Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ ದಿನಾಂಕ 05 ಏಪ್ರಿಲ್ 2025ರಿಂದ 08 ಏಪ್ರಿಲ್ 2025ರವರೆಗೆ ಬೆಂಗಳೂರಿನ ವಿವಿಧೆಡೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ದಿನಾಂಕ 05 ಏಪ್ರಿಲ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ಯಕ್ಷಗಾನಾಭಿಮಾನಿ ವಕೀಲರು ಇವರ ವತಿಯಿಂದ ತರಳಬಾಳು ಕೇಂದ್ರದ ಸಭಾಂಗಣದಲ್ಲಿ ‘ಕಾಯಕಲ್ಪ ದ್ರೌಪದಿ ಪ್ರತಾಪ’, ದಿನಾಂಕ 06 ಏಪ್ರಿಲ್ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರಿನ ಹುಳಿಮಾವು ಸರಸ್ವತೀಪುರಂನ ತ್ರಿಗುಣಾತ್ಮಿಕಾ ಯಕ್ಷ ಬಳಗ ಇವರ ವತಿಯಿಂದ ತ್ರಿಗುಣಾತ್ಮಿಕಾ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ‘ನಮೋ ರಘುವಂಶ ದೀಪ’, ದಿನಾಂಕ 07 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು ಇವರ ವತಿಯಿಂದ ಮಲ್ಲೇಶ್ವರಂ ಸರ್ಕಾರಿ ಶಾಲಾ ಮೈದಾನದಲ್ಲಿ ‘ಶನೀಶ್ವರ ಮಹಾತ್ಮೆ’, ದಿನಾಂಕ 08 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು ಇವರ ವತಿಯಿಂದ ಮಲ್ಲೇಶ್ವರಂ ಸರ್ಕಾರಿ ಶಾಲಾ ಮೈದಾನದಲ್ಲಿ ‘ಸಾಕೇತ ಸಾಮ್ರಾಜ್ಞಿ’ ಎಂಬ…
ಬೆಂಗಳೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ, ಸ್ಟಾರ್ ಕನ್ನಡ, ಸಿನಿಮಾ ಸ್ಟಾರ್ಸ್ ವರ್ಲ್ಡ್, ಡಿಜಿಟಲ್ ಇ-ಪೇಪರ್ ಕರ್ನಾಟಕ, ಕರ್ನಾಟಕ ವಿಶ್ವಕರ್ಮ ಸಮಾಜ ಸೇವಾ ಪರಿಷತ್ತು (ರಿ.) ಬೆಂಗಳೂರು ಮತ್ತು ರಾಸಾ ಪಬ್ಲಿಕೇಷನ್ಸ್ ಬೆಂಗಳೂರು ಇವರ ವತಿಯಿಂದ ‘ಸೇವಾ ಸಾಧಕರ ಸಂಗಮೋತ್ಸವ 2025’ವನ್ನು ದಿನಾಂಕ 30-04-2024ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಮ್ಮೆಯ ನಾರಿರತ್ನ ಪ್ರಶಸ್ತಿ, ಸಾಧಕರಿಗೆ ಗೌರವ ಅಭಿನಂದನೆ, ಕನ್ನಡ ಕವಿ ಗೋಷ್ಠಿ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಚಿಲ್ಡ್ರನ್ ಚಾಂಪ್ಸ್ ಕರ್ನಾಟಕ, ಕರ್ನಾಟಕ ಬಾಲರತ್ನ ಪ್ರಶಸ್ತಿ, ವರ್ಷದ ಕನ್ನಡ ಸೇವಾರತ್ನ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಸಂಭ್ರಮ ನಡೆಯಲಿರುವುದು. ನೋಂದಣಿ ಮಾಡಿಕೊಳ್ಳಲು ಕಚೇರಿ ಸಂಖ್ಯೆ 7406401473 ಸಂಪರ್ಕಿಸಿರಿ.
