Author: roovari

ಬೆಳ್ತಂಗಡಿ : ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತರಾದ ಸತೀಶ್ ಆಚಾರ್ಯ ವೇಣೂರು ವಿಧಿವಶರಾಗಿದ್ದಾರೆ. ದಿನಾಂಕ 31ರ ಮಾರ್ಚ್ ನಸುಕಿನ ಜಾವ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಇಹಲೋಕ ತ್ಯಜಿಸಿದ್ದಾರೆ. ಇವರಿಗೆ 40 ವರ್ಷ ವಯಸ್ಸಾಗಿತ್ತು. ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಮುಗಿಸಿ ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿದ್ದ ಸಂದರ್ಭದಲ್ಲಿ ಅಂಡಿಂಜೆ ಕಿಲಾರ ಮಾರಿಗುಡಿ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್ ನಡುವೆ ಅಪಘಾತವಾಗಿದೆ. ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸತೀಶ್‌ ಆಚಾರ್ಯ ಸ್ಥಳದಲ್ಲೇ ಮೃತಪಟ್ಟರು. ಎದುರಿನಿಂದ ಬರುತ್ತಿದ್ದ ಬೈಕ್‌ನಲ್ಲಿದ್ದವರಿಗೂ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸತೀಶ್ ಆಚಾರ್ಯರು ಯಕ್ಷಗಾನದಲ್ಲಿ ಕಲಾವಿದನಾಗಿಯೂ ಗುರುತಿಸಿಕೊಂಡು ಅಪಾರ ಜನಮೆಚ್ಚುಗೆ ಪಡೆದುಕೊಂಡಿದ್ದರು. ಈ ಹಿಂದೆ ಕಟೀಲು ಮೇಳದಲ್ಲಿಯೂ ತನ್ನ ಪ್ರತಿಭೆಯನ್ನು ಅನಾವರಣ ಮಾಡಿದ್ದ ಇವರು ಮಂಗಳಾದೇವಿ ಯಕ್ಷಗಾನ ಮೇಳದಲ್ಲಿ ಭಾಗವತಾರಾಗಿ ಸೇವೆ ಸಲ್ಲಿಸುತ್ತಿದ್ದರು.

Read More

ಉಪ್ಪಿನಂಗಡಿ: ಗಯಾಪದ ಕಲಾವಿದೆರ್ ಉಬಾರ್ ವತಿಯಿಂದ ‘ಗಯಾಪದ ರಂಗ ಸಂಭ್ರಮ’ ಮತ್ತು ಕಲಾ ಪೋಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಳಿಕಾಂಬ ವೇದಿಕೆಯಲ್ಲಿ ದಿನಾಂಕ 25 ಮಾರ್ಚ್ 2025 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನಾಯ್ಕ ಮಾತನಾಡಿ “ಕಲಾವಿದರು ಮತ್ತು ಅವರಲ್ಲಿರುವ ಕಲೆಯನ್ನು ಗುರುತಿಸಿ ಗೌರವಿಸುವ ಮೂಲಕ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಪೋಷಿಸಿದಂತಾಗುತ್ತದೆ” ಎಂದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು. ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕ ಯು. ಜಿ. ರಾಧಾ, ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ, ಉಬಾರ್ ಗಯಾಪದ ಕಲಾವಿದೆರ್ ತಂಡದ ಮುಖ್ಯಸ್ಥರಾದ ಬಾಲಕೃಷ್ಣ ಪೂಜಾರಿ ಪೆರುವಾಯಿ ಮಾತನಾಡಿದರು. ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕೇಸರ ರಾಜೇಶ್ ಶಾಂತಿನಗರ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ವಿದ್ಯಾಧರ…

