Author: roovari

ಸುರತ್ಕಲ್ : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ) ಸುರತ್ಕಲ್ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಭಾಗಿತ್ವದಲ್ಲಿ ಶೇಣಿ ಸಂಸ್ಮರಣೆ ಹಾಗೂ ಶೇಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 29-10-2023ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ “ಶ್ರೇಷ್ಠ ಕಲಾವಿದ ಶೇಣಿಯವರು ತಮ್ಮ ಕಲಾ ಚಿಂತನೆಯ ಮೂಲಕ ಯುವ ತಲೆಮಾರುಗಳನ್ನು ಪ್ರಭಾವಿಸಿದವರು” ಎಂದರು. ‘ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ವೇ.ಮೂ. ವಾದಿರಾಜ ಉಪಾದ್ಯಾಯ “ನಿಷ್ಕಲ್ಮಶ ಮನಸ್ಸಿನಿಂದ ಯಾವುದೇ ಕಾರ್ಯ ಮಾಡಿದರೂ ಅದರ ಪ್ರತಿಫಲ ಮತ್ತಷ್ಟು ಉತ್ತಮವಾಗಿಯೇ ಇರುತ್ತದೆ. ಅದಕ್ಕೆ ಶ್ರೇಣಿ ಗೋಪಾಲ ಕೃಷ್ಣ ಭಟ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವೇ ಸಾಕ್ಷಿ” ಎಂದು ನುಡಿದರು. ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಇವರಿಗೆ…

Read More

ಯಕ್ಷಗಾನ ಗಂಡು ಕಲೆಯೆಂದೇ ಪ್ರತೀತಿ. ಆದರೆ ಇತ್ತೀಚಿಗೆ ಹೆಂಗೆಳೆಯರೂ ರಂಗಸ್ಥಳದಲ್ಲಿ ರಾರಾಜಿಸುತ್ತಿದ್ದಾರೆ. ಅಂಥಹ ಕಲಾವಿದರಲ್ಲಿ ಪ್ರಿಯಾಂಕ ಕೆ ಮೋಹನ ಕೂಡಾ ಒಬ್ಬರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಸಾಫ್ಟ್ ವೇರ್ ಉದ್ಯೋಗಿಯಾಗಿ ಯಕ್ಷಗಾನವನ್ನು ಅರಾಧಿಸಿದ ರೀತಿ ಅನನ್ಯ. 3.11.1988ರಂದು ಮೋಹನ್ ಹೊಳ್ಳ ಹಾಗೂ ವೀಣಾ ಮೋಹನ್ ಇವರ ಮಗಳಾಗಿ ಜನನ. B.E Electronics ಇವರ ವಿದ್ಯಾಭ್ಯಾಸ. ತಂದೆ ಮೋಹನ್ ಹೊಳ್ಳ ಹಾಗೂ ಸುದರ್ಶನ್ ಉರಾಳ ಇವರ ಯಕ್ಷಗಾನ ಗುರುಗಳು. ಮನೆಯ ವಾತಾವರಣ ಹಾಗೂ ತಂದೆ ಕಟ್ಟಿದ ‘ಯಕ್ಷ ದೇಗುಲ’ ಸಂಸ್ಥೆ ಪ್ರಿಯಂಕಾರವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಪ್ರಸಂಗದ ಪದ್ಯ, ಸಾಹಿತ್ಯ ಹಾಗೂ ವಿಡಿಯೋ ಹಾಗೂ ಗುರುಗಳ ಬಳಿ ಕೇಳಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರಿಯಾಂಕ. ಪೌರಾಣಿಕ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು.  ಸುಭದ್ರೆ, ದ್ರೋಣ, ಧರ್ಮರಾಯ, ಕೃಷ್ಣ, ಭದ್ರಸೇನೆ, ಸುಧನ್ವ, ಅರ್ಜುನ ಇತ್ಯಾದಿ ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ…

