Author: roovari

ಮುಂಬೈ : ಮುಂಬೈ ವಿಶ್ವವಿದ್ಯಾನಿಲಯ, ಕನ್ನಡ ವಿಭಾಗದ ಎಂ. ಎ. ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾ ರಾಮಕೃಷ್ಣ ಅವರು ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಹೊರನಾಡಾದ ಮುಂಬೈಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಶತಮಾನೋತ್ಸವದ ನೆನಪಿಗೆ ಮುಂಬೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡುವ ಉಪಕ್ರಮ ಆರಂಭವಾಗಿದ್ದು ಪ್ರಸ್ತುತ ಸಾಲಿನ  ಈ ಪುರಸ್ಕಾರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಲಾಗಿದೆ.  ಈ ಪುರಸ್ಕಾರವು ನಗದು ಬಹುಮಾನ, ಕೃತಿ ಕರಂಡಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ವಿದ್ಯಾ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ತಾಂತ್ರಿಕ ಪದವಿ ಪಡೆದು ಸುಮಾರು ಎರಡು ದಶಕಗಳ ಕಾಲ ಐ.ಟಿ ಕ್ಷೇತ್ರದಲ್ಲಿ ವಿವಿಧೆಡೆ ಕಾರ್ಯ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಾಹಿತ್ಯಾಸಕ್ತಿಯಿಂದ ಇದೀಗ ಕನ್ನಡ ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿಕೊಂಡ ಇವರು, ‘ಶಿವರಾಮ ಕಾರಂತರ ಪ್ರಬಂಧಗಳು – ಒಂದು…

Read More

ಮಂಗಳೂರು : ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠ ವಠಾರದ 101ನೇ ವರ್ಷದ ಶಾರದಾ ಮಹೋತ್ಸವದ ಸಂದರ್ಭದಲ್ಲಿ ಮಂಗಳೂರಿನ ಯುವ ಕಲಾವಿದ ಸತೀಶ್ ಆಚಾರ್ಯ ಸುರುಳಿ ಮತ್ತು ಬಳಗದವರಿಂದ ‘ ಸ್ಯಾಕ್ಸೋಫೋನ್ ಕಛೇರಿ’ಯು ನಡೆಯಿತು. ವಿಜಯದಶಮಿಯ ಪ್ರಯುಕ್ತ ದಿನಾಂಕ 24-10-2023 ರಂದು ವಿಶೇಷ ದೀಪಾಲಂಕಾರ ಪ್ರಯುಕ್ತ ಆಯೋಜಿಸಲಾಗಿದ್ದ ‘ ಸ್ಯಾಕ್ಸೋಫೋನ್ ಕಛೇರಿ ‘ ಯಲ್ಲಿ ಯುವ ಕಲಾವಿದ ಸತೀಶ್ ಆಚಾರ್ಯ ಸುರುಳಿ ಇವರಿಗೆ ಸ್ಯಾಕ್ಸೋಫೋನ್ ನಲ್ಲಿ ರಾಜಶೇಖರ ಮೂರ್ತಿ ಮೈಸೂರು, ತವಿಲ್ ನಲ್ಲಿ ಮಹಾದೇವ ಸ್ವಾಮಿ ಮೈಸೂರು, ತಬಲಾದಲ್ಲಿ ಯತೀಶ್ ಆಚಾರ್ಯ ಸೂರಿಕುಮೇರು, ಕೀಬೋರ್ಡ್ ನಲ್ಲಿ ವಿಜಯ ಆಚಾರ್ಯ ಕುಳಾಯಿ, ರಿದಮ್ ಪ್ಯಾಡ್ ನಲ್ಲಿ ಉದಯ ಕುಮಾರ್ ಮತ್ತು ವೇಣುಗೋಪಾಲ, ಜ್ಯೋತಿ ಗುಡ್ಡೆ ಇವರೆಲ್ಲರೂ ಸಹಕಲಾವಿದರಾಗಿ ಸಹಕರಿಸಿದರು. ಸತೀಶ್ ಆಚಾರ್ಯ ಸುರುಳಿ ಇವರನ್ನು ಉತ್ಸವ ಸಮಿತಿಯ ಪದಾಧಿಕಾರಿಗಳು ಶಾಲು , ಫಲವಸ್ತು, ಸ್ಮರಣಿಕೆಗಳನ್ನಿತ್ತು ಗೌರವಿಸಿದರು.

Read More

ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಶ್ರೀ ಅಲ್ಲಮಪ್ರಭು ಸಿದ್ಧಸಂಸ್ಥಾನಮಠ ಇಲ್ಲಿನ ಗಡಿಕನ್ನಡಿಗರ ಬಳಗ ಆಯೋಜಿಸುವ ಕರ್ನಾಟಕ ರಾಜ್ಯೋತ್ಸವ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02-11-2023ರ ಗುರುವಾರ ಬೆಳಗ್ಗೆ ಘಂಟೆ 10.00ಕ್ಕೆ ಚಿಂಚಣಿಯ ಕನ್ನಡ ಭವನದಲ್ಲಿ ನಡೆಯಲಿದೆ. ಚಿಂಚಣಿ ಸಿದ್ಧಸಂಸ್ಥಾನಮಠದ ಪರಮ ಪೂಜ್ಯಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾಗಿರುವ ಶ್ರೀ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದಾರೆ. ಚಿಕ್ಕೋಡಿಯ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ ಇವರು ಲೇಖಕ ಎಲ್. ಎಸ್. ಶಾಸ್ತ್ರಿಯವರ ಕನ್ನಡ-ಮರಾಠಿ ಸ್ನೇಹಸೇತು ‘ಕೃ. ಶಿ. ಹೆಗಡೆ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ವಿಭೂಷಿತ ಹಿರಿಯ ರಂಗಭೂಮಿ ನಟಿ ಮಾತಾಶ್ರೀ ಮಂಜಮ್ಮ ಜೋಗತಿ ಭಾಗವಹಿಸಲಿಲಿರುವರು. ಇದೇ ಸಂದರ್ಭದಲ್ಲಿ ‘ಮರುಳ ಶಂಕರದೇವರು’ ಬೃಹತ್ ಕಾದಂಬರಿಯ ಕರ್ತೃ ಚಿಕ್ಕೋಡಿಯ ಡಾ. ದಯಾನಂದ ನೂಲಿ ಇವರನ್ನು ಸನ್ಮಾನಿಸಲಾಗುವುದು. ಕೃ. ಶಿ. ಹೆಗಡೆ…

Read More

ಕಾಸರಗೋಡು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಆವಳಮಠ ಬಾಯಾರು ಕಾಸರಗೋಡು ಇಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 16-10-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಾಮ್ ಪ್ರಸಾದ್ ಮಯ್ಯ ಕೂಡ್ಲು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಲಕ್ಮೀಶ ಬೇಂಗ್ರೋಡಿ ಮತ್ತು ಶ್ರೀ ಶ್ರೀಕುಮಾರ್ ಪಂಬೆತಡ್ಕ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಗಣೇಶ್ (ಶಂತನು), ಶ್ರೀಮತಿ ಶುಭಾ ಅಡಿಗ (ದಾಶರಾಜ), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ದೇವವ್ರತ) ಮತ್ತು ಶ್ರೀಮತಿ ಮನೋರಮಾ ಜಿ. ಭಟ್ (ಸತ್ಯವತಿ )ಸಹಕರಿಸಿದರು. ನಿರ್ದೇಶಕರಾದ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ಮನೋರಮಾ ಜಿ. ಭಟ್ ಹಾಗೂ ಶ್ರೀಮತಿ ನಿವೇದಿತಾ ತಿಲಕ್ ಪ್ರಾಯೋಜಿಸಿದರು. ಶ್ರೀ ದೇವಳದ ಆಡಳಿತ ಮೊಕ್ತೇಸರರು ಹಾಗೂ ಸದಸ್ಯರು ಸಹಕರಿಸಿದರು.

Read More

ಬೆಂಗಳೂರು : ‘ಡಾ. ಸಿ.ಸೋಮಶೇಖರ – ಶ್ರೀಮತಿ ಎನ್.ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನ’ ವತಿಯಿಂದ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಹೀ.ಚಿ. ಬೋರಲಿಂಗಯ್ಯ, ದಾಸ ಸಾಹಿತ್ಯಕ್ಕೆ ಪ್ರೊ. ಎ.ವಿ. ನಾವಡ ಹಾಗೂ ಸಂಗೀತ ಕ್ಷೇತ್ರದ ಸಾಧನೆಗೆ ಪಂಡಿತ್‌ ಡಾ. ನರಸಿಂಹಲು ವಡವಾಟಿ ಅವರಿಗೆ ‘ಸಂಸ್ಕೃತಿ ಸಂಗಮ-2023’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ದಿನಾಂಕ 21-10-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ. ಹಂಪಾ ನಾಗರಾಜಯ್ಯ ಇವರು ‘ಸಂಸ್ಕೃತಿ ಸಂಗಮ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ “ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸಿ ಆಯ್ಕೆ ಮಾಡುವ ಬದಲು, ಅರ್ಹ ಸಾಧಕರನ್ನು ತಜ್ಞರ ಸಮಿತಿಯ ಮೂಲಕ ಆಯ್ಕೆ ಮಾಡುವುದು ಸೂಕ್ತ. ‘ರಾಜ್ಯೋತ್ಸವ ಪ್ರಶಸ್ತಿ’ಗೆ ಆನ್‌ ಲೈನ್ ಮೂಲಕ ಅರ್ಜಿ ಕರೆದ ಕಾರಣ 2,500 ಅರ್ಜಿ ಬಂದಿವೆ. ಇದರಿಂದ ನಾನು ಸಂಕಟದಲ್ಲಿ ಸಿಕ್ಕಿ ಬಿದ್ದಿದ್ದೇನೆ. ಸಾಧನೆ,…

Read More

ಕಾಸರಗೋಡು : ಶರದೃತುವಿನ ಅಶ್ವಯುಜ ಮಾಸದ ಮೊದಲ 9 ದಿನಗಳಲ್ಲಿ ನಡೆಯುವ ಶಕ್ತಿ ದೇವತೆ ದುರ್ಗಾದೇವಿಯ ಆರಾಧನೆಯ ಸಂದಭ೯ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ – 2023’ವು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ದಿನಾಂಕ 22-10-2023ರಂದು ನಡೆಯಿತು. ದ.ಕ. ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಮಾತನಾಡಿ “ಮೌಲ್ಯಯುತ ಚಿಂತನೆಗಳೊಂದಿಗೆ ಬದುಕು ಸಾಕಾರಗೊಳಿಸಬೇಕು. ಸಂಸ್ಕೃತಿ ಸಂರಕ್ಷಣೆಯ ಜಾಗ್ರತಿ ನಮ್ಮ ಜವಾಬ್ದಾರಿ” ಎಂದು ನುಡಿದರು. ಅಂತರ್ ರಾಜ್ಯ ಯುವ ಪ್ರತಿಭಾ ಪ್ರಶಸ್ತಿ ‘ಭರವಸೆಯ ಬೆಳಕು’ 2023 ಪ್ರಶಸ್ತಿ ಪ್ರಧಾನ ಮಾಡಿ ಯುವ ಪ್ರತಿಭೆಗಳಿಗೆ ಶುಭ ಹಾರೈಸಿದರು. ಶ್ರೀಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶುಭಾಶೀರ್ವಚನ ನೀಡಿ ಯುವ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಾ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ…

Read More

ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಬರಹದ ಮೊದಲ ಮೆಟ್ಟಿಲಿನ ಕಾಲಘಟ್ಟದಲ್ಲಿ ಬರವಣಿಗೆಯ ಪ್ರೀತಿ ಮತ್ತು ಉತ್ಸಾಹವನ್ನು ತನ್ನದನ್ನಾಗಿಸಿಕೊಂಡು ಬರೆದವರಲ್ಲಿ ಪ್ರಮುಖ ಲೇಖಕಿ ಚಂದ್ರಭಾಗೀ ಕೆ.ರೈ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮರ್ಮು ಎಂಬಲ್ಲಿ ಶ್ರೀ ಸುಬ್ಬಯ್ಯ ಆಳ್ವ ಮತ್ತು ಶ್ರೀಮತಿ ತಂಗಮ್ಮ ದಂಪತಿಗಳಿಗೆ ಮಗಳಾಗಿ 29.10 1916ರಲ್ಲಿ ಜನಿಸಿದವರು ಇವರ ಶಾಲಾ ಅಭ್ಯಾಸ ನಾಲ್ಕನೇ ತರಗತಿಯವರೆಗೆ. ಪುರಾಣ ಶಾಸ್ತ್ರಗಳಲ್ಲಿ ಪರಿಣಿತರಾಗಿ, ಬಾಲ್ಯದಲ್ಲಿಯೇ ನಾಟಕಗಳ ರಚನೆಯನ್ನು ಮಾಡುತ್ತಿದ್ದರು. ಮನೆಯಲ್ಲಿ ಇದ್ದ ಸಾಹಿತ್ಯಿಕ ವಾತಾವರಣ ಅವರಿಗೆ ಉತ್ತಮ ಪುಸ್ತಕಗಳನ್ನು ಓದುವುದಕ್ಕೆ ಅವಕಾಶ ಒದಗಿಸಿತ್ತು. ಕರಾವಳಿ ಕರ್ನಾಟಕದ ಸಾಹಿತ್ಯಕ ಸಾಂಸ್ಕೃತಿಕ ಜಗತ್ತಿನಲ್ಲಿ ಭೀಷ್ಮನಂತೆ ಗುರುತಿಸಿಕೊಂಡಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಸಹೋದರಿ ಇವರು. ‘ತನ್ನ ಸಾಹಿತ್ಯದ ಒಲುಮೆಯ ತಾಯಿ ಬೇರು ತನ್ನ ತಂದೆಯಿಂದ ಲಭಿಸಿತು’ ಎಂದು ಹೆಮ್ಮೆಯಿಂದ ನೆನೆಯುತ್ತಿದ್ದರು. ಆ ಕಾಲಘಟ್ಟದ ರೀತಿ ನೀತಿಗಳಂತೆ ಎಳವೆಯಲ್ಲಿಯೇ ರಾಯಿಯ ಶ್ರೀ ಕೃಷ್ಣಪ್ಪ ರೈಯವರೊಂದಿಗೆ ಇವರ ವಿವಾಹ ನಡೆದು, ಕೂಡು ಕುಟುಂಬದಲ್ಲಿ, ಕೃಷಿ ಮನೆತನದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಕನ್ನಡ ನಾಡಲ್ಲಿ…

Read More

ಯಲ್ಲಾಪುರ : ಸಂಕಲ್ಪ ಸೇವಾ ಸಂಸ್ಥೆ ಪ್ರಸ್ತುತ ಪಡಿಸುವ ‘ಸಂಕಲ್ಪ ಉತ್ಸವ 37’ವು ದಿನಾಂಕ 01-11-2023ರಿಂದ 05-11-2023ರವರೆಗೆ ಭಕ್ತಿ ಸಂಕಲ್ಪ, ಸಾಂಸ್ಕೃತಿಕ ಸಂಕಲ್ಪ, ಪ್ರಕೃತಿ ಸಂಕಲ್ಪ, ಸಾಮಾಜಿಕ ಸಂಕಲ್ಪದೊಂದಿಗೆ ಯಲ್ಲಾಪುರದ ಗಾಂಧಿ ಕುಟೀರದಲ್ಲಿ ನಡೆಯಲಿದೆ. ದಿನಾಂಕ 01-11-2023ರಂದು ಸಂಜೆ ಗಂಟೆ 5ಕ್ಕೆ ಶ್ರೀಮತಿ ಮುಕ್ತಾಶಂಕರ ಮತ್ತು ಶ್ರೀ ಡಿ.ಕೆ. ಗಾಂವ್ಕರ ಇವರಿಂದ ಗಮಕ ವಾಚನ, 6 ಗಂಟೆಗೆ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳಿಂದ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿರುವುದು. ಸಭಾ ಕಾರ್ಯಕ್ರಮದ ನಂತರ ‘ನೃತ್ಯ ರೂಪಕ’ವನ್ನು ವಿದುಷಿ ಸೀಮಾ ಭಾಗ್ವತ್ ತಂಡದವರು ಪ್ರಸ್ತುತ ಪಡಿಸುವರು. ‘ಭೀಷ್ಮ ವಿಜಯ’ ಯಕ್ಷಗಾನ ನಡೆಯಲಿದೆ. ದಿನಾಂಕ 02-11-2023ರಂದು ಸಂಜೆ ಗಂಟೆ 5ಕ್ಕೆ ಗೌರವಾನ್ವಿತ ಪ್ರತಿಮಾ ಭಟ್ಟ ಕೋಡುರ ಇವರಿಂದ ಕೀರ್ತನೆ, 6.30ಕ್ಕೆ ಸಭಾ ಕಾರ್ಯಕ್ರಮ ಹಾಗೂ 7.30ರಿಂದ ‘ಸುಧನ್ವಾರ್ಜುನ’ ಯಕ್ಷಗಾನ ನಡೆಯಲಿದೆ. ದಿನಾಂಕ 03-11-2023ರಂದು ಸಂಜೆ ಗಂಟೆ 5ಕ್ಕೆ ಶ್ರೀ ದತ್ತಾತ್ರೇಯ ವೇಲಣಕರ ತಂಡದವರಿಂದ ಭಕ್ತಿ ಸಂಗೀತ, 6.30ಕ್ಕೆ…

Read More

ಉಡುಪಿ : ಉಡುಪಿಯ ಅಂಬಲಪಾಡಿ ದೇಗುಲದ ಭವಾನಿ ಮಂಟಪದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್‌ ಸಂಯೋಜನೆಯಲ್ಲಿ ಡಿಸೆಂಬರ್ 24 ಮತ್ತು 25ರಂದು ನಡೆಯುವ ಕರ್ನಾಟಕ ಕರಾವಳಿ ನೃತ್ಯ ಕಲಾವಿದರ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನದ ಲಾಂಛನವನ್ನು ದಿನಾಂಕ 11-10-2023ರಂದು ಬಿಡುಗಡೆಗೊಳಿಸಲಾಯಿತು. ಎಲ್ಲ ಉಪಸಮಿತಿಗಳ ಸಂಚಾಲಕರ ಮತ್ತು ಸಮ್ಮೇಳನ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಿತಿಯ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್ ಅವರು ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಾರ್ಯಾಧ್ಯಕ್ಷ ಯು.ಕೆ. ಪ್ರವೀಣ್‌, ಉಪಾಧ್ಯಕ್ಷ ಚಂದ್ರಶೇಖರ ನಾವಡ, ಶಾರದಾಮಣಿ ಶೇಖರ್, ರಾಜಶ್ರೀ ಉಳ್ಳಾಲ, ಕೋಶಾಧಿಕಾರಿ ಸುರೇಶ್‌ ಅತ್ತಾವರ್, ಪ್ರಧಾನ ಕಾರ್ಯದರ್ಶಿ ಕೆ.ಸುಧೀರ್ ರಾವ್, ಸ್ವಾಗತ ಸಮಿತಿಯ ಸಂಚಾಲಕ ರಾಮಕೃಷ್ಣ ಕೊಡಂಚ, ಸ್ಮರಣಸಂಚಿಕೆ ಸಮಿತಿಯ ಪ್ರಧಾನ ಸಂಪಾದಕಿ ಸುಮಂಗಲಾ ರತ್ನಾಕರ್, ಕಾರ್ಯಕ್ರಮ ಸಂಯೋಜನ ಸಮಿತಿಯ ಸದಸ್ಯೆ ಪ್ರತಿಮಾ ಶ್ರೀಧರ್, ಸೌಮ್ಯಾ ಸುಧೀಂದ್ರ, ಗಿರೀಶ್ ಪುತ್ತೂರು ಉಪಸ್ಥಿತರಿದ್ದರು.

Read More

ಮಂಗಳೂರು : ಉರ್ವ ಹೊಯಿಗೆಬೈಲಿನಲ್ಲಿರುವ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಸುಮಾರು 2013ರಲ್ಲಿ ಹರಕೆಗಾಗಿ ಬಂದ ಚೆಂಡೆ ಮತ್ತು ಮದ್ದಳೆಗಳನ್ನು ತಾಳಮದ್ದಳೆಯಲ್ಲಿ ಉಪಯೋಗಿಸಿಕೊಳ್ಳಲಾಯಿತು. ವಾರದಲ್ಲಿ ಒಂದು ದಿನದಂತೆ ಪ್ರತೀ ವಾರ ತಾಳಮದ್ದಳೆಯ ಸೇವೆ ದೇವರಿಗೆ ನಡೆಯುತಿತ್ತು. ಸುಮಾರು 2016ರಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭವಾಗಿ ಪರಿಸರದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಶ್ರೀಕೃಷ್ಣ ಲೀಲೆ, ಕಂಸ ವಧೆ, ಮಹಿಷ ಮರ್ಧಿನಿ, ಸುದರ್ಶನ ವಿಜಯ, ಏಕಾದಶಿ ದೇವಿ ಮಹಾತ್ಮೆ ಇವುಗಳ ಯಶಸ್ವೀ ಪ್ರದರ್ಶನ ಹಾಗೂ ಮತ್ತೊಂದು ಬಾರಿ ಹರಕೆ ರೂಪದಲ್ಲಿ ‘ಸುದರ್ಶನ ವಿಜಯ’ ರಂಗಸ್ಥಳದಲ್ಲಿ ಪ್ರದರ್ಶಿಸಿ ಜನಮೆಚ್ಚುಗೆ ಪಡೆಯಿತು. ಇವು ಈವರೆಗೂ ನಡೆದ ಪ್ರದರ್ಶನಗಳು. ಈ ರೀತಿ ಅಭಿವೃದ್ಧಿ ಹೊಂದಿ ಈಗ ಸ್ವಂತ ರಂಗಸ್ಥಳದ ವ್ಯವಸ್ಥೆಯೊಂದಿಗೆ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ಹೆಸರಿನಲ್ಲಿ ನೂತನ ಹವ್ಯಾಸಿ ಯಕ್ಷಗಾನ ಮೇಳ ದಿನಾಂಕ 22-10-2023ರಂದು ಆರಂಭಗೊಂಡಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅಶೋಕನಗರ-ಉರ್ವ ಬಂಟರ ಸಂಘದ ಅಧ್ಯಕ್ಷ ರವಿಚಂದ್ರ ಶೆಟ್ಟಿ ಅಶೋಕನಗರ, ಮಂಗಳೂರಿನ ಕಸ್ತೂರ್ಬಾ…

Read More