Author: roovari

ಈ ಜಗತ್ತು ಶಬ್ದದಿಂದ ತುಂಬಿದೆ, ನಾದದಿಂದ ಕೂಡಿದೆ, ಅದೇ ರೀತಿ ಚಿತ್ರಗಳಿಂದಲೂ ಆವರಿಸಿದೆ. ಈಗಿನ ತಂತ್ರಜ್ಞಾನಗಳು ಅದನ್ನು ಸಾಬೀತು ಪಡಿಸುತ್ತಲೂ ಇದೆ. ಗಾಳಿಯಲ್ಲೇ ನಿಮಗೆ ಎಲ್ಲವೂ ಗೋಚರವಾಗುತ್ತದೆ. ಆದರೂ ನಮಗೆ ಗೋಡೆ ಮೇಲೆ ಚೌಕಟ್ಟಿನಿಂದ ಕೂಡಿದ ಚಿತ್ರ ನೋಡಿದಾಗ ಮಾತ್ರ ಸಮಾಧಾನ. ಅದಕ್ಕೆ ಡಿ.ವಿ.ಜಿ.ಯವರು, “ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು ? ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು, ನಿತ್ಯ ಸತ್ತ್ವವೆ ಭಿತ್ತಿ, ಜೀವನ ಕ್ಷಣ ಚಿತ್ರ, ತತ್ತ್ವವೀ ಸಂಬಂಧ – ಮಂಕುತಿಮ್ಮ‌” ಅಂದಿದ್ದಾರೆ. ಚಿತ್ರಕ್ಕೊಂದು ಗೋಡೆ ಆಧಾರ ಬೇಕು. ಹಾಗೆಯೇ ಗೋಡೆ ಸುಂದರವಾಗಿರಬೇಕೆಂದರೆ ಒಂದು ಚಿತ್ರ ಬೇಕು. ಒಂದಕ್ಕೊಂದು ಸಂಬಂಧ ಇರುವುದು ನಮಗೆ ಅರಿವಾಗುತ್ತದೆ. ಪರಮಾತ್ಮನಿಗೆ ಈ ಬ್ರಹ್ಮಾಂಡವೇ ಒಂದು ಕ್ಯಾನ್ವಾಸ್, ಈ ಜಗತ್ತೆ ಒಂದು ಚಿತ್ರ. ದಿನಾಂಕ 30 ನವೆಂಬರ್ 2024ರಂದು ಇಂದಿರಾ ನಗರದ ಪ್ರತಿಷ್ಠಿತ ಜಾಗದಲ್ಲಿ ‘ಆರ್ಟಿಸೆರಾ’ ತನ್ನ ಕಲಾತ್ಮಕ ಕಲಾ ಗ್ಯಾಲರಿಯನ್ನು ಪ್ರತಿಷ್ಠಾಪಿಸಿದೆ. “A Realm of possibilities” ಕಲಾ ಪ್ರದರ್ಶನದ ಮೂಲಕ ಕಲಾ ಲೋಕಕ್ಕೆ ತನ್ನನ್ನು ತೆರೆದುಕೊಂಡಿದೆ. ಅಭಿರುಚಿಗಳು ವಿಸ್ತಾರಗೊಳ್ಳುವುದೇ…

