Author: roovari

ಪುತ್ತೂರು : ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಕಲಾವಿದ ದಂಪತಿಗಳಾದ ವಿದುಷಿ ಸ್ನೇಹಾ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾ‌ರ್ ಪ್ರಸ್ತುತಿಯ ಒಂದು ದಿನದ ‘ನೃತ್ಯ ಕಾರ್ಯಾಗಾರ’ವು ದಿನಾಂಕ 21-04-2024ರಂದು ಪುತ್ತೂರಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ. ಸಾ. ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ನಾಯಕ್ “ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶಾಸ್ತ್ರೀಯ ನೃತ್ಯಗಳ ಕೊಡುಗೆ ಅಪಾರ. ಶಾಸ್ತ್ರೀಯ ಪ್ರಾಕಾರಗಳಲ್ಲಿ ಭರತನಾಟ್ಯಕ್ಕೆ ತನ್ನದೇ ವಿಶಿಷ್ಟ ಸ್ಥಾನ ಇದೆ. ಅಂತಹ ಭರತನಾಟ್ಯವನ್ನು ಯುವ ಪೀಳಿಗೆ ಮುಂದುವರಿಸಬೇಕು. ಶಾಸ್ತ್ರೀಯ ನೃತ್ಯಗಳ ಉಳಿವಿಗೆ ಗುರುಗಳ ಶ್ರಮದಷ್ಟೇ ಶಿಷ್ಯರೂ ಕೂಡ ಅದನ್ನು ಅನುಸರಿಸುವುದರತ್ತ ಗಮನ ಹರಿಸಬೇಕು. ಸಿನಿಮಾ ಮತ್ತಿತರ ಮಾಧ್ಯಮಗಳಿಂದ ಸಿಗುವ ಕ್ಷಣಿಕ ಆನಂದದತ್ತ ವಾಲದೆ, ಕಲೆಯನ್ನು ಬೆಳೆಸಲು ಕಟಿಬದ್ದರಾಗಬೇಕು. ಅದಕ್ಕಾಗಿ ಇಂತಹ ಕಾರ್ಯಾಗಾರ ನಡೆಯುತ್ತಲೇ ಇರಲಿ.” ಎಂದು ಹಾರೈಸಿದರು. ವಿದುಷಿ ಸ್ನೇಹಾ…

Read More

ಉಡುಪಿ : ಉಡುಪಿ ಜಿಲ್ಲಾ ಹೊಟೇಲ್ ಮಾಲಕಾರ ಸಹಕಾರ ಸಂಘ, ರಂಗಭೂಮಿ ಉಡುಪಿ ಹಾಗೂ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಕರ್ನಾಟಕ ಯಕ್ಷಗಾನ ಅಕಾಡಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕಲೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಇವರು ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿದ್ದ ದಿನಗಳಲ್ಲಿ ತಲ್ಲೂರು ಶಿವರಾಮ ಶೆಟ್ಟರು “ಯಕ್ಷಗಾನ ಕಲಾವಿದರಲ್ಲ”ಎನ್ನುವ ಕೊಂಕು ಮಾತು ಕೇಳಿ ಬಂದಾಗ, ಅದನ್ನು ಸವಾಲಾಗಿ ಸ್ವೀಕರಿಸಿ, ತನ್ನ 60ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಖ್ಯಾತ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಅಭ್ಯಾಸ ಮಾಡಿ ಕಲಿಯುವಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಮತ್ತು ಈವರೆಗೆ 400 ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಭಿಮಾನಿಗಳ ಅತೀವ ಮೆಚ್ಚುಗೆಗೆ ಪಾತ್ರರಾದದ್ದು ಇವರ ಮಹತ್ತರ ಸಾಧನೆ ಎಂದರೆ ತಪ್ಪಾಗಲಾರದು. ಕಳೆದ 16 ವರ್ಷಗಳಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಚಿಟ್ಟಾಣಿ ರಾಮಚಂದ್ರ ಹೆಗೆಡೆ ಯಕ್ಷಗಾನ ಸಪ್ತಾಹ, ಕೆ.ಗೋವಿಂದ ಭಟ್ಟ ಯಕ್ಷಗಾನ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ,…

