Author: roovari

ಇಂದು ವಿಶ್ವ ಪುಸ್ತಕ ದಿನ. ಪುಸ್ತಕಗಳು ಜ್ಞಾನದ ಭಂಡಾರ ಆಗಿವೆ. ಪುಸ್ತಕ ದಿನವೆಂದರೆ ಜ್ಞಾನ ದಿನವೇ ಆಗಿದೆ. ಅಂದರೆ ಜ್ಞಾನದ ಆರಾಧನೆಯೇ ಪುಸ್ತಕ ದಿನದ ಆಶಯವಾಗಿದೆ. ಪುಸ್ತಕದಲ್ಲಿ ಜ್ಞಾನ ಅಡಕವಾಗಿದೆ. ಆದರೆ ಜ್ಞಾನವು ಪುಸ್ತಕ ರೂಪದಲ್ಲಿ ಮಾತ್ರವೇ ಇರಬೇಕಾಗಿಲ್ಲ. ಪುಸ್ತಕವು ಜ್ಞಾನವನ್ನು ಸಂರಕ್ಷಿಸಿ ಇಟ್ಟುಕೊಂಡಿರುವ ಒಂದು ಮಾಧ್ಯಮವಾಗಿದೆ. ಆಧುನಿಕ ಕಾಲದಲ್ಲಿ ಒಂದು ಮಹತ್ವದ ಮತ್ತು ಶಕ್ತಿಯುತ ಮಾಧ್ಯಮವೂ ಹೌದು. ಹಿಂದಿನ ಕಾಲದಲ್ಲಿ ಸಾಹಿತ್ಯವನ್ನು ಅಕ್ಷರ ರೂಪದಲ್ಲಿ ಬರೆದಿಡುವ ವ್ಯವಸ್ಥೆ ಇರಲಿಲ್ಲ. ಎಲ್ಲವನ್ನೂ ನೆನಪಿನ ರೂಪದಲ್ಲಿ ಸಂರಕ್ಷಿಸಬೇಕಾಗಿತ್ತು. ಅವುಗಳನ್ನು ಶ್ರುತಿ ಮತ್ತು ಸ್ಮೃತಿ ಎಂಬುದಾಗಿ ಕರೆದರು. ಶ್ರುತಿ ಎಂದರೆ ವೇದ ಸಾಹಿತ್ಯ ಶ್ರೋತ್ರೀಯ ವ್ಯವಸ್ಥೆಯ ಮೂಲಕ ಅಂದರೆ ಬಾಯ್ದೆರೆಯಾಗಿ ಕಂಠಪಾಠ ಮಾಡಿ ಗುರು ಶಿಷ್ಯ ಪರಂಪರೆಯ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಸಲಾಗುತ್ತಿತ್ತು. ಸ್ಮೃತಿ ಎಂದರೆ ಇತರ ಎಲ್ಲಾ ಜ್ಞಾನ ಶಾಖೆಗಳು. ಇವು ಕೂಡ ತಂದೆಯಿಂದ ಮಗನಿಗೆ ಹರಿದು ಬಂದವು. ಆಗ ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಗುಹೆಗಳ ಗೋಡೆಗಳಲ್ಲಿ ಚಿತ್ರ ಲಿಪಿಗಳನ್ನು ಕೆತ್ತಿದ. ಆನಂತರ…

