Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕಾಸರಗೋಡಿನ ನುಳ್ಳಿಪ್ಪಾಡಿಯ ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಘಟಕಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಜ್ಯೋತಿನಗರದ ಅನಿತಾ ಶೆಣೈ ಇವರ ಮನೆಯಲ್ಲಿ ದಿನಾಂಕ 22 ಜೂನ್ 2025ರಂದು ಅಪರಾಹ್ನ 3-00 ಗಂಟೆಗೆ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ನಡೆಯಲಿದೆ. ಕಾರ್ಯಕ್ರಮವನ್ನು ಕಾಸರಗೋಡಿನ ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಉದ್ಘಾಟಿಸುವರು. ಕೇರಳ ರಾಜ್ಯ ಕನ್ನಡ ಚು.ಸಾ.ಪ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು. ಕೇರಳ ರಾಜ್ಯ ಕನ್ನಡ ಚು.ಸಾ.ಪ. ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಇವರು ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ಟರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿ ಅಭಿಯಾನಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ.ವಿ. ಪ್ರದೀಪ್ ಕುಮಾರ್, ಸತ್ಯವತಿ ಕೊಳಚಪ್ಪು,…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ಣಾಟಕ ಸರ್ಕಾರ ಇದರ ‘ಮರೆಯಲಾಗದ ಬ್ಯಾರಿ ಮಹನೀಯರು’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 20 ಜೂನ್ 2025ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಉಮರ್ ಯು.ಹೆಚ್. ಇವರ ವಹಿಸಲಿದ್ದು, ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಇವರು ‘ಮರೆಯಲಾಗದ ಬ್ಯಾರಿ ಮಹನೀಯರು’ ಭಾಗ -1 ಮತ್ತು 2 ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಆಶಯ ಭಾಷಣ ಮಾಡಲಿದ್ದು, ಪತ್ರಕರ್ತ ಹಂಝ ಮಲಾರ್ ಪುಸ್ತಕಗಳ ಪರಿಚಯ ಮಾಡಲಿದ್ದಾರೆ.
