Author: roovari

ನಾಟಕ :  Hang-On ಹ್ಯಾಂಗ್ ಆನ್ ವಿನ್ಯಾಸ, ನಿರ್ದೇಶನ : ಕ್ಲ್ಯಾನ್ವಿನ್ ಫೆರ್ನಾಂಡೀಸ್ ಸಂಗೀತ : ಬಿಂದು, ಜೋಯೆಲ್, ಸುಪ್ರೀತ್, ಕೆವಿನ್ ಮತ್ತು ಮೇಘನ ತಾಂತ್ರಿಕ ಸಹಾಯ : ಅಸ್ತಿತ್ವ (ರಿ.) ಮಂಗಳೂರು ಬೆಳಕು ವಿನ್ಯಾಸ ಹಾಗೂ ನಿರ್ವಹಣೆ : ಕ್ರಿಸ್ಟಿ ಪ್ರಸ್ತುತಿ : ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು Passion & Profession ಪ್ರತಿಯೋಬ್ಬನ ಜೀವನದಲ್ಲಿ ಎದುರಾಗುವ ತುಮಲವಿದು. ತಾನು ಗಾಢವಾಗಿ ಪ್ರೀತಿಸುವ ಹವ್ಯಾಸ ಒಂದೆಡೆ – ಬೇರೆ ಬೇರೆ ಕಾರಣಗಳಿಂದ ಇನ್ನೊಂದು ಕೆಲಸವನ್ನು ವೃತ್ತಿಯಾಗಿ ಸ್ವೀಕರಿಸಬೇಕಾದ ಅನಿವಾರ್ಯತೆ ಮತ್ತೊಂದೆಡೆ. ಈ ಸಂಘರ್ಷ ಎಷ್ಟೋ ಸಾರಿ ಮಾನಸಿಕ ಅಸಮತೋಲನಕ್ಕೆ ಕಾರಣವಾಗಿ ಖಿನ್ನತೆ ಉಂಟುಮಾಡುತ್ತೆ. ಖಿನ್ನತೆ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೂ ದಾರಿ ಮಾಡಿಕೊಡುತ್ತೆ. ಯುವಕನೊಬ್ಬನ ಮನಸ್ಸಿನ ತುಮಲವನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತೆರೆದಿಟ್ಟ ನಾಟಕ ‘ಹ್ಯಾಂಗ್ ಆನ್’. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ವೃತ್ತಿಪರ ಕಲಾವಿದರನ್ನೂ ಮೀರಿಸಿ ಅಭಿಯಯಿಸಿದ, ಕನ್ನಡ -…

