Author: roovari

ವ್ಯಕ್ತಿಯೊಬ್ಬರ ಅಸಹಾಯಕತೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಕ್ತಿಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆಲ್ಲಾ ಆಟವಾಡುತ್ತವೆ ಎಂದು ಹೇಳುವ ನಾಟಕ ‘ಈ ಪರಗಣ’. ‘ಸುಸ್ಥಿರ ಫೌಂಡೇಶನ್’ ಆಯೋಜಿಸಿದ್ದ ರಂಗ ತರಬೇತಿ ಶಿಬಿರದ ಭಾಗವಾಗಿ ನಿರ್ಮಿಸಿರುವ ಈ ಹಾಸ್ಯಮಯ ನಾಟಕವನ್ನು ಜೋಸೆಫ್ ಜಾನ್ ರವರು ನಿರ್ದೇಶಿಸಿದ್ದು, ದಿನಾಂಕ 14 ಮಾರ್ಚ್ 2025ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ನೋಡುಗರನ್ನು ವಿನೋದದಲ್ಲಿ ತೇಲಿಸಿ ವಿಷಾದದಲ್ಲಿ ಮುಳುಗಿಸಿತು. ಕಲ್ಲೂರಿನ ರಾಜಪ್ಪ ಎನ್ನುವ ವ್ಯಕ್ತಿ ಬದುಕಿನಲ್ಲಿ ಹತಾಶೆಗೊಳಗಾಗಿ ಮರವೊಂದನ್ನು ಹತ್ತಿದ್ದರ ಸುತ್ತ ಇಡೀ ನಾಟಕ ಸುತ್ತುತ್ತದೆ. ಈ ಸಂಗತಿ ಸುದ್ದಿ ಮಾಧ್ಯಮದಲ್ಲಿ ಪ್ರಚಾರ ಪಡೆದು ಜನಜಂಗುಳಿ ಸೇರಿದ ಸನ್ನಿವೇಶವನ್ನು ಪಂಚಾಯಿತಿ ಅಧ್ಯಕ್ಷ ಕಣ್ಣಪ್ಪನಂತವರು ಹೇಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ವಿಡಂಬನಾತ್ಮಕವಾಗಿ ನಾಟಕದಾದ್ಯಂತ ತೋರಿಸಲಾಗಿದೆ. ಮರವೇರಿ ಸಾಯುತ್ತೇನೆ ಎನ್ನುವಾತನನ್ನು ನೋಡಲು ಜನಜಾತ್ರೆ ಸೇರಿದ್ದನ್ನೇ ನೆಪವಾಗಿಸಿಕೊಂಡು ವ್ಯಾಪಾರಸ್ಥರು ಲಾಭ ಮಾಡಿಕೊಳ್ಳಲು ಹಾತೊರೆದರೆ, ಲೋಕಲ್ ಪುಡಾರಿಗಳು ವಾಹನಗಳ ಪಾರ್ಕಿಂಗ್ ಫೀಸ್‌ ವಸೂಲಿ ದಂಧೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿಯುತ್ತಾರೆ. ರಾಜಕಾರಣಿಗಳು ಪಾರ್ಟಿ ಫಂಡ್ ಬರುವುದಾದರೆ…

