Subscribe to Updates
Get the latest creative news from FooBar about art, design and business.
Author: roovari
ಸಾಲಿಗ್ರಾಮ : ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕ, ಉಡುಪಿ ಜಿಲ್ಲೆ ಕರ್ನಾಟಕ ಯಕ್ಷಧಾಮ ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ ಮಂಗಳೂರು ಮತ್ತು ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ‘ಮನೆಯಂಗಳದಲ್ಲಿ ಸಾಹಿತ್ಯ’ ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ ದಿನಾಂಕ 22-04-2024ರ ಸೋಮವಾರ ಸಂಜೆ 3.30ರಿಂದ ಕಾರ್ಕಡದ ಭೂಮಿಕಾ ಮನೆಯಂಗಳದಲ್ಲಿ ಜರುಗಿತು. ಉಡುಪಿ ಜಿಲ್ಲೆಯ ಕ. ಸಾ. ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಜಿ. ರಾಮಚಂದ್ರ ಐತಾಳರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಮಂಗಳೂರು ಕಲಾ ಸಾಹಿತಿ ಜನಾರ್ದನ ಹಂದೆ ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಮಾತನಾಡಿದ ಅವರು “ಘರ್ಷಣೆಯಿಂದಲೇ ದೀಪದ ಹುಟ್ಟು ಸಾಧ್ಯವಾಗುವುದು. ಅಂತಯೇ ಮನಸ್ಸು ಮತ್ತು ಹೃದಯದ ಭಾವದೀಪದ ತಾಕಲಾಟದಿಂದ ಸಾಹಿತ್ಯದ ಹುಟ್ಟು. ದೀಪದಿಂದ ದೀಪ ಬೆಳಗುವ ಹಾಗೆ ಮನೆ ಅಂಗಳ ಸಾಹಿತ್ಯದ ದೀಪ ಕನ್ನಡ ಸಾಹಿತ್ಯ ಜ್ಯೋತಿಯನ್ನು ಬೆಳಗಬಲ್ಲದು. ಗೆಳೆಯರ ಬಳಗದ ಅಧ್ಯಕ್ಷರಾದ ತಾರಾನಾಥ ಹೊಳ್ಳರ ಮನೆಯಂಗಳದಲ್ಲಿ ನಡೆಯುತ್ತಿರುವ…
ಕಡಬ : ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 27-03-2024 ರಿಂದ 02-04-2024 ರವರೆಗೆ ಬೇಸಿಗೆ ಶಿಬಿರ ‘ಸಂಸ್ಕಾರ-ಸಂಭ್ರಮ’ ನಡೆದು, ಇದರ ಸಮಾರೋಪ ಸಮಾರಂಭವು ದಿನಾಂಕ 02-04-2024ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಕೆ. ಸೇಸಪ್ಪ ರೈ ಮಾತನಾಡಿ “ವಿದ್ಯಾರ್ಥಿಗಳೆಲ್ಲರೂ ಶಿಬಿರದ ಸದುಪಯೋಗವನ್ನು ಪಡೆದು, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಯಾಗಬೇಕು.” ಎಂದರು. ಮುಖ್ಯಅತಿಥಿಗಳಾದ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಜೊತೆ ಕಾರ್ಯದರ್ಶಿಯಾದ ಶ್ರೀ ಗಿರೀಶ್ ಎ. ಪಿ. ಹಾಗೂ ಶ್ರೀ ಶರವೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಕಕ್ವೆ ಇವರು ಸಂದರ್ಭೋಚಿತವಾಗಿ ಮಾತನಾಡಿದರು. ಶಿಬಿರದ ಸಂಪನ್ಮೂಲ ವ್ಯಕ್ತಿ ಶ್ರೀ ಸುಬ್ರಹ್ಮಣ್ಯ ಕೆ.ಎಂ. ಶಿಬಿರದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಮಹಿಳಾ ಸಂಘಟಕಿ ಶ್ರೀಮತಿ ಸೌಮ್ಯ ಮಾಧವ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಆನಂದ ಎಸ್. ಟಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆದಿತ್ಯ ಎ. ಆರ್.…
ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಶಿವರಾಮ ಕಾರಂತ ಅಧ್ಯಯನ ಕೇಂದ್ರದಿಂದ ನೀಡುವ ‘ನಿರಂಜನ ಪ್ರಶಸ್ತಿ’ಯನ್ನು ಈ ವರ್ಷ ನಿವೃತ್ತ ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ ಅವರಿಗೆ ಹಾಗೂ ‘ಶಂಕರ ಸಾಹಿತ್ಯ ಪ್ರಶಸ್ತಿ’ಯನ್ನು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇವರಿಗೆ ನೀಡುವುದೆಂದು ನಿರ್ಧರಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯು ತಿಳಿಸಿದೆ. ಪ್ರೊ. ವಿ.ಬಿ. ಅರ್ತಿಕಜೆ ಇವರು ಪುತ್ತೂರು ಬಳಿಯ ಈಶ್ವರಮಂಗಲದ ಅರ್ತಿಕಜೆ ಶ್ಯಾಮ ಭಟ್ಟ ಹಾಗೂ ಸಾವಿತ್ರಿ ದಂಪತಿಯ ಸುಪುತ್ರರು. ಇವರ ಆಸಕ್ತಿಯ ಕ್ಷೇತ್ರ ಅಧ್ಯಾಪನ, ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 33 ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಇವರು ಪ್ರೌಢಶಾಲಾ ದಿನಗಳಲ್ಲಿ ನವೋದಯ, ಸುಪ್ರಭಾತ ಮತ್ತು ನವರಸ ಹಸ್ತಪತ್ರಿಕೆಗಳನ್ನು ಆರಂಭಿಸಿದವರು. ತನ್ನ ಆಡುಭಾಷೆ ಹವ್ಯಕವನ್ನು ಅಂಕಣದಲ್ಲಿ ಉಪಯೋಗಿಸಿದ, ಆ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಸಿದ ಹಿರಿಮೆ ಇವರದು. ತಮ್ಮ ಅಪಾರವಾದ…
ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 7ನೇ ವಾರ್ಷಿಕ ಸಮಾರಂಭವು ದಿನಾಂಕ 19-04-2024ರಂದು ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿರವರು “ಯಕ್ಷಧ್ರುವ ಟ್ರಸ್ಟ್ ಯಕ್ಷಾಭಿಮಾನಿಗಳ ಆಶೀರ್ವಾದದಿಂದ ಬೆಳೆಯುತಿದ್ದು, ಸಹೃದಯಿ ದಾನಿಗಳ ನೆರವಿನಿಂದ ಈಗಾಗಲೇ ಪಟ್ಲ ಫೌಂಡೇಷನ್ ನಿಂದ ಸುಮಾರು ರೂ.12 ಕೋಟಿ ಹಣವನ್ನು ಅಶಕ್ತ ಕಲಾವಿದರಿಗೆ ಸಹಾಯಹಸ್ತ ನೀಡಿದೆ. ಇತ್ತೀಚೆಗೆ ಅಮೇರಿಕಾದಲ್ಲಿನ ಸಹೃದಯಿಯೋರ್ವರು ಉಡುಪಿ ಸಮೀಪ ನೀಡಿರುವ ಒಂದು ಕೋಟಿ ವೆಚ್ಚದ ಜಾಗದಲ್ಲಿ 20 ಮನೆಗಳನ್ನು ನಿರ್ಮಾಣ ಮಾಡಲಿದ್ದೇವೆ. ದೈವಾರಾಧನೆ, ನಾಟಕ, ಯಕ್ಷಗಾನದ ಕಲಾವಿದರಿಗೆ ಟ್ರಸ್ಟಿನಿಂದ ವಿಮಾ ಯೋಜನೆ, ನಾಲ್ಕು ಸಾವಿರ ಮಂದಿಗೆ ಯಕ್ಷ ಶಿಕ್ಷಣದ ಮೂಲಕ ಶಿಕ್ಷಣವನ್ನು ಟ್ರಸ್ಟ್ ನೀಡುತ್ತಿದ್ದು ಕಲಾವಿದರಿಗೆ ಸೇವೆ ಮಾಡುತ್ತಿರುವವರಿಗೆ ಜನರ ಆಶೀರ್ವಾದವಿರಲಿ.” ಎಂದು ಹೇಳಿದರು. ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳ ಸಂಚಾಲಕ…
ವಿದ್ಯಾಗಿರಿ : ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ವಿಭಾಗ ಹಾಗೂ ಗ್ರಂಥಾಲಯದ ಸಹಯೋಗದಲ್ಲಿ ‘ಪ್ರೊ. ನಾಗರಾಜ ಜವಳಿ ಅವರ ಗ್ರಂಥಗಳ ಸ್ವೀಕಾರ ಸಮಾರಂಭ’ವು ದಿನಾಂಕ 24-04-2024ರಂದು ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ “ನಮಗೆ ಸಮಯವಿಲ್ಲ ಎಂಬ ನೆಪ ಹೇಳದೆ ಓದಬೇಕು. ಓದುವ ಜೊತೆ ಇತರರು ಓದುವಂತೆ ಮಾಡಬೇಕು. ಪುಸ್ತಕಗಳು ಕೇವಲ ಅಲಂಕಾರಕ್ಕೆ ಇಡಲು ಅಲ್ಲ, ಅದು ಅಧ್ಯಯನಕ್ಕೆ. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಇಳಿಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಓದಿಸುವ ನಿಟ್ಟಿನಲ್ಲಿ ಗಮನ ಸೆಳೆಯುವ ಚಟುವಟಿಕೆಯನ್ನು ಮಾಡಬೇಕು. ನಾಗರಾಜ ಜವಳಿ ಅವರು ಸಂಗ್ರಹ ಮಾಡಿದ ಪುಸ್ತಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವುದೇ ವಿಚಾರದ ಪುಸ್ತಕವಾದರೂ, ಕಾಪಾಡುವುದು ಮುಖ್ಯ. ತುಳುನಾಡಿನಲ್ಲಿ 11 ವರ್ಷಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಅರ್ಥಪೂರ್ಣಗೊಳಿಸಿದ್ದರಲ್ಲಿ ಜವಳಿ ಹಾಗೂ ಅವರ ಸ್ನೇಹಿತರ ‘ದಾಸಜನ’ ಕೂಟ ಮುಖ್ಯ ಪಾತ್ರ ವಹಿಸಿದೆ” ಎಂದರು. ಪ್ರೊ. ನಾಗರಾಜ ಜವಳಿ ಅವರ ಪುತ್ರ…
ಕೋಟ : ರಸರಂಗ ಕೋಟ ಹಾಗೂ ಯಶಸ್ವೀ ಕಲಾವೃಂದ ಜಂಟಿಯಾಗಿ ಆಯೋಜಿಸಿಕೊಂಡಿರುವ ಶ್ವೇತಯಾನ 22 ಕಾರ್ಯಕ್ರಮವು ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಸಹಯೋಗದೊಂದಿಗೆ ದಿನಾಂಕ 23-04-2024ರಂದು ಜಾತ್ರಾ ಮಹೋತ್ಸವದ ಸಂದರ್ಭ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಷ್ಣುಮೂರ್ತಿ ಮೈಯ್ಯರು ಮಾತನಾಡಿ “ಬೇರೆ ಬೇರೆ ಕಡೆಗಳಲ್ಲಿ ಸಾಂಸ್ಕೃತಿಕ ಕಲಾ ಪ್ರಕಾರವನ್ನು ವಾರಕ್ಕೆರಡರಂತೆ ಪ್ರಸ್ತುತ ಪಡಿಸಿ ಸಮಾಜದಲ್ಲಿ ಮಕ್ಕಳಿಂದ ಹಿಡಿದು ವೃದ್ದರವರೆಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಕಾಯಕ ದೊಡ್ಡದು. ಒತ್ತಡದ ಮನಸ್ಸುಗಳಿಗೆ ರಸದೌತಣವನ್ನು ನೀಡುವ ಸಾಂಸ್ಕೃತಿಕ ವಾತಾವರಣ ಇಂದಿನ ಕಾಲಘಟ್ಟಕ್ಕೆ ಅತ್ಯಗತ್ಯ. ರಸರಂಗ, ಯಶಸ್ವೀ ಕಲಾವೃಂದ ಅವಿರತ ಪ್ರಯತ್ನದಿಂದ ಸಾಂಸ್ಕೃತಿಕವಾಗಿ ಗೆದ್ದಿದೆ” ಎಂದು ಅಭಿಪ್ರಾಯಪಟ್ಟರು. ರಸರಂಗದ ಸುಧಾ ಕದ್ರಿಕಟ್ಟು ಮಾತನಾಡಿ “ಹನುಮ ಜಯಂತಿಯ ಕಾರ್ಯಕ್ರಮವನ್ನು ತಾಳಮದ್ದಳೆಯಾಗಿ ಆಚರಿಸಬೇಕೆಂದಾಗ ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ನೆರವಾಗಿ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿಕೊಂಡರು. ಅಪಾರ ಜನಸ್ತೋಮದ ನಡುವೆ ಗೆದ್ದ ಕಾರ್ಯಕ್ರಮವಾಯಿತು” ಎಂದು ಹೇಳಿದರು. ರಾಜೇಂದ್ರ ಉರಾಳ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ…
ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಇಂಗ್ಲೀಷ್ ವಿಭಾಗ, ಕನ್ನಡ ಸಂಘ, ಯಕ್ಷಕಲಾ ಕೇಂದ್ರ ಹಾಗೂ ಎನ್.ಎಸ್. ಕಿಲ್ಲೆ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ‘ಇಂಗ್ಲೀಷ್ ಭಾಷಾ ದಿನ’ವನ್ನು ದಿನಾಂಕ 24-04-2024ರಂದು ಆಚರಿಸಿಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊರವರು ‘ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಮೂಲಗಳು ಬೇರೆಯಾಗಿದೆ. ಆದರೂ ಈ ಆಧುನಿಕ ಯುಗದಲ್ಲಿ ಒಂದು ಭಾಷೆಯ ಪದಗಳು ನಮಗರಿವಿಲ್ಲದಂತೆ ಇನ್ನೊಂದು ಭಾಷೆಯಲ್ಲಿ ಸೇರಿಕೊಂಡಿವೆ. ಈ ಭಾಷಾ ಸಂಬಂಧವು ಪ್ರತಿ ಭಾಷೆಯನ್ನು ಶ್ರೀಮಂತಗೊಳಿಸುವುದಲ್ಲದೆ, ಮಾತನಾಡುವವರ ನಡುವೆ ಸಂಭಾಷಣೆಯನ್ನು ಸುಗಮಗೊಳಿಸುತ್ತದೆ. ಮಾತುಗಾರಿಕೆಯೇ ಜೀವಾಳವಾಗಿರುವ ತಾಳಮದ್ದಳೆ ಒಂದು ಸುಂದರ ಕಲಾಪ್ರಕಾರವಾಗಿದೆ. ಇಲ್ಲಿ ಕಲಾವಿದರ ಭಾಷಾ ಜ್ಞಾನಕ್ಕೆ ಮಹತ್ವವಿದೆ. ಇಂದಿನ ದ್ವಿಭಾಷಾ ಯಕ್ಷಗಾನ ತಾಳಮದ್ದಳೆಯಲ್ಲಿ ಕಲಾವಿದರು ಎರಡು ಭಾಷೆಗಳಲ್ಲಿ ನಿರರ್ಗಳವಾಗಿ ಸಂಭಾಷಿಸಬೇಕಾಗಿದೆ. ದ್ವಿಬಾಷಾ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸುವ ನೂತನ ಪ್ರಯೋಗದ ಮೂಲಕ ಇಂಗ್ಲೀಷ್ ಭಾಷಾ ದಿನಾಚರಣೆಯು ಅರ್ಥಪೂರ್ಣವಾಗಿ ನಡೆಯುತ್ತಿದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ…
ಬೆಂಗಳೂರು : ಹಿರಿಯ ಪತ್ರಕರ್ತ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ದೇವ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ದಿನಾಂಕ 24-04-2024ರಂದು ಬೆಳಗ್ಗೆ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಹುಟ್ಟೂರು ಚೌಡದೇವನಹಳ್ಳಿಯಲ್ಲಿ ಸಂಜೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿತು. ಮೂಲತಃ ಕೋಲಾರ ಜಿಲ್ಲೆಯ ಚೌಡದೇವನಹಳ್ಳಿಯವರಾದ ಅವರು 80 ದಶಕದಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ್ದರು. ಪ್ರಜಾವಾಣಿ, ತಾಯಿನಾಡು, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸಲ್ಲಿಸಿದ್ದ ಸೇವೆ ಅನನ್ಯವಾದದ್ದು. ಅವರು ಸೂರ್ಯೋದಯ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದರು. ಪತ್ರಕರ್ತರ ಸಂಘಟನೆಯಲ್ಲಿ ಅವರಿಗಿದ್ದ ಬದ್ಧತೆ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಕರ್ನಾಟಕ ಪತ್ರಕರ್ತರ ಅಕಾಡೆಮಿ (ಈಗಿನ ಮಾಧ್ಯಮ ಅಕಾಡೆಮಿ)ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದರು.
ಭಯವಿರಲು ಬಾಳಿಗದು ಭದ್ರತೆಯ ಸಂಕೇತ ಜಯವ ಸಾಧಿಸುವಲ್ಲಿ ಊರುಗೋಲು ನಯವಿನಯ ಭಕ್ತಿಯಲಿ ಮನವಿರಿಸುವಂಥವಗೆ ಹಯವೇಗ ಯಶಕಿಹುದು ಧೀರ ತಮ್ಮ ll 180 ll ಗೋಗೀತೆ, ಮುಕ್ತಕ ಸಂಕಲನಗಳು, ತುಷಾರ ಬಿಂದುಗಳ ಮೂಲಕ ಪರಿಚಿತರಾದ ಡಾ. ಸುರೇಶ ನೆಗಳಗುಳಿ ಅವರು ಈ ಧೀರತಮ್ಮನ ಕಬ್ಬ ಎಂಬ 222 ಮುಕ್ತಕಗಳ (2021) ಮೂಲಕ ಸದಾಚಾರ ಸಂಪನ್ನತೆಯ ಸ್ವರೂಪದರ್ಶನ ಮಾಡಿಕೊಟ್ಟಿದ್ದಾರೆ. ಭಯವೆಂಬುದು ಹೇಡಿತನದ ಲಕ್ಷಣ ಎಂದು ಮಹಾಕವಿಗಳು ಕೂಡ ಹೇಳಿರುವಾಗ ಆ ಪದದ ಸಾಂಸ್ಕೃತಿಕ ಮುಖವನ್ನು ಮೇಲಿನ ಮುಕ್ತಕದಲ್ಲಿ ಪರಿಚಯಿಸುತ್ತ, ಭಯ ಭದ್ರತೆಯನ್ನು ನಿರ್ಮಿಸುತ್ತದೆ. ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ, ಜೊತೆಗೆ ನಯವಿನಯವನ್ನೂ ಬೆರೆಸಿಕೊಂಡರೆ ಯಶಸ್ಸಿನ ಹಾದಿ ಸುಗಮವಾಗಿಸುತ್ತದೆ ಎನ್ನುತ್ತಾರೆ. ಧೀರತಮ್ಮನ ಕಗ್ಗ ಕವಿಯ ತಾತ್ವಿಕ ನಿಲುವು, ವೃತ್ತಿ ಪ್ರವೃತ್ತಿಗಳು ಬೆರೆತ ಕವಿಯೊಬ್ಬನ ಅಂತರಂಗವನ್ನು ಪ್ರತಿನಿಧಿಸುತ್ತದೆ. ನೆಗಳಗುಳಿ ಸಾವಿರಾರು ವಿದ್ಯಾರ್ಥಿವೈದ್ಯ ಶಿಷ್ಯರಿಗೆ ಮಾರ್ಗದರ್ಶಕನಾಗಿ, ಅಲೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಗಳಲ್ಲಿ ಪ್ರಾವೀಣ್ಯ ಹೊಂದಿ ಅನೇಕ ರೋಗಿಗಳಿಗೆ ಆರೋಗ್ಯದ ಭಾಗ್ಯ ಹಂಚಿದವರು. ಅದಕ್ಕೇ ತಾನು ಕಲಿತ ಹಾಗೂ ಬಳಸಿದ…
ಕುಶಾಲನಗರ : ಕುಶಾಲನಗರದ ರಥಬೀದಿಯಲ್ಲಿರುವ ದ್ರಾವಿಡ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ (ರಿ.) ಇದರ ವಾರ್ಷಿಕ ‘ಶ್ರೀ ರಾಮ ನವಮಿ’ ಕಾರ್ಯಕ್ರಮದ ಅಂಗವಾಗಿ ನಡೆದ ‘ರಾಮೋತ್ಸವ’ದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ಪಾರ್ತಿಸುಬ್ಬ ವಿರಚಿತ ‘ಪಾದುಕಾ ಪ್ರದಾನ’ ತಾಳಮದ್ದಳೆಯು ದಿನಾಂಕ 23-04-2024ರಂದು ನಡೆಯಿತು. ಹಿಮ್ಮೇಳದಲ್ಲಿ ಸುಬ್ರಾಯ ಸಂಪಾಜೆ, ಲಕ್ಷ್ಮೀಶ ಬೇಂಗ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಭರತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ರಾಮ), ಹರಿಣಾಕ್ಷಿ ಜೆ. ಶೆಟ್ಟಿ (ವಸಿಷ್ಠ ಮತ್ತು ಲಕ್ಷ್ಮಣ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ರಾಜಶೇಖರ್ ವಂದಿಸಿದರು. ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಸ೦ಯೋಜಿಸಿದ್ದರು.