Read More

ತುಮಕೂರು : ಕನ್ನಡ ರಂಗಭೂಮಿಯ ಮಕ್ಕಳ ರಂಗಭೂಮಿಯಲ್ಲಿ ವಿಶಿಷ್ಟ ಕಾರ್ಯ ಮಾಡುತ್ತಿರುವ ತುಮಕೂರು ಜಿಲ್ಲೆಯ ಡಮರುಗ ರಂಗ ಸಂಪನ್ಮೂಲ ಕೇಂದ್ರ 20 ವರ್ಷಗಳಿಂದ ಒಂದು ತಿಂಗಳ ಪೂರ್ಣಾವಧಿ ‘ಚಿಣ್ಣರ ಬಣ್ಣದ ಶಿಬಿರ’ವನ್ನ ಆಯೋಜಿಸುತ್ತಿದ್ದು, ಈ ವರ್ಷ ದಿನಾಂಕ 11-04-2024 ಗುರುವಾರ ಬೆಳಗ್ಗೆ 10-00 ಗಂಟೆಗೆ ಶಿಬಿರವನ್ನು ಉದ್ಘಾಟಿಸಲಾಯಿತು. ಜನಪದ ಆಟಗಳು, ಜನಪದ ನೃತ್ಯ, ಕಸದಲ್ಲಿ ಕಲೆ, ಆಟಿಕೆಗಳು, ರಂಗಾಟಗಳು ಜೊತೆಜೊತೆಗೆ ರಂಗಪಠ್ಯಗಳೊಂದಿಗೆ ಒಂದು ನಾಟಕವನ್ನು ತರಬೇತುಗೊಳಿಸುತ್ತಾರೆ. ಶಿಬಿರ ಸಂಪೂರ್ಣ ಉಚಿತವಾಗಿದ್ದು ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರುತ್ತದೆ. ಪ್ರತಿ ವರ್ಷ 50ರಿಂದ 60 ಮಕ್ಕಳು ಇದರ ಉಪಯೋಗ ಪಡೆಯುತ್ತಿದ್ದು, ಕನ್ನಡ ರಂಗಭೂಮಿಯಲ್ಲೇ ಇದೊಂದು ವಿಶೇಷವಾದದ್ದು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಮೆಳೇಹಳ್ಳಿ ದೇವರಾಜ್, ಪ್ರಕಾಶ್ ಮೆಳೇಹಳ್ಳಿ, ಸ್ನೇಹ, ಚಿನ್ಮಯ, ನಾಗೇಶ್, ನಂದೀಶ್, ಪ್ರಸಾದ್, ಮಧುಸೂದನ್ ರಾವ್, ರವಿಶಂಕರ್, ಸುಧಾ, ಲಯ ಎಂ.ಡಿ, ರಾಜೇಶ್ವರಿ, ಸವಿತಾ, ಮೈಸೂರ್ ರಮಾನಂದ್ ಮುಂತಾದವರು ಭಾಗವಹಿಸುತ್ತಾರೆ.

Read More

ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟಿ, ಡಾ. ಶಿವರಾಮ ಕಾರಂತ ಟ್ರಸ್ಟ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಕೋಟ, ಕಾರ್ಯನಿರತ ಪತ್ರಕರ್ತರ ಸಂಘ ಬ್ರಹ್ಮಾವರ ತಾಲೂಕು, ಕುಂದಾಪುರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಅವರ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ದಿನಾಂಕ 05-05-2024ರಂದು ನಡೆಯುವ ನಾಲ್ಕನೆಯ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಸಮ್ಮೇಳನಾಧ್ಯಕ್ಷರಾಗಿ ಕುಂದಾಪ್ರ ಕನ್ನಡ ಹರಿಕಾರ ಎ.ಎಸ್.ಎನ್. ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕುಂದಾಪುರ ಕನ್ನಡದ ಕಂಪನ್ನು ಪಸರಿಸಲು ಹಲವಾರು ಹೊಸ ಸಾಧ್ಯತೆಗಳ ಕೆಲಸಗಳನ್ನು ಮಾಡುತ್ತಾ, ಸಾಹಿತ್ಯ, ಕವನಗಳನ್ನು ರಚಿಸಿ ಆ ಮೂಲಕ ಆರಂಭದಲ್ಲಿಯೇ ಕುಂದಾಪ್ರ ಕನ್ನಡಕ್ಕೆ ಮೂಲ ದಿಕ್ಕು ದೆಸೆಯನ್ನು ನೀಡಿದಂತಹವರು ಎ.ಎಸ್.ಎನ್. ಹೆಬ್ಬಾರರು. ಈ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ,…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿ ಹಾಗೂ ದ.ಕ. ಜಿಲ್ಲಾ ಸಮಿತಿ ವತಿಯಿಂದ ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಸಹಯೋಗದಲ್ಲಿ ಮತದಾನ ಪ್ರದಾನ ಕವಿಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ದಿನಾಂಕ 20-04-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಅವರು “ಮತದಾನ ಮಾಡುವುದು ನಮ್ಮ ಹಕ್ಕು. ಯಾವುದೇ ಆಮಿಷ, ಪ್ರಭಾವಕ್ಕೆ ಒಳಗಾಗದೆ ಯೋಗ್ಯರನ್ನು ಜನಪ್ರತಿನಿಧಿಯಾಗಿ ಆರಿಸಬೇಕು. ಇದರಿಂದ ನಾಡಿನ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ಸಾಧ್ಯವಾಗುತ್ತದೆ. ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಆಯ್ಕೆ ಮಾಡುವ ಮುಕ್ತ ಸ್ವಾತಂತ್ರ್ಯ ಮತದಾರನಿಗೆ ಇದೆ. ಹಾಗಾಗಿ ಮತದಾನ ಬಹಿಷ್ಕಾರ, ನೋಟಾ ಚಲಾವಣೆ ನಿರ್ಧಾರ ಸಲ್ಲದು” ಎಂದು ಹೇಳಿದರು. ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ…

