Author: roovari

ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ನೇತೃತ್ವದಲ್ಲಿ “ಸಿನ್ಸ್ 1999 ಶ್ವೇತಯಾನ-83 ” ಕಾರ್ಯಕ್ರಮದಡಿಯಲ್ಲಿ ‘ಅರ್ಥಾಂಕುರ-10’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಅರ್ಥದಾರಿಯಾದ ವಾಸುದೇವ ರಂಗ ಭಟ್ ಮಾತನಾಡಿ “ಯಕ್ಷಗಾನ ಅರ್ಥಧಾರಿಗಳನ್ನು ರಂಗದಲ್ಲಿ ಬೆಳೆಸುವ ಪರಿಪಾಠ ಹಿಂದಿನಿಂದಲೂ ಇತ್ತು. ಆದರೆ ಇತ್ತೀಚೆಗೆ ತೀರಾ ವಿರಳವಾಗಿದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ವಾರಕ್ಕೋ, ತಿಂಗಳಿಗೊಂದರಂತೋ ಆಯೋಜಿಸಿದ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದದ್ದು. ಅನೇಕಾನೇಕ ಅರ್ಥದಾರಿಗಳು ಈ ರಂಗದಲ್ಲಿ ಮೇಲೇಳಲಿ, ಇನ್ನೂ ಪ್ರಸಿದ್ಧ ಅರ್ಥದಾರಿಗಳೂ ಈ ಕೂಟದಲ್ಲಿ ಭಾಗವಹಿಸಿ, ಉದಯೋನ್ಮುಖ ಕಲಾವಿದರೊಡನೆ ಹಿರಿಯ ಕಲಾವಿದರ ರಂಗ ತಾಲೀಮು ನಡೆಯಲಿ.” ಎಂದು ಹಾರೈಸಿದರು. ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಸತೀಶ್ ಶೆಟ್ಟಿ ಮೂಡುಬಗೆ, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ಪಾದುಕಾ ಪ್ರದಾನ’…

Read More

ಮೈಸೂರು : ಸಮತೆಂತೋ ಮೈಸೂರು ಮತ್ತು ನಿರಂತರ ಫೌಂಡೇಶನ್ (ರಿ.) ಮೈಸೂರು ಇವರ ಸಹಕಾರದಲ್ಲಿ ಡಾ. ನ. ರತ್ನ ಇವರ ಹೆಸರಿನಲ್ಲಿ ಶ್ರೀ ತರ್ನೀವ್ ಮತ್ತು ಎನ್. ಎಸ್. ಆನಂದ್ (ಬಾಬು) ಸ್ಥಾಪಿತ ‘ರಂಗರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 12 ಡಿಸೆಂಬರ್ 2024ರಂದು ಸಂಜೆ 6-00 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ನಡೆಯಲಿದೆ. ಸಮತೆಂತೋ ತಂಡದಿಂದ ರಂಗ ಗೀತೆಗಳ ಬಳಿಕ ನಟ ನಿರ್ದೇಶಕ ಸಂಘಟಕ ಶ್ರೀ ಹುಲಗಪ್ಪ ಕಟ್ಟಿಮನಿ ಇವರಿಗೆ ‘ರಂಗರತ್ನ ಪ್ರಶಸ್ತಿ’ ಪ್ರದಾನಮಾಡಲಾಗುವುದು. ಈ ಸಮಾರಂಭದಲಿ ಶ್ರೀಮತಿ ಲತ ರತ್ನ, ಹಿರಿಯ ರಂಗಕರ್ಮಿ ಪ್ರೊ. ಹೆಚ್.ಎಸ್. ಉಮೇಶ್, ಬೆಲ್ಲಿ ಮಾಸ್ಟರ್ ಶ್ರೀ ತರ್ನೀವ್ ಮತ್ತು ಅಭಿಯಂತರರು ಶ್ರೀ ಎನ್.ಎಸ್. ಆನಂದ್ ಇವರುಗಳು ಭಾಗವಹಿಸಲಿದ್ದಾರೆ.