Read More

ಪುತ್ತೂರು : ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ (96) ದಿನಾಂಕ 31-10-2023ರಂದು ನಿಧನ ಹೊಂದಿದ್ದಾರೆ. ಬಾಲ್ಯದಲ್ಲಿ ಶಾಲಾ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತ ಪಾಠವನ್ನು ಕಲಿತಿದ್ದರು. ಪ್ರಸಿದ್ಧ ಪದ್ಯಾಣ ಮನೆತನದವರಾಗಿರುವ ಇವರು ಬಾಲ್ಯದಲ್ಲೇ ತಾಳಮದ್ದಳೆಯಲ್ಲಿ ಆಸಕ್ತಿ ಹೊಂದಿದ್ದರು. ಕುರಿಯ ವಿಠಲ ಶಾಸ್ತ್ರಿಯವರ ವೇಷದ ಅಂದಕ್ಕೆ ಮರುಹೋಗಿ ತಾನೂ ಕಲಾವಿದನಾಗಬೇಕೆಂಬ ಆಶಯ ಹೊಂದಿದ್ದರು. ಅಜ್ಜ ಸುಬ್ರಾಯ ಭಟ್ಟರ ಮೂಲಕ ಕುರಿಯರ ನೇತೃತ್ವದ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಬದುಕು ಆರಂಭಿಸಿದರು. ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಟ ಲಭ್ಯವಾಯಿತು. ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದರು. ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ವೆನಿಸಿಕೊಳ್ಳುತ್ತಿತ್ತು. ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೆ ಹೆಸರಾಗಿದ್ದರು. ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊಂದಿಗೆ ಒಂದು ದಶಕಕ್ಕಿಂತಲೂ ಅಧಿಕ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ರಂಗ ಚಿನ್ನಾರಿ ಸಂಗೀತ ಘಟಕವಾದ ಸ್ವರ ಚಿನ್ನಾರಿ ಏರ್ಪಡಿಸಿದ ಪ್ರಸಿದ್ಧ ಸಂಗೀತ ನಿರ್ದೇಶಕ, ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾಂಡೋಲಿನ್ ವಾದಕ, ಸಂಗೀತ ನಿರ್ದೇಶಕ ಎನ್.ಎಸ್.ಪ್ರಸಾದ್ ನೇತೃತ್ವದ ಸ್ವರ ಸಂಗೀತ ಶಿಬಿರವಾದ ‘ಸ್ವರ ಸಂಚಾರ’ ಕಾರ್ಯಕ್ರಮ ದಿನಾಂಕ 28.10.2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗಾನ ಪ್ರವೀಣ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮಾತನಾಡುತ್ತಾ “ಸಂಗೀತವು ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಹಿಂದೆಲ್ಲ ರಾಜಾಶ್ರಯದಲ್ಲಿ ಸಂಗೀತ ಬೆಳೆದು ಬಂದಿತ್ತು. ಇಂದು ರಾಜಾಶ್ರಯವಿಲ್ಲದಿದ್ದರೂ ಸಂಗೀತ ಪ್ರೇಮಿಗಳ ಹಾಗೂ ಕೆಲವು ಸಂಘಟನೆಗಳ ಮೂಲಕ ಸಂಗೀತ ಬೆಳೆದು ಬರುತ್ತಿದೆ. ಅಂತಹ ಕಾರ್ಯದಲ್ಲಿ ರಂಗಚಿನ್ನಾರಿಯ ಅಂಗವಾಗಿರುವ ‘ಸರ ಚಿನ್ನಾರಿ’ ಮಹತ್ವದ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವರ ಚಿನ್ನಾರಿ ಗೌರವಧ್ಯಕ್ಷ ಶ್ರೀ ಕೃಷ್ಣಯ್ಯ ಅನಂತಪುರ ಅವರು ಮಾತನಾಡಿ “ಸಂಗೀತ ಸಾಗರ.…

Read More

ಕಾಸರಗೋಡು : ರಂಗಚಿನ್ನಾರಿಯ ಅಂಗ ಸಂಸ್ಥೆ ನಾರಿಚಿನ್ನಾರಿಯ 10ನೆಯ ಸರಣಿ ಕಾರ್ಯಕ್ರಮ ‘ಶರದ್ವಿಲಾಸ’ವು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 29-10-2023ರಂದು ಸಾಧಕರಿಗೆ ಸನ್ಮಾನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪ್ರಸ್ತುತಿಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಖ್ಯಾತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಇವರು ದೀಪ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತೃ ಋಣವನ್ನು ತೀರಿಸಲು ಅಸಾಧ್ಯ ಎಂದು ಹೇಳಿ ಮಾತೃತ್ವದ ಮಹತ್ವವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದರು. ಮಾಬ೯ಲ್ ವ್ಯಾಪಾರದಲ್ಲಿ ಯಶಸ್ವೀ ಮಹಿಳಾ ಉದ್ಯಮಿಯಾಗಿ ಹೆಸರು ಪಡೆದ ಬಿಂದು ದಾಸ್ ಹಾಗೂ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಅವರನ್ನು ಈ ಸಂದರ್ಭದಲ್ಲಿ ಹಾರ, ಫಲಪುಷ್ಪ ಮತ್ತು ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಸರ್ವಮಂಗಳಾಜಯ್ ಪುಂಚಿತ್ತಾಯ ಹಾಗೂ ವನಜಾಕ್ಷಿ ಚಂಬ್ರಕಾನ ಇವರು ಸನ್ಮಾನಿತರ ಸಾಧನೆಗಳನ್ನು ಪರಿಚಯಿಸಿದರು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಬಿಂದು ದಾಸ್ ಅವರು ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆಯನ್ನು ಅಪಿ೯ಸಿದರು. ಮೀನಾಕ್ಷಿ ಬೊಡ್ಡೋಡಿಯವರು ಅಮ್ಮನ ಕುರಿತಾದ ಭಾವಪೂರ್ಣ ಕವನವನ್ನು ವಾಚಿಸುವುದರೊಂದಿಗೆ…