Read More

ಅದೊಂದು ಅನಿರ್ವಚನೀಯ ವೈಭವಪೂರ್ಣ ಕಲಾತ್ಮಕ ರಂಗಸಜ್ಜಿಕೆ. ಗಂಧರ್ವ ಲೋಕವೇ ಧರೆಗಿಳಿದಂಥ ಕುಸುರಿಗೆಲಸದ ದ್ವಾರಗಳು, ಮಂಗಳ ಕಲಶಗಳು, ತೂಗುದೀಪಗಳ ಗೊಂಚಲು. ಪುಷ್ಪಾಲಂಕಾರಗೊಂಡ ಕಣ್ಮನ ಸೂರೆಗೊಂಡ ಭವ್ಯವಾದ ವಾತಾವರಣ. ದೇವಲೋಕದ ಚೆಲುವ ನರ್ತಕಿಯ ನಾಟ್ಯವಿಲಾಸಕ್ಕೆ ಹೇಳಿಮಾಡಿಸಿದಂಥ ವೇದಿಕೆಯ ಮೇಲೆ ಶಿಲಾಬಾಲಿಕೆಯಂಥ ಮಾಟವಾದ ಅಂಗಸೌಷ್ಟವವುಳ್ಳ ಸುಂದರ ಕಲಾವಿದೆ ನಿತ್ಯಾ ರಮೇಶ್ ದೈವೀಕವಾಗಿ ನರ್ತಿಸುತ್ತಿದ್ದಳು. ಅಂದವಳ ಮೊದಲ ಹೆಜ್ಜೆ-ಗೆಜ್ಜೆಗಳ ಸಂಭ್ರಮದ ದಿನ. ಗುರು ಮಂಜುಳಾ ಪರಮೇಶ್ ಬಳಿ ನುರಿತ ನಾಟ್ಯ ತರಬೇತಿ ಪಡೆದ ಅವಳು ಇಡೀ ರಂಗವನ್ನು ಆಕ್ರಮಿಸಿಕೊಂಡು ಲೀಲಾಜಾಲವಾಗಿ ಚಲಿಸುತ್ತ ತನ್ನ ಮನಮೋಹಕ ನೃತ್ಯಾಭಿನಯದ ಚೆಲುವನ್ನು ಚೆಲ್ಲಿದಳು. ಅದು ನಿತ್ಯಾಳ ‘ರಂಗಪ್ರವೇಶ’ವೆನಿಸಲಿಲ್ಲ. ನಿರ್ಭಿಡೆಯಾಗಿ, ಮೈಮರೆತು ದೈವಾರಾಧನೆಯಲ್ಲಿ ತೊಡಗಿದ ನಾಟ್ಯ ಸೇವೆ ಅದಾಗಿತ್ತು. ಆಕೆಯ ವೇಷ-ಭೂಷಣಗಳ ಸೊಗಸು, ವಿಶೇಷಾಲಂಕಾರ-ಅಂದದ ಪ್ರಸಾಧನ ನೋಡುಗರನ್ನು ಚುಂಬಕದಂತೆ ಸೆಳೆದಿತ್ತು. ಮಂಟಪದಲ್ಲಿ ದೇವಿಯ ಭಂಗಿಯಲ್ಲಿ ವಿರಾಜಮಾನಳಾಗಿದ್ದ ನಿತ್ಯಾ, ಬೆಳಕಿನ ವಿಶೇಷ ವಿನ್ಯಾಸದ ಬೆಳ್ಳಿಕಿರಣಗಳ ಮಧ್ಯೆ ರಜತ ಪುತ್ಥಳಿಯಂತೆ ಕಂಗೊಳಿಸುತ್ತಿದ್ದಳು. ಸಾಂಪ್ರದಾಯಕ ‘ಪುಷ್ಪಾಂಜಲಿ’ಯಿಂದ ನರ್ತನ ಶುಭಾರಂಭವಾಯಿತು. ‘ಯಾಕುಂದೆಂದು ಹಾರ ಧವಳ…’ ಯಶೋ ಸರಸ್ವತಿ, ಲಕ್ಷ್ಮೀ,…