Read More

ಯಕ್ಷಗಾನ ರಂಗಭೂಮಿಯು ಹಿಂದೆ ಕಂಡಿರದ-ಮುಂದೆ ಕಂಡೀತೆಂಬ ಭರವಸೆಯನ್ನು ತಳೆಯಲಾಗದ ಪ್ರತಿಭೆ, ಪ್ರಯತ್ನ ಹಾಗೂ ಪ್ರಯೋಗಗಳ ಮುಪ್ಪರಿಕೆಯಿಂದಾಗಿ ಸ್ವಂತಿಕೆಯ ಅನನ್ಯತೆಯಿಂದಾಗಿ ಇತಿಹಾಸವಾದ ವಿರಳಾತಿ ವಿರಳರಲ್ಲಿ ಸುಬ್ರಹ್ಮಣ್ಯ ಧಾರೇಶ್ವರರನ್ನು ಹೆಸರಿಸದಿದ್ದಲ್ಲಿ ನಿಜಕ್ಕೂ ಅದು ಸಾಂಸ್ಕೃತಿಕವಾದ ಅಪಚಾರವೇ ಹೌದು. ಯಕ್ಷಗಾನದಲ್ಲಿ ಸರ್ವಕಾಲೀನವಾಗಿ ಭಾಗವತನೇ ಪ್ರಧಾನವೆಂಬುದು ಸತ್ಯವೇ ಆಗಿದ್ದರೂ, ಅದನ್ನು ಶತಸತ್ಯವನ್ನಾಗಿಸಿದವರು ರಸರಾಗ ಚಕ್ರವರ್ತಿ ಎನಿಸಿದ್ದ ಕೀರ್ತಿಶೇಷ ಜಿ.ಆರ್. ಕಾಳಿಂಗ ನಾವುಡರು. ಅವರ ಸಮಕಾಲೀನರಾದ ಧಾರೇಶ್ವರರು ಸಹ ತಮ್ಮ ವೈಖರಿಯಿಂದ ಭಾಗವತನ ಸ್ಥಾನಮಾನದ ಘನತೆಯನ್ನು ಎತ್ತರಿಸಿದವರು. ಭಾಗವತನೇ ಅಕ್ಷರಶ: ಮೊದಲನೇ ವೇಷದಾರಿ ಎಂಬ ಶಾಸ್ತ್ರೀಯವಾದ ಪರಿಕಲ್ಪನೆಯೊಂದಿಗೆ ರಂಗದಲ್ಲಿ ಹಾಸ್ಯಗಾರಿಕೆಗೆ ಜೀವವನ್ನು ತುಂಬುವಲ್ಲಿ ಸಹ ವಿದೂಷಕರಾಗಿಯೂ ಇದ್ದವರು. ಧಾರೇಶ್ವರರ ಯಕ್ಷಯಾನದಲ್ಲಿ ಅವರಿಗೆ ಕೌಟುಂಬಿಕವಾದ ಯಕ್ಷಗಾನದ ಪರಂಪರೆಯೇನೂ ಇದ್ದಂತಿಲ್ಲ. ಅವರು ಮೂಲತಃ ನಾಟಕ ರಂಗಭೂಮಿಯ ನಂಟಿನೊಂದಿಗೆ ಯಕ್ಷಗಾನಕ್ಕೆ ಆಕಸ್ಮಿಕವಾಗಿ ಬಂದವರು. “ನನ್ನ ಬದುಕೇ ಉಪ್ಪೂರರು” ಎಂದು ಎದೆದುಂಬಿ ಉದ್ಗರಿಸುವ ಅವರಿಗೆ ಮಹಾನ್ ಗುರುವಿನ ಪಾಠ, ಮದ್ದಳೆಯ ಮಾಂತ್ರಿಕ ದುರ್ಗಪ್ಪ ಗುಡಿಗಾರರ ಒಡನಾಟ ಹಾಗೂ ಸಹಪಾಠಿಯಾಗಿದ್ದ ನಾವುಡರ ಪ್ರಭಾವದೊಂದಿಗೆಯೇ ನಟ ಸಾಮ್ರಾಟ…