Read More

ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಹಾಗೂ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಅವರೊಂದಿಗೆ ಮಾತುಕತೆ ಸಂವಾದ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರಂದು ಕಿನ್ನಿಗೋಳಿ ಎಳತ್ತೂರು ಗುತ್ತಿನಲ್ಲಿ ನಡೆಯಿತು. ಇಂದಿರಾ ಹೆಗ್ಗಡೆಯವರು ಬಾಲ್ಯದ ತಮ್ಮ ನೆನಪುಗಳನ್ನು ಅಕ್ಕರೆಯಿಂದ ಹಂಚಿಕೊಂಡರು. ತಾವು ಸಾಹಿತಿಯಾಗಿ ರೂಪುಗೊಂಡ ಹಾಗೂ ಇತಿಹಾಸ ಸಂಶೋಧಕ ಪ್ರೊ. ಎಂ. ಚಿದಾನಂದ ಮೂರ್ತಿಯವರ ಮಾರ್ಗದರ್ಶನ ಪಡೆದು ಸಂಶೋಧಕಿಯಾಗಿ ಕಾರ್ಯನಿರ್ವಹಿಸಿದ ಕ್ರಮಗಳನ್ನು ತಿಳಿಸಿದರು. ಹಿರಿಯ ಸಾಹಿತಿ ಹಾಗೂ ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅವರು ಪ್ರಸಕ್ತ ಸಂದರ್ಭದಲ್ಲಿ ಜನಪದ ಆಚರಣೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಉಲ್ಲೇಖಿಸಿ ಮಾತುಕತೆ ನಡೆಸಿದರು. ಮೂಡಬಿದ್ರಿ ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ಸುಧಾರಾಣಿ ಮಾತನಾಡಿ “ಸ್ತ್ರೀ ಪರ ಚಿಂತನೆ ಹಾಗೂ ಜನಪರ ನಿಲುವು ಮೂಲಕ ಜಾನಪದ ಸಂಸ್ಕೃತಿಯ ಆಳವಾದ ಅಧ್ಯಯನದ ಮೂಲಕ ಸಂಶೋಧನ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸಾಧನೆಯನ್ನು…

Read More

ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ‘ಮಂದಾರ ರಂಗೋತ್ಸವ 2025’ ಸಮಾರಂಭವನ್ನು ದಿನಾಂಕ 04 ಏಪ್ರಿಲ್ 2025ರಿಂದ 06 ಏಪ್ರಿಲ್ 2025ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ಆವರಣದಲ್ಲಿರುವ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 04 ಏಪ್ರಿಲ್ 2025ರಂದು ಅರುಣ್ ಲಾಲ್ ಕೇರಳ ಇವನ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ತಂಡದವರಿಂದ ‘ಮತ್ತಾಯ’, ದಿನಾಂಕ 05 ಏಪ್ರಿಲ್ 2025ರಂದು ರಂಜಿತ್ ಶೆಟ್ಟಿ ಕುಕ್ಕುಡೆ ಇವರ ನಿರ್ದೇಶನದಲ್ಲಿ ತೆಕ್ಕಟ್ಟೆಯ ಧಮನಿ ಟ್ರಸ್ಟ್ (ರಿ.) ತಂಡದವರಿಂದ ‘ಸೂರ್ಯ ಬಂದ’ ಮತ್ತು ದಿನಾಂಕ 06 ಏಪ್ರಿಲ್ 2025ರಂದು ರೋಹಿತ್ ಎಸ್. ಬೈಕಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೈಕಾಡಿಯ ಮಂದಾರ (ರಿ.) ತಂಡದವರಿಂದ ‘ಬೆತ್ತಲಾಟ’ ನಾಟಕಗಳು ಪ್ರದರ್ಶನಗೊಳ್ಳಲಿದೆ.