Read More

ಉಡುಪಿ : ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್ ಅಭಿನಂದನ ಸಮಿತಿ ಉಡುಪಿ ಇದರ ವತಿಯಿಂದ ಪ್ರೊ. ಶಂಕರ್ ಅಭಿನಂದನ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2024ರಂದು ಅಪರಾಹ್ನ 3-30 ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿಗಳು, ಪುಸ್ತಕ ಬಿಡುಗಡೆ ಮತ್ತು ಅಭಿನಂದನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 4-00 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಶಂಕರ್ ಅಭಿನಂದನ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಉಡುಪಿ ವಿಶ್ವನಾಥ್ ಶೆಣೈ ಇವರು ವಹಿಸಲಿದ್ದಾರೆ. 4-35ರಿಂದ ಪ್ರೊ. ಶಂಕರ್ ಜಾದೂ ಜಗತ್ತು ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಶ್ರೀ ಪ. ರಾಮಕೃಷ್ಣ ಶಾಸ್ತ್ರಿ ಇವರ ‘ಪ್ರೊ. ಶಂಕರ್ ಜಾದೂ ಜರ್ನಿ’ ಎಂಬ ಕೃತಿಯನ್ನು ಬೆಂಗಳೂರು ಯಕ್ಷಗಾನ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪ್ರೊ. ಎಂ.ಎಲ್. ಸಾಮಗ ಇವರು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ‘ನನ್ನಪ್ಪ . . .’ ತೇಜಸ್ವಿ…

Read More

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ದಿನಾಂಕ 10 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ‘ಆಳ್ವಾಸ್ ವಿರಾಸತ್ 2024’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 10 ಡಿಸೆಂಬರ್ 2024ರಂದು ಸಂಜೆ 5-30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿರುವರು. ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಇವರು ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧಿಯಾ, ಬಿ.ಎಲ್. ಶಂಕರ್ ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್, ಎಂ.ಜಿ.ಆರ್. ಗ್ರೂಪ್…

Read More

ಮಲಯಾಳಂ ಭಾಷೆ ಮತ್ತು ಸಾಹಿತ್ಯವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಷ್ಠ ಸಾಹಿತಿಗಳ ಪೈಕಿ ತಗಳಿ ಶಿವಶಂಕರ ಪಿಳ್ಳೆಯವರೂ ಒಬ್ಬರು. ಕತೆ, ಕಾದಂಬರಿ, ನಾಟಕ, ಆತ್ಮಕತೆ, ಜೀವನಚರಿತ್ರೆ ಮತ್ತು ಪ್ರವಾಸ ಕಥನಗಳ ಮೂಲಕ ಕೇರಳದಲ್ಲಿ ಮನೆಮಾತಾಗಿರುವ ಅವರ ಕೃತಿಗಳು ಭಾರತೀಯ ಮತ್ತು ಪಾಶ್ಚಾತ್ಯ ಭಾಷೆಗಳಿಗೆ ಅನುವಾದಗೊಂಡಿವೆ. ಹಿಂದುಳಿದವರು, ಕಡುಬಡವರು, ಶ್ರಮಜೀವಿಗಳು, ರೈತರು, ಮೀನುಗಾರರು ಮತ್ತು ನೊಂದವರ ಬದುಕಿಗೆ ಅಕ್ಷರಗಳ ರೂಪವನ್ನು ನೀಡಿದ ಕೃತಿಗಳ ಪೈಕಿ ಅವರ ‘ಚೆಮ್ಮೀನು’ ಎಂಬ ಕಾದಂಬರಿಯೂ ಒಂದು. ಇದನ್ನು ‘ಕೆಂಪು ಮೀನು’ ಎಂಬ ಹೆಸರಿನಲ್ಲಿ ಅನುವಾದಿಸಿದ್ದ ನಾ. ಕಸ್ತೂರಿಯವರ ಅನುವಾದದ ಲೋಪದೋಷಗಳು ಈ ಕಾದಂಬರಿಯನ್ನು ಮತ್ತೊಮ್ಮೆ ಅನುವಾದಿಸಲು ಹಂಪಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥ ಮೋಹನ ಕುಂಟಾರ್ ಅವರಿಗೆ ಪ್ರೇರಣೆಯನ್ನು ನೀಡಿವೆ. ಮಲಯಾಳಂನಲ್ಲಿ ಚೆಮ್ಮೀನ್ ಎಂದರೆ ಸಿಗಡಿ ಎಂದರ್ಥವೇ ಹೊರತು ಕೆಂಪು ಮೀನು ಎಂದಲ್ಲ. ಆದ್ದರಿಂದ ಮೋಹನ ಕುಂಟಾರ್ ಅವರು ಶೀರ್ಷಿಕೆಯ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರಿಗೂ ಪರಿಚಿತವಾದ ‘ಚೆಮ್ಮೀನು’ ಎಂಬ ಪದವನ್ನು ಬಳಸಿಕೊಂಡಿದ್ದಾರೆ. ನಾ. ಕಸ್ತೂರಿಯವರ…