ತೆಕ್ಕಟ್ಟೆ: ರಸರಂಗ ಕೋಟ ಇವರು ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಸಹಕಾರದಿಂದ ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ದಿ. ಗೋಪಾಲಕೃಷ್ಣ ನಾಯರಿಯವರ ಹೆಸರಿನಲ್ಲಿ ‘ಯುವ ರಂಗ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 30 ಮಾರ್ಚ್ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ನಟ, ನಿರ್ದೇಶಕ ಹಾಗೂ ಸಿನೆಮಾ ಕಲಾವಿದ ರಘು ಪಾಂಡೇಶ್ವರ ಮಾತನಾಡಿ “ಬದುಕಿಗೊಂದು ಶಿಸ್ತು ಮತ್ತು ಸಂಯಮವನ್ನು ಕಲಿಸುವುದು ರಂಗಭೂಮಿ. ಯಶಸ್ಸನ್ನು ತಲೆಗೇರಿಸಿಕೊಳ್ಳದೇ ನಿರಂತರ ಬದ್ಧತೆಯೊಂದಿಗೆ ಇದರಲ್ಲಿ ತೊಡಗಿಕೊಳ್ಳುವ ಕಲಾವಿದ ಹೆಚ್ಚಿನದನ್ನು ಕಲಿಯಲು ಸಾಧ್ಯವಿದೆ” ಎಂದುರು. ಮುಖ್ಯ ಶಿಕ್ಷಕಿ ಸುಲೋಚನ ನಾಯರಿ ಇವರು ಮಾತನಾಡಿ “ನೆಮ್ಮದಿ ಹಾಗೂ ಮನಃಶಾಂತಿಯನ್ನು ನೀಡುವ ಕಲೆಯ ಕುರಿತಾದ ಆಸಕ್ತಿಯನ್ನು ನಾನು ನನ್ನ ವಿದ್ಯಾರ್ಥಿಗಳಲ್ಲಿ ಸದಾ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೇನೆ. ಹದಿನಾರರ ವಸಂತದಲ್ಲಿರುವ ‘ರಸರಂಗ’ ಸಂಸ್ಥೆಗೆ ಶುಭವಾಗಲಿ” ಎಂದು ಹಾರೈಸಿದರು. ಕಲಾ ಪೋಷಕರಾದ ಶ್ರೀಧರ್ ಪುರಾಣಿಕ್ ಮಾತನಾಡಿ “ನಿರಂತರವಾಗಿ ರಂಗ ಚಟುವಟಿಕೆಗಳನ್ನು ರಂಗದಲ್ಲಿ ಜೀವಂತಗೊಳಿಸಿದ ಸಂಸ್ಥೆ ರಸರಂಗ”…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ, ನಾಟಕ ಬೆಂಗಳೂರು ಹಾಗೂ ರಂಗ ಸೌರಭ ಜಂಟಿಯಾಗಿ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 27 ಮಾರ್ಚ್ 2025ರ ಗುರುವಾರದಂದು ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಹಂ. ಪ. ನಾಗರಾಜಯ್ಯ ಮಾತನಾಡಿ “ರಂಗಭೂಮಿಯು ಮನೋರಂಜನೆಗೆ ಸೀಮಿತವಾಗಿರದೆ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮಾಧ್ಯಮವಾಗಿದೆ. ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ರಂಗಭೂಮಿ ತೊಡಗಿದ್ದು, ಪರಸ್ಪರ ಪ್ರೀತಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಿದೆ. ಮನೋರಂಜನೆ ಜತೆಗೆ ವೈವಿಧ್ಯಮಯ ಪ್ರಯೋಗಗಳು ಈ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿದೆ” ಎಂದರು. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಮಾತನಾಡಿ “ರಂಗಭೂಮಿ ಮೂಲಕ ಜನರು ಶಾಂತಿ, ಸಹಬಾಳ್ವೆ, ಸೌಹಾರ್ದವನ್ನು ಕಂಡುಕೊಳ್ಳಬಹುದಾಗಿದೆ. ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣವನ್ನು ರಂಗಭೂಮಿ ಹೊಂದಿದೆ. ಇತ್ತೀಚೆಗೆ ಕಲಾಗ್ರಾಮದಲ್ಲಿ ನಡೆದ ರಂಗ ಪರಿಷೆಗೆ 25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಇದರಿಂದಾಗಿ ರಂಗಭೂಮಿಗೆ ಭವಿಷ್ಯವಿದೆ ಎನ್ನುವುದು ಸ್ಪಷ್ಟ.” ಎಂದರು.…
ಬೆಂಗಳೂರು : ಆಟಮಾಟ ಧಾರವಾಡ ಅಭಿನಯಿಸುವ ಎರಡು ನಾಟಕಗಳ ಪ್ರದರ್ಶನವನ್ನು ದಿನಾಂಕ 05 ಏಪ್ರಿಲ್ 2025ರಂದು ಬೆಂಗಳೂರಿನ ಜೆ.ಪಿ. ನಗರ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3-30 ಗಂಟೆಗೆ ವಿಶ್ವರಾಜ ರಾಜಗುರು ಅಭಿನಯಿಸುವ ಪಂ. ಬಸವರಾಜ ರಾಜಗುರು ಬದುಕಿನ ವೃತ್ತಾಂತದ ಸಂಗೀತ ನಾಟಕ ‘ನಾ ರಾಜಗುರು’ ಮತ್ತು ಸಂಜೆ 7-30 ಗಂಟೆಗೆ ಮಹಾದೇವ ಹಡಪದ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಗುಡಿಯ ನೋಡಿರಣ್ಣ’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9663523904 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗಿಯಾಗಿ ಜನಮನ್ನಣೆ ಗಳಿಸಿದ ಅಸ್ತಿತ್ವ (ರಿ.) ಮಂಗಳೂರು ತಂಡದ ನಾಟಕ ‘ಮತ್ತಾಯ 22:39’ ಪ್ರದರ್ಶನವು ದಿನಾಂಕ 03 ಎಪ್ರಿಲ್ 2025ರಂದು ಸಂಜೆ 7-00 ಘಂಟೆಗೆ ಸರಿಯಾಗಿ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಈಗೀಗ ನಾಟಕವು ಗೋವಾದಲ್ಲಿ ನಡೆದ Serendipity Arts Festival, ಅಸ್ಸಾಂನಲ್ಲಿ ನಡೆದ MWIHUR ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ, ಭಾರತೀಯ ರಂಗ ಶಿಕ್ಷಣ ಕೇಂದ್ರ, ದೆಹಲಿ ಆಯೋಜಿಸಿದ ಅಂತರಾಷ್ಟ್ರೀಯ ರಂಗಮಹೋತ್ಸವದಲ್ಲಿ ಹಾಗೂ ದೇಶದ ಪ್ರತಿಷ್ಟಿತ ನಾಟಕ ಸ್ಪರ್ದೆ METAದಲ್ಲೂ ಆಯ್ಕೆಯಾಗಿ ಯಶಸ್ವಿ ಪ್ರದರ್ಶನಗಳನ್ನು ನೀಡಿತ್ತು. ಕಳೆದ ವರ್ಷ ಮಂಗಳೂರಿನಲ್ಲಿ ಮೊದಲ ಪ್ರದರ್ಶನ ಕಂಡ ಬಳಿಕ, ಹಲವು ರಾಜ್ಯಗಳನ್ನು ಸುತ್ತಿ ಇದೇ ಮೊದಲ ಬಾರಿಗೆ ಮತ್ತೊಮ್ಮೆ ಮಂಗಳೂರಿನಲ್ಲಿ, ವಿಶಿಷ್ಟವಾದ ರಂಗಮಂದಿರದ ವಿನ್ಯಾಸದಲ್ಲಿ ಈ ನಾಟಕದ ಪ್ರದರ್ಶನ ನಡೆಯಲಿದೆ. ನಾಟಕವನ್ನು ಕೇರಳದ ಪ್ರಖ್ಯಾತ ನಿರ್ದೇಶಕರಾದ ಅರುಣ್ ಲಾಲ್ ಇವರು ನಿರ್ದೇಶಿಸಿದ್ದು, ಕ್ಲ್ಯಾನ್ವಿನ್ ಹಾಗೂ ಕುಮಾರ್ ಲಾಲ್ ನಟಿಸಿ, ಅನುಶ್ ಶೆಟ್ಟಿ ಹಾಗೂ…
