Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯಿಂದ ಉಡುಪಿ ಜಿಲ್ಲೆಯ ಪತ್ರಕರ್ತರ ಸಾಧನೆ ಗುರುತಿಸಿ ಕೊಡಲ್ಪಡುವ ‘ಯಶೋ ಮಾಧ್ಯಮ- 2025’ ಪ್ರಶಸ್ತಿಗೆ ಉಡುಪಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾದ ಕಿರಣ್ ಮಂಜನಬೈಲು ಇವರು ಆಯ್ಕೆಯಾಗಿದ್ದಾರೆ. ದಿನಾಂಕ 14 ಜೂನ್ 2025ರ ಶನಿವಾರ ಬೆಳಿಗ್ಗೆ 10-00 ಗಂಟೆಗೆ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ವಹಿಸಲಿದ್ದು, ಕರ್ನಾಟಕ ರಾಜ್ಯ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘಗಳ ಒಕ್ಕೂಟ (ರಿ.) ಇದರ ರಾಜ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿಯವರು ದೀಪ ಪ್ರಜ್ವಲಿಸಲಿರುವರು. ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಅನಂತಪದ್ಮನಾಭ ಕಿಣಿ, ಸ್ಕೌಟ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತರಾದ ಜನಾರ್ದನ್ ಕೊಡವೂರು, ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಹಫೀಜ್, ಉದ್ಯಾನ ವಿನ್ಯಾಸಕರಾದ ಯು. ಲೋಕೇಶ್…
ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರ ವತಿಯಿಂದ ಪ್ರತಿ ತಿಂಗಳ 2ನೇ ಶನಿವಾರ ನಡೆಯುವ ಸರಣಿ ರಂಗಮಾಲೆ – 95ರಲ್ಲಿ ಯಕ್ಷಗಾನ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 14 ಮತ್ತು 15 ಜೂನ್ 2025ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 14 ಜೂನ್ 2025ರಂದು ಸಂಜೆ 7-00 ಗಂಟೆಗೆ ಮಂಜುನಾಥ್ ಎಲ್. ಬಡಿಗೇರ ಇವರ ನಿರ್ದೇಶನದಲ್ಲಿ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಮೂಡಲಪಾಯ ಯಕ್ಷಗಾನ ಪ್ರಸಂಗ ‘ಕರ್ಣ ಅರ್ಜುನರ ಕಾಳಗ’ ಪ್ರದರ್ಶನಗೊಳ್ಳಲಿದೆ. ದಿನಾಂಕ 15 ಜೂನ್ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ‘ಅಶ್ವತ್ಥಾಮ’ NOT OUT ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ರಂಗದಲ್ಲಿ ಚಂದ್ರಹಾಸ್ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ಡಾ. ದಿನೇಶ್ ನಾಯಕ್ ನಟಿಸಲಿದ್ದು, ಮೋಹನಚಂದ್ರ ಇವರು ನಿರ್ದೇಶನ ಮಾಡಲಿದ್ದಾರೆ. ನಾಟಕದ ಬಗ್ಗೆ : ಮಹಾಭಾರತದ ಹಲವಾರು ದುರಂತ…
