ ನಮನ -ಯಕ್ಷ ನಮನ’ ಕಾರ್ಯಕ್ರಮವು ದಿನಾಂಕ 05 ಏಪ್ರಿಲ್ 2025ರಂದು ಮಧ್ಯಾಹ್ನ ಘಂಟೆ 2.00ಕ್ಕೆ ಮಂಗಳೂರು ವಿ. ವಿ. ಯ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ವಿ. ವಿ. ಕುಲಸಚಿವ ಕೆ. ರಾಜುಮೊಗವೀರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ, ವಿದ್ವಾಂಸ ಡಾ. ರಾಘವ ನಂಬಿಯಾರ್, ಹಾವೇರಿ ಜಾನಪದ ವಿ. ವಿ. ಇದರ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲ ಮೊದಲಾದವರು ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯವೃಂದದಿಂದ ‘ಯಕ್ಷ ನಮನ:’ ಪೂರ್ವ…
ಮಂಗಳೂರು : ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಆಯೋಜಿಸಿದ ‘ಸಮರ್ಪಣಂ ಕಲೋತ್ಸವ – 2025′ ದಿನಾಂಕ 03 ಏಪ್ರಿಲ್ 2025ರ ಗುರುವಾರದಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಮಾತನಾಡಿ “ವ್ಯಕ್ತಿಯು ತನ್ನ ಕೃತಿ ಹಾಗೂ ಕಾರ್ಯಗಳಿಂದ ಅಮರನಾಗುತ್ತಾನೆ. ಮೇರು ವಿದ್ವಾಂಸರಾದ ಡಾ. ಜಿ. ಜ್ಞಾನಾನಂದ ಅವರು 75ಕ್ಕೂ ಅಧಿಕ ಕೃತಿಗಳ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆ ಕೃತಿಗಳನ್ನು ಓದುವ ಮನಸ್ಸು ನಮ್ಮದಾಗಬೇಕು” ಎಂದು ಅಭಿಪ್ರಾಯಪಟ್ಟರು. ಕರಾವಳಿಯ ವಿಶ್ವಬ್ರಾಹ್ಮಣ ಶಿಲ್ಪಿಗಳು, ಕಲಾವಿದರು, ಕುಶಲಕರ್ಮಿಗಳ ಪರವಾಗಿ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ಶಿಲಾಶಾಸ್ತ್ರಜ್ಞ ಪ್ರಾಚೀನ ವಿಶ್ವಬ್ರಾಹ್ಮಣ ಪರಂಪರೆಯ ಸಮರ್ಥ ರಾಯಭಾರಿ, ಸಂಶೋಧಕ, ಲೇಖಕ ಮೇರು ವಿದ್ವಾಂಸ ಡಾ. ಜಿ. ಜ್ಞಾನಾನಂದ ಅವರಿಗೆ ‘ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ’ ನೀಡಿ ಗೌರವಾಭಿನಂದನೆ ಸಲ್ಲಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಡಾ. ಜಿ. ಜ್ಞಾನಾನಂದ ಮಾತನಾಡಿ “ವಿಶ್ವಕರ್ಮನ…
ವಿಜಯನಗರ: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್, ಸಾಹಿತಿ ಕುಂ. ವೀರಭದ್ರಪ್ಪ ಹಾಗೂ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಇವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ‘ನಾಡೋಜ’ ಗೌರವ ಪದವಿಗೆ ಆಯ್ಕೆಮಾಡಲಾಗಿದೆ. ದಿನಾಂಕ 04 ಏಪ್ರಿಲ್ 2025ರ ಸಂಜೆ ನಡೆಯುವ 33ನೇ ‘ನುಡಿಹಬ್ಬ’ದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹೋಟ್ ಅವರು ನಾಡೋಜ ಪದವಿ ಪ್ರದಾನ ಮಾಡಲಿದ್ದಾರೆ. 198 ವಿದ್ಯಾರ್ಥಿಗಳಿಗೆ ಪಿ. ಎಚ್. ಡಿ. ಪದವಿ ಪ್ರದಾನ ಮಾಡಲಿದ್ದಾರೆ. ತುಮಕೂರು ವಿ. ವಿ. ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಎ. ಎಚ್. ಇವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹಂಪಿ ವಿ. ವಿ. ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ತಿಳಿಸಿದರು.