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು 30 ವರ್ಷ ತುಂಬಿದ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡಿರುವ ‘ಕಿಂಕಿಣಿ ತ್ರಿಂಶತಿ’ ಕಾರ್ಯಕ್ರಮವು ದಿನಾಂಕ 29 ಮಾರ್ಚ್ 2025ರಂದು ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಇವರು “ಕಲಿಯುಗದಲ್ಲಿ ಕಲಾ ಸೇವೆಯು ಸಹ ದೇವತಾ ಸೇವೆಯಾಗಿದ್ದು, ಇದರಿಂದ ಬದುಕು ಸಾರ್ಥಕವಾಗುವುದು. ಭರತಾಂಜಲಿ ಸಂಸ್ಥೆಯು ಕಲಾ ಶಿಕ್ಷಣದ ಜೊತೆಗೆ ಸಮಾಜಮುಖಿಯಾಗಿ ಬದುಕುವ ರೀತಿ ನೀತಿಯನ್ನು ಅಲ್ಲದೆ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸುತ್ತಿರುವುದು, ಅಲ್ಲದೆ ಸಾರ್ವಜನಿಕವಾಗಿಯೂ ಸ್ಪಂದಿಸುತ್ತಿರುವ ಹೊಳ್ಳ ದಂಪತಿಗಳು ಅಭಿನಂದನಾರ್ಹರು” ಎಂದು ಹರಸಿದರು. “ಪಂದನಲ್ಲೂರು ಶೈಲಿಯ ಶಾಸ್ತ್ರೀಯ ಚೌಕಟ್ಟಿನಲ್ಲಿ ಕಲಾ ಶಿಕ್ಷಣವನ್ನು ಶದ್ದೆಯಿಂದ ಕಳೆದ ಮೂರು ದಶಕಗಳಿಂದ ನೀಡುತ್ತಾ ಬಂದಿರುವ ಪ್ರತಿಮಾ ದಂಪತಿಗಳ ಸೇವೆ ಮೆಚ್ಚುವಂತದ್ದು” ಎಂದು ಗುರುಗಳಾದ ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್ ಹೇಳಿದರು. ವಿದ್ವಾನ್ ಕಶೆಕೊಡಿ ಸೂರ್ಯನಾರಾಯಣ ಭಟ್, ಉದ್ಯಮಿಗಳಾದ…
ಅಶ್ವತ್ಥಾಮ ನಾಟೌಟ್ – ರಚನೆ, ವಿನ್ಯಾಸ ಮತ್ತು ನಿರ್ದೇಶನ ಮೋಹನಚಂದ್ರ, ಪ್ರಸ್ತುತಿ ಅಯನ ನಾಟಕದ ಮನೆ. ತಂದೆ ದ್ರೋಣನಿಂದ ಪಡೆದ ಚಿರಂಜೀವಿತ್ವದ ವರವನ್ನು, ಪ್ರಾಸಂಗಿಕ ವೈಪರೀತ್ಯಗಳಿಂದ ಶಾಪವಾಗಿ ಅನುಭವಿಸುವಂತಾದ ಅಶ್ವತ್ಥಾಮನ ಪ್ರಸಂಗ. ಇಂದಿಗೂ ಅಶ್ವತ್ಥಾಮ ಬದುಕಿದ್ದಾನೆ ಎಂದೊಪ್ಪಿ, ಅದಕ್ಕೆ ಸರಿಯಾಗಿ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಗುರುತಿಸುವುದರೊಡನೆ ಪ್ರದರ್ಶನ ತೊಡಗುತ್ತದೆ. ಅಲ್ಲಿ ಅಶ್ವತ್ಥಾಮನ ಭ್ರಾಮಕ ಕಣ್ಣುಗಳಿಗೆ, ಚಿಕಿತ್ಸೆಗೆ ಮುಂದಾಗುವ ಮನೋವೈದ್ಯ ಮತ್ತು ಸಹಾಯಕರು (ಪ್ರಹರಿ) ಪುನರ್ಜನ್ಮದ ಕೃಷ್ಣ ಶಕುನಿಯರಾಗಿ ತೋರುತ್ತಾರೆ. ಅದನ್ನವರು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಿದರೂ ಚಿಕಿತ್ಸಾಕ್ರಮವಾಗಿ ಒಪ್ಪಿ ನಡೆಯುವಲ್ಲಿಗೆ ನಾಟಕ ಹೊಸದೇ ಆಯಾಮವನ್ನು ಪಡೆಯುತ್ತದೆ. ಹಾಗೆ ನಡೆಯುವ ನಂಬಿಕೆ (ಉದಾ : ನೂರೊಂದು ಕೌರವರ ಜನನ, ದ್ರೌಪದಿ ಅಕ್ಷಯಾಂಬರ…) ಮತ್ತು