Author: roovari

ಮಂಗಳೂರು : ತುಳು ಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಆರನೇ ದಿನದ ಕಾರ್ಯಕ್ರಮ ದಿನಾಂಕ 12 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು. ಈ ಸಪ್ತಾಹದಲ್ಲಿ ಭಾಗವಹಿಸಿದ ವಿ.ಹಿಂ.ಪ.ನಲ್ಲಿ ರಾಜ್ಯದ ಉನ್ನತ ಹುದ್ದೆ ಹೊಂದಿರುವ, ಹಿಂದೂ ನಾಯಕ ಶರಣ್ ಪಂಪ್ ವೆಲ್ “ನಮ್ಮದು ಬಲು ಸನಾತನವಾದ ಸಂಸ್ಕೃತಿ. ಇದನ್ನು ಆಧರಿಸಿ ಹಿರಿಯರು ರಾಷ್ಟ್ರ ಕಟ್ಟಿದರು, ನಮಗೆ ಉತ್ತಮ ಪಥ ದರ್ಶಿಸಿದರು. ಹಾಗಾಗಿ ನಾವು ಹಿರಿಯರನ್ನು ಮರೆಯಲಾಗದು. ಅಂತೆಯೇ, ತುಳು ಭಾಷೆಯ ಏಳ್ಗೆಗಾಗಿ ತನ್ನ ಕೊನೆ ಉಸಿರಿನ ತನಕವೂ ಸೇವೆ ಮಾಡುತ್ತಾ ಬಂದು, ತಾನು ಅಧ್ಯಕ್ಷ ಪದವಿಯಲ್ಲಿರುತ್ತಾ ಆ ಲೋಕವನ್ನು ಕಂಡ ಮಹಾನ್ ಚೇತನ ನಿಸರ್ಗರು. ಸಂಘದ ಮಾನ್ಯ ಸಂಘ ಚಾಲಕರಾಗಿಯೂ ಜವಾಬ್ದಾರಿ ನಿರ್ವಹಿಸಿದವರು. ಗರಡಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ದುಡಿದವರ ಸಂಸ್ಮರಣೆ ಆಗುತ್ತಿರುವುದು ಅತ್ಯಂತ ಶ್ಲಾಘನೀಯು” ಎಂದು ಹೇಳಿದರು.…

Read More

ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಶ್ರೀಮತಿ ಫೆಲ್ಸಿ ಲೋಬೊರವರ ಕೊಂಕಣಿ ಕವನ ಸಂಕಲನ ‘ಪಾಲ್ವಾ ಪೊಂತ್’ ಕೃತಿ ಆಯ್ಕೆಯಾಗಿದೆ. ದಿನಾಂಕ 11 ಜನವರಿ 2026ರಂದು ಸಂತ ಎಲೋಷಿಯಸ್ ಮಹಾವಿದ್ಯಾಲಯದ ಪೀಸ್ ಪಾರ್ಕ್ ನಲ್ಲಿ ನಡೆಯುವ ‘ಕವಿತಾ ಫೆಸ್ತ್’ ಸಮಾರಂಭದಲ್ಲಿ ಬಹುಮಾನ ವಿತರಣೆಯಾಗಲಿರುವುದು. ಮಂಗಳೂರು ದೇರೆಬೈಲಿನ ಶ್ರೀಮತಿ ಫೆಲ್ಸಿ ಲೋಬೊ ಇವರು ಮಂಗಳೂರು ಸಂತ ಎಲೋಶಿಯಸ್ ಪ್ರೌಢಶಾಲೆಯ ಶಿಕ್ಷಕಿ, ಲೇಖಕಿ, ಕವಯಿತ್ರಿ. ಇವರ ಮೂರು ಕೃತಿಗಳು ಲೋಕಾರ್ಪಣೆಗೊಂಡಿದ್ದು, ಹಲವು ಕವಿಗೋಷ್ಠಿ, ಸಾಹಿತ್ಯ ಕಮ್ಮಟಗಳಲ್ಲಿ ಭಾಗವಹಿಸಿದ ಅನುಭವ ಇವರದು. ಕನ್ನಡ, ತುಳು, ಕೊಂಕಣಿ ಭಾಷೆಗಳಲ್ಲಿ ಬರೆಯುವ ಇವರ ಹಲವು ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಷಣ, ಕವಿತಾ ವಾಚನ ಪ್ರಸಾರಗೊಂಡಿದೆ. ಸ್ತ್ರೀ ಸಂವೇದಿತ ಸಾಹಿತ್ಯ ಇವರ ಆಸಕ್ತಿ. ಕೊಂಕಣಿ ಭಾಷೆಯಲ್ಲಿ ಪ್ರಕಟವಾಗುವ ಹಲವು ಪತ್ರಿಕೆಗಳಲ್ಲಿ ಇವರ ಸಾಹಿತ್ಯ ಕೃಷಿ ನಿರಂತರವಾಗಿ ಹದಿನೈದು ವರ್ಷಗಳನ್ನು ಮಿಕ್ಕಿ ನಡೆಯುತ್ತ ಬಂದಿದೆ. ವಿದ್ಯಾರ್ಥಿಗಳಲ್ಲೂ ಸಾಹಿತ್ಯದ ಒಲವು ಮೂಡಿಸಲು, ಅವರನ್ನು ವಿವಿಧ ಸ್ಪರ್ಧೆಗಳಿಗೆ ಸಿದ್ಧಗೊಳಿಸುವುದರೊಂದಿಗೆ, ಶಾಲಾ…