Read More

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ‘ಆಜೀವಿಕ’ ಪ್ರಸ್ತುತ ಪಡಿಸುವ ಹೊಸ ನಾಟಕ ‘ಅಲ್ಲಮನ ಬಯಲಾಟ’ ಮೊದಲ ಪ್ರದರ್ಶನವನ್ನು ದಿನಾಂಕ 22 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ರಚನೆ : ಲಕ್ಷ್ಮೀಪತಿ ಕೋಲಾರ, ನಿರ್ದೇಶನ : ಡಾ. ಉದಯ್ ಸೋಸಲೆ, ಸಹ ನಿರ್ದೇಶನ : ವಾಸವಿ, ಸಂಗೀತ: ಹನುಮಂತ್ ಮಂಡ್ಯ, ಬೆಳಕು : ಮಹದೇವಸ್ವಾಮಿ ಮತ್ತು ಪ್ರಸಾಧನ : ಮೋಹನ್ ಕುಮಾರ್ ಇವರದ್ದು. ಹೆಚ್ಚಿನ ಮಾಹಿತಿಗಾಗಿ 9901290575 ಸಂಖ್ಯೆಯನ್ನು ಸಂಪರ್ಕಿಸಿರಿ. ಅಲ್ಲಮನ ತಾತ್ವಿಕ ಯಾನದಲ್ಲಿ ಜತೆಗೂಡಿ ಈ ನೆಲದ ಸಂಸ್ಕೃತಿ ಇತಿಹಾಸದ ಅಜ್ಞಾತ ಮಗ್ಗಲುಗಳ ಸ್ಪಷ್ಟವಾದ ಅರಿವು ದಕ್ಕಿಸಿಕೊಳ್ಳುತ್ತ, ಆ ಹುಡುಕಾಟದ ಜಾಡಿನಲ್ಲೇ ನಡೆಯುತ್ತ, ಸಮಗ್ರ ಬದಲಾವಣೆಗೆ ಅಗತ್ಯವಾದ ಮೊದಲ ಹಂತದ ಸಾಂಸ್ಕೃತಿಕ ಕ್ರಾಂತಿಯ ವಿನ್ಯಾಸವನ್ನು ಹಾಗೂ ಸಂಶೋಧನಾತ್ಮಕ ಮಾದರಿಯೊಂದನ್ನು ರೂಪಿಸುವಂತಹ ಮಹತ್ವದ ಹೊಣೆಗಾರಿಕೆಯನ್ನು ಸ್ವಯಂ ಹೆಗಲಿಗೇರಿಸಿಕೊಂಡಿರುವ ‘ಆಜೀವಿಕ’ ಬದ್ಧತೆ ಪ್ರಾಮಾಣಿಕ ಮನಸ್ಸುಗಳ…

Read More

ಮಡಿಕೇರಿ : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವನ್ನು ದಿನಾಂಕ 23 ಮಾರ್ಚ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಡಿಕೇರಿಯ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಉದ್ಘಾಟಿಸಲಿದ್ದು, ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಹಿರಿಯ ಸಾಹಿತಿ ಭಾರಧ್ವಜ್ ಕೆ. ಆನಂದತೀರ್ಥ, ಕನ್ನಡ ಭವನ ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಪಿ. ರಾಜೇಶ್ ಚಂದ್ರ ಪಾಲ್ಗೊಳ್ಳಲಿದ್ದಾರೆ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕ ನುಡಿಯನ್ನಾಡಲಿದ್ದಾರೆ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ…

Read More

ಪುತ್ತೂರು : ಪುತ್ತೂರಿನ ‘ಬಹುವಚನಂ’ ಹಾಗೂ ನಿರತ ನಿರಂತ ಆಯೋಜನೆಯಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ‘ಥೇಟರ್ ಮಾರ್ಚ್’ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರ ಭಾನುವಾರದಂದು ಪರ್ಲಡ್ಕದಲ್ಲಿರುವ ಪದ್ಮಿನಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷ ರಂಗೋಪನ್ಯಾಸ ನೀಡಲು ಆಗಮಿಸಿದ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಮಾತನಾಡಿ “ನಾಟಕದ ಹುಟ್ಟಿನ ಹಿನ್ನೆಲೆಯಲ್ಲೂ ಆರಾಧನಾ ಪರಂಪರೆ ಇದೆ. ಗ್ರೀಕ್ ನೆಲದಲ್ಲಿ ರಂಗಭೂಮಿ ಬೆಳೆದು ಬಂದ ವಿವಿಧ ಆಯಾಮಗಳನ್ನು ವಿವಿಧ ನಾಟಕ, ನಾಟಕಕಾರರು ಹಾಗೂ ಪಾತ್ರಗಳ ಮೂಲಕ ತೆರೆದಿಟ್ಟರು. ರಂಜನೆ ಎಂಬ ಬೆಲ್ಲವನ್ನು ಸವರಿಕೊಂಡ ಕಹಿಗುಳಿಗೆ ರಂಗಭೂಮಿ. ರಂಗಭೂಮಿ ಕಾಲವನ್ನು ನಮ್ಮೆದುರಿಗೆ ಇಟ್ಟು ಮಾತನಾಡುತ್ತದೆ, ಶಿಕ್ಷಣದ ನೆಲೆ, ಹಿಡಿತದ ಭಾವ, ಪ್ರಖರ ವೈಚಾರಿಕತೆಯ ನೆಲೆಗಟ್ಟು, ಪ್ರಶ್ನೆ, ವಿಮರ್ಶೆ, ಸರಿಯಾದ ತಿಳುವಳಿಕೆಯೇ ರಂಗಭೂಮಿಯ ಹಿರಿಮೆ. ಅರಸು ರಾಕ್ಷಸ ಮಂತ್ರಿಯೆಂಬುವ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು ಉರಿ ಉರಿವುತಿದೆ ದೇಶ ನಾವಿ ನ್ನಿರಲು ಬಾರದೆನುತ್ತ ಜನ ಬೇ ಸರದ ಬೇಗೆಯಲಿರದಲೇ ಭೂಪಾಲ…

