Author: roovari

ಮೈಸೂರು : ನಿರಂತರ ಫೌಂಡೇಷನ್ (ರಿ.) ಮೈಸೂರು ಆಯೋಜಿಸಿರುವ ಸಹಜರಂಗ 2023 ಇದರ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 14-10-2023 ಶನಿವಾರ ಸಂಜೆ 6-30ಕ್ಕೆ ಮೈಸೂರಿನ ರಾಮಕೃಷ್ಣ ನಗರದ ರಮಾಗೋವಿಂದ ರಂಗ ಮಂದಿರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಸಾದತ್ ಹಸನ್ ಮಾಂಟೋರವರ ಕಥೆಗಳ ಆಧಾರಿತ ಜೀವನ್ ಕುಮಾರ್ ಬಿ. ಹೆಗ್ಗೋಡು ಇವರ ನಿರ್ದೇಶನದಲ್ಲಿ ‘ಜಸ್ಟ್ ಎ ಮಿಸ್ಟೇಕ್’ ನಾಟಕ ಪ್ರದರ್ಶನಗೊಳ್ಳಲಿದೆ. ಮತ್ತೆ ಬರುತ್ತಿದೆ ಸಹಜರಂಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈವಿಧ್ಯಮಯ ಚಟುವಟಿಕೆಗಳಿಗೇನು ಕೊರತೆ ಇಲ್ಲ. ವರ್ಷ ಪೂರ್ತಿ ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಶ್ರಮಿಸುತ್ತಿವೆ. ಕಳೆದ ಎರಡುವರೆ ದಶಕಗಳಿಂದ ಸಮಾಜದ ನಾನಾ ಕ್ಷೇತ್ರಗಳಲ್ಲಿ ಬದ್ಧತೆಯೊಂದಿಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಂಚೂಣಿ ಸಂಸ್ಥೆಗಳಲ್ಲಿ ನಗರದ ‘ನಿರಂತರ ಫೌಂಡೇಷನ್’ ಒಂದು. ನಿರಂತರ ಸಂಸ್ಥೆಯು ರಂಗಭೂಮಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಳೆದ ಎರಡು ದಶಕಗಳಿಂದಲೂ…

Read More

ಉಡುಪಿ : ಉಡುಪಿಯ ಭಾವನಾ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ವೆಂಟನ ಫೌಂಡೇಷನ್ ಇದರ ಸಹಕಾರದೊಂದಿಗೆ ಆಯೋಜಿಸುವ ಸ್ಥಳೀಯ ಜಾನಪದ ಕಲೆಗಳ ಸರಣಿ ಕಾರ್ಯಗಾರವಾದ ‘ಜಾನಪದ’ ದಿನಾಂಕ 14-10-2023 ಹಾಗೂ 15-10-2023ರಂದು ಉಡುಪಿಯ ಬಡಗುಪೇಟೆಯಲ್ಲಿ ನಡೆಯಲಿದೆ. ಭಾವನಾ ಸ್ಕೂಲ್ ಆಫ್ ಆರ್ಟ್ ಇದರ 20ನೇ ವರ್ಷದ ಸಂಭ್ರಮಾಚರಣೆಯ ಸಲುವಾಗು ಆಯೋಜಿಸಲಾಗುತ್ತಿರುವ ಸರಣಿಯ 7ನೇ ಭಾಗವಾಗಿ ಕೇರಳದ ಭಿತ್ತಿ ಚಿತ್ರಗಳ ಈ ಕಾರ್ಯಗಾರವನ್ನು ಖ್ಯಾತ ಕಲಾವಿದ ಕೇರಳದ ವೇಣುಗೋಪಾಲ್ ಟಿ.ಕೆ ನಡೆಸಿಕೊಡಲಿದ್ದಾರೆ. ಕೇರಳದ ಭಿತ್ತಿ ಚಿತ್ರಗಳ ಬೇರುಗಳು ಕ್ರಿ.ಶ 9ನೇ ಶತಮಾನಗಳ ಹಿಂದೆಯೇ ಇದ್ದು, ಇದು ಕೇರಳದ ಶ್ರೀಮಂತ ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿದೆ. ಈ ಪುರಾತನ ಸಂಪ್ರದಾಯ ಕಳೆಯು ಕೇರಳದ ರಾಜಮನೆತನದಿಂದ ಪೋಷಣೆಗೊಂಡಿತು. ಇದು ದೈವಿಕ ಚಿತ್ರಣ ಮತ್ತು ವಿಶಿಷ್ಟವಾದ ಪ್ರಾದೇಶಿಕ ಶೈಲಿಯೊಂದಿಗೆ ಆಕರ್ಷಿಸುತ್ತದೆ. ಐದು ನೈರ‍್ಗಿಕ ಬಣ್ಣಗಳ ಬಳಕೆಯಿಂದ ಈ ಚಿತ್ರಗಳನ್ನು ರಚಿಸಲಾಗುತ್ತದೆ. ಕೇರಳದ ಭಿತ್ತಿ ಚಿತ್ರಗಳು ಅದ್ಭುತವಾದ ಕಲಾತ್ಮಕ ಪರಂಪರೆಯನ್ನು ಒಳಗೊಂಡಿದೆ. ವೇಣುಗೋಪಾಲ್ ಟಿ.ಕೆ :…

Read More

ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಮಂಗಳೂರು ಇವರಿಂದ ಕಲೇವಾ ಸಂಘದ ಹಿರಿಯ ಸದಸ್ಯೆ, ಸಮಾಜಪರ ಚಿಂತಕಿ ಶ್ರೀಮತಿ ಬಿ.ಎಂ. ರೋಹಿಣಿಯವರ ತಾಯಿಯ ಸ್ಮರಣಾರ್ಥ ‘ದೇವಕಿಯಮ್ಮ ದತ್ತಿನಿಧಿ’ ಕಾರ್ಯಕ್ರಮದ ಅಂಗವಾಗಿ ‘ಜೀವ ಭಾವಕೆ ಗಾನ ಸಮ್ಮಿಲನ’ವು ದಿನಾಂಕ 07-10-2023ರಂದು ಮಂಗಳೂರಿನ ಆಸೈಗೋಳಿಯಲ್ಲಿರುವ ಅಭಯ ಆಶ್ರಮದ ಧ್ಯಾನಮಂದಿರದಲ್ಲಿ ನಡೆಯಿತು. ಅಲ್ಲಿಯ ಪ್ರಶಾಂತ ವಾತಾವರಣದಲ್ಲಿ, ಆಶ್ರಮದ ಹಿರಿಯ ಜೀವಗಳ ಮನಸ್ಸಿಗೆ ಮುದನೀಡುವ, ಉಲ್ಲಾಸ ತುಂಬುವ ಉದ್ದೇಶದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕು.ಮೇಧಾ ಉಡುಪ ಇವರು ಕೊಳಲುವಾದನ ಪ್ರಸ್ತುತ ಪಡಿಸಿದರು. ಇವರಿಗೆ ವಿದ್ವಾನ್ ಸುನಾದ ಕೃಷ್ಣ ಮೃದಂಗದಲ್ಲಿ ಸಹಕಾರ ನೀಡಿದರು. ಬಳಿಕ ಕಲೇವಾ ಸಂಘದ ಸದಸ್ಯೆಯರಾದ ಶ್ರೀಮತಿಯರಾದ ಆಶಾ ಶೆಣೈ, ರತ್ನಾವತಿ ಜೆ. ಬೈಕಾಡಿ, ಉಷಾ ಎಂ., ವನಜಾಕ್ಷಿ ಉಳ್ಳಾಲ, ಸುಮಂಗಲಾ ಕೃಷ್ಣಾಪುರ, ಅ.ನಾ. ಪೂರ್ಣಿಮಾ, ಶಶಿಕಲಾ, ಕುಮಾರಿಯರಾದ ಆದಿ ಸ್ವರೂಪ, ಲಗ್ಮ ಇವರುಗಳು ಭಾವಗಾನ ಕಾರ್ಯಕ್ರಮ ನಡೆಸಿಕೊಟ್ಟರು. ಇದರಿಂದ ಸ್ಫೂರ್ತಿಗೊಂಡು ಆಶ್ರಮದ 90 ವರ್ಷದ ಹಿರಿಯರಾದ ವಾಣಿಯಮ್ಮ ಲಯಬದ್ಧವಾಗಿ ಎರಡು ಹಾಡುಗಳನ್ನು ಹಾಡಿ…

Read More

ಮಂಗಳೂರು : ಕ.ಸಾ.ಪ. ಮಂಗಳೂರು ತಾಲೂಕು ಘಟಕ ಇದರ ವತಿಯಿಂದ ದಿನಾಂಕ 10-10-2023ನೇ ಮಂಗಳವಾರದಂದು ಡಾ. ಕೆ.ಶಿವರಾಮ ಕಾರಂತರ 122ನೇ ಜನ್ಮ ದಿನಾಚರಣೆಯನ್ನು ನಗರದ ಶಾರದಾ ವಿದ್ಯಾಲಯದಲ್ಲಿ ಆಚರಿಸಿ ಸಂಭ್ರಮಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಕಾರಂತರ ಬಗ್ಗೆ ಉಪನ್ಯಾಸ ನೀಡಿದರು. “ಕಾದಂಬರಿಕಾರ, ನಾಟಕಕಾರ, ಯಕ್ಷಗಾನ ಪಂಡಿತ, ಪರಿಸರ ತಜ್ಞ, ಕವಿ, ಕಲಾವಿದ, ಕುಶಲಕರ್ಮಿ ಹೀಗೆ ನೂರಾರು ಮುಖಗಳನ್ನು ಹೊಂದಿದ್ದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರದು ಪದಗಳಲ್ಲಿ ಹಿಡಿದಿಡಲಾಗದ ಅದ್ಭುತ ವ್ಯಕ್ತಿತ್ವ ಎಂದು ವಿಶ್ಲೇಷಿಸಿದರು. ಒಳಗೊಂದು ಹೊರಗೊಂದು ಇಲ್ಲದ, ಪ್ರತಿಯೊಂದರಲ್ಲೂ ತಮ್ಮದೇ ಆದ ಚಿಂತನಾತ್ಮಕ ಧೋರಣೆಯ, ಕೇವಲ ಇಂಟರ್ ಮೀಡಿಯೆಟ್ ವರೆಗೆ ಮಾತ್ರ ಓದಿ ಆ ಬಳಿಕ ತಮ್ಮ ಸ್ವಂತ ಅನುಭವದ ಮೂಲಕ ಸತ್ಯಾನ್ವೇಷಣೆಯನ್ನು ಮಾಡಿದ, ವಿಶಿಷ್ಟ ವ್ಯಕ್ತಿತ್ವದ ಕಾರಂತರಿಗೆ ಗೊತ್ತಿಲ್ಲದ ವಿಷಯಗಳೇ ಇರಲಿಲ್ಲ. ಕಾರಂತರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ದಿನಗಳನ್ನೂ ಸ್ಮರಿಸಿ, ಯಾವ ಪಂಥಕ್ಕೂ ಸೇರದ ಅವರದು ಕಾರಂತ…

Read More

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಹಾಗೂ ಸ್ವಸ್ತಿಕ್ ಕಲಾ ಕೇಂದ್ರ ಜಲ್ಲಿಗುಡ್ಡೆ ಬಜಾಲ್ ಪ್ರಾಯೋಜಕತ್ವದಲ್ಲಿ, ಪುಟ್ಟಣ್ಣ ಕುಲಾಲ್‌’ ಪ್ರತಿಷ್ಠಾನ ಪಡೀಲ್ ಸಹಕಾರದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 08-10-2023ರಂದು ನಡೆದ ಸಮಾರಂಭದಲ್ಲಿ ತೆಂಕುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್‌ ಇವರಿಗೆ 2023-24ನೇ ಸಾಲಿನ ‘ದಿ. ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, “ಇಂದಿನ ಯುವಕರು ಮೊಬೈಲ್ ಯುಗದಲ್ಲಿದ್ದು, ಅವರಿಗೆ ಯಕ್ಷಗಾನ ಅಷ್ಟೊಂದು ಆಕರ್ಷಿತವಾಗುತ್ತಿಲ್ಲ. ಆದರೆ ಸ್ವಸ್ತಿಕ್ ಕಲಾ ಕೇಂದ್ರವು ಯಕ್ಷಗಾನವನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ನನಗೂ ಯಕ್ಷಗಾನ ತುಂಬಾ ಇಷ್ಟ. ಬಾಲ್ಯದಲ್ಲಿ ನೆಲದಲ್ಲಿ ಕುಳಿತು ಯಕ್ಷಗಾನ ನೋಡುತ್ತಿದ್ದೆ. ಹಲವು ಯಕ್ಷಗಾನ ಪ್ರಸಂಗ ವೀಕ್ಷಿಸುವ ಹವ್ಯಾಸ ನನ್ನಲ್ಲಿತ್ತು” ಎಂದರು. ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, “ವೇಣೂರು ಸದಾಶಿವ ಕುಲಾಲ್ ಅವರು ಸಮಾಜಕ್ಕೆ ನೀಡಿದ ಸೇವೆ ಅನನ್ಯ. ಅವರ ಸಾಧನೆ…

Read More

ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯುವ ಅರ್ಥಧಾರಿಗಳ ವೇದಿಕೆಯಾದ ‘ಅರ್ಥಾಂಕುರ-4’ ಕಾರ್ಯಕ್ರಮವು ದಿನಾಂಕ 08-10-2023 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅರ್ಥಧಾರಿ ಹಾಗೂ ನಿರ್ದೇಶಕರಾದ ಡಾ.ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ “ಅರ್ಥಾಂಕುರ-4, ನಾಲ್ಕುನೂರು- ನಾಲ್ಕು ಸಾವಿರ, ನಾಲ್ಕು ಲಕ್ಷವಾಗಲಿ. ತನ್ಮೂಲಕ ಈ ಭಾಗದಲ್ಲಿ ಅನೇಕ ಕಲಾವಿದರು ಪ್ರಬುದ್ಧರಾಗಿ ಕಾರ್ಯಕ್ರಮ ನೀಡಲು ಸಿದ್ಧರಾಗಲಿ. ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಸಂಸ್ಥೆ ಸಿದ್ಧಗೊಳಿಸಿದೆ. ಪ್ರಬುದ್ಧ ಕಲಾವಿದರಾಗುವ ಆಸೆಯುಳ್ಳ ಕಲಾವಿದರು ತಮ್ಮ ಹೆಸರನ್ನು ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಅರ್ಥಾಂಕುರದಲ್ಲಿ ತಾಳಮದ್ದಳೆಯ ತಯಾರಿ ನಡೆಸಲು ಸಿದ್ಧರಾಗಲಿ. ಈ ಸುವರ್ಣ ಅವಕಾಶದಿಂದ ಯಾರೂ ವಂಚಿತರಾಗದಿರಿ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊಮೆ-ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ಗೋಪಾಲ ಪೂಜಾರಿ ರಾಜು ತೋಟದಬೆಟ್ಟು ಅವರನ್ನು ಸಮ್ಮಾನಿಸಿ ಮಾತನ್ನಾಡುತ್ತಾ “ಸಾಮಾಜಿಕ ಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ, ಸಾರ್ವಜನಿಕ ಕಳಕಳಿಗೆ ಸ್ಪಂದಿಸಿ,…

Read More

ಉಡುಪಿ : ರಂಗಭೂಮಿ (ರಿ.) ಉಡುಪಿ ಇವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿಯ ಎಂ.ಜಿ.ಎಂ ಕಾಲೇಜಿನ ಸಹಕಾರದಲ್ಲಿ ಆಯೋಜಿಸುವ ‘ರಂಗ ನಮನ’ ಹಿರಿಯರ ನೆನಪಲಿ ರಂಗೋತ್ಸವ ಕಾರ್ಯಕ್ರಮವು ದಿನಾಂಕ 13-10-2023 ರಿಂದ 15-10-2023ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ದಿನಾಂಕ 13-10-2023 ಶುಕ್ರವಾರದಂದು ಪಿ.ವಾಸುದೇವ ರಾವ್ ಹಾಗೂ ಯು. ಉಪೇಂದ್ರ ಇವರ ಸಂಸ್ಮರಣೆಯಲ್ಲಿ ನಡೆಯಲಿರುವ ಮೊದಲ ದಿನದ ಕಾರ್ಯಕ್ರಮವನ್ನು ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಶರತ್ ಕುಮಾರ್ ರಾವ್ ಉದ್ಘಾಟಿಸಲಿದ್ದು, ರಂಗಭೂಮಿ ಉಡುಪಿಯ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿರುವರು. ಅತಿಥಿಗಳಾಗಿ ಕಾರ್ಕಳದ ಉದ್ಯಮಿಯಾದ ಶ್ರೀ ಮುನಿಯಾಲ್ ಉದಯಕುಮಾರ್ ಶೆಟ್ಟಿ, ಎಂ.ಜಿ.ಎಂ ಕಾಲೇಜು ಉಡುಪಿಯ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಉಡುಪಿಯ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಶ್ಯಾಮಲ ಉಪೇಂದ್ರ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಹಾಗೂ ಸಾಹಿತಿಯಾದ ಶ್ರೀ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರಿಗೆ ‘ದಿ. ಪಿ.ವಾಸುದೇವ ರಾವ್ ಸಂಸ್ಮರಣ…

Read More

ಬೆಂಗಳೂರು : ರಾಜ್ಯ ಸರಕಾರ ನೀಡುವ ಪ್ರಸಕ್ತ ಸಾಲಿನ (2023-24) ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಬೆಂಗಳೂರಿನ ಸಂಗೀತ ಕಲಾವಿದೆ ಡಾ. ಪದ್ಮಾ ಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆಯ ಮುಖ್ಯ ವೇದಿಕೆಯಲ್ಲಿ ದಸರಾ ಉದ್ಘಾಟನಾ ಸಮಾರಂಭದ ದಿನದಂದು ರಾಜ್ಯದ ಒಬ್ಬರು ಹಿರಿಯ ಸಂಗೀತ ಸಾಧಕರನ್ನು ಗುರುತಿಸಿ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ’ಯನ್ನು ನೀಡಿ ರಾಜ್ಯ ಸರಕಾರದಿ೦ದ ಗೌರವಿಸಲಾಗುತ್ತದೆ. ಪ್ರಶಸ್ತಿಯು ರೂ.5 ಲಕ್ಷ ನಗದು ಮತ್ತು ಸರಸ್ವತಿ ವಿಗ್ರಹದ ಸ್ಮರಣಿಕೆ, ಪ್ರಶಸ್ತಿ ಫಲಕ, ಶಾಲು, ಹಾರ ಮತ್ತು ಫಲತಾಂಬೂಲಗಳನ್ನು ಒಳಗೊಂಡಿದೆ. ದಿನಾಂಕ 15-10-2023ರಂದು ಮೈಸೂರು ಅರಮನೆಯ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು. ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗಾಗಿ ಪ್ರಸಿದ್ಧ ಕ್ಲಾರಿಯೋನೆಟ್ ವಾದಕರಾದ ಡಾ. ಪಂಡಿತ್‌ ನರಸಿಂಹಲು ವಡವಾಟಿ ಅವರ ಅಧ್ಯಕ್ಷತೆಯ ಸಮಿತಿಯು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ. ಪದ್ಮಾ ಮೂರ್ತಿಯವರನ್ನು ಆಯ್ಕೆ ಮಾಡಿದೆ.…

Read More

ಬೆಂಗಳೂರು : ಹಿರಿಯ ಪತ್ರಕರ್ತ, ಸಾಹಿತಿ, ನಾಟಕಕಾರ, ಅನುವಾದಕ ಜಿ.ಎನ್. ರಂಗನಾಥ ರಾವ್ ಅವನು ದಿನಾಂಕ 09-10-2023ರಂದು ನಿಧನ ಹೊಂದಿದ್ದಾರೆ. ಮೃತರು ಪುತ್ರ ಮತ್ತು ಪುತ್ರಿಯನ್ನು ಆಗಲಿದ್ದಾರೆ. 1942ರಲ್ಲಿ ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ ಹುಟ್ಟಿದ ಇವರು ಹೊಸಕೋಟೆ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. 1962ರಲ್ಲಿ ತಾಯಿನಾಡು ನಂತರ ‘ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ನಂತರ ಪ್ರಜಾವಾಣಿ ಸೇರಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅವರು ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ವಿಮರ್ಶಾತ್ಮಕ ಪ್ರಬಂಧಗಳನ್ನು ಬರೆದಿದ್ದಾರೆ. ಕವಿಯಾಗಿ ಅವರು ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಾಟಕಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ರಾಜ್ಯದ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ರಂಗನಾಥರಾವ್ ಅವರು 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇತರ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ತಾಯಿನಾಡು ಪತ್ರಿಕೆಯ ಮೂಲಕ ಮಾಧ್ಯಮ…

Read More

ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ನೀಡುವ 19ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಶಸ್ತಿಗೆ ಸಂಗೀತ, ನಾಟಕ, ನೃತ್ಯ ಅಥವಾ ಜನಪದ ಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ ಕರ್ನಾಟಕ ಮೂಲದ ಓರ್ವ ಕೊಂಕಣಿ ಮಾತೃಭಾಷಿಕ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಪುರಸ್ಕಾರವು ಶಾಲು, ಫಲ-ಪುಷ್ಪ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ 50,000 ರೂಪಾಯಿಗಳನ್ನು ಒಳಗೊಂಡಿರುತ್ತದೆ. ಈ ಪುರಸ್ಕಾರವನ್ನು ಕಲಾಂಗಣದಲ್ಲಿ ದಿನಾಂಕ 05-11-2023ರಂದು ನಡೆಯುವ, 263 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು. ಸಾಧನೆಯ ವಿವರಗಳು, ಇತ್ತೀಚಿನ ಭಾವಚಿತ್ರದೊಡನೆ ಸ್ವತಹ ಕಲಾವಿದರು ಅಥವಾ ಇತರರು ಹೆಸರು ಸಲ್ಲಿಸಬಹುದು. ವಿಳಾಸ : ಮಾಂಡ್ ಸೊಭಾಣ್, ಕಲಾಂಗಣ್, ಶಕ್ತಿನಗರ, ಮಂಗಳೂರು 575 016. Email : [email protected].  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-10-2023

Read More