Read More

ಮಂಗಳೂರು : ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರದಿಂದ 2025-26ನೇ ಸಾಲಿನ ಪ್ರತಿಷ್ಠಿತ ‘ಬಾಬು ಕುಡ್ತಡ್ಕ ಪ್ರಶಸ್ತಿ’ಯನ್ನು ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡರಿಗೆ ಪ್ರದಾನ ಮಾಡಲಾಯಿತು. ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 07 ಡಿಸೆಂಬರ್ 2025ರಂದು ಮಂಗಳಾದೇವಿಯ ರಾಮಕೃಷ್ಣಮಠದ ವಿವೇಕಾನಂದ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರಶಸ್ತಿ ಸ್ವೀಕರಿಸಿ ಕುಮಾರ ಗೌಡರು “ಯಕ್ಷರಂಗದ ಧೀಮಂತ ಪ್ರತಿಭೆ ಕುಡ್ತಡ್ಕ ಬಾಬಣ್ಣನ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಬಾಬಣ್ಣ ಮತ್ತು ನಾನು ಅಣ್ಣ ತಮ್ಮಂದಿರ ಹಾಗೆ ಆತ್ಮೀಯತೆಯಿಂದ ಯಕ್ಷರಂಗದ ಮೇಲೆ ಸೇವೆ ಸಲ್ಲಿಸಿದ್ದೇವೆ” ಎಂದು ಸ್ಮರಿಸಿದರು. ಇದೇ ವೇಳೆ ಬಾಬು ಕುಡ್ತಡ್ಕ ಇವರ ಕಿರಿಯ ಪುತ್ರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ‘ಸುಬೇದಾ‌ರ್’ ರಾಘವೇಂದ್ರ ಕುಡ್ತಡ್ಕ ಇವರನ್ನು ಸನ್ಮಾನಿಸಲಾಯಿತು. ಕಲಾಕೇಂದ್ರದ ಅಧ್ಯಕ್ಷೆ ಲಲಿತಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕೃಷ್ಣ ಮಠದ ಬಾಲಕಾಶ್ರಮದ ನಿರ್ವಾಹಕ ಸ್ವಾಮಿ ಯುಗೇಶಾನಂದ, ಪುಟ್ಟಣ್ಣ ಕುಲಾಲ್‌ ಪ್ರತಿಷ್ಠಾನದ ಅಧ್ಯಕ್ಷ…

