Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮೂಡುಬಿದ್ರೆಯ ಎಕ್ಸೆಲೆಂಟ್ ಪ.ಪೂ ಕಾಲೇಜಿನಲ್ಲಿ ದಿನಾಂಕ 20 ಆಗಸ್ಟ್ 2025ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ ಹಾಗೂ ವಾರ್ಷಿಕ ಸಭೆಯಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ ಐತಾಳ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ನಿಕಟಪೂರ್ವ ಅಧ್ಯಕ್ಷರಾದ ಮಂಗಳೂರು ಶ್ರೀ ಶಾರದಾ ಪ.ಪೂ. ಕಾಲೇಜಿನ ಉಪನ್ಯಾಸಕ ರಮೇಶ್ ಆಚಾರ್ಯ ನಾರಳ ಅವರು ಗೌರವಾಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರಾಗಿ ಮಂಗಳೂರು ಎಕ್ಸಪರ್ಟ್ ಪ.ಪೂ. ಕಾಲೇಜಿನ ಶ್ರೀನಿವಾಸ ಮಧ್ಯಸ್ಥ, ಮೂಡುಬಿದ್ರೆ ಆಳ್ವಾಸ್ ಪ.ಪೂ. ಕಾಲೇಜಿನ ಅಂಬರೀಷ ಚಿಪ್ಲೂಣಕರ್, ಸುರತ್ಕಲ್ ಗೋವಿಂದದಾಸ ಪ.ಪೂ. ಕಾಲೇಜಿನ ಪೈಕ ವೆಂಕಟರಮಣ ಭಟ್ ಇವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮಂಗಳೂರು ಸೈಂಟ್ ಅಲೋಶಿಯಸ್ ಪ.ಪೂ. ಕಾಲೇಜಿನ ಡಾ. ಸುರೇಖಾ ತಂತ್ರಿ, ಜೊತೆ ಕಾರ್ಯದರ್ಶಿಗಳಾಗಿ ಮಂಗಳೂರು ಮ್ಯಾಪ್ಸ್ ಪ.ಪೂ. ಕಾಲೇಜಿನ ಶೈಲಜಾ ಹೆಚ್.ಎಸ್. ಮೂಡುಬಿದ್ರೆ…
ವಿಜಯಪುರ : ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್ತು ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 31 ಆಗಸ್ಟ್ 2025 ರವಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕವಿ ಲಕ್ಷ್ಮೀಶನ ಜೈಮಿನಿ ಭಾರತದ ‘ಚಂದ್ರಹಾಸ-ವಿಷಯೆ’ ವಿವಾಹ ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಗಮಕ ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದ ಶಿಕ್ಷಕರಾದ ಡಾ. ಮಾಧವ್ ಗುಡಿಯವರು “ವಿದ್ಯಾರ್ಥಿಗಳಲ್ಲಿ ಗಮಕದ ಬೆಳವಣಿಗೆಗೆ ಕನ್ನಡ ವ್ಯಾಕರಣ ಹಾಗೂ ಕಾವ್ಯಗಳ ಓದುವಿಕೆ ಅತ್ಯವಶ್ಯ. ಕರೋನಾ ಯುಗದ ನಂತರ ಮಕ್ಕಳ ಕಲಿಯುವಿಕೆ ಕುಂಠಿತವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಸಂದರ್ಭದಲ್ಲಿ ಕಾವ್ಯಗಳ ವಾಚನ-ವ್ಯಾಖ್ಯಾನ ಪ್ರಕ್ರಿಯೆ ಸತತವಾಗಿ ಮುಂದುವರೆಯಬೇತು ಎಂದು ಹೇಳಿದರು. ನಂತರ ಜರುಗಿದ ಗಮಕ ಕಾರ್ಯಕ್ರಮದಲ್ಲಿ ಗಮಕ ವಿದುಷಿ ಶಾಂತಾ ಕೌತಾಳ್ ಇವರು ಲಕ್ಷ್ಮೀಶನ ಜೈಮಿನಿ ಭಾರತವನ್ನು ಓದಿದರು.…
ಮಂಗಳೂರು : ಸ್ಪೀಕ್ ಮಕೇ ಎನ್.ಐ.ಟಿ.ಕೆ. ಇದರ ವತಿಯಿಂದ ‘ಗಂಧರ್ವ ನರ್ತನ’ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 10 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಎಸ್.ಜೆ.ಎ.ಯಲ್ಲಿ ಆಯೋಜಿಸಲಾಗಿದೆ. 2020ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಮಿಥುನ್ ಶ್ಯಾಮ್ ಇವರು ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ.