Read More

ಬೆಂಗಳೂರು: ಡಿ. ವಿ. ಜಿಯವರ 138ನೆಯ ಮತ್ತು ಪು. ತಿ. ನ ಅವರ 120ನೆಯ ಜನ್ಮದಿನೋತ್ಸವ ಕಾರ್ಯಕ್ರಮವನ್ನು ದಿನಾಂಕ 18 ಮಾರ್ಚ್ 2025 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಇವರಿಬ್ಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ “ಡಿ. ವಿ. ಜಿ ಮತ್ತು ಪು. ತಿ. ನ ಇಬ್ಬರೂ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಇವತ್ತು ಕನ್ನಡ ಸಾಹಿತ್ಯ ಇಷ್ಟೊಂದು ಬಹುಮುಖಿಯಾಗಿ ಬೆಳೆಯಲು ಅವರ ಕೊಡುಗೆಗಳು ಮುಖ್ಯ ಕಾರಣ. ವಿದ್ವಾಂಸರು, ಪತ್ರಿಕಾ ಸಂಪಾದಕರು, ಸಾಹಿತ್ಯ ವಿದ್ವಾಂಸರ ನಿಕಟ ಪರಿಚಯವಿದ್ದ ಡಿ. ವಿ. ಗುಂಡಪ್ಪನವರು 1933ರಲ್ಲಿ ಪರಿಷತ್ತಿಗೆ ಉಪಾಧ್ಯಕ್ಷರಾಗಿ ಬಂದ ಮೇಲೆ ಪರಿಷತ್ತಿಗೆ ಹೊಸ ಹುರುಪು ಉಂಟಾಯಿತು. ಪರಿಷತ್ತಿಗೆ ಭವ್ಯವಾದ ಶ್ರೀಕೃಷ್ಣರಾಜಪರಿಷತ್ತಿನ ಮಂದಿರ ಕಟ್ಟಡ ನೆಲೆಯಾಗಿ ಸಿಕ್ಕಿತು. ಪರಿಷತ್ತಿನ ಕಾರ್ಯಾಲಯವನ್ನು ಸುವ್ಯವಸ್ಥೆಗೊಳಿಸಿದರು. ಪ್ರತಿವಾರವೂ ಪರಿಷತ್ತಿನಲ್ಲಿ ಸಾರ್ವಜನಿಕವಾಗಿ ಭಾಷಣ, ಕಾವ್ಯವಾಚನ ಇತ್ಯಾದಿ ನಡೆಯತೊಡಗಿತು. ಪರಿಷತ್ತು ಜನಪ್ರಿಯವಾಗಲು ಹೆಚ್ಚು ಹೆಚ್ಚು ಜನರು…

Read More

ಹಂಪಿ : ಹಸ್ತಪ್ರತಿಶಾಸ್ತ್ರ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಆಯೋಜಿಸುವ ಅಖಿಲ ಕರ್ನಾಟಕ ಇಪ್ಪತ್ತೊಂದನೆಯ ಹಸ್ತಪ್ರತಿ ಸಮ್ಮೇಳನವು ದಿನಾಂಕ 25 ಮತ್ತು 26 ಮಾರ್ಚ್ 2025ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 25 ಮಾರ್ಚ್ 2025ರಂದು ಬೆಂಗಳೂರಿನ ಹಿರಿಯ ವಿದ್ವಾಂಸರಾದ ಡಾ. ಜಿ. ಜ್ಞಾನಾನಂದ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಮಠಾಧಿಪತಿ ಮತ್ತು ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ವಿಶ್ವಬ್ರಾಹ್ಮಣ ಮೂರುಜಾವದ ಮಠ ಆಲಮೇಲ ಸಿಂದಗಿ ಇಲ್ಲಿನ ಪ. ಪೂ. ಶ್ರೀ ರಾಮಚಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಂದು ಬೆಳಿಗ್ಗೆ ಘಂಟೆ 10.30ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ. ವಿ. ಪರಮಶಿವಮೂರ್ತಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ವಿಶ್ರಾಂತ ಆಯುಕ್ತರಾದ ಶ್ರೀ ಶ್ರೀನಿವಾಸಾಚಾರಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ (ರಿ.) ಶಿರಸಂಗಿ ಇದರ…