ಆರ್. ಕೆ. ಸೂರ್ಯನಾರಾಯಣ ಇವರೊಬ್ಬ ಶ್ರೇಷ್ಠ ವೀಣಾ ವಿದ್ವಾಂಸ. ಇವರು ಜನಿಸಿದ್ದೆ ಸಂಗೀತಕ್ಕೆ ಹೆಸರುವಾಸಿಯಾದ ರುದ್ರಪಟ್ಟಣಂ ಮನೆತನದಲ್ಲಿ. ತಂದೆ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್ ಆರ್. ಎಸ್. ಕೇಶವ ಮೂರ್ತಿ ಮತ್ತು ತಾಯಿ ವೆಂಕಟ ಲಕ್ಷ್ಮಮ್ಮ. 14 ಜೂನ್ 1937ರಲ್ಲಿ ಇವರ ಜನನವಾಯಿತು. ತಂದೆಯೇ ಸ್ವತಃ ಶಿಕ್ಷಕರಾಗಿ ಇವರನ್ನು ಉತ್ತಮ ವೈಣಿಕರನ್ನಾಗಿ ಮಾಡಿದರು. ಇವರು ಮೊತ್ತಮೊದಲು ವೀಣಾ ಕಚೇರಿ ನಡೆಸಿದ್ದು 1944 ರಲ್ಲಿ, ತಮ್ಮ ಏಳನೆಯ ವಯಸ್ಸಿನಲ್ಲಿ. ಅದೂ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಇವರ ಸನ್ನಿಧಾನದಲ್ಲಿ. ಈ ಕಚೇರಿಯಲ್ಲಿ ಅವರ ಅಸಾಧಾರಣ ಪ್ರತಿಭೆಯು ಅನಾವರಣಗೊಂಡಿತು. ಇವರು ಹೊಸತನ ತರಬೇಕೆಂಬ ಪ್ರಯೋಗಾತ್ಮಕ ದೃಷ್ಟಿಯಿಂದ 24 ತಂತಿಗಳಿರುವ ವೀಣೆಯನ್ನು ಆವಿಷ್ಕಾರ ಮಾಡಿ ದೇಶ ವಿದೇಶಗಳ ಜನರು ಈ ವೀಣೆಯ ತುಂಬು ಮಧುರ ನಾದವನ್ನು ಕಿವಿ ತುಂಬಿಸಿಕೊಳ್ಳುವಂತೆ ಮಾಡಿದರು. ಇವರ ಅಪ್ರತಿಮ ಕಲಾ ಪ್ರೌಢಿಮೆಗೆ ಜನತೆ ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದೆ. ಮೇಳ ರಾಗಮಾಲಿಕೆಯು ಸೇರಿದಂತೆ ಹಲವಾರು ಕೃತಿ, ವರ್ಣಗಳ ರಚನೆ ಮಾಡಿ ಸಂಗೀತ…
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಜೂನ್ 2025ರ ಭಾನುವಾರ ಬೆಳಿಗ್ಗೆ ಘಂಟೆ 10.30ಕ್ಕೆ ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್. ಎಲ್. ಪುಷ್ಟ ಆಶಯ ನುಡಿಗಳನ್ನಾಡಲಿದ್ದಾರೆ. ಸಮಾರಂಭದಲ್ಲಿ ಡಾ. ಶಿವಗಂಗಾ ರುಮ್ಮ ಇವರಿಗೆ ಗದ್ಯ ವಿಭಾಗದಲ್ಲಿ, ಡಾ. ಕವಿತಾ ರೈ ಇವರಿಗೆ ಕಾವ್ಯ ವಿಭಾಗದಲ್ಲಿ, ನಂದಿನಿ ಜಯರಾಮ್ ಇವರಿಗೆ ಸಕೀರ್ಣ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಶ್ರೀಮತಿ ಗಂಗಮ್ಮ (ಅರುಂಧತಿ) ಬಳಿಗಾರ್ ಉಪಸ್ಥಿತರಿರುವರು.
ಕೋಟ : ಯಕ್ಷಾಂತರಂಗ ವ್ಯವಸಾಯಿ ಯಕ್ಷ ತಂಡ (ರಿ.) ಕೋಟ ತಂಡದ ಹತ್ತನೇ ವರ್ಷದ ಉಚಿತ ಯಕ್ಷಗಾನ ಹೆಜ್ಜೆ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 08 ಜೂನ್ 2025ರಂದು ಡಾ. ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಇಲ್ಲಿ ನಡೆಯಿತು. ತರಗತಿಯನ್ನು ತಾಳ ನುಡಿಸುವುದರ ಮೂಲಕ ಉದ್ಘಾಟಿಸಿದ ಶ್ರೇಷ್ಠ ಮಹಿಳಾ ಯಕ್ಷಗಾನ ಕಲಾವಿದೆ, ರಂಗಭೂಮಿ ನಿರ್ದೇಶಕಿ, ‘ರಸರಂಗ’ ಕದ್ರಿಕಟ್ಟು ಸಂಸ್ಥೆಯ ಸಂಚಾಲಕಿಯಾದ ಸುಧಾ ಮಣೂರು ಮಾತನಾಡಿ “ಮುಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಉತ್ತಮ ಯಕ್ಷಗಾನ ಕಲಿಯುವಿಕೆಗಾಗಿ ಶ್ರೇಷ್ಠ ಅನುಭವಿ ಯಕ್ಷ ಗುರುಗಳ ಅಗತ್ಯತೆ ಇದೆ, ಅಂತಹ ಗುರುಗಳು ಈ ತಂಡದಲ್ಲಿದ್ದು ಕ್ರಮ ಪ್ರಕಾರವಾದ ಯಕ್ಷ ತರಬೇತಿಯನ್ನು ಕಳೆದ 10 ವರ್ಷಗಳಿಂದ ಉಚಿತವಾಗಿ ನೀಡುತ್ತಿರುವುದು ಹೆಮ್ಮೆ ತರುತ್ತದೆ. ಇಂತಹ ಗುರುಗಳಿಂದ ವಿದ್ಯೆಯನ್ನು ಕಲಿಯುತ್ತಿರುವ ನೀವೆಲ್ಲ ಪುಣ್ಯವಂತರು” ಎಂಬುದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಡಾ. ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಟ್ರಸ್ಟ್ ಹಾಗೂ ಯಕ್ಷಾಂತರಂಗದ ಕಾರ್ಯಾಧ್ಯಕ್ಷರಾದ ಎಂ. ಸುಬ್ಬರಾಯ…
ಕಾಸರಗೋಡು : ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತಮ ಬಿಳಿಮಲೆ ಯವರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನದ ಪ್ರತಿಷ್ಠಿತ ಅಂತರ್ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ” ಪ್ರದಾನ ಸಮಾರಂಭ ದಿನಾಂಕ 24 ಜೂನ್ 2025ರಂದು ನಡೆಯಿತು. ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ದಂಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಕಾಸರಗೋಡಿನ ಏತಡ್ಕ ನಾರಾಯಣ ಅಲೆವೂರಾಯರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಶ್ರೀ ಎ. ಆರ್. ಸುಬ್ಬಯ್ಯಕಟ್ಟೆ ಮಾತನಾಡಿ “ಕಾಸರಗೋಡು ಪ್ರದೇಶದ ಕನ್ನಡಿಗರ ಅತಿತ್ಯ, ಗೌರವ ಭಾವಕ್ಕೆ ಶರಣು. ಇಲ್ಲಿಯವರು ತೋರುವ ಪ್ರೀತಿ, ಆದರಗಳು ಆದರಣೀಯ. ಕಾಸರಗೋಡು ಕನ್ನಡಿಗರು ಅನುಭವಿಸುತ್ತಿರುವ ಕನ್ನಡಪರ ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ನಾನು ಪ್ರಾಧಿಕಾರದ ಸೀಮಿತ ಪರಿದಿಗೂ ಮೀರಿ ಸಹಾಯ ಸಹಕಾರಗಳನ್ನು ಮಾಡಲು ಪ್ರಯತ್ನಿಸುವೆ” ಎಂದರು. ಪ್ರೊ. ಎ. ಶ್ರೀನಾಥ್ ಇವರು…