ವೈಚಾರಿಕತೆಗಳ ಮುಖಾಮುಖಿ ಸ್ವಾರಸ್ಯವನ್ನು ಹೆಚ್ಚಿಸುತ್ತದೆ. ಪುರಾಣ ವ್ಯಕ್ತಿ ಹಾಗೂ ಸತ್ಯಗಳು ಭಕ್ತ ಜನ ನಂಬಿದಂತೆ ಸಾತ್ವಿಕ (ಅಥವಾ ತಾಮಸಿಕ) ಏಕ ಪ್ರವಾಹವಲ್ಲ, ಎಲ್ಲ ಕಾಲದಲ್ಲೂ ಮಾನವ ಮತಿ ಮತ್ತು ಗತಿ ಬಹುಮುಖಿಯಾದದ್ದು ಮತ್ತು ಬಹುತೇಕ ಸ್ವಾರ್ಥಪರವಾದದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಸಂಸಾರ ಸುಖ ವಂಚಿತನಾದ…
ಮೈಸೂರು : ಸ್ಪಂದನ ಸಾಂಸ್ಕೃತಿಕ ಪರಿಷತ್ತು ಮೈಸೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ವಿಸ್ಮಯ ಪ್ರಕಾಶನ ಮೈಸೂರು ಇದರ ವತಿಯಿಂದ ‘ಯುಗಾದಿ ಕವಿ-ಕಾವ್ಯ ಸಂಭ್ರಮ’ ರಾಜ್ಯ ಮಟ್ಟದ ಕವಿಮೇಳವನ್ನು ದಿನಾಂಕ 06 ಏಪ್ರಿಲ್ 2025ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರು ವಿಜಯ ನಗರ ಮೊದಲ ಹಂತ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭವನ್ನು ಪ್ರಸಿದ್ಧ ಸಾಹಿತಿ ಡಾ. ಸಬಿಹಾ ಭೂಮಿ ಗೌಡ ಇವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಡ್ಯದ ಕವಯಿತ್ರಿ ಹಾಗೂ ಅಂಕಣಕಾರರಾದ ಡಾ. ಶುಭಶ್ರೀ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 01 ಹಾಗೂ ಸಾಹಿತಿ ಮತ್ತು ಪ್ರಗತಿಪರ ಚಿಂತಕರಾದ ಶ್ರೀ ಹಡವನಹಳ್ಳಿ ವೀರಣ್ಣ ಗೌಡ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 02 ಪ್ರಸ್ತುತಗೊಳ್ಳಲಿದೆ. ಸಂಜೆ 4-00 ಗಂಟೆಗೆ ಸಮಾರೋಪ…
ಮಂಗಳೂರು : ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಇದರ ವತಿಯಿಂದ ‘ರಂಗ ಸ್ವರೂಪ ರಂಗೋತ್ಸವ 2025’ ಮಕ್ಕಳ ಬೇಸಿಗೆ ಶಿಬಿರವನ್ನು ಕುಂಜತ್ತಬೈಲ್ ಮರಕಡದ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 16-04-2025ರಿಂದ 19-04-2025ರವರೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಾನಪದ ವಿದ್ವಾಂಸರಾದ ಕೆ.ಕೆ. ಪೇಜಾವರ ಇವರಿಗೆ ರಂಗ ಸ್ವರೂಪ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದಿನಾಂಕ 19-04-2025ರಂದು ಸಂಜೆ ಗಂಟೆ 5-00ಕ್ಕೆ ಪ್ರತಿಭಾ ಪ್ರದರ್ಶನ, ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮಗಳು ನಡೆಯಲಿದೆ. ನೋಂದಾವಣೆಗಾಗಿ ಸಂಪರ್ಕಿಸಿರಿ 9880835659 ಮತ್ತು 9964022578.