Read More

ಕೊಪ್ಪಳ : 10ನೇ ಮೇ ಸಾಹಿತ್ಯ ಮೇಳವು ದಿನಾಂಕ 25-05-2024 ಮತ್ತು 26-05-2024ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಪಾಲ್ಗೊಳ್ಳುವವರು ಮುಂಚೆಯೇ ನೋಂದಾಯಿಸಿಕೊಳ್ಳಿ. ಮುಂಚೆ ನೋಂದಣಿ ಮಾಡಿಕೊಂಡವರಿಗೆ ಸರಳ ವಸತಿ ಕಲ್ಪಿಸಲಾಗುವುದು. ಬರುವುದು ಖಚಿತವಿದ್ದವರು ಮಾತ್ರ ನೋಂದಾಯಿಸಿಕೊಳ್ಳಿ. ಸಂಪರ್ಕಕ್ಕಾಗಿ : ಅಲ್ಲಮ ಪ್ರಭು ಬೆಟದ್ದೂರ : ಮೊ +919844049205 ಸುರೇಂದ್ರ ಕಾಂಬಳೆ : ಮೊ.9036037888 ಶಿರಾಜ್ ಬಿಸರಳ್ಳಿ : ಮೊ.9880257488 ರಾಜಾಭಕ್ಷಿ : ಮೊ.9448183708 ಕಾಶಪ್ಪ ಚಲವಾದಿ : ಮೊ.8867108437 ಡಿ. ಎಂ. ಬಡಿಗೇರ : ಮೊ.8073045972 ಜೀವನಸಾಬ ವಾಲಿಕಾರ : ಮೊ.8105052820 ಶೀಲಾ ಹಲಕುರ್ಕಿ : ಮೊ.9844904434 ಮಹೇಶ ಬಳ್ಳಾರಿ : ಮೊ.9008996624 ಶರಣಪ್ಪ ಬಾಚಲಾಪುರ : ಮೊ.9448025074 ಮಹಾಂತೇಶ ಮಲ್ಲನಗೌಡರ : ಮೊ.94486 34014 ಟಿ ರತ್ನಾಕರ : ಮೊ.9482238199 ಶರಣು ಶೆಟ್ಟರ : ಮೊ.81978 08300 ಲಕ್ಷ್ಮಣ ಪಿರಗಾರ : ಮೊ.9663974163 ಮಹಾಂತೇಶ ಕೊತಬಾಳ : ಮೊ.8762700200 ಮುತ್ತು ಬಿಳೆಯಲಿ : ಮೊ.9980428441 ಬಿ. ಶ್ರೀನಿವಾಸ : ಮೊ.9916332273 ಡಾ.…

Read More

ಕೊಪ್ಪಳ : ಮೇ ಸಾಹಿತ್ಯ ಮೇಳ ಈ ವರ್ಷ ದಿನಾಂಕ 25-05 -2024 ಮತ್ತು 26-05-2024ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಅದಕ್ಕೆ ಪೂರಕವಾಗಿ ‘ಕಲಾ ಶಿಬಿರ’ವು ಎರಡು ದಿನಗಳ ಕಾಲ ನಡೆಯಲಿದ್ದು, ಶಿಬಿರದಲ್ಲಿ ಭಾಗವಹಿಸಲು 20 ಜನ ಪ್ರಬುದ್ಧ ಕಲಾವಿದರಿಗೆ ಅವಕಾಶವಿದೆ. ಪ್ರಸಿದ್ಧ ಚಿತ್ರ ಕಲಾವಿದರಾದ ಬಿ. ಮಾರುತಿ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಕೊಪ್ಪಳ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಅಥವಾ ರಾಜ್ಯದ ಆಸಕ್ತ ಚಿತ್ರ ಕಲಾವಿದರು ತಮ್ಮ ಫೋನ್ ನಂಬರ್ ಹಾಗೂ ವಿಳಾಸವನ್ನು ತಿಳಿಸಿ ಭಾಗವಹಿಸಬಹುದು. ಮಹಿಳಾ ಚಿತ್ರಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಗೆ ಅವಕಾಶವಿದೆ. ಭಾಗವಹಿಸುವ ಕಲಾವಿದರಿಗೆ ಎರಡು ದಿನಗಳ ಕಾಲ ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿ. ಬಿ. ರೆಡ್ಡರ್ 94807 80174, ಲಕ್ಷ್ಮಣ ಪೀರಗಾರ 9663974163 ಇವರನ್ನು ಸಂಪರ್ಕಿಸಬಹುದು.