Read More

ಉಡುಪಿ: ಮೇ ತಿಂಗಳಲ್ಲಿ ನಡೆಯುವ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಪ್ರಾಚಾರ್ಯ, ಯಕ್ಷಗಾನ ಕಲಾವಿದ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷರಾದ ಪ್ರೊ. ಎಂ. ಎಲ್. ಸಾಮಗ ಆಯ್ಕೆಯಾಗಿದ್ದಾರೆ. ಕೊಡವೂರು ಶಂಕನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಕ. ಸಾ. ಪ. ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್‌.ಪಿ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಮ್ಮೇಳನ 2ದಿನ ನಡೆಯಲಿದೆ ಎಂದು ಕ. ಸಾ. ಪ. ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಮತ್ತು ರಂಜನಿ ವಸಂತ್ ತಿಳಿಸಿದ್ದಾರೆ.

Read More

ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ), ಕಾಸರಗೋಡು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ‘ಅಮ್ಮ’ ಇವೆಂಟ್ ಮ್ಯಾನೇಜ್ಮೆಂಟ್ ಕನ್ನಡ ಗ್ರಾಮ ಪಾರೆಕಟ್ಟೆ, ವಿ. ಕೆ. ಎಂ. ಕಲಾವಿದರು (ರಿ.) ಬೆಂಗಳೂರು, ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು, ಸಹಕಾರಲ್ಲಿ ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ – 2025, ಕಾಸರಗೋಡು ಕನ್ನಡ ನಾಟಕೋತ್ಸವ, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಕಾರ್ಯಕ್ರಮವು ದಿನಾಂಕ 27 ಮಾರ್ಚ್ 2025 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸಂಸ್ಥಾಪಕ ಪ್ರಧಾನ ಸಂಚಾಲಕರಾದ ಡಾಕ್ಟರ್ ಎಂ. ಜಿ. ಆರ್. ಅರಸ್ ಮಾತನಾಡಿ “ಕಾಸರಗೋಡು ಕನ್ನಡ ಗ್ರಾಮದ ಸ್ಥಾಪನೆಯು ವಿಶ್ವದಲ್ಲೇ ಪ್ರಥಮ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2000ದಲ್ಲಿ ಸ್ಥಾಪನೆಗೊಂಡು…

Read More

ಪುತ್ತೂರು : ಪುತ್ತೂರಿನ ನಾಟ್ಯರಂಗ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಪ್ರಸ್ತುತಪಡಿಸಿದ ‘ವಾಚಿಕಾಭಿನಯ’ ಪ್ರಸ್ತುತಿಯು ದಿನಾಂಕ 27 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ತಾಳವಾದ್ಯ ನುಡಿಸುವುದರ ಮೂಲಕ ಉದ್ಘಾಟಿಸಿ ವಿವೇಕಾನಂದ ಕನ್ನಡ ಶಾಲೆಯ ಮುಖ್ಯ ಗುರುಗಳಾದ ಹಾಗೂ ನಾಟ್ಯರಂಗದ ಪೋಷಕರಾದ ಆಶಾ ಬೆಳ್ಳಾರೆ “ಮಕ್ಕಳ ಕಲ್ಪನಾ ಶಕ್ತಿ, ಕುತೂಹಲ, ಸೂಕ್ಷ್ಮತೆಯ ಭಾವ ವಿಕಾಸದಲ್ಲಿ ಕಥಾ ವಾಚನದ ಪಾತ್ರ ಬಹಳ ಪ್ರಮುಖವಾಗಿದೆ. ಈ ದಿಶೆಯಿಂದ ರಂಗಭೂಮಿ ಕಾರ್ಯ ನಿರ್ವಹಿಸುತ್ತಿದ್ದು, ಎಳವೆಯಿಂದಲೇ ಈ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸುಕನ್ಯ ಕನಾರಳ್ಳಿ ಕನ್ನಡಕ್ಕೆ ಅನುವಾದಿಸಿದ ಕಮಲಾದಾಸ್ ಅವರ ಮಲಯಾಳ ಕಥೆ ‘ಬೇಸಿಗೆ ರಜಾಕಾಲ’ ಹಾಗೂ ರಘುನಾಥ ಚಹ ಅವರ ‘ಸುಂಯ್ ದುಬಕ್ ಟುಪಕ್’ ಕಥೆಗಳನ್ನು ವಾಚಿಕಾಭಿನಯದಲ್ಲಿ ಪ್ರಸ್ತುತಪಡಿಸಿದವರು ನಾಟ್ಯ ರಂಗ ನಿರ್ದೇಶಕರೂ, ಶಾಸ್ತ್ರೀಯ ಹಾಗೂ ರಂಗಭೂಮಿ ಕಲಾವಿದರಾದ ವಿದುಷಿ ಮಂಜುಳ ಸುಬ್ರಹ್ಮಣ್ಯ ಮತ್ತು ವಿನಿತಾ ಶೆಟ್ಟಿ ಇವರು. ಪ್ರಸ್ತುತಿಯ ಅನಂತರ ನಡೆದ ಸಂವಾದದಲ್ಲಿ ನಾಟ್ಯರಂಗದ ಪೋಷಕರು ಮತ್ತು ಮಕ್ಕಳು…