Read More

ಮೊದಲ ಕವನ ಸಂಕಲನ ‘ಬಾ ಪರೀಕ್ಷೆಗೆ’ ಪ್ರಕಟವಾದ ಆರು ವರ್ಷಗಳ ಬಳಿಕ ಮಾಲತಿ ಪಟ್ಟಣಶೆಟ್ಟಿಯವರು ಹೊರತಂದ ‘ಗರಿಗೆದರಿ’ ಅವರ ಬರವಣಿಗೆಯಲ್ಲಿ ಆದ ಬದಲಾವಣೆಗಳು ಮತ್ತು ಸುಧಾರಣೆಗಳತ್ತ ಬೆಳಕು ಚೆಲ್ಲುತ್ತದೆ. ಸಂಕಲನದ ಶೀರ್ಷಿಕೆಯೇ ಬದಲಾವಣೆಯ ದ್ಯೋತಕವಾಗಿದೆ. ವೈಯಕ್ತಿಕ ನೋವುಗಳಿಗೆ ಸೀಮಿತವಾಗಿದ್ದ ಕವಿತೆಗಳು ಸಂಕುಚಿತತೆಯಿಂದ ಬಿಡಿಸಿಕೊಂಡು ಹಾರಲು ಗರಿ ಕೆದರುವ ಶ್ರಮಕ್ಕೆ ಸಂಕೇತವಾಗಿ ಕೃತಿಯನ್ನು ಪರಿಭಾವಿಸಿಕೊಳ್ಳಬಹುದು. ‘ಬಾ ಪರೀಕ್ಷೆಗೆ’ಯಲ್ಲಿದ್ದ ಹೆಣ್ಣಿನ ಪ್ರಾಮಾಣಿಕ ಒಳನೋಟ, ಸ್ವಾಭಿಮಾನ, ಸ್ವಾತಂತ್ರ್ಯದ ಬಯಕೆ ಇಲ್ಲೂ ಮುಂದುವರಿದಿದ್ದು, ಬವಣೆಯ ನಿರೂಪಣೆಗಷ್ಟೇ ಸೀಮಿತವಾಗದೆ ಅದನ್ನು ಎದುರಿಸುವ ದಿಟ್ಟತನ, ಮಾತಿನ ಕಟುತ್ವವು ಮಿದುತನಕ್ಕೆ ಒಳಗಾದ ಬಗೆಯನ್ನು ಕಾಣಲು ಸಾಧ್ಯವಿದೆ. ಮನಸ್ಸನ್ನು ಮುತ್ತುವ ಬಯಕೆಗಳನ್ನು ತಾಳಲಾರದೆ ಆರ್ತವಾಗುವ ಇಲ್ಲವೇ ಅವುಗಳನ್ನು ಹೊರತಳ್ಳಲು ಯತ್ನಿಸುವ ಮನೋಭಾವವನ್ನು ಅರಗಿಸಿಕೊಂಡು ಹೇಳು ನೀನು ನನ್ನ ನೀ ಯಾರಾಗಬೇಕು ಏಕಾಗಿ ಬೇಕು ನೂರು ಕಳವಳದ ನನ್ನ ಇಳೆಗುಂಟ ಕಳಕಳಿಸಿ ತಳಮಳಿಸಿ ಬಳ್ಳಿಯಾದವ ಬೆಂದ ಹೂವಿಗೆ ನೆರಳಾದವ ಬೆರಳಾದವ ಕರುಳಾದವ ಉಮ್ಮಳಕೆ ಳಾದವ ಬಿಕ್ಕಳಿಕೆಗೆ (ತಾರೆ, ಪುಟ 2) ಎಂದು ಪ್ರೀತಿಯಿಂದ ಪ್ರಶ್ನಿಸುತ್ತಾರೆ.…