Read More

ಮಂಗಳೂರು : ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಇದರ ವತಿಯಿಂದ ‘ರಂಗೋತ್ಸವ’ ಮಕ್ಕಳ ಬೇಸಿಗೆ ಶಿಬಿರವನ್ನು ಕುಂಜತ್ತಬೈಲ್ ಮರಕಡದ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 01-05-2024ರಿಂದ 04-05-2024ರವರೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 04-05-2024ರಂದು ಸಂಜೆ ಗಂಟೆ 5-00ರಿಂದ ಪ್ರತಿಭಾ ಪ್ರದರ್ಶನ, ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮಗಳು ನಡೆಯಲಿದೆ. ರಂಗಸ್ವರೂಪ ಕುಂಜತ್ತಬೈಲ್ ನಡೆದು ಬಂದ ದಾರಿ : ರಂಗ ಸ್ವರೂಪ ಹೆಸರೇ ಸೂಚಿಸುವಂತೆ ಸ್ವರೂಪ ವಠಾರದಲ್ಲಿ ಹುಟ್ಟಿ ಬೆಳೆದ ಉತ್ಸಾಹಿ ಹಾಗೂ ಕ್ರಿಯಾತ್ಮಕ ವ್ಯಕ್ತಿತ್ವವುಳ್ಳ ಯುವಕ ಯುವತಿಯರ ಬಳಗ ಜಿಲ್ಲೆಯ ಹಿರಿಯ ಕಲಾವಿದರು ಶೈಕ್ಷಣಿಕ ಚಿಂತಕರೂ ಆಗಿರುವ ಗೋಪಾಡ್ಕರ್ ಅವರ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಕುಂಜತ್ತಬೈಲ್ ಪರಿಸರದ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡ ರಂಗಸ್ವರೂಪ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ರಕ್ತದಾನ ಶಿಬಿರ, ಸ್ವಚ್ಛತಾ ಆಂದೋಲನ, ಭಿತ್ತಿ ಚಿತ್ತಾರ, ಚಿತ್ರಕಲಾ ಪ್ರದರ್ಶನ, ಸಾಮಾಜಿಕ ಜಾಗೃತಿ ಕಾರ್ಯಕ್ರಮ, ಶ್ರಮದಾನ ಹಾಗೂ ಹಲವಾರು ಪುಸ್ತಕ ಪ್ರೀತಿ ಕಾರ್ಯಕ್ರಮಗಳ…