ಬೆಂಗಳೂರು : ಕನ್ನಡ ಜಾನಪದ ಪರಿಷತ್ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ (ನೋಂ) ಹಿರಿಯೂರು ಚಿತ್ರದುರ್ಗಾ ಜಿಲ್ಲೆ ಇವುಗಳ ಸಹಯೋಗದಲ್ಲಿ ರಾಜ್ಯಮಟ್ಟದ ‘ಕನ್ನಡ ಜಾನಪದ ಸಮ್ಮೇಳನ’ವನ್ನು ದಿನಾಂಕ 26 ಮತ್ತು 27 ಜುಲೈ 2025ರಂದು ಬೆಂಗಳೂರಿನ ಟಿ. ದಾಸರಹಳ್ಳಿ ಸೌಂದರ್ಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಜಾನಪದ ಕಲಾ ತಂಡಗಳಿಗೆ ವಿಶೇಷ ಪ್ರದರ್ಶನ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪುರಸ್ಕಾರ. ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ಹಾಗೂ ‘ಕನ್ನಡ ಜಾನಪದ ಸಿರಿ ಪ್ರಶಸ್ತಿ’ ನೀಡಲಾಗುವುದು ಹಾಗೂ ಭಾಗವಹಿಸಿದವರೆಲ್ಲರಿಗೂ ‘ಕನ್ನಡ ಜಾನಪದ ಪ್ರಶಂಸನಾ ಪತ್ರ’ ಪ್ರದಾನ ಮಾಡಲಾಗುವುದು. ಸ್ಪರ್ಧೆಯ ನಿಯಮಗಳು ಮತ್ತು ಸೂಚನೆಗಳು : ಸ್ಪರ್ಧೆಯಲ್ಲಿ ಭಾಗವಹಿಸುವ ಜಾನಪದ ಕಲಾ ತಂಡಗಳು : ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕೋಲಾಟ, ಲಂಬಾಣಿ ಕುಣಿತ, ಕಂಸಾಳೆ, ನಂದಿ ಧ್ವಜದ ಕುಣಿತ, ಕರಗದ ಕುಣಿತ, ಸುಗ್ಗಿಯ ಕುಣಿತ, ಸಾಮೂಹಿಕ ಹಾಗೂ ವೈಯಕ್ತಿಕ ಕನ್ನಡ…
ಬೆಂಗಳೂರು : ಈ ಕೆಳಕಂಡ ಕರುನಾಡಿನ ಹದಿನೈದು ವೀರ ವನಿತೆಯರ ಬಗ್ಗೆ ಕವನ/ಗೀತೆ/ಹಾಗೂ ಲಾವಣಿಗಳನ್ನು ತಮ್ಮಿಂದ ಆಹ್ವಾನಿಸಲಾಗಿದೆ. ಈ ಕೃತಿಯನ್ನು ದಿನಾಂಕ 15 ಆಗಸ್ಟ್ 2025ರಂದು ಲೋಕಾರ್ಪಣೆಗೊಳಿಸಲಾಗುವುದು. ನಿಬಂಧನೆಗಳು : 1. ಯಾರು ಎಷ್ಟು ಬೇಕಾದರೂ ಕವನಗಳನ್ನು ರಚಿಸಿ ಕಳಿಸಬಹುದು. 2. ಸಾಲುಗಳ ಮಿತಿಯಿಲ್ಲ. 3. ರಚನೆಗಳು ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. 4. ರಚನೆಗಳಿಗೆ ಆಕರ ಗ್ರಂಥ/ಪುಸ್ತಕ/ಕೃತಿಯ ಹೆಸರು ಮತ್ತು ಕೃತಿಕಾರ ಹೆಸರನ್ನು ತಮ್ಮ ಕಾವ್ಯದ ಕೊನೆಯಲ್ಲಿ ಕಡ್ಡಾಯವಾಗಿ ಬರೆದಿರಬೇಕು. 5. ತಮ್ಮ ರಚನೆಗಳನ್ನು ಈ ಕೆಳಕಂಡವರಿಗೆ ದಿನಾಂಕ 15 ಜುಲೈ 2025ರೊಳಗೆ ವಾಟ್ಸಪ್ ಗ್ರೂಪ್ಗೆ ಕಳುಹಿಸಲು ಕೋರಿದೆ. 1. ಶ್ರೀಮತಿ ರಾಧಾಮಣಿ ಎಮ್. ಕೋಲಾರ : 9972731056 2. ಶ್ರೀಮತಿ ಶ್ರೀಮತಿ ಕೆ.ಟಿ. : 9945225958 3. ಶ್ರೀಮತಿ ಮಾಯಾ ಬಾಲಚಂದ್ರ : 9449909494 4. ಶ್ರೀ ರಮೇಶ್ ಚನ್ನಪ್ಪ 9482874933 https://chat.whatsapp.com/K66GbtWu59mIkJrCagIE7P ಕರುನಾಡಿನ ವೀರ ವನಿತೆಯರ ಪಟ್ಟಿ: 1. ಕಿತ್ತೂರು ರಾಣಿ ಚೆನ್ನಮ್ಮ, 2. ರಾಣಿ ಅಬ್ಬಕ್ಕ,…