ಮಂಗಳೂರು : ಮಾಂಡ್ ಸೊಭಾಣ್ ಮತ್ತು ಕಲಾಂಗಣ್ ವತಿಯಿಂದ ಡಾ. ಸವಿತಾ ರಾಣಿ ಇವರ ನಿರ್ದೇಶನದಲ್ಲಿ ‘ಹೊ ತೊ ತೊ ಹೊ’ ಕೊಂಕಣಿ ನಾಟಕ ಪ್ರದರ್ಶನವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ ಘಂಟೆ 6-30ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಅರುಣ್ ರಾಜ್ ಲುದ್ರಿಗ್ ಮತ್ತು ವಿಕಾಸ್ ಕಲಾಕುಲ್ ಇವರು ಅನುವಾದಿಸಿದ್ದು, ರೆನೊಲ್ಡ್ ಲೋಬೊ ಮತ್ತು ಕ್ರೀತನ್ ಡಿ’ಸೋಜಾ ಸಂಗೀತ ನೀಡಿರುತ್ತಾರೆ.
ಬೆಂಗಳೂರು : ಶ್ರವಣಬೆಳಗೊಳದಲ್ಲಿ ನಡೆದ 81ನಯೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯವರ ಹೆಸರಿನಲ್ಲಿ ಸ್ಥಾಪಿತವಾಗಿರುವ ‘ಡಾ. ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ’ ಪುರಸ್ಕಾರಕ್ಕೆ 2024ನೆಯ ಸಾಲಿಗೆ ಜನಪದ ಗಾಯಕ ಎಚ್. ಜನಾರ್ದನ್ (ಜನ್ನಿ) ಮತ್ತು 2025ನೆಯ ಸಾಲಿಗೆ ಶೂದ್ರ ಶ್ರೀನಿವಾಸ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಡಾ. ಸಿದ್ಧಲಿಂಗಯ್ಯನವರ ತಾತ್ವಿಕತೆಯನ್ನು ಸಮರ್ಥವಾಗಿ ವಿವಿಧ ಮಾಧ್ಯಮಗಳ ಮೂಲಕ ಸಮರ್ಥವಾಗಿ ಬಿಂಬಿಸುತ್ತಿರುವ ಸಾಧಕರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. 2024ನೆಯ ಸಾಲಿನ ‘ಡಾ. ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ’ ಪುರಸ್ಕಾರಕ್ಕೆ ಪಾತ್ರರಾಗಿರುವ ಎಚ್. ಜನಾರ್ದನ (ಜನ್ನಿ)ಯವರು ಸುಮಾರು ನಾಲ್ಕೂವರೆ ದಶಕಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಅವರು ಬೀದಿ ನಾಟಕ ಚಳುವಳಿಯಲ್ಲಿ, ಕಾವ್ಯರಂಗ ಪ್ರಯೋಗದಲ್ಲಿ ತಮ್ಮ ವಿಶಿಷ್ಟತೆಯನ್ನು ಮರೆದಿದ್ದಾರೆ. ‘ಬರ’ ಚಿತ್ರದ ಮೂಲಕ ಚಲನಚಿತ್ರ ಕ್ಷೇತ್ರವನ್ನು ಪ್ರವೇಶ ಮಾಡಿ ಅಲ್ಲಿಯೂ ತಮ್ಮ ಛಾಪನ್ನು…
ಮಳವಳ್ಳಿ : ರಂಗಬಂಡಿ ಮಳವಳ್ಳಿ (ರಿ.) ಇದರ ವತಿಯಿಂದ ಹಾಗೂ ಯುನಿವರ್ಸಲ್ ಸೇವಾ ಟ್ರಸ್ಟ್ (ರಿ.) ಮಳವಳ್ಳಿ ಇದರ ಸಹಯೋಗದೊಂದಿಗೆ ಆಯೋಜಿಸುವ ‘ಮಳವಳ್ಳಿ ಸುಂದರಮ್ಮ ನಾಟಕೋತ್ಸವ 2025-26’ ಕಾರ್ಯಕ್ರಮಗಳನ್ನು ದಿನಾಂಕ 09 ಸೆಪ್ಟೆಂಬರ್ 2025ರಿಂದ 15 ಸೆಪ್ಟೆಂಬರ್ 2025ರವೆರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಮಳವಳ್ಳಿಯ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ಹಿಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 09 ಸೆಪ್ಟೆಂಬರ್ 2025ರಂದು ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ನಟನ (ರಿ.) ಮೈಸೂರು ಪ್ರಸ್ತುತ ಪಡಿಸುವ ‘ಸ್ಥಾವರವೂ ಜಂಗಮ’, ದಿನಾಂಕ 10 ಸೆಪ್ಟೆಂಬರ್ 2025ರಂದು ಡಾ. ಕೆ. ರಾಮಕೃಷ್ಣಯ್ಯ ಇವರ ನಿರ್ದೇಶನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾವಿಭಾಗ ಪ್ರಸ್ತುತ ಪಡಿಸುವ ‘ಮಂಟೇಸ್ವಾಮಿ ಕಥಾ ಪ್ರಸಂಗ’, ದಿನಾಂಕ 11 ಸೆಪ್ಟೆಂಬರ್ 2025ರಂದು ರಮೇಶ್ ಬೆಣಕಲ್ ಇವರ ನಿರ್ದೇಶನದಲ್ಲಿ ಶ್ರೀರಂಗ ಪಟ್ಟಣದ ಗಮ್ಯ (ರಿ.) ಪ್ರಸ್ತುತ ಪಡಿಸುವ ‘ಪರಿಣಯ ಪ್ರಸಂಗ’, ದಿನಾಂಕ 12 ಸೆಪ್ಟೆಂಬರ್ 2025ರಂದು ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ ಇವರ ನಿರ್ದೇಶನದಲ್ಲಿ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 135’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 06 ಸೆಪ್ಟೆಂಬರ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ವಾನ್ ದೀಪಕ್ ಕುಮಾರ್ ಇವರ ಶಿಷ್ಯೆ ಸನ್ನಿಧಿ ಎಸ್. ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಶ್ರೀಮತಿ ವಿದ್ಯಾ ಗೌರಿ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು. ವಿದ್ವಾನ್ ದೀಪಕ್ ಕುಮಾರ್ ನಟುವಾಂಗದಲ್ಲಿ, ವಿದುಷಿ ಪ್ರೀತಿಕಲಾ ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಮೃದಂಗ ಮತ್ತು ವಿದ್ವಾನ್ ಕೃಷ್ಣಗೋಪಾಲ ಪೂಂಜಾಲಕಟ್ಟೆ ಇವರು ಕೊಳಲಿನಲ್ಲಿ ಸಹಕರಿಸಲಿದ್ದಾರೆ.