Read More

ಡಾಕ್ಟರ್ ಮಹೇಶ್ವರಿಯವರು ಶ್ರೀಯುತ ಗಂಗಾಧರ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ ಇವರ ಸುಪುತ್ರಿ. ಕಾಸರಗೋಡಿನ ಬೇಳ ಗ್ರಾಮದ ಉಳ್ಳೋಡಿ ಎಂಬಲ್ಲಿ 18 ಮಾರ್ಚ್ 1958ರಂದು ಜನಿಸಿದ ಅವಳಿ ಮಕ್ಕಳಲ್ಲಿ ಒಂದು ಮಗುವೇ ಮುಂದೆ ಸಾಹಿತ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಡಾ. ಯು. ಮಹೇಶ್ವರಿಯವರು. ಐದು ಮಂದಿ ಸಹೋದರಿಯರು ಮತ್ತು ಮೂರು ಮಂದಿ ಸಹೋದರರಿರುವ ತುಂಬು ಸಂಸಾರದಲ್ಲಿ ಬೆಳೆದ ಇವರು ನವಚೇತನ ಪ್ರೌಢಶಾಲೆ ಪೆರಡಾಲದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಓದಿನಲ್ಲಿ ಬಹಳ ಆಸಕ್ತಿ ಹೊಂದಿದ್ದು, ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಪ್ರಥಮ ಸ್ಥಾನ ಪಡೆದ ಹಿರಿಮೆ ಇವರದ್ದು. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿಯನ್ನು ಪಡೆದ ಬಳಿಕ ಮೈಸೂರು ವಿಶ್ವವಿದ್ಯಾಲಯದಿಂದ ಆಂಗ್ಲಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಕನ್ನಡ ಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅದೇ ವಿಶ್ವವಿದ್ಯಾಲಯದಿಂದ “ಕನ್ನಡದ ಮೊದಲ ಕಾದಂಬರಿಗಳು – ಒಂದು ಸ್ತ್ರೀವಾದಿ ಅಧ್ಯಯನ” ಎಂಬ ವಿಷಯದ ಮೇಲೆ…

Read More

ಕುಂದಾಪುರ : ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಸಂಸ್ಥೆಯು”ನಿಶಾಂತ್” ಕೋಟೇಶ್ವರ ಇವರ ಸಹಯೋಗದೊಂದಿಗೆ ಆಯೋಜಿಸುವ ‘ಕರ್ನಾಟಕಿ ಸಂಗೀತ’ ಕಾರ್ಯಕ್ರಮವು ದಿನಾಂಕ 23 ಮಾರ್ಚ್ 2025ರಂದು ಸಂಜೆ ಘಂಟೆ 6.00ರಿಂದ ಕುಂದಾಪುರದ ಹೋಟೆಲ್ ಪಾರಿಜಾತದಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ದೀಪಕ್ ಹೆಬ್ಬಾರ್ ಕೊಳಲು ವಾದನ, ಶ್ರೀಮತಿ ಸುನಾದಾ ಪಿ. ಎಸ್. ಮಾವೆ ವಯೋಲಿನ್ ಹಾಗೂ ಬೆಂಗಳೂರಿನ ಶ್ರೀ ಎಸ್. ಪಿ. ನಾಗೇಂದ್ರ ಪ್ರಸಾದ್ ಮೃದಂಗದದಲ್ಲಿ ಸಹಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದುಸ್ತಾನಿ ವಿದ್ವತ್ ಅಂತಿಮ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಹೊಂದಿದ ಡಾ. ಎಚ್. ಆರ್. ಹೆಬ್ಬಾರ್ ಕುಂದಾಪುರ ಇವರಿಗೆ ಗೌರವಾರ್ಪಣೆ ನಡೆಯಲಿದೆ.