Read More

ಮಂಗಳೂರು : ಗಾನ ನೃತ್ಯ ಅಕಾಡೆಮಿಯ ಆಶ್ರಯದಲ್ಲಿ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಚೆನ್ನೈಯ ಪ್ರಖ್ಯಾತ ನೃತ್ಯ ಕಲಾವಿದೆ ಕುಮಾರಿ ಹರಿಣಿ ಜೀವಿತಾ ಇವರ ನೃತ್ಯ ಕಾರ್ಯಕ್ರಮವು ದಿನಾಂಕ 14-04-2024ರಂದು ಜರಗಿತು. ಬಹು ಬೇಡಿಕೆಯ ಕಲಾವಿದೆಯಾದ ಕು. ಹರಿಣಿ ಜೀವಿತಾ ಇವರು ಚೆನ್ನೈಯ ಪ್ರಸಿದ್ದ ನೃತ್ಯ ಸಂಸ್ಥೆ ಶ್ರೀದೇವಿ ನೃತ್ಯಾಲಯದ ನಿರ್ದೇಶಕಿ ಡಾ. ಶೀಲಾ ಉನ್ನಿಕೃಷ್ಣನ್ ಇವರ ಶಿಷ್ಯೆಯಾಗಿದ್ದು ದೇಶ ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇವರ ಬಹು ಬೇಡಿಕೆಯ ಏಕವ್ಯಕ್ತಿ ನೃತ್ಯ ಕಾರ್ಯಕ್ರಮವಾದ ವರದರಾಜ ಉಪಾಸ್ಮಹೇ ಎಂಬ ವಿಷಯಾಧಾರಿತ ನೃತ್ಯವನ್ನು ಪ್ರದರ್ಶಿಸಿದ್ದು ಪ್ರೇಕ್ಷಕರ ಮನಸೂರೆಗೊಂಡಿತು.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಪ್ರತಿಷ್ಟಿತ ದತ್ತಿ ಪ್ರಶಸ್ತಿಗಳಾದ ‘ಡಾ. ರಾಜ ಕುಮಾರ್ ಸಂಸ್ಕೃತಿ ದತ್ತಿ’ ಮತ್ತು ‘ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-04-2024ರಂದು ನಡೆಯಿತು. ಈ ಸಮಾರಂಭದಲ್ಲಿ ಪ್ರಸ್ತಾವಿಕ ಭಾಷಣವನ್ನು ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಡಾ. ರಾಜ್ ಕುಮಾರ್ ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಕನ್ನಡಕ್ಕೊಬ್ಬನೇ ರಾಜ್ ಕುಮಾರ್ ಎನ್ನಿಸಿದ ಅವರು ತಮ್ಮ ಅಭಿನಯ ಮತ್ತು ಬದುಕಿನ ರೀತಿಯಿಂದ ಮಾದರಿ ಎನ್ನಿಸಿಕೊಂಡಿದ್ದರು. ಐವತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ ಒಡನಾಟ ತಮಗೆ ದೊರಕಿದ್ದನ್ನು ಸ್ಮರಿಸಿಕೊಂಡ ಅವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಸ್ವೀಕಾರ ಸಂದರ್ಭದಲ್ಲಿ ನಾಲ್ಕು ದಿನ ದೊರಕಿದ ನಿಕಟ ಒಡನಾಟದ ಅನುಭವವನ್ನು ನೆನಪು ಮಾಡಿಕೊಂಡು ರಾಜ್ ಕುಮಾರ್ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು. ಹಠ ಯೋಗವನ್ನೂ ಅವರು ಸಾಧಿಸಿದ್ದರು. ಅವರ…