ಬೆಂಗಳೂರು : ಕನ್ನಡ ಸಂಶೋಧನ ಅಕಾಡೆಮಿ (ನೋಂ.) ಇದರ ವತಿಯಿಂದ 2025ನೇ ಸಾಲಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ ‘ಕಥನ ಸಾಹಿತ್ಯದ ತಾತ್ವಿಕತೆ’ ಎಂಬ ವಿಷಯದ ಬಗ್ಗೆ ಸಂಶೋಧನ ಲೇಖನಗಳಿಗೆ ಆಹ್ವಾನಿಸಲಾಗಿದೆ. 1. ಪಿ.ಎಚ್.ಡಿ. ಸಂಶೋಧನಾರ್ಥಿಗಳು, ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಬರೆದು ಲೇಖನಗಳನ್ನು ಕಳುಹಿಸಿಕೊಡಬಹುದಾಗಿದೆ. 2. ಸಂಶೋಧನ ಲೇಖನವು ಕನ್ನಡ ಭಾಷೆಯಲ್ಲಿದ್ದು, 2000 ಪದಗಳ ಮಿತಿಯಲ್ಲಿರಬೇಕು. 3. ಸಂಶೋಧನ ಲೇಖನವು ಸ್ವಂತ ರಚನೆಯಾಗಿದ್ದು, ಕೃತಿ ಚೌರ್ಯ ಮಾಡಿರಬಾರದು. 4. ಸಂಶೋಧನ ಲೇಖನವು ಈ ಹಿಂದೆ ಯಾವುದೇ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಪ್ರಕಟವಾಗಿರಬಾರದು. 5. ಸಂಶೋಧನ ಲೇಖನವು ಶೀರ್ಷಿಕೆ, ವಿಷಯದ ವ್ಯಾಪ್ತಿ, ಪರಿಕಲ್ಪನೆ, ವಿಶ್ಲೇಷಣೆ, ವ್ಯಾಖ್ಯಾನ, ಸಮಾರೋಪ, ಫಲಿತಗಳಿಂದ ಕೂಡಿರಬೇಕು. 6. ಸಂಶೋಧನ ಲೇಖನದ ಕೊನೆಯಲ್ಲಿ ಅಡಿಟಿಪ್ಪಣಿಗಳು ಮತ್ತು ಪರಾಮರ್ಶನ ಗ್ರಂಥಗಳ ಮಾಹಿತಿ ಇರಬೇಕು. 7. ಕನ್ನಡ ನುಡಿ ವಿನ್ಯಾಸದಲ್ಲಿ 14 ಫಾಂಟ್ ಅಳತೆಯಲ್ಲಿ ಅಕ್ಷರ ದೋಷಗಳನ್ನು ತಿದ್ದುಪಡಿ ಮಾಡಿದ ವರ್ಡ್ ಫೈಲ್ನಲ್ಲಿ ಕಳುಹಿಸಿಕೊಡಬೇಕು. ೫. ಸಂಶೋಧನ ಲೇಖನದಲ್ಲಿ…
ಧಾರವಾಡ : ಭಾರತೀಯ ಸಂಗೀತ ವಿದ್ಯಾಲಯ ಧಾರವಾಡ ಮತ್ತು ಡಾ. ಅಣ್ಣಾಜಿರಾವ್ ಸಿರೂರ್ ರಂಗಮಂದಿರ ಪ್ರತಿಷ್ಠಾನ ಧಾರವಾಡ ಪ್ರಸ್ತುತ ಪಡಿಸುವ ಧಾರವಾಡ ಸಂಗೀತ ಕಛೇರಿಯನ್ನು ದಿನಾಂಕ 15 ಜೂನ್ 2025ರಂದು ಸಂಜೆ 5-15 ಗಂಟೆಗೆ ಧಾರವಾಡದ ಕೆ.ಸಿ.ಡಿ. ಕ್ಯಾಂಪಸ್ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ತೇಜಸ್ವಿನಿ ಶ್ರೀಹರಿ ಮತ್ತು ಧಾರವಾಡದ ಪಂಡಿತ್ ಕೈವಲ್ಯ ಕುಮಾರ್ ಗುರವ್ ಇವರ ಹಾಡುಗಾರಿಕೆಗೆ ಶ್ರೀಧರ್ ಮಾಂಡ್ರೆ ಮತ್ತು ಶ್ರೀಹರಿ ದಿಗ್ಗಾವಿ ತಬಲಾ ಹಾಗೂ ಗುರುಪ್ರಸಾದ್ ಹೆಗ್ಡೆ ಮತ್ತು ಬಸವರಾಜ್ ಹಿರೇಮಠ ಇವರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಹದಿನೇಳನೇ ಆವೃತ್ತಿಯ ವಿವೇಕಸ್ಮೃತಿ ಉಪನ್ಯಾಸ ಮಾಲಿಕೆ ದಿನಾಂಕ 12 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮನಮೋಹನ್ ಎಂ. ಸಮಾಜದಲ್ಲಿ ಇರುವ ಸ್ಥಾನಮಾನಗಳನ್ನು ತ್ಯಜಿಸಿ, ಶ್ರೀಮಂತಿಕೆಯನ್ನು ಬಿಟ್ಟು ಹೊರಬಂದಾಗ ಜೀವನದ ಅನುಭವ ಸಿಗುತ್ತದೆ. ಆತ್ಮ ಸಾಕ್ಷಾತ್ಕಾರವಾದಾಗ ನಿರ್ಧಾರಗಳು ಗಟ್ಟಿಯಾಗುತ್ತದೆ. ಭ್ರಮೆಗಳಿಂದ ಹೊರಬಂದಾಗ, ಬಂಧಗಳನ್ನು ತ್ಯಜಿಸಿದಾಗ ನಾವು ಭಯಮುಕ್ತರಾಗುವ ಮೂಲಕ ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂಬುದನ್ನು ಸ್ವಾಮಿ ವಿವೇಕಾನಂದರು ನಿರೂಪಿಸಿ ತೋರಿಸಿದ್ದಾರೆ. ಅವರ ಕವನಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ್ ನಾಯ್ಕ್ ಮಾತನಾಡಿ “ವಿವೇಕಾನಂದರ ಕಾವ್ಯಾತ್ಮಕ ವಿಶ್ಲೇಷಣೆಗಳಲ್ಲಿರುವಂತೆ ನಾವೆಲ್ಲರೂ ಕರ್ತವ್ಯತತ್ಪರರಾಗಬೇಕಿದೆ” ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ…
ಉಡುಪಿ : ವಿಶ್ವಕರ್ಮ ಒಕ್ಕೂಟ (ರಿ.) ಮತ್ತು “ಅತ್ಮೀಯ ಬೋಧಕ” ಮಾಸಪತ್ರಿಕೆ ಕುಂದೂರು ಇವರು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮುದಾಯದ 25 ವರ್ಷದಿಂದ 45 ವರ್ಷದೊಳಗಿನ ಬರಹಗಾರರಿಗಾಗಿ “ಸಣ್ಣ ಕಥೆ-ಕವನ ಸ್ಪರ್ಧೆ-2025” ಏರ್ಪಡಿಸಿದ್ದು, ವಿಶ್ವಕರ್ಮ ಸಮುದಾಯದ ಬರಹಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ನಿಯಮಗಳು : ಒಬ್ಬರಿಗೆ ಒಂದು ಕಥೆ ಮತ್ತು ಕವನ ಮಾತ್ರ ಸಲ್ಲಿಸಲು ಅವಕಾಶ, ಕಥೆ ಅಥವಾ ಕವನ ಸ್ವರಚಿತವಾಗಿರತಕ್ಕದ್ದು, ತಮ್ಮ ಸ್ವ ಹಸ್ತಾಕ್ಷರದಲ್ಲೇ ಬರೆದಿರತಕ್ಕದ್ದು (ಗಣಕಯಂತ್ರ / Computer) ದಲ್ಲಿ ಬೆರಳಚ್ಚು ಮಾಡಿದ ಲೇಖನವನ್ನು ಪುರಸ್ಕರಿಸುವುದಿಲ್ಲ, ಕಥೆ ಎ4 ವಿನ್ಯಾಸದ ಹಾಳೆಯಲ್ಲಿ ಮೂರು ಪುಟಕ್ಕೆ ಮೀರಿರಬಾರದು, ಕವನ 1 ಪುಟಕ್ಕೆ ಮೀರಿರಬಾರದು, ಕಥೆ-ಕವನ ಬರೆದ ಹಾಳೆಯಲ್ಲಿ ಲೇಖಕರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸದೆ ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಿರಬೇಕು, ವಯಸ್ಸಿನ ಬಗ್ಗೆ ಆಧಾರ್/ಮತದಾರರ ಗುರುತಿನ ಚೀಟಿ ಅಥವಾ ಸರಕಾರದ ಯಾವುದೇ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು, ಒಂದು…