Read More

ಪುತ್ತೂರು : ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆರ್ಯಾಪು ಪುತ್ತೂರು, ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 16/10/2023 ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು. ಇದರ ವತಿಯಿಂದ “ರುಕ್ಮಾಂಗದ ಚರಿತ್ರೆ”ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಗಿರೀಶ್ ಮುಳಿಯಾಲ, ಶ್ರೀ ಆನಂದ ಸವಣೂರು,ಚೆಂಡೆ ಮದ್ದಳೆಗಳಲ್ಲಿ  ಶ್ರೀ ಪದ್ಯಾಣ ಜಯರಾಮ ಭಟ್ , ಶ್ರೀ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ರುಕ್ಮಾಂಗದ),ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ಧರ್ಮಾಂಗದ), ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ (ಮೋಹಿನಿ), ಡಾ.ಶ್ರೀಪತಿ ಕಲ್ಲೂರಾಯ (ಸಂಧ್ಯಾವಳಿ) , ಶ್ರೀ ಸುಬ್ಬಪ್ಪ ಕೈಕಂಬ (ಮಹಾವಿಷ್ಣು)ಸಹಕರಿಸಿದರು. ಡಾ. ಶ್ರೀಪತಿ ಕಲ್ಲೂರಾಯ ಪ್ರಾಯೋಜಿಸಿದರು.

Read More

ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ಕೊಡಮಾಡುವ 19ನೇ ಕಲಾಕಾರ್ ಪುರಸ್ಕಾರಕ್ಕೆ ಕೊಂಕಣಿಯ ಹಿರಿಯ ಸಂಗೀತಗಾರ ಆಪೊಲಿನಾರಿಸ್ ಡಿಸೋಜರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂಪಾಯಿ 50,೦೦೦/- ನಗದು, ಶಾಲು, ಫಲ-ಪುಷ್ಪ, ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ .  ಈ ಸನ್ಮಾನವನ್ನು 05-11-2023ರಂದು ಸಂಜೆ ಘಂಟೆ 6.00ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯುವ 263ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು. 2004ರಲ್ಲಿ ಭಾಷಾ ತಜ್ಞ ವಂ. ಡಾ. ಪ್ರತಾಪ್ ನಾಯ್ಕ್ ಅವರು ತನ್ನ ಕಾರ್ವಾಲ್ ಮನೆತನದ ಹೆಸರಲ್ಲಿ ಈ ಪುರಸ್ಕಾರ ಸ್ಥಾಪಿಸಿದ್ದು, ಕರ್ನಾಟಕ ಮೂಲದ ನೃತ್ಯ, ನಾಟಕ, ಸಂಗೀತ ಅಥವಾ ಜಾನಪದದಲ್ಲಿ ವಿಶೇಷ ಸಾಧನೆ ಮಾಡಿದ ಓರ್ವ  ಕೊಂಕಣಿ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. 1953ರಲ್ಲಿ ಜನಿಸಿದ ಆಪೊಲಿನಾರಿಸ್ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ನಂತರ ಕೆಲಸಕ್ಕಾಗಿ ಓಮನ್ ಗೆ ತೆರಳಿದ ಅವರು ಓಮನ್ ಹಾಗೂ ಊರಿನಲ್ಲಿ ಸಂಗೀತ ಕ್ಷೇತ್ರಕ್ಕೆ ಅಪರಿಮಿತ ಸೇವೆ ಸಲ್ಲಿಸಿದ್ದಾರೆ. ಯುವಕ ರಾಗಿದ್ದ ಸಂದರ್ಭದಲ್ಲಿ…

Read More

ಮೈಸೂರು : ಆನ್ ಸ್ಟೇಜ್ ಯೂತ್ ಥಿಯೇಟರ್ ಆಯೋಜಿಸುತ್ತಿರುವ 45 ದಿನಗಳ ರಂಗ ತರಬೇತಿ ಕಾರ್ಯಾಗಾರ (ಅಭಿನಯ ಮತ್ತು ನಾಟಕ ತಯಾರಿ) ಕಾರ್ಯಾಗಾರವು ದಿನಾಂಕ 10-11-2023ರಿಂದ ಪ್ರತಿದಿನ ಸಂಜೆ 6:30 ರಿಂದ 9:00ರ ವರೆಗೆ ಮೈಸೂರಿನ ಹೆಬ್ಬಾಳದ ಬಸವನಗುಡಿ ಸರ್ಕಲ್ ಹತ್ತಿರವಿರುವ ಅಣ್ಣಯ್ಯಪ್ಪ ಭೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8892314554 ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ನಿರ್ದೇಶಕ ವಿನೋದ ಸಿ. ಮೈಸೂರು ಮಂಡ್ಯ ರಮೇಶ್ ಇವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ. ಕಳೆದ 9 ವರ್ಷಗಳಿಂದ ನಿರಂತರವಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಬಿ.ಎಚ್.ಎನ್. ಶಾಲೆಯಲ್ಲಿ ಡ್ರಾಮಾ ಶಿಕ್ಷಕರಾಗಿ ಕೆಲಸ ಮಾಡಿರುವ ಅನುಭವವಿದೆ. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ‘ಅಕೌಂಟ್’ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ವರ್ಕ್ ಶಾಪ್ ಇನ್…

Read More

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹಲವು ಕಲಾವಿದರ ಸಾಲಿನಲ್ಲಿ ಸದ್ಯ ಮಿಂಚುತ್ತಿರುವ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು. ತಂದೆ ಮೊಗೆಬೆಟ್ಟು ಹೆರಿಯ ನಾಯ್ಕ ಮೊದಲ ಪ್ರೇರಣೆ, . ಆ ನಂತರ ಇವರ ಮಾನಸಗುರು ಕಂದಾವರ ರಘುರಾಮ ಶೆಟ್ಟರ ಪ್ರಸಂಗಗಳು, ಕಂದಾವರರ ಚೆಲುವೆ ಚಿತ್ರಾವತಿ, ಬನಶಂಕರಿ ಯಕ್ಷಗಾನ ಪ್ರದರ್ಶನ ನೋಟ ಹಾಗೂ ಕಂದಾವರರ ಪದ್ಯ ರಚನೆಯ ಪ್ರಭಾವ; ಕಾಳಿಂಗ ನಾವಡರ ಪದ್ಯ ಹಾಗೂ ಪ್ರಸಂಗಗಳೂ ಪ್ರೇರಣೆ. ಹವ್ಯಾಸಿ ಯಕ್ಷಗಾನ ರಂಗಭೂಮಿಯಿಂದ ಬಂದವರು ಮೊಗೆಬೆಟ್ಟು ಚಿಕ್ಕಮ್ಮ ಹೈಗುಳಿ ಯಕ್ಷಗಾನ ಮಂಡಳಿಯ ಬಾಲಕಲಾವಿದನಾಗಿ 10 ನೆಯ ವಯಸ್ಸಿನಲ್ಲಿ ಬಬ್ರುವಾಹನನಾಗಿ ರಂಗ ಪ್ರವೇಶ ಮಾಡಿದೆ. ಆ ದಿವಸವೇ ಇವರ ವೇಷ ಮೆಚ್ಚಿ ಆಟ ನೋಡುತ್ತಿದ್ದ ಪಂಚಾಯತ್ ಅಧ್ಯಕ್ಷರು ಇವರಿಗೆ ಸನ್ಮಾನ ಮಾಡಿ ಗೌರವಿಸಿದರು. 1998 ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸಾಂಪ್ರದಾಯಿಕ…

Read More

ಮಂಗಳೂರು : ದ.ಕ. ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ದಿನಾಂಕ 05-11-2023ರಂದು ಬೆಳಗ್ಗೆ 10.30ಕ್ಕೆ ನಗರದ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ‘ವಾದ್ಯ ಕಲಾ ಮೇಳ’ ಆಯೋಜಿಸಲಾಗಿದೆ. ಬೆಳಿಗ್ಗೆ 8.30ಕ್ಕೆ ಮಂಗಳ ಕ್ರೀಡಾಂಗಣದಿಂದ ಸಂಭ್ರಮದ ಮೆರವಣಿಗೆಯಲ್ಲಿ ಕಹಳೆ, ವಾದ್ಯಮೇಳ, ಡೋಲು, ಕೀಳು ಕುದುರೆ, ತಾಲೀಮು, ಕಂಗೀಲು, ಹುಲಿಕುಣಿತ, ಬ್ಯಾಂಡ್ ಸೆಟ್, ಚೆಂಡೆ ವಾದನ, ಆಕರ್ಷಕ ಮೆರವಣಿಗೆ, ತಾಸೆ ಮತ್ತು ಡೋಲುಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ವಿಧಾನಸಭೆ ಸಭಾಪತಿ ಶ್ರಿ ಯು.ಟಿ. ಖಾದರ್ ಮತ್ತು ಶ್ರೀ ಕ್ಷೇತ್ರ ಕಚ್ಚೂರಿನ ಧರ್ಮದರ್ಶಿ ಶ್ರೀ ಗೋಕುಲ್ ದಾಸ್ ಬಾರ್ಕೂರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರೆ, ಚಲನಚಿತ್ರ ನಿರ್ದೇಶಕ ಶ್ರೀ ರಾಜ್ ಬಿ. ಶೆಟ್ಟಿ ವಾದ್ಯ ಕಲಾ ಮೇಳ ಉದ್ಘಾಟಿಸಲಿದ್ದಾರೆ. ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಶುಭಹಾರೈಸಲಿದ್ದಾರೆ. ದ.ಕ. ಜಿಲ್ಲಾ ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ಶಾಸಕ ಶ್ರೀ…

Read More

ಮಡಿಕೇರಿ : ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದಿಂದ ‘ನಿಮ್ಮ ಪ್ರತಿಭೆ ನಮ್ಮ ವೇದಿಕೆ 2023’ ಕಾರ್ಯಕ್ರಮದಡಿ ಕನ್ನಡ ಹಬ್ಬ, ಸಮರ್ಥ ಕನ್ನಡಿಗರು ಗೌರವಾರ್ಪಣೆ, ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 05-11-2023ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಓಂಕಾರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಈ ಬಾರಿ ಹತ್ತು ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಕಂಜರ್ಪಣೆ ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ. ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಶ್ರೀ ಲಿಂಗೇಶ್ ಹುಣಸೂರು, ಪ್ರಧಾನ ಸಂಚಾಲಕರಾದ ಶ್ರೀ ಆನಂದ್ ದಗ್ಗನಹಳ್ಳಿ, ಮುಂಬೈನ ಲೇಖಕಿ ಜಯಂತಿ ಸಿ.ರಾವ್, ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10.45 ಘಂಟೆಗೆ ಛದ್ಮವೇಷ, ಸಮೂಹ ಗಾಯನ, ಸಮೂಹ ನೃತ್ಯ, ಚಿತ್ರಕಲೆ ಸ್ಪರ್ಧೆಗಳು, 1.30ಕ್ಕೆ ಪುಸ್ತಕ ಲೋಕಾರ್ಪಣೆ, 2-00 ಘಂಟೆಗೆ ಕವಿತೆ ಓದು ಮತ್ತು 3-00 ಘಂಟೆಗೆ ‘ಸಮರ್ಥ ಕನ್ನಡಿಗರು’ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸ್ಪರ್ಧೆಯ ವಿಜೇತರಿಗೆ…

Read More

ಮಂಗಳೂರು : ರಾಜ್ಯ ಸಾಹಿತ್ಯ ಚಿಗುರು ಬಳಗ ಮಂಗಳೂರು ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ದಿನಾಂಕ 05-11-2023ರಂದು ಏರ್ಪಡಿಸಲಾಗಿದೆ. ಇದರಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ ಬಹುಮಾನ ಚಿನ್ನದ ನಾಣ್ಯ, ದ್ವಿತೀಯ ಬಹುಮಾನವಾಗಿ ಬೆಳ್ಳಿಯ ಪದಕ, ತೃತೀಯ ಬಹುಮಾನವಾಗಿ ಬೆಳ್ಳಿಯ ನಾಣ್ಯದೊಂದಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಗುವುದು. ಮಾಹಿತಿಗಾಗಿ ನಿಯಾಜ್ ಪಡೀಲ್ (ಮೊಬೈಲ್ ಸಂಖ್ಯೆ 9740221152) ಅವರನ್ನು ಸಂಪರ್ಕಿಸಬಹುದು. ನಿಯಮಗಳು – 1. ಯಾವುದೇ ರೀತಿಯ ಪ್ರವೇಶ ಶುಲ್ಕವಿರುವುದಿಲ್ಲ. 2. ಸ್ಪರ್ಧೆಯ ಕವನದ ವಿಷಯವನ್ನು 04-11-2023ರ ಶನಿವಾರದಂದು ಸಂಜೆ 5:00 ಗಂಟೆಗೆ ನೀಡಲಾಗುವುದು. ಕವನವನ್ನು ದಿನಾಂಕ 05-11-2023ರ ಭಾನುವಾರದಂದು ಸಂಜೆ 5:00 ಗಂಟೆಯ ಒಳಗಾಗಿ 9740221152 ಈ ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್‌ ಮೂಲಕ ಕಳುಹಿಸಿಕೊಡಬೇಕು. 3. ಕವನವು ನೀಡಲಾಗುವ ವಿಷಯಕ್ಕೆ ಸೂಕ್ತವಾಗಿದ್ದು 16 ಸಾಲುಗಳಿಗೆ ಸೀಮಿತವಾಗಿರಬೇಕು. 4. ಕವನದ ಲಕ್ಷಣಗಳನ್ನು ಒಳಗೊಂಡಿರಬೇಕು. 5. ಸ್ಪರ್ಧೆಯ ಸಮಯ ಮುಗಿದ ನಂತರ ಬಂದ ಕವನಗಳನ್ನು ಪರಿಗಣಿಸಲಾಗುವುದಿಲ್ಲ. 6. ಕವನದೊಂದಿಗೆ ತಮ್ಮ…

Read More

ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಹತ್ತಿರ ಇರುವ ರಾಮಕೃಷ್ಣ ತಪೋವನದಲ್ಲಿ ದಿನಾಂಕ 04-11-2023ರಿಂದ 10-11-2023ರವರೆಗೆ ಪ್ರತಿದಿನ ಸಂಜೆ 6.30ರಿಂದ ‘ಹರಿಕಥಾ ಸಪ್ತಾಹ’ವು ಜರುಗಲಿರುವುದು. ದಿನಾಂಕ 04-11-2023ರಂದು ‘ಪಾಶುಪತಾ ಪ್ರಧಾನ’ ಎಂಬ ಕಥಾನಕವನ್ನು ದೇವಕಿತನಯ ಕೂಡ್ಲು (ಶ್ರೀ ಮಹಾಬಲ ಶೆಟ್ಟಿ), ದಿನಾಂಕ 05-11-2023ರಂದು ‘ಶ್ರೀ ಕೃಷ್ಣ ಕಾರುಣ್ಯ’ ಎಂಬ ಕಥಾನಕವನ್ನು ಆಕಾಶ ವಾಣಿ ಕಲಾವಿದೆ ಶ್ರೀಮತಿ ಮಂಜುಳಾ ಜಿ. ರಾವ್, ದಿನಾಂಕ 06-11-2023ರಂದು ‘ಭಕ್ತ ಸುಧಾಮ’ ಎಂಬ ಕಥಾನಕವನ್ನು ಹರಿದಾಸ್ ಶ್ರೀ ಜಗದೀಶ್ ದಾಸ್ ಪೊಳಲಿ, ದಿನಾಂಕ 07-11-2023ರಂದು ‘ಹರಿಶ್ಚಂದ್ರ’ ಎಂಬ ಕಥಾನಕವನ್ನು ಕಥಾಕೀರ್ತನೆ ಕೋವಿದ ಸಿರಿವಿಠಲಾಂಕಿತ ಈಶ್ವರದಾಸ್ ಕೊಪ್ಪೇಸರ, ದಿನಾಂಕ 08-11-2023ರಂದು ‘ಶ್ರೀ ರಾಮಕೃಷ್ಣ ಅವತಾರ ಲೀಲೆ’ ಎಂಬ ಕಥಾನಕವನ್ನು ಡಾ. ಎಸ್.ಪಿ. ಗುರುದಾಸ್, ದಿನಾಂಕ 09-11-2023ರಂದು ‘ಗಿರಿಜಾ ಕಲ್ಯಾಣ’ ಎಂಬ ಕಥಾನಕವನ್ನು ಶ್ರದ್ಧಾ ಭಟ್ ನಾಯರ್ಪಳ್ಳ ಅಲಮ ಮತ್ತು ದಿನಾಂಕ 10-11-2023ರಂದು ‘ಸತೀ ಸಾವಿತ್ರಿ’ ಎಂಬ ಕಥಾನಕವನ್ನು ಕಲಾ ವಾರಿಧಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ನಡೆಸಿಕೊಡಲಿರುವರು. ರಾಮಕೃಷ್ಣ…

Read More