Read More

ಉಪ್ಪಿನಂಗಡಿ : ಯಕ್ಷ ಶಾಂತಲಾ ಎಂದೇ ಜನಪ್ರಿಯರಾಗಿದ್ದ ತೆಂಕು, ಬಡಗು ಎರಡೂ ತಿಟ್ಟಿನಲ್ಲಿ ಕಲಾವ್ಯವಸಾಯ ಮಾಡಿದ ಪ್ರಸಿದ್ಧ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರಿಗೆ ‘ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ’ ಪ್ರದಾನವು ದಿನಾಂಕ 26-04-2024ರಂದು ಉಪ್ಪಿನಂಗಡಿಯ ಪಾತಾಳದ ದುರ್ಗಾಗಿರಿ ಭಜನ ಮಂದಿರದಲ್ಲಿ ಸುಂಕದಕಟ್ಟೆ ಮೇಳದ ವೇದಿಕೆಯಲ್ಲಿ ನಡೆಯಲಿದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ. 91ರ ಹರಯದ ಪಾತಾಳ ವೆಂಕಟರಮಣ ಭಟ್ಟರು ಕಾಂಚನ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳ, ದೀರ್ಘಕಾಲದ ತಿರುಗಾಟ ಧರ್ಮಸ್ಥಳ ಮೇಳದಲ್ಲಿ ನಡೆಸಿದ್ದಾರೆ. ಸ್ತ್ರೀವೇಷಕ್ಕೆ ಪುರುಷವೇಷಕ್ಕೆ ಸಮದಂಡಿಯಾಗುವಂತೆ ಬೇಲೂರು ಶಿಲಾಬಾಲಿಕೆಯರ ಅಂಗಭಂಗಿಗಳನ್ನು ಸ್ವತಃ ಪರಿಶೀಲಿಸಿ ಅಧ್ಯಯನ ಮಾಡಿ ಯಕ್ಷಗಾನ ಸ್ತ್ರೀವೇಷದ ಆಹಾರ್ಯವನ್ನು ನೃತ್ಯವಿನ್ಯಾಸಕ್ಕೆ ಬೇಕಾದಂತೆ ಸಿದ್ಧಪಡಿಸಿದ ಅವರು ಸೌಂದರ್ಯ ಪ್ರಧಾನ ಸ್ತ್ರೀವೇಷದ ಬಣ್ಣಗಾರಿಕೆಯಲ್ಲೂ ಹೊಸತನದ ಆವಿಷ್ಕಾರ ತಂದಿದ್ದರು. ಮಾಯಾ ಮೋಹಿನಿ, ಮಾಯಾ ಪೂತನಿ, ಮಾಯಾ ಅಜಮುಖಿ ಮೊದಲಾದ ಮಾಯಾ ಸ್ತ್ರಿವೇಷದ ಪಾತ್ರಗಳಿಗೆ ವಿಶಿಷ್ಟ ಕಲ್ಪನೆ ನೀಡಿ…

Read More

ಬೈಂದೂರು : ಲಾವಣ್ಯ (ರಿ.) ಬೈಂದೂರು ಆಶ್ರಯದಲ್ಲಿ ಕುಂದಾಪುರದ ಶ್ರೀ ರಾಮಕೃಷ್ಣ ಶೇರುಗಾರ್ ಬಿಜೂರು ಮತ್ತು ಮುಂಬೈಯ ಶ್ರೀ ವಿ.ಆರ್. ಬಾಲಚಂದ್ರ ಇವರ ಸಹಯೋಗದೊಂದಿಗೆ ದಿನಾಂಕ 01-05-2024ರಂದು ಸಂಜೆ ಗಂಟೆ 6-30ಕ್ಕೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ‘ನಿದ್ರಾನಗರಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ‘ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ನಾಟಕ ಇದಾಗಿದ್ದು, ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ಇವರು ರಚಿಸಿದ್ದು, ಬಿ. ಗಣೇಶ್ ಕಾರಂತ್ ಮತ್ತು ರೋಷನ್ ಕುಮಾರ್ ನಿರ್ದೇಶನ ಮಾಡಿರುತ್ತಾರೆ.

Read More