Read More

ಚಿಕ್ಕಮಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ ಸಂಸ್ಥೆಯಾಗಿದ್ದು, ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಬೆಳವಣಿಗಾಗಿ ನಿರಂತರ ಶ್ರಮಿಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕೊಂಕಣಿಯ ಬಗ್ಗೆ ಜನರಿಗೆ ತಿಳಿಸಿಕೊಡುತ್ತಾ ಬಂದಿದೆ. ಕೊಂಕಣಿ ಭಾಷಾ ಸಮುದಾಯದ ಜನರನ್ನು ಒಗ್ಗೂಡಿಸುವ ಸಲುವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಥೊಲಿಕ್ ಕೊಂಕಣಿ ರಾಕಣ್ ಸಂಚಾಲನ ಇವರ ಸಹಯೋಗದಲ್ಲಿ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ದಿನಾಂಕ 14 ಡಿಸೆಂಬರ್ 2025ರಂದು ‘ಕೊಂಕಣಿ ಕಲೋತ್ಸವ-2025’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಬೆಳಿಗ್ಗೆ 9-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ನಡೆಯಲಿರುವುದು. ಬೆಳಿಗ್ಗೆ 9-00 ಗಂಟೆಗೆ ಚಿಕ್ಕಮಗಳೂರು ಹಾಗೂ ಹಾಸನ ಪರಿಸರದವರಿಗೆ ವಿವಿಧ ವಿನೋದಾವಳಿ ಸ್ಪರ್ಧೆಗಳು ನಡೆಯಲಿರುವುದು. ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ನಗದು ರೂ.15,000/-, ದ್ವಿತೀಯ ಬಹುಮಾನ ನಗದು ರೂ.10,000/-, ತೃತೀಯ ಬಹುಮಾನ ನಗದು ರೂ.5,000/- ಪುರಸ್ಕಾರದೊಂದಿಗೆ ಟ್ರೋಫಿ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು. ಜೊತೆಗೆ, ಅತ್ಯುತ್ತಮ ಕಾರ್ಯಕ್ರಮ ನಿರೂಪಕರಿಗೆ ಪ್ರಥಮ, ದ್ವಿತೀಯ, ತೃತೀಯ…

Read More

ಮೈಸೂರು : ರಂಗಸಂಪದ ಬೆಂಗಳೂರು ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಪ್ರಸ್ತುತ ಪಡಿಸುವ ನಾಟಕ ಪ್ರದರ್ಶನವನ್ನು ದಿನಾಂಕ 13 ಮತ್ತು 14 ಡಿಸೆಂಬರ್ 2025ರಂದು ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 13 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೇಲೂರು ರಘುನಂದನ್ ರಚಿಸಿರುವ ಚಿದಂಬರರಾವ್ ಜಂಬೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಉಮಾಶ್ರೀ ಅಭಿನಯಿಸುವ ‘ಶರ್ಮಿಷ್ಠೆ’ ನಾಟಕದ 25ನೇ ಪ್ರದರ್ಶನ ನಡೆಯಲಿದೆ. ದಿನಾಂಕ 14 ಡಿಸೆಂಬರ್ 2025ರಂದು ಮಧ್ಯಾಹ್ನ 3-00 ಮತ್ತು ಸಂಜೆ 6-30 ಗಂಟೆಗೆ ವಿನಯ್ ಶಾಸ್ತ್ರಿ ನಿರ್ದೇಶನದಲ್ಲಿ ‘ನೀ ನಾನಾದ್ರೆ ನಾ ನೀನೇನಾ’ ಕನ್ನಡ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ದೃಶ್ಯ (ರಿ.) ರಂಗತಂಡ ಪ್ರಯೋಗಿಸುತ್ತಿರುವ ದಾಕ್ಷಾಯಿಣಿ ಭಟ್ ಎ. ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ರಕ್ತ ಧ್ವಜ’ ನಾಟಕ ಪ್ರದರ್ಶನವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವು ಬಸವರಾಜ್ ಕಟ್ಟೀಮನಿಯವರ ‘ರಕ್ತ ಧ್ವಜ’ ಕತೆ ಹಾಗೂ ಆರ್. ಬಸವರಾಜ್ ರ ‘ಈಸೂರಿನ ಚಿರಂಜೀವಿಗಳು’ ಕಾದಂಬರಿ ಆಧಾರಿತ ಕಥೆಯಾಗಿದೆ.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ 138’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗುರು ವಿದ್ಯಾ ಮನೋಜ್ ಇವರ ಮಗಳು ಯಾ ಶಿಷ್ಯೆ ಡಾ. ಮಹಿಮಾ ಎಂ. ಪಣಿಕರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದು, ನಿವೃತ್ತ ಪ್ರೊ. ಸಂಪತ್ತಿಲಾ ಈಶ್ವರ ಭಟ್ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.