ಮಂಗಳೂರು : ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ‘ಸನಾತನ ನೃತ್ಯ ಪ್ರೇರಣಾ’ ಮತ್ತು ಭರತನಾಟ್ಯ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರ ಬಾನುವಾರ ಸಂಜೆ ಘಂಟೆ 6.00 ರಿಂದ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯ ನಡೆಸಿದ 2024ನೇ ಸಾಲಿನ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ಸಿಂಚನಾ ಎಸ್. ಕುಲಾಲ್, ವಿಜಿತಾ ಕೆ. ಶೆಟ್ಟಿ, ವೈಷ್ಣವಿ ತಂತ್ರಿ, ಜಾಹ್ನವಿ ಎಸ್. ಶೇಖರ್, ಧೃತಿ ಆರ್. ಶೇರಿಗಾರ್, ಸಂಹಿತಾ ಕೊಂಚಾಡಿ, ಸ್ನೇಹ ಪೂಜಾರಿ ಮತ್ತು ಶಾರ್ವರಿ ವಿ. ಮಯ್ಯ ಇವರನ್ನು ಅಭಿನಂದಿಸಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ಮತ್ತು ನೃತ್ಯ ಭಾರತಿ ಕದ್ರಿಯ ಕರ್ನಾಟಕ ಕಲಾಶ್ರೀ ವಿದುಷಿ…
ಅಂಕೋಲಾ : ಕರ್ನಾಟಕ ಸಂಘ (ರಿ.) ಅಂಕೋಲಾ ಆಯೋಜಿಸುವ ಶ್ರೀದೇವಿ ಕೆರೆಮನೆ ಇವರ ಪಾಶ್ಚಾತ್ಯ ಲೇಖಕಿಯರ ಆಶಯ, ಚಿಂತನೆ ಮತ್ತು ಗ್ರಹಿಕೆಯ ‘ಎಲ್ಲೆಗಳ ಮೀರಿ’ ಹಾಗೂ ಸಮಕಾಲೀನ ಪ್ರಬಂಧ ಬರಹಗಳ ‘ಕಡಲು ಕಾನನದ ನಡುವೆ’ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 06 ಏಪ್ರಿಲ್ 2025ರಂದು ಸಂಜೆ ಘಂಟೆ 4-00ಕ್ಕೆ ಅಂಕೋಲಾದ ಕನ್ನಡ ಭವನದಲ್ಲಿ ನಡೆಯಲಿದೆ. ಕರ್ನಾಟಕ ಸಂಘ ಅಂಕೋಲಾ ಇದರ ಗೌರವಾಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕೆ. ವಿ. ನಾಯಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಶ್ರೀ ಗಂಗಾಧರ ಹಿರೇಗುತ್ತಿ ಉದ್ಘಾಟಿಸಲಿದ್ದು, ಕಾರವಾರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ. ಎಂ. ಮಂಜುನಾಥ ಬಮ್ಮನಕಟ್ಟಿ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಅಂಕೋಲಾದ ಕೆ. ಎಲ್. ಇ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿನಾಯಕ ಹೆಗಡೆ ಪುಸ್ತಕ ಪರಿಚಯಿಸಲಿದ್ದು, ಅಂಕೋಲಾದ ಕರ್ನಾಟಕ ಸಂಘ ಇದರ ಅಧ್ಯಕ್ಷರಾದ ಶ್ರೀ ಮಹಾಂತೇಶ ರೇವಡಿ ಉಪಸ್ಥಿತರಿರುವರು.
ಕಲಾಗ್ರಾಮದ ವಠಾರದಲ್ಲಿ ಅದೇನು ಕಾರಣವೋ ಸೆಗಣಿ, ಗಂಜಳದ ಅರ್ಥಾತ್ ಜಾನುವಾರು ಕೊಟ್ಟಿಗೆಯ ವಾಸನೆ ಪ್ರಸ್ತುತ ಅರೆಹೊಳೆ – ಕಲಾಭೀ ನಾಟಕೋತ್ಸವದ ಉದ್ದಕ್ಕೂ ಬರುತ್ತಲೇ ಇತ್ತು. ಇಂದು ಅದರ ಕಾರಣವೇ ರಂಗದ ಮೇಲೇ ಬಂದಂತೆ, ಪಕ್ಕಾ ಬೀದಿ ಕಸದ್ದೇ ರೂಪ ಹೊತ್ತಿತ್ತು ರಂಗಮಂಚ. ನಾಟಕ ಇಟಾಲಿಯನ್ ಲೇಖಕ ದಾರಿಯೋ ಪೋನ ಕೃತಿಯ, ಪ್ರಕಾಶ್ ಗರುಡರ ಕನ್ನಡ ರೂಪಾಂತರ – ಬೆತ್ತಲಾಟ. ವಿನ್ಯಾಸ ಮತ್ತು ನಿರ್ದೇಶನ – ರೋಹಿತ್ ಎಸ್. ಬೈಕಾಡಿ, ಪ್ರಸ್ತುತಿ ಬ್ರಹ್ಮಾವರದ ಮಂದಾರ (ರಿ.) ಮುನ್ನೆಲೆಯ ಕಸದ ಕುಪ್ಪೆಗೆ ಹೊಂದುವಂತೆ ನಗರದ ಹಿಂಭಿತ್ತಿಯನ್ನೇ ರಂಗ ಹೊತ್ತಿತ್ತು. ಅದಕ್ಕೆ ದೇಶ, ಕಾಲ ಮತ್ತು ಜೀವ ತುಂಬಿದವರು ಬಿಗಿಲೂದುವ ಬೀಟ್ ಪೋಲಿಸ್, ಮರಸಿನಾಟದಲ್ಲಿರುವ ಸೂಳೆ, ಸೈಕಲ್ ಸಂಚಾರದಲ್ಲಿರುವ ಹೂಗಾರ, ಕಸಗುಡಿಸುವವರು ಮತ್ತು ರಾಯಭಾರಿ. ಅವರ ಸಹಜ ಕಲಾಪಗಳು ಕೊಡುವ ಸಾಮಾಜಿಕ ಚಿತ್ರಣದಲ್ಲಿ ಹಣಿಕುವ ಅಸಾಂಗತ್ಯವೇ ನಾಟಕದ ಸತ್ವ. ಬೀದಿ ಕಸಗುಡಿಸುವವರ ಸಂವಾದದಲ್ಲಿ ಯೋಗ, ಆತ್ಮ, ಪ್ಲೇಟೋ ಬರುತ್ತಾರೆ, ಬ್ರಹ್ಮತ್ವದ ಜಿಜ್ಞಾಸೆ ನಡೆಯುತ್ತದೆ. ತದ್ವಿರುದ್ಧವಾಗಿ ಅಧಿಕಾರ…