Read More

ಕನ್ನಡ ಸಾರಸ್ವತ ಲೋಕ ಕಂಡಂತಹ ಅತ್ಯಂತ ಅಪರೂಪದ ಮತ್ತು ಅನರ್ಘ್ಯ ರತ್ನ ಬೀಚೀ ಅಂದರೆ ಅತಿಶಯೋಕ್ತಿಯಾಗದು. ಕನ್ನಡ ಸಾಹಿತ್ಯ ಲೋಕದಲ್ಲಿ ಕರ್ನಾಟಕದ ‘ಜಾರ್ಜ್ ಬರ್ನಾಡ್ಷಾಘ’ ಎಂಬ ಬಿರುದನ್ನು ಅವರು ಪಡೆದಿದ್ದರು. ಅತ್ಯಂತ ಮಾರ್ಮಿಕನಾಗಿ, ಸಂವೇದನಾಶೀಲರಾಗಿ ಮತ್ತು ಚುರುಕು ಮುಟ್ಟಿಸುವ ರೀತಿಯಲ್ಲಿ ಭಾಷೆಯನ್ನು ಬಳಸಿದ ಕೆಲವೇ ಕೆಲವು ಅಗ್ರಗಣ್ಯ ಹಾಸ್ಯ ಕವಿಗಳಲ್ಲಿ ಬೀಚೀಯವರೂ ಒಬ್ಬರು. ಅವರ ಪೂರ್ತಿ ಹೆಸರು ರಾಯಸಂ ಭೀಮಸೇನ ರಾವ್ ಎಂಬುದಾಗಿದೆ. ಆದರೆ ಅವರ ಕಾವ್ಯನಾಮ ಎಷ್ಟು ಚಿರಪರಿಚಿತವಾಗಿದೆ ಎಂದರೆ ಅವರ ಮೂಲ ಹೆಸರನ್ನು ಎಲ್ಲರೂ ಮರೆತು ಹೋಗುವಷ್ಟರ ಮಟ್ಟಿಗೆ ಅವರು ‘ಬೀಚೀ’ ಎಂಬ ಹೆಸರಿನಿಂದ ಪ್ರಸಿದ್ದರಾಗಿದ್ದರು. ಕನ್ನಡದ ಬಗ್ಗೆ ಅಪರಿಮಿತವಾದ ಗೌರವ ಮತ್ತು ಪ್ರೀತಿ ಇದ್ದ ಕಾರಣದಿಂದ ತಮ್ಮ ಕಾವ್ಯನಾಮ ‘ಬೀಚೀ’ ಬದಲಾಗಿ ‘ಬೀchi’ ಎಂದು ಬರೆದು ನಾನು ಇಂಗ್ಲೀಷಿಗಿಂತ ಕನ್ನಡಕ್ಕೇ ಆದ್ಯತೆ ನೀಡುತ್ತೇನೆ ಎಂದು ಪರೋಕ್ಷವಾಗಿ ಓದುಗರಿಗೆ ಮತ್ತು ನಾಡಿನ ಜನರಿಗೆ ಸಂದೇಶ ನೀಡಿದ್ದರು. 1913 ಏಪ್ರಿಲ್ 23ರಂದು ಹರಪನ ಹಳ್ಳಿಯಲ್ಲಿ (ಈಗಿನ ವಿಜಯನಗರ ಜಿಲ್ಲೆ) ಜನಿಸಿ,…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 29-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಸ್ಮೃತಿ ಸುರೇಶ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಸ್ಮೃತಿ ಸುರೇಶ್ ಇವರು ಶಾಸ್ತ್ರೀಯ ನೃತ್ಯ ಅಭ್ಯಾಸವನ್ನು ತಮ್ಮ ಎಂಟನೇ ವಯಸ್ಸಿನಲ್ಲಿ ಚೆನ್ನೈನ ‘ಕಲಾಕ್ಷೇತ್ರ’ದ ಹಿರಿಯ ವಿದ್ಯಾರ್ಥಿನಿಯಾದ, ಗುರು ಶ್ರೀಮತಿ ಶ್ರೀವಿದ್ಯಾ ಆನಂದರಲ್ಲಿ ಆರಂಭಿಸಿ, ಶಾಲಾ ಕಾಲೇಜುಗಳಲ್ಲಿ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ‘ಕಲಾಕ್ಷಿತಿ ನೃತ್ಯಶಾಲೆ’ ಯ ಸಂಸ್ಥಾಪಕರಾದ ಡಾ. ಕೃಷ್ಣಮೂರ್ತಿಯವರ ಗರಡಿಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು, ಗುರುಗಳ ನೇತೃತ್ವದಲ್ಲಿ ಸ್ಮೃತಿ ಕಲಾಕ್ಷಿತಿ ಶಾಲೆಯ ಪ್ರಸ್ತುತಿಗಳಾದ, ‘ಗೋಕುಲ ನಿರ್ಗಮನ’, ‘ಅಕ್ಕ ಮಹಾದೇವಿ’, ‘ರುಕ್ಮಿಣಿ ದೇವಿ ಅರುಂಡೇಲ್ ರ ಹುಟ್ಟುಹಬ್ಬ’ ಹಾಗೂ ಇನ್ನೂ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿಯೂ ಕಾರ್ಯಕ್ರಮ…