ಮೈಸೂರು : ಶಿಲ್ಪಿ ಡಾ. ಅರುಣ್ ಯೋಗಿರಾಜ್ ನೇತೃತ್ವದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ರಾಮಕೃಷ್ಣ ಇನ್ಸಿಟ್ಯೂಟ್ ಫರ್ ಮೋರಲ್ & ಸ್ಪಿರಿಚುವಲ್ ಎಜುಕೇಶನ್ (ರಿಮೆ), ಮೈಸೂರು ಇವರ ಸಹಕಾರದಲ್ಲಿ ಆಯೋಜಿಸುವ ‘ಪ್ರೇರಣಾ ಕಲಾ ಕಾರ್ಯಾಗಾರ’ ದಿನಾಂಕ 28 ಜೂನ್ 2025ರ ಪೂರ್ವಾಹ್ನ ಘಂಟೆ 9.00ರಿಂದ ಸಂಜೆ ಗಂಟೆ ಘಂಟೆ 7.00ರ ವರೆಗೆ ಮೈಸೂರು ಯಾದವಗಿರಿಯ ಕೆ. ಆರ್. ಎಸ್. ಮುಖ್ಯರಸ್ತೆಯಲ್ಲಿರುವ ‘ರಿಮೆ’ ಇನ್ಸಿಟ್ಯೂಟ್ ಫರ್ ಮೋರಲ್ & ಸ್ಪಿರಿಚುವಲ್ ಎಜುಕೇಶನ್ ಇಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ರಿಂದ 9.15ರ ವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಜೀ ಮೈಸೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಾಗಾರವನ್ನು ರಿಮೆ, ಯಾದವಗಿರಿ, ಮೈಸೂರು ಇದರ ಸಂಚಾಲಕರಾದ ಕರೆಸ್ಪಾಂಡೆಂಟ್ ಪರಮ ಪೂಜ್ಯ ಸ್ವಾಮಿ ಮಹಾಮೇಧಾನಂದ ಜೀ ಉದ್ಘಾಟಿಸಲಿದ್ದಾರೆ. ದಿನದ ಮೊದಲ ದಿಕ್ಸೂಚಿ ಉಪನ್ಯಾಸ ಹಾಗೂ ಸಂವಾದದಲ್ಲಿ ‘ಕಲಾ ಬದುಕಿನ ಸಾರ್ಥಕತೆ ಹೇಗೆ?’ ಎಂಬ ವಿಷಯದಲ್ಲಿ ಶಿಲ್ಪಿ ಡಾ.…
ಬೆಂಗಳೂರು : ಅದಮ್ಯ ರಂಗಸಂಸ್ಕೃತಿ ಟ್ರಸ್ಟ್ (ರಿ.) ಬೆಂಗಳೂರು ಇವರು ಅಭಿನಯಿಸುವ ಮಾಲತೇಶ ಬಡಿಗೇರ ಇವರ ನಿರ್ದೇಶನದಲ್ಲಿ ‘ಮಾರೀಕಾಡು’ ನಾಟಕ ಪ್ರದರ್ಶನವನ್ನು ದಿನಾಂಕ 17 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂಲ ಶೇಕ್ಸ್ ಪಿಯರ್ ಮಹಾಕವಿಯ ಮ್ಯಾಕ್ ಬೆತ್ ನಾಟಕವನ್ನು ಡಾ. ಚಂದ್ರಶೇಖರ ಕಂಬಾರ ಇವರು ಕನ್ನಡಕ್ಕೆ ಅನುವಾದಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9880142532 ಮತ್ತು 9611124454 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಭಾರತಾಂಜಲಿ ಮಂಗಳೂರು ಇವರು ಪ್ರಸ್ತುತ ಪಡಿಸುವ ಗುರು ಪ್ರತಿಮಾ ಶ್ರೀಧರ್, ಗುರು ಶ್ರೀಧರ್ ಹೊಳ್ಳ ಮತ್ತು ವಿದುಷಿ ಪ್ರಕ್ಷಿಲಾ ಜೈನ್ ಬಿ. ಇವರ ಶಿಷ್ಯೆ ಕುಮಾರಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 14 ಜೂನ್ 2025ರಂದು ಸಂಜೆ ಗಂಟೆ 5-15ಕ್ಕೆ ಡಾನ್ ಬೋಸ್ಕೋ ಹಾಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಗುರು ಉಳ್ಳಾಲ ಮೋಹನ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಕೃಷ್ಣ ಹೆಗ್ಡೆ ಮಿಯಾರ್, ವಿದುಷಿ ನಯನ ವಿ. ರೈ ಮತ್ತು ಶ್ರೀಮತಿ ಉಷಾ ವರದರಾಜನ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ಪ್ರತಿಮಾ ಶ್ರೀಧರ್, ಹಾಡುಗಾರಿಕೆಯಲ್ಲಿ ವಿದ್ವಾನ್ ಸ್ವರಾಗ್ ಮಾಹೆ, ಮೃದಂಗದಲ್ಲಿ ಕಣ್ಣೂರಿನ ವಿದ್ವಾನ್ ಸುರೇಶ್ ಬಾಬು, ವಯೋಲಿನ್ ನಲ್ಲಿ ಉಡುಪಿಯ ವಿದ್ವಾನ್ ಶ್ರೀಧರ್ ಆಚಾರ್ ಪಡಿಗಾರ ಮತ್ತು ಮೊರಸಿಂಗ್ ನಲ್ಲಿ ವಿಟ್ಲದ ವಿದ್ವಾನ್ ಬಾಲಕೃಷ್ಣ ಹೊಸಮಣೆ ಇವರುಗಳು ಸಹಕರಿಸಲಿದ್ದಾರೆ.
ಉಪ್ಪುಂದ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಇದರ ವಾರ್ಷಿಕೋತ್ಸವ -2025ರ ಅಂಗವಾಗಿ ನಾಗೂರು ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ದಿನಾಂಕ 07 ಜೂನ್ 2025ರಂದು ಪ್ರತಿಷ್ಠಾನದ ಗುರುಗಳಾದ ಎ.ಪಿ. ಪಾಠಕ್ ಮತ್ತು ಎನ್.ಜಿ. ಹೆಗಡೆ ಮಾರ್ಗದರ್ಶನದಲ್ಲಿ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು ನಡೆಯಿತು. ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನದ ಆಯ್ದ ಪ್ರಸಂಗಗಳಿಂದ ಯಕ್ಷಗಾನ ಪದ್ಯಗಳ ಪ್ರಸ್ತುತಿ ನಡೆಯಿತು. ಖ್ಯಾತ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ವಾಸುದೇವ ರಂಗಾ ಭಟ್ಟ ಭಾಗವತಿಕೆಯ ಸ್ವರೂಪ ವಿವೇಚನೆ ಕುರಿತು ಮಾತನಾಡಿ, “ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಂಪರೆಯನ್ನು ಉಳಿಸಿಕೊಳ್ಳುತ್ತಾ ಯಕ್ಷಗಾನ ಪ್ರದರ್ಶನ, ರಂಗದಲ್ಲಿ ಶ್ರೀಮಂತವಾಗಿ ರಂಗೇರಬೇಕಾದರೆ ಭಾಗವತರ ಹೊಣೆಗಾರಿಕೆ ಮತ್ತು ಸಾಧ್ಯತೆಗಳ ಕುರಿತು ಹಲವು ದೃಷ್ಟಾಂತರಗಳ ಮೂಲಕ ಉದಾಹರಿಸಿ, ಕಲಾವಿದರ ಕಲಿಕೆ ಚೌಕಿಯಲ್ಲಿ ಸಹ ಕಲಾವಿದರೊಂದಿಗೆ ನಡೆಯಬೇಕು” ಎಂದರು. ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ರಾಗ ತಾಳ ಹಾಡಿನ ಮೂಲಕ ವಿವಿಧ ಮಟ್ಟುಗಳ ಪರಿಚಯ ಮಾಡಿಸಿದರು. ಉಮೇಶ್ ಶಾನ್ಭಾಗ್ ಉದ್ಘಾಟಿಸಿದರು. ಉಭಯ ತಿಟ್ಟುಗಳ ಅಗ್ರಗಣ್ಯ ಭಾಗವತರಿಂದ ಸಮರ್ಥ ಹಿಮ್ಮೇಳದೊಂದಿಗೆ ಯಕ್ಷ…