Author: roovari

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 17-09-2023ರ ಭಾನುವಾರದಂದು ಸಂಜೆ 6.05ಕ್ಕೆ ಸುರತ್ಕಲ್ಲಿನ ಸಿಟಿ ಗಾರ್ಡನ್ ಕ್ರಾಸ್ ರಸ್ತೆಯಲ್ಲಿರುವ ಭಾಗ್ಯ ರೆಸಿಡೆನ್ಸಿಯಲ್ಲಿ ನಡೆಯಲಿದೆ. ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತವೆನಿಸಿಕೊಂಡಿರುವ ಭಾರತದ ರಕ್ಷಣೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯ. ರಕ್ಷಣೆ ಅನ್ನುವಾಗ ಮೂರು ವಿಷಯಗಳನ್ನು ಉಲ್ಲೇಖಿಸಬಹುದಾಗಿದೆ. ಮೊದಲನೆಯದಾಗಿ ಭೌಗೋಳಿಕವಾದ ಭಾರತದ ಗಡಿಯ ರಕ್ಷಣೆ, ಇದನ್ನು ರಕ್ಷಿಸಿಕೊಂಡು ಬರುತ್ತಿರುವವರು ನಮ್ಮ ವೀರ ಯೋಧರು. ಎರಡನೆಯದು ನಮಗೆಲ್ಲರಿಗೂ ಹೊಟ್ಟೆಗೆ ಹಿಟ್ಟು ಇಕ್ಕುವ ನಮ್ಮ ಹೆಮ್ಮೆಯ ರೈತರು. ಮೂರನೆಯದೇ ನಾವೆಲ್ಲರೂ ಹೆಮ್ಮೆಪಡುವಂತಹ ಭಾರತೀಯ ಕಲೆಗಳು ಮತ್ತು ಈ ಕಲೆಯನ್ನು ಸಾಧನೆಯ ಮೂಲಕ ಮೈಗೂಡಿಸಿಕೊಂಡ ನಮ್ಮ ಗೌರವದ ಕಲಾವಿದರು. ಪ್ರತಿಯೊಬ್ಬನಿಗೂ ಯೋಧನಾಗುವುದು ಮತ್ತು ರೈತನಾಗುವುದು ಅಸಾಧ್ಯವಾಗಬಹುದು. ಆದರೆ ಚಿತ್ರ, ನೃತ್ಯ, ಸಂಗೀತದಂತಹ ಲಲಿತ ಕಲೆಗಳನ್ನು ಅಭ್ಯಸಿಸಿ ಉತ್ತಮ ಪ್ರಜೆಯಾಗುವುದರ ಜೊತೆಗೆ ಸ್ವಾಸ್ಥ್ಯ ಸಮಾಜವನ್ನು ಕಟ್ಟುವ ಅವಕಾಶ ಕಲಾವಿದನಿಗೆ ಮಾತ್ರ ಲಭ್ಯವಾಗಬಹುದಾದ ಸಂಪತ್ತು. ಇಂತಹ…

Read More

ಸುಳ್ಯ : ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಆಶ್ರಯದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಜನಪದ ಸಾಂಸ್ಕೃತಿಕ ವೈಭವ ನಲಿಪು- 2023, ಜನಪದ ಪ್ರಕಾರಗಳ ಮುಕ್ತ ನೃತ್ಯ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 02-09-2023ರ ಶನಿವಾರ ಜರಗಿತು. ಈ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್. ಅಂಗಾರ ಉದ್ಘಾಟಿಸಿ ಮಾತನಾಡುತ್ತಾ “ಜನಪದ ಸಾಹಿತ್ಯ, ಕಲೆ, ಸಂಸ್ಕೃತಿ ಜೀವಂತವಾಗಿ ಉಳಿಯಬೇಕಾದರೆ ಸರಕಾರವು ಯುವಜನ ಸಂಯುಕ್ತ ಮಂಡಳಿಗಳಿಗೆ ಪ್ರೋತ್ಸಾಹ ನೀಡಬೇಕು. ಸುಳ್ಯದಲ್ಲಿ ರಾಜ್ಯ ಮಟ್ಟದ ಯುವಜನ ಮೇಳವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಸುಬ್ರಾಯ ಚೊಕ್ಕಾಡಿಯವರಂತಹ ಓರ್ವ ಖ್ಯಾತ ಕವಿಯನ್ನು ಸಾರಸ್ವತ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಚೊಕ್ಕಾಡಿ ಎಂಬ ಗ್ರಾಮೀಣ ಪ್ರದೇಶ” ಎಂದು ಅವರು ಉಲ್ಲೇಖಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ, ಬೆಳ್ಳಾರೆ ಕಾಮಧೇನು ಗ್ರೂಪ್ಸ್ ಮಾಲಕ ಮಾಧವ ಗೌಡ ಬೆಳ್ಳಾರೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ರಾಜ್ಯ ಯುವಜನ ಒಕ್ಕೂಟದ…

Read More

ಮಂಜೇಶ್ವರ : ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪ್ರತಿಷ್ಠಾ ವರ್ಧಂತಿ ಹಾಗೂ ಓಣಂ ಹಬ್ಬದ ಆಚರಣೆಯ ಪ್ರಯುಕ್ತ ದಿನಾಂಕ 29-8-2023 ನೇ ಮಂಗಳವಾರದಂದು ವಿದುಷಿ ಡಾ.ಸುಚಿತ್ರಾ ಹೊಳ್ಳ ಹಾಗೂ ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗೋಷ್ಠಿ ಗಾಯನ ಜರಗಿತು. ಕಾರ್ಯಕ್ರಮವನ್ನು ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದುಷಿ ಡಾ.ಸುಚಿತ್ರಾ ಹೊಳ್ಳ ಇವರ ಜೊತೆ ಅವರ ಶಿಷ್ಯೆಯರಾದ ದಿವ್ಯಾಕಾರಂತ, ರಾಧಾಮಣಿರಾವ್, ಮೈತ್ರಿ ರಾವ್, ಸುಮನರಾವ್, ಗೀತಾರಾಜೇಶ್, ಸುಪ್ರಜಾರಾವ್ ಹಾಡುಗಾರಿಕೆಯಲ್ಲಿ ಭಾಗಿಯಾದರು. ಹಿಮ್ಮೇಳ ವಾದಕರಾಗಿ ಮೃದಂಗದಲ್ಲಿ ವಿದ್ವಾನ್ ವಸಂತ ಕೃಷ್ಣ ಕಾಂಚನ ಮತ್ತು ವಯಲಿನ್ ವಾದನದಲ್ಲಿ ಶ್ರೀ ಜಗದೀಶ್ ಕೊರೆಕಾನ ಇವರು ಸಹಕರಿಸಿದರು.

Read More

ಉಡುಪಿ : ಉಡುಪಿ ಮತ್ತು ಶಾರದಾ ಪ್ರತಿಷ್ಠಾನ ಮಾಗಡಿ ಇವರ ಸಂಯುಕ್ತ ಆಶ್ರಯದಲ್ಲಿ  ಕೃತಿ ಬಿಡುಗಡೆ ಸಮಾರಂಭವು ದಿನಾಂಕ 03-09-2023ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು. ಡಾ.ಬೇಲೂರು ರಘುನಂದನ್ ಇವರ ‘ರಕ್ತವರ್ಣೆ’ ಕನ್ನಡ ನಾಟಕವನ್ನು ಕೊಂಕಣಿಯ ಕವಿ ಸಾಹಿತಿ ವೆಂಕಟೇಶ ನಾಯಕ್ ಇವರು ಕೊಂಕಣಿಗೆ ಅನುವಾದಿಸಿದ ‘ರಕ್ತವರ್ಣೆ’ ಮತ್ತು  ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಇವರ ‘ಧರ್ಮಯುದ್ಧ’ ಕಾದಂಬರಿಯನ್ನು ಲೇಖಕ ಅಂಶುಮಾಲಿ ನಾಟಕಕ್ಕೆ ರೂಪಾಂತರಗೊಳಿಸಿದ್ದು, ಈ ಕೃತಿಗಳನ್ನು ಡಾ.ನಾ.ಮೊಗಸಾಲೆ ದಂಪತಿಗಳು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಬೇಲೂರು ರಘುನಂದನ್ “ಇಂದಿನ ಯುವ ಜನತೆ ತ್ವರಿತ ಗತಿಯ ಆಕಾಂಕ್ಷೆಗಳ ಹಿಂದೆ ಬಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ದಿ ಪಡೆಯಲು ಹಂಬಲಿಸುವುದನ್ನು ಕಾಣಬಹುದು.  ಅದು ತಪ್ಪೇನು ಅಲ್ಲ ಆದರೆ ಸಾಹಿತ್ಯ ಪರಂಪರೆಯಲ್ಲಿ ಕಾಯುವುದು ಎಂದರೆ ತಪಸ್ಸಿನಂತೆ. ತನ್ಮೂಲಕ ಕೃತಿ ಲೋಕಾರ್ಪಣೆ ಯಾಗುವುದೇ ಯಶಸ್ಸು” ಎಂದು ಹೇಳಿದರು. ಶಾರದಾ ಪ್ರತಿಷ್ಠಾನದ ಪ್ರಕಾಶಕರಾದ ಗಿರೀಶ್ ಮಾಗಡಿ ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ಮುಖಸ್ಥರಾಗಿರುವ…

Read More

ಬಂಟ್ವಾಳ : ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಹಾಗೂ ಅಭಿರುಚಿ ಜೋಡುಮಾರ್ಗ ಸಹಯೋಗದಲ್ಲಿ ಶ್ರೀ ಏರ್ಯ ಒಂದು ನೆನಪು ಹಾಗೂ ಕಾವ್ಯವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ದಿನಾಂಕ 27-08-2023ರಂದು ನಡೆಯಿತು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಶ್ರೀ ಕೃಷ್ಣಕುಮಾರ ಪೂಂಜ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಸಂಶೋಧನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಮ್ ಪೂಜಾರಿ ಅವರು ಏರ್ಯ ಅವರ ಬಗ್ಗೆ ಸಂಸ್ಮರಣಾ ಭಾಷಣಗೈದು “ಏರ್ಯರು ಸಾಹಿತ್ಯ, ಸಹಕಾರ, ಶಿಕ್ಷಣ ಹೀಗೆ ಹಲವು ರಂಗಗಳಲ್ಲಿ ಕ್ರಿಯಾಶೀಲರಾಗಿದ್ದ ಹಿರಿಯರು. ಆಯಾ ಕ್ಷೇತ್ರಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಕಿರಿಯರು, ಯುವಕರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಅವರ ಗುಣ ಅನನ್ಯವಾದುದು” ಎಂದರು. ಬಳಿಕ ಖ್ಯಾತ ಗಮಕಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ವಾಮದಪದವು ಸರಕಾರಿ ಪ್ರ.ದ. ಕಾಲೇಜಿನ ಉಪನ್ಯಾಸಕಿ ರೇಶ್ಮಾ ಭಟ್ ಅವರಿಂದ ಪಂಪಭಾರತದ ದ್ರೋಣ-ದ್ರುಪದ ಭಾಗದ ಕಾವ್ಯವಾಚನ ಮತ್ತು ವ್ಯಾಖ್ಯಾನ ನಡೆಯಿತು. ಕಸಾಪ ಬಂಟ್ವಾಳ ತಾಲೂಕು…

Read More

ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ‘ಗುರುಗಳೆಡೆ ನಮ್ಮ ನಡೆ’ ಕಾರ್ಯಕ್ರಮದಡಿ ತಾಲೂಕಿನ ಹಿರಿಯ ಶಿಕ್ಷಕ ಹಾಗೂ ಸಾಹಿತಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿ ಮತ್ತು ಶ್ರೀ ಲಕ್ಷ್ಮೀಶ ಚೊಕ್ಕಾಡಿ ಅವರನ್ನು ದಿನಾಂಕ 05-09-2023ರಂದು ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಸಾಹಿತಿಗಳನ್ನು ಶಿಕ್ಷಕರ ದಿನಾಚರಣೆಯಂದು ಗೌರವಿಸುವ ವಿನೂತನ ಸಂಪ್ರದಾಯವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದ್ದು, ಚೊಕ್ಕಾಡಿಯಲ್ಲಿ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಸಂಜೀವ ಕುದ್ಪಾಜೆ ಅಭಿನಂದನಾ ನುಡಿಗಳನ್ನಾಡಿದರು. ಸುಬ್ರಾಯ ಚೊಕ್ಕಾಡಿಯವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ 25 ವರ್ಷಗಳಾಗಿದ್ದು, 85ರ ಹರೆಯದಲ್ಲಿ ಇಂದಿಗೂ ಸಾಹಿತ್ಯದ ಕಾಯಕ ನಡೆಸುತ್ತಿದ್ದಾರೆ. ಅವರ ಸಹೋದರ ಲಕ್ಷ್ಮೀಶ ಚೊಕ್ಕಾಡಿ, 10 ವರ್ಷಗಳ ಹಿಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೂಡ ವಹಿಸಿದ್ದರು. ಇವರು…

Read More

ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಆಯೋಜಿಸಿದ್ದ ‘ಬಂಟ ಕಲಾ ಸಂಭ್ರಮ’ ಭಾರತ ದರ್ಶನ ಕಲ್ಪನೆಯ ಸ್ಪರ್ಧೆಯು ದಿನಾಂಕ 03-09-2023ರಂದು ನಡೆಯಿತು. ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘ ಪ್ರದರ್ಶಿಸಿದ ‘ಭಾರತ ದರ್ಶನ’ ಪ್ರಹಸನವು ಪ್ರಥಮ ಸ್ಥಾನದೊಂದಿಗೆ ರೂ.1 ಲಕ್ಷ ಬಹುಮಾನ ಪಡೆದುಕೊಂಡಿತು. ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಪ್ರಶಸ್ತಿ ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ ಹಾಗೂ ಪದಾಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ,…

Read More

ತೆಕ್ಕಟ್ಟೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ, ತೆಕ್ಕಟ್ಟೆಯಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಇವರು ಪ್ರಸ್ತುತ ಪಡಿಸುವ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ಯನ್ನು ದಿನಾಂಕ 02-09-2023ರಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಕೋಟ ಸುರೇಶ ಬಂಗೇರ ದೀವಟಿಕೆಗೆ ತೈಲವನ್ನು ಎರೆಯುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿದ ಯಕ್ಷಗಾನ ಕಲೆ ದೇಶ ವಿದೇಶಗಳಲ್ಲೂ ತನ್ನ ವೈಶಿಷ್ಯತೆಯಿಂದ ಮೆರೆದಿದೆ. ತುತ್ತು ಅನ್ನಕ್ಕೂ ಗತಿ ಇಲ್ಲದ ಎಳೆವೆಯಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ನನ್ನಂತೆ ಅನೇಕರು ಕಾಲಿಟ್ಟಿದ್ದಾರೆ ಮತ್ತು ಪ್ರಸಿದ್ಧಿಯನ್ನು ಹೊಂದಿದ್ದಾರೆ. ಬದುಕಿಗಾಗಿ ರಂಗದಲ್ಲಿಯೇ ಯಕ್ಷ ಶಿಕ್ಷಣ ಪಡೆದು ಅದರಿಂದ ಬಂದ ಮೊತ್ತ ತಮ್ಮ ಜೀವನಕ್ಕೆ ಆ ಕಾಲದಲ್ಲಿ ಸಾಕಾಗದೇ ಇದ್ದರೂ ಅಂದಿನ ಶ್ರಮ ಇಂದು ಪ್ರತಿಫಲ ನೀಡಿದೆ. ಯಾಕೆಂದರೆ ದೇಶದಾದ್ಯಂತ ನಾವು ಯಕ್ಷಗಾನ ಕಲೆಯಿಂದ ಗುರುತಿಸಿಕೊಂಡಿದ್ದೇವೆ. ಯಕ್ಷಗಾನ ಕಲೆ ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಬೇಕೇ ಬೇಕು. ಜೀವನದಲ್ಲಿ ಪುರಾಣ ಕಥೆಗಳನ್ನು ಅರಿಯುವುದಕ್ಕಾಗಿ ಮತ್ತು  ಜೀವನ ಪಕ್ವತೆಯನ್ನು ಹೊಂದುವುದಕ್ಕೆ ಯಕ್ಷಗಾನ ಕಲೆ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನಿಂದ ದಿನಾಂಕ 09-09-2023ರಿಂದ 17-09-2023ರವರೆಗೆ ಯುರೋಪ್‌ ಯಕ್ಷಗಾನ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ತೆಂಕುತಿಟ್ಟಿನ ರಾಜವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀವೇಷ, ಹಾಸ್ಯ ವೇಷಗಳು ರಾರಾಜಿಸಲಿವೆ. ಯು.ಕೆ., ಜರ್ಮನಿ, ಫ್ರಾನ್ಸ್ ಹಾಗೂ ಸ್ವಿಜರ್‌ ಲ್ಯಾಂಡ್‌ಗಳಲ್ಲಿ 10 ದಿನಗಳಲ್ಲಿ 7 ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಫೌಂಡೇಶನ್ ಅಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ತಿಳಿಸಿದ್ದಾರೆ. ಸೆಪ್ಟೆಂಬರ್ 9ರಂದು ಜರ್ಮನಿಯ ಫ್ರಾಂಕ್‌ ಫರ್ಟ್, 11ರಂದು ಯುಕೆಯ ಮಿಲ್ಟನ್ ಕೇಯ್ಸ್ನ್, 12ರಂದು ಯುಕೆಯ ಬಾಸಿಲ್ಡನ್, 13ರಂದು ಯುಕೆಯ ಸೆಂಟ್ರಲ್ ಲಂಡನ್, 14ರಂದು ಸ್ಲೋಗ್, 16ರಂದು ಫ್ರಾನ್ಸ್ ನ ಪ್ಯಾರಿಸ್, 17ರಂದು ಸ್ವಿಜರ್‌ ಲ್ಯಾಂಡ್‌ನ ಝರಿಚ್‌ನಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಒಂದು ಪ್ರಸಂಗ ಪ್ರದರ್ಶನದ ಅವಧಿ ಎರಡರಿಂದ ಎರಡೂವರೆ ಗಂಟೆ ನಿಗದಿಯಾಗಿದೆ. ಹೆಚ್ಚಾಗಿ ‘ಶ್ರೀದೇವಿ ಚರಿತಾಮೃತ’ ಪ್ರಸಂಗದ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ. ಈ ತಂಡದಲ್ಲಿ 8 ಮಂದಿ ಕಲಾವಿದರಿದ್ದಾರೆ, ಹಿಮ್ಮೇಳದಲ್ಲಿ ಪಟ್ಲ ಸತೀಶ್‌ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಚೈತನ್ಯ…

Read More

ಬಂಟ್ವಾಳ : ಬಂಟ್ವಾಳ ತಾಲೂಕಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 2023-24ರ ಅವಧಿಯಲ್ಲಿ ಸಮಿತಿಯ ಜವಾಬ್ದಾರಿ ಘೋಷಣಾ ಕಾರ್ಯಕ್ರಮವು ಕೂಟ ಪ್ರಮುಖ್ ಅಶೋಕ‌ಕುಮಾರ ಕಲ್ಯಾಟೆಯವರ ನಿರೂಪಣೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರಿಂದ ವಿದ್ಯುಕ್ತವಾಗಿ ದಿನಾಂಕ 02-09-2023ರಂದು ಉದ್ಘಾಟಣೆಗೊಂಡಿತು. ಪ್ರಾರಂಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಕಾರ್ತಿಕ್ (ದ್ವಿತೀಯ ವಾಣಿಜ್ಯ ವಿಭಾಗ), ಸಾತ್ವಿಕ್ (ದ್ವಿತೀಯ ವಾಣಿಜ್ಯ), ಲಿಖಿತ್ ನಾಯಕ್ (ದ್ವಿತೀಯ ವಾಣಿಜ್ಯ), ಚಿನ್ಮಯ್ (ದ್ವಿತೀಯ ವಾಣಿಜ್ಯ), ಕುಮಾರಿ ಪ್ರೇರಣಾ (ಪ್ರಥಮ ವಾಣಿಜ್ಯ), ಹರ್ಷಿತ್ (ಪ್ರಥಮ ವಾಣಿಜ್ಯ), ಭರತನಾಟ್ಯದಲ್ಲಿ ದಾಕ್ಷಾಯಿಣಿ (ದ್ವಿತೀಯ ವಾಣಿಜ್ಯ), ದೀಪ್ತಿ (ದ್ವಿತೀಯ ವಾಣಿಜ್ಯ) ಇವರುಗಳ ಅಭೂತಪೂರ್ವವಾಗಿ ಸೇಕ್ಸೋಫೋನ್ ವಾದನ, ಭರತ ನಾಟ್ಯ ಮತ್ತು ಗೀತ ಗಾಯನ ಪ್ರದರ್ಶಿಸಿದರು. ಈ ಮಧ್ಯೆ ವಿದ್ಯಾರ್ಥಿನಿಯರು ಹಿರಿಯರಿಗೆ ರಕ್ಷಾ ಬಂಧನ ಮಾಡಿ ಸೋದರತೆ ಮೆರೆದರು. ಭಾರತಾಂಬೆಗೆ ಪುಷ್ಪಾರ್ಚನೆ ಸಹಿತ ಪ್ರಾರ್ಥನೆಯ ನಂತರ ದೀಪ ಬೆಳಗಿ ಸಮಿತಿಗೆ ಚಾಲನೆ ಕೊಟ್ಟ ಡಾ.ಪ್ರಭಾಕರ ಭಟ್ ಅವರು “ಸಾಹಿತ್ಯವು ಬಹಳ ಪುರಾತನವಾಗಿದ್ದು, ಭಾಷೆಗೊಂದು ಚೊಕ್ಕ‌ ಆವರಣ ಕೊಡುವಂಥದ್ದಾಗಿದೆ.…

Read More