Read More

ಮಂಗಳೂರು : ಕುಡ್ಲ ತುಳು ಕೂಟ (ರಿ) ಇದರ ಬಂಗಾರ್ ಪರ್ಬ ಸರಣಿ ವೈಭವ ಕಾರ್ಯಕ್ರಮದ 8ನೇ ಕಾರ್ಯಕ್ರಮ ‘ಮಾರ್ನೆಮಿದ ಮಿನದನ’ ದಿನಾಂಕ 29-10-2023 ರಂದು ಟೆಲಿಕಾಂ ರಸ್ತೆಯಲ್ಲಿರುವ ಶ್ರೀದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಣ್ಣೂರಿನ ಮಾಜಿ ಮ.ನಾ.ಪ. ಸದಸ್ಯ ಮೋಹನ್ ಪಡೀಲ್ ಇವರು “ತುಳು ಕೂಟ ತುಳುವಿಗಾಗಿ ನಡೆಸುವ ಹೋರಾಟಕ್ಕೆ ತುಳುವರಾದ ನಾವು ಬೆಂಬಲ ನೀಡಬೇಕು. ಅದು ನಮ್ಮ ಕರ್ತವ್ಯವೂ ಹೌದು. ತುಳು ಭಾಷಾ ಬೆಳವಣಿಗೆಗೆ ಶ್ರಮಿಸುವವರು ಇರುವವರಿಂದಲೇ ಇಂದು ಭಾಷೆ – ಭಾಷಿಗರು ಎಲ್ಲೆಡೆ ಇದ್ದಾರೆ. ನಾವೆಲ್ಲಾ ಇವರ ಜೊತೆ ಹೆಜ್ಜೆ ಹಾಕೋಣ” ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಡ್ಲ ತುಳು ಕೂಟದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ” ತುಳು ಭಾಷೆಯ ಸೌಂದರ್ಯ ವೃದ್ಧಿಸಲು ಮನೆಯ ಮಾತೆಯರು ಶ್ರಮಿಸಬೇಕು. ಇಂದು ವಿಶ್ವದಲ್ಲೇ ತುಳುವಿಗೆ ಮಾನ್ಯತೆ ಇದೆ. ತುಳುವರು ಎಲ್ಲೆಡೆ ಪಸರಿಸಿಕೊಂಡಿದ್ದಾರೆ. ಆದರೆ ನಾವು ನಮ್ಮ ಮಕ್ಕಳಿಗೆ ಆಂಗ್ಲ ವ್ಯಾಮೋಹವನ್ನೇ ಹಚ್ಚುವ…