Read More

ಬೆಂಗಳೂರು : ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317 ಇವರು ಆಯೋಜಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ದಿನಾಂಕ 16 ಮಾರ್ಚ್ 2025ರಂದು ಬೆಂಗಳೂರಿನ ವಿಶ್ವೇಶ್ವರಪುರದಲ್ಲಿರುವ ಮನಂದಿ ನಂಜುಂಡ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದು ಹಮ್-ಯು.ಎನ್. ಉಮೆನ್ ಏಷ್ಯಾ ಪೆಸಿಫಿಕ್ ಲೀಡಿಂಗ್ ಪ್ರಮ್ ದಿ ಪ್ರಂಟ್ ಪುಸ್ತಕದಲ್ಲಿ ಸ್ಥಾನ ಪಡೆದ ಹಾಗೂ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜರಾದ ಯಕ್ಷ ಸಾಧಕಿ ಪ್ರಿಯಾಂಕ ಕೆ. ಮೋಹನ್‌ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಗವರ್ನರ್ ಲಯನ್ ಎನ್. ಮೋಹನ್ ಕುಮಾರ್, ಲಯನ್ ಪ್ರೇಮ ಮೋಹನ್ ಕುಮಾರ್, ಸೀನಿಯರ್ ಉಪಾಧ್ಯಕ್ಷರಾದ ಶ್ರೀಮತಿ ಉಮಾರೆಡ್ಡಿ, ಮಹಿಳಾ ಸಬಲೀಕರಣಕ್ಕಾಗಿ ಡಿ.ಸಿ. ಲಯನ್ ರಾಜೇಶ್ವರಿ ವಸಂತಯ್ಯ, ಕಾರ್ಯಕ್ರಮದ ಸಂಯೋಜಕಿ ಲಯನ್ ಜ್ಯೋತಿ ಶ್ರೀಹರಿ, ಲಯನ್ ಡಾ. ಜಿ. ಮೋಹನ್, ಲಯನ್ ಶಾರದ ಮೋಹನ್ ಉಪಸ್ಥಿತರಿದ್ದರು.

Read More

ಉಡುಪಿ : ಯಕ್ಷಗಾನವನ್ನು ಪ್ರಥಮ ವಿದೇಶಕ್ಕೊಯ್ದ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮದದಲ್ಲಿ ‘ಸುವರ್ಣ ಪರ್ವ- 8 ’ರ ಅಂಗವಾಗಿ ‘ಮಕ್ಕಳ ಯಕ್ಷಗಾನ ರಂಗ ಭೂಮಿ’ ಶೀರ್ಷಿಕೆಯಡಿಯಲ್ಲಿ ಒಂದು ದಿನದ ವಿಚಾರ ಗೋಷ್ಠಿ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನ ದಿನಾಂಕ 16 ಮಾರ್ಚ್ 2025ರ ಆದಿತ್ಯವಾರದಂದು ಕಲಾರಂಗದ ನೂತನ ಐವೈಸಿ ಸಭಾಂಗಣದಲ್ಲಿ ನಡೆಯಿತು. ಉಡುಪಿಯ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ನಾಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನದಿಂದ ನಮ್ಮಲ್ಲಿ ಸಂಸ್ಕಾರ ರೂಪುಗೊಳ್ಳುತ್ತದೆ. ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ. ಕಲೆಯನ್ನು ಆರಾಧಿಸುತ್ತಾ ಪಾರಂಪರಿಕ ಕಲೆಯನ್ನು ಕಟ್ಟಿಕೊಟ್ಟ ಹಿರಿಯ ಕಲಾವಿದರು ಸದಾ ಸ್ಮರಣೀಯರು. ವಿದ್ಯಾವಂತರ ಪ್ರವೇಶದಿಂದ ಯಕ್ಷಗಾನ ಬೆಳೆದಿದೆ. ಇನ್ನಷ್ಟು ಬೆಳೆಯಬೇಕಾಗಿದೆ. ಬದಲಾವಣೆ ಆರೋಗ್ಯಕರವಾಗಿಬೇಕು. ಯಕ್ಷಗಾನೀಯ ಚೌಕಟ್ಟಿನೊಳಗಿರಬೇಕು. ಆರಾಧನ ಕಲೆಯೊಳಗೆ ಸಿನೆಮಾ, ರಾಜಕೀಯದ ವಿಚಾರ ಸಲ್ಲದು. ಸರಕಾರದ ಅನುದಾನವನ್ನು ಅರ್ಥಪೂರ್ಣವಾಗಿ ವಿನಿಯೋಗಿಸುವಲ್ಲಿ ಯಕ್ಷಗಾನ ಅಕಾಡೆಮಿ ಬದ್ಧವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ…

Read More