Read More

ಮಂಗಳೂರು : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ತುಳುಕೂಟದ ನೂತನ ಅಧ್ಯಕ್ಷರಾಗಿ ಮರೋಳಿಯ ಶ್ರೀಮತಿ ಹೇಮಾ ಡಿ. ನಿಸರ್ಗ ಆಯ್ಕೆಯಾಗಿದ್ದಾರೆ. ರೊ. ಜೆ. ವಿ. ಶೆಟ್ಟಿ, ಉದ್ಯಮಿ ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಉಪಾಧ್ಯಕ್ಷರಾಗಿ, ಪ್ರ. ಕಾರ್ಯದರ್ಶಿಯಾಗಿ ವರ್ಕಾಡಿ ರವಿ ಅಲೆವೂರಾಯ, ಕೋಶಾಧಿಕಾರಿಯಾಗಿ ಚಂದ್ರಶೇಖರ ಸುವರ್ಣ, ಪಿ. ಗೋಪಾಲಕೃಷ್ಣ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಳಿದಂತೆ ಎಂ. ರತ್ನ ಕುಮಾರ್, ಭಾಸ್ಕರ ಕುಲಾಲ್ ಬರ್ಕೆ, ರಮೇಶ್ ಕುಲಾಲ್ ಬಾಯಾರು, ಡಾ. ರಾಕೇಶ್ ಕುಮಾರ್ ಬಿ, ದಿನೇಶ್ ಬಗಂಬಿಲ, ನಾಗೇಶ್ ದೇವಾಡಿಗ ಕದ್ರಿ, ಸಂಜೀವ ಅಡ್ಯಾರ್, ವಿಶ್ವನಾಥ ಪೂಜಾರಿ ಸೋಣಳಿಕೆ, ಶ್ರೀಮತಿ ಕಾಮಾಕ್ಷಿ ಸುಭಾಸ್, ಮಮತಾ ಪ್ರವೀಣ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನಾಂಕ 01 ಡಿಸೆಂಬರ್ 2024ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದರು

Read More

ಬೆಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ 2023ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ಕ್ಕೆ ಶಿಲ್ಪಕಲಾ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿರುತ್ತದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಕೆಳಕಂಡಂತೆ ಶಿಲ್ಪಿಗಳನ್ನು 2022ನೇ ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿರುತ್ತದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000/- ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 2022ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು 1. ಶ್ರೀ ವೀರಭದ್ರಪ್ಪ ಕಾಳಪ್ಪ ಕವಲೂರು (ಸಂಪ್ರದಾಯ ಶಿಲ್ಪ) – ಗದಗ ಜಿಲ್ಲೆ 2. ಶ್ರೀ ಎಸ್.ಪಿ. ಪಣಿಯಾಚಾರ್ (ಸಂಪ್ರದಾಯ ಶಿಲ್ಪ) – ಚಿಕ್ಕಮಗಳೂರು ಜಿಲ್ಲೆ 3. ಶ್ರೀ ಬನಪ್ಪ ಬಡಿಗೇರ (ಜಾನಪದ ಶಿಲ್ಪ) – ಯಾದಗಿರಿ ಜಿಲ್ಲೆ 4. ಶ್ರೀ ಗೋಪಿನಾಥ್ ಎಸ್. (ಸಮಕಾಲೀನ ಶಿಲ್ಪ) – ಬೆಂಗಳೂರು 5. ಶ್ರೀ ಸಿ.ವಿ.…

Read More

ಮಂಗಳೂರು : ಸಾಧನ ಬಳಗ ಮಂಗಳೂರು ವತಿಯಿಂದ ‘ಸ್ನೇಹ ಮಿಲನ-25’ ಕಾರ್ಯಕ್ರಮ ವಿ.ಟಿ.ರಸ್ತೆಯ ಕೃಷ್ಣ ಮಂದಿರದಲ್ಲಿ ದಿನಾಂಕ 17 ನವೆಂಬರ್2024 ರಂದು ನಡೆಯಿತು. ಡಾ. ಕುಂಬಳೆ ಅನಂತ ಪ್ರಭು ಹಾಗೂ ಉದ್ಯಮಿ ಮಹೇಶ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉದ್ಯಮಿ ಮಹೇಶ್ ಕಾಮತ್ “ಸಂಗೀತ ನೃತ್ಯ ಹಾಗೂ ನಾಟಕಗಳನ್ನು ಕಲಿತಾಗ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಧೈರ್ಯ ಬರುತ್ತದೆ.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಧಕರಾದ ಚಿ. ಸಮರ್ಥ ಶೆಣೈ ಹಾಗೂ ಡಾ. ಅನಂತ ಪ್ರಭು ಇವರನ್ನು ಸಮ್ಮಾನಿಸಲಾಯಿತು. ಸಭಾ ಕರ್ಯಕ್ರಮದ ಬಳಿಕ ವಿದುಷಿ ವೃಂದಾ ನಾಯಕ್ ನೇತೃತ್ವದಲ್ಲಿ ಸಮೂಹ ನೃತ್ಯ, ಗಾಯನ ಹಾಗೂ ಯು.ಪ್ರಕಾಶ ಶೆಣೈ ಮತ್ತು ಪುಷ್ಪಲತಾ ಭಟ್ ಇವರ ನಿರ್ದೇಶನದಲ್ಲಿ ಕಲಾ ಸಾಧನ ಮಕ್ಕಳಿಂದ ‘ಪತ್ತೋಳಿ ರೂಕ’ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಂಡಿತು. ಸಬಿತಾ ಕಾಮತ್ ಸ್ವಾಗತಿಸಿ, ಲಕ್ಷ್ಮೀ ಭಂಡಾರಿ, ವಿದ್ಯಾ ಪ್ರಭು, ಭಾಗ್ಯ ಭಟ್ ನಿರೂಪಿಸಿದರು. ಡಾ। ಕೃಷ್ಣ ಪ್ರಭು, ಮಂಜುಳಾ ಕಾಮತ್,…