Read More

ಮಂಗಳೂರು : ವಿಧಾನ ಪರಿಷತ್ ಮಾಜಿ ಶಾಸಕರಾದ ಐವನ್‌ ಡಿ’ಸೋಜಾ ಅವರ ನೇತೃತ್ವದಲ್ಲಿ 9ನೇ ವರ್ಷದ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಾಚರಣೆ 2023 ಪ್ರಯುಕ್ತ ‘ಭಾವೈಕ್ಯತೆಯ ಸಂಗಮ’ ದಿನಾಂಕ 12-11-2023ರಂದು ಸಂಜೆ 4 ಗಂಟೆಯಿಂದ ಕದ್ರಿ ಪಾರ್ಕ್‌ನ ಸುವರ್ಣ ಕಲಾಮಂಟಪದ ವಠಾರದಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಕುಣಿತ ಭಜನೆ ಸ್ಪರ್ಧೆ ಮತ್ತು ಗೂಡುದೀಪ ಸ್ಪರ್ಧೆಗಳನ್ನು ಸಾರ್ವಜನಿರಿಗೆ ಆಯೋಜಿಸಲಾಗಿದೆ. ಕುಣಿತ ಭಜನೆ ಸ್ಪರ್ಧೆಯಲ್ಲಿ ಪ್ರತಿ ತಂಡದಲ್ಲಿ 10 ಜನರಿಗಿಂತ ಮೇಲಿರಬಾರದು. 20 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಚಿತ್ರಕಲಾ ಸ್ಪರ್ಧೆಯಲ್ಲಿ ‘ದೀಪಾವಳಿ ಹಬ್ಬದ ವೈಶಿಷ್ಟತೆಯ ಬಗ್ಗೆ ಕಲ್ಪನೆ’ ವಿಷಯವಾಗಿದ್ದು, ಸ್ಪರ್ಧೆಯಲ್ಲಿ 3 ವರ್ಗಗಳಿವೆ. ಪ್ರಾಥಮಿಕ – 1ರಿಂದ 7ನೇ ತರಗತಿ, ಹೈಸ್ಕೂಲು – 8ರಿಂದ ಪಿಯುಸಿ – 12ನೇ ತರಗತಿಯವರೆಗೆ ಮತ್ತು ಡಿಗ್ರಿ ಪದವಿ ಹಾಗೂ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 45 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಗೂಡುದೀಪ ಸ್ಪರ್ಧೆಯು ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದಲ್ಲಿ ನಡೆಯಲಿದ್ದು, 5.30 ಗಂಟೆಗೆ ಚಾಲನೆ ನೀಡಲಾಗುವುದು. ಎಲ್ಲಾ…

Read More

ಕುಳಾಯಿ : ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾಸಿಕ ಹುಣ್ಣಿಮೆಯ ಪ್ರಯುಕ್ತ ‘ತುಳುನಾಡ ಬಲಿಯೇಂದ್ರ’ ಎಂಬ ತುಳು ಯಕ್ಷಗಾನ ತಾಳಮದ್ದಳೆ ದಿನಾಂಕ 28-10-2023ರಂದು ಕುಳಾಯಿ ಶ್ರೀ ವಿಷ್ಣುಮೂತಿ೯ ಕೃಪಾಶ್ರಿತ ಸಂಚಾರಿ ತಿರುಗಾಟದ ಚಿಕ್ಕ ಮೇಳದ ಪ್ರಾಯೋಜಕತ್ವದಲ್ಲಿ ಜರಗಿತು. ಹಿಮ್ಮೇಳದಲ್ಲಿ ಬೋಂದೇಲ್ ಸತೀಶ್ ಶೆಟ್ಟಿ, ಅಡೂರು ಆನಂದ, ಮೋಹನ್ ಶೆಟ್ಟಿಗಾರ್, ಜಗದೀಶ್ ಶೆಟ್ಟಿಗಾರ್, ಭರತ್ ಶೆಟ್ಟಿಗಾರ್ ಮತ್ತು ಜನಾರ್ದನ ಖಾರ್ವಿ ಹಾಗೂ ಮುಮ್ಮೇಳದಲ್ಲಿ ಬಲಿ ಚಕ್ರವರ್ತಿ (2)- ಜಬ್ಬಾರ್ ಸಮೋ ಸಂಪಾಜೆ, ವಾಮನ – ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಶುಕ್ರಾಚಾರ್ಯರು – ವಾದಿರಾಜ ಕಲ್ಲೂರಾಯ, ಕಲಿಪುರುಷ – ಕೃಷ್ಣ ಪ್ರಸಾದ್ ಕಾಟಿಪಳ್ಳ, ಬಲಿ ಚಕ್ರವರ್ತಿ (1) – ರವಿ ಮುಂಡಾಜೆ, ವಿಂದ್ಯಾವಳಿ – ರಾಜೇಶ್ ಬೆಳ್ಳಾರೆ ಸಹಕರಿಸಿದರು. ಕುಳಾಯಿ ಚಿಕ್ಕ ಮೇಳದ ಸಂಚಾಲಕರಾದ ಜನಾರ್ದನ ಖಾರ್ವಿ ಮತ್ತು ಭರತ್ ಶೆಟ್ಟಿಗಾರ್ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶಾಲು ಹಾಕಿ ಗೌರವಿಸಿದರೆ, ಬಾಯಾರು ಎಸ್.ಎನ್. ಭಟ್ ಕಾರ್ಯಕ್ರಮದ ಸ್ವಾಗತ ಭಾಷಣ ಮತ್ತು ಪಾತ್ರ ಪರಿಚಯ ಮಾಡಿದರು.…

Read More

ಮಂಗಳೂರು : ಡಾ. ಅರುಣಾ ನಾಗರಾಜ್‌ ಅವರಿಂದ ರಚಿಸಲ್ಪಟ್ಟ ‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ ಎಂಬ ಚಿಂತನ ಸ೦ಕಲನದ ಲೋಕಾರ್ಪಣೆ ದಿನಾಂಕ 04-11-2023ರಂದು ಸಂಜೆ 5ಕ್ಕೆ ದೀಪಾ ಕಂಫರ್ಟ್ಸ್ ಶೆಹನಾಯಿ ಹಾಲ್‌ನಲ್ಲಿ ನಡೆಯಲಿದೆ. ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಹಾಗೂ ಆನುವಂಶಿಕ ಮೊಕ್ತೇಸರರು ಡಾ. ಎಂ. ರಮೇಶ್‌ ಕೃಷ್ಣ ಶೇಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಂ.ಆರ್.ಪಿ.ಎಲ್.ನ ನಿವೃತ್ತ ಮಹಾಪ್ರಬಂಧಕರಾದ ಶ್ರೀಮತಿ ವೀಣಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಮಾಲತಿ ಶೆಟ್ಟಿ ಮಾಣೂರು, ಡಾ. ಪ್ರಮೀಳಾ ಮಾಧವ್, ಡಾ. ಪ್ರಿಯಾಂಕಾ ಅರುಣ್ ಶಿರಾಲಿ, ಶ್ರೀಮತಿ ಪುಷ್ಪಲತಾ ಯು.ಕೆ., ಡಾ. ಮಂಜುನಾಥ್ ಎಸ್.ರೇವಣ್‌ಕ‌ರ್, ಶ್ರೀ ಎಸ್‌. ಪ್ರಶಾಂತ್‌ ಶೇಟ್, ಶ್ರೀ ಸಿ.ಎ. ಕಿರಣ್ ಜೆ.ಶೇಟ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Read More

ಕಾರ್ಕಳ  : ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ನಿವಾಸಿ ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ಹೃದಯಾಘಾತದಿಂದ ದಿನಾಂಕ 31-10-2023ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಶೇಖರ್ ಅಜೆಕಾರ್ ಇವರಿಗೆ ಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದು, ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಇವರು ಪತ್ನಿ, ಓರ್ವ ಮಗ, ಓರ್ವ ಮಗಳನ್ನು ಅಗಲಿದ್ದಾರೆ. ಅಜೆಕಾರಿನಂತಹ ಸಣ್ಣ ಗ್ರಾಮದಲ್ಲಿ ಜನಿಸಿ ಮುಂಬಯಿಯಂತಹ ಬೃಹತ್ ನಗರದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾವನ್ನು ಪೂರೈಸಿ ‘ಹರಿಕೃಷ್ಣ ಪುನರೂರು-ಕನ್ನಡದ ಕೆಲಸಗಳು ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಮುಗಿಸಿ, ಅಲ್ಲಿಯೇ ಪತ್ರಕರ್ತರಾಗಿ ಕಾರ‍್ಯಾರಂಭಿಸಿ, ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿದ್ದರು. ಇವರ ಆಸಕ್ತಿಯ ಕ್ಷೇತ್ರಗಳು ಹಲವು. ವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ಕನ್ನಡದ ಹಲವು ಪತ್ರಿಕೆಗಳ ಹಲವು ಮಜಲುಗಳಲ್ಲಿ ದುಡಿದು ಸೈಯೆನಿಸಿಕೊಂಡಿದ್ದಾರೆ. ಹವ್ಯಾಸಿ ಛಾಯಾಚಿತ್ರಕಾರರಾದ ಅವರ ಹಲವು ಉತ್ತಮ ಚಿತ್ರಗಳು ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿವೆ.…

Read More

ಪುತ್ತೂರು : ನಮ್ಮೆಲ್ಲರ ಆರಾಧ್ಯ ಶಕ್ತಿಯಾದ ಶ್ರೀ ದೇಯಿ ಬೈದೆತಿ ಅಮ್ಮನವರ ಬೆಳಕಿನ ಗೆಜ್ಜೆ ಸೇವೆಯ ತೇರು, ಬಲಿಷ್ಠ ಶ್ರೀ ಗೆಜ್ಜೆಗಿರಿ ಮೇಳ ಇದೇ ಬರುವ ದಿನಾಂಕ 16-11-2023ನೇ ಗುರುವಾರದಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಶ್ರೀ ದೇವರ ಪ್ರಥಮ ಸೇವೆಯಾಟದೊಂದಿಗೆ ಎರಡನೇ ವರ್ಷದ ತಿರುಗಾಟಕ್ಕೆ ಹೊರಡಲಿದೆ. ಅನೇಕ ವಿಶೇಷತೆಗಳೊಂದಿಗೆ ಎರಡನೇ ವರ್ಷದ ತಿರುಗಾಟಕ್ಕೆ ಸಕಲ ಸಿದ್ದತೆ ನಡೆಸುತ್ತಿದ್ದು, ತೆಂಕುತಿಟ್ಟಿನ ಬಲಿಷ್ಠ ಯಕ್ಷಗಾನ ಮೇಳಗಳಲ್ಲಿ ಒಂದಾಗಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಪ್ರಸಂಗಗಳ ಸಮರ್ಥ ಪ್ರದರ್ಶನ ನೀಡುವರೇ ಗೆಜ್ಜೆಗಿರಿ ಮೇಳ ಸಾಮರ್ಥ್ಯಯುತ ಪ್ರತಿಭಾವಂತ ವೃತ್ತಿಪರ ಯುವ ಕಲಾವಿದರ ದಂಡನ್ನೆ ಹೊಂದಿದೆ. ಮೇಳದ ಕಲಾವಿದರ ಪಾತ್ರಾಭಿನಯ ಸಾಮರ್ಥ್ಯಕ್ಕನುಸಾರ ಎಲ್ಲಾ ಮೂರು ವಿಭಾಗದಲ್ಲೂ ಪ್ರಸಂಗ ರಚಿಸುತ್ತಿದ್ದು, ಅದರಲ್ಲೂ ಈ ಮೇಳ ಪ್ರಸ್ತುತ ಪ್ರಮುಖವಾಗಿ ‘ಗರೋಡಿದ ಸತ್ಯೊಲು’ (ಸಮಗ್ರ ಕೋಟಿ-ಚೆನ್ನಯ) ಎಂಬ ಐತಿಹಾಸಿಕ ಪ್ರಸಂಗವೊಂದು ರಚನೆ ಮಾಡುತ್ತಿದೆ. ಇದರಲ್ಲಿ ತುಳುನಾಡಿನ ಮೂಲಜನಾಂಗದ ಕುಲದೇವರಾದ ಶ್ರೀ ನಾಗಬ್ರಹ್ಮರ ಮೂಲಕಥೆ ಆಧಾರ ಸಹಿತ…

Read More