Author: roovari

ಮಂಗಳೂರು : ಶಾಂತಲಾ ಪ್ರಶಸ್ತಿ ಪುರಸ್ಕೃತೆ ದಿ. ಶ್ರೀಮತಿ ಜಯ ಲಕ್ಷ್ಮೀ ಆಳ್ವ ಅವರ 90ನೇ ವರ್ಷದ ಜನ್ಮ ವರ್ಷಾಚರಣೆಯ ಅಂಗವಾಗಿ ಮಂಗಳೂರಿನ ಶ್ರೀದೇವಿ ನೃತ್ಯಕಲಾ ಕೇಂದ್ರ ಆಯೋಜಿಸುವ ‘ನೃತ್ಯೋತ್ಸವ-2023’ ಪ್ರತಿಭಾ ಪ್ರದರ್ಶನ ಹಾಗೂ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆ ದಿನಾಂಕ 27-10-2023 ಮತ್ತು 28-10-2023ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ದಿನಾಂಕ 27-10-2023ರಂದು ಪೂರ್ವಾಹ್ನ ಘಂಟೆ 10.00ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮವನ್ನು ಮಣಿಪುರಿ ನೃತ್ಯದ ಹಿರಿಯ ಪ್ರತಿವಾದಕರಾದ ಪದ್ಮಶ್ರೀ ದರ್ಶನ ಜ್ಹವೇರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೃತ್ಯಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಆಯ್ದ 20 ಸ್ಪರ್ಧಾಳುಗಳು ಭಾಗವಹಿಸಲಿದ್ದು, ವಿಜೇತರಿಗೆ ‘ಯುವಕಲಾ ಪ್ರಶಸ್ತಿ’ ಪ್ರದಾನಿಸಲಾಗುವುದು.ದಿನಾಂಕ 28-10-2023 ರಂದು ಸಂಜೆ ಘಂಟೆ 5.30ಕ್ಕೆ ನೃತ್ಯ ಗುರು ಕೆ.ಎನ್.ದಂಡಾಯುಧಪಾಣಿ ಒಳ್ಳೈ ಸ್ಮರಣಾರ್ಥ ನೀಡಲಾಗುವ ‘ನಾಟ್ಯಕಲಾ ತಪಸ್ವಿ ಪ್ರಶಸ್ತಿಯನ್ನು ಕಲಾವಿದೆ ಪದ್ಮಶ್ರೀ ಡಾ.ನರ್ತಕಿ ನಟರಾಜ ಚೆನ್ನೈ ಅವರಿಗೆ ಹಾಗೂ ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರ ಸ್ಮರಣಾರ್ಥ ‘ಜಯ…

Read More

ಮಂಗಳೂರು : ತುಳು ಪರಿಷತ್ ವತಿಯಿಂದ ಮಯೂರಿ ಫೌಂಡೇಶನ್ ಸಹಭಾಗಿತ್ವದಲ್ಲಿ ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ದಿನಾಂಕ 16-10-2023ರಂದು ಆಯೋಜಿಸಲಾದ ಎರಡನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಸುಳ್ಯ ಬಂಟಮಲೆ ಅಕಾಡೆಮಿ ಅಧ್ಯಕ್ಷ ಎ.ಕೆ.ಹಿಮಕರ ಉದ್ಘಾಟಿಸಿ ಮಾತನಾಡುತ್ತಾ “ಕುಂದಕನ್ನಡ, ಕೊರಗ ಭಾಷೆ ಸೇರಿದಂತೆ ಸಣ್ಣ ಭಾಷೆಗಳ ಬೆಳವಣಿಗೆಗೆ ಅಕಾಡೆಮಿಯ ಸ್ಥಾಪನೆ ಅಗತ್ಯವಿದೆ. ಆಯಾ ಪ್ರದೇಶದ ಜನರು ತಮ್ಮ ಮಿತಿಯಲ್ಲಿ ತಮ್ಮ ಭಾಷೆಯ ಸಂರಕ್ಷಣೆಗಾಗಿ ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕಿ ಹಾಗೂ ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಇವರು ಮಾತನಾಡಿ “ತುಳುನಾಡಿನ ಭಾಷಾ ವೈವಿಧ್ಯತೆ ನಮ್ಮ ಪ್ರದೇಶದ ಅನನ್ಯತೆಯಾಗಿದ್ದು, ನಮ್ಮಲ್ಲಿ ಹಲವು ಭಾಷೆಗಳು, ಹಲವು ಧರ್ಮಗಳಿದ್ದರೂ ನಮ್ಮಲ್ಲಿ ಭಾಷಾ ಸಾಮರಸ್ಯದ ಮೂಲಕ ಧರ್ಮ ಸಾಮರಸ್ಯ ನೆಲೆಯಾಗಿದೆ” ಎಂದು ಅಭಿಪ್ರಾಯಪಟ್ಟರು. ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳುನಾಡಿನ ಹನ್ನೆರಡು ಭಾಷೆಗಳಾದ ತುಳು, ಕನ್ನಡ, ಬ್ಯಾರಿ, ಅರೆಭಾಷೆ, ಕುಂದ ಕನ್ನಡ, ಹವ್ಯಕ ಕನ್ನಡ, ಶಿವಳ್ಳಿ ತುಳು, ಸ್ಥಾನಿಕ ತುಳು, ಕೊರಗ ಭಾಷೆ, ಜಿ.ಎಸ್‌.ಬಿ.…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ದಿನಾಂಕ 09-10-2023ರಂದು ‘ಕರ್ಣ ಪರ್ವ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ನಿತೀಶ್ ಕುಮಾರ್, ಚೆಂಡೆ ಮದ್ದಳೆಗಳಲ್ಲಿ ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಶ್ರೀ ಮುರಳೀಧರ ಕಲ್ಲೂರಾಯ ಮತ್ತು ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ಕರ್ಣ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ಅರ್ಜುನ), ಶ್ರೀ ಗುಡ್ಡಪ್ಪ ಬಲ್ಯ (ಶಲ್ಯ), ಶ್ರೀ ದುಗ್ಗಪ್ಪ ನಡುಗಲ್ಲು (ಅಶ್ವಸೇನ) ಸಹಕರಿಸಿದರು.

Read More

ಯುರೋಪ್ : ವಿದುಷಿ ರಾಧಿಕಾ ಶೆಟ್ಟಿಯವರು ಭರತನಾಟ್ಯದ ‘ಆರಂಭಿಕ ಅಭಿನಯ ಕಾರ್ಯಾಗಾರ’ವನ್ನು ದಿನಾಂಕ 08-11-2023ರಿಂದ 19-11-2023ರವರೆಗೆ ಯುರೋಪಿನ ವಿವಿಧೆಡೆಗಳಲ್ಲಿ ನಡೆಸಿಕೊಡಲಿದ್ದಾರೆ. ಸನಾತನ ನಾಟ್ಯಾಲಯದ ಹೆಸರಾಂತ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಅವರ ಗರಡಿಯಲ್ಲಿ ಆರಂಭಿಕ ಹೆಜ್ಜೆಗಳನ್ನು ಹಾಕಲಾರಂಭಿಸಿದ ರಾಧಿಕಾ, ಇಂದು ದೇಶದ ಉದ್ದಗಲಕ್ಕೂ ತಮ್ಮ ಪ್ರೌಢ ಪ್ರದರ್ಶನದ ಮೂಲಕ ಗುರುತಿಸಿಕೊಂಡಿರುವ ಮಂಗಳೂರಿನ ಏಕವ್ಯಕ್ತಿ ಶಾಸ್ತ್ರೀಯ ಭರತನಾಟ್ಯ ಕಲಾವಿದೆ. ನೃತ್ಯದ ಆಳ ಮತ್ತು ವಿಸ್ತಾರವನ್ನು ಹುಡುಕುತ್ತ ಇವರು ಆಕರ್ಷಿತರಾದದ್ದು ಪ್ರಸಿದ್ಧ ನೃತ್ಯಗಾತಿ ಪದ್ಮಿನಿ ರಾಮಚಂದ್ರನ್ ಅವರ ಕಡೆಗೆ. ಪದ್ಮಿನಿ ಅವರ ಮಾರ್ಗದರ್ಶನದಲ್ಲಿಯೇ ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡಿದ ರಾಧಿಕಾ, ಮತ್ತಷ್ಟು ಅಭಿನಯ ಪ್ರೌಢಿಮೆ ಸಾಧಿಸುವಂತಾಗಲು ಕಾರಣರಾದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪೊತ್ತಿದ ಕಲಾವಿದೆ ಭ್ರಗಾ ಬಸೆಲ್. ಅಭಿನಯ ಕಲಿಸುವಂಥದ್ದಲ್ಲ, ಅದು ಕಲಾವಿದರಿಗೆ ಆಂತರಂಗಿಕ ಎಂಬುದು ರಾಧಿಕಾ ಅವರ ವಿಷಯದಲ್ಲಿಯೂ ಸತ್ಯ. ನೃತ್ಯದಲ್ಲಿ ಹಾವಭಾವಾಭಿನಯವೇ ಇವರ ಸಾಮರ್ಥ್ಯ. ಅವರ ಮಾತನ್ನೇ ಉಲ್ಲೇಖಿಸಿ ಹೇಳುವುದಾದರೆ, ಅವರೊಬ್ಬ ಸಮರ್ಥ ನೃತ್ಯಪಟುವಲ್ಲ. ನಾಟ್ಯವೇನಿದ್ದರೂ ಅವರಿಗೆ ಅಂತರಂಗವನ್ನು ಪ್ರೇಕ್ಷಕರ ಮುಂದಿಡುವ ಮಾಧ್ಯಮವಷ್ಟೇ. ಇವರ…

Read More

ಕಣಿಯೂರು : ನವರಾತ್ರಿ ಪ್ರಯುಕ್ತ ಕಣಿಯೂರಿನ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ದಿನಾಂಕ 21-10-2023ರಂದು ಸಂಜೆ ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಇವರಿಂದ ಅಗರಿ ಶ್ರೀನಿವಾಸ ರಾವ್ ವಿರಚಿತ ‘ಶಾಂಭವೀ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀಗಳಾದ ಸೂರ್ಯ ನಾರಾಯಣ ಭಟ್ ಕಣಿಯೂರು, ಗಣಪತಿ ಭಟ್ ಆನೇಕಲ್ಲು, ರಾಮಮೂರ್ತಿ ಕುದ್ರೆಕೋಡ್ಳು, ಗಿರೀಶ ಭಟ್ ಕಿನಿಲಕೋಡಿ ಮತ್ತು ಟಿ.ಡಿ. ಗೋಪಾಲಕೃಷ್ಣ ಭಟ್ ಪುತ್ತೂರು ಹಾಗೂ ಅರ್ಥಧಾರಿಗಳಾಗಿ ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಜಬ್ಬಾರ್ ಸಮೋ ಪುತ್ತೂರು, ಶ್ಯಾಮ ಭಟ್ ಪಕಳಕುಂಜ, ಜಯರಾಂ ಭಟ್ ದೇವಸ್ಯ, ಶಂಕರ್ ಸಾರಡ್ಕ ಮತ್ತಿತರರು ಸಹಕರಿಸಿದರು. ಇದೇ ಸಂದರ್ಭದಲ್ಲಿ ಭಾಗವತ ಶ್ರೀ ಸೂರ್ಯ ನಾರಾಯಣ ಭಟ್ ಕಣಿಯೂರು ಮತ್ತು ಮದ್ದಳೆಗಾರ ಶ್ರೀ ಟಿ.ಡಿ.ಗೋಪಾಲಕೃಷ್ಣ ಭಟ್ ತೆಂಕಬೈಲು ಇವರನ್ನು ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಗೌರವಿಸಿ ಸನ್ಮಾನಿಸಿಲಾಯಿತು.

Read More

ವಾಮನರೂಪ ವಿಶ್ವವನ್ನೇ ವ್ಯಾಪಿಸಿದಂತೆ ಚಿಕ್ಕ ರೂಪಕ್ಕೆ ಇರುವ ಶಕ್ತಿ ಅಗಾಧವಾದದ್ದು. ದೊಡ್ಡ ಆಲದ ಮರವನ್ನು ಬೋನ್ಸಾಯ್ ಮರದ ರೂಪದಲ್ಲಿ ನೋಡಿದಂತೆ, ಸೇಬುಹಣ್ಣಿನಿಂದ ತುಂಬಿದ ಮರವನ್ನು ಚಿಕ್ಕ ಹೂದಾನಿಯಲ್ಲಿ ನೋಡಿದಾಗ ಸಿಗುವ ಸಂತೋಷವೇ ಬೇರೆ. ಅದು ಮಿನಿಯೇಚರ್ ಅಂಚೆ ಮತ್ತು ಸ್ಟಾಂಪ್ ಮೇರುಕೃತಿಗಳ ಕಲಾಪ್ರದರ್ಶನ ನೋಡಿದಾಗ ಆದ ಅನುಭವ. ಮೊದಲೆಲ್ಲಾ ಅಂಚೆ ಚೀಟಿಗಳನ್ನು ಸಂಗ್ರಹಿಸುವುದೇ ಒಂದು ದೊಡ್ಡ ಹವ್ಯಾಸವಾಗಿತ್ತು. ಗ್ರಾಫ್ ಪೇಪರ್ಗಳಲ್ಲಿ ಅದನ್ನು ಅಂಟಿಸಿ ಆಲ್ಬಂ ಮಾಡಿ ಇಡುತ್ತಿದ್ದರು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ವಿಶೇಷ ಸಂದೇಶ ಸ್ವೀಕರಿಸಿದಂತೆ, ಒಳ್ಳೆಯ ಕಲಾಪ್ರದರ್ಶನ ನೋಡಿದ ಅನುಭವ. ಕಲಾಪ್ರಿಯರನ್ನು, ಕಲಾವಿದರನ್ನು ಆಕರ್ಷಿಸುವಲ್ಲಿ, ಹೊಸತನವನ್ನು ಪರಿಚಯಿಸಿ, ಪ್ರೇರೇಪಿಸುವದರಲ್ಲಿ ಇದೊಂದು ಉತ್ತಮ ಪ್ರದರ್ಶನ. ದೊಡ್ಡ, ದೊಡ್ಡ ಕಲಾಕೃತಿಗಳನ್ನು ಚಿಕ್ಕ ಸ್ಟಾಂಪ್ ಸೈಜ್ನಲ್ಲಿ ಮೂಲರೂಪದಲ್ಲಿ ನೋಡುವ ಅವಕಾಶ. ಚಿತ್ರಗಳ ಗುಣಮಟ್ಟ ಅದನ್ನು ಪ್ರದರ್ಶಿಸಿದ ರೀತಿ ಅದರ ಹಿಂದಿರುವ ಪ್ರಯತ್ನ ಎಲ್ಲವೂ ಶ್ಲಾಘನೀಯವಾದದ್ದು. ಶೆಣೈ ಆರ್ಟ್ ಫೌಂಡೇಷನ್ ಇದನ್ನು ಆಯೋಜನೆ ಮಾಡಲಾಗಿತ್ತು. 20-10-2023ರಂದು ಬೆಂಗಳೂರಿನ ವಿಜಯನಗರದ ಶೆಣೈ ಡಿಸೈನ್ ಸ್ಟುಡಿಯೋದಲ್ಲಿ ವಿಶ್ವದ ಬೇರೆ…

Read More

ಮಂಗಳೂರು : ಕಾಸರಗೋಡಿನ ಸುಜೀವ ಪ್ರಕಾಶನ ಮತ್ತು ಮಂಗಳೂರಿನ ಸಾಹಿತ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಪ್ರಸಿದ್ಧ ಜ್ಯೋತಿಷ್ಯ ಚಿಂತಕ ಲೇಖಕ ಶ್ರೀ ಸುಕುಮಾರ ಆಲಂಪಾಡಿಯವರ ‘ಜ್ಯೋತಿಷ್ಯಸಾರಕೋಶ’ ಕೃತಿಯ ಬಿಡುಗಡೆ ಸಮಾರಂಭವು ದಿನಾಂಕ 15-10-2023ರ ನಡೆದ ಸಂಜೆ ಘಂಟೆ 4.00ಕ್ಕೆ ಮಂಗಳೂರಿನ ಜಿ.ಹೆಚ್.ಎಸ್ ರಸ್ತೆ ಯಲ್ಲಿರುವ ಹೊಟೇಲ್ ಶ್ರೀನಿವಾಸ ಇದರ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಪ್ರಸಿದ್ಧ ವೈದಿಕ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ. ಸತ್ಯಕೃಷ್ಣ ಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ “ಜ್ಯೋತಿಷ್ಯ ಶಾಸ್ತ್ರ ಸನತನ ಋಷಿಪರಂಪರೆಯಲ್ಲಿ ಬೆಳಗಿದ ಶಾಸ್ತ್ರ, ವೇದಗಳ ಕಾಲದಲ್ಲಿ ಕಾಲಗಣನೆಯನ್ನು ತಿಳಿಸುವ ವೇದಾಂಗ ಜ್ಯೋತಿಷ್ಯವು ಮುಂದೆ ಹಲವಾರು ಚಿಂತನೆಗಳನ್ನು ಒಳಗೊಂಡು ಆಧುನಿಕ ಸ್ವರೂಪವನ್ನು ಪಡೆಯಿತು. ಜ್ಯೋತಿಷ್ಯವನ್ನು ಕುರಿತು ಸಮಗ್ರ ದೃಷ್ಟಿಕೋನದಿಂದ ಕೂಡಿದ ಜ್ಯೋತಿಷ್ಯಸಾರ ಕೋಶವು ಒಂದು ಮಾದರಿ ಪಠ್ಯವಾಗಿದೆ. ಜ್ಯೋತಿಷ್ಯ ಶಾಸ್ತ್ರವನ್ನು ಕುರಿತು ಸುಕುಮಾರ ಆಲಂಪಾಡಿಯವರು ಕಳೆದ ಅನೇಕ ವರ್ಷಗಳಿಂದ ಮಡಿದ ಅಧ್ಯಯನ, ಆಲೋಚನೆಗಳು ಈ ಕೃತಿಯಲ್ಲಿ ಸಾಕಾರಗೊಂಡಿದೆ.” ಎಂದರು. ಶುಭಾಶಂಸನೆ ನಡೆಸಿದ ಹಿರಿಯ ಜ್ಯೋತಿಷ್ಯ ಸಲಹೆಗಾರರೂ, ಶಾಸ್ತ್ರಚಿಂತಕರೂ ಆದ…

Read More

ಹೊನ್ನಾವರ : ಹಿರಿಯ ಸಾಹಿತಿ ಪತ್ರಕರ್ತ ಮತ್ತು ಸಾಂಸ್ಕೃತಿಕ ನೇತಾರ ಎಲ್.ಎಸ್.ಶಾಸ್ತ್ರಿ ಅವರು ಬರೆದ ಡಾ. ಕೆರೆಮನೆ ಮಹಾಬಲ ಹೆಗಡೆಯವರ ರಂಗಚಿಂತನೆಗಳ “ಯಕ್ಷಗಾನ ರಂಗಪ್ರಜ್ಞೆ” ಪುಸ್ತಕದ ಬಿಡುಗಡೆ ಸಮಾರಂಭವು ದಿನಾಂಕ 21-10-2023ರಂದು ಗುಣವಂತೆಯ ಶಿವರಾಮ ಹೆಗಡೆ ರಂಗವೇದಿಕೆಯಲ್ಲಿ ನಡೆಯಿತು. ಮಹಾಬಲರ 14ನೇ ಮತ್ತು ರಾಮ ಹೆಗಡೆಯವರ 4ನೇ ಸಂಸ್ಮರಣಾ ದಿನದ ಅಂಗವಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಗೊಳಿಸಿ ಮತ್ತು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಖ್ಯಾತ ಅರ್ಥಧಾರಿ, ಕಲಾಚಿಂತಕ, ಪ್ರಸಂಗಕರ್ತ ಹಾಗೂ ಸಾಹಿತಿಯಾದ ಡಿ.ಎಸ್.ಶ್ರೀಧರ ಕಿನ್ನಿಗೋಳಿ ಮಾತನಾಡಿ “ಮಹಾಬಲ ಹೆಗಡೆಯವರು ತಾವೇ ಪಾತ್ರವಾಗುತ್ತಿದ್ದರು. ಆ ಸಿದ್ಧಿ ಅವರಂತೆ ಬೇರೆ ಯಾವ ಕಲಾವಿದರಿಗೂ ಸಾಧ್ಯವಾಗಿಲ್ಲ, ಆಗಲಾರದು. ಏಕೆಂದರೆ ಅವರು ಪಾತ್ರವನ್ನು ಪೂರ್ತಿ ತಮ್ಮ ಮೈಗೆ ಆಹ್ವಾನಿಸಿಕೊಳ್ಳುತ್ತಿದ್ದರು. ಅದರ ಹಿಂದೆ ಅವರ ಆಳ ಅಧ್ಯಯನ ಮತ್ತು ರಂಗಪ್ರಜ್ಞೆಯ ಕಲ್ಪನೆ ಕೆಲಸ ಮಾಡುತ್ತಿತ್ತು. ಮಹಾಬಲರು ಕೇವಲ ಕಲಾವಿದರು ಮಾತ್ರವಲ್ಲ, ಕಲಾಪ್ರೇಮಿಗಳನ್ನು ಹಾಗೂ ಕಲಾಸಕ್ತರನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ಪಡೆದಿದ್ದರೆಂಬುದೊಂದು ವಿಸ್ಮಯ. ಎಲ್.ಎಸ್. ಶಾಸ್ತ್ರಿಯವರಲ್ಲದೇ ಮಹಾಬಲರ ಬಗ್ಗೆ…

Read More

ಮಂಗಳೂರು : ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಂಗಳೂರು ಕೆನರಾ ಪ್ರೌಢ ಶಾಲೆಯ ಶಿಕ್ಷಕಿ ರಾಜೇಶ್ವರಿ ಕುಡುಪು ಇವರು ರಚಿಸಿರುವ ‘ಕಲಾ ಸಂಪದ’ ಕೃತಿ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 18-10-2023ರಂದು ಬುಧವಾರ ನಡೆಯಿತು. ಡೊಂಗರಕೇರಿಯ ಕೆನರಾ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಅರುಣಾ ಕುಮಾರಿ ಸಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಕಲಾ ಸಂಪದ ಲೇಖಕಿಯಾದ ಶ್ರೀಮತಿ ರಾಜೇಶ್ವರಿ ಕುಡುಪು ಇವರ ಪರಿಚಯ ಮತ್ತು ಸಾಧನೆಯ ಬಗ್ಗೆ ಹೇಳಿದರು. ಕೆನರಾ ಹೈಸ್ಕೂಲಿನ ಸಂಚಾಲಕರಾದ ಶ್ರೀ ಕೆ. ಸುರೇಶ್ ಕಾಮತ್ ಇವರು ಕಲಾ ಸಂಪದ ಕೃತಿಯನ್ನು ಬಿಡುಗಡೆ ಮಾಡಿ ತಮ್ಮ ಮೆಚ್ಚುಗೆ ವ್ಯಕಪಡಿಸಿದರು. ಆ ನಂತರ ಶ್ರೀಮತಿ ರಾಜೇಶ್ವರಿ ಕುಡುಪು ಇವರು ಒಂಬತ್ತನೇ ತರಗತಿಯ ಕಲಾ ಸಂಪದ ಪುಸ್ತಕ ರಚನೆಯ ಹಿಂದೆ ಪ್ರೋತ್ಸಾಹ ನೀಡಿದ ಅವರ ಪತಿ ಶ್ರೀ ಕೆ. ರಮಾನಂದ ರಾವ್ ಮತ್ತು ಕೆನರಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಅರುಣ ಕುಮಾರಿ ಹಾಗೂ ಕೆನರಾ ಪ್ರೌಢ ಶಾಲೆಯ…

Read More

ಉಡುಪಿ : ನವರಾತ್ರಿಯ ಸಂದರ್ಭದಲ್ಲಿ “ಸಿಂಧೂರ” ಎನ್ನುವ ಶೀರ್ಷಿಕೆಯಡಿಯಲ್ಲಿ ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ (ರಿ.) ಉಡುಪಿಯ ಸಹಯೋಗದಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನ ದಿನಾಂಕ 20-10-2023ರಂದು ಉದ್ಘಾಟಣೆಗೊಂಡಿತು. ಕುಂಜಿಬೆಟ್ಟಿನ ಶಾರದಾ ಮಂಟಪದ ಕೆ. ಆನಂದ ರಾವ್ ಸಭಾಂಗಣದ ಗ್ಯಾಲರಿಯಲ್ಲಿ ಡಾ.ಜನಾರ್ದನ ಹಾವಂಜೆಯವರ ನವದುರ್ಗೆಯರ ಕಾವಿ ವರ್ಣದ ಕಲಾಕೃತಿಗಳ ಈ ಪ್ರದರ್ಶನವನ್ನು ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಡಿ.ಜಿ.ಎಂ. ಸಿ. ಎಸ್. ರಾವ್ ಉದ್ಘಾಟಿಸಿದರು. “ಭಾರತೀಯ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲೊಂದಾದ ಪುರಾತನವಾದ ಕಾವಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಾವಂಜೆಯವರ ಶ್ರಮ ನಿಜಕ್ಕೂ ಸ್ತುತ್ಯಾರ್ಹವಾದುದು. ಕೆಂಪು ಹಾಗೂ ಬಿಳಿ, ಸುಣ್ಣ ಮತ್ತು ಕೆಮ್ಮಣ್ಣು ಇವನ್ನಷ್ಟೇ ಬಳಸಿ ರಚಿಸುವ ಈ ಕಲಾಪ್ರಕಾರಕ್ಕೆ ಇನ್ನಾದರೂ ತಕ್ಕುದಾದ ಪ್ರಾಶಸ್ತ್ಯ ದೊರೆತು ಇನ್ನಷ್ಟು ಕಲಾಕಾರರು ಈ ಕೊಂಕಣ ಕರಾವಳಿಯ ಭಾಗದ ಕಲೆಯನ್ನು ಬೆಳೆಸುವಂತಾಗಲಿ” ಎಂದು ಶುಭ ಹಾರೈಸಿದರು. ಖ್ಯಾತ ಲೆಕ್ಕಪರಿಶೋಧಕರಾದ ಗಣೇಶ್ ಹೆಬ್ಬಾರ್‌ ಮಾತನಾಡಿ “ನಮ್ಮ ಸಮಾಜದ ಹಾವಂಜೆಯವರು ಕಳೆದ ಇಪ್ಪತ್ತು…

Read More