Read More

ಯಾವುದೇ ಸಮಾಜದಲ್ಲಾದರೂ ಸಾರ್ವಜನಿಕ ಅಥವಾ ಸಾರ್ವತ್ರಿಕ ಎಂದು ಪರಿಭಾವಿಸಲಾಗುವ ನಿರೂಪಣೆಗಳನ್ನು ಮತ್ತು ವ್ಯಾಖ್ಯಾನಗಳನ್ನು ತಳಮಟ್ಟದ ಜನಸಾಮಾನ್ಯರವರೆಗೂ ತಲುಪಿಸಿ, ಇಡೀ ಸಮಾಜವನ್ನು ಅವುಗಳ ಪ್ರಭಾವಕ್ಕೊಳಪಡಿಸುವ ಪ್ರಕ್ರಿಯೆಯ ಹಿಂದೆ, ಆಯಾ ಸಮಾಜದ ಮೇಲೆ ಬೌದ್ಧಿಕ ಹಿಡಿತ, ಭೌತಿಕ ಪ್ರಾಬಲ್ಯ ಮತ್ತು ಸಾಂಸ್ಕೃತಿಕ ಪಾರಮ್ಯ ಸಾಧಿಸಿರುವಂತಹ ಚಿಂತನಧಾರೆಗಳು ಪ್ರಧಾನವಾಗಿ ಕಾಣುತ್ತವೆ. ಇದನ್ನೇ ಕಾರ್ಲ್ ಮಾರ್ಕ್ಸ್ ಮತ್ತು ಏಂಗೆಲ್ಸ್‌ ತಮ್ಮ “ಆಳುವ ವರ್ಗಗಳು ಮತ್ತು ಆಳುವ ಚಿಂತನೆಗಳು” ಎಂಬ ಪ್ರಬಂಧದಲ್ಲಿ “ಒಂದು ನಿರ್ದಿಷ್ಟ ಸಮಾಜದಲ್ಲಿ ಚಾಲ್ತಿಯಲ್ಲಿರುವ ಕಲ್ಪನೆಗಳು ಮತ್ತು ಚಿಂತನಾ ವಿಧಾನಗಳು ಆಳುವ ವರ್ಗಗಳಿಂದಲೇ ರೂಪುಗೊಳ್ಳುವುದಲ್ಲದೆ, ಅದರ ಬಲದಿಂದಲೇ ಸ್ಥಾಪಿತ ಅಭಿಪ್ರಾಯಗಳಾಗುತ್ತವೆ. ಭೌತಿಕ ಸಂಪತ್ತಿನ ಉತ್ಪಾದನೆಯನ್ನು ನಿಯಂತ್ರಿಸುವ ವರ್ಗವೇ ಸಮಾಜದ ಬೌದ್ಧಿಕ ಉತ್ಪಾದನೆಯನ್ನೂ ನಿಯಂತ್ರಿಸುತ್ತದೆ” ಎಂದು ಹೇಳುತ್ತಾರೆ. ವರ್ತಮಾನದ ಭಾರತದಲ್ಲಿ ಈ ಆಳುವ ವರ್ಗಗಳನ್ನು ಪ್ರತಿನಿಧಿಸುತ್ತಿರುವುದು ಸಾಂಪ್ರದಾಯಿಕ ಸಾಂಸ್ಕೃತಿಕ ರಾಜಕಾರಣ. ಮಾರ್ಕ್ಸ್ ನ ಈ ಮಾತುಗಳು ಸಾರ್ವಕಾಲಿಕ ಸತ್ಯ ಎನ್ನಲು ಯಾವ ಚಾರಿತ್ರಿಕ ಪುರಾವೆಯೂ ಬೇಕಿಲ್ಲ. ಸಮಕಾಲೀನ ವಸಾಹತೋತ್ತರ ಭಾರತದ, 1990ರ ಜಾಗತೀಕರಣ ಮತ್ತು ಅಯೋಧ್ಯೆ ನಂತರದ…

Read More

ಉಡುಪಿ: ಬೆಂಗಳೂರಿನ ಗಾಯನ ಸಮಾಜವು ಆಯೋಜಿಸಿದ 54 ನೇ ಸಂಗೀತ ಸಮ್ಮೇಳನವು ದಿನಾಂಕ 03 ನವೆಂಬರ್2024ರಿಂದ 10 ನವೆಂಬರ್ 2024ರ ವರೆಗೆ ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ‘ಬೆಂಗಳೊರು ಗಾಯನ ಸಮಾಜ’ದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆ ಮತ್ತು ಸಾಧನೆಗಾಗಿ ಉಡುಪಿಯ ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಇವರಿಗೆ “ಕರ್ನಾಟಕ ಕಲಾಚಾರ್ಯ” ಪ್ರಶಸ್ತಿ ಮತ್ತು ಐವತ್ತು ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಮೇಲುಕೋಟೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀಯದುಗಿರಿ ಯತಿರಾಜ ನಾರಾಯಣಜೀಯರ್ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಗಾಯನ ಸಮಾಜದ ಅಧ್ಯಕ್ಷರಾದ ಎಮ್. ಆರ್. ವಿ ಪ್ರಸಾದ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಮಧೂರು ಬಾಲಸುಬ್ರಹ್ಮಣ್ಯಂ ಇವರ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿತ್ತು.

Read More

ಮಂಗಳೂರು : ಶ್ರೀ ರಾಮಕೃಷ್ಣ ಮಠ ಮಂಗಳೂರು ಮತ್ತು ವಿಭಿನ್ನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅರ್ಪಿಸುವ 14ನೇ ವರ್ಷದ ಯಕ್ಷ ಕಲಾ ಕಾಣಿಕೆ ‘ಯಕ್ಷ ಆಖ್ಯಾನಗಳ ಗುಚ್ಛ’ ದಿನಾಂಕ 08 ಡಿಸೆಂಬರ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಮಂಗಳೂರಿನ ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಸೀತಾ ಪರಿತ್ಯಾಗ’ ಮತ್ತು ‘ಅಕ್ರೂರ ಭಕ್ತಿ-ಗೋಕುಲ ನಿರ್ಗಮನ-ಕಂಸವಧೆ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರಸ್ತುತಗೊಳ್ಳಲಿದೆ.

Read More

ಧಾರವಾಡ : ವಂಶಿ ಪ್ರಕಾಶನ ಬೆಂಗಳೂರು ಮತ್ತು ಕೊಟಬಾಗಿ ಬಂಧುಗಳು ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಪುಸ್ತಕ ಬಿಡುಗಡೆ ಸಮಾರಂಭ’ವನ್ನು ದಿನಾಂಕ 08 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಆರ್.ಎನ್. ಶೆಟ್ಟಿ ಕ್ರೀಡಾಂಗಣ ಆವರಣದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಲೇಖಕ ಅನಂತ ಕೊಟಬಾಗಿ ಇವರ ‘ಸತ್ಯಂ ಶಿವಂ ಸೌಂದರ್ಯಂ’ ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದ್ದು, ಶ್ರೀ ಶ್ರೀನಿವಾಸ ವಾಡಪ್ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಕೃಷ್ಣ ಕಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀಮತಿ ಮಾಲತೀ ಮುದಕವಿ ಮತ್ತು ಶ್ರೀ ಎಂ.ಎಸ್. ಕೃಷ್ಣಮೂರ್ತಿ ಇವರುಗಳು ಪುಸ್ತಕ ಪರಿಚಯ ಮಾಡಲಿರುವರು.

Read More

ಮಡಿಕೇರಿ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಬಿ. ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ”ಗೆ ಪುರುಷ ಲೇಖಕರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2024-25 ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಪುರುಷ ಲೇಖಕರು 2019ರ ನಂತರ ತಾವು ರಚಿಸಿದ ಕಥೆ, ಕಾದಂಬರಿ, ಕವನ ಸಂಕಲನ ಕೃತಿಗಳ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸತಕ್ಕದ್ದು. ಕಳುಹಿಸುವ ಕೃತಿಗೆ eಈ ಮೊದಲು ಯಾವುದೇ ಪ್ರಶಸ್ತಿ ಬಂದಿರಕೂಡದು. ಓರ್ವ ಲೇಖಕ ಒಂದು ಕೃತಿಯನ್ನು ಮಾತ್ರ ಕಳುಹಿಸಲು ಅವಕಾಶವಿದ್ದು, ಕೃತಿಗಳನ್ನು ದಿನಾಂಕ 25 ಡಿಸೆಂಬರ್ 2024ರ ಒಳಗಾಗಿ ಲಕೊಟೆಯ ಮೇಲೆ  ಬಿ. ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಎಂದು ಉಲ್ಲೇಖಿಸಿ ಎಂದು ಕಳುಹಿಸತಕ್ಕದ್ದು. ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಹೆಚ್ಚಿನ ಮಾಹಿತಿಗಾಗಿ : 94483 46276.

Read More

ಮಂಗಳೂರು: ಮಂಗಳೂರಿನ ಸನಾತನ ನಾಟ್ಯಾಲಯದ ಗುರು ವಿದುಷಿ ಶಾರದಾಮಣಿ ಶೇಖರ್ ಅವರ 60ನೇ ವರ್ಷದ ಅಭಿನಂದನಾ ಸಮಾರಂಭ ದಿನಾಂಕ 01 ಡಿಸೆಂಬರ್ 2024ರ ಭಾನುವಾರದಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತಾಡಿ “ನೃತ್ಯ ಪ್ರಸ್ತುತಪಡಿಸುವಾಗ ಬಳಸುವ ಹಾಡುಗಳಿಗೆ ಸಾಮಾನ್ಯವಾಗಿ ತಮಿಳು ಕೃತಿಗಳನ್ನು ಬಳಸಲಾಗುತ್ತದೆ. ಅದರ ಸ್ಥಾನದಲ್ಲಿ ಕನ್ನಡ ಅಥವಾ ತುಳು ಕೃತಿಗಳನ್ನು ಅಳವಡಿಸುವ ಪ್ರಯತ್ನ ನಡೆಯಬೇಕು. ಸನಾತನ ನಾಟ್ಯಾಲಯದಂಥ ಕೇಂದ್ರಗಳು ಮತ್ತು ಇಲ್ಲಿನ ಗುರುಗಳು ಭಾರತೀಯ ಪರಂಪರೆ, ಸನಾತನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ಮಾಡುತ್ತಿವೆ. ದೇಶದ ಅಕ್ಕ-ಪಕ್ಕದಲ್ಲಿ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ ಮಕ್ಕಳು, ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಎದುರಾಗುತ್ತದೆ. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.” ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮತ್ತು ನಾತನನ ನಾಟ್ಯಾಲಯ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಮಾತನಾಡಿದರು.…

Read More