Author: roovari

ಯಕ್ಷಗಾನ ರಂಗದಲ್ಲಿ ಬಹುಮುಖ ಪ್ರತಿಭೆಯ ಅನೇಕ ಕಲಾವಿದರು ನಮಗೆ ಕಾಣಸಿಗುತ್ತಾರೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, ಯಕ್ಷಗಾನ ರಂಗದಲ್ಲಿ ಬೆಳೆಯುತ್ತಿರುವವರು ಕೇವಲ ಕೆಲವೇ ಮಂದಿ ಮಾತ್ರ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡು ಯಕ್ಷಗಾನ ರಂಗದ ಭಾಗವತಿಕೆಯಲ್ಲಿಯೂ ಕೂಡ ಅಷ್ಟೇ ಯಶಸ್ಸನ್ನು ಪಡೆದವರು ಸೃಜನ್ ಗಣೇಶ್ ಹೆಗಡೆ ಗುಂಡೂಮನೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದಲ್ಲಿ ಶ್ರೀಧರ್ ಹೆಗಡೆ ಗುಂಡೂಮನೆ ಮತ್ತು ಜಯಲಕ್ಷ್ಮಿ ಹೆಗಡೆ ಇವರ ಮಗನಾಗಿ 26.09.1997ರಂದು ಜನನ. ಎಂ.ಎ(ಕನ್ನಡ) ಸ್ಪೆಷಲ್ ಎಜ್ಯುಕೇಶನ್ ಇನ್ ಕಂಪೇರಿಟಿವ್ ಸ್ಟಡೀಸ್ ಇವರ ವಿದ್ಯಾಭ್ಯಾಸ. ಯಕ್ಷಗಾನದ ಮೇಲೆ ಇದ್ದ ಪ್ರೀತಿ ಯಕ್ಷಗಾನಕ್ಕೆ ಬರಲು ಪ್ರೇರಣೆ. ಭಾಸ್ಕರ್ ನೀರೇರಿ ಮತ್ತು ಕೆ.ಪಿ.ಹೆಗಡೆ ಇವರ ಯಕ್ಷಗಾನ ಗುರುಗಳು. ಹಿಂದಿನ ಭಾಗವತರಿಂದ ಇಂದಿನ ತಲೆಮಾರಿನ ಭಾಗವತರ ತನಕವೂ ಅನೇಕ ಭಾಗವತರ ಭಾಗವತಿಕೆಯನ್ನು ಇಷ್ಟಪಟ್ಟು ಅನೇಕ ಶೈಲಿಯನ್ನು ತಾವೂ ಸ್ವತಃ ರೂಢಿಸಿಕೊಂಡಿದ್ದಾರೆ. ಕಲ್ಯಾಣಿ, ಭೀಮ್ ಪಲಾಸ್, ಹಿಂದೋಳ ಇತ್ಯಾದಿ ನೆಚ್ಚಿನ ರಾಗಗಳು.…

Read More

ಯಕ್ಷಗಾನದಲ್ಲಿ ಹೊಸತನ, ನಾವೀನ್ಯ ಪ್ರಯೋಗಶೀಲತೆಗಳು ನಿತ್ಯನೂತನ, ಯಕ್ಷ ಸಂವಿಧಾನದ ಒಳಗಡೆಯೇ ಒಂದಿಷ್ಟು ವಿಭಿನ್ನ- ವಿನೂತನ ಆಶಯಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆಗಳು ಇಂದು ಕಂಡು ಬರುತ್ತಿವೆ. ನಿಜ ಜೀವನದಲ್ಲಿ ಸತಿಪತಿಗಳಾಗಿರುವ ಹವ್ಯಾಸಿ ಕಲಾವಿದರು ಪ್ರಸಂಗದಲ್ಲಿ ಸತಿಪತಿಗಳ ಯುಗಳ ಪಾತ್ರ ನಿರ್ವಹಿಸುವ ಮೂಲಕ ಗಮನ ಸಳೆದಿದ್ದು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ರಚನೆಯ ಚಿತ್ರ-ಫಲ್ಗುಣ ಎನ್ನುವ ಯಕ್ಷಕಥಾ ರೂಪಕದಲ್ಲಿ. ದಿನಾಂಕ 15-10-2023ರಂದು ಹೀಗೊಂದು ಪರಿಕಲ್ಪನೆ ರಂಗಾರ್ಪಣೆಗೊಂಡಿತು. ನೇಪಥ್ಯದ ಪೌರಾಣಿಕ ಕಥೆಯೊಂದರ ಎಳೆ ಅನುಸರಿಸಿ ಮೊಗೆಬೆಟ್ಟು ಎರಡು ಪಾತ್ರಗಳನ್ನು ಚಿತ್ರಿಸಿ, ಅದಕ್ಕೆ ಅನುಗುಣವಾಗಿ ನೃತ್ಯ, ಪರಿಣಾಮಕಾರಿ ಪದ್ಯಗಳ ರಚಿಸಿದರು. ಪ್ರಸಿದ್ಧ ಹವ್ಯಾಸಿ ಕಲಾವಿದರಾದ ಶಶಾಂಕ್ ಪಟೇಲ್ ಹಾಗೂ ಅವರ ಪತ್ನಿ ಶೃತಿಕಾಶಿ ಇದರಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಚಿತ್ರ ಫಲ್ಗುಣ ಕುತೂಹಲ ಹಾಗೂ ಸಾಕಷ್ಟು ಪ್ರತೀಕ್ಷೆಗಳನ್ನು ಸೃಷ್ಟಿಸಿತ್ತು. ನಿಜ ಜೀವನದ ದ೦ಪತಿಗಳು, ಯಕ್ಷಗಾನದಲ್ಲಿಯೂ ಜೋಡಿಯಾಗಿ ಕಾಣಿಸಿಕೊಳ್ಳುವುದೆ೦ದರೆ ನಿರೀಕ್ಷೆಗಳು ಸಹಜ. ದಂಪತಿಗಳ ಕಲಾಭಿವ್ಯಕ್ತಿ, ಸನ್ನಿವೇಶಗಳ ಸೃಷ್ಟಿ, ರಂಗ ಚಲನೆ, ಮುಖ್ಯವಾಗಿ ಸಂಭಾಷಣೆ ಚುಟುಕಾಗಿದ್ದರೂ ಕಲಾವಿದರು ಭಾವನೆಗಳನ್ನು…

Read More

ಮೂಡುಬಿದಿರೆ : ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಆಯೋಜಿಸಿದ್ದ ಸುಮ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿದ್ದ ಲೇಖಕಿ ಸುರೇಖಾ ಭೀಮಗುಳಿಯವರ ಕೃತಿ “ತಲ್ಲಣ” ಪುಸ್ತಕ  ಬಿಡುಗಡೆ ಕಾರ್ಯಕ್ರಮವು ದಿನಾಂಕ 08-10-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಮಾಡಿದ ನಿವೃತ್ತ ಕನ್ನಡ ಉಪನ್ಯಾಸಕ, ಪುಸ್ತಕ ವಿಮರ್ಶಕ ಎಸ್.ಪಿ. ಅಜಿತ್ ಪ್ರಸಾದ್ ಇವರು ಮಾತಾನಾಡುತ್ತಾ “ಯಾವುದೇ ಕತೆ, ಕಾವ್ಯದಲ್ಲಿನ ವ್ಯಕ್ತಿಯನ್ನು ಬೇರೆ ಸಾಹಿತ್ಯಕ್ಕೆ ಪರಿಚಯಿಸುವಾಗ ಅಥವಾ ವಿಮರ್ಶಿಸುವಾಗ ಅಲ್ಲೊಂದು ಹೀಗೆಯೇ,ಇಷ್ಟು ಮಾತ್ರ ಎನ್ನುವ ಹಾಗೆ ನಿರ್ಧಿಷ್ಟ ಚೌಕಟ್ಚು ನಿರ್ಮಿಸಿಕೊಳ್ಳಬಾರದು. ಆತ ಅಥವಾ ಆಕೆ ಅಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲರ ದೃಷ್ಠಿಕೋನವೂ ಒಂದೇ ಆಗಿರುವುದಿಲ್ಲವಾಗಿರುವಾಗ ವಿವಿಧ ಆಯಾಮಗಳಲ್ಲಿ ಕಾಣಬೇಕು. ಪೌರಾಣಿಕ ಕಥಾನಕಗಳಿಗೆ ಹೊಸ ಸಾಹಿತ್ಯಿಕ ಲೇಪನ ಕೊಟ್ಟು ಕತೆಯಲ್ಲಿನ ಪಾತ್ರಧಾರಿಗಳನ್ನು ತನ್ನ ಬರಹದಲ್ಲಿ ಮಾತನಾಡಿಸುವ ಬರವಣಿಗೆಯಲ್ಲಿ ನಿಷ್ಣಾತರಾಗಿರುವ ಸುರೇಖಾ ಭೀಮಗುಳಿಯವರ ಬರವಣಿಗೆ ಶೈಲಿ ಚೆನ್ನಾಗಿದೆ. ಮಹಾಭಾರತದ ಕತೆಯಲ್ಲಿನ ಏಳು ಪಾತ್ರಗಳ ಬಗ್ಗೆ, ಅಲ್ಲಿ ಬರುವ ಪಾತ್ರಧಾರಿಗಳ ಸಂಕಟಗಳು, ಅಸಾಹಯಕತೆಗಳನ್ನು ಉಲ್ಲೇಖಿಸಿ ಬರೆದಿರುವ ಕೃತಿಯ…

Read More

ಹುಬ್ಬಳ್ಳಿ : ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ‘ಸಂಗಮ ಸಿರಿ-23’ರ ಪ್ರಶಸ್ತಿಯು ವಚನ ರಚನೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಸರೂರ್ ಗ್ರಾಮದ ಶ್ರೀ ಸಿದ್ದನಗೌಡ ಬಿಜ್ಜೂರ ಅವರು ರಚಿಸಿದ ‘ಮೃದು ವಚನ’ ಆಧುನಿಕ ವಚನ ಸಂಕಲನಕ್ಕೆ ನೀಡಲಾಗಿದೆ. ಪ್ರಶಸ್ತಿಯು ರೂ.10,000/- ನಗದು ಹಾಗೂ ಫಲಕವನ್ನು ಒಳಗೊಂಡಿದ್ದು, ನವೆಂಬರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು. ಈ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೊಳ ಅದ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಕಳೆದ ವರ್ಷ ಸಂಶೋಧನ ಕ್ಷೇತ್ರದಲ್ಲಿ ಡಾ.ದಂಡೆ ದಂಪತಿಗೆ ಪ್ರಶಸ್ತಿ ನೀಡಲಾಗಿತ್ತು. ಆಯ್ಕೆ ಸಮಿತಿ ಸಭೆಯಲ್ಲಿ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ,ಪ್ರಧಾನ ಕಾರ್ಯದರ್ಶಿ ಡಾ. ವೀರೇಶ್ ಹಂಡಗಿ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಸಾಹಿತಿ ಮಹಾಂತಪ್ಪ ನಂದೂರು, ಸುಶೀಲೇಂದ್ರ ಕುಂದರಗಿ, ಜಿ.ಎಸ್. ಅಂಗಡಿ, ಡಾ. ಬಿ.ಎಸ್. ಮಾಳವಾಡ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ್ ಅಂಗಡಿ, ಕಾರ್ಯದರ್ಶಿ ರವೀಂದ್ರ ರಾಮದುರ್ಗಕರ್ ಇತರರು ಪಾಲ್ಗೊಂಡಿದ್ದರು. ಕವಿ ಪರಿಚಯ : ಸಿದ್ದನಗೌಡ ಬಿಜ್ಜುರ್…

Read More

ಧಾರವಾಡ : ಹೆಸರಾಂತ ವೇಣು ವಾದಕ ಪಂ.ಪ್ರವೀಣ ಗೋಡ್ಖಿಂಡಿ ಇವರಿಗೆ ‘ಸಂಗೀತ ಸಾಧಕ ಪ್ರಶಸ್ತಿ’ಯನ್ನು ದಿನಾಂಕ 08-10-2023ರ ಭಾನುವಾರ ಪ್ರದಾನ ಮಾಡಲಾಯಿತು. ಧಾರವಾಡ ಘರಾಣೆಯ 6ನೇ ತಲೆಮಾರಿನ ಸಿತಾರ ವಾದಕ ಉಸ್ತಾದ್ ಹಮೀದ್ ಖಾನರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ವಿಜಯಕುಮಾರ ಪಾಟೀಲ ಹಾಗೂ ವಿನಾಯಕ ಹೆಗಡೆ ಅವರ ಗಾಯನದ ಜುಗಲ್ಬಂದಿ, ಪ್ರಶಸ್ತಿ ಪುರಸ್ಕೃತ ಪಂ.ಪ್ರವೀಣ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಸಂಗೀತ ಪ್ರಿಯರ ಮನ ಸೆಳೆಯಿತು. ನಂತರ ನಡೆದ ಹಮೀದ ಖಾನ್ ಮತ್ತು ಮೊಹಸಿನ್ ಖಾನ್ ಶಿಷ್ಯ ವೃಂದದವರಿಂದ ‘ಸಿತಾರ ಮಾಧುರ್ಯ’ ಎಂಬ ಸಾಮೂಹಿಕ ಸಿತಾರವಾದನದ ಝೇಂಕಾರ ಸಂಗೀತೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ಎಲ್ಲ ಕಲಾವಿದರಿಗೆ ಪಂ.ರವೀಂದ್ರ ಯಾವಗಲ್‌, ಕೇಶವ ಜೋಶಿ, ಬಸು ಹಿರೇಮಠ, ಚಿನ್ಮಯ ನಾಮಣ್ಣನವರ, ಗೋಪಿಕೃಷ್ಣ, ದಯಾನಂದ ಸುತಾರ, ಚಾರುದತ್ತ ಮಹಾರಾಜ, ನಿಶಾಂತ ದಿವಟೆ ಅವರು ವಿವಿಧ ವಾದ್ಯಗಳ ಸಾಥ್ ಸಂಗತ್ ನೀಡಿದರು. ಈ…

Read More

ಉಡುಪಿ : ಸಂಗೀತ ಸಭಾ ಹಾಗೂ ಆಭರಣ ಜುವೆಲರ್ಸ್ ಸಹಯೋಗದೊಂದಿಗೆ ಅಜ್ಜರಕಾಡು ಪುರಭವನದ ಸಭಾಂಗಣದಲ್ಲಿ ‘ಸಂಗೀತ ಸೌರಭ’ ಭಕ್ತಿ ಮತ್ತು ನಾಟ್ಯ ಸಂಗೀತ ಕಾರ್ಯಕ್ರಮ ದಿನಾಂಕ 08-10-2023ರ ರವಿವಾರ ಜರಗಿತು. ಉಡುಪಿ ಆಸುಪಾಸಿನ ಬಾಲ ಕಲಾವಿದರು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಚಾಲನೆ ನೀಡಿದರು. ಸಂಗೀತ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಝೀ ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಜ್ಞಾನೇಶ್ವರಿ ಗಾಡಗೆ ಭಜನೆ ಮತ್ತು ನಾಟ್ಯ ಸಂಗೀತ ಪ್ರಸ್ತುತಪಡಿಸಿದರು. ಹಾರ್ಮೋನಿಯಂನಲ್ಲಿ ಬಾಲ ಪ್ರತಿಭೆ ಕಾರ್ತಿಕೀ ಗಾಡಗೆ ಜತೆಯಾದರು. ಸಹ ಕಲಾವಿದರಾದ ನಿತೇಶ್ ತೊಂಬ್ರೆ (ಪಕವಾಜ್), ವಿಶಾಲ್ ಪಾಟೀಲ್ (ತಬಲ) ಹಾಗೂ ಸೂರಜ್ ಪಾಟೀಲ್‌ (ಸೈಡ್ ರಿದಂ), ಬಾಲಪ್ರತಿಭೆಗಳ ಪೋಷಕರಾದ ಗಣೇಶ್ ಗಾಡಗೆ, ರಾಧಾ ಗಾಡಗೆ ಕೋರಸ್ ಮೂಲಕ ಸಾಥ್ ನೀಡಿದರು. 1962ರಲ್ಲಿ ವಿಜಯನಾಥ ಶೆಣೈ ಅವರಿಂದ ಪ್ರಾರಂಭಿಸಲ್ಪಟ್ಟ ‘ಸಂಗೀತ ಸಭಾ’ ಹತ್ತು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಜನಮನ್ನಣೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು ಸೇರಿದರು.

Read More

ಬಂಟ್ವಾಳ : ‘ಮಕ್ಕಳ ಕಲಾ ಲೋಕ’ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ನಿರ್ವಹಿಸುವ 17ನೇ ವರ್ಷದ ‘ಮಕ್ಕಳ ಸಾಹಿತ್ಯ ಸಮ್ಮೇಳನ’ವು ಕಡೇಶ್ವಾಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 06-12-2023ರಂದು ಜರಗಲಿದೆ. ಮಕ್ಕಳಿಂದಲೇ ವೇದಿಕೆ ನಿರ್ವಹಣೆ, ಅಧ್ಯಕ್ಷ, ಅತಿಥಿ, ಉದ್ಘಾಟಕರು ಎಲ್ಲ ಸ್ಥಾನವನ್ನೂ ಅವರೇ ನಿರ್ವಹಿಸಲಿದ್ದಾರೆ. ಹಿರಿಯರು ಹಿನ್ನೆಲೆಯಲ್ಲಿ ಅಗತ್ಯ ಬಂದಾಗ ಮಾರ್ಗದರ್ಶನ ಮಾಡುವರು. 18 ವಯೋಮಾನದವರೆಗಿನ ಮಕ್ಕಳು ಭಾಗವಹಿಸಬಹುದು. ಯಾವುದೇ ನಿರ್ಬಂಧಗಳಿರುವುದಿಲ್ಲ, ಶಾಲೆಗೆ ಸಂಖ್ಯಾ ಮಿತಿ ಇರುವುದಿಲ್ಲ. ಸ್ಪರ್ಧೆ ಮತ್ತು ಬಹುಮಾನ ಇಲ್ಲ. ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕ ಸ್ಮರಣಿಕೆ ನೀಡಲಾಗುತ್ತದೆ. ಮಕ್ಕಳಿಗೆ ಸಾಹಿತ್ಯ ಮತ್ತು ಕಲೆಗಳಲ್ಲಿ ತೊಡಗಲು ಪ್ರೇರಣೆ ಕೊಡುವ ಮತ್ತು ಸಂಕೋಚ, ಭಯ, ಕೀಳರಿಮೆ ತೊಲಗಿಸುವ ವಿಶೇಷ ಪ್ರಯತ್ನ. • ಚಿತ್ತ ಚಿತ್ತಾರ-ಹಾಡು ನೃತ್ಯ ಮತ್ತು ಚಿತ್ರ ಏಕಕಾಲದಲ್ಲಿ 10 ಮಕ್ಕಳು ಸೇರಿ ಪ್ರದರ್ಶನ ಮಾಡಬೇಕು. • ಕಿರು ನಾಟಕ- 10 ನಿಮಿಷ- ಸರಳ ವೇಷ ಭೂಷಣ – ಸಂಖ್ಯಾ ಮಿತಿಯಿಲ್ಲ. •…

Read More

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾ೦ಬ ಆಂಜನೇಯ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ‘ಗಡಿನಾಡ ಕವಿ ಭಾವಸಂಗಮ’ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 22-10-2023 ರಂದು ನಡೆಯಿತು. ಕವಿಗೋಷ್ಠಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ “ಸಮಾಜದ ಒಳಿತು ಕೆಡುಕುಗಳ ಮೇಲೆ ಸಾಹಿತ್ಯ ಅಗಾಧ ಪರಿಣಾಮ ಬೀರುತ್ತದೆ. ಉತ್ತಮ ಸಾಹಿತ್ಯ ಸಾರ್ವಕಾಲಿಕವಾಗಿ ಜನಮಾನಸದಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದತ್ತ ಚಿತ್ತ ಹರಿಸಬೇಬೇಕು” ಎಂದು ತಿಳಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಯುವಕವಿ ಹಾಗೂ ಉಪನ್ಯಾಸಕರಾದ ಬಾಲಕೃಷ್ಣ ಬೇರಿಕೆ ಮಾತನಾಡಿ “ನಿರಂತರ ಪರಿಶ್ರಮ, ಆಸಕ್ತಿ, ಅಧ್ಯಯನ, ಮಹಾನ್ ಕವಿಗಳ ಸಾಹಿತ್ಯ ಮಂಥನ ಭವಿಷ್ಯದ ಸಾಹಿತಿಗಳಿಗೆ ಪ್ರೇರಕವಾಗಿದೆ. ಶ್ರದ್ಧಾ ಕೇಂದ್ರಗಳಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಾಗ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಸಾಧ್ಯವಿದೆ” ಎಂದರು. ನಾರಾಯಣ ನಾಯ್ಕ ಕುದುಕ್ಕೊಳಿ, ವಿಷ್ಣುಗುಪ್ತ ಪುಣಚ, ವನಜಾಕ್ಷಿ ಚಂಬ್ರಕಾನ, ಸುಶ್ಮಿತಾ ಕುಕ್ಕಾಜೆ, ದೀಕ್ಷಿತ್ ಮಾಣಿಲ, ಅನುರಾಧ ಪಳನೀರು, ನವ್ಯಶ್ರೀ ಕಾಮಜಾಲು ಕವನ ವಾಚಿಸಿದರು. ಹಿರಿಯ ಸಾಹಿತಿ ಸುಂದರ ಬಾರಡ್ಕ ಉಪಸ್ಥಿತರಿದ್ದರು. ಯುವ…

Read More

ಮೂಡುಬಿದಿರೆ : ವಿದ್ಯಾಗಿರಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಮ್ಮಿಕೊಂಡ ‘ಸಂಸ್ಕೃತಿ ಚಿಂತನ’ ಕಾರ್ಯಕ್ರಮವು ದಿನಾಂಕ 19-10-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತಿ, ಸಂಶೋಧಕಿಯಾದ ಡಾ.ಇಂದಿರಾ ಹೆಗ್ಗಡೆಯವರು ‘ಆದಿ ಆಲಡೆಗಳು’ ಎಂಬ ವಿಷಯದ ಕುರಿತು ಮಾತನಾಡುತ್ತಾ “ತುಳುನಾಡು ಮಾತೃ ಪ್ರಧಾನವಾಗಿದ್ದು, ಇಲ್ಲಿ ಹೆಣ್ಣು ಮತ್ತು ಮಣ್ಣಿಗೆ ಹೆಚ್ಚಿನ ಗೌರವ ಇದೆ. ತುಳುನಾಡು ಹೊರತು ಪಡಿಸಿದರೆ, ಅಸ್ಸಾಂ ಹಾಗೂ ಕೇರಳ ರಾಜ್ಯದಲ್ಲಿ ನಾವು ಮಾತೃ ಪ್ರಧಾನ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಯಾವುದೇ ಆಚರಣೆ ಮಾಡುವ ಮೊದಲು, ಅದರ ಆಶಯ ಹಾಗೂ ಅಂತಃಸತ್ವ ಅರಿತುಕೊಳ್ಳಬೇಕು. ಕುರುಡಾಗಿ ಪಾಲಿಸಬಾರದು. ತುಳುನಾಡಿನ ಸಂಸ್ಕೃತಿಯಲ್ಲಿ ಪುನರ್ಜನ್ಮದ ಪರಿಕಲ್ಪನೆ ಇಲ್ಲ. ನಮ್ಮ ಕೆಲಸವನ್ನು ಪರಿಪೂರ್ಣವಾಗಿ ಮಾಡಿದಾಗ ಸಂತೃಪ್ತಿ ಸಿಗುತ್ತದೆ. ಆಗ ಅತೃಪ್ತಿಗೆ ಅವಕಾಶವೇ ಇಲ್ಲ. ನಮ್ಮ ಸುತ್ತಲಿನ ಭ್ರಮಾ ಲೋಕದಿಂದ ಹೊರಬನ್ನಿ, ಮಾತು, ಬರಹಕ್ಕಿಂತ ಓದಿನ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಿ. ಯಾವುದೇ ಹೇರಿಕೆಯ ಬದಲು ನಾವು ನಮ್ಮ ಸಂಸ್ಕೃತಿಯನ್ನು ಪ್ರೀತಿಸಬೇಕು ಹಾಗೂ ಪಾಲಿಸಬೇಕು” ಎಂದು…

Read More

ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯದ ರಜತ ಸಂಭ್ರಮದಲ್ಲಿ ದಿನಾಂಕ 24-10-2023ರಂದು ವೈವಿದ್ಯಮಯ ಸಂಗೀತ ನೃತ್ಯ ಉತ್ಸವದೊಂದಿಗೆ ‘ವಿಜಯದಶಮಿ ಸಂಗೀತೋತ್ಸವ-2023’ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾಪ್ಟನ್ ಶ್ರೀ ಗಣೇಶ್ ಕಾರ್ಣಿಕ್ ಇವರು ಮಾತನಾಡುತ್ತಾ “ನಮ್ಮೊಳಗಿನ ಭಗವಂತನನ್ನು ಹೊರ ಜಗತ್ತಿನ ಭಗವಂತನೊಂದಿಗೆ ಲೀನಗೊಳಿಸಿದಾಗ ನಮ್ಮ ಬದುಕು ಸುಂದರವಾಗುತ್ತದೆ’ ಸಂಗೀತದ ಎಲ್ಲ ಪರಿಕರಗಳು ಒಂದೇ ಶ್ರುತಿಯಲ್ಲಿ ಲೀನವಾದಾಗ ಹೇಗೆ ಅದ್ಭುತ ಸಂಗೀತ ಸೃಷ್ಟಿಯಾಗುತ್ತದೋ, ಹಾಗೆಯೇ ನಮ್ಮೊಳಗಿನ ಭಗವಂತನನ್ನು ಪ್ರಕೃತಿಯಲ್ಲಿನ ಭಗವಂತನ ಶಕ್ತಿಯೊಂದಿಗೆ ಲೀನಗೊಳಿಸಿದಾಗ ಬದುಕು ಸುಮಧುರವಾಗುತ್ತದೆ. ಈ ಲೀನತೆ ತಪ್ಪಿದಾಗ ಸಮಾಜದಲ್ಲಿ ರಾಕ್ಷಸೀ ಪ್ರವೃತ್ತಿ ಪ್ರತಿಬಿಂಬಿತವಾಗುತ್ತದೆ, ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ. ನಮ್ಮ ಸನಾತನ ಸಂಸ್ಕೃತಿಯ ಪರಂಪರೆಯನ್ನು ಅರಿತು ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ಕಳೆದ ಇಪ್ಪತ್ತೈದು ವರ್ಷಗಳಿಂದ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಇಂತಹ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ…

Read More