Read More

ಮಂಗಳೂರು : ಬಹು ಓದು ಬಳಗ ಮಂಗಳೂರು ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರ ಸಹಯೋಗದಲ್ಲಿ ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭವು ದಿನಾಂಕ 14 ಡಿಸೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 10-00 ಗಂಟೆಗೆ ವಿದ್ಯಾರ್ಥಿನಿ ಕುಮಾರಿ ದಿಯಾ ಉದಯ್ ಡಿ. ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ರಘು ಇಡ್ಕಿದು ಇವರು ಆಶಯ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ 300 ಕವಿಗಳ ‘ಕರಾವಳಿ ಕವನಗಳು’ ಪುಸ್ತಕವನ್ನು ಸಂಶೋಧಕರಾದ ಡಾ. ಚಲಪತಿ ಆರ್. ಇವರು ಬಿಡುಗಡೆ ಮಾಡಲಿದ್ದು, ಪ್ರಾಧ್ಯಾಪಕರಾದ ಡಾ. ನಿಕೇತನ ಇವರು ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ಕವಿ ರಾಧಾಕೃಷ್ಣ ಉಳಿಯತ್ತಡ್ಕ ಇವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಅರವಿಂದ ಚೊಕ್ಕಾಡಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Read More

ನಾಡಿನ ಖ್ಯಾತ ಕುಚಿಪುಡಿ ನೃತ್ಯಗುರು- ಅಂತರರಾಷ್ಟ್ರೀಯ ಕಲಾವಿದೆ ಆಚಾರ್ಯ ದೀಪಾ ನಾರಾಯಣ್ ಶಶೀಂದ್ರನ್ (ಕೂಚಿಪುಡಿ ಪರಂಪರ ಫೌಂಡೇಷನ್ ಲೈಫ್ ಟ್ರಸ್ಟಿ) ಇವರ ಬದ್ಧತೆಯ ನೃತ್ಯ ತರಬೇತಿಯಲ್ಲಿ ರೂಪುಗೊಂಡ ಕಲಾವಿದೆ ಆರತಿ ನಾಯರ್ ಇವರು ಶ್ರೀ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ‘ನಾಟ್ಯಕಲಾ ಲಲಿತಮ್’ ಶೀರ್ಷಿಕೆಯಲ್ಲಿ ಪ್ರಸ್ತುತಪಡಿಸಿದ ಏಕವ್ಯಕ್ತಿ ನೃತ್ಯ ಪ್ರದರ್ಶನ ಅದ್ಭುತವಾಗಿ ಮೂಡಿಬಂತು. ವೇದಿಕೆಯ ಮೇಲೆ ಮಿಂಚಿನ ಬಳ್ಳಿಯಂತೆ ತನ್ನ ಮನಮೋಹಕ ಬಾಗು-ಬಳುಕುಗಳಿಂದ ರಸೋಲ್ಲಾಸದ ಆಂಗಿಕಾಭಿನಯ, ಸುಮನೋಹರ ಅಭಿನಯಗಳಿಂದ ನರ್ತನ ಮಾಡಿದ ಭರವಸೆಯ ಕುಚಿಪುಡಿ ನೃತ್ಯ ಕಲಾವಿದೆ ಆರತಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು. ನೃತ್ಯಕ್ಕೆ ಹೇಳಿ ಮಾಡಿಸಿದ ಎತ್ತರದ ನಿಲುವು, ಪ್ರಮಾಣಬದ್ಧ ಮೈಮಾಟವನ್ನು ಹೊಂದಿದ್ದ ಕಲಾವಿದೆ ಆರಂಭದಿಂದ ಕಡೆಯವರೆಗೆ ಒಂದೇ ಚೈತನ್ಯವನ್ನು ಉಳಿಸಿಕೊಂಡು, ಹಲವಾರು ಸಾಂಪ್ರದಾಯಕ ಕುಚಿಪುಡಿ ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ತನ್ನ ಕಲಾ ಪ್ರಪೂರ್ಣ ನೃತ್ಯದ ಮೂಲಕ ರಸಾನುಭವ ನೀಡಿದಳು. ಸಾಮಾನ್ಯವಾಗಿ ಕುಚಿಪುಡಿ ಪ್ರಸ್ತುತಿ ಪ್ರಾರಂಭವಾಗುವುದು ಶುಭಾಪ್ರದವಾದ ‘ವಾಣಿ ಪರಾಕು’ – ದೇವಿಯ ವಂದನೆಯ ಪ್ರಾರ್ಥನೆಯೊಂದಿಗೆ. ಈ ಆರಂಭದ…

Read More