Read More

ಸಕಲೇಶಪುರ : ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವವರಿಗೊಂದು ಸದವಕಾಶ. ರಾಜ್ಯ, ಅಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಹಾಗೂ ನೀನಾಸಂ ಪದವೀಧರರು, ಸಿನಿಮಾ ನಟರುಗಳಿಂದ ಶಿಬಿರದ ತರಗತಿಗಳು ನಡೆಯುತ್ತವೆ. ದಿನಾಂಕ 01-05-2024ರಿಂದ 15-05-2024ರವರೆಗೆ ಸಕಲೇಶಪುರದ ರಕ್ಷಿದಿಯಲ್ಲಿ ಬೆಳಿಗ್ಗೆ ಗಂಟೆ 6-00ರಿಂದ ರಾತ್ರಿ 9-00ರವರೆಗೆ ಈ ನಡೆಯಲಿರುವ ಈ ರಂಗ ಶಿಬಿರದಲ್ಲಿ ಛಾಯಾಗ್ರಹಣ, ಚಾರಣ, ಸಾಹಿತ್ಯ, ಅಭಿನಯ ಮತ್ತು ನಾಟಕ ಪ್ರದರ್ಶನಗಳ ಮಾಹಿತಿ ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಮೂರ್ತಿ ಹನೂರು, ಡಾ.ಶ್ರೀಪಾದ ಭಟ್, ಮೌನೇಶ್ ಬಡಿಗೇರ, ಕೇಸರಿ ಹರವು, ಪ್ರಸಾದ್ ರಕ್ಷಿದಿ, ವಿನ್ಯಾಸ ಉಬರಡ್ಕ, ಲೋಕೇಶ್ ಮೊಸಳೆ, ಮನು, ರತ್ನ ಸಕಲೇಶಪುರ ಮತ್ತು ಸಂತೋಷ್ ದಿಂಡಿಗನೂರು ಭಾಗವಹಿಸಲಿದ್ದಾರೆ. ದಿನಾಂಕ 15-05-2024ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಟ, ನಿರ್ದೇಶಕರು ಮತ್ತು ಚಿಂತಕರು ಪ್ರಕಾಶ್ ರಾಜ್ ಇವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಪ್ರಸಾದ್ ರಕ್ಷಿದಿ 9448825701…

Read More

ಹಂದಟ್ಟು : ಮಯ್ಯ ಯಕ್ಷ ಬಳಗ ಹಾಲಾಡಿ, ವಿವಾಹ ಸಂಪರ್ಕ ವೇದಿಕೆ, ಗೆಳೆಯರ ಬಳಗ ಯುವಕ ಸಂಘ (ರಿ.), ದಾನಗುಂದು ಹಂದಟ್ಟು, ಬಾರಿಕೆರೆ ಯುವಕ ಮಂಡಲ (ರಿ.) ಮತ್ತು ಅಭಿಮಾನ್ ಫ್ರೆಂಡ್ಸ್ ನಾಗಬನ ಹಂದಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ಸಮಾಜಮುಖಿ ಬದುಕಿನ ಸಂತೃಪ್ತ ಸಾಧಕ ಯಕ್ಷಾರಾಧಕ ಹಂದಟ್ಟು ಸೂರ್ಯನಾರಾಯಣ ಉರಾಳ ಇವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 01-05-2024ರಂದು ಸಂಜೆ 7.00ರಿಂದ ಉರಾಳರಕೇರಿ ಹಂದಟ್ಟು ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಉಪನ್ಯಾಸಕರಾದ ಶ್ರೀ ಬಾಲಕೃಷ್ಣ ನಕ್ಷತ್ರಿ ಮತ್ತು ನಿವೃತ್ತ ಅಧ್ಯಾಪಕರಾದ ಶ್ರೀ ಶ್ರೀಪತಿ ಹೇರ್ಳೆ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದ್ದು, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಕೆ.ಎಸ್. ಕಾರಂತರು ಅಧ್ಯಕ್ಷತೆಯನ್ನು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕಲ್ಲೂರ, ಅಮೃತೇಶ್ವರೀ ದೇವಸ್ಥಾನ ಮತ್ತು ಮೇಳದ ವ್ಯವಸ್ಥಾಪಕರಾದ ಶ್ರೀ ಆನಂದ್ ಸಿ. ಕುಂದರ್, ಹಿರಿಯ ಕಲಾ ಸಾಹಿತಿಯಾದ ಶ್ರೀ ಜನಾರ್ಧನ ಹಂದೆ ಹಂದಟ್ಟು, ಗೋಳಿಗರಡಿ ಮೇಳದ ಮಾಜಿ ಯಜಮಾನರಾದ…

Read More

 ಉಡುಪಿ :  ಯಕ್ಷಗಾನ ಲೋಕದ ಶ್ರೇಷ್ಠ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ದಿನಾಂಕ 25-04-2024 ರಂದು ತಮ್ಮ ಬೆಂಗಳೂರಿನ ಪುತ್ರನ  ಮನೆಯಲ್ಲಿ ನಿಧನರಾದರು. ಅವರಿಗೆ 67ವರ್ಷ ವಯಸ್ಸಾಗಿತ್ತು. ಕಾಳಿಂಗ ನಾವುಡರ ಬಳಿಕ ಮಧುರ ಕಂಠದಿಂದ ಹೆಚ್ಚು ಜನಪ್ರಿಯತೆಗಳಿಸಿದ್ದ  ಇವರು ಬಡಗುತಿಟ್ಟು ಯಕ್ಷಗಾನ ಅಭಿಮಾನಿಗಳಲ್ಲಿ  ‘ಗಾನಕೋಗಿಲೆ’ ಎಂದೇ ಜನಪ್ರಿಯರಾಗಿದ್ದರು. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇವರು ಪತ್ನಿ, ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ ಕಾರ್ತಿಕ್, ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. 05-09-1957 ರಂದು ಗೋಕರ್ಣದಲ್ಲಿ ಜನಿಸಿದ್ದ ಇವರು ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು. ನಾರಾಯಣಪ್ಪ ಉಪ್ಪೂರ ಶಿಷ್ಯರಾಗಿದ್ದ ಇವರು ಹೊಸ ಹಾಗೂ ಹಳೆಯ ಪ್ರಸಂಗಗಳಲ್ಲಿ ಪರಿಣಿತರಾಗಿದ್ದರು.  ಶ್ರೀಯುತರು ಕೋಟ ಅಮೃತೇಶ್ವರಿ ಮೇಳ, ಪೆರ್ಡೂರು ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಇವರು ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಹಾಡಿದ್ದಾರೆ. ಇವರ ಅಮೃತ ವರ್ಷಿಣಿ,…

Read More