Read More

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಾಹೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಇದರ ಆಶ್ರಯದಲ್ಲಿ ಬಾರಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಉಡುಪಿ ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 14 ಡಿಸೆಂಬರ್ 2024ರ ಶನಿವಾರದಂದು ಬೆಳಿಗ್ಗೆ ಗಂಟೆ 9-00 ಗಂಟೆಯಿಂದ ಉಡುಪಿಯ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ನಡೆಸಲಾಗುವುದು. ಆಸಕ್ತರು ಶಾಲಾ ಗುರುತುಚೀಟಿಯೊಂದಿಗೆ ಬೆಳಿಗ್ಗೆ 9-00 ಗಂಟೆಗೆ ಸ್ಪರ್ಧೆಯಲ್ಲಿ ಭಾಗವಹಿಸುವುದು. ಪ್ರವೇಶ ಶುಲ್ಕವಿಲ್ಲ, ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ. ಸ್ಪರ್ಧಾ ವಿಷಯ : 1ರಿಂದ 4ನೇ ತರಗತಿ : ಐಚ್ಛಿಕ 5ರಿಂದ 7ನೇ ತರಗತಿ : ಐಚ್ಛಿಕ 8ರಿಂದ 10ನೇ ತರಗತಿ : ಮಕ್ಕಳ ದಿನಾಚರಣೆ ಅಥವಾ ಸಂತೆ ಪಿ.ಯು.ಸಿ. ವಿದ್ಯಾರ್ಥಿಗಳಿಗೆ : ಕನ್ನಡ ಜ್ಞಾನಪೀಠ ಪುರಸ್ಕೃತರು ಅಥವಾ ಪರಿಸರ ಸಂರಕ್ಷಣೆ ಪದವಿ ವಿದ್ಯಾರ್ಥಿಗಳಿಗೆ : ಪ್ಲಾಸ್ಟಿಕ್…

Read More

ಮಡಿಕೇರಿ : ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ದಿನಾಂಕ 17 ಡಿಸೆಂಬರ್ 2024ರಂದು ನಡೆಯಲಿದೆ ಎಂದು ಮೂರು ನಾಡಿನ ತಕ್ಕಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ. ಈಚೂರುವಿನ ದವಸ ಭಂಡಾರದ ಸಭಾಂಗಣದಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಈ ಮೂರು ನಾಡುಗಳಿಗೆ ಸೇರಿದ ಇತಿಹಾಸ ಪ್ರಸಿದ್ಧದ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಕೈಮುಡಿಕೆ ಕೋಲ್ ಮಂದ್ ನಡೆಸಲು ಒಮ್ಮತದ ತೀರ್ಮಾನ ಕೈಕೊಳ್ಳಲಾಯಿತು. ನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿಯೂ ಕೈಮುಡಿಕೆ ಪುತ್ತರಿ ಕೋಲ್ ಮಂದನ್ನು ವಿಜೃಂಭಣೆಯಿಂದ ಸಾರ್ವಜನಿಕವಾಗಿ ಆಚರಿಸುವಂತೆ ಹಾಗೂ ವಿವಿಧ ಕಾರ್ಯಕ್ರಮ ನಡೆಸುವಂತೆ ತೀರ್ಮಾನಿಸಲು ಸಭೆ ನಡೆಸುತ್ತಿರುವುದಾಗಿ ಹೇಳಿದರು. ಅಂದು ಬೆಳಿಗ್ಗೆ 10-00 ಗಂಟೆಗೆ ಮೂರು ನಾಡಿನವರು ಮೂರು ಕಡೆಯಿಂದ ಓಡಿಬಂದು ಮಂದ್ ಮಧ್ಯೆದಲ್ಲಿರುವ ಅರಳಿ ಮರಕ್ಕೆ ಕೋಲು ಹೊಡೆಯುವ ಮೂಲಕ ಮಂದ್ ಹಿಡಿಯುವ…

Read More

ಸೊರಬ : ಹಳೇಸೊರಬದ ಅಮರ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಮರ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ದಿನಾಂಕ 28 ನವೆಂಬರ್ 2024ರಂದು ‘ಸಾಹಿತ್ಯ ರಚನಾ ಕಮ್ಮಟ’ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಇವರು ಮಾತನಾಡಿ “ಮಕ್ಕಳಿಗೆ ಶಾಲಾ ಕಲಿಕೆ ಹಂತದಲ್ಲಿಯೇ ಸಾಹಿತ್ಯಾಸಕ್ತಿ ಮೂಡಿಸಬೇಕು ಹಾಗೂ ಸ್ಪಷ್ಟವಾಗಿ ಓದುವ ಬರೆಯುವ ಮತ್ತು ಮಾತನಾಡುವುದನ್ನು ರೂಢಿಸಬೇಕು. ಇಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಸತತ ಪ್ರಯತ್ನದ ಭಾಗವಾಗಿ ಸಾಹಿತ್ಯ ಕಮ್ಮಟ ನಡೆಸಲಾಗುತ್ತಿದೆ. ಕನ್ನಡವೇ ಪರಿಸರದ ಭಾಷೆಯಾಗಿದ್ದು, ಮಕ್ಕಳಿಗಾಗಿ ಶಾಲೆಗಳಲ್ಲಿ ಕಮ್ಮಟವನ್ನು ಏರ್ಪಡಿಸಲಾಗುತ್ತಿದೆ. ಬರೆಯುವ ಕಲೆ ಉತ್ತಮವಾಗಬೇಕೆಂದರೆ ಹೆಚ್ಚು ಓದುವ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಕನ್ನಡಕ್ಕೆ ಸುಮಾರು 2500 ವರ್ಷಗಳ ಇತಿಹಾಸ ಇರುವ ಹಿನ್ನೆಲೆಯಲ್ಲಿಯೇ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ಭಾಷಾ ಕಲಿಕೆ ಅತ್ಯಂತ ಜವಾಬ್ದಾರಿಯುತವಾಗಿದ್ದು,…

Read More

ಮಂಗಳೂರು : ಮಂಗಳೂರಿನ ಸನಾತನ ನಾಟ್ಯಾಲಯ ಹಾಗೂ ನೃತ್ಯಾಂಗನ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ ವೈಭವ್ ಆರೆಕಾರ್ ಹಾಗೂ ಸಂಖ್ಯಾ ಡಾನ್ಸ್ ಕಂಪೆನಿ ಇವರಿಂದ ‘ನಿಬಂಧನ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವೈಭವ್ ಆರೆಕಾರ್, ಈಶಾ ಪಿಂಗಳೆ, ಪೂರ್ವಾ ಸಾರಸ್ವತ್, ರಾಧಿಕಾ ಕರಂಡಿಕಾರ್, ಮೃಣಾಲ್ ಜೋಶಿ, ಅದಿತಿ ಪಾರಂಜಪೆ, ಶ್ರುತಿ ರಾನಡೆ ಹಾಗೂ ಅನು ಕ್ರಿಸ್ಟಿ ಪಿಳ್ಳೈ ಇವರುಗಳು ಭರತನಾಟ್ಯ ನೃತ್ಯ ಪ್ರದರ್ಶನ ನೀಡಲಿದ್ದು, ಇವರಿಗೆ ಹಾಡುಗಾರಿಕೆಯಲ್ಲಿ ಕಾರ್ತಿಕ್ ಹೆಬ್ಬಾರ್, ನಟುವಾಂಗದಲ್ಲಿ ಕಳೀಸ್ವರಂ ಪಿಳ್ಳೈ, ಮೃದಂಗದಲ್ಲಿ ದಕ್ಷಿಣಾಮೂರ್ತಿ ಪಿಳ್ಳೈ ಹಾಗೂ ಕೊಳಲಿನಲ್ಲಿ ಜಯರಾಂ ಕಿಕ್ಕೇರಿ ಸಹಕರಿಸಲಿದ್ದಾರೆ. ಕಾರ್ಯಕ್ರಮದ ಬೆಳಕಿನ ವಿನ್ಯಾಸ ಸುಶಾಂತ್ ಜಾದವ್ ಇವರದ್ದು. ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮದ ಟಿಕೆಟ್ ಗಳಿಗಾಗಿ 98451 69506 ಅಥವಾ 98450 91838 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Read More

ಕಾರ್ಕಳ: ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 06 ಡಿಸೆಂಬರ್ 2024ರ ಶುಕ್ರವಾರದಂದು ಶಿರ್ಲಾಲು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಜಾನಪದ ವಿದ್ವಾಂಸ ಪ್ರೊ. ಕೆ. ಗುಣಪಾಲ ಕಡಂಬ “ಕನ್ನಡ ಸಾಹಿತ್ಯದ  ಬೆಳವಣಿಗೆ ಮತ್ತು ಪರಂಪರೆಯಲ್ಲಿ ಜನಪದರ ಕೊಡುಗೆ ಬಹಳ ಮುಖ್ಯವಾದುದು. ಬದುಕು ಮೌಲ್ಯದಿಂದ ಕೂಡಿದ್ದರೆ ಅದೇ ದೊಡ್ಡ ಸಾಹಿತ್ಯ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ಮುಂದಿನ ಪೀಳಿಗೆಗೆ ಕಟ್ಟಿ ಕೊಡುವುದೇ ಸಾಹಿತ್ಯದ ಆಶಯವಾಗಿದೆ. ನೊಂದವರಿಗೆ ನೆನಪಾಗುವ, ನೆರವಾಗುವ ಹಾಗೂ ಪ್ರೀತಿಸುವ ಹೃದಯಕ್ಕೆ ಉಸಿರಾಗುವ ವಿಚಾರಗಳು ಸಾಹಿತ್ಯದಲ್ಲಿ ಬರಬೇಕು.” ಎಂದು ಅಭಿಪ್ರಾಯಪಟ್ಟರು. ಸಮ್ಮೇಳನವನ್ನು ಉದ್ಘಾಟಿಸಿದ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಮಾತನಾಡಿ “ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಸಾಹಿತ್ಯ ಸಮ್ಮೇಳನದ ಮೂಲಕ ನಡೆಯುತ್ತಿದೆ.” ಎಂದರು. ಈಸಂದರ್ಭದಲ್ಲಿ ಆ‌ರ್. ರಮೇಶ್ ಪ್ರಭು ಇವರ ‘ಹೊಂಗನಸು’, ಎಚ್. ವಿಧಾತ್ರಿ ರವಿಶಂಕರ್ ಇವರ ‘ನಕ್ಷತ್ರ ಪಟಲ’ ಹಾಗೂ  ಶೈಲಜಾ…

Read More