ಕೋಟ : ಕರ್ಣಾಟಕ ಯಕ್ಷಧಾಮ ಮಂಗಳೂರು ಮತ್ತು ಕಲ್ಕೂರ ಪ್ರತಿಷ್ಠಾನ ಇದರ ವತಿಯಿಂದ ‘ಯಕ್ಷಕೂಟ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಕೋಟ ಮೂರುಕೈ ಶ್ರೀ ಹಂದೆ ವಿನಾಯಕ ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ಹಮ್ಮಿಕೊಳ್ಳಲಾಗಿದೆ. ಶರಸೇತು ಬಂಧನ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು : ನಮ್ ಕತೆಗಳು, ಹಾಡ್ಗುಳು, ಯಾವಾಗಲೂ ಕಾಡ್ತಾವ, ಯಾವುದೋ ಕಥೆಯಲ್ಲಿ ಇನ್ಯವುದೋ ನೆನ್ಪಾಗ್ತಾದ, ಹಾಗೆ ಹಾಡ್ಗಳಲ್ಲಿ ಕೂಡ… ಹಾಗೆ ಕಾಡಿ ಈ ‘ತೌಸೆಂಡ್ ರಿವರ್ ಬ್ಲೂಸ್’ ಹುಟ್ಟಿಕೊಂಡಿದೆ. ಇಲ್ಲಿ ನಮ್ ಧ್ವನಿಗಳಿಗೆ ಹಾಡ್ಗಳು ಅಂಟಿಕೊಂಡಿವೆ, ವಾದ್ಯಗಳಿಗೆ ನಮ್ ಕೈ ಬೆರಳುಗಳು ಉಸಿರಾಗಿದೆ. ಹಾಡೋಣ, ಓದೋಣ, ಕುಣಿಯೋಣ, ಕೇಳಿಸಿಕೊಳ್ಳೊಣ. ಜಂಗಮ ಕಲೆಕ್ಟಿವ್ ಬೆಂಗಳೂರು ಇದರ ಸಹಯೋಗದಲ್ಲಿ ಹಲ್ಗಿ ಕಲ್ಚರ್ ಪ್ರಸ್ತುತ ಪಡಿಸುವ ಎರಡನೇ ಪ್ರದರ್ಶನ ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ, ಐಡಿಯಲ್ ಹೊಮ್ಸ್ ದೀಪ ಮನೆ 70ರಲ್ಲಿ ಆಯೋಜಿಸಲಾಗಿದೆ. https://forms.gle/TfJ7ffAoJV4SmxJQA
ಬೆಂಗಳೂರು : ಸೈಡ್ ವಿಂಗ್ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಶೈಲೇಶ್ ಕುಮಾರ್ ಎಂ.ಎಂ. ಇವರ ರಚನೆ, ನಿರ್ಮಾಣ ಮತ್ತು ನಿದೇಶನದಲ್ಲಿ ‘ಸೀತೂ ಮದುವೆ’ ನಾಟಕ ಪ್ರದರ್ಶನವನ್ನು ದಿನಾಂಕ 06 ಸೆಪ್ಟೆಂಬರ್ 2025ರಂದು ಸಂಜೆ ಗಂಟೆ 7-15ಕ್ಕೆ ಬೆಂಗಳೂರು ಬಸವನಗುಡಿ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಟಿಕೆಟ್ ದರ ರೂ.150/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 98450 87901 ಸಂಖ್ಯೆಯನ್ನು ಸಂಪರ್ಕಿಸಿರಿ.