ಮಂಗಳೂರು : ಸದಾ ಹೊಸತನವನ್ನು ಹುಡುಕುತ್ತಾ ಕಲಿಕೆಯಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಾ ರಂಗಭೂಮಿಯನ್ನು ಪ್ರೀತಿಸುವ ಮಂಗಳೂರಿನ ರಂಗ ಸಂಸ್ಥೆ ಕಲಾಭಿ. ಮುಂದಿನ ದಿನಗಳಲ್ಲಿ ಆಸಕ್ತರಿಗೆ ನಟನ ಕೌಶಲ್ಯಗಳ ತರಬೇತಿ ನೀಡಲಿದೆ. ಈ ತರಬೇತಿಯು ನೀನಾಸಂ ಪದವೀಧರ, ಚಲನಚಿತ್ರ ಮತ್ತು ಸಿನಿಮಾ ನಟ ಹಾಗೂ ಕಲಾಭಿಯ ಕಾರ್ಯದರ್ಶಿಯಾದ ಉಜ್ವಲ್ ಯು.ವಿ. ಇವರ ಸಾರಥ್ಯದಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಎನ್.ಎಸ್.ಡಿ., ನಿನಾಸಂ ಪದವೀಧರ ಕಲಾವಿದರು, ನಿರ್ದೇಶಕರು, ಅನೇಕ ರಂಗ ಕಲಾವಿದರು ಮತ್ತು ಚಿತ್ರ ನಿರ್ದೇಶಕರು, ಕಲಾವಿದರನ್ನು ಸೇರಿಸಿಕೊಂಡು ನಟನೆಯ ಪಠ್ಯಕ್ಕಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮುಂದೆ ನಡೆಯಲಿರುವ ತರಬೇತಿ ಮೂರು ಹಂತದಲ್ಲಿ ನಡೆಯಲಿದ್ದು, ಅದು ಏನನ್ನು ಒಳಗೊಂಡಿರಬೇಕು ಎಂದು ಚರ್ಚಿಸಲಾಯಿತು. ಶೀಘ್ರವೇ ಪಠ್ಯಕ್ರಮ ಸಿದ್ದವಾಗಲಿದ್ದು ತರಬೇತಿ ಆರಂಭವಾಗಲಿದೆ. ಈ ಸಭೆಯಲ್ಲಿ ಜರ್ನಿ ಮ್ಯಾನ್ ಫಿಲ್ಮ್ಸ್ ನ ಸುಮಂತ್ ಭಟ್, ತುಳು ಸಿನಿಮಾದ ನಟ ಹಾಗೂ ನಿರ್ದೇಶಕ ರಾಹುಲ್ ಅಮೀನ್, ನೀನಾಸಂ ಪದವೀಧರ ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ತರಬೇತುದಾರರಾದ ಅವಿನಾಶ್ ರೈ,…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವನ್ನು ದಿನಾಂಕ 15 ಜೂನ್ 2025ರಿಂದ 21 ಜೂನ್ 2025ರವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 15 ಜೂನ್ 2025ರಂದು ಅಪರಾಹ್ನ 2-30 ಗಂಟೆಗೆ ಬಾಳದ ಅಷ್ಟಾವಧಾನಿ ಡಾ. ರಾಮಕೃಷ್ಣ ಪೆಜತ್ತಾಯ ಇವರಿಂದ ‘ಕನ್ನಡ ಸಂಸ್ಕೃತ ಅಷ್ಟಾವಧಾನ’ ಮತ್ತು ರಾತ್ರಿ 8-00 ಗಂಟೆಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಿಂದ ‘ತಾಮ್ರಧ್ವಜ ಕಾಳಗ’, ದಿನಾಂಕ 16 ಜೂನ್ 2025ರಂದು ರಾತ್ರಿ 7-00 ಗಂಟೆಗೆ ಯು.ಎಸ್.ಎ.ಯ ಕುಮಾರಿ ಸಿದ್ದಿ ಜಯದೇವ್ ತಂತ್ರಿ ಇವರಿಂದ ಭರತನಾಟ್ಯ ಕಾರ್ಯಕ್ರಮ ಮತ್ತು 8-00 ಗಂಟೆಗೆ ‘ಕರ್ಣ ಪರ್ವ’, ದಿನಾಂಕ 17 ಜೂನ್ 2025ರಂದು ‘ಗದಾ ಪರ್ವ’, ದಿನಾಂಕ 18 ಜೂನ್ 2025ರಂದು ‘ಮನ್ಮಥೋಪಖ್ಯಾನ’, ದಿನಾಂಕ 19 ಜೂನ್…