Read More

ಮೈಸೂರು : ಮೈಸೂರಿನ ಶ್ರೀಗುರು ಕಲಾ ಶಾಲೆ ಅರ್ಪಿಸುವ ‘ಪುಟಾಣಿ ಪರ್ ಪಂಚ’ ಮಕ್ಕಳ ಬೇಸಿಗೆ ಶಿಬಿರ -2025ವನ್ನು ದಿನಾಂಕ 10 ಏಪ್ರಿಲ್ 2025ರಿಂದ 01 ಮೇ 2025ರವರೆಗೆ ಮೈಸೂರು ಕುವೆಂಪು ನಗರದ ವಾಸವಿ ವಿದ್ಯಾನಿಕೇತನದಲ್ಲಿ ಆಯೋಜಿಸಲಾಗಿದೆ. 4ರಿಂದ 14 ವರ್ಷ ವಯಸ್ಸಿನ ಮಕ್ಕಳು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4-00 ಗಂಟೆ ತನಕ ನಡೆಯಲಿರುವ ಈ ಶಿಬಿರದ ಪ್ರವೇಶಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980794690.

Read More

ಮೂಡಬಿದಿರೆ : ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ‘ವಿಶ್ವರಂಗಭೂಮಿ ದಿನಾಚರಣೆ’ ಅಂಗವಾಗಿ ‘ರಂಗಗೀತೆ- ಉಪನ್ಯಾಸ- ಸನ್ಮಾನ- ನಾಟಕ’ ಕಾರ್ಯಕ್ರಮವು ದಿನಾಂಕ 28 ಮಾರ್ಚ್ 2025ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ “ರಂಗ ಚಟುವಟಿಕೆಯೇ ನನ್ನ ಬದುಕಿನ ಯಶಸ್ಸಿನ ಸೂತ್ರ. ಸಮಾಜ ಮತ್ತು ಬದುಕಿಗೆ ರಂಗಭೂಮಿ ಕೊಡುಗೆ ಅಪಾರ. ಪಠ್ಯಕ್ಕಿಂತ ರಂಗ ಚಟುವಟಿಕೆಗಳ ನೆನಪು ನನಗೆ ಇಂದಿಗೂ ಚಿರಸ್ಥಾಯಿಯಾಗಿದೆ. ‘ಭೋಜ ಶೆಟ್ಟಿ ನಮ್ಮ ಸಮಕಾಲೀನರು. ರಂಗದಲ್ಲಿ ಅವರ ಒಡನಾಟವೇ ಸುಂದರ. ಲಂಕೇಶ್ ಬರೆದ ‘ಪೋಲಿಸರಿದ್ದಾರೆ ಎಚ್ಚರಿಕೆ’ ನಾಟಕದ ‘ರುದ್ರಮೂರ್ತಿ’ ಪಾತ್ರ ಸೇರಿದಂತೆ ತಾವು ನಿರ್ವಹಿಸಿದ ‘ಗುಂಡ’, ‘ತುಘಲಕ್’, ‘ಬಯ್ಯಮಲ್ಲಿಗೆ’ ನಾಟಕದಲ್ಲಿ ತಾವು ನಿರ್ವಹಿಸಿದ ‘ವಿದೂಷಕ’ ಪಾತ್ರ ಸೇರಿದಂತೆ ಎಲ್ಲ ಪಾತ್ರಗಳನ್ನು ತೃಪ್ತ ಭಾವದಿಂದ ನಿರ್ವಹಿಸಿದ್ದೇನೆ. ವಿಠಲ್ ಮಾಸ್ಟರ್ ಮೂಲಕ ಭರತ ನಾಟ್ಯ ಕಲಿತು ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದೇನೆ. ‘ಮೂಕಾನಭಿಯ, ಮ್ಯಾಜಿಕ್ ಕಲಿತು ಪ್ರಯೋಗಿಸಿದ…

Read More

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಂಗವಾಹಿನಿ (ರಿ.) ಚಾಮರಾಜನಗರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 27 ಮಾರ್ಚ್ 2025ರಂದು ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ಯ ಅಂಗವಾಗಿ ಏರ್ಪಡಿಸಿದ್ದ ‘ಅನ್ನ’ ಚಲನಚಿತ್ರದ ಕಥೆಗಾರರು ಹಾಗೂ ‘ಬೆಲ್ಲದ ದೋಣಿ’ ನಾಟಕ ಕೃತಿಯ ಕರ್ತೃಗಳಾದ ಹನೂರು ಚೆನ್ನಪ್ಪನವರ ಸ್ವರಚಿತ ನಾಟಕ ಅಮೋಘವಾಗಿ ಮೂಡಿಬಂದಿತು. ‘ಬೆಲ್ಲದ ದೋಣಿ’ ನಾಟಕ ಬಡ ಮಧ್ಯಮ ವರ್ಗದ ಶೋಷಿತ ಕುಟುಂಬವು ಸಾಲದ ಸುಳಿಯಲ್ಲಿ ಸಿಲುಕಿ ಹೇಗೆ ಸಾಲದ ಒತ್ತಡದಿಂದ ಹೊರಬರಲಾಗದೆ ತಡಬಡಿಸುತ್ತದೆ ಎಂಬುದು ಮನಮುಟ್ಟುವಂತೆ ಕಟ್ಟಿಕೊಡುತ್ತದೆ. ಸಮಾಜದಲ್ಲಿ ಶೋಷಿತರು ಎಷ್ಟೇ ಉನ್ನತ ಸ್ಥಾನಕ್ಕೆ  ಏರಿದರೂ ಅವರನ್ನು ಜಾತಿಯ ಸಂಕುಚಿತ ಮನೋಭಾವದಿಂದ ನೋಡುವ ಪರಿ ಬದಲಾಗುವುದಿಲ್ಲ ಎಂಬುದನ್ನು ಕುಟುಂಬದ ಯಜಮಾನ ತಾನು ಎಷ್ಟೇ ಬಡ್ಡಿಗೆ ಸಾಲ ಮಾಡಿಕೊಂಡಿದ್ದರೂ ಶಿವಣ್ಣ ಎಂಬ ವ್ಯಕ್ತಿಯಿಂದ ಐದು ಸಾವಿರ ಬಡ್ಡಿಗೆ ಸಾಲ ಮಾಡಿ ಅಯ್ಯಪ್ಪನ ಮಾಲೆ ಧರಿಸಿಕೊಂಡು ಭಯ ಭಕ್ತಿಯಿಂದ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೋಗುವ ಸಿದ್ದತೆ ಮಾಡಿಕೊಂಡಿರುತ